ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆಯುವ ಮುನ್ನ ಮತ್ತು ಆನಂತರದ ಪರಿಸ್ಥಿತಿ ಏನಿದೆ ಎಂಬುದನ್ನು ಬಿಂಬಿಸುವ ಕನ್ನಡದ ಚಿತ್ರ ‘ವಿಧಿ 370’.
ಸುಪ್ರೀಂ ಹೀರೋ ಶಶಿಕುಮಾರ್ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಯೋಧ ಮತ್ತು ಆತನ ಕುಟುಂಬದ ತ್ಯಾಗದ ಕಥೆ ಇದೆ..
ಇದು ಗಡಿ ಕಾಯುವ ಯೋಧನ ಕಥೆ ಎಂಬುದು ಚಿತ್ರತಂಡದ ವಿವರ. ಈಚೆಗೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಕನ್ನಡದ ಹೆಸರಾಂತ ಕವಿ ಪದ್ಮಶ್ರೀ ಡಾ.ದೊಡ್ಡರಂಗೇಗೌಡ, ನಟಿ ಶ್ರುತಿ ಹಾಗೂ ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು.
ಶಶಿಕುಮಾರ್ ವೀರಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪತ್ನಿಯಾಗಿ ಶೃತಿ ಅಭಿನಯಿಸಿದ್ದಾರೆ. ಕೆ.ಶಂಕರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಭರತ್ ಗೌಡ ನಿರ್ಮಾಪಕರು.
ಮಡಿಕೇರಿ, ಚಿಕ್ಕಮಗಳೂರು ಮೊದಲಾದ ಕಡೆ ಚಿತ್ರೀಕರಣ ನಡೆದಿದ್ದು, ರವಿ ಛಾಯಾಗ್ರಹಣ, ವಿನು ಮನಸ್ಸು ಸಂಗೀತ, ಸಂಜೀವ ರೆಡ್ಡಿ ಸಂಕಲನ, ವೇಲು ಸಾಹಸ ಚಿತ್ರಕ್ಕಿದೆ.
ನಟ ಗಣೇಶ್ರಾವ್ ಕೇಸರಕರ್ ಕೆಜಿಎಫ್ ಖ್ಯಾತಿಯ ಕೃಷ್ಣಪ್ಪ (ಕೆಜಿಎಫ್ ತಾತ) ಹಾಗೂ ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.