ಪತ್ರಕರ್ತ ಅಫ್ಜಲ್ ಈಗಾಗಲೇ ಚಿತ್ರರಂಗದಲ್ಲಿಯೂ ಗಟ್ಟಿಯಾಗಿ ಗುರುತಿಸಿಕೊಂಡವರು. ನಿರ್ದೇಶನ ಮಾಡುವ ಹಂಬಲದಲ್ಲಿ ಹುಡುಕಾಟ ನಡೆಸಿದವರು. ಇದೀಗ ಅವರ ಎರಡನೇ ಚಿತ್ರ ಒಂದು ಹಂತದ ಚಿತ್ರೀಕರಣವನ್ನೂ ಮುಗಿಸಿದೆ.
ಆ ಚಿತ್ರದ ಹೆಸರು ‘ಸುಕನ್ಯಾ ದ್ವೀಪ’. ಹೆಸರಿನಂತೆ ಇದು ಇದು ದ್ವೀಪದ ಕಥೆಯಲ್ಲ; ಮುದ್ದಾದ ಲವ್ ಸ್ಟೋರಿ ಒಂದು ಜಾಗದಲ್ಲಿ ನಡೆಯುತ್ತದೆ. ಪ್ರೇಮ ಮತ್ತು ಅದರ ಕವಲುಗಳು ಪ್ರೇಕ್ಷಕನಿಗೆ ರಂಜನೆ ನೀಡಬೇಕು ಆ ರೀತಿಯಲ್ಲಿ ಚಿತ್ರಕಥೆ ಮಾಡಿಕೊಳ್ಳಲಾಗಿದೆ ಎಂಬ ವಿವರ ಬಂತು ನಿರ್ದೇಶಕರಿಂದ.
ಜೊತೆಗೆ ಇಲ್ಲಿ ಕುಟುಂಬದ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಕ್ಕ ತಂಗಿಯರ ನಡುವೆ ಕಥೆ ಇರುತ್ತದೆ. ಸುಮಾರು ಚಿತ್ರಗಳಲ್ಲಿ ಅಭಿನಯ ಮಾಡಿರುವ ನನಗೆ ರಾಜಪ್ರಭು ಅವರಿಂದ ಎರಡನೇ ಚಿತ್ರವನ್ನು ನಿರ್ದೇಶನದ ಮಾಡುವ ಅವಕಾಶವೂ ದೊರೆಯಿತು ಎಂದು ಹೇಳಿಕೊಂಡರು ಎಂ.ಡಿ.ಅಫ್ಜಲ್.
ರಾಜ್ ಪ್ರಭು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಬೆಂಗಳೂರು ಸುತ್ತ ಮುತ್ತ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಮುಂದೆ ಹಾಸನ, ಬೇಲೂರು ಹಾಗೂ ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಈ ಚಿತ್ರಕ್ಕೆ ನಿರ್ದೇಶಕ ಗೆಳೆಯ ಆಲ್ವಿನ್ ಉತ್ತಮ ಸಂಭಾಷಣೆ ಬರೆದಿದ್ದು, ಅವು ಖಂಡಿತಾ ಪ್ರೇಕ್ಷಕರಿಗೆ ಕಚಗುಳಿ ಇಡಬಲ್ಲವು ಎಂಬ ಮಾಹಿತಿಯನ್ನು ನೀಡುತ್ತಾ ಹೋದರು ನಿರ್ದೇಶಕರು.
ಚಿತ್ರದ ಮೇಕಿಂಗೂ ವಿಡಿಯೋ ಪ್ರದರ್ಶನದ ಸಂದರ್ಭದಲ್ಲಿ ಚಿತ್ರತಂಡ ಅತ್ಯಂತ ಲವಲವಿಕೆಯಿಂದ ಪಾಲ್ಗೊಂಡಿತ್ತು. ಈ ಚಿತ್ರದ ಕಥೆಗೆ ಸ್ಫೂರ್ತಿಯಾದವರು ಹೆಸರಾಂತ ಹಾಸ್ಯ ನಟ ದಿವಂಗತ ವಿವೇಕ್. ಅವರಿಂದ ಪಡೆದ ಸ್ಫೂರ್ತಿಯಲ್ಲೇ ಕಥೆ ಮಾಡಿಕೊಂಡಿರುವುದಾಗಿ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ರಾಜ್ ಪ್ರಭು ವಿವರ ಕೊಟ್ಟರು.
ಈ ಚಿತ್ರದ ಎರಡು ಲೈನ್ ಕಥೆ ಕೇಳಿಯೇ ನಾನು ನಿರ್ಮಾಣ ಮಾಡುವ ಆಶಯಗಳನ್ನು ಮೂಡಿಸಿ ಕೊಡೆ ಎಂದವರು ನಿರ್ಮಾಪಕ ವೀರಬಾಹು. ಉತ್ತಮ ತಂಡ ಸಿಕ್ಕಿದೆ. ಮುಖ್ಯವಾಗಿ ಇದು ಮಚ್ಚು ಲಾಂಗ್ ಇಲ್ಲದ ಪ್ರಶಾಂತವಾದ ಕಥೆ. ಅದೇ ನನಗೆ ಇಷ್ಟವಾಯಿತು ಎಂದರು.
ಕೌಶಿಕ್ ಹರ್ಷ ಸಂಗೀತ ನಿರ್ದೇಶಕ. ಚಿತ್ರದಲ್ಲಿ ಐದು ಹಾಡುಗಳಿವೆ ಎಂಬ ಮಾಹಿತಿಬಂತು. ಸಚ್ಚಿನ್ ಪುರೋಹಿತ್, ರವಿ ಮುಖ್ಯ ಪಾತ್ರದಲ್ಲಿದ್ದಾರೆ. ಶ್ರೇಯ ವಸಂತ್, ಅಕ್ಷಿತಾ ನಾಗರಾಜ್ ಹಾಗೂ ಚುಂಬಿತ ಎಂಬ ಮೂವರು ನಟಿಯರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಂದ ಹಾಗೆ ವಿಘ್ನೇಶ್ ನಾಗೇಂದ್ರ ಚಿತ್ರದ ಛಾಯಾಗ್ರಾಹಕ. ಹಿರಿಯನಟ ಎಂ.ಡಿ.ಕೌಶಿಕ ಕುಟುಂಬದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಗಳೂ ಬಂದವು.