ಹೊಸ ವರ್ಷದ ಸಂದರ್ಭದಲ್ಲಿ ಪಡ್ಡೆಗಳು ಎದ್ದು ಕುಣಿಯುವ ಸಲುವಾಗಿ ಹಾಡೊಂದು ರೂಪುಗೊಂಡಿದೆ ಮಾತ್ರವಲ್ಲ; ಅದು ಹೀಗಾಗಲೇ ಎಲ್ಲರ ಬಾಯಿಯ ಚಾಕೋಲೇಟ್ ಆಗಲಿದೆ..
ಅದೇ ಚೆಂದನ್ ಶೆಟ್ಟಿ ಡ್ಯಾಶ್ ಸಾಂಗ್..!
ಅದು ಸೂತ್ರಧಾರಿ ಚಿತ್ರದ ಹಾಡು. ಚೆಂದನ್ ಶೆಟ್ಟಿ ಮುಖ್ಯ ಪಾತ್ರದಲ್ಲಿರುವ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನ ಮುಂಚೂಣಿ ಯಲ್ಲಿರುವ ನವರಸನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದಕ್ಕೆ ಕನ್ನಡದ ಹೆಸರಾಂತ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಸಹ ಭಾಗಿತ್ವವೂ ಇದೆ..
ಪ್ರಸ್ತುತ ಬಿಡುಗಡೆಗೊಂಡಿರುವ ‘ಡ್ಯಾಶ್ ಸಾಂಗ್’ ಅಪೂರ್ವ ವಿನ್ಯಾಸ ಹಾಗೂ ಸರಳ ಸಾಹಿತ್ಯದ ಮೂಲಕ ಗಮನ ಸೆಳೆದಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಸಂಭ್ರಮಿಸಿದ ಪರಿಯೂ ವಿಶೇಷವಾಗಿತ್ತು.
ಮುಖ್ಯವಾಗಿ ಮಾಸ್ಟರ್ ಆನಂದ್ ಪುತ್ರಿ ಪುಟಾಣಿ ವಂಶಿಕಾ ಕಾರ್ಯಕ್ರಮ ನಿರೂಪಿಸಿದ್ದು ಗಮನ ಸೆಳೆಯಿತು. ಕಾರ್ಯಕ್ರಮದ ಕೊನೆಯಲ್ಲಿ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ಇನ್ನೂ ವಿಶೇಷವಾಗಿತ್ತು.
ಚೆಂದನ್ ಶೆಟ್ಟಿ, ಸಂಜನಾ ಆನಂದ್,
ನೃತ್ಯ ನಿರ್ದೇಶಕ ಭಜರಂಗಿ ಮೋಹನ್, ಛಾಯಾಗ್ರಾಹಕ ಪಿ.ಕೆ.ಎಚ್.ದಾಸ್, ಸಂಕಲನಕಾರ
ಸತೀಶ್ ಚಂದ್ರ, ಕಲಾ ನಿರ್ದೇಶಕ
ಸೋಮಶೇಖರ್, ಸಂಭಾಷಣೆ ಬರೆದಿರುವ ಕಿನಾಳ್ ರಾಜ್, ಕಲಾವಿದರಾದ ಗಣೇಶ್ ನಾರಾಯಣ್, ರಮೇಶ್, ಲೋಹಿತ್, ಪ್ರಶಾಂತ್ ನಟನಾ ಮೊದಲಾದವರು ಹಾಜರಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ
ರವಿಗೌಡ ಹಾಗೂ ಇತರರು ಆಗಮಿಸಿ ಶುಭ ಕೋರಿದರು.