ಇದು ಒಂದು ಸಾಹಸಗಾಥೆ..
ಜೀವನ ಪಥದಲ್ಲಿ ಬೆರಗಾಗುವ ಬದಲಾವಣೆ ಕಂಡು ಸಾಧನೆಯ ಶಿಖರಕ್ಕೆ ಏರಿದ ವ್ಯಕ್ತಿಯ ಕಥೆ ಇದು..
ಚಿತ್ರದ ಹೆಸರು ವಿಜಯಾನಂದ..!
ಯಾತ್ರಿಕರ ಸ್ನೇಹಿಯಾಗಿ ಸಂಚಾರ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆ ಮಾಡಿದ ವಿಆರ್ ಎಲ್ ನ ಮಾಲೀಕ ವಿಜಯ್ ಸಂಕೇಶ್ವರ ಅವರ ಜೀವನಗಾಥೆ ಹೊಂದಿದ ಚಿತ್ರವಿದು..
ಈಚೆಗೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಸ್ವತಃ ವಿಜಯ ಸಂಕೇಶ್ವರ ಅವರೇ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಅದ್ದೂರಿಯ ಆ ಸಮಾರಂಭದಲ್ಲಿ ಆಲಿಂಗನಕ್ಕೆ ಹೆಚ್ಚು ಮಹತ್ವವಿತ್ತು. ಏಕೆಂದರೆ ಅಲ್ಲಿ ಬಿಡುಗಡೆಯಾದ ಹಾಡು ಕೂಡ ‘ಹಾಗೆ ಆದ ಆಲಿಂಗನ..’ ಎಂಬ ಸಾಲುಗಳನ್ನೇ ಹೊಂದಿತ್ತು.
ಧನಂಜಯ್ ರಂಜನ್ ಬರೆದಿರುವ ಆಲಿಂಗನದ ಹಾಡಿಗೆ ವಿಜಯ್ ಪ್ರಕಾಶ್ ಹಾಗೂ ಕೀರ್ತನಾ ವೈದ್ಯನಾಥನ್ ಧ್ವನಿ ಇದೆ..
ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಂಡ ಹಾಡಿಗೆ ಸಂಗೀತ ನೀಡಿದವರು ಮಲಯಾಳಂ ಚಿತ್ರರಂಗದಲ್ಲಿ ಹೆಸರಾಗಿರುವ ಗೋಪಿ ಸುಂದರ್.
ಇದೇ ಸಂದರ್ಭದಲ್ಲಿ ಕೇವಲ ಒಂದೇ ಒಂದು ಲಾರಿಯಿಂದ ಉದ್ಯಮ ಬೆಳೆಸಿದ ಪರಿಯನ್ನು ವಿಜಯ ಸಂಕೇಶ್ವರ ತೆರೆದಿಟ್ಟರು. ಸಿನಿಮಾ ವಿಸ್ಮಯ ಪಡುವಷ್ಟು ಉತ್ತಮವಾಗಿ ಮೂಡಿ ಬಂದಿದೆ. ಮಗ ಆನಂದ್ ಎಲ್ಲವನ್ನೂ ನಿರ್ವಹಿಸಿರುವ ರೀತಿ ಉತ್ತಮವಾಗಿದೆ. ಪತ್ನಿ ಲಲಿತಾ ಪರಿಶ್ರಮದ ಹಿಂದಿನ ಪ್ರೇರಕ ಶಕ್ತಿ ಎಂಬ ವಿವರ ಕೊಟ್ಟರು.
ನಿಹಾಲ್ ಹಾಗೂ ಸಿರಿ ಪ್ರಹ್ಲಾದ್ ಮುಖ್ಯ ಪಾತ್ರದಲ್ಲಿ ಇರುವ ಚಿತ್ರವನ್ನು ರಿಶಿಕಾ ಶರ್ಮ ನಿರ್ದೇಶನ ಮಾಡಿದ್ದಾರೆ.
ಅನಂತನಾಗ್, ರವಿಚಂದ್ರನ್, ವಿನಯಾಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್ ಸಹ ಚಿತ್ರದ ತಾರಾ ಬಳಗದಲ್ಲಿ ಇದ್ದಾರೆ.
ಹಾಡು ಬಿಡುಗಡೆಯ ಸಮಾರಂಭಕ್ಕೆ ಶರಣ್, ಹರ್ಷಿಕಾ ಪೂಣಚ್ಛ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.