ಸಾಲುಮರದ ತಿಮ್ಮಕ್ಕ ಅವರು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.
ಸಾಲು ಮರಗಳನ್ನು ಬೆಳೆಸಿ ‘ಪರಿಸರದ ತಾಯಿ’ ಎಂದೇ ಹೆಸರಾಗಿರುವ ತಿಮ್ಮಕ್ಕ ಅವರು ಮುಖ್ಯಮಂತ್ರಿಗಳಿಗೆ ಆಶೀರ್ವಾದ ಕೂಡ ಮಾಡಿದರು.
ಮುಖ್ಯಮಂತ್ರಿ ಅವರು ಸಹ ವಿನಮ್ರವಾಗಿ ತಿಮ್ಮಕ್ಕ ಅವರ ಆಶೀರ್ವಾದ ಪಡೆದರು.