Snehapriya.com

June 8, 2025

ತೂತು ಮಡಿಕೆ ಬಿಡುಗಡೆಗೆ

Social Share :

ಚಂದ್ರಕೀರ್ತಿ ಮುಖ್ಯಪಾತ್ರದಲ್ಲಿ ನಟಿಸಿ ನಿರ್ದೇಶನ ಮಾಡಿರುವ ಮನರಂಜನಾತ್ಮಕ ಥ್ರಿಲ್ಲರ್ ಚಿತ್ರ ‘ತೂತು ಮಡಿಕೆ’ ಇದೇ ವಾರ (ಜು.8) ಬಿಡುಗಡೆ ಕಾಣುತ್ತಿದೆ.

ಇದು ಕೊರೊನಾ ಮುಂಚೆ ಆರಂಭವಾದ ಚಿತ್ರ. ಒಂದು ರೀತಿಯಲ್ಲಿ ತಡವಾಗಿದೆ. ಆದರೆ ಚಿತ್ರ ಸ್ಯಾಟಲೈಟ್, ಓಟಿಟಿ ಗೆ ಮಾರಾಟವಾಗಿದೆ. ಹಾಗಾಗಿ ನಿರ್ಮಾಪಕರು ಲಾಭದಲ್ಲಿದ್ದಾರೆ.

ವಿಶೇಷವೆಂದರೆ; ಈ ಚಿತ್ರವನ್ನು ಲಂಡನ್ ನಲ್ಲಿ ನೆಲೆಸಿದ್ದ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ. ಸುಮಾರು 80 ಚಿತ್ರಮಂದಿರಗಳಲ್ಲಿ ಚಿತ್ರವು ತೆರೆ ಕಾಣುತ್ತಿದೆ ಎಂಬ ಉತ್ತರ ಬಂತು ನಿರ್ಮಾಪರಿಂದ.

ಕಲಾವಿದರಾದ ಗಿರೀಶ್ ಶಿವಣ್ಣ, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ಚಂದ್ರಕೀರ್ತಿ ಎದುರು ಪಾವನಾ ನಟಿಸಿದ್ದಾರೆ. ನನ್ನದು ಟೀ ಅಂಗಡಿಯ ಲೋಕಲ್ ಹುಡುಗಿಯ ಪಾತ್ರ ಎಂದರು ಪಾವನಾ‌..

ನಾನು ನಟನೆಯನ್ನು ನಂಬಿದ್ದೆ. ಉತ್ತಮ ಅವಕಾಶಗಳೂ ಬಂದವು. ಆದರೆ ಇಲ್ಲಿ ನಿರ್ದೇಶನದ ಅನಿವಾರ್ಯತೆ ಸೃಷ್ಟಿಯಾಯಿತು ಎಂದರು ಚಂದ್ರಕೀರ್ತಿ. ಇದು ಯಾವುದೇ ಚಿತ್ರದ ಅನುಕರಣೆ ಅಲ್ಲ. ಕೊರೊನಾ ಕಾಲದಲ್ಲಿ ಹುಟ್ಟಿದ ಕಥೆ ಎಂದರು.

ಸಂಗೀತ ನಿರ್ದೇಶಕ ಸ್ವಾಮಿನಾಥನ್ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *