ರಾಜ್ಯದ ಉತ್ತರ ಕರ್ನಾಟಕ ಭಾಗವನ್ನು ಗಂಡು ಮೆಟ್ಟಿದ ನಾಡು ಎಂದು ಕರೆಯುವುದುಂಟು. ಆದರೆ ಮೊದಲಿನಿಂದಲೂ ಆ ಭಾಗ ಬಯಲುಸೀಮೆ ಎಂದೇ ಕರೆಸಿಕೊಳ್ಳುತ್ತದೆ. ಭಾಷೆ, ಆಹಾರ, ಸಂಸ್ಕೃತಿ ಎಲ್ಲವೂ ವಿಶೇಷ ಹಾಗೂ ವಿಭಿನ್ನವೆನಿಸುವ ಈ ಸ್ಥಳದ ನೆನಪು ಈಗ ಏಕೆಂದರೆ ಚಿತ್ರವೊಂದಕ್ಕೆ ‘ಬಯಲುಸೀಮೆ’ ಎಂದೇ ಹೆಸರಿಡಲಾಗಿದೆ. ಅದರ ವಿಶೇಷತೆಗಳನ್ನು ತಿಳಿಸಿಕೊಡುವ ಸಲುವಾಗಿಯೇ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಬಯಲುಸೀಮೆ ಎಂದರೆ ಅದೊಂದು ವಿಭಿನ್ನ ಸಂಸ್ಕೃತಿ. ಒಂದೆರಡು ದಶಕಗಳ ಹಿಂದೆ ಇಲ್ಲಿ ನೇಕಾರಿಕೆ ಎಂಬುದು ಪ್ರಸಿದ್ಧವಾಗಿತ್ತು. ಆ ನಂತರ ಇಲ್ಲಿ ರಾಜಕೀಯ, ಅಪರಾಧ ಎಲ್ಲವೂ ಬೇರೆ ಬೇರೆ ಆಕಾರಗಳನ್ನು ಪಡೆದವು. ಬಯಲುಸೀಮೆಯ ಸಂಸ್ಕೃತಿಯನ್ನು ಪರಿಚಯಿಸುವುದೇ ಚಿತ್ರ ಮುಖ್ಯ ಉದ್ದೇಶವಾಗಿರುತ್ತದೆ ಎಂಬ ಮಾಹಿತಿಗಳನ್ನು ನೀಡಿದವರು ಚಿತ್ರದ ಮುಖ್ಯ ಪಾತ್ರದಲ್ಲಿ ಕೂಡ ನಟಿಸಿರುವ ನಿರ್ದೇಶಕ ವರುಣ್ ಕಟ್ಟಿಮುನಿ.
ಹೆಚ್ಚಿನ ಚಿತ್ರೀಕರಣ ಗಜೇಂದ್ರಗಡದಲ್ಲಿ ನಡೆದಿದೆ. ಇಡೀ ಸಂಸ್ಕೃತಿ ಕಣ್ಣ ಮುಂದೆ ಬರುವಂತೆ ಕಟ್ಟಿ ಕೊಡುವುದು ನಮ್ಮ ಆಶಯ.ಇಲ್ಲಿ ಆರ್ಮುಗಂ ಖ್ಯಾತಿಯ ರವಿಶಂಕರ್ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದು; ಅವರ ಪ್ರೋತ್ಸಾಹವೇ ನಮಗೆ ಅತ್ಯಂತ ಸ್ಫೂರ್ತಿಯಾಗಿತ್ತು ಎಂದು ಹೇಳುತ್ತಾ ಹೋದರು ನಿರ್ದೇಶಕರು.
ಚಿತ್ರದಲ್ಲಿ ಅತಿರಥ ಮಹಾರಥರ ಸಂಗಮವೇ ಇದೆ. ಮುಖ್ಯವಾಗಿ ರಂಗಭೂಮಿ ಹಿನ್ನೆಲೆಯ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿರುವುದು ವಿಶೇಷವಾಗಿದೆ. ಎಂದರು.
ಕಾಮಿಡಿ ಕಿಲಾಡಿಗಳು ಖ್ಯಾತಿಯ ದಾಸಪ್ಪ ವಿಶೇಷ ಪಾತ್ರವನ್ನು ನಿರ್ವಹಿಸಿರುವುದಲ್ಲದೆ ಚಿತ್ರದ ನಿರ್ಮಾಣಕ್ಕೆ ಬಹಳವೇ ಸಹಾಯ ಮಾಡಿದ್ದಾರೆ ಎಂಬ ಮಾಹಿತಿಗಳು ಬಂದವು.
ಅರ್ಚನಾ ಕೊಟ್ಟಿಗೆ ಮಹಿಳಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರಂಗಭೂಮಿ ಕಲಾವಿದೆ ಲಕ್ಷ್ಮಿ ಕಬೇರಳ್ಳಿ, ಭವಾನಿ ಪ್ರಕಾಶ್, ಯಶ್ ಶೆಟ್ಟಿ, ರಮೇಶ್ ಕಲ್ನವರ್ ನಟಿಸಿದ್ದಾರೆ. ಮಾನಸ ಹೊಳ್ಳ ಚಿತ್ರದ
ಸಂಗೀತ ನಿರ್ದೇಶಕಿ. ಮೊದಲು ಈ ಜಾನರ್ ಒಳಗೆ ಹೋಗುವವರೆಗೂ ಕಷ್ಟವಿತ್ತು ನಂತರ ಎಲ್ಲವೂ ಸುಲಭವಾಯಿತು ಎಂದರು.
ಶ್ರೀಧರ್ ಬಿದರಳ್ಳಿ ನಿರ್ಮಾಪಕ
ನೇಕಾರ ಕುಟುಂಬ ಅದಕ್ಕಾಗಿ ಸಿನಿಮಾ ಮಾಡಿರುವೆ ಎಂದರು
ಚಿತ್ರದ ಮುಖ್ಯ ಆಕರ್ಷಣೆ ರವಿಶಂಕರ್. ಇದು ಕಡಕ್ ಆಗಿರುವ ಪಾತ್ರವೇ.. ನಾನು ಹೊಸಬರ ಜೊತೆ ಹೆಚ್ಚು ಸಿನಿಮಾ ಮಾಡಿದವನು. ಈ ಚಿತ್ರದಲ್ಲಿ ರೆಗ್ಯುಲರ್ ಕಮರ್ಷಾಲಿಟಿ ಕಡಿಮೆ. ಆದರೆ ರಿಯಾಲಿಟಿ ಹೆಚ್ಚಿದೆ ಎಂದರು ರವಿಶಂಕರ್.