ಡಿಸೆಂಬರ್ 24 ಚಿತ್ರವಿಮರ್ಶೆ
ಇದು ಹಾರರ್ ಕಥೆಯೇ ಎಂಬುದರ ಸುತ್ತ ಅನುಮಾನ ಉಂಟಾಗುವುದು ಏಕೆಂದರೆ, ನಿರ್ದೇಶಕರು ಕಾಡಿನಲ್ಲಿ ಹುಟ್ಟು ಹಾಕುವ ಸನ್ನಿವೇಶಗಳನ್ನು ಭಯಾನಕ ಎಂದು ಬಿಂಬಿಸಿದ್ದಾರೆ..
ಇದೊಂದು ಟ್ರಕ್ಕಿಂಗ್ ಕಥೆ. ಉಡಾದ ಮೊಟ್ಟೆಯನ್ನು ಹುಡುಕಿಕೊಂಡು ಕಾಡಿನಲ್ಲಿ ಅಲೆದಾಡುವ ವೈದ್ಯಕೀಯ ವಿದ್ಯಾರ್ಥಿಗಳ ಸುತ್ತ ಹೆಣೆದ ಕಥೆ.
ಉಸಿರಾಟದ ತೊಂದರೆಯಿಂದ ಹುಟ್ಟುವ ಮಕ್ಕಳು ಸಾಯುತ್ತವೆ. ಇದರಿಂದ ತಾಯಂದಿರ ಮತ್ತು ಕುಟುಂಬದ ಆಕ್ರಂದನ ಮತ್ತು ರೋಧನೆ ನೋಡುವುದಕ್ಕೆ ಕರುಣಾಜನಕ.
ಇದು ತಪ್ಪಬೇಕು ಎಂದು ಸಂಕಲ್ಪ ಮಾಡುವ ಯುವ ಪಡೆಯೊಂದು ಮೊಟ್ಟೆ ಹುಡುಕುತ್ತಾ ಕಷ್ಟಗಳನ್ನು ಅನುಭವಿಸುತ್ತದೆ. ಡ್ರಗ್ಸ್ ಕಳ್ಳರು ಬೆನ್ನತ್ತುತ್ತಾರೆ. ದೆವ್ವದ ಕಲ್ಪನೆ ಹಿಂಡಿ ಹಿಪ್ಪೆ ಮಾಡುತ್ತದೆ. ಇಷ್ಟರ ನಡುವೆ ಆ ಯುವಕ ಯುವತಿಯರು ಹೇಗೆ ಗುರಿ ಸಾಧಿಸಬಲ್ಲರು ಎಂಬುದನ್ನು ವಿಚಿತ್ರವಾಗುಯೇ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಾಗರಾಜ್ ಎಂ.ಜಿ.ಗೌಡ.
ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪುವ ನೈಜ ಘಟನೆಯನ್ನು ಆಧರಿಸಿ ತಯಾರಾದ ಈ ಚಿತ್ರದಲ್ಲಿ ಕಥೆ, ಸಂದೇಶ ಉತ್ತಮವಾಗಿದ್ದರೂ ಸಿನಿಮಾ ಭಾಷೆ ಮತ್ತು ತಾಂತ್ರಿಕತೆಯ ಕಡೆಗೆ ನಿರ್ದೇಶಕರು ಮತ್ತಷ್ಟು ಒತ್ತು ಕೊಟ್ಟಿದ್ದರೆ ಬೇರೆಯೇ ಆಗಿರುತ್ತಿತ್ತು ಎಂಬ ಭಾವಗಳು ಯಾರಿಗಾದರೂ ಸುಳಿಯುತ್ತವೆ.
ಮುಖ್ಯ ಪಾತ್ರದಲ್ಲಿ ಭೂಮಿಕಾ ರಮೇಶ್, ಅಪ್ಪು ಬಡಿಗೇರ್ ಇದ್ದಾರೆ. ರವಿ ಕೆ.ಆರ್.ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ, ಸಾಗರ್ ಐವರು ಸ್ನೇಹಿತರಾಗಿ ನಟಿಸಿದ್ದಾರೆ. ದಿವ್ಯ ಆಚಾರ್, ಆನಂದ್ ಪಟೇಲ್ ಹುಲಿಕಟ್ಟೆ, ಅನಿಲ್ ಗೌಡ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವಿನಯ್ ಗೌಡ ಛಾಯಾಗ್ರಹಣ, ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಸಂಗೀತ ಚಿತ್ರಕ್ಕೆ ಪೂರಕ.