#ಜ್ವರದಿಂದಹೊದ್ದುಮಲಗಿದೆ_ಕರ್ನಾಟಕ.
#ಜನ_ಬುದ್ದಿವಂತರಾಗಿದ್ದಾರೆ.
#ಖಾಸಗೀಆಸ್ಪತ್ರೆಗಳೆಲ್ಲಭಣ_ಭಣ…
ಕೊವೀಡ್ಮೂರನೇ ಅಲೆಯ ವಿಶೇಷ ಬುಲಿಟಿನ್
ದಕ್ಷಿಣ ದ್ರುವದೀ ಉತ್ತರ ದ್ರುವಕೂ ಚುಂಬಕ ಗಾಳಿಯೂ ಬೀಸುತ್ತಿದೆ……
ಇದು ಕೊವೀಡ್ ಮೂರನೇ ಜ್ವರದ ಅಲೆ ಈ ಅಲೆಗೆ ಇಡೀ ಕರ್ನಾಟಕ ಹೊದ್ದು ಮಲಗಿದೆ
ಮನೆಯಲ್ಲಿ ಎರಡು ಮೂರು ನಾಲ್ಕು….ಹೀಗೆ
ಜನರೆಲ್ಲ ಶೀತ,ಜ್ವರ,ಗಂಟಲು,ನೋವು,ಕೆಮ್ಮು ಅಂತ್ಹೇಲ್ಲ ಒಂದೊಂದು ಕೋಣೆ ಸೇರಿದ್ದಾರೆ. ಎಲ್ಲರ ಮನೆಗಳೂ ಈಗ #ಡೋಲಾಯಣ….ಸಣ್ಣ ಸಣ್ಣ ಕ್ಲಿನಿಕ್ ಗಳ ತುಂಬೆಲ್ಲ #ಜನವೋ ಜನ……
ಒಂದು ಮಾಹಿತಿ ಪ್ರಕಾರ ಕರ್ನಾಟಕದ ಶೇ 92-93 ರಷ್ಡು ಜನರು ಈ ಮೂರನೇ ಅಲೆಯ ಕೊವೀಡ್ ಲಕ್ಷಣಗಳಿಂದ ಪೀಡಿತರಾಗಿದ್ದಾರೆ. ಆದರೆ ದೈರ್ಯವಾಗಿ ಸಿಕ್ಕ ಸಿಕ್ಕ ಮಾತ್ರೆ ನುಂಗುತಾ ಬಿಸಿನೀರು ಕುಡಿಯುತಾ, ಇದ್ದುದ್ದರಲ್ಲಿ ಒಳ್ಳೆ ಊಟ ಮಾಡಲು ಪ್ರಯತ್ನಿಸುತ್ತಾ ಅದರಲ್ಲೆ ನೆಮ್ಮದಿ ಕಂಡುಕೊಳ್ಳಲು ಬಯಸುತ್ತಿದ್ದಾರೆ….ಅಷ್ಟರ ಮಟ್ಟಿಗೆ ಜನ ಬುದ್ದಿವಂತರಾಗಿದ್ದಾರೆ.
ಆದರೆ ಈ #ಮೂರನೇ ಅಲೆಯಲ್ಲಿ ಲಕ್ಷಾಂತರ ಕೇಸುಗಳು ಬರುತ್ತವೆ ಎಂದು ಬಕಪಕ್ಷಿಗಳಂತೆ ತಮ್ಮ ಅಂಗಡಿಗಳನ್ನು #ಓಪನ್ ಮಾಡಿಕೊಂಡು ಕುಳಿತಿರುವ #ಖಾಸಗೀ_ಆಸ್ಪತ್ರೆಗಳಿಗೆ ಮಾತ್ರ ತೀವ್ರ #ನಿರಾಶೆ ಯಾಗುತ್ತಿದೆ.ಯಾಕೆಂದರೆ ಜನರ ಅವರ ಕಡೆ #ತಲೆಹಾಕಿಕೂಡ ಮಲಗುತ್ತಿಲ್ಲ.ಖಾಸಗೀ ಆಸ್ಪತ್ರೆಗಳು ಪಾಪ ಸರ್ಕಾರದ ಮೇಲೆ ಒತ್ತಡ ತಂದು ತಮ್ಮ ದಿನದ ಬಾಡಿಗೆ ಮತ್ತು ಚಿಕಿತ್ಸೆ ದರವನ್ನು ದಿವೊಂದಕ್ಕೆ ರೂ 15 ಸಾವಿರದಿಂದ 25 ಸಾವಿರ ಎಂದು ನಿಗದಿಪಡಿಸಿ #ಜಾಹೀರಾತು ಕೂಡ ನೀಡಿದ್ದರು.ಸಾಲದಬಂತೆ ಹಳೆಯ #ಲಸಿಕೆಗಳನ್ನು ಪ್ರಿಡ್ಜ ಗಳಲ್ಲಿ #ಜತನದಿಂದ ಕಾಪಾಡಿಕೊಂಡಿದ್ದರು ಮತ್ತು #ಆಕ್ದಿಜನ್ ಸಿಲೆಂಡರ್ ಗಳನ್ನು #ಯುದ್ದೋಪಾಧಿಗಳಲ್ಲಿ ಸನ್ನದ್ದವಾಗಿಟ್ಟುಕೊಂಡಿದ್ದರು.ಆದರೆ ಈ ಮೂರನೇ ಅಲೆ ಅವರಿಗೆ #ತೀವ್ರ ಸಂಕಷ್ಡ ತಂದಿದೆ.
ಇನ್ನೂ ಇಂತಹವರ ನೆರವಿಗಾಗಿ ಅವರಿಗೆ ಕೋಟ್ಯಾಂತರ ರೂಪಾಯಿ ಲಾಭಮಾಡಿಕೊಡಲು ನಿಂತಿದ್ದ ಸರ್ಕಾರದ ಮಂತ್ರಿ ಮಹೋದಯರಿಗೆ,ಶಾಸಕರಿಗೆಮತ್ತು ಐಎಎಸ್ ಅಧಿಕಾರಿಗಳಿಗೂ ಜನರ ಈ ವರ್ತನೆ ತೀವ್ರನಿರಾಸೆ ಮತ್ತು ನಷ್ಟ ಉಂಟುಮಾಡಿದೆ.
ಇಷ್ಟಾದರೂ ರಾಜ್ಯದ ಲಕ್ಷಾಂತರ ಜನರು ಕೊವೀಡ್ ಲಕ್ಷಣಗಳಿಂದ ಭಾಧಿತರಾಗಿದ್ದರೂ #ಟೆಸ್ಟ್ ಗಳನ್ನು ಮಾಡಿಸಿಕೊಳ್ಳುತ್ತಿಲ್ಲ. ಬದಲಾಗಿ ತಮ್ಮ ಗೆಳೆಯರು ಸುತ್ತಮುತ್ತಲಿನ ಕಡಿಮೆ ದರದ ವೈದ್ಯರಿಗೆ ತೋರಿಸಿ ಇಲ್ಲವೇ ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರವಾಗುವ ಜನಪರ ವೈಧ್ಯರ ಉಪನ್ಯಾಸ ಕೇಳಿ ಮೆಡಿಕಲ್ ಶಾಫ್ ಗಳಲ್ಲಿ ಸಿಗುವ ಹತ್ತಿಪ್ಪತ್ತು ರೂಗಳಿಂದ ಮಾತ್ರೆ ಔಷಧಿಗಳಿಂದ ಗುಣವಾಗುತ್ತಿದ್ದಾರೆ…..
ಜನ ಬುದ್ದಿವಂತರಾದರೆ ಶೋಷಕರ ಆಟ ಏನು ನಡೆಯದು
ಇದು #ಕೊವೀಡ್ಮೂರನೇಅಲೆಯವಿಶೇಷಬುಲಿಟಿನ್
– ಆರ್ ಮಮತಾ.