ನೋಡಿದ ತಕ್ಷಣವೇ ಹೃದಯ ಭಾವುಕತೆಯ ಅಂಚಿಗೆ ತಳ್ಳಲ್ಪಡುತ್ತದೆ; ಯಾವುದೋ ಚಿತ್ತಾರ ಬರೆದ ಕಲಾತ್ಮಕತೆಯನ್ನು ನೆನಪಿಸುತ್ತದೆ..
ಅದು ಚಿತ್ರದ ಟ್ರೈಲರ್..!
‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿ ಗುಡ್ಡ’ ಎಂಬ ಉದ್ದದ ಹೆಸರನ್ನು ಇರಿಸಿಕೊಂಡಿರುವ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ ಜೊತೆಗೆ ಪ್ರಾಣ್ಯ ಎಂಬ ಪುಟಾಣಿ..
ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರದ ಬಗ್ಗೆ ವಿವರಗಳು ಬಂದವು. ವಿಶೇಷವಾಗಿ ನಿರ್ದೇಶಕ ಕುಶಾಲ್ ಗೌಡ ಚಿತ್ರದ ತಯಾರಿಕೆ ಸಂದರ್ಭದಲ್ಲಿ ಆದ ಅನುಭವಗಳನ್ನು ತೆರೆದಿಟ್ಟರು. ಇದೊಂದು ಭಾವನಾತ್ಮಕ ಪಯಣ ಎಂದು ಬಣ್ಣಿಸಿದರು.
ಚಿತ್ರವು ‘ಬರ್ಫಿ’ ಮಾದರಿಯಲ್ಲಿ ಇಲ್ಲ; ಆದರೆ ಹೃದಯವಂತ ವ್ಯಕ್ತಿಯೊಬ್ಬನ ಸಂಬಂಧಗಳ ಸುತ್ತ ಕಥೆ ನಡೆಯುತ್ತದೆ ಎಂಬ ವಿವರಗಳನ್ನು ಬಿಚ್ಚಿಟ್ಟರು.
ಇದು ಫೀಲ್ ಗುಡ್ ಸಿನಿಮಾ ಎಂದರು ಡಾಲಿ ಧನಂಜಯ್..
ನನಗೆ ಇದು ಈ ವರ್ಷದ ಐದನೇ ಸಿನಿಮಾ. ತೋತಾಪುರಿಯಲ್ಲಿ ಗೆಸ್ಟ್ ರೋಲ್ ಮಾಡಿದ್ದೆ. ಅದು ಸೇರಿದರೆ 6 ನೇ ಸಿನಿಮಾ. ಡಿಸೆಂಬರ್ ಅಂತ್ಯದಲ್ಲಿ ಈ ಸಿನಿಮಾ ಬಿಡುಗಡೆ ಕಾಣುತ್ತಿದೆ. ‘ಬಡವ ರಾಸ್ಕಲ್’ ಕೂಡ ಇದೇ ವೇಳೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಖಂಡಿತಾ ಇದೆ ಎಂದು ಹೇಳುತ್ತಾ ಹೋದರು ಧನಂಜಯ್.
ಒಂದೊಂದು ಸಿನಿಮಾ ಬ್ಯುಸಿನೆಸ್ ಚೆನ್ನಾಗಿ ಮಾಡುತ್ತದೆ. ಕೆಲವು ಆಗಲ್ಲ.. ಆದರೆ ಇಲ್ಲೇ ದುಡಿದು ಇಲ್ಲೇ ಹಾಕಬೇಕು.. ಎಂಬ ನಂಬಿಕೆ ನನ್ನದು. ಪ್ರತಿ ಸಿನಿಮಾದಲ್ಲಿ ಹೊಸ ಹೊಸ
ತಂತ್ರಜ್ಞರು ಜೊತೆಯಾಗ್ತಾರೆ. ಅದು ನಿಜಕ್ಕೂ ಖುಷಿಯ ವಿಷಯ ಎಂದರು.
ಇಲ್ಲಿ ಇನ್ನೊಂದು ವಿಶೇಷವಿದೆ. ಅದು ವಿಧ್ವಂಸಕ ಬಾಂಬ್ ದಾಳಿಗೆ ತುತ್ತಾದ ನಗರಗಳ ಹೆಸರು. ಅದು ಹಿರೋಷಿಮಾ, ನಾಗಸಾಕಿ. ಹೀಗೆ ಚಿತ್ರದ ವಿಶೇಷತೆಗಳ ಬಗ್ಗೆಯೂ ಹೇಳುತ್ತಾ ಹೋದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ವೇಲು ನಾಯಕ್ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದರು.
ಸಂಕಲನಕಾರ ಹರೀಶ್ ಕೋಮೆ,
ಕಲಾ ನಿರ್ದೇಶಕ ಸತೀಶ್, ನಟಿ ಅದಿತಿ ಪ್ರಭುದೇವ, ಸರೋಜ ಖ್ಯಾತಿಯ ರಿಶಿಕಾ, ಬಾಲನಟಿ ಪ್ರಾಣ್ಯ, ಮಯೂರಿ, ದಿವ್ಯಶ್ರೀ, ನಂದಗೋಪಾಲ್, ಮಾಧವ, ಕಾಮಿಡಿ ಕಿಲಾಡಿಗಳು ಸಂತು, ಯಶ್ ಶೆಟ್ಟಿ ಮಾತನಾಡಿದರು.
ನಿರ್ಮಾಪಕ ಶ್ರೀಹರಿ ಸಿನಿಮಾ ಪ್ರೀತಿಯನ್ನು ತಂಡ ಕೊಂಡಾಡಿತು. ಅದೇ ರೀತಿ ಶ್ರೀಹರಿ ಕೂಡ ಎಲ್ಲರ ಸಹಕಾರ ನೆನೆದರು. ಎಲ್ಲರೂ ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಾರೆ. ಇಲ್ಲಿ ಬಹಳಷ್ಟು ಜನರು ನನಗೇ ಅನ್ನದಾತರಿದ್ದಾರೆ ಎಂದರು.