* ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮಕ್ಕೆ ಹೊಸ ಸೇರ್ಪಡೆ..
* ಮೈಸೂರು ವಿವಿಯಿಂದ ಅಪ್ಪುಗೆ ಗೌರವ ಡಾಕ್ಟರೇಟ್..
* ಜೇಮ್ಸ್ ಬಿಡುಗಡೆಯ ಪುಳಕದಲ್ಲಿರುವ ಅಭಿಮಾನಿಗಳಿಗೆ ಮತ್ತೊಂದು ಖುಷಿ..
ಹೌದು ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಅಸಂಖ್ಯಾತ ಜನರು ದುಃಖದಲ್ಲಿ ಮುಳುಗಿದ್ದಾರೆ.. ದುಃಖದ ಕಡಲು ಶಾಂತವಾಗುವ ಲಕ್ಷಣಗಳಂತೂ ಇಲ್ಲ; ಏಕೆಂದರೆ ಅಪ್ಪು ಕೊಡುಗೈ ದಾನಿ. ಅವರ ಕಾರ್ಯಗಳು ಎಂದಿಗೂ ಸ್ಮರಣೀಯ..
ಇದೇ 17ರಂದು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಕೊನೆಯ ಚಿತ್ರ ‘ಜೇಮ್ಸ್’ ಬಿಡುಗಡೆ ಕಾಣುತ್ತಿದೆ. ದುಃಖದ ನಡುವೆ ಖುಷಿಯಲ್ಲಿರುವ ಅಭಿಮಾನಿಗಳಿಗೆ ಮತ್ತೊಂದು ಸಂಭ್ರಮ ಪಡುವ ವಿಷಯ ಕೂಡಿ ಬಂದಿದೆ..
ಅದೆಂದರೆ ಮೈಸೂರು ವಿಶ್ವವಿದ್ಯಾಲಯ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿದೆ. ಇದೇ ವಿವಿಯಿಂದ ವರನಟ ಡಾ.ರಾಜ್ ಕುಮಾರ್ ಗೌರವ ಡಾಕ್ಟರೇಟ್ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು..
ಜೇಮ್ಸ್ ಬಿಡುಗಡೆಗೆ ಅಭಿಮಾನಿಗಳು ಕುತೂಹಲದಿಂದ ಕಾಯುವುದಷ್ಟೇ ಅಲ್ಲ; ಈಗಾಗಲೇ ಅಪ್ಪು ಅವರ ದೊಡ್ಡ ದೊಡ್ಡ ಕಟೌಟ್ ಗಳು ಚಿತ್ರಮಂದಿರದ ಮುಂದೆ ಎದ್ದು ನಿಂತಿವೆ.. ಅವುಗಳಿಗೆ ಹಾಲಿನ ಅಭಿಷೇಕ ಮಾಡಿ ತಮ್ಮ ನೆಚ್ಚಿನ ದೇವರಿಗೆ ಪೂಜ್ಯ ಭಾವನೆಯನ್ನು ಪ್ರಕಟಿಸಿದ್ದಾರೆ ಅಭಿಮಾನಿಗಳು..
ಇಡೀ ದೇಶದ 4000 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನ ಕಾಣಲಿರುವ ಜೇಮ್ಸ್ ಅತೀವ ಕುತೂಹಲ ಹುಟ್ಟು ಹಾಕಿದೆ. ನಿರ್ಮಾಪಕ ಕಿಶೋರ್ ಪಾತಿಕೊಂಡ, ನಿರ್ದೇಶಕ ಚೇತನ್ ಕುಮಾರ್ ಹಾಗೂ ಚಿತ್ರತಂಡ ಸದ್ಯ ಬಿಡುವಿರದ ಪ್ರಚಾರದಲ್ಲಿ ತೊಡಗಿದೆ.