ಅದು ಅತಿ ಅಪರೂಪದ ಸಮಾಗಮವಾಗಿತ್ತು. ಏಕೆಂದರೆ ಕೊವಿಡ್ ಮಹಾಮಾರಿಯ ದೆಶೆಯಿಂದ ಒಂದು ಸಮಾರಂಭ ನಡೆಯುವುದು ಮತ್ತು ಅದರಲ್ಲಿ ಸ್ಟಾರ್ ನಟರು ಬೆರೆಯುವುದು ಅಪರೂಪವಾಗಿತ್ತು..
ಆದರೆ ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಲವ್ಲಿಸ್ಟಾರ್ ಪ್ರೇಮ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್ ಹೀಗೆ ಸ್ಟಾರ್ ಗಳ ಸಂಗಮವೇ ಆಗಿತ್ತು. ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿರುವ ರಂಗಾಯಣ ರಘು ಕೂಡ ಜೊತೆಗೆ ಸೇರಿಕೊಂಡಿದ್ದರು.
ಮೊದಲಿಗರ ಚಿತ್ರದ ಟೀಸರ್ ನೋಡಿ ಎಲ್ಲರೂ ಬೆರಗಾದರು. ಅದರ ಖಡಕ್ ಮತ್ತು ತಾಜಾತನಕ್ಕೆ ಕೆಲವರು ಬೆಚ್ಚಿ ಬಿದ್ದರು. ತಡವಾಗಿಯಾದರೂ ಶ್ರೀನಗರ ಕಿಟ್ಟಿಗೆ ಒಳ್ಳೆ ಸಮಯ ಬರುತ್ತಿದೆ ಎಂದರು. ಆದರೆ ಮಾತನಾಡುವಾಗ ಯಾರು ಸೀನಿಯರ್ ಎಂಬ ಚರ್ಚೆಯನ್ನು ಹುಟ್ಟುಹಾಕಿ ನಕ್ಕರು ಮತ್ತು ಎಲ್ಲರನ್ನೂ ನಗಿಸಿದರು ಈ ಸ್ಟಾರ್ ನಟರು..
ಸೂರ ಚಿತ್ರದ ನಿರ್ದೇಶಕ. ಗೌಳಿ ಎಂಬುದು ಮನೆತನದ ಹೆಸರು. ಇಲ್ಲಿ ಹೋರಾಟದ ಕಥೆಯಿದೆ. ಚಿತ್ರದ ಮೇಕಿಂಗ್ ಸಮಯದಲ್ಲಿ ಎಲ್ಲರ ಶ್ರಮವಿದೆ ಎಂದು ವರ್ಣಿಸಿದರು ನಿರ್ದೇಶಕರು. ರಘು ಸಿಗಂ ನಿರ್ಮಾಪಕ.
ಮುಖ್ಯ ಪಾತ್ರದಲ್ಲಿರುವ ಪಾವನಗೌಡ, ಪುಟಾಣಿ ನಮನ, ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ, ರಂಗಾಯಣ ರಘು, ನಟ ಗೋಪಾಲಕೃಷ್ಣ ತಮ್ಮ ಪಾತ್ರ ಮತ್ತು ಶ್ರಮದ ವಿವರಗಳನ್ನು ಕೊಟ್ಟರು.
ಶ್ರೀನಗರ ಕಿಟ್ಟಿ ಒಂದು ಶ್ರಮ ಮತ್ತು ಪ್ರಯತ್ನಕ್ಕೆ ಯಾವೊತ್ತು ಬೆಲೆ ಇದೆ ಎಂಬುದಕ್ಕೆ ಇಂದಿನ ವೇದಿಕೆ ಸಾಕ್ಷಿಯಾಗಿದೆ. ಗೆಳೆಯರು ಬಂದು ಹಾರೈಸಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸಿದರು.
ಚಿತ್ರಕ್ಕೆ ಇನ್ನೂ ಕೆಲ ದಿನಗಳ ಕಾಲದ ಚಿತ್ರೀಕರಣ ಬಾಕಿ ಇದೆ. ಸಂದೀಪ್ ಬಲ್ಲೂರಿ ಚಿತ್ರದ ಛಾಯಾಗ್ರಾಹಕ. ಅವರ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು..