ನಿಗೂಢ ರಹಸ್ಯಗಳ ಜೊತೆಗೆ ತ್ರಿಕೋನ ಪ್ರೇಮಕಥೆ ಹೊಂದಿರುವ ‘ಎವಿಡೆನ್ಸ್’ ಎಂಬ ಚಿತ್ರ ಈಗ ಕುತೂಹಲ ಘಟ್ಟದಲ್ಲಿದೆ..
ಪ್ರವೀಣ್ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಶ್ರೀಧೃತಿ ನಿರ್ಮಾಣ ಸಂಸ್ಥೆಯ ಮೂಲಕ ತಯಾರಾಗುತ್ತಿದ್ದು, ಶ್ರೀನಿವಾಸ್ ಪ್ರಭು ಕೆ, ಮಾದೇಶ್ ಕೊಡಿಹಳ್ಳಿ, ನಟರಾಜ್ ಸಿ ಎಸ್ ಚನ್ನಸಂದ್ರ ನಿರ್ಮಾಪಕರ ಸಾಲಿನಲ್ಲಿದ್ದಾರೆ.
ಕನ್ನಡದಲ್ಲಿ ‘ಸಾಕ್ಷ್ಯ’ ಎಂಬುದನ್ನು ಪ್ರತಿಪಾದಿಸುವ ಈ ಚಿತ್ರವು ಕಳೆದ ಎರಡು ವರ್ಷಗಳಿಂದ ಕೊರೊನಾ ಮತ್ತಿತರ ಹೊಡೆತಗಳನ್ನು ಅನುಭವಿಸಿ ಈಚೆಗೆ ಚಿತ್ರೀಕರಣ ಮುಗಿಸಿದೆ. ಬೆಂಗಳೂರು ಮಂಗಳೂರು ಹಾಗೂ ಚಿಕ್ಕಮಗಳೂರುನಲ್ಲಿ ಇದರ ಚಿತ್ರೀಕರಣ ನಡೆದಿದೆ.
ರೋಬೊ ಗಣೇಶನ್ ಹಾಗೂ ರಚಿತಾ ಮುಖ್ಯ ಪಾತ್ರದಲ್ಲಿದ್ದಾರೆ. ಇನ್ನುಳಿದಂತೆ ಪೊಲೀಸ್ ಅಧಿಕಾರಿಯಾಗಿ ಮಾನಸ ಜೋಶಿ, ವಿಶೇಷ ಪಾತ್ರದಲ್ಲಿ ತೆಲುಗಿನ ಚಮಕ್ ಚಂದ್ರ, ಹೋಂ ಮಿನಿಸ್ಟರ್ ಪಾತ್ರದಲ್ಲಿ ತಮಿಳಿನ ಪವನ್ ಸುರೇಶ್ ಹಾಗೂ ಶಶಿಧರ್ ಕೋಟೆ ನಟಿಸಿದ್ದಾರೆ.
ಆರೋನ್ ಕಾರ್ತಿಕ್ ಸಂಗೀತ,
ಹನುಮಯ್ಯ ಬಂಡಾರು ಮತ್ತು ಆರ್ ಚಂದ್ರಶೇಖರ್ ಪ್ರಸಾದ್ ಸಂಭಾಷಣೆ, ಕರಿಯ ನಂದ ಮಾಸ್ಟರ್, ರಘು ಆರ್ ಜೆ ನೃತ್ಯ ಸಂಯೋಜನೆ, ರವಿ ಸುವರ್ಣ ಛಾಯಾಗ್ರಣವಿದೆ.
ಇದೇ ಜೂನ್ ಅಥವಾ ಜುಲೈ ನಲ್ಲಿ ಚಿತ್ರವು ಬಿಡುಗಡೆಗೆ ಸಿದ್ದವಾಗಲಿದೆ ಎಂಬುದು ನಿರ್ದೇಶಕ ಪ್ರವೀಣ್ ರಾಮಕೃಷ್ಣ ನೀಡಿರುವ ಮಾಹಿತಿ.