ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್,
ಹಿರಿಯ ಕಲಾವಿದರಾದ ಭಾನು ಪ್ರಕಾಶ್, ಕೃಷ್ಣ ಪ್ರಸಾದ್, ಅನಿಕ ಪವಿತ್ರ ರೆಡ್ಡಿ, ಚಿತ್ರಾ ಹೊನ್ನಾವರ ಸೇರಿ 60 ಮಂದಿ ಕಲಾವಿದರಿಗೆ ರಾಜ್ಯ ಸೇವಾ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ.
ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಕಲಾಮಂದಿರದಲ್ಲಿ ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿರಿಯ ಕಲಾವಿದರಿಗೆ ಇದೇ ಏಪ್ರಿಲ್ 30ರಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ
ಕೆಪಿಸಿಸಿ ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ರವಿ ಸಂತು ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್, ಉಪಾಧ್ಯಕ್ಷ ಜಿ.ಎನ್ ರವಿಕುಮಾರ್, ಹಿರಿಯ ನಿರ್ದೇಶಕ ಜೋಸೈಮನ್, ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಕಲಾವಿದರಾದ ಜಯಸಿಂಹ, ನೀನಾ ಪಾಟೀಲ್, ರಾಜಲಕ್ಷ್ಮಿ ಗಂಗಾಧರ್, ರವಿರಾಜ್, ಭೋಜಣ್ಣ, ಓಂಕಾರ್ ಆನಂದ್, ರಘುನಾಥ, ಕೃಷ್ಣ ಬಲಭದ್ರಿ ಹಾಗೂ ಇನ್ನೂ ಹಲವಾರು ಹಿರಿಯ ಕಲಾವಿದರಿಗೆ ‘ರಾಜ್ಯ ಸೇವಾ ರತ್ನ’ ಪ್ರಶಸ್ತಿ ನೀಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ವರನಟ ಡಾ.ರಾಜ್ ಕುಮಾರ್ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಗೀತ ನಮನ ಕಾರ್ಯಕ್ರಮವೂ ನಡೆಯಲಿದೆ.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷ ಡಾ.ಟಿ ಶಿವಕುಮಾರ್ ನಾಗರನವಿಲೆ ಇಡೀ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದಾರೆ.
🖋ವಿ.ನಂಜುಂಡಪ್ಪ