ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಬಾಳಿ ಬದುಕಿದ ಮನೆ ಹೊಸ ರೂಪ ತಳೆದು ವಿಭಿನ್ನ ಬಗೆಯಲ್ಲಿ ಕಂಗೊಳಿಸುತ್ತಿದೆ..
ಜಯನಗರದ 4ನೇ ಟಿ ಬ್ಲಾಕ್ ನಲ್ಲಿರುವ ವಿಷ್ಣು ನಿವಾಸ ‘ವಲ್ಮೀಕ’ ಈಗ ಹೊಸ ವಿನ್ಯಾಸದೊಂದಿಗೆ ಲಕ ಲಕ ಹೊಳೆಯುತ್ತಿದೆ..
ಇದು ಅಳಿಯ ಅನಿರುದ್ದ್ ಅವರ ಪರಿಶ್ರಮದ ಹಾಗೂ ಡಾ.ಭಾರತಿ ವಿಷ್ಣುವರ್ಧನ್ ಅವರ ಕಾಳಜಿಯ ಫಲ.. ಮನೆ ಹೊಸ ರೂಪ ತಾಳಿದೆ..
ನವೆಂಬರ್ 27ರ ಭಾನುವಾರ ನಡೆದ ನೂತನ ಗೃಹದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಶುಭ ಹಾರೈಸಿದರು.
ಹಾಗೆಯೇ ಚಿತ್ರರಂಗ, ಕಿರುತೆರೆ ಹಾಗೂ ಇತರ ಗಣ್ಯರು ಆಗಮಿಸಿ ಶುಭ ಹಾರೈಸಿದ್ದು ವಿಶೇಷವಾಗಿತ್ತು..