Snehapriya.com

June 8, 2025

ಪತ್ರಕರ್ತರಿಗೆ ಇಡ್ಲಿ ಬಡಿಸಿದ ಶಿವಣ್ಣ

Social Share :

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ರಕರ್ತರಿಗೆ ಎಂದಿಗೂ ಪ್ರೀತಿಯ ಶಿವಣ್ಣ..

ಸೋಮವಾರ ಅವರ ‘ಬೈರಾಗಿ’ ಚಿತ್ರದ ಸುದ್ದಿಗೋಷ್ಠಿಗೆ ಬೆಂಗಳೂರಿನ ನಾಗಾವಾರದಲ್ಲಿರುವ ತಮ್ಮ ಮನೆಗೆ ಆಹ್ವಾನಿಸಿದ್ದರು.

ಸಿನಿಮಾ ವಿಷಯವಲ್ಲದೆ ಬೇಕಾದಷ್ಟು ವಿಷಯಗಳ ಬಗ್ಗೆ ಸಾಕಷ್ಟು ಲವಲವಿಕೆ ಯಿಂದ ಮಾತನಾಡಿದರು. ಪತ್ರಕರ್ತರ ಜೊತೆ ಖುಷ್ ಖುಷಿಯಾಗಿ ಬೆರೆತರು..

ಅಷ್ಟಲ್ಲದೆ ತಾವೇ ತಿಂಡಿ ಬಡಿಸಿ ಖುಷಿಪಟ್ಟರು. ನಿಮ್ಮ ಕೈಯಿಂದ ತಿಂಡಿ ಕೊಟ್ಟಿರುವುದು ಸದಾ ಕಾಲ ನೆನಪಿನಲ್ಲಿ ಉಳಿಯುತ್ತದೆ ಶಿವಣ್ಣ ಎಂದು ಪತ್ರಕರ್ತರು ಪ್ರತಿಕ್ರಿಯೆ ನೀಡಿದರು.

ಈ ಹಿಂದೆ ಅಭಿಮಾನಿಗಳಿಗೆ ಅನೇಕ ಬಾರಿ ಶಿವಣ್ಣ ಊಟ ಬಡಿಸಿದ್ದರು. ಈಗ ಅವರ ಕೈಯಿಂದ ತಿಂಡಿ ಸವಿಯುವ ಅವಕಾಶ ಮಾಧ್ಯಮದವರಿಗೂ ದಕ್ಕಿತು.

ಸ್ಟಾರ್ ನಟರಾದರೂ ಸರಳತೆಯಲ್ಲಿ ಎಲ್ಲರನ್ನೂ ಮೀರಿಸುವ ಶಿವರಾಜ್ ಕುಮಾರ್ ಸೋಮವಾರ ಕೂಡ ಅದರ ಪರಿಚಯ ಮಾಡಿಸಿದರು..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *