ಇದೊಂದು ಕಿರುಚಿತ್ರ. ಹೆಸರು ಅಂತರ್ಕಲಹ. ಮನುಷ್ಯನ ಮನಸ್ಸಿನೊಳಗಿನ ತೊಳಲಾಟ ಮತ್ತು ಅಶಾಂತ ಅಂತರ್ಮುಖಿ ಭಾವನೆಗಳನ್ನು ವ್ಯಕ್ತಪಡಿಸುವ ಆಶಯದಲ್ಲಿ ಮೂಡಿ ಬಂದಿರುವ ಚಿತ್ರ.
ಮುಖ್ಯವಾಗಿ ಒಬ್ಬ ನಿರ್ದೇಶಕ ಆರಂಭದಲ್ಲಿ ತಾನೊಬ್ಬ ಕ್ರಿಯಾಶೀಲ ಎಂದು ಸಾಬೀತುಪಡಿಸಲು ಮಾಡಿದ ಚಿತ್ರ. ಆದರೆ ಒಬ್ಬಂಟಿ ಮನುಷ್ಯ ಮನಸ್ಸಿನ ಭಾವನೆಗಳನ್ನು ಹಿಂಸಾತ್ಮಕಗೊಳಿಸುವುದು ಮತ್ತು ರಕ್ತಸಿಕ್ತ ಸ್ಥಿತಿಯನ್ನು ಮತ್ತೆ ಮತ್ತೆ ಅನುಭವಿಸುವುದು ಮಾತ್ರ ಏಕೆಂದು ಅರ್ಥವಾಗುವುದಿಲ್ಲ..
ಪ್ರತಿ ಮನುಷ್ಯನ ಮನಸ್ಸು ಹಿಂಸೆಗೆ ಪ್ರಚೋದನೆ ನೀಡುವುದಿಲ್ಲ ಮತ್ತು ಹಿಂಸೆಯನ್ನು ಮಾಡಲು ಬಯಸುವುದಿಲ್ಲ. ಅದೇಕೆ ನಿರ್ದೇಶಕ ಆಕಾಶ್ ಅವರಲ್ಲಿ ಇಂತಹ ಹಿಂಸಾರೂಪ ಮೈದಳೆಯಿತೋ ಎಂಬುದು ಪ್ರಶ್ನೆಯಾಗಿ ಕಾಡಿತು.
ಚಿತ್ರಗಳು : ಕೆ.ಎನ್.ನಾಗೇಶ್ ಕುಮಾರ್
ಅಂದ ಹಾಗೆ ನಟ ಅರುಣ್ ಸಾಗರ್ ಹಾಗೂ ಇತರರು ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಅಲೋಕ್, ನಟ, ನಿರೂಪಕ ನಿರಂಜನ್ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
Thank you for coming and watching our film sir. We all are young talented artist looking forward to show out talent . I will keep your review and suggestions and make the best next time . Killing is just a feeling to show his state of mind not that everyone has a dark feeling like our protagonist in the movie. Its a feeling .