Snehapriya.com

June 9, 2025

ಸಿನಿಮಾ-ಗಾಸಿಪ್

ಯುಐ ಟಿಕೆಟ್ ಮಾರಾಟ ದಾಖಲೆ ಉಪ್ಪಿ ಸೃಷ್ಟಿಸಿದ ಹೊಸ ಅಲೆ..

Social Share :

* ಯುಐಗೆ ವಿಶ್ವ ಸಿನಿಮಾ ಮನ್ನಣೆ *

* ಕ್ಷಣ ಕ್ಷಣವೂ ಹೆಚ್ಚಾದ ಕುತೂಹಲ *

* ಶಿವಣ್ಣ, ವಿಜಿ, ಧನಂಜಯ್ ಪ್ರಶಂಸೆ *

ಇದೇ 20 ರಂದು ಬಿಡುಗಡೆ ಕಾಣುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದ ಬಿಡುಗಡೆಗೆ ಇಡೀ ವಿಶ್ವ ಎದುರು ನೋಡುತ್ತಿದೆ.

ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಯುಐ’ ನ ಹೆಸರು ರಾರಾಜಿಸುತ್ತಿದ್ದು, ಇದು ಕನ್ನಡ ಸಿನಿಮಾದ ಅತಿ ದೊಡ್ಡ ಸಾಧನೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.

ಹೇಗೆಂದರೆ ಐಎಂಡಿಬಿ ನಿರೀಕ್ಷೆಗಳ ಪಟ್ಟಿಯಲ್ಲಿ ‘ಯುಐ’ ಹೆಸರಿದೆ. ಹಾಗಾಗಿ ಚಿತ್ರದ ಬಗ್ಗೆ ವಿಶ್ವ ಮಟ್ಟದಲ್ಲಿ ನಿರೀಕ್ಷೆ ಹೆಚ್ಚಾಗಿದೆ ಎಂಬುದು ಅದರ ವಿವರ.

ಈಚೆಗೆ ಚಿತ್ರದ ಬಿಡುಗಡೆ ಪೂರ್ವ ಇವೆಂಟ್ ನಲ್ಲಿ ಚಿತ್ರರಂಗದ ಗಣ್ಯರು ಉಪೇಂದ್ರ ನಿರ್ದೇಶನ ಮತ್ತು ಕಾರ್ಯ ವೈಖರಿಯನ್ನು ಹಾಡಿ ಹೊಗಳಿದರು.

ಬಿಡುಗಡೆಗೆ ಒಂದು ವಾರ ಮುಂಚೆಯೇ ತೆರೆದುಕೊಂಡ ಟಿಕೆಟ್ ಮಾರಾಟ ಆ ಕ್ಷಣದಿಂದಲೇ ಬುಕ್ ಆಗಿ ಹೊಸ ದಾಖಲೆಯೇ ನಿರ್ಮಾಣವಾಗಿದೆ ಎಂಬ ವಿವರಗಳು ಬಂದವು.

ಯುಐ ಚಿತ್ರ ನೋಡಲು ಬುಕ್ಕಿಂಗ್ ಅವಕಾಶ ತೆರೆದುಕೊಂಡ ತಕ್ಷಣವೇ ದಾಖಲೆ ಪ್ರಮಾಣದ ಟಿಕೆಟ್ ಮಾರಾಟವಾಗಿವೆ ಎಂದು ಕೆವಿಎನ್ ಸಂಸ್ಥೆಯ ಸುಪ್ರೀತ್, ವೀರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ವಿವರಗಳನ್ನು ನೀಡಿದರು.

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಹೃದಯ ವೈಶಾಲ್ಯವನ್ನು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೊಂಡಾಡಿದರು. ಜೊತೆಗೆ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ಯ ಅವರು ಶಿವಣ್ಣ ಹಾಗೂ ಉಪೇಂದ್ರ ಅವರ ಸ್ನೇಹತ್ವವನ್ನು ಹೊಗಳಿದರು.

ನಿರ್ಮಾಪರಾದ ಉದಯ್ ಮೆಹ್ತಾ
ರಮೇಶ್ ರೆಡ್ಡಿ, ಯೋಗಿ, ಕಾರ್ತಿಕ್ ಗೌಡ, ಜಗದೀಶ್, ನಿರ್ದೇಶಕರಾದ
ಡಾ.ಸೂರಿ, ಪವನ್ ಒಡೆಯರ್, ನಟಿಯರಾದ ಮೇದಿನಿ, ನೀತು, ನಿಧಿ ಸುಬ್ಬಯ್ಯ ಹಾಗೂ ನಟ
ಕಾರ್ಕೋಚ್ ಸುಧಿ, ರವಿಶಂಕರ್ ಚಿತ್ರ ಹಾಗೂ ಉಪ್ಪಿ ಶ್ರಮ ಕುರಿತು ಮಾತನಾಡಿದರು.

ಪ್ರಿಯಾಂಕ ಉಪೇಂದ್ರ ಹಾಗೂ
ರೀಶ್ಮಾ ನಾಣಯ್ಯ ಉಪೇಂದ್ರ ಅವರ ಕಾರ್ಯ ಕ್ಷಮತೆಯನ್ನು ಹೊಗಳಿದರು. ಚಿತ್ರವನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಲಹರಿ ಸಂಸ್ಥೆ ಹಾಗೂ ವೀನಸ್ ಎಂಟರ್ ಪ್ರೈಸಸ್ ನ ಮನೋಹರ ನಾಯ್ಡು, ಲಹರಿ ವೇಲು ಹಾಗೂ ಕೆ.ಪಿ.ಶ್ರೀಕಾಂತ್ ಉಪ್ಪಿಯ ಶ್ರಮ ಮತ್ತು ಔದಾರ್ಯವನ್ನು ಕೊಂಡಾಡಿದರು.

ಈ ಅದ್ದೂರಿ ಪ್ರಚಾರ ಸಭೆಯಲ್ಲಿ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಸೇರಿದಂತೆ ಚಿತ್ರದಲ್ಲಿ ದುಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು ಉಪೇಂದ್ರ.

ಯುಐ ಎಂದರೆ ಅದು ಉಪ್ಪಿ ಹುಳ. ಚಿತ್ರ ನೋಡಿದ ನಂತರ ಅರ್ಥವಾಗಬಹುದು. ಅಲ್ಲಿಯವರೆಗೆ ಯೂಸ್ ಯುವರ್ ಇಂಟಲಿಜೆನ್ಸ್, ನಾನು ಮತ್ತು ನೀನು, ಯುನಿವರ್ಷಲ್ ಇಂಟಲಿಜೆನ್ಸ್ ಹೀಗೆ ಅನೇಕ ಕಲ್ಪನೆಗಳು ಸಭೆಯಲ್ಲಿಯೂ ಲಾಸ್ಯವಾಡಿದವು.

Social Share :

ಪ್ರೇಮ್ ಕೆಡಿ ಶಿವ ಶಿವ ಹಾಡು ಕನ್ನಡದ ದುಬಾರಿ ಆಲ್ಬಂ..

Social Share :


ಹೆಸರಾಂತ ನಿರ್ದೇಶಕ; ಕನ್ನಡದ ಶೋಮ್ಯಾನ್ ‌ಖ್ಯಾತಿಯ ಜೋಗಿ ಪ್ರೇಮ್ ಅವರು ಹಾಡುಗಳ ವಿಷಯದಲ್ಲಿ ಯಾವಾಗಲೂ ಹೆಚ್ಚುಗಾರಿಕೆ ಕಾಯ್ದುಕೊಳ್ಳುವುದು ರೂಢಿ.

ಪ್ರೇಮ್ ಅವರ ಬಹು ನಿರೀಕ್ಷೆಯ ‘ಕೆಡಿ’ ಚಿತ್ರದ ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ (ಸುಮಾರು 17.70 ಕೋಟಿ) ಮಾರಾಟವಾಗಿರುವುದು ಸ್ಯಾಂಡಲ್ ವುಡ್ ಗೆ ದೊಡ್ಡ ಪ್ರಭಾವಳಿಯನ್ನು ತಂದು ಕೊಟ್ಟಿದೆ.

ಮತ್ತು ಈಗ ಮೊದಲ ಹಾಡು ‘ಶಿವ ಶಿವ’ ಬಿಡುಗಡೆಯ ಹಾದಿಯಲ್ಲಿ ಬಹು ದೊಡ್ಡ ನಿರೀಕ್ಷೆ ಹಾಗೂ ಕುತೂಹಲ ಏರ್ಪಟ್ಟಿದೆ.

ಆನಂದ್ ಆಡಿಯೋ ಮೂಲಕ ಕನ್ನಡದ ಸಿನಿಮಾವೊಂದರ ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿರುವುದರಿಂದ ಈ ವಿಷಯದಲ್ಲಿ ಹೊಸ ಸಾಧ್ಯತೆಗಳು ತೆರೆದುಕೊಂಡಂತ್ತಾಗಿವೆ. ಹಾಗೆಯೇ ಈ ವಿಷಯದಲ್ಲಿ ಜೋಗಿ ಪ್ರೇಮ್ ಇಡೀ ಸ್ಯಾಂಡಲ್ ವುಡ್ ಬೆರಗಾಗುವಂತೆ ಅಚ್ಚರಿಗಳನ್ನು ಮೊಗೆದು ಕೊಟ್ಟಿದ್ದಾರೆ.

ಈಚೆಗೆ ನಿರ್ದೇಶಕ ಜೋಗಿ ಪ್ರೇಮ್, ನಾಯಕ ನಟ ಧ್ರುವ ಸರ್ಜಾ ಹಾಗೂ ಕಾರ್ಯಕಾರಿ ನಿರ್ಮಾಪಕ (ಕೆವಿಎನ್ ಸಂಸ್ಥೆಯ) ಸುಪ್ರೀತ್ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ವಿವರಗಳನ್ನು ನೀಡಿದರು.

ಕರ್ನಾಟಕದಲ್ಲಿ ಕೊತ್ವಾಲ್ ರಾಮಚಂದ್ರ, ಜೈರಾಜ್, ಆಯಿಲ್ ಕುಮಾರ್ ಹೀಗೆ ರೌಡಿ ಸಾಮ್ರಾಜ್ಯ ಮೆರೆದಾಡುವುದಕ್ಕೂ ಮುಂಚೆ ಇದ್ದ ವಿಚಿತ್ರ ಮ್ಯಾನರಿಜಂನ ಕಾಳಿದಾಸ (ಚಿತ್ರದಲ್ಲಿ ಹೆಸರು) ಎಂಬ ರೌಡಿಸಂ ಹಿನ್ನೆಲೆಯ ವ್ಯಕ್ತಿಯ ಕಥೆ ಇದು.

70ರ ದಶಕದಲ್ಲಿ ನಡೆಯುವ ಈ ಕಥೆಗೆ ಅದೇ ಮಾದರಿಯ ವಸ್ತ್ರ ವಿನ್ಯಾಸವನ್ನು ಚಿತ್ರದಲ್ಲಿ ಕಾಯ್ದುಕೊಳ್ಳಲಾಗಿದೆ. ಬದಲಾದ ತಂತ್ರಜ್ಞಾನದ ಸಂಪೂರ್ಣ ಬಳಕೆ ಮಾಡಲಾಗಿದೆ ಎಂಬ ವಿವರಗಳನ್ನು ನೀಡಿದರು ನಿರ್ದೇಶಕ ಜೋಗಿ ಪ್ರೇಮ್.

ಕಾಳಿದಾಸ ಪಾತ್ರದ ಹೆಸರು. ಆದರೆ ನಿಜವಾಗಿ ಅದು ಯಾರು ಎಂಬುದನ್ನು ಬಹಿರಂಗಪಡಿಸಲಾಗುವುದಿಲ್ಲ. ಏಕೆಂದರೆ ‘ಕರಿಯ’ ಚಿತ್ರ ಮಾಡಿದಾಗ ಹೆಸರಿನಿಂದ ಸಮಸ್ಯೆ ಎದುರು ಹಾಕಿಕೊಂಡಿದ್ದೆವು ಎಂಬ ವಿವರ ಕೊಟ್ಟರು.

ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ’ ಎರಡು ಹಾಡುಗಳ ಹೊರತುಪಡಿಸಿ ಚಿತ್ರೀಕರಣ ಮುಗಿಸಿದೆ. ಹಾಗೆಯೇ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋ ದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.

ಈ ತಿಂಗಳು ಅಂದರೆ ಡಿಸೆಂಬರ್ 24 ರಂದು ‘ಶಿವ ಶಿವ’ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ; ಈ ಹಾಡನ್ನು ಪ್ರೇಮ್ ಹಾಗೂ ಕೈಲಾಶ್ ಖೇರ್ ಹಾಡಿದ್ದಾರೆ.
ಉಳಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ.

ಚಿತ್ರದಲ್ಲಿ ಆರು ಹಾಡುಗಳಿದ್ದು ‘ಕೆಡಿ’ ಇಂಡಿಯಾದಲ್ಲೇ ದೊಡ್ಡ ಆಲ್ಬಂ ಆಗಿ ಹೊರ ಹೊಮ್ಮಲಿದೆ ಎಂಬುದು ಚಿತ್ರತಂಡದ ನಿರೀಕ್ಷೆ.

ಜಾನಪದ ಶೈಲಿ ಹಾಡು ಕೂಡ ಚಿತ್ರದಲ್ಲಿದೆ. ಮೊದಲ ಹಾಡು ಇಲ್ಲಿ ಬಿಡುಗಡೆ ಮಾಡಲಾಗುವುದು. ಮತ್ತೊಂದು ಹಾಡು ಮುಂಬೈನಲ್ಲಿ ಬಿಡುಗಡೆ ಕಾಣುತ್ತಿದೆ.

ಚಿತ್ರಕ್ಕೆ ಒಟ್ಟು 150 ದಿನಗಳ ಚಿತ್ರೀಕರಣ ನಡೆದಿದ್ದು, ಇನ್ನುಎರಡು ಹಾಡುಗಳು ಮಾತ್ರ ಬಾಕಿ ಇವೆ ಮತ್ತು ಸಿನಿಮಾದಲ್ಲಿ ಬ್ಲಡ್ ಶೇಡ್ ಇದ್ದರೂ ಕಥೆಗೆ ಅದನ್ನೆಲ್ಲಾ ನಿಭಾಯಿಸುವ ಶಕ್ತಿ ಇದೆ ಎಂದು ಹೇಳುತ್ತಾ ಹೋದರು ಪ್ರೇಮ್.

ಧ್ರುವ ಸರ್ಜಾ ಕೇವಲ 21 ದಿನದಲ್ಲಿ 18 ಕೆ.ಜಿ. ತೂಕ ಕಡಿಮೆ ಮಾಡಿಕೊಂಡು ಈ ಚಿತ್ರದ ಸಲುವಾಗಿ ಬಹಳವೇ ಶ್ರಮ ಹಾಕಿದ್ದಾರೆ. ಅವರ ತ್ಯಾಗ ಮನೋಭಾವ ಬಹಳ ದೊಡ್ಡದು ಎಂದರು.

‘ನಾನು ನನ್ನ ಅಭಿಮಾನಿಗಳನ್ನು ರಂಜಿಸಲು ಎಂತಹ ತೊಂದರೆಯನ್ನು ಕೂಡ ಎದುರಿಸಲು ಸಿದ್ಧವಾಗಿರುವೆ’ ಎಂದು ಇದೇ ಸಂದರ್ಭದಲ್ಲಿ ಗಟ್ಟಿಯಾಗಿ ಹೇಳಿದರು ಧ್ರುವಸರ್ಜಾ.

ಈ ಸಿನಿಮಾದ ವ್ಯಾಪಾರಕ್ಕೆ ಇನ್ನು ತೆರೆದುಕೊಂಡಿಲ್ಲ; ಆದರೆ ಆಡಿಯೋ ಹಕ್ಕುಗಳು ದೊಡ್ಡ ಮಟ್ಟಕ್ಕೆ ಮಾರಾಟವಾಗಿದೆ. ನಿಮಗೆ ಬೇಕಾದರೆ ಒಪ್ಪಂದದ ದಾಖಲೆ ಮುಂದಿಡುವೆ ಎಂದರು ಕಾರ್ಯಕಾರಿ ನಿರ್ಮಾಪಕ ಸುಪ್ರೀತ್.

ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ ಯಲ್ಲಿ ಸಂಜಯ್‌ದತ್ ಧಕ್ ದೇವನಾಗಿ ಮಿಂಚಿದ್ದಾರೆ. ಅಲ್ಲದೆ ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

70 ರ ದಶಕದಲ್ಲಿ ನಡೆಯುವ ಕಥೆಯ ಚಿತ್ರೀಕರಣದ ಸಲುವಾಗಿ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್‌ನ್ನು ಹಾಕಿ ಚಿತ್ರೀಕರಿಸಲಾಗಿದೆ.

ಹಾಡುಗಳು ವರ್ಣರಂಜಿತ ಮತ್ತು ಅದ್ದೂರಿ ಎಂಬುದರಲ್ಲಿ ಸಂಶಯವೇ ಇಲ್ಲ. ಅರ್ಜುನ್ ಜನ್ಯ 200 ವಿಶೇಷ ಸಂಗೀತಗಾರರನ್ನು ಕಲೆ ಹಾಕಿ ಹಾಡುಗಳನ್ನು ಸಂಯೋಜನೆ ಮಾಡಿದ್ದು, ಆರ್ಕೇಸ್ಟ್ರಾ ವಿಶೇಷ ನೆಲೆಯಲ್ಲಿ ದಾಖಲೆ ಮಾಡಿದೆ.

ಹಾಡುಗಳ ಸಲುವಾಗಿ ಆರು ನೃತ್ಯ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಚಿತ್ರದ ನಾಯಕಿಯಾಗಿದ್ದು, ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರವು ಮುಂದಿನ ವರ್ಷದ ಯುಗಾದಿ ಹೊತ್ತಿಗೆ ತೆರೆಕಾಣಲಿದೆ ಎಂಬ ವಿವರಗಳು ಬಂದವು.

Social Share :

ಆರ್.ಚಂದ್ರು ಸ್ಟುಡಿಯೋಸ್ ಚಿತ್ರ ಫಾದರ್ ಮೋಷನ್ ಪೋಸ್ಟರ್..

Social Share :

ಕನ್ನಡದ ಸಾಹಸಿ ನಿರ್ಮಾಪಕರ ಸಾಲಿಗೆ ಪ್ರವೇಶ ಪಡೆದಿರುವ ಆರ್.ಚಂದ್ರು ಈಗ ಮತ್ತಷ್ಟು ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದಾರೆ.

ಅವರು ಘೋಷಣೆ ಮಾಡಿದಂತೆ ಆರು ಚಿತ್ರಗಳ ನಿರ್ಮಾಣದ ಕಾರ್ಯಕ್ಕೆ ವೇಗವನ್ನು ನೀಡಿದ ಖುಷಿಯಲ್ಲಿ ಬೀಗುತ್ತಿದ್ದಾರೆ.

ಏಕೆಂದರೆ ಮೊದಲ ಚಿತ್ರ ‘ಫಾದರ್’ ಚಿತ್ರೀಕರಣದ ಕೆಲಸಗಳು ಮುಗಿದಿದ್ದು, ಚಿತ್ರದ ಬಗ್ಗೆ ಅಪಾರ ಭರವಸೆಯ ನೆಲೆಯಲ್ಲಿ ಉಳಿದ ಕೆಲಸಗಳು ನಡೆಯುತ್ತಿವೆ.

ಈ ಚಿತ್ರದ ಪ್ರಚಾರದ ಭಾಗವಾಗಿ ಈಚೆಗೆ ನಡೆದ ಅದ್ದೂರಿ ಕಾರ್ಯಕ್ರಮ ದಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಂಡಿದ್ದು, ಅದೀಗ ತೀವ್ರ ಕುತೂಹಲದ ವಿಷಯವಾಗಿ ಮಾರ್ಪಟ್ಟಿದೆ.

ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ತಂದೆ ಪಾತ್ರದಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ರೈ ಮತ್ತು ಡಾರ್ಲಿಂಗ್ ಕೃಷ್ಣ ಅವರ ಸಹಜ ನಟನೆಯ ಸುತ್ತ ಆವರಿಸಿರುವ ಸಂಚಲನೆ ಇದಾಗಿದೆ.

ಆರ್.ಚಂದ್ರು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಚಿತ್ರದ ಆಶಯಗಳನ್ನು ಮತ್ತು ಆರ್.ಚಂದ್ರು ಅವರ ಕೆಚ್ಚೆದೆಯ ಸವಾಲುಗಳನ್ನು ಅವರು ಕೊಂಡಾಡಿದರು.

ಚಂದ್ರು ಅವರ ಹಿತೈಷಿಯಾಗಿರುವ ಹಿರಿಯ ರಾಜಕಾರಣಿ ಮತ್ತು ಸರ್ಕಾರದ ಗ್ಯಾರಟಿ ಸಮಿತಿ ಅಧ್ಯಕ್ಷರಾಗಿರುವ ಎಚ್.ಎಂ.ರೇವಣ್ಣ, ನಟ ಅನೂಪ್ ಹಾಗೂ ಆನಂದ್ ಆಡಿಯೋ ಶ್ಯಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ವಿಶೇಷ ವಾಗಿತ್ತು.

ಪತ್ರಕರ್ತರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಚಿತ್ರತಂಡ ಫಾದರ್ ಚಿತ್ರದ ಹೆಮ್ಮೆಯ ಆಶಯಗಳನ್ನು ವಿವರಿಸಿತು. ಆರ್.ಸಿ.ಸ್ಟುಡಿಯೋಸ್ ಚಿತ್ರಗಳ ನಿರ್ಮಾಣದ ವಿಷಯದಲ್ಲಿ ವೇಗ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ವಿವರಿಸಿದರು ಆರ್.ಚಂದ್ರು.

ಬರಿಗೈಯಲ್ಲಿ ಬೆಂಗಳೂರಿಗೆ ಬಂದು ನೂರು ಕೋಟಿ ಸಿನಿಮಾ (ಕಬ್ಜ) ಮಾಡುವ ಮಟ್ಟಕ್ಕೆ ಬೆಳೆಯುವುದು ಹೇಗೆ ಸಾಧ್ಯವಾಯಿತು ಎಂಬುದು ನನಗೇ ಅಚ್ಚರಿಯಾಗಿದೆ. ಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ 12 ಚಿತ್ರಗಳು ನಿರ್ಮಾಣವಾದವು. ನಂತರ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾಗಳನ್ನು ಮಾಡುವ ಅದಮ್ಯ ಇಚ್ಛೆಯಿಂದ ಆರ್.ಸಿ.ಸ್ಟುಡಿಯೋಸ್ ಹುಟ್ಟು ಹಾಕಲಾಗಿದೆ ಎಂದು ವಿವರಿಸಿದರು ಆರ್.ಚಂದ್ರು.

ಅಪ್ಪ ಮಗನ ಬಾಂಧವ್ಯದ ವಿಷಯದಲ್ಲಿ ಹೊಸತನವನ್ನು ಕಾಯ್ದುಕೊಳ್ಳಲಾಗಿದೆ. ಡಾರ್ಲಿಂಗ್ ಕೃಷ್ಣ ಇಲ್ಲಿ ಬೇರೆಯದೇ ಆದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ವಿವರಗಳು ಬಂದವು.

‘ಫಾದರ್’ ಚಿತ್ರ ಮಾಡುವಾಗಲೇ ಫಾದರ್ ಆಗುವ ಯೋಗ ಬಂದಿದ್ದು, ಆಕಸ್ಮಿಕ ಮತ್ತು ಪುಣ್ಯದಿಂದ ಇರಬಹುದು ಎಂದರು ಡಾರ್ಲಿಂಗ್ ಕೃಷ್ಣ. ಅಮೃತಾ ಅಯ್ಯಂಗಾರ್ ಕೂಡ ತಮ್ಮ ಪಾತ್ರದ ಚಿತ್ರತಂಡದ ಸಹಕಾರಗಳ ಕುರಿತು ಮಾತನಾಡಿದರು.

ಪ್ರಕಾಶ್ ರೈ ಅವರ ಪಾತ್ರಕ್ಕೆ ಬೇರೆಯದೇ ಆದ ನೆಲೆ ಇದೆ. ಇಲ್ಲಿಯವರೆಗಿನ ಅವರ ಪಾತ್ರಗಳ ಹೆಚ್ಚುಗಾರಿಕೆಯ ಸಮಕ್ಕೆ ಈ ಪಾತ್ರ ಬಂದು ನಿಲ್ಲಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ನಿರ್ದೇಶಕ ರಾಜ್ ಮೋಹನ್, ನಟ ನಾಗ್ ಭೂಷಣ್, ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ಛಾಯಾಗ್ರಾಹಕ ಸುಜ್ಞಾನ್, ಸಾಹಿತಿ ಮಂಜುನಾಥ್ ಮಾಗೋದಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Social Share :

ಮನೆ ಮಂದಿಗೆ ವಿಶೇಷ ಮನರಂಜನೆ ಪ್ರೊಲುಡೋ ಸ್ಟಾರ್ ಲೀಗ್ ಆಟ..

Social Share :

* ಜನವರಿಯಲ್ಲಿ ಸುದ್ದಿ‌ಮಾಧ್ಯಮದ ಚಾನೆಲ್ ನಲ್ಲಿ *

*ಹಿರಿತೆರೆ ಹಾಗೂ ಕಿರುತೆರೆ ಕಲಾವಿದರು ಭಾಗಿ*

ಕಲರ್ ಕಲರ್ ವಸ್ತ್ರ ವಿನ್ಯಾಸದಲ್ಲಿ ಸುಂದರ ರೂಪದರ್ಶಿಯರು ಪಾನ್ ಗಳಾಗಿ ಭಾಗವಹಿಸುವ ವಿಶಿಷ್ಟತೆ ಕಾಣುವ ಆಟವೇ ಪ್ರೋ ಲುಡೋ ಸ್ಟಾರ್ ಲೀಗ್ ಪಂದ್ಯಾವಳಿ.

ರಿಯಾಲಿಟಿ ಶೋಗಳು ಮತ್ತು ಕ್ರೀಡಾ ಲೀಗ್‌ಗಳ ಈ ಜಮಾನಾದಲ್ಲಿ ಇದೇ ಮೊದಲ ಬಾರಿಗೆ ‘ಪ್ರೊ ಲುಡೋ ಸ್ಟಾರ್ ಲೀಗ್’ ಒಂದು ವಿಶೇಷ ಮನರಂಜನಾ ಕ್ರೀಡೆಯಾಗಿ ಹೊರಹೊಮ್ಮುತ್ತಿದೆ.

ಜನವರಿಯಲ್ಲಿ ಆರಂಭವಾಗಲಿರುವ ಈ ಕ್ರೀಡೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಆಯೋಜಕರು, ನಿರೂಪಕರು ಹಾಗೂ ಆಟಗಾರರು ಮಾತನಾಡಿದರು.

ಆಸ್ತ್ರ ಪ್ರೊಡಕ್ಷನ್ಸ್ ನ ಹಾಗೂ ಮಂಗಳೂರು ಮೂಲದ ಲಂಚು ಲಾಲ್ ಈ ಲೀಗ್ ನ ಆಯೋಜಕರಾಗಿದ್ದು, ಸುದೇಶ್ ಭಂಡಾರಿ ನಿರ್ದೇಶಕರು ಹಾಗೂ ಅಜ್ಫರ್ ರಜಾಕ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.

ಇದೇ ಮೊದಲ ಬಾರಿಗೆ 40×40 ಚದರ ಅಡಿಯ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಲುಡೋ ಆಟ ಅಷ್ಟೇ ಆಕರ್ಷಕವಾಗಿರಲಿದೆ. ಈ ಲೀಗ್ ನಲ್ಲಿ ಒಟ್ಟು ಎಂಟು ತಂಡಗಳಿದ್ದು, ಸಿನಿಮಾ ಮತ್ತು ಕಿರುತೆರೆಯಲ್ಲಿ ಮೋಡಿ ಮಾಡಿದ 16 ತಾರೆಯರು ಈ ಎಂಟು ತಂಡಗಳಲ್ಲಿ
ಆಡಲಿದ್ದಾರೆ.

ಇವರಲ್ಲದೆ 16 ರೂಪದರ್ಶಿಯರು ಆಟದ ವಿಶೇಷ ಆಕರ್ಷಣೆಯಾಗಿ ಇರಲಿದ್ದಾರೆ. ಅರುಣ್ ಹರಿಹರನ್ ಮತ್ತು ಜಾಹ್ನವಿ ಈ ಲುಡೋ ಸ್ಟಾರ್‌ ಲೀಗ್‌ನ ಆಂಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರತಿ ಪಂದ್ಯಕ್ಕೂ ಮೊದಲು ಮತ್ತು ನಂತರ ಆಟಗಾರರೊಂದಿಗೆ ಆಕರ್ಷಕವಾದ ಕಾಮೆಂಟರಿ, ಉತ್ಸಾಹಭರಿತ ಸಂವಾದಗಳೊಂದಿಗೆ ವೀಕ್ಷಕರನ್ನು ಈ ಜೋಡಿ ಆಕರ್ಷಿಸಲಿದೆ.

ಡೈಸ್ ಹಾಕಿದಾಗ ಕಾಯಿನ್ ಬದಲು ಕಾಯಿನ್ ಗರ್ಲ್ಸ್ ಮೂವ್ ಆಗಲಿದ್ದಾರೆ ಎಂಬುದೇ ಈ ಸ್ಪರ್ಧೆಯ ವಿಶೇಷ. ಮಾಮೂಲಿ ಲುಡೋ ಆಟದ ನಿಯಮಗಳಿಗಿಂತ ಇಲ್ಲಿ ಬೇರೆ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂಬ ವಿವರಗಳು ಬಂದವು.

ಹದಿನೈದು ದಿನಗಳ ಚಿತ್ರೀಕರಣ ನಡೆಯಲಿದೆ. ಎಂಟು ತಂಡಗಳ ವಿವರ ಹಾಗೂ ಅದರಲ್ಲಿ ಆಡುವ ಸ್ಟಾರ್ ಆಟಗಾರರ ಹೆಸರುಗಳನ್ನು ಈ ಕೆಳಗೆ ನೀಡಲಾಗಿದೆ.

1) ಪ್ರೌಡ್‌ ತುಳುವರು – ನವೀನ್ ಡಿ ಪಡೀಲ್ ಮತ್ತು ಸುಂದರ್ ರೈ ಮಂದಾರ
2) ಮಿಮಿಕ್ರಿ ಮ್ಯಾಜಿಕ್ – ಮಿಮಿಕ್ರಿ ಗೋಪಿ ಮತ್ತು ವಿನುತ
3) ಟ್ವಿನ್‌ ಸ್ಟಾರ್ಸ್‌- ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ
4) ದಿ ಪವರ್ ಕಪಲ್ – ತುಕಾಲಿ ಸಂತೋಷ್ ಮತ್ತು ಮಾನಸ ಸಂತೋಷ್
5) ಲಾಫ್ಟರ್ ಲೆಜೆಂಡ್ಸ್ – ಮಂಜು ಪಾವಗಡ ಮತ್ತು ಹುಲಿ ಕಾರ್ತಿಕ್
6) ಮಲೆನಾಡು ಕ್ವೀನ್ಸ್ – ಚಂದನ ಗೌಡ ಮತ್ತು ಅಮೃತಾ
7) ಗೌಡ ವಾರಿಯರ್ಸ್ – ಕೆಂಪೇಗೌಡ ಮತ್ತು ಮಾನ್ಯ ಗೌಡ
8) ದಿ ಡ್ರೀಮರ್ಸ್ – ಸೀತಾರಾಮ್ ಮತ್ತು ಸಾಕ್ಷಿ ಮೇಘನ.

ಪ್ರೋ ಲುಡೋ ಸ್ಟಾರ್ ಲೀಗ್ ಬಗ್ಗೆ ನಿರ್ದೇಶಕ ಸುದೇಶ್ ಭಂಡಾರಿ ಮಾಹಿತಿ ನೀಡಿದರು. ನಿರ್ಮಾಪಕ ಲಂಚುಲಾಲ್, ಲೀಗ್ ನಲ್ಲಿ ಪಾಲ್ಗೊಳ್ಳುತ್ತಿರುವ ಕಲಾವಿದರಾದ ಕೆಂಪೇಗೌಡ, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ಮಾನ್ಯ ಗೌಡ, ಸೀತರಾಮ, ಚಂದನ ಗೌಡ, ಸಾಕ್ಷಿ ಮೇಘನಾ ಉಪಸ್ಥಿತರಿದ್ದರು.

Social Share :

ಯುಐ ಗೆ ಹೆಚ್ಚಿದ ಕುತೂಹಲ ಭಾರತೀಯ ಚಿತ್ರರಂಗ ಬೆಂಬಲ

Social Share :

ಬುದ್ಧಿವಂತ ಉಪೇಂದ್ರ ದೂರದೃಷ್ಟಿ ಇಟ್ಟು ಮಾಡುವ ಚಿತ್ರಗಳು ಎಂದಿಗೂ ದಾಖಲೆ ನಿರ್ಮಿಸುತ್ತವೆ..

ಇದೀಗ ‘ಯು ಐ’ ಚಿತ್ರದ ‘ವಾರ್ನರ್’ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದು, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸ್ಟಾರ್ ಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಈಗಾಗಲೇ ಅಮಿರ್ ಖಾನ್, ರಜನಿಕಾಂತ್ ಅವರಿಂದ ಪ್ರಶಂಸೆ ಪಡೆದಿರುವ ಚಿತ್ರದ ಕುರಿತು ಮತ್ತೊಬ್ಬ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ‘ಪುಷ್ಪ-2’ ಖ್ಯಾತಿಯ ಅಲ್ಲು ಅರ್ಜುನ್. ಇಂದು ಅಂದರೆ ಶನಿವಾರ ನಟ, ನಿರ್ದೇಶಕ ಉಪೇಂದ್ರ ಹಾಗೂ ಯುಐ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಾಗಿರುವ ಲಹರಿ ವೇಲು ಅವರು ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿದ್ದರು.

ಹೀಗೊಂದು ಸೌಹಾರ್ದದ ಭೇಟಿ ಎಂದು ಇದು ಬಣ್ಣಿಸಲ್ಪಟ್ಟಿತ್ತಾದರೂ ಅಲ್ಲು ಅರ್ಜುನ್ ಯುಐ ತಂಡಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು.

ನಾಳಿನ ಜನ ಸಮೂಹ ಮತ್ತು ಸಮಸ್ಯೆಗಳ ಕುರಿತಾಗಿ ಇರುವ ಯುಐ ಚಿತ್ರದ ವಾರ್ನರ್ ಗೆ ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿದೆ. ಈಚೆಗಷ್ಟೇ ಬಾಲಿವುಡ್ ನ ಪ್ರಖ್ಯಾತ ನಟ ಅಮಿರ್ ಖಾನ್ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

2040ರ ಸಂದರ್ಭದಲ್ಲಿ ಭಾರತದ ಜನರ ವರ್ತನೆ ಮತ್ತು ಸಂದರ್ಭ ಹೇಗಿರುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲಿರುವ ಟ್ರೈಲರ್ ದೇಶದಾದ್ಯಂತ ಈಗ ಸದ್ದು ಮಾಡುತ್ತಿದೆ.

Social Share :

ಝೀ ಕನ್ನಡದಲ್ಲಿ ಸರಿಗಮಪ ಶುರು ಈ ಬಾರಿ ಮಹಾ ಗುರುಗಳು ಇರಲ್ಲ

Social Share :

* ಡಿಸೆಂಬರ್ 14 ರಿಂದ ಆರಂಭ *

* ವಾರಾಂತ್ಯದ ಎರಡು ಶೋಗಳು *

ಕನ್ನಡದ ಟಿ.ವಿ.ರಿಯಾಲಿಟಿ ಶೋ ಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ‘ಸರಿಗಮಪ ಹಾಡುಗಳ ಪ್ರದರ್ಶನ ವೇದಿಕೆ’ ಮತ್ತೆ ಚಾಲನೆಗೊಳ್ಳುತ್ತಿದ್ದು, ಝೀ ಕನ್ನಡ ವಾಹಿನಿಯ ಈ ಬಾರಿಯ ಶೋ ನಲ್ಲಿ ಮಹಾ ಗುರುಗಳು ಖ್ಯಾತಿಯ ಹಂಸಲೇಖ ಅವರು ಪಾಲ್ಗೊಳ್ಳುತ್ತಿಲ್ಲ..

ಬದಲಿಗೆ ಒಂದೆರಡು ಸೀಸನ್ ಗಳಿಂದ ಹೊರಗಿದ್ದ ಗಾಯಕ ರಾಜೇಶ್ ಕೃಷ್ಣನ್ ಮತ್ತೆ ಸೇರ್ಪಡೆಗೊಂಡಿದ್ದು, ಅವರ ಜೊತೆ ಎಂದಿನಂತೆ ಗಾಯಕ ವಿಜಯ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿ ಇರಲಿದ್ದಾರೆ. ಎಂದಿನಂತೆ ಅನುಶ್ರೀ ಶೋ ನಿರೂಪಕಿ.

ಬುಧವಾರ ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಲಾಯಿತು. ವಿಜಯ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಅನುಶ್ರೀ ಹಾಗೂ ವಾಹಿನಿಯ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಈಗಾಗಲೇ ಸರಿಗಮಪ ಶೋ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಜಿತ್ ಹೆಗ್ಡೆ, ಪೃಥ್ವಿಭಟ್, ಜಸ್ ಕರಣ್ ಸಿಂಗ್, ಐಶ್ವರ್ಯ ರಂಗರಾಜನ್, ಆಶಾಭಟ್, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿ ಶಾಸ್ತ್ರೀ, ಚೆನ್ನಪ್ಪ, ಸುನೀಲ್ ಗುಜಗೊಂಡ, ಸುಹಾನಾ, ಕಂಬದ ರಂಗಯ್ಯ, ಇಂಪನಾ ಜಯರಾಜ್ ಹೀಗೆ ಪ್ರತಿಭಾವಂತ ಗಾಯಕರನ್ನ ಕೊಡುಗೆಯಾಗಿ ನೀಡಲಾಗಿದೆ.

ಈ ಹೊಸ ಆವೃತ್ತಿಯಲ್ಲಿ ಬಹಳಷ್ಟು ವಿಶೇಷಗಳಿವೆ. 6 ರಿಂದ 60 ವರ್ಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಗಾಯನ ಪ್ರಕಾರವಲ್ಲದೆ ಇತರ ಪ್ರತಿಭಾ ಪ್ರದರ್ಶಗಳು ನಡೆಯಲಿವೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ಹಾಗೂ ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ವೀಕ್ಷಕರು ವಾಹಿನಿಯ ಇನ್ಸ್ಟಾಗ್ರಾಂನ ಅಧಿಕೃತ ಪೇಜ್ ನಲ್ಲಿನ ಆಡಿಷನ್ ವೀಡಿಯೋಗಳನ್ನು ಲೈಕ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ ಎಂಬ ವಿವರಗಳು ಬಂದವು.

ಇದೇ ಡಿಸೆಂಬರ್ 14 ರಿಂದ ಸಂಜೆ 7:30ಕ್ಕೆ ಶನಿವಾರ ಹಾಗೂ ಭಾನುವಾರ ಝೀ ಕನ್ನಡ ವಾಹಿನಿಯಲ್ಲಿ ಈ ‘ಸರಿಗಮಪ ಗಾಯನ ರಿಯಾಲಿಟಿ ಶೋ’ ಪ್ರಸಾರವಾಗಲಿದೆ.

Social Share :

ಉಪೇಂದ್ರ ಯುಐ ಟ್ರೈಲರ್ ನೋಡಿ ಅಮಿರ್ ಖಾನ್ ಸುಸ್ತಾದರು..

Social Share :

ಬಾಲಿವುಡ್ ನ ಹೆಸರಾಂತ ನಟ ಅಮಿರ್ ಖಾನ್ ಕನ್ನಡ ಚಿತ್ರದ ಟ್ರೈಲರ್ ನೋಡಿ ಸುಸ್ತಾಗಿದ್ದಾರೆ.

ಅದು ಉಪೇಂದ್ರ ಯುಐ..!

ಈಚೆಗೆ ಅಮಿರ್ ಖಾನ್ ಅವರು ಉಪೇಂದ್ರ ಅವರಿಗೆ ಶುಭ ಹಾರೈಸಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

‘ನಾನು ಇಲ್ಲಿ ಒಬ್ಬರ ದೊಡ್ಡ ಅಭಿಮಾನಿ. ಅವರ ಸಿನಿಮಾ ಟ್ರೈಲರ್ ನೋಡಿ ಬೆಚ್ಚಿ ಬಿದ್ದಿರುವೆ. ಅಬ್ಬಾ ಅದೆಂಥಹ ಆಲೋಚನೆ..’ ಎಂದು ಉದ್ಘರಿಸಿರುವ ಭಾರತೀಯ ಚಿತ್ರರಂಗದ ಜನಪ್ರಿಯ ನಟ ಅಮಿರ್ ಖಾನ್ ಇದೇ 20ರಂದು ಬಿಡುಗಡೆ ಕಾಣುತ್ತಿರುವ ‘ಯುಐ’ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ‌.

ಈ ಚಿತ್ರ ಬಾಲಿವುಡ್ ನಲ್ಲಿ ಕೂಡ ಹೆಸರು ಮಾಡಲಿದೆ ಎಂದು ಭವಿಷ್ಯ ನುಡಿದಿರುವ ಅಮಿರ್ ಖಾನ್, ನಿರ್ದೇಶಕ, ನಟ ಉಪೇಂದ್ರ ಅವರ ಭುಜ ತಟ್ಟಿ ಹಾರೈಸಿದ್ದಾರೆ.

ಉಪೇಂದ್ರ ಅವರು ನನ್ನ ಅತ್ಯುತ್ತಮ ‌ಸ್ನೇಹಿತ. ಅವರಿಗೆ ಚಿತ್ರಕ್ಕೆ ಒಳಿತಾಗಲಿ ಎಂದು ಅಮಿರ್ ಖಾನ್ ಹಾರೈಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ‘ಯುಐ’ ಟ್ರೈಲರ್ ಈಗಾಗಲೇ ಅತ್ಯಂತ ಕುತೂಹಲ ಮೂಡಿಸಿದ್ದು, 2040 ರ ಹೊಸ್ತಿಲಲ್ಲಿ ದೇಶದಲ್ಲಿ ಯಾವ ಪರಿಸ್ಥಿತಿ ಇರುತ್ತದೆ ಎಂಬ ಪ್ರಶ್ನಾರ್ಥಕ ಹುಳ ಬಿಟ್ಟಿದ್ದಾರೆ ಉಪೇಂದ್ರ ಎಂಬುದು ಮಾತು.

ಬಹಳ ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದ ಉಪೇಂದ್ರ ಅವರು ಆಧುನಿಕ ಮತ್ತು ಹೊಸತನದ ಎಲ್ಲಾ ತಂತ್ರಜ್ಞಾನ ಸಮರ್ಪಕ ಬಳಕೆ ಮಾಡಿ ಮಾಡಿರುವ ಚಿತ್ರ ದೂರದೃಷ್ಟಿ ಮತ್ತು ಮನರಂಜನಾತ್ಮಕ ಆಶಯಗಳನ್ನು ಹೊಂದಿದೆ ಎಂದು ನಂಬಲಾಗಿದೆ.

ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಮೂಹ ಸಂಸ್ಥೆ ಜಿ.ಮನೋಹರನ್ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಲಹರಿ ವೇಲು ಮತ್ತು ನವೀನ್ ಮನೋಹರನ್ ಚಿತ್ರದ ರೂವಾರಿಗಳಲ್ಲಿ ಪ್ರಮುಖರು.

ಇದೇ ಡಿಸೆಂಬರ್ 20 ರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರದ ‘ವಾರ್ನರ್’ ಬಿಡುಗಡೆ ಕಂಡಾಗಿನಿಂದ ಜನರ ಕುತೂಹಲ ಹೆಚ್ಚಾಗಿದೆ.

Social Share :

ಪ್ಯಾನ್ ಇಂಡಿಯಾ ಆದ ಕೋರ ಸುನಾಮಿ ಕಿಟ್ಟಿಗೆ ಒಲಿದ ಅದೃಷ್ಟ

Social Share :

ಬಹಳ ವರ್ಷಗಳ ಗ್ಯಾಪ್ ನ ಬಳಿಕ ಒರಟ ನಿರ್ದೇಶಕ ಒರಟ ಶ್ರೀ ನಿರ್ದೇಶನ ಮಾಡಿರುವ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಪರಭಾಷೆಯಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿರುವುದು ಹೆಗ್ಗಳಿಕೆ.

ಅದೇ ಕೋರ..!

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ ಈ ಅದ್ದೂರಿ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ರಿಯಾಲಿಟಿ ಶೋ ಹೀರೋ ಸುನಾಮಿ ಕಿಟ್ಟಿ.

ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ ಸಾಹಸ ಮೆರೆದಿರುವ ಈ ಚಿತ್ರದಲ್ಲಿ ವಿಶೇಷತೆಗಳಿಗೆ ಲೆಕ್ಕವೇ ಇಲ್ಲ. ಹಾಗಾಗಿ ಚಿತ್ರತಂಡ ಖುಷಿಯಿಂದ ತೇಲಾಡಿದೆ.

ಈಚೆಗೆ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಮೆರೆದ ಸಾಹಸಗಳನ್ನು ಪ್ರತಿಯೊಬ್ಬರೂ ಮೆಲುಕು ಹಾಕಿದ್ದು ವಿಶೇಷ. ಬಿಡುಗಡೆ ಕಂಡಿರುವ ‘ಒಪ್ಪಿಕೊಂಡವಳು..’ ಮಿಲಿಯನ್ ವೀಕ್ಷಣೆ ಪಡೆದಿದೆ ಎಂದೂ ಸಂಭ್ರಮಿಸಿತು ಚಿತ್ರತಂಡ.

ಸಾಹಿತಿ ರೇವಣ್ಣ ನಾಯಕ್ ಬರೆದಿರುವ ಹಾಗೂ ಹೇಮಂತ್ ಕುಮಾರ್ ಸಂಗೀತ ನೀಡಿರುವ ‘ಒಪ್ಪಿಕೊಂಡಳು’ ಹಾಡು ಇತ್ತೀಚಿಗೆ ರಬಕವಿಯಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಬಿಡುಗಡೆ ಕಂಡಿದ್ದು ವಿಶೇಷ.

ಕೋರ ಎಂಬುದು ಬುಡಕಟ್ಟು ಸಮುದಾಯದ ಹೆಸರು. ಕಥೆ ದಟ್ಟ ಅರಣ್ಯದಲ್ಲಿ ನಡೆಯುತ್ತದೆ. ಹಾಗಾಗಿ ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶಗಳಲ್ಲಿ ಅನುಕೂಲತೆ ಕಡಿಮೆ ಇದ್ದರೂ ಕಷ್ಟಪಟ್ಟು ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರ ನೀಡಿದರು ನಿರ್ಮಾಪಕ ಪಿ.ಮೂರ್ತಿ.

ಜನವರಿ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ಈಗಾಗಾಲೇ ಚಿತ್ರದ ತೆಲುಗು, ತಮಿಳು ರಿಮೇಕ್ ಹಕ್ಕುಗಳು ಮಾರಾಟವಾಗಿವೆ. ಆಂಧ್ರದಲ್ಲಿ ಬಾಲಾಜಿ ಅವರು ವಿತರಣೆ ಮಾಡುತ್ತಿದ್ದು, ತಮಿಳುನಲ್ಲಿಯೂ ಚಿತ್ರವನ್ನು ಹೆಸರಾಂತ ವಿತರಕರೇ ಮಾಡುತ್ತಿದ್ದಾರೆ ಎಂಬ ವಿವರ ಕೊಟ್ಟರು.

ಒಂದು ದೊಡ್ಡ ಗ್ಯಾಪ್ ನ ಬಳಿಕ ಈ ಚಿತ್ರ ನಿರ್ದೇಶನ ಮಾಡಿರುವೆ. ಇಲ್ಲಿ ಸುನಾಮಿ ಕಿಟ್ಟಿ ಧೈರ್ಯವಂತಿಕೆ ಬಹಳ ದೊಡ್ಡದು. ಅದೇ ರೀತಿ ಹಣ ಹೂಡಿಕೆ ಮಾಡಿರುವ ಪಿ.ಮೂರ್ತಿ ಅವರ ಧೈರ್ಯ ಕೂಡ ದೊಡ್ಡದು ಎಂದರು ನಿರ್ದೇಶಕ ಒರಟ ಶ್ರೀ.

ಪತ್ರಕರ್ತರೂ ಆಗಿರುವ ಯತಿರಾಜ್ ಚಿತ್ರತಂಡದ ಸಾಹಸಗಳನ್ನು ವರ್ಣಿಸಿದರು. ಅದರಲ್ಲಿಯೂ ನಟಿ ಸೌಜನ್ಯ ಗರ್ಭಿಣಿಯಾಗಿ ಮತ್ತು ಮಗುವಿನ ತಾಯಿಯಾಗಿ ಅನುಭವಿಸಿದ ಕಷ್ಟದ ಸಂದರ್ಭಗಳನ್ನು ನೆನೆದರು.

ನಿರ್ಮಾಪಕ ಪಿ.ಮೂರ್ತಿ ಖಳನ ಪಾತ್ರವನ್ನು ನಿರ್ವಹಿಸಿದ್ದು, ಇತರ ಪಾತ್ರಗಳಲ್ಲಿ ಗಣೇಶ್ ರಾವ್, ಎಂ.ಕೆ.ಮಠ ಮೊದಲಾದವರು ಅಭಿನಯಿಸಿದ್ದು, ಅವರು ತಮ್ಮ ಅನುಭವಗಳನ್ನು ಹೇಳಿಕೊಂಡರು.

ಸುನಾಮಿ ಕಿಟ್ಟಿ ಜೋಡಿಯಾಗಿ ಚರಿಷ್ಮಾ ಕಾಣಿಸಿಕೊಂಡಿದ್ದು, ಸೌಜನ್ಯ ಅವರ ಪಾತ್ರಕ್ಕೆ ಎರಡು ಶೆಡ್ ಇದೆ ಎಂಬ ವಿವರಗಳು ಬಂದವು.

ಸಹ ನಿರ್ಮಾಪಕ ಚೆಲುವರಾಜು, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ರೇವಣ್ಣ ನಾಯಕ್, ಸಂಕಲನಕಾರ ಕೆ.ಗಿರೀಶ್ ಕುಮಾರ್ ಹಾಗೂ ತೆಲುಗು ವಿತರಕ ಬಾಲಾಜಿ ಚಿತ್ರದ ಕುರಿತು ಮಾತನಾಡಿದರು.

ನಟ ಒರಟ ಪ್ರಶಾಂತ್ ಚಿತ್ರತಂಡಕ್ಕೆ ಶುಭ ಕೋರಿದರು.

Social Share :

ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕನ್ನಡಿಗ ರಿಷಬ್ ಶೆಟ್ಟಿ..

Social Share :


ರಾಷ್ಟ್ರ ಪ್ರಶಸ್ತಿ ವಿಜೇತ ಸ್ಯಾಂಡಲ್ ವುಡ್ ನಟ, ನಿರ್ದೇಶಕ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಈಗ ಬಾಲಿವುಡ್ ನ ಮತ್ತೊಂದು ದೊಡ್ಡ ಸಿನಿಮಾದ ಭಾಗವಾಗಿದ್ದಾರೆ.

ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಹೆಸರು ‘ದಿ ಪ್ತೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’. ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರವನ್ನು ಬಾಲಿವುಡ್ ನ ಸಂದೀಪ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಜೊತೆಗೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಬ್ ಎದ್ದು ಕಾಣುತ್ತಿದ್ದಾರೆ.

ಸದ್ಯ ಈ ಐತಿಹಾಸಿಕ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಹಾಗೆಯೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಿದ್ದು, 2027ರ ಜನವರಿ 21 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ ಎಂದು ಚಿತ್ರತಂಡ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

Social Share :

ಸಿಲ್ಕ್‌ ಸ್ಮಿತಾ ಬಯೋಪಿಕ್‌ ಕ್ವೀನ್ ಆಫ್ ದಿ ಸೌತ್..

Social Share :

ಮಾದಕ ಮೈ ಮಾಟದಿಂದ ಹುಚ್ಚು ಹಿಡಿಸಿದ್ದ 90ರ ದಶಕದ ನಟಿ ಸಿಲ್ಕ್ ಸ್ಮಿತಾ ಅವರ ಹುಟ್ಟುಹಬ್ಬದ ದಿನ ಕಲಾ ರಸಿಕರು ಖುಷಿ ಪಡುವ ವಿಷಯವೊಂದು ಹೊರಬಿದ್ದಿದೆ.

ಅದೇನೆಂದರೆ ಆ ಮಹಾ ನಟಿಯ ಬಯೋಪಿಕ್ ನಿರ್ಮಾಣ ಮಾಡುವ ಆಶಯವನ್ನು ಸಂಸ್ಥೆಯೊಂದು ಪ್ರಕಟಿಸಿದ್ದು, ‘ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌’ ಎಂಬ ಹೆಸರಿನ ಚಿತ್ರವೀಗ ನಿರ್ಮಾಣವಾಗಲಿದೆ.

ಸ್ರ್ಟೀ ಸಿನಿಮಾಸ್ ಸಂಸ್ಥೆಯ ಹೆಸರಿನಲ್ಲಿ ಎಸ್‌.ಬಿ ವಿಜಯ್‌ ಅಮೃತ್‌ರಾಜ್‌ ಈ ಬಯೋಪಿಕ್ ನಿರ್ಮಾಣ ಮಾಡಲಿದ್ದು, ಜಯರಾಮ್ ಸಂಕರನ್ ಇದರ ನಿರ್ದೇಶಕ.

ದಕ್ಷಿಣ ಭಾರತದ ಹೆಸರಾಂತ ನಟಿ ಮತ್ತು ಡ್ಯಾನ್ಸರ್ ಸಿಲ್ಕ್ ಸ್ಮಿತಾ ಬದುಕಿನ ಹಾದಿಯನ್ನು ಪರಿಚಯಿಸುವ ಹಾಗೂ ಆಕೆ ಎದುರಿಸಿದ್ದ ಸವಾಲುಗಳನ್ನು ಚಿತ್ರರಸಿಕರ ಮುಂದಿಡುವ ಆಶಯ ನಿರ್ಮಾಣ ಸಂಸ್ಥೆಯದ್ದು.

ಸಿಲ್ಕ್ ಸ್ಮಿತಾ ಅವರ ಪಾತ್ರಕ್ಕೆ ನಟಿಯ ಆಯ್ಕೆಯೂ ನಡೆದಿದ್ದು, ಚಂದ್ರಿಕಾ ರವಿ ಈ ಪಾತ್ರವನ್ನು ನಿರ್ವಹಿಸುವ ಮಾಹಿತಿ ಹೊರ ಬಿದ್ದಿದೆ.

ಸಿಲ್ಕ್ ಸ್ಮಿತಾ ಅವರ ಜೀವನಗಾಥೆ ಆಧರಿಸಿ ಈಗಾಗಲೇ ‘ದರ್ಟಿ ಪಿಕ್ಚರ್’ ಹಾಗೂ ಇತರ ಚಿತ್ರಗಳು ನಿರ್ಮಾಣವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Social Share :