ಕನ್ನಡದ ಸಾಹಸಿ ಕಲಾವಿದ, ಅಭಿಮಾನಿಗಳ ಸೂಪರ್ ಸ್ಟಾರ್ ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶನ ಮಾಡಿದರುವ ಸಲಗ ಚಿತ್ರ ಪ್ರಚಾರದಲ್ಲಿಯೂ ಮುಂದಿದೆ..
ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ ಹಾಡುಗಳು ಯುವಜನರ ಬಾಯಿಯ ಚಾಕೋಲೇಟ್ ಆಗಿವೆ. ಅದರಲ್ಲಿಯೂ ‘ಬೇಟೆಗೆಲ್ಲ ಟಾಪು ಸಲಗ’ ಟಾಪ್ ಎನಿಸುವಂತಹ ಪ್ರಚಾರವನ್ನೇ ಕೊಟ್ಟಿದೆ.
ಅಲ್ಲದೆ ಚಿತ್ರದ ಬಿಡುಗಡೆಪೂರ್ವ ಅದ್ದೂರಿ ಸಮಾರಂಭ ವರ್ಣರಂಜಿತ ಮಾತ್ರವಲ್ಲದೆ ಕನ್ನಡದ ಮುಂಚೂಣಿಯ ಸ್ಟಾರ್ ಗಳ ಮನ ಗೆದ್ದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಧನಜಯ್ಯ ಹಾಗೂ ರಾಜಕೀಯ ಗಣ್ಯರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಾದವರು ಚಿತ್ರವನ್ನು ಹಾಡಿ ಹೊಗಳಿದ್ದಾರೆ.
ಇದಲ್ಲದೆ ಶಿವಣ್ಣ ಮತ್ತು ಪುನೀತ್ ಸಮಾರಂಭದಲ್ಲಿ ಕಾಣಿಸಿಕೊಂಡ ಬಗೆಯೇ ಅದ್ಭುತ.. ಅವರಿಬ್ಬರ ಒಡನಾಡ ಪ್ರತಿಯೊಬ್ಬರ ಮನಸ್ಸಿನಲ್ಲಿ ಖುಷಿಯ ಆವೇಗ ಹೆಚ್ಚುವಂತೆ ಮಾಡಿತು. ಅದೇ ವೇದಿಕೆಯಲ್ಲಿ ತಾವು ಶಿವಣ್ಣ ಅವರಿಗೆ ಆಕ್ಷನ್ ಕಟ್ ಹೇಳುವುದಾಗಿ ಪುನೀತ್ ರಾಜ್ ಕುಮಾರ್ ಪ್ರಕಟಿಸಿದರು.
ದುನಿಯಾ ವಿಜಯ್ ಅಪ್ರತಿಮ ಕಲಾವಿದ ಮತ್ತು ಅಪರೂಪದ ಸಾಹಸ ಕಲಾವಿದ. ಅವರ ನಿರ್ದೇಶನವೂ ಅಪ್ರತಿಮವಾಗಿರುತ್ತದೆ ಎಂದು ಶಿವಣ್ಷ ಹೊಗಳಿದ್ದು ಚಿತ್ರದ ಪಾಸಿಟಿವ್ ಅಲೆಗಳು ಹೆಚ್ಚಾಗು ಕಾರಣವಾಗಿತ್ತು.
ಅದೊಂದು ಮನಮೋಹಕ ಸಮಾರಂಭ ಕಲಾವಿದರು ಒಬ್ಬರಿಗೊಬ್ಬರು ನಾವಿದ್ದೇವೆ ಎಂದು ಹೇಳಿಕೊಂಡ ಸಮಾರಂಭವಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಚಿತ್ರದ ಯಶಸ್ಸನ್ನು ಕೋರಿದರು.
ಇದೇ ವಾರ ಬಿಡುಗಡೆ ಕಾಣುತ್ತಿರುವ ‘ಸಲಗ’ ಚಿತ್ರಕ್ಕೆ ಬಿಡುಗಡೆ ಪೂರ್ವದಲ್ಲಿ ಅಪಾರ ಮೆಚ್ಚುಗೆ ಸಿಕ್ಕಿದೆ ಮಾತ್ರವಲ್ಲ; ಚಿತ್ರವು ಪ್ರಚಾರದಲ್ಲಿ ದಿಟ್ಟಹೆಜ್ಜೆ ಇಟ್ಟಿದೆ. ‘ಟಾಪು ಸಲಗ’ದ ಆಶಯ ಅಭಿಮಾನಿಗಳನ್ನು ತಲುಪಿದೆ ಎನ್ನಬಹುದು. ಹಾಗಾಗಿ ಇದೇ ವಾರ ಚಿತ್ರ ಬಿಡುಗಡೆಯಾಗುವುದನ್ನು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ..