Snehapriya.com

June 8, 2025

ಎಸ್.ನಾರಾಯಣ್ ಹೊಸ ಜಮಾನದ ಕಥೆ 5ಡಿ

Social Share :

ಸ್ಟಾರ್ ಒಬ್ಬರಿಗೆ ಫೋನ್ ಮಾಡಿದಾಗ.. ಎಸ್.ನಾರಾಯಣ್ ಇತ್ತೀಚೆಗೆ ಯಾವ ಸಿನಿಮಾ ಮಾಡಿದ್ದಾರೆ. ಇದು ಹಳೆ ಕಾಲವಲ್ಲ; ಜಮಾನ ಬದಲಾಗಿದೆ.. ಅವರಿಗೇ ಇಲ್ಲಿ ಬಂದು ಕಥೆ ಹೇಳಲು ತಿಳಿಸಿ ಎಂದು ದೌಲತ್ತಿನ ಉತ್ತರ ಕೊಟ್ಟರು; ಇದನ್ನು ಕೇಳಿಸಿಕೊಂಡ ಎಸ್.ನಾರಾಯಣ್ ಸಮಚಿತ್ತದಿಂದಲೇ ಅದನ್ನು ಸ್ವೀಕರಿಸಿ ಇಂದಿನ ಪೀಳಿಗೆಗೆ ಅನ್ವಯಿಸುವ ಚಿತ್ರ ಮಾಡಿ ಮುಗಿಸಿದ್ದಾರೆ. ಅದರ ಹೆಸರು 5ಡಿ.

ಅಂದ ಹಾಗೆ ಈ ಚಿತ್ರದ ನಾಯಕ ನಟ ಆದಿತ್ಯ ‘ನೀವು ಕಥೆ ಹೇಳುವುದೇ ಬೇಡ.. ನೀವು ಸೃಷ್ಟಿಸುವ ಪಾತ್ರದ ಪಾತ್ರಧಾರಿಯಾಗಿ ಇರುತ್ತೇನೆ ಎಂಬ ವಿಧೇಯತೆ ಪ್ರದರ್ಶಿಸಿ ಅದೇ ರೀತಿ ನಡೆದುಕೊಂಡಿದ್ದಾರೆ. ಅವರೊಬ್ಬ ನಿರ್ದೇಶಕರ ನಟ ಎಂದರು ನಾರಾಯಣ್. ವರನಟ ಡಾ.ರಾಜ್ ಕುಮಾರ್ ಅವರಿಗೂ ನಿರ್ದೇಶನ ಮಾಡಿರುವ ಎಸ್.ನಾರಾಯಣ್ ಅವರಿಗೂ ಈಗಿನ ಜಮಾನದ ಸಿನಿಮಾ ಮಾಡಬಲ್ಲರೆಂಬುದು ಈ ಚಿತ್ರದ ಮೂಲಕ ಸಾಬೀತಾಗಲಿದೆ. ಹೆಚ್ಚುಗಾರಿಕೆ ಎಂದರೆ ಈ ಜಮಾನದ ಹುಡುಗ ಎಸ್.ನಾರಾಯಣ್ ಪುತ್ರ ಪಂಕಜ್ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಕಥೆಯ ಬಗ್ಗೆ ಯಾವ ಸುಳಿವನ್ನು ಚಿತ್ರತಂಡ ಬಿಟ್ಟುಕೊಡಲಿಲ್ಲ; ಆದರೆ ಇದು 5 ಡೈಮೆನ್ಷನ್ ನಲ್ಲಿ ಹೋಗುವ ಕಥೆ ಎಂಬುದು ತಿಳಿದುಬಂತು. ರವಿ ಕಥೆ ಬರೆದಿದ್ದಾರೆ. ನೃತ್ಯ ನಿರ್ದೇಶನ ಮಾಡಿದವರು ಮಾಲೂರು ಶ್ರೀನಿವಾಸ್. ಎಸ್.ನಾರಾಯಣ್ ಸರ್ ಜೊತೆ ಬಹಳ ಸಮಯದ ನಂಟು ವಿಷ್ಣು ಸರ್ ಸಿನಿಮಾ ಮಾಡಿಸಿದ್ದರು. ಅವರ ಸಾಹಿತ್ಯವೂ ಅದ್ಭುತವಾಗಿರುತ್ತದೆ‌ ಎಂದರು.

ಕಿರುತೆರೆ ನಟಿ ಜ್ಯೋತಿ ರೈ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಪಾತ್ರದ ಬಗ್ಗೆ ಹೇಳಲ್ಲ. ಸಾಕಷ್ಟು ಕಲಿತೆ ಎಂದರು ಜ್ಯೋತಿ ರೈ. ಪಾತ್ರ ಮಾಡಲು ನನಗೆ ಕರೆ ಬಂದಾಗ ಅಚ್ಚರಿ, ದಿಗ್ಭ್ರಮೆ ಎರಡೂ ಆಯಿತು ಎಂದರು ನಟ ರಾಘವೇಂದ್ರ. ಕಲಾವಿದರಾದ ರವಿಕುಮಾರ್,  ರಾಜೇಶ್ ರಾವ್, ರತನ್ ರಾಮ್,  ಆಕಾಶ್ ತಮ್ಮ ಅನುಭವ ಹೇಳಿಕೊಂಡರು. ಕ್ಯಾಮೆರಾಮನ್ ಕುಮಾರ್, ನಿರ್ಮಾಪಕ ಸ್ವಾತಿ ಕುಮಾರ್ ಉತ್ತಮ ಆಶಯಗಳನ್ನು ಹಂಚಿಕೊಂಡರು.

ಒಂದು ಸಿನಿಮಾ ಮಾಡುವಾಗ ಎಷ್ಟು ಶ್ರಮ ಎಂಬುದರ ಪರಿಚಯವಾಗಿದೆ  ಆದಿತ್ಯ ಹೊಸ ಜಾನರ್ ಎರಡು ನಮ್ಮ ಚಿತ್ರದ ವಿಶೇಷಗಳಾಗಿವೆ ಎಂದರು.

ಮುಖ್ಯ ಪಾತ್ರದಲ್ಲಿರುವ ನಟ ಆದಿತ್ಯ, ಇದು ಬಹಳ ವರ್ಷದ ಕನಸು ಮತ್ತು ಇದು ನನ್ನ 25 ನೇ ಸಿನಿಮಾ ಎಂದರು. ನಾನು ನಟನಿಗಿಂತ ಮುಂಚೆ ನಿರ್ಮಾಪಕ. ನಾರಾಯಣ್ ಸರ್ ಗೆ ನೀವು ಕ್ಯಾಮೆರಾ ಇಟ್ಟು ಕರೀರಿ ಬರ್ತನಿ ಅಂತಾ ಹೇಳಿದ್ದೆ ನಿರ್ದೇಶಕರು ಹೇಗಿರಬೇಕು ಎಂಬುದನ್ನು ನಾರಾಯಣ್ ಸರ್ ನೋಡಿ ಕಲಿಯಬೇಕು ಎಂದರು ಆದಿತ್ಯ. ಹಿರಿಯ ಅಡ್ವೋಕೇಟ್ ಶಂಕರಪ್ಪ ಈ ಚಿತ್ರದಲ್ಲಿ ಪಾತ್ರ ಮಾಡಿರುವುದು ವಿಶೇಷ.
ಅಂದ ಹಾಗೆ ಆದಿತ್ಯ ಎದುರು ನಟಿಸಿರುವುದು ಅದಿತಿ ಪ್ರಭುದೇವ.  ನಾರಾಯಣ್ ಸರ್ ಏನ್ ಪುಟ್ಟಿ ಅಂತಾ ಇದ್ರು ನನಗೆ ಉತ್ತಮ ಅನುಭವಗಳನ್ನು ಈ ಚಿತ್ರತಂಡ ನೀಡಿದೆ ಎಂದರು.

ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಇದು ಎಸ್.ನಾರಾಯಣ್ ಅವರ 50ನೇ ಚಿತ್ರ. ಹೊಸ ಜಮಾನದ ಕಥೆಯನ್ನು ನಿರ್ವಹಿಸಿರುವುದು ಪಂಕಜ್. ಪಂಕಜ್ ನಲ್ಲಿ ಒಬ್ಬ ಕಥೆಗಾರ ನಿರ್ದೇಶಕ ಇದ್ದ ಆತ ಎಲ್ಲದಕ್ಕಿಂತ ಭಿನ್ನ ಎಂದರು. ಪಿಆರ್ ಓ ಬಾಬು ಈ ಚಿತ್ರ ಮೂಲ ಪುರುಷ. ಆದಿತ್ಯ ನನ್ನ ಗುರುಪುತ್ರ ‘ನಂಬಿಕೆಯೇ ಚಿತ್ರರಂಗ..’ ಹೀಗೆ ಹೇಳುತ್ತಲೇ ಹೋದರು ಎಸ್.ನಾರಾಯಣ್.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *