ಚಿನ್ನದ ತಟ್ಟೆ ಮತ್ತು ಚಮಚ ಹಿಡಿದು ನಡೆದಾಡುತ್ತಿದ್ದ ಹುಡುಗನೊಬ್ಬ ಕೇವಲ ಅದು ಮಾತ್ರವಲ್ಲ; ಈ ಬದುಕು ಬೇರೆ ಇದೆ ಎಂದು ಚಿಕ್ಕ ವಯಸ್ಸಿಗೆ ಜ್ಞಾನೋದಯ ಮಾಡಿಕೊಂಡ ಬಳಿಕ ಕೈ ಬೀಸಿ ಕರೆದಿದ್ದು ಚಿತ್ರರಂಗ..
ಹೌದು ಕೇವಲ ಒಂದೇ ಒಂದು ಸಿನಿಮಾ ಈಗ ಅಪಾರ ಭರವಸೆ ಮತ್ತು ಅವಕಾಶಗಳ ಸುರಿಮಳೆಯೇ ಆಗುವಂತೆ ಮಾಡಿದೆ.. ಆದರೆ ನಾನ್ನಿನ್ನು ವಿದ್ಯಾರ್ಥಿ ಎಂಬ ವಿನಯ ಭಾವಗಳಿಂದ ಎಲ್ಲವನ್ಬು ವಿಮರ್ಶಿಸುತ್ತಾ ಹೋಗುತ್ತಿರುವ ಹುಡುಗನ ಸುತ್ತ ಈಗ ಗೋಚರಿಸುತ್ತಿರುವುದು ಸಿನಿಮಾ ಪ್ರಪಂಚ..
ಆ ಹುಡುಗ ಝೈಹಿದ್ ಖಾನ್..!
‘ಬನಾರಸ್’ ಚಿತ್ರದ ಮೂಲಕ ತಾನೊಬ್ಬ ಅಪ್ರತಿಮ ಕಲಾವಿದ ಎಂಬುದನ್ನು ಸಾಬೀತು ಪಡಿಸಿದ ಝೈಹಿದ್, ಅದರ ಜೊತೆಗೆ ಮಾನವೀಯ ಕಳಕಳಿಯನ್ನು, ಸರಳತೆಯನ್ನು ಮೈಗೂಡಿಸಿಕೊಂಡಿರುವ ಯುವಕ..
ಹಾಗಾಗಿ ಚಿತ್ರರಂಗದ ಅವಕಾಶಗಳ ಬಾಗಿಲು ತೆರೆದುಕೊಂಡಿವೆ. ಜನಪ್ರಿಯ ನಿರ್ದೇಶಕರು, ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆಗಳು ಅವರನ್ನು ಎಡ ತಾಕಿವೆ..
ಸಾಕಷ್ಟು ಕಥೆಗಳು ಬಂದಿವೆ.. ಜನಪ್ರಿಯ ನಿರ್ದೇಶಕರು ಬಂದಿದ್ದಾರೆ.. ಜನಪ್ರಿಯ ಆಡಿಯೋ ಸಂಸ್ಥೆ ಕೂಡ ಸಂಪರ್ಕ ಮಾಡಿದೆ. ನೋಡಬೇಕು ಯಾವುದು ಒಲಿಯುವುದೋ ಅದನ್ನು ಮಾಡುವೆ ಎಂಬ ನಿಲುವಿನಲ್ಲಿರುವ ಝೈಹಿದ್ ಖಾನ್, ಒಂದು ಅನುಭವದ ಆಧಾರದಲ್ಲಿ ಏನು ಮಾಡಬೇಕು ಎಂಬುದನ್ನು ಚಿಂತನೆ ಮತ್ತು ಚರ್ಚೆಯ ಮೂಲಕ ನಿಲುವು ಪ್ರಕಟಿಸುವ ಆಲೋಚನೆಯಲ್ಲಿರುವುದು ಕಂಡಿತು..
‘ಬನಾರಸ್ ನನಗೆ ಬದುಕುವ ಮಾರ್ಗವನ್ನು ಹೇಳಿಕೊಟ್ಟಿದೆ..’ ಎಂದು ಯಾವುದೇ ಅಳುಕಿಲ್ಲದೆ ಹೇಳಿದ ಹುಡುಗನಲ್ಲಿ ಕಾಣಿಸಿದ್ದು ಅದಮ್ಯ ಆತ್ಮವಿಶ್ವಾಸ ಮತ್ತು ಏನನ್ನಾದರೂ ಸಾಧಿಸುವೆ ಎಂಬ ಛಲ..
ಅಪ್ಪ ಜಮೀರ್ ಅಹಮದ್ ಜನಪ್ರಿಯ ರಾಜಕಾರಣಿ, ಅದರ ಹಿನ್ನೆಲೆಯಲ್ಲಿ ನಾನು ಜೀವನ ಕಟ್ಟಿಕೊಳ್ಳುವೆ ಎಂಬುದೆಲ್ಲಾ ಸುಳ್ಳು; ರಾಜಕೀಯ ನನಗೆ ಬೇಡ; ಸಿನಿಮಾ ಕ್ಷೇತ್ರ ಕೈ ಹಿಡಿದಿದೆ. ಅದರಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುವೆ ಎಂಬುದು ಝೈಹಿದ್ ಗಟ್ಟಿಯಾದ ನಿಲುವು.
ಬನಾರಸ್ ಯಾವ ರೀತಿಯ ಪಾಠ ಕಲಿಸಿದೆ ಎಂಬುದಕ್ಕೆ, ಅದು ಪಾಠ ಅಂತಲ್ಲ; ಅದೊಂದು ಅನುಭವ. ನಾವು ‘ಮಾಯಗಂಗೆ..’ ಹಾಡನ್ನು ಹೆಚ್ಚಾಗಿ ಪ್ರಚಾರ ಮಾಡಿದೆವು..
ಆದರೆ ಏನೂ ಪ್ರಚಾರ ಮಾಡದ ‘ಬೆಳಕಿನ ಕವಿತೆ..’ ಹಾಡು ಅದನ್ನು ಮೀರಿ ಎಲ್ಲರಿಗೂ ಇಷ್ಟವಾಗಿ ಹೋಗಿದೆ..
ಇದರಿಂದ ಎಷ್ಟೇ ಪ್ರಚಾರ ಮಾಡಿದರೂ ಏನು ಆಗಲ್ಲ; ಅಭಿಮಾನಿ ದೇವರುಗಳಿಗೆ ಇಷ್ಟವಾದರೇ ಅದು ಬೇರೆಯೇ ಆಗಿರುತ್ತದೆ ಎಂಬುದು ಅರಿವಿಗೆ ಬಂತು..
ವರನಟ ಡಾ.ರಾಜ್ ಕುಮಾರ್ ನನ್ನ ರೋಲ್ ಮಾಡೆಲ್; ಪುನೀತ್ ರಾಜ್ಕುಮಾರ್ ಮತ್ತು ದರ್ಶನ್ ಅಣ್ಣಾ ಕೂಡ ನಾನು ಮಾದರಿಯಾಗಿಸಿಕೊಂಡ ಸ್ಟಾರ್ ಗಳು..
ಬನಾರಸ್ ಉತ್ತರ ಕರ್ನಾಟಕದ ಕಡೆ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹಾಗೆಯೇ ಮೂರನೇ ವಾರ ಹೆಚ್ಚು ಚಿತ್ರ ಮಂದಿರಗಳಿಗೆ ಹಾಕಲಾಗುತ್ತಿದೆ. ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರು ನನ್ನ ಮೇಲೆ ಭರವಸೆ ಇಟ್ಟು ಹೆಚ್ಚು ಖರ್ಚು ಮಾಡಿದರು. ಅದು ರಿಕವರಿ ಸ್ವಲ್ಪ ಕಷ್ಟವಾಯ್ತು. ಆದರೆ ಮೂರನೇ ವಾರದಲ್ಲಿ ಎಲ್ಲವೂ ಸರಿ ಹೋಗಿದೆ ಎಂದು ಹೇಳುತ್ತಾ ಹೋದರು ಝೈಹಿದ್ ಖಾನ್..
ಮುಂಬೈನ ಪ್ರತಿಷ್ಠಿತ ಕಲಿಕಾ ಸಂಸ್ಥೆಯಲ್ಲಿ ಅಭಿನಯ ತರಬೇತಿ ಪಡೆದಿರುವ ಝೈಹಿದ್ ಖಾನ್ ಗೆ ಮೊದಲು ಸಿಕ್ಕಿದ್ದು ಜಯತೀರ್ಥ ಅವರಂತಹ ರಂಗ ಶಿಕ್ಷಕ..
ಹಾಗಾಗಿ ಬನಾರಸ್ ನಲ್ಲಿ ಪ್ರಬುದ್ಧ ಅಭಿನಯ ನೀಡುವುದು ಸಾಧ್ಯವಾಗಿದೆ. ಅದೇ ಅಭಿನಯ ಈಗ ಅವಕಾಶಗಳ ಸುರಿ ಮಳೆಯನ್ನೇ ನೀಡಿದೆ..
ಕೇವಲ ಒಂದೇ ಸಿನಿಮಾ ಅದು ಅವಕಾಶದ ಮಹಾಪೂರವನ್ನೇ ಹರಿಸುತ್ತದೆ ಎಂದರೆ ಅದು ನಟನ ಹಿನ್ನೆಲೆಯ ಜೇನು ಸವಿಯುವ ಅವಕಾಶವೇ ಇರಬಹುದು..
ಹಾಗೆಂದು ಹೊರಗಿನವರು ಮಾತಾಡಿಕೊಂಡರೂ ಕಠಿಣ ಪರಿಶ್ರಮ ಎಂದಿಗೂ ಕಾಪಾಡುತ್ತದೆ ಎಂದು ನಂಬಿಕೊಂಡ ಹಾಗೆಯೇ ವಿನಮ್ರತೆ ಮೈಗೂಡಿಸಿಕೊಂಡ ಹುಡುಗ ಝೈಹಿದ್ ಖಾನ್..