Snehapriya.com

June 9, 2025

ಡಾ.ಶಿವಕುಮಾರಸ್ವಾಮೀಜಿ ಪಾತ್ರ ಅಮಿತಾಬ್ ಬಚ್ಚನ್ ಸಾಧ್ಯ ಮಾಡುವರೇ..

Social Share :

ಕನ್ನಡ ನಾಡಿನಲ್ಲಿ ತ್ರಿದಾಸೋಹ ಸಾಧ್ಯ ವಾಗಿಸಿದ ಖ್ಯಾತಿ ಇರುವ ಪರಮಪೂಜ್ಯ ಶ್ರೀ ಶ್ರೀಶ್ರೀ ಡಾ.ಶಿವಕುಮಾರಸ್ವಾಮೀಜಿ ಅವರ ಆದರ್ಶಗಳನ್ನು ಮತ್ತು ಬಸವಣ್ಣನವರ ಅಮೃತ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ತಯಾರಾಗಲಿರುವ ಸಿನಿಮಾ ಸರಣಿಯಲ್ಲಿ ಭಾರತೀಯ ಚಿತ್ರರಂಗದ ಮೇರುನಟ ಅಮಿತಾಬ್ ಬಚ್ಚನ್ ನಟಿಸುವರೇ..

ಹೌದು ಈ ನಿಟ್ಟಿನಲ್ಲಿ ಬಹುದೊಡ್ಡ ಪ್ರಯತ್ನವೊಂದು ನಡೆಯುತ್ತಿದೆ ಎಂಬುದು ಅಚ್ಚರಿಯಲ್ಲ; ಅದು ನೈಜ ಸಂಗತಿ. ಕನ್ನಡದ ಜನಮಾನಸದಲ್ಲಿ ನಾದಬ್ರಹ್ಮ ಎಂದೇ ಗುರುತಿಸಿಕೊಂಡಿರುವ ಹಂಸಲೇಖ ಅವರು ಇಂತಹ ಒಂದು ಪ್ರಯತ್ನ ಮಾಡುತ್ತಿದ್ದಾರೆ.

ತುಮಕೂರಿನಲ್ಲಿ ಏಪ್ರಿಲ್ ಒಂದರಂದು ಸಿದ್ದಗಂಗಾ ಕ್ಷೇತ್ರದ ಮಠದ ಆವರಣದಲ್ಲಿ ನಡೆದ ಡಾ.ಶಿವಕುಮಾರಸ್ವಾಮೀಜಿ ಅವರ 115ನೇ ಜಯಂತ್ಯುತ್ಸವದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ಮಿನಿ ಸಿನಿಮಾ ಸರಣಿ ಕಾರ್ಯಕ್ರವನ್ನು ಉದ್ಘಾಟನೆ ಮಾಡಿದರು.

ಡಾ.ಶಿವಕುಮಾರ್ ಸ್ವಾಮೀಜಿ
115 ನೇ ಜಯಂತೋತ್ಸವದ ಅಂಗವಾಗಿಯೇ ರೂಪಿಸಲಾದ ಬೃಹತ್ ಯೋಜನೆ ಇದು. ‘ನಡೆದಾಡೋ ದೇವರ ಬಸವ ಭಾರತ’ ಎಂಬ ಚಿಕ್ಕದಾದ ಸಿನಿಮಾ ಸರಣಿ ಸಾಕಾರಗೊಳಿಸಲು ಪ್ರಯತ್ನ ಪಟ್ಟಿರುವುದು ಹಂಸಲೇಖ ಹಾಗೂ ರಾಜಕಾರಣಿ ರುದ್ರೇಶ್ ಅವರು. ಹಾಗಾಗಿ ‘ರುದ್ರಾ ಕಿರುಚಿತ್ರ’ ಹಾಗೂ ‘ಐದನಿ ಎಂಟರ್ಟೈನ್ಮೆಂಟ್’ ಸಂಸ್ಥೆಗಳ ಈ ಪ್ರಯತ್ನದಲ್ಲಿ 52 ಸಣ್ಣ ಚಿತ್ರಗಳು ತಯಾರಾಗುತ್ತಿವೆ.

ಮುಖ್ಯವಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಸೇರಿ ಏಳು ಭಾಷೆಗಳಲ್ಲಿ ಮಿನಿ ಸಿನಿಮಾ ಸರಣಿ ತಯಾರಾಗುತ್ತಿದೆ ಎಂಬುದನ್ನು ಡಾ.ಹಂಸಲೇಖ, ರುದ್ರೇಶ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದರು.

ಪುರಾಣ, ಚರಿತ್ರೆ ಹಾಗೂ ಜೀವನದ ಮೌಲ್ಯಗಳ ಆಶಯದಲ್ಲೇ ತಯಾರಾಗುವ ಈ ಸರಣಿಯಲ್ಲಿ ಅನ್ನ ದಾಸೋಹ, ವಿದ್ಯಾ ದಾಸೋಹ ಹಾಗೂ ಜ್ಞಾನ ದಾಸೋಹಗಳ ಮಹತ್ವ ಸಾರಲಾಗುತ್ತದೆ. ಮುಖ್ಯವಾಗಿ ಬಸವೇಶ್ವರರ ವಚನಗಳ ಅಭಿವ್ಯಕ್ತಿ ಪ್ರಚಾರ ಕೂಡ ಇರುತ್ತದೆ ಎಂಬ ವಿವರಗಳನ್ನು ನೀಡಲಾಗಿತ್ತು.

ಇದೇ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರಿಂದ ಸ್ವಾಮೀಜಿ ಅವರ ಪಾತ್ರ ಮಾಡಿಸಬೇಕೆಂಬುದು ನಮ್ಮ ಆಶಯವಾಗಿದೆ ಎಂಬ ಉತ್ತರ ಕೊಟ್ಟರು ಡಾ.ಹಂಸಲೇಖ. ಅಮಿತಾಬ್ ಅವರಿಗೆ ಈಗ ಸ್ವಲ್ಪ ಅನಾರೋಗ್ಯ ಸಮಸ್ಯೆ. ಕೆಲ ಸಮಯದ ಬಳಿಕ ಮಾತನಾಡುವ ಭರವಸೆ ಇದೆ ಎಂದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *