ಕನ್ನಡದ ದಂತಕಥೆಯಾದವರ ಸಾಲಿಗೆ ಸೇರುವ ಹಿರಿಯ ನಿರ್ದೇಶಕ ಭಗವಾನ್ ಈ ಚಿತ್ರಕ್ಕೆ ಹರಸಿದರು.. ಹಾರೈಸಿದರು.. ಇದು ಮೇಡ್ ಇನ್ ಬೆಂಗಳೂರು ಜೊತೆಗೆ ಮೆಕ್ ಇನ್ ಬೆಂಗಳೂರು ಆಗಲಿ ಎಂದರು..
ಅದೇ ಮೇಡ್ ಇನ್ ಬೆಂಗಳೂರು..!
ರಂಗಭೂಮಿಯ ಜೊತೆ ಒಡನಾಟವಿರುವ ಪ್ರದೀಪ್ ಕೆ.ಶಾಸ್ತ್ರಿ ಹಾಗೂ ಉದ್ಯಮಿಯಾಗಿ ಬೆಳೆದಿರುವ ಬಿ.ಎಸ್.ಬಾಲಕೃಷ್ಣ ಅವರ ಪ್ರಯತ್ನದ ಫಲವಾಗಿ ಇನ್ನೇನು ಬಿಡುಗಡೆಯ ದಾರಿಯಲ್ಲಿರುವ ಈ ಚಿತ್ರದ ಹಾಡುಗಳು ಮಂಗಳವಾರ ಬಿಡುಗಡೆ ಕಂಡಿದ್ದು ವಿಶೇಷ.
ಬೆಂಗಳೂರು ಎಂದರೆ ಮಿನಿ ಜಗತ್ತು ಇದ್ದಂತೆ. ಅಷ್ಟೊಂದು ವೈವಿಧ್ಯಮಯ ಜನರು ವಾಸಿಸುವ ಸ್ಥಳ. ಅವರೆಲ್ಲಾ ಬೆಂಗಳೂರಿಗೆ ಬರಯವ ಪರಿಯನ್ನು ಹೇಗೆ ವರ್ಣಿಸಬಹುದು ಎಂಬುದಕ್ಕೆ ‘ಬನ್ನಿರಿ ಬೆಂಗಳೂರಿಗೆ..’ ಎಂಬ ಹಾಡು
ಉದಾಹರಣೆ ಎಂಬುದು ಎದ್ದು ಕಂಡಿತು.
ಹರ್ಷ, ಕಂಬದ ರಂಗಯ್ಯ ಮೊದಲಾದ ಗಾಯಕರೇ ಈ ಹಾಡಿನಲ್ಲಿ ನಟಿಸಿರುವುದು. ಬಸ್ಸಿನ ಆಕಾರದ ಕಲಾಕೃತಿ. ಅದು ಓಡಿದಂತೆಯೇ ಭಾಸವಾಗುವ ತಂತ್ರಜ್ಞಾನವೂ ವಿರಳ.
ಮೊದಲಿಗೆ ಚಿತ್ರದ ಪೋಸ್ಟರ್ ಅನಾವರಣಗೊಂಡಿತು. ಜನಪ್ರಿಯ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಪೋಸ್ಟರ್ ಅನಾವರಣಗೊಳಿಸಿದರು. ಹಿರಿಯ ನಿರ್ದೇಶಕ ಭಗವಾನ್, ನಿರ್ಮಾಪಕ ಬಿ.ಎಸ್.ಬಾಲಕೃಷ್ಣ ಹಾಗೂ ನಿರ್ದೇಶಕ ಪ್ರದೀಪ್ ಕೆ.ಶಾಸ್ತ್ರಿ ಈ ಸಂದರ್ಭದಲ್ಲಿ ಹಾಜರಿದ್ದರು.
ಬಳಿಕ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು. ಅಶ್ವಿನ್ ಪಿ.ಕುಮಾರ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಪ್ರಶಂಸೆಯೂ ವ್ಯಕ್ತವಾಯಿತು.
ಬೆಂಗಳೂರಿನಂತೆ ಈ ಚಿತ್ರವು ಒಂದು ಮಾದರಿ. ಬೆಂಗಳೂರು ಹೆಮ್ಮೆಯಾಗಬೇಕು ಎಂಬುದು ನಮ್ಮ ಆಶಯ ಎಂದು ಹೇಳಿಕೊಂಡಿತು ಚಿತ್ರತಂಡ.
ನನಗೆ ಈಗ ವಯಸ್ಸು 90. ಆದರೆ 70 ವರ್ಷಗಳ ವೃತ್ತಿಯ ಅನುಭವವಿದೆ ಎಂದರು ಹಿರಿಯ ನಿರ್ದೇಶಕ ಭಗವಾನ್. ಜೇಡರಬಲೆಗೆ ಹೆಸರಿಟ್ಟ ಕ್ಷಣ ಹಾಗೂ ಆಗಿನ ಕಾಲದ ಸಿನಿಮಾ ನಿರ್ಮಾಣದ ವಿಶೇಷತೆಗಳ ಬಗ್ಗೆಯೂ ಬೆಳಕು ಚೆಲ್ಲಿದರು ಭಗವಾನ್.
ಮುಖ್ಯ ಪಾತ್ರದಲ್ಲಿ ನಟಿಸಿರುವ ಮಧುಸೂದನ್ ಗೋವಿಂದ್, ಪುನೀತ್ ಮಾಂಜ, ವಂಶೀಧರ್, ಸಂಕಲನಕಾರ ಪ್ರಶಾಂತ್ ನಾಯಕ್ ತಮ್ಮ ಅನುಭವ ಹೇಳಿಕೊಂಡರು.