Snehapriya.com

June 8, 2025

ಲವ್ ಆಕ್ಷನ್ ಓ ಮೈ ಲವ್ ಟ್ರೈಲರ್

Social Share :

ತೀವ್ರ ಕುತೂಹಲ ಹುಟ್ಟು ಹಾಕಿರುವ ಸ್ಮೈಲ್ ಶ್ರೀನು ನಿರ್ದೇಶನದ ‘ಓ ಮೈ ಲವ್’ ಚಿತ್ರದ ಟ್ರೈಲರ್ ಬಿಡುಗಡೆ ಕಂಡಿದೆ. ಆ ಮೂಲಕ ಅರ್ಧ ಕುತೂಹಲವನ್ನು ತಣಿಸಿದೆ. ಲವ್ ಆಕ್ಷನ್ ಬೆರೆತ ಪೂರ್ಣ ಮನರಂಜನೆಯ ಭರವಸೆಯನ್ನು ಚಿತ್ರತಂಡ ನೀಡಿದೆ..

ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಹಾಗೂ ಕೀರ್ತಿ ಕಲ್ಕೆರೆ ಮುಖ್ಯ ಪಾತ್ರದಲ್ಲಿರುವ ಚಿತ್ರವು ಜುಲೈ 15ಕ್ಕೆ ಬಿಡುಗಡೆ ಕಾಣುವ ದಿನಾಂಕ ಘೋಷಣೆ ಮಾಡಿಕೊಂಡಿದೆ. ಅದಕ್ಕೂ ಮುಂಚೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರದ ಬಗೆಗಿನ ಕುತೂಹಲ ಇಮ್ಮಡಿಗೊಳಿಸಿಕೊಂಡಿದೆ ಚಿತ್ರತಂಡ.

ಬೆಂಗಳೂರಿನ ಕಲಾವಿದರ ಸಂಘದ ಆವರಣದಲ್ಲಿ ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕಲಾ ಸಾಮ್ರಾಟ್ ಎಂದು ಎಸ್.ನಾರಾಯಣ್, ಸುಪ್ರೀಂ ಹೀರೋ ಶಶಿಕುಮಾರ್, ನಿರ್ಮಾಪಕ ಸಿ.ರಾಮಾಂಜಿನಿ, ಅವರ ತಂದೆ ಜಿ.ಚನ್ನಬಸಪ್ಪ, ಹಿರಿಯ ನಟಿ ಸುಂದರಶ್ರೀ, ನಟಿ ಸಂಗೀತಾ, ವಿತರಕ ಕಮರ್, ವಕೀಲರಾದ ಚಂದ್ರ ಮೋಹನ್ ಹಾಗೂ ಬಳ್ಳಾರಿಯಿಂದ ಆಗಮಿಸಿದ್ದ ಗಣ್ಯರು ಮತ್ತು ಅಸಂಖ್ಯಾತ ಅಭಿಮಾನಿಗಳು ಭಾಗವಹಿಸಿದ್ದರು.

ಬಹಳ ವಿಶೇಷವೆಂದರೆ ಚಿತ್ರದಲ್ಲಿ ನಟಿಸಿದ ಕಲಾವಿದರೂ ಸೇರಿದಂತೆ ಎಲ್ಲಾ ತಂತ್ರಜ್ಞರು ಹಾಗೂ ಚಿತ್ರಕ್ಕಾಗಿ ದುಡಿದ ಎಲ್ಲರನ್ನೂ ಸನ್ಮಾಸಿತು ಚಿತ್ರತಂಡ. ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರು ಸಂಭ್ರಮಿಸಿದ ಅಪರೂಪದ ಕ್ಷಣವಾಗಿತ್ತು ಅದು..

ಏನೇ ಆಗಲಿ ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆಯ ನಿರ್ಮಾಣ ಸಂಸ್ಥೆ ಸಿಕ್ಕಿತು ಎಂದರು ಹಿರಿಯ ನಿರ್ದೇಶಕ ಎಸ್.ನಾರಾಯಣ್. ಅದುವೆ ಜಿ.ಸಿ.ಬಿ ಪ್ರೊಡಕ್ಷನ್. ರಾಮಾಂಜಿನಿ ತಮ್ಮ ಕುಟುಂಬದ ಜೊತೆ ಬೆರೆತು ಇಡೀ ತಂಡವನ್ನು ಗೌರವಿಸಿದ್ದು ಹೆಗ್ಗಳಿಕೆಯ ವಿಷಯವೇ ಆಗಿತ್ತು.

ನಟ ಶಶಿಕುಮಾರ್ ಹಾಗೂ ಎಸ್.ನಾರಾಯಣ್ ತಮ್ಮ ಹಳೇಯ ದಿನಗಳನ್ನು ಮೆಲುಕು ಹಾಕಿದರು. ಪರಸ್ಪರ ಚಟಾಕಿ ಹಾರಿಸಿ ನಕ್ಕರು. ಆ ಮೂಲಕ ನೆರೆದವರನ್ನು ರಂಜಿಸಿದರು ಕೂಡ. ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಎತ್ತರದ ಸ್ಥಾನದಲ್ಲಿ ಇರುವಾಗ ಮಧ್ಯ ಬಂದು ಭರವಸೆ ಹುಟ್ಟಿಸಿದ್ದೂ ಅಲ್ಲದೆ ತಮ್ಮದೇ ಆದ ಛಾಪು ಮೂಡಿಸಿದ್ದು ಶಶಿಕುಮಾರ್ ಎಂದರು ನಾರಾಯಣ್. ಅದಕ್ಕೆ ಪ್ರತಿಯಾಗಿ ನಾರಾಯಣ್ ‌ಅವರ ಶಿಸ್ತು ಮತ್ತು ಚಿತ್ರೀಕರಣದಲ್ಲಿ ಆದ ಅನುಭವವನ್ನು ವರ್ಣಿಸಿದರು ಶಶಿಕುಮಾರ್.

ಅಕ್ಷಿತ್ ಶಶಿಕುಮಾರ್ ತಂದೆಯ ಔದಾರ್ಯವನ್ನು ನೆನೆದರು. ಅವರು ಹಾಕಿಕೊಟ್ಟ ರಸ್ತೆಯ ಮೇಲೆ ನಾನು ಓಡಾಡುತ್ತಿರುವೆ. ಲವ್ ಯು ಪಾ.. ಎಂದರು. ತಂದೆಯ ರೀತಿ ನನಗೂ ಪ್ರೋತ್ಸಾಹ ಕೊಡಿ ಎಂದರು.

ಕೀರ್ತಿ ಕಲ್ಕೆರೆ ನಮ್ಮಂಥಹ ಹೊಸಬರ ನ್ನು ಬೆಳೆಸಿ ಎಂದರು. ನಟ ಪೃಥ್ವಿ ಸಹ ಮಾತನಾಡಿದರು. ಸುಂದರ ಶ್ರೀ ಇದು ಕಲಾವಿದರನ್ನು ಪೋಷಿಸುವ ಸಂಸ್ಥೆ ಎಂದರು. ನಟಿ ಸಂಗೀತಾ ಅವರು ಎಸ್.ನಾರಾಯಣ್ ಅವರ ‘ಕಾವೇರಿ ತೀರದಲ್ಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು.

ಚಿತ್ರದ ಹಾಡುಗಳು ಮಿಲಿಯನ್ ಗಟ್ಟಲೆ ಜನರನ್ನು ತಲುಪಿವೆ. ಈ ಹಾಡುಗಳ ಗೆಲುವು ಚಿತ್ರದ ಗೆಲುವು ಆಗಲಿದೆ‌ ಎಂಬ ವಿಶ್ವಾಸವನ್ನು ನಿರ್ಮಾಪಕ ರಾಮಾಂಜಿನಿ ವ್ಯಕ್ತಪಡಿಸಿದರು.

‘ಬಳ್ಳಾರಿ ದರ್ಬಾರ್’ ರೀತಿಯ ಆಕ್ಷನ್ ಚಿತ್ರ ಮಾಡಿದ್ದ ಸ್ಮೈಲ್ ಶ್ರೀನು ಇಲ್ಲಿ ಪ್ರೇಮ ಕಾವ್ಯಾ ಮಾಡಿದ್ದಾರೆ. ಪ್ರತಿ ಸನ್ನಿವೇಶ ಕೂಡ ಥ್ರಿಲ್ಲಿಂಗ್ ಆಗಿ ಇರಲಿದೆ ಎಂಬುದನ್ನು ಚಿತ್ರತಂಡ ಹಾಡಿ ಹೊಗಳಿತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *