Snehapriya.com

June 9, 2025

ರವಿಚಂದ್ರನ್ ಪುತ್ರನ ಅದ್ದೂರಿ ವಿವಾಹದಲ್ಲಿ ಗಣ್ಯಾತಿ ಗಣ್ಯರು

Social Share :

ಕನ್ನಡ ಚಿತ್ರರಂಗದ ಕನಸುಗಾರ; ಶೋಮ್ಯಾನ್, ಕ್ರೇಜಿಸ್ಟಾರ್ ಎಂದೆಲ್ಲಾ ಕರೆಸಿಕೊಳ್ಳುವ ಡಾ.ವಿ.ರವಿಚಂದ್ರನ್ ಅವರ ಪುತ್ರ ಮನೋರಂಜನ್ ಹಾಗೂ ಸಂಗೀತ ದೀಪಕ್ ಅವರ ವಿವಾಹ ಮಹೋತ್ಸವ ಆಗಸ್ಟ್ 21ರ ಭಾನುವಾರ ಬೆಂಗಳೂರಿನ ಅರಮನೆ ಆವರಣದಲ್ಲಿ ನೆರವೇರಿತು.

ಆಗಸ್ಟ್ 20ರ ಶನಿವಾರ ಸಂಜೆ ನಡೆದ ಆರತಕ್ಷತೆಯಲ್ಲಿ ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಮಾಜಿ ಸಚಿವೆ ಉಮಾಶ್ರೀ, ಡಾ.ಹಂಸಲೇಖ ಸೇರಿದಂತೆ ಗಣ್ಯರು ಆರತಕ್ಷತೆ ಹಾಗೂ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಡಾ.ವಿ.ರವಿಚಂದ್ರನ್ ಕುಟುಂಬ ಚಿತ್ರರಂಗದ ಕುಟುಂಬವನ್ನು ಆಹ್ವಾನಿಸಿ ಸಂಭ್ರಮಿಸಿತು. ಅವರ ಎರಡನೇ ಪುತ್ರ ವಿಕ್ರಂ ಹಾಗೂ ಕುಟುಂಬ ಸದಸ್ಯರು ಅತಿಥಿಗಳನ್ನು ಬರಮಾಡಿಕೊಂಡರು.

ಈ ಮದುವೆ ಸಂಭ್ರಮ ಈಚಿನ ಸ್ಯಾಂಡಲ್ ವುಡ್ ನ ಅತ್ಯಂತ ಅದ್ದೂರಿ ಹಾಗೂ ಮಹತ್ವದ ಕಾರ್ಯಕ್ರಮವಾಗಿ ದಾಖಲಾಯಿತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *