ಬಡ್ಡೀಸ್ ಚಿತ್ರದ ಬಳಿಕ ಅದೇ ಚಿತ್ರ ತಂಡ ಮತ್ತೊಂದು ಸಾಹಸಮಯ ಚಿತ್ರ ತಯಾರಿ ಸಿದ್ಧತೆ ನಡೆಸಿದ್ದು, ಆ ಚಿತ್ರದ ಹೆಸರು ‘ರಾನಿ’.
ಗುರುತೇಜ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಿರಣ್ ರಾಜ್ ನಟಿಸುತ್ತಿದ್ದು, ಅವರು ಭಾರೀ ಸಾಹಸ ಮಾಡಿರುವುದು ಸುದ್ದಿಯಾಗಿದೆ.
ಕಿರಣ್ ರಾಜ್ ದುಬೈನಲ್ಲಿ ಹದಿಮೂರು ಸಾವಿರ ಅಡಿ ಎತ್ತರದಿಂದ ವಿಮಾನದಿಂದ ಜಿಗಿದು ಸ್ಕೈಡ್ರೈವ್ ಮಾಡಿರುವುದನ್ನೇ ಚಿತ್ರತಂಡ ಮೊದಲ ಲುಕ್ ಆಗಿ ಬಿಡುಗಡೆಗೊಳಿಸಿದೆ.
ಇದು ಸಾಮಾನ್ಯವಾದ ಸಾಹಸವಲ್ಲ; ಇದಕ್ಕೆ ಪ್ರತ್ಯೇಕ ಗುಂಡಿಗೆ ಬೇಕಾಗುತ್ತದೆ. ಹಾರುವಾಗ ಕೆಳಗೆ ನೋಡಿದರೆ ಸಾಕು ಹೃದಯ ನಿಂತು ಹೋಗಲು ಕಾರಣವೇ ಬೇಡ ಎಂದು ಹೃದಯ ಬಾಯಿಗೆ ಬಂದ ಕ್ಷಣಗಳನ್ನು ವರ್ಣಿಸಿದರು ಕಿರಣ್ ರಾಜ್.
ಅಲ್ಲಿ ಕಿರಣ್ ರಾಜ್ ವಿಮಾನದಿಂದ ಹಾರಿ ಸಾಹಸ ಮೆರೆಯುವಾಗ ಇಲ್ಲಿ ನಾನು ಆಂಜನೇಯನ ಧ್ಯಾನ ಮಾಡುತ್ತಿದ್ದೆ ಎಂದರು ನಿರ್ದೇಶಕ ಗುರುತೇಜ್ ಶೆಟ್ಟಿ.
ಚಿತ್ರದ ಬಗ್ಗೆ ಹೆಚ್ಚು ವಿವರ ಬೇಕೆಂದರೆ ಸ್ವಲ್ಪ ಕಾಯಬೇಕು. ಇದುಕೇವಲ ಸಾಹಸದ ಒಂದು ಝಲಕ್ ಆಗಿದೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.
ಅಂದ ಹಾಗೆ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.