ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನು ಸ್ವಲ್ಪ ದೂರ ಇರುವಂತೆಯೇ ವಿಶಾಲ ನೆಲೆಯಲ್ಲಿ ಕಾಣ ಸಿಗುವ ಪ್ರಜ್ವಲ್ ರಾಜ್ ಸ್ಟುಡಿಯೋ ಆವರಣದಲ್ಲಿ ಕಂಗೊಳಿಸುತ್ತಿರುವ ಸೆಟ್ ಯಾವ ಅದ್ದೂರಿ ಸೆಟ್ ಗೂ ಕಡಿಮೆ ಇರಲಿಲ್ಲ.
ಬೆಳಗಾವಿ ಮೂಲದ ಕುಲಕರ್ಣಿ ಎಂಬುವರಿಂದ ತಯಾರಾದ ಆ ಅರಮನೆ ಸೆಟ್ ಮುಖ್ಯವಾಗಿ ನವರಸ ನಾಯಕ ಜಗ್ಗೇಶ್ ಅವರ ಅರಮನೆಯ ಆಸ್ಥಾನ. ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಅವರು ಹ್ಯಾಟ್ರಿಕ್ ಕನಸಿನೊಂದಿಗೆ ಮಾಡುತ್ತಿರುವ ಚಿತ್ರವೇ ‘ರಂಗ ನಾಯಕ’ ಕಳೆದ ಗುರುವಾರ ಚಿತ್ರದ ಆಶಯಗಳನ್ನು ಹಂಚಿಕೊಳ್ಳಲೆಂದೇ.. ಮಾಧ್ಯಮಗಳನ್ನು ಸೆಟ್ ಗೆ ಆಹ್ವಾನಿಸಲಾಗಿತ್ತು.
ನವರಸ ನಾಯಕ ಜಗ್ಗೇಶ್ ಅವರು ಮಾತನಾಡುವಾಗ ಭಾವುಕರಾಗಿದ್ದರು. ಮೊದಲಿಗೆ ಅವರು ಕೊರೊನಾ ಮಹಾಮಾರಿಯಿಂದ ಕಲಾವಿದರು ಪಡುವ ಕಷ್ಟಗಳನ್ನು ನೆನಪು ಮಾಡಿಕೊಂಡರು. ಆರಂಭಿಕ ದಿನಗಳಲ್ಲಿ ನಾನು ಕಷ್ಟ ಪಡುತ್ತಿದ್ದೆ. ರಣಧೀರ ಚಿತ್ರದ ಶೂಟಿಂಗ್ ವೇಳೆಯಲ್ಲಿ ಹಬ್ಬ ಮಾಡಲು ಹಣ ಬೇಕು ಇನ್ನೂರು ರೂಪಾಯಿ ಕೊಡಿ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕೇಳಿದ್ದೆ. ಅವರು ಸಹಾಯಕರನ್ನು ಕರೆದು ಐದು ನೂರು ಕೊಡುವಂತೆ ಆದೇಶ ಕೊಟ್ಟಿದ್ದರು. ಆಗ ನನಗಾದ ಖುಷಿ ಆವರಣನೀಯ ಎಂದು ವರ್ಣಿಸಿದರು ಜಗ್ಗೇಶ್.
ನೋಡಿ ಇಲ್ಲಿ ಅತ್ಯುತ್ತಮ ಸೆಟ್ ಹಾಕಲಾಗಿದೆ. ನೂರರಿಂದ ನೂರಾ ಐವತ್ತು ಜನರು ಕೆಲಸ ಮಾಡುತ್ತಾರೆ. ಒಂದು ಚಿತ್ರದ ನಿರ್ಮಾಣ ಎಷ್ಟು ಜನರ ಜೀವನ ನಡೆಯಲು ಸಹಕಾರಿ ಆಗುತ್ತದೆ. ಹಾಗಾಗಿ ಚಿತ್ರೋದ್ಯಮದ ಚಟುವಟಿಕೆಗಳು ಬಿರುಸಿನಿಂದ ಆರಂಭವಾದರೆ, ಸಾವಿರಾರು ಕುಟುಂಬಗಳು ಜೀವನ ಮಾಡುತ್ತವೆ ಕೊರೊನಾ ಎಂಬುದು ಇಲ್ಲವಾದರೆ ನಮ್ಮ ಕಲಾವಿದರ ಬದುಕು ಸುಖಮಯವಾಗಿ ಇರುತ್ತದೆ ಅದೇ ಖುಷಿ ಅನಿಸುತ್ತದೆ ಎಂದು ಹೇಳುತ್ತಾ ಹೋದರು ನವರಸ ನಾಯಕ.
ಈ ಚಿತ್ರದಲ್ಲಿ ನಾನು ಒಂದು ಪಾತ್ರವಾಗಿದ್ದೇನೆ, ತಮಾಷೆಗೆ ಒತ್ತು ನೀಡಲಾಗಿದೆ. ನಾನು ಗುರು ಆಗಾಗ ಮನಸ್ತಾಪಗಳನ್ನು ಮಾಡಿಕೊಂಡಿದ್ದರೂ ಅವರೊಳಗೊಬ್ಬ ಮಹಾನ್ ನ ನಿರ್ದೇಶಕ ಇದ್ದಾನೆ; ಚಿಕ್ಕ ಚಿಕ್ಕ ಕೆಲಸಗಳನ್ನು ಅದ್ಭುತವಾಗಿ ಮಾಡುತ್ತಾರೆ ಎಂದು ಗುರುಪ್ರಸಾದ್ ಕಾರ್ಯ ವೈಖರಿಯನ್ನು ಹೊಗಳಿದರು ಜಗ್ಗೇಶ್.
ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಎದ್ದೇಳು ಮಂಜುನಾಥ ಚಿತ್ರ ಮಾಡುವ ಸಂದರ್ಭದಲ್ಲಿ ರಂಗಗೀತೆ ಪ್ರಯೋಗ ಮಾಡುತ್ತಿದ್ದರಂತೆ.. ಹಾಗಾಗಿ ಅಲ್ಲಿ ಹುಟ್ಟಿಕೊಂಡ ಕನಸು ಈಗ ಚಿತ್ರ ಮಾಡುವ ರೂಪು ಪಡೆದಿದೆ ಎಂದರು ಗುರುಪ್ರಸಾದ್. ಇದು ರಂಗಗೀತೆ ಉತ್ಸಾಹ ಇರುವ ತುಂಟ ರಾಜನ ಕಥೆ. ಹಾಗಾಗಿ ಅರಮನೆ ಸೆಟ್ ಹಾಕಬೇಕಾಯಿತು. ಇಲ್ಲಿ ದೊಡ್ಡ ಬಜೆಟ್ ಬೇಕು ಎಂಬುದು ಬಹಳವೇ ಮುಖ್ಯವಾಗಿತ್ತು. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ವಿಖ್ಯಾತ್ ಅವರನ್ನು ಕರೆತಂದು ಪರಿಚಯಿಸಿದರು. ಆಗ ತಕ್ಷಣಕ್ಕೆ ಇಷ್ಟು ಚಿಕ್ಕ ಹುಡುಗ ನಿರ್ಮಾಣ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಯನ್ನೂ ಹುಟ್ಟು ಹಾಕಿತ್ತು. ಆದರೆ ವಿಖ್ಯಾತ್ ಅಚ್ಚರಿಯ ನಿರ್ಮಾಪಕ. ಈಗ ನನ್ನ ಮತ್ತು ಜಗ್ಗೇಶ್ ಅವರ ಹ್ಯಾಟ್ರಿಕ್ ಮಾಡಬೇಕು ಎಂಬ ಕನಸು ಹತ್ತಿರವಾಗಿದೆ. ಇದು ಬಹಳ ಸ್ಪೆಷಲ್ ಇರಬೇಕು.. ಎಂದು ಬಯಸಿದಂತೆ ಆಗುತ್ತಿದೆ ಎಂದರು. ನಿರ್ಮಾಪಕ
ವಿಖ್ಯಾತ್, ಹಣಕಾಸು ಪೂರೈಸುವ ದೇವೇಂದ್ರರೆಡ್ಡಿ, ಹಿರಿಯ ಸಂಕಲನಕಾರ ಕೆಂಪರಾಜು, ಕಲಾ ನಿರ್ದೇಶಕ ಕುಲಕರ್ಣಿ, ಛಾಯಾಗ್ರಾಹಕ ಅಶೋಕ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ನಾಯಕ ನಟಿ ರಚಿತಾ ಮೀನಾಕ್ಷಿ ಈ ಸಂದರ್ಭದಲ್ಲಿದ್ದರು.