ಹೆಚ್ಚು ತಾರೆಗಳ ಕಲರವ ಇದ್ದ ಭರ್ಜರಿ ಕಾರ್ಯಕ್ರಮ ಅದಾಗಿತ್ತು. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಮುಖ್ಯ ಆಕರ್ಷಣೆ.. ‘ರಾ ರಾ ರಕ್ಕಮ್ಮ..’ ಹುಚ್ಚೆಬ್ಬಿಸಿದ ಪರಿಗೆ ಅಲ್ಲಿ ಸೇರಿದ್ದವರೂ ಉನ್ಮಾದ ಅನುಭವಿಸಿದರು.. ಏಕೆಂದರೆ ಶಿವರಾಜ್ ಕುಮಾರ್, ವಿ.ರವಿಚಂದ್ರನ್, ರಮೇಶ್ ಅರವಿಂದ್ ರಂತಹ ಘಟಾನುಘಟಿಗಳು ಹೆಜ್ಹೆ ಹಾಕಿದ ಥ್ರಿಲ್ಲಿಂಗ್ ಕ್ಷಣಗಳವು..
ಹೌದು ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದ ಕನ್ನಡದ ಮೊದಲ ಟ್ರೈಲರ್ ಬಿಡುಗಡೆ ಸಮಾರಂಭ ಅದಾಗಿತ್ತು. ಟ್ರೈಲರ್ ತ್ರಿಡಿಯಲ್ಲಿ ಇದ್ದುದ್ದರಿಂದ ಅದರ ತಾಂತ್ರಿಕ ವಿಷಯಗಳು ಬೆರಗುಗೊಳಿಸಿದವು ಕೂಡ.
ಮೊದಲು ದುಬೈನ ಅತಿ ಎತ್ತರದ ಕಟ್ಟಡ ‘ಬುರ್ಜಾ ಖಲೀಪ’ ಮೇಲೆ ಚಿತ್ರದ ಹೆಸರು ಅನಾವರಣಗೊಳಿಸಿದ ವಿಷಯದಿಂದ ಎಲ್ಲವೂ ತೆರೆದು ಕೊಂಡವು. ನಿರ್ಮಾಪಕ ಜಾಕ್ ಮಂಜು ಪಟ್ಟ ಕಷ್ಟಗಳು.. ನಿರ್ದೇಶಕ ಅನೂಪ್ ಭಂಡಾರಿ ಪರಿಶ್ರಮ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಡ್ಯಾನ್ಸ್ ಮಾಸ್ಟರ್ ಕಲಾವಂತಿಕೆ ಬಗ್ಗೆ ಹೊಗಳಿಕೆಗಳು ಬಂದವು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಸೌಮ್ಯ ನಟ ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಧನಂಜಯ್, ರಿಷಬ್ ಶೆಟ್ಟಿ, ಯೋಗರಾಜ್ ಭಟ್, ಅರ್ಜುನ್ ಜನ್ಯ ಹೀಗೆ ಗಣ್ಯರ ದೊಡ್ಡ ದಂಡೇ ಅಲ್ಲಿತ್ತು.
ಜಾಕ್ವೆಲಿನ್ ಫರ್ನಾಂಡೀಸ್ ಮುಖ್ಯ ಆಕರ್ಷಣೆ. ಅದರಲ್ಲೂ ನಿರೂಪಣೆ ಮಾಡುತ್ತಿದ್ದ ಅಕುಲ್ ಬಾಲಾಜಿ ಜಾಕ್ವೆಲಿನ್ ಮತ್ತು ರಾರಾ ರಕ್ಕಮ್ಮ ಬಿಟ್ಟು ಅಲುಗಾಡಲೇ ಇಲ್ಲ.. ತಮ್ಮ ಚೇಷ್ಟೇಗೆ ರವಿಚಂದ್ರನ್ ಅವರಿಂದ ಬೈಸಿಕೊಳ್ಳುವುದು ಅಕುಲ್ ಗೆ ಥ್ರಿಲ್ಲಿಂಗ್ ವಿಷಯ.. ಹಾಗಾಗಿ ಒಂದಷ್ಟು ಸರ್ಕಸ್ ಮಾದರಿಯ ಜೋಕ್ ಗಳು ನಡೆದವು..
ಚಿತ್ರದ ನಿರ್ಮಾಣದಲ್ಲಿ ಆದ ಪರಿಶ್ರಮ ಮತ್ತು ಕಲಾತ್ಮಕ ಅಂಶಗಳ ಬಗ್ಗೆ ಗಣ್ಯರಿಂದ ಹೊಗಳಿಕೆ ಬಂತು. ಚಿತ್ರದ ಟ್ರೈಲರ್ ನೋಡಿದಾಗ ಫ್ಯಾಂಟಸಿ ಅಂಶಗಳು ಕಾಣುತ್ತವೆ. ನಿರ್ದೇಶಕ ಅನೂಪ್ ಭಂಡಾರಿ ಇಂತಹ ವಿಷಯಗಳನ್ನು ನಿರೂಪಿಸಿವುದರಲ್ಲಿ ಎತ್ತಿದ ಕೈ ಎಂಬ ಹೊಗಳಿಕೆಯೂ ಬಂತು.
ಕಾರ್ಯಕ್ರಮದ ಕೊನೆಯಲ್ಲಿ ‘ರಾ ರಾ ರಕ್ಕಮ್ಮ..’ ಗಣ್ಯರೆಲ್ಲರೂ ಹೆಜ್ಜೆ ಹಾಕಿದ್ದು ಥ್ರಿಲ್ಲಿಂಗ್ ಕ್ಷಣವಾಗಿ ದಾಖಲಾಯಿತು. ಅದರಲ್ಲಿ ಶಿವಣ್ಣ ಡ್ಯಾನ್ಸ್ ಆಸಕ್ತಿ, ರವಿಚಂದ್ರನ್ ಅವರ ಬಲವಂತ ಡ್ಯಾನ್ಸ್ ನೋಡಲು ಕಣ್ಣಿಗೆ ಹಬ್ಬವಾಗಿತ್ತು.
ಕಾಲು ನೋವಿನ ನಡುವೆಯೂ ನಿರ್ಮಾಪಕ ಜಾಕ್ ಮಂಜು ಖುಷಿಯಿಂದ ಕಾರ್ಯಕ್ರಮದಲ್ಲಿ ಪಾಲ್ಹೊಂಡಿದ್ದು, ಸುದೀಪ್ ಕುಟುಂಬ ಸಮೇತರಾಗಿ ಕಾಣಿಸಿಕೊಂಡಿದ್ದು, ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ಇತರ ಗಣ್ಯರ ಉಪಸ್ಥಿತಿ ಬಹಳವೇ ವಿಶೇಷವಾಗಿತ್ತು.