Snehapriya.com

June 7, 2025

ಅಖಿಲ ಭಾರತ ಚಿತ್ರ ಕಬ್ಜ

Social Share :

ನಿರ್ದೇಶಕ ಆರ್.ಚಂದ್ರು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ.. ಅದಕ್ಕೆ ಕಾರಣ ಅವರ ಚಿತ್ರ ‘ಕಬ್ಜ’ಗೆ ಮಾಧ್ಯಮಗಳಿಂದ ಸಿಕ್ಕಿರುವ ಪ್ರಶಂಸೆ..!
ಕಬ್ಜ ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕೆಂದು ಹೊರಟವರು ಚಂದ್ರು. ಅದಕ್ಕೆ ಪೂರಕವಾಗಿ ಭಾರತೀಯ ಮಟ್ಟದ ಮಾಧ್ಯಮಗಳು ಚಿತ್ರಕ್ಕೆ ಟಾಪ್ ರೇಟಿಂಗ್ ನೀಡಿವೆ. ಕೆ.ಜಿ.ಎಫ್, ಆರ್ ಆರ್ ಆರ್ ಚಿತ್ರಗಳ ಬಳಿಕ ಮೂರನೇ ಸ್ಥಾನವನ್ನು ಕಬ್ಜಗೆ ನೀಡಿವೆ.

ಒಂದು ಚಿತ್ರ ಇನ್ನು ನಿರ್ಮಾಣ ಹಂತದಲ್ಲಿಯೇ ಇಂತಹ ಸಾಧ‌ನೆ ಮಾಡಿರುವುದು ಹೆಚ್ಚುಗಾರಿಕೆ. ಇದರಲ್ಲಿ ಆರ್.ಚಂದ್ರು ಶ್ರಮ ಹೆಚ್ಚಾಗಿದೆ ಎಂದು ಹೇಳಲೇ ಬೇಕಿಲ್ಲ.. ಅವರು ಚಿತ್ರದ ಹೆಚ್ಚುಗಾರಿಕೆಯನ್ನು ದಾಖಲಿಸಿ ಭಾರತೀಯ ಮಟ್ಟದ ಸಿನಿಮಾ ಮಾಡಬೇಕೆಂಬ ಹಂಬಲದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇದಕ್ಕೆ ನಾಯಕ ನಟ ಉಪೇಂದ್ರ ಅವರ ಸಹಕಾರ ಹೆಚ್ಚಾಗಿದೆ ಎಂಬುದನ್ನು ಹೇಳಲೇ ಬೇಕಿಲ್ಲ.

ಆರ್.ಚಂದ್ರು ಕುಗ್ರಾಮವೊಂದರಿಂದ ಸಾಮಾನ್ಯ ಕುಟುಂಬದ ಹುಡುಗನಾಗಿ ಗಾಂಧಿನಗರಕ್ಕೆ ಬಂದವರು. ಇಲ್ಲಿ ತಮ್ಮ ಚಿತ್ರಗಳ ಮೂಲಕವೇ ದಿನದಿಂದ ದಿನಕ್ಕೆ ಬೆಳೆದವರು. ತಾಜ್ ಮಹಲ್ ನಿಂದ ಐ ಲವ್ ಯು ವರೆಗೂ ವಿಭಿನ್ನತೆ ಕಾಯ್ದುಕೊಂಡವರು. ಹಾಗಾಗಿ ಚಂದನವನದಲ್ಲಿ ಅವರು ನಿರ್ದೇಶಕ ಮತ್ತು ನಿರ್ಮಾಪಕನಾಗಿ ಬೆಳೆಯುವುದು ಸಾಧ್ಯವಾಗಿದೆ. ಕಬ್ಜದಂತಹ ದೊಡ್ಡ ಬಜೆಟ್ ನ ಚಿತ್ರಕ್ಕೆ ಅವರೇ ನಿರ್ಮಾಪಕ ಎಂಬುದನ್ನು ತಿಳಿದಾಗ ಎಂತಹವರಿಗಾದರೂ ಅಚ್ಚರಿಯಾಗುತ್ತದೆ. ಮುಖ್ಯವಾಗಿ ಕಬ್ಜಗೆ ತೆಲುಗಿನಲ್ಲಿ ಅತಿದೊಡ್ಡ ಸ್ವಾಗತ ಸಿಕ್ಕಿದೆ. ತೆಲುಗಿನಲ್ಲಿ ತಯಾರಾಗುವ ಅತಿ ದೊಡ್ಡ ಚಿತ್ರಗಳಲ್ಲಿ ಇದು ಒಂದು ಎಂಬುದನ್ನು ತಿಳಿದಾಗ ಕನ್ನಡಿಗ ಚಂದ್ರು ಬಗ್ಗೆ ಹೆಮ್ಮೆಯಾಗುತ್ತದೆ.

ಕನ್ನಡ ಮತ್ತು ತೆಲುಗಿನಲ್ಲಿ ಇದು ನೇರ ಚಿತ್ರ. ಅದಕ್ಕಿಂತ ಮೇಲಾಗಿ ಐದು ಭಾಷೆಗಳಿಗೆ ಡಬ್ ಆಗುತ್ತದೆ. ಹಾಗಾಗಿ ಇದು ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಕನ್ನಡದ ಅತಿ ದೊಡ್ಡ ಚಿತ್ರ. ಮೇಕಿಂಗ್ ನಲ್ಲಿ ವೈವಿಧ್ಯತೆ ಕಾಯ್ದು ಕೊಳ್ಳಲಾಗಿದೆ ಎಂಬುದಕ್ಕೆ ಅದರ ಫೋಟೋ ಶೂಟ್ ಚಿತ್ರಗಳು ನಿದರ್ಶನವಾಗುತ್ತವೆ.

ಏಳು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿರುವ ಕಾರಣ ಅಖಿಲ ಭಾರತ ಮಟ್ಟದ ಕಲಾವಿದರು ಇದರಲ್ಲಿ ಅಭಿನಯಿಸುತ್ತಿದ್ದಾರೆ. ಕೊರೊನಾ ಕಾರಣ ಅಲ್ಲದಿದ್ದರೆ ಇಷ್ಟು ಹೊತ್ತಿಗೆ ಚಿತ್ರೀಕರಣ ಪೂರ್ಣಗೊಳ್ಳುತಿತ್ತು. ಇನ್ನು ಒಂದೆರಡು ತಿಂಗಳಲ್ಲಿ ಚಿತ್ರೀಕರಣ ಮುಗಿಯಬಹುದು ಎಂಬ ಉತ್ತರ ನೀಡುವ ಚಂದ್ರು, ಈ ಚಿತ್ರದ ಬಜೆಟ್ ಗೆ ಮಿತಿ ಎಂಬುದೇ ಇಲ್ಲ ನಗುತ್ತಾರೆ. ಕಷ್ಟಕಾಲದಲ್ಲಿ ಒಂದು ಭಾರತೀಯ ಮಟ್ಟದ ಸಿನಿಮಾ ಮಾಡುವೆ ಎಂಬ ಕಿಚ್ಚು ನಿರ್ದೇಶಕ ರಲ್ಲಿ ಇರುವುದು ವಿರಳ. ಈ ಚಂದ್ರು ಕೂಡ ವಿರಳ ಜನರ ಸಾಲಿಗೇ.. ಸೇರಿದವರು. ಹಾಗಾಗಿ ಅವರ ಸಿನಿಮಾ ಮಾಡುವ ಆಸಕ್ತಿ ಎಂದಿಗೂ ಅನನ್ಯ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *