Snehapriya.com

June 8, 2025

ಬೆಂಗಳೂರಿನಲ್ಲಿ ಸಿಮ್ಟಾ ಆಸ್ಟ್ರಿಕ್ಸ್ ವಿನೂತನ ಬಾಗಿಲು ಕಿಟಕಿ ತಯಾರಿಕೆ

Social Share :


ಉದ್ಯಾನನಗರಿ ಬೆಂಗಳೂರಿನಲ್ಲಿ ಸುಂದರ ಗೃಹೋಪಕರಣ ಶಾಖೆ ತೆರೆಯಲಾಗಿದೆ..

ಮರದ ಲೇಪನ ಹೊಂದಿರುವ ಯುಪಿವಿಸಿ ಹಾಗೂ ಎಬಿಎಸ್‌ಯ ವಿನೂತನ ರೀತಿಯ ಕಿಟಕಿಗಳು ಹಾಗೂ ಬಾಗಿಲುಗಳು ಇಲ್ಲಿ ವಿಶಿಷ್ಟ ಮತ್ತು ವಿನೂತನ ರೀತಿಯಲ್ಲಿ ತಯಾರಾಗುತ್ತವೆ..

ಅದೇ ಸಿಮ್ಟಾ ಆಸ್ಟ್ರಿಕ್ಸ್..!

ಇದರ ಶಾಖೆಯನ್ನು ಬೆಂಗಳೂರಿನ ಜಯನಗರದ ಐದನೇ ಬ್ಲ್ಯಾಕ್ ನಲ್ಲಿ ತೆರೆಯಲಾಗಿದೆ.

ಯುಪಿವಿಸಿ ಕಿಟಕಿಗಳು ಹಾಗೂ ಬಾಗಿಲು ವ್ಯವಸ್ಥೆಯ ವಿನೂತನ ಮಾದರಿಯಲ್ಲಿ ಸಂಸ್ಥೆ ಮಹತ್ವದ ಮೈಲುಗಲ್ಲು ಸ್ಥಾಪಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ.

‘ಸಿಮ್ಟಾ ಆಸ್ಟ್ರಿಕ್ಸ್’ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಉತ್ತಮ ಬಾಂಧವ್ಯವನ್ನು ಸಂಪಾದಿಸಿದೆ.

ಹಾಗಾಗಿ ಇದರ ಶಾಖೆಗಳನ್ನು ವಿಸ್ತರಿಸಲಾಗಿದೆ ಎಂಬುದು ಅದರ ಮುಖ್ಯಸ್ಥರ ಆತ್ಮ ವಿಶ್ವಾಸದ ನುಡಿ.

ಬ್ರಿಗೇಡ್ ಎಂಟರ್‌ಪ್ರೈಸಸ್ಅಧ್ಯಕ್ಷ ಎಂ.ಪಿ.ಮಂಜುನಾಥ್‌ ಪ್ರಸಾದ್ ಮತ್ತು ವಾಲ್‌ಫರ್ ಆರ್ಕಿಟೆಕ್ಟ್‌ಸ್‌ನ ಮುಖ್ಯ ವಾಸ್ತು ಶಿಲ್ಪಿ ಪ್ರಾಚಿಪಾಂಡೆ ಶಾಖೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಪತ್‌ಕುಮಾರ್, ನಿರ್ದೇಶಕರಾದ ಸೆಂತಿಲ್‌ಕುಮಾರ್, ಗಣೇಶ್, ಕನಗರಾಜ್ ಹಾಗೂ ದೊರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *