ದೇಶಭಕ್ತಿ ಬಿಂಬಿಸುವ ಚಿತ್ರಗಳು ವಿರಳವಾಗಿರುವ ಇಂದಿನ ದಿನಗಳಲ್ಲಿ ಒಂದು ಚಿತ್ರ ಗಮನ ಸೆಳೆಯುತ್ತಿದೆ. ಜೊತೆಗೆ ವೀಕೆಂಡ್ ಕರ್ಫ್ಯೂ ಇದ್ದರೂ ಎದೆಗುಂದದೆ ಬಿಡುಗಡೆ ಕಂಡಿದೆ..
ಅದೇ ‘ನಮ್ಮ ಭಾರತ’. ಇದು ರಾಷ್ಟ್ರ ಧ್ವಜದ ಮಹತ್ವ ಸಾರುವ ಚಿತ್ರ. ‘ಧರ್ಮಸೆರೆ’ ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರಿಗೆ ಸಹಾಯಕರಾಗಿದ್ದ ಕುಮಾರಸ್ವಾಮಿ ಅವರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಈ ಹಿಂದೆ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಸಹಾಯಕರಾಗಿ ದುಡಿದ ಅನುಭವ ಕೂಡ ಅವರಿಗಿದೆ.
ನಮ್ಮ ಭಾರತ ದೇಶಭಕ್ತಿ ಪ್ರಧಾನವಾದರೂ ಸಂಪೂರ್ಣ ಮಕ್ಕಳ ಚಿತ್ರವಾಗಿದೆ. ಮಂಡ್ಯ ನಾಗರಾಜ್ ಅವರ ನೀಲನೀಲಕಂಠ ಬ್ಯಾನರ್ ನಡಿ ನಿರ್ಮಾಣವಾಗಿರುವ ಚಿತ್ರದಲ್ಲಿ ವಾಗೀಶ್ ಹಾಗೂ ಮಾಸ್ಟರ್ ಪ್ರಜ್ವಲ್ ಪ್ರಮುಖ ಪಾತ್ರದಲ್ಲಿದ್ದಾರೆ.
ರವಿಶಂಕರ್ ಮಿರ್ಲೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಸಂಜೀವರೆಡ್ಡಿ ಸಂಕಲನ ಚಿತ್ರಕ್ಕಿದೆ. ಕುಮಾರ್ ಈಶ್ವರ್ ಸಂಗೀತ ನೀಡಿದ್ದಾರೆ.
ಕೊರೊನಾ ನಡೆಯುವೆಯೂ ಧೈರ್ಯದಿಂದ ಚಿತ್ರಮಂದಿರಕ್ಕೆ ಬಂದಿರುವ ಚಿತ್ರವನ್ನು ಕನ್ನಡದ ಪ್ರೇಕ್ಷಕ ಕೈ ಹಿಡಿಯಬೇಕಾಗಿದೆ..