Snehapriya.com

June 8, 2025

ಹಾಡಿಗೆ ಅನಿವಾರ್ಯ ಗಂಧರ್ವ ಗಾಯಕ

Social Share :

ಭಾಷೆ ಯಾವುದೇ ಇರಲಿ ಅದಕ್ಕೊಬ್ಬ ಅದಕ್ಕೊಬ್ಬ ಅನಿವಾರ್ಯ ಗಾಯಕ ಯಾರಾದರು ಇದ್ದರೆ ಅದು ಎಸ್.ಬಿ.ಬಾಲಸುಬ್ರಮಣ್ಯಂ ಮಾತ್ರ. ಸುಮಾರು ಆರು ದಶಕಗಳ ಸುದೀರ್ಘ ಅವಧಿಯಲ್ಲಿ ಭಾರತೀಯ ಚಿತ್ರರಂಗವನ್ನು ಆಳಿದ ಗಾನ ಗಂಧರ್ವ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿ 40 ಸಾವಿರ ಮೇಲ್ಪಟ್ಟು ಹಾಡುಗಳನ್ನು ಹಾಡಿದ ಗಾನ ಯೋಗಿ.

ಸೂಪರ್‍ಸಾರ್‍ಗಳಾದ ರಜನಿಕಾಂತ್, ಕಮಲ್‍ಹಾಸನ್, ವಿಷ್ಣುವರ್ಧನ್, ಅಂಬರೀಷ್, ಚಿರಂಜೀವಿ, ಶಂಕರ್‍ನಾಗ್, ಅನಂತನಾಗ್, ವೆಂಕಟೇಶ್, ನಾಗಾರ್ಜುನ, ಅರ್ಜುನ್ ಸರ್ಜಾ ಹೀಗೆ ಮೂರ್ನಾಲ್ಕು ತಲೆ ಮಾರುಗಳ ನಾಯಕ ನಟರಿಗೆ ಅನಿವಾರ್ಯ ಗಾಯಕರಾಗಿ ಮೇರೆದವರು ಎಸ್.ಪಿ.ಬಿ.

ಒಬ್ಬ ನಾಯಕ ನಟ ಜನರಿಗೆ ಹೆಚ್ಚು ಆಪ್ತವಾಗುವುದು ತನ್ನ ಚಿತ್ರಗಳ ಹಾಡಿನಿಂದಲೇ. ಅಚ್ಚರಿಯ ವಿಷಯವೆಂದರೆ ಎಸ್‍ಪಿಬಿ ಯಾರಿಗಾದರೂ ಹಾಡಿದರೆ ಆ ಕಲಾವಿದನ ಧ್ವನಿಯನ್ನೇ ಅನುಕರಿಸುತ್ತಾರೆ. ಹಾಗಾಗಿ ಅದು ಎಸ್‍ಪಿ ಹಾಡು ಎಂಬುದಕ್ಕಿಂತ ಆಯಾ ನಟನ ಹಾಡು ಅನಿಸುತ್ತದೆ. ಕನ್ನಡದ ವಿಷ್ಣುವರ್ಧನ್, ಅಂಬರೀಷ್, ಅನಂತ್‍ನಾಗ್ ಅವರ ಹಾಡುಗಳನ್ನು ಆಯಾ ನಟರೇ ಹಾಡಿದಂತೆ ಭಾಸವಾಗುತ್ತದೆ. ಏಕೆಂದರೆ ಎಸ್.ಪಿ.ಬಿ. ಅದ್ಭುತ ಡಬ್ಬಿಂಗ್ ಕಲಾವಿದರೂ ಹೌದು.

ರಜನಿಕಾಂತ್, ಕಮಲ್‍ಹಾಸನ್, ಜಮಿನಿ ಗಣೇಶನ್ ಅವರ ತಮಿಳು ಚಿತ್ರಗಳು ತೆಲುಗಿಗೆ ಡಬ್ ಆದಾಗ ಮುಖ್ಯ ಪಾತ್ರಕ್ಕೆ ಧ್ವನಿ ನೀಡುತ್ತಿದ್ದವರು ಎಸ್.ಪಿ.ಬಾಲಸುಬ್ರವ್ಮಣ್ಯಂ. ತೆಲುಗಿನ ನಾಗಾರ್ಜುನ ಅವರಿಗೂ ಧ್ವನಿ ನೀಡಿದ್ದಾರೆ. ಕಮಲ್‍ಹಾಸನ್ ಅವರ ದಶಾವತಾಂ ಚಿತ್ರದ ತೆಲುಗು ಅವತರಣಿಕೆಗೆ ಏಳು ಪಾತ್ರಕ್ಕೆ ಧ್ವನಿ ನೀಡಿರುವುದು ವಿಶೇಷ. ನಾಗಾರ್ಜುನ ಅವರ ಅನ್ನಮಯ್ಯ ಚಿತ್ರಕ್ಕಾಗಿ ಡಬ್ಬಿಂಗ್ ಕಲಾವಿದ ಪ್ರಶಸ್ತಿ ಕೂಡ ದಕ್ಕಿದೆ. ನಂದಮುರಿ ಬಾಲಕೃಷ್ಣ ಅವರ ಚಿತ್ರಗಳು ತೆಲುಗಿನಿಂದ ತಮಿಳಿಗೆ ಡಬ್ ಆದಾಗ ಅದಕ್ಕೆ ಧ್ವನಿ ನೀಡಿದ್ದು ಎಸ್‍ಪಿಬಿ.

ನಟನೆ ಫೇಮಸ್ ಆಗಿದ್ದು ಎಸ್‍ಪಿಬಿಗೆ ರಾಜ್ ಹಾಡಿದ್ದು.

ಸುಮಾರು ನಲವತ್ತು ಸಾವಿರ ಹಾಡುಗಳನ್ನು ಹಾಡಿರುವ ಎಸ್‍ಪಿಬಿ ಕನ್ನಡಕ್ಕೂ ಅನಿವಾರ್ಯ ಗಾಯಕ. ಒಂದು ಕಾಲದಲ್ಲಿ ಎಪಿಬಿ ಹೊರತಾದ ಹಾಡುಗಳೇ ಇರುತ್ತಿರಲಿಲ್ಲ. ಇಂತಹ ಅದ್ಭುತ ಗಾಯಕ ಉತ್ತಮ ನಟ ಕೂಡ.
ಕೆಳಡಿ ಕಣ್ಮಣಿ, ಕಾದಲನ್ ಹಾಗೂ ಎಷ್ಟೋ ಚಿತ್ರಗಳಲ್ಲಿ ಅಭಿನಯಿಸಿಯೂ ಯಶಸ್ವಿಯಾಗಿರುವ ಎಸ್‍ಪಿಬಿ ಅವರಿಗೆ ಕನ್ನಡದ `ಮುದ್ದಿನ ಮಾವ’ ಚಿತ್ರ ಬಹಳವೇ ವಿಶೇಷ. ಓಂ ಸಾಯಿಪ್ರಕಾಶ್ ನಿರ್ದೇಶನದ ಆ ಚಿತ್ರದಲ್ಲಿ ಶಶಿಕುಮಾರ್ ನಾಯಕ ನಟ. ಎಸ್‍ಪಿಬಿ ಅವರಿಗೆ ಆ ಚಿತ್ರ ಬಹಳವೇ ವಿಶೇಷ ಏಕೆಂದರೆ ಕನ್ನಡದ ಗಾನಗಂಧರ್ವ, ವರನಟ ಡಾ.ರಾಜ್‍ಕುಮಾರ್ ಎಸ್‍ಪಿಬಿ ಅವರಿಗಾಗಿ ಹಾಡಿದ್ದರು. `ದೀಪಾವಳಿ ದೀಪಾವಳಿ ಗೋವಿಂದ ನೀಲಾವಳಿ’ ಹಾಗೂ `ಕಣ್ಣಪ್ಪ ಕೊಟ್ಟನು..’ ಎಂಬ ಹಾಡನ್ನು ಹಾಡಿದ್ದರು. ಎಷ್ಟೋ ವೇದಿಕೆಗಳಲ್ಲಿ ಈ ವಿಷಯವನ್ನು ಎಸ್‍ಪಿಬಿ ಹಂಚಿಕೊಂಡಿದ್ದರು.

ಅಮಿತಾಬ್‍ಗೆ ಹಾಡಲಿಲ್ಲ ಎಂಬುದು ಕೊರಗು.

ಈಚೆಗೆ ಬೆಂಗಳೂರಿನ ಕಾರ್ಯಕ್ರಮವೊಂದಲ್ಲಿ ಎಸ್‍ಪಿಬಿ ಎದುರಾದಾಗ, ಅವರಿಗೊಂದು ಮಹತ್ವದ ಪ್ರಶ್ನೆಯೂ ಎದುರಾಗಿತ್ತು. ಇಷ್ಟೊಂದು ಹಾಡುಗಳನ್ನು ಹಾಡಿರುವ ನಿಮಗೆ ಅಸಮಾಧಾನದ ವಿಷಯ ಏನಾದರೂ ಇದೆಯಾ ಎಂಬ ಪ್ರಶ್ನೆಗೆ ನಾನು ಅಮಿತಾಬ್‍ಗೆ ಹಾಡಲಿಲ್ಲ ಎಂಬುದು ಇವತ್ತಿಗೂ ಕೊರಗಾಗಿದೆ ಎಂದು ಉತ್ತರ ಕೊಟ್ಟಿದ್ದರು.
ಗಿರಫ್ತಾರ್ ಚಿತ್ರದಲ್ಲಿ ಹಾಡಿದರೂ ಅದು ಕಮಲ್‍ಹಾಸನ್ ಮೇಲೆ ಹೋಗುತ್ತದೆ. ಹಾಗಾಗಿ ಅಮಿತಾಬ್‍ಗೆ ಹಾಡಲಿಲ್ಲ ಎಂದು ಹೇಳಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *