Snehapriya.com

June 8, 2025

143 ಚಂದ್ರಕಾಂತ್ ತ್ರಿಕೋನ – ಏಪ್ರಿಲ್ ಒಂದಕ್ಕೆ ಬಿಡುಗಡೆ

Social Share :

ಮನುಷ್ಯನಲ್ಲಿ ಮನೆ ಮಾಡಿರುವ ರಾಗ, ದ್ವೇಷಾ, ಅಸೂಯೆಗಳನ್ನು ಗೆಲ್ಲುವುದು ಹೇಗೆ.. ಗೆದ್ದು ನಿಜವಾದ ಮನುಷ್ಯರಾಗುವುದು ಹೇಗೆ.. ಇದರ ಸುತ್ತ ಬೆಳಕು ಚೆಲ್ಲುವುದೇ.. ತ್ರಿಕೋನ.

ಕಳೆದ ಐದಾರು ವರ್ಷಗಳ ಹಿಂದೆ ಒಂದೇ ಜಾಗದಲ್ಲಿ ನಡೆಯುವ ‘143’ ಎಂಬ ಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಚಂದ್ರಕಾಂತ್ ಎಂಬ ಯುವಕ ಈಗ ಮನುಷ್ಯ ಬದುಕಿನ ಸಾರ್ಥಕತೆ ಕುರಿತು ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಥೆಯನ್ನು ಚಿತ್ರದ ನಿರ್ಮಾಪಕ ರಾಜಶೇಖರ್ ಮಾಡಿದ್ದಾರೆ. ಮತ್ತು ಸ್ವತಃ ನಿರ್ದೇಶಕರಾಗಿರುವ ಅವರು ನಿರ್ದೇಶನವನ್ನು ತ್ಯಾಗ ಮಾಡಿದ್ದಾರೆ ಅರ್ಥಾತ್ ಚಂದ್ರಕಾಂತ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ತ್ರಿಕೋನ ಚಿತ್ರದ ಬಿಡುಗಡೆ ಏಪ್ರಿಲ್ ಒಂದಕ್ಕೆ. ಹಾಗಾಗಿ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಚಿತ್ರದ ವಿವರಗಳನ್ನು ನೀಡಿತು ತಂಡ. ಮುಖ್ಯವಾಗಿ ನಟ ಸುಚ್ಚೇಂದ್ರಪ್ರಸಾದ್ ಚಿತ್ರದ ಪ್ರಚಾರ ರಾಯಭಾರಿ ಎಂದು ಹೇಳಿದರು ನಿರ್ಮಾಪಕರು.

ಜೀವನ ಅಂದರೆ ಓಟ. ಆ ಓಟದ ನಡುವೆ ಮನುಷ್ಯನೊಳಗಿನ ರಾಗ ದ್ವೇಷಾ ಅಸೂಯೆಗಳು ಕಾಣುತ್ತವೆ. ಇವುಗಳನ್ನು ನಿಯಂತ್ರಿಸಲು ವಿಶೇಷ ಮನಸ್ಸು ಬೇಕಾಗುತ್ತದೆ ಚಿತ್ರದಲ್ಲಿ ಮೂರು ‌ಆಯಾಮಗಳು ಇವುಗಳ ಬಗ್ಗೆ ಬೆಳಕು ಚೆಲ್ಲುತ್ತವೆ ಎಂಬ ವಿವರ ಕೊಟ್ಟರು ನಿರ್ದೇಶಕ ಚಂದ್ರಕಾಂತ್.

ಒಬ್ಬ ನಿರ್ಮಾಪಕ ಹಣ ಹೂಡಬಹುದು; ಆದರೆ ನಿರ್ಮಾಪಕನಾಗಿ ಪ್ರಚಾರ ಮಾಡಿ ಚಿತ್ರವನ್ನು ಗೆಲ್ಲಿಸುವುದು ಕಷ್ಟವಾಗುತ್ತದೆ ಎಂದರು ರಾಜ್ ಶೇಖರ್. ಈ ಚಿತ್ರವನ್ನು ಗೆಲ್ಲಿಸಲೇ ಬೇಕಾಗಿದೆ. ಅದಕ್ಕಾಗಿ ಹೆಚ್ಚು ಪ್ರಚಾರವನ್ನು ಮಾಡಲಿದ್ದೇವೆ; ಜೊತೆಗೆ ಸುಚ್ಚೇಂದ್ರಪ್ರಸಾದ್ ನಮ್ಮ ಪ್ರಚಾರದ ರಾಯಭಾರಿಯೂ ಆಗಿರುತ್ತಾರೆ ಎಂಬ ವಿವರವನ್ನೂ ಕೊಟ್ಟರು ನಿರ್ಮಾಪಕರು.

ಹಿರಿಯ ನಟ ಸುರೇಶ್ ಹೆಬ್ಳೀಕರ್ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರ ನಿರ್ವಹಿಸಿದ್ದಾರೆ. ಸುಚ್ಚೇಂದ್ರಪ್ರಸಾದ್ ಚಿತ್ರದ ಒಂದು ಭಾಗವೇ ಆಗಿದ್ದಾರೆ. ಹೊಸ ನಟರಾದ ರಾಜ್ ವೀರ್ ಹಾಗೂ ಮಾಲತೇಶ್ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ಅಂದ ಹಾಗೆ ಹೆಸರಾಂತ ವಿತರಕ ಭಾಷಾ ಅವರು ತಮ್ಮ ಬಹರ್ ಫಿಲ್ಸಂ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರ ಭಾರತೀಯ ಮಟ್ಟದಲ್ಲಿ ಬಿಡುಗಡೆ ಕಾಣುತ್ತದೆ ಎಂದರು ಭಾಷಾ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *