ನರೇಶ್ ಕುಮಾರ್ ಎಚ್.ಎನ್ ನಿರ್ಮಾಣ ಹಾಗೂ ನಿರ್ದೇಶನದ ‘ಸೌತ್ ಇಂಡಿಯನ್ ಹೀರೋ’ ಚಿತ್ರವು ಹಿರಿಯ ಕಲಾವಿದರ ಹೊಗಳಿಕೆಗೆ ಪಾತ್ರವಾಗಿದೆ.
ಹಿರಿಯ ಕಲಾವಿದರಾದ ಜೆ.ಕೆ.ಶ್ರೀನಿವಾಸಮೂರ್ತಿ, ನಿರ್ದೇಶಕರಾದ ಓಂಪ್ರಕಾಶ್ ರಾವ್, ಶಶಾಂಕ್ ಹಾಗೂ ಇನ್ನಿತರ ಕಲಾವಿದರು ತಂತ್ರಜ್ಞರು ಸಿನಿಮಾ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಹಾಡಿ ಹೊಗಳಿದ್ದಾರೆ.
ಬುಧವಾರ ಏರ್ಪಡಿಸಿದ್ದ ಸೆಲೆಬ್ರಟಿ ಶೋ ಬಳಿಕ ಕಲಾವಿದರು ತಂತ್ರಜ್ಞರು ಚಿತ್ರದ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತ ಚಿತ್ರವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಕಾಂತಾರ ನೋಡಿದ್ದೆ
ಅದಕ್ಕಿಂತಲೂ ಒಂದು ಕೈ ಹೆಚ್ಚೆನಿಸುತ್ತಿದೆ ಈ ಚಿತ್ರ ಎಂದರು ಹಿರಿಯ ನಟ ಶ್ರೀನಿವಾಸಮೂರ್ತಿ. ಇಂತಹ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದವರು ಓಪ್ರಕಾಶ್ ರಾವ್.
ಅಂದ ಹಾಗೆ ಇದೇ 24 ರಂದು ಚಿತ್ರವು ಬಿಡುಗಡೆ ಕಾಣುತ್ತಿದ್ದು, ಮುಖ್ಯ ಪಾತ್ರದಲ್ಲಿರುವ ಸಾರ್ಥಕ್, ನಟಿ ಖಾಸಿಮಾ, ನಿರ್ದೇಶಕ ನರೇಶ್ ಕುಮಾರ್, ನಿರ್ಮಾಪಕಿ ಶಿಲ್ಪಾ ಹಾಗೂ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.