Snehapriya.com

June 9, 2025

ಸಿನಿಮಾ-ಗಾಸಿಪ್

ಸಂಜು ವೆಡ್ಸ್ ಗೀತಾ-2 ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಛಲವಾದಿ ಕುಮಾರ್

ನಿರ್ದೇಶನ : ನಾಗ್ ಶೇಖರ್

ಮನಮೋಹಕ ಚಿತ್ರಣದಲ್ಲಿ
ಕಾಣದ ಭಾವ ತೀವ್ರತೆ‌..

ಮನುಷ್ಯನಿಗೆ ಪ್ರೇಮಿಸುವಲ್ಲಿ ಇರುವಷ್ಟು ಮಜಾ ಮತ್ಯಾವುದರಲ್ಲಿಯೂ ಕಾಣುವುದು ಅಪರೂಪ. ಪ್ರೇಮ ಅಜರಾಮರ; ಪ್ರೇಮ ಮಧುರಾಕ್ಷರ. ಅದೂ ಗಟ್ಟಿ ಪ್ರೇಮವಾಗಿದ್ದಾಗ ಮಾತ್ರ.

ಕೆಲವೊಮ್ಮೆ ಪ್ರೇಮದಲ್ಲಿ ಕೃತಕತೆ ಇರುತ್ತದೆ. ಅಂತಹ ಪ್ರೇಮ ಕಿತ್ತು ಹೋಗುತ್ತದೆ. ಇನ್ನು ಕೆಲವೊಮ್ಮೆ ಪ್ರೇಮದ ಕಥೆ ಹೆಣೆಯುವಲ್ಲಿ ಕೃತಕತೆ ಕಾಣುತ್ತದೆ. ಅದು ಮನ ತಟ್ಟುವುದಿಲ್ಲ.

ಕೊನೆಯಲ್ಲಿ ಹೇಳಿರುವುದು ಈ ಚಿತ್ರಕ್ಕೆ ಅನ್ವಯ. ಪ್ರೇಮಕ್ಕೆ ಇರಬಹುದಾದ ಮೌನ ಸಂವೇದನೆ; ಭಾವನಾ ತೀವ್ರತೆ ಇರದೇ ಹೋದಾಗ ಆ ಕಥೆ ಆತ್ಮವಿಲ್ಲದ ದೇಹದಂತೆ..!

ಆದರೆ ಇಲ್ಲಿ ಕಣ್ತುಂಬಿ ಕೊಂಡಷ್ಟೂ ಅಪೂರ್ವ ದೃಶ್ಯಗಳ ಚಿತ್ರಣ.. ಕೇಳಿದಷ್ಟೂ ಇಂಪಾದ ಸಂಗೀತ.. ಎಲ್ಲವೂ ಇದ್ದರೂ ಭಾವಸ್ಪರ್ಶವಿಲ್ಲದ ಕಥೆ ಅದೇ ಕಾರಣಕ್ಕೆ ಸೊರಗುತ್ತದೆ..

ಸುಮಾರು 10 ವರ್ಷಗಳ ಹಿಂದೆ ತೆರೆ ಕಂಡಿದ್ದ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದ ನಾಗ್ ಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಸಂಗೀತ ಮತ್ತು ಭಾವ ತೀವ್ರತೆಗಳಲ್ಲಿ ಮುಳುಗೇಳುವಂತೆ ಮಾಡಿದ್ದ ಚಿತ್ರ.

ಆದರೆ ಅದರ ಮುಂದುವರಿಕೆ ಅಥವಾ ಮಾದರಿಯ ಭಾಗ 2ರಲ್ಲಿ ಕಾಣುವುದು ಭಾವ ತೀವ್ರತೆಯ ತೀವ್ರ ಕೊರತೆ..!

ಮದುವೆಯಾದ ದಂಪತಿಗಳ ವಿವಾಹ ವಾರ್ಷಿಕೋತ್ಸವ ಕಾರಣದಿಂದ ಆರಂಭವಾಗುವ ಕಥೆ. ಚಿತ್ರದ ಉದ್ದಕ್ಕೂ ಅದನ್ನೇ ಎಳೆದೊಯ್ಯುತ್ತದೆ. ಆಗರ್ಭ ಶ್ರೀಮಂತನ ಮಗಳು ನೇಕಾರ ವೃತ್ತಿಯ ಸಾಧಾರಣ ವ್ಯಕ್ತಿಯನ್ನು ಪ್ರೇಮಿಸುವ ಧಾಟಿಯೇ ನೂರಾರು ಪ್ರಶ್ನೆಗಳನ್ನು ಒಡ್ಡುತ್ತದೆ‌.

ನೇಯ್ಗೆ ಮಾಡುವ ವ್ಯಕ್ತಿ ಹೃದಯಾಂತರಾಳದಲ್ಲಿ ಮಾನವೀಯ ಅನುಕಂಪ ವ್ಯಕ್ತಪಡಿಸುವುದರಿಂದ ಗೀತಾ ಸಂಜು ನಡುವೆ ಪ್ರೇಮಾಂಕುರವಾಗಿ ನಂತರ ಮದುವೆಯಾಗಿ ಇಬ್ಬರೂ ಅತ್ಯುತ್ತಮ ಬದುಕು ಕಟ್ಟಿಕೊಳ್ಳುವುದು ಸರಿಯೇ..

ಆದರೆ ಸಂಜು ಬೆಳವಣಿಗೆಯ ದಾರಿಯಲ್ಲಿ ಇರಬೇಕಾದ ನೈಜತೆ ಅಥವಾ ಅದ್ಭುತಗಳು ನಿರೂಪಣೆಯಲ್ಲಿ ಕಾಣುವುದಿಲ್ಲ. ಶಿಡ್ಲಘಟ್ಟದ ರೇಷ್ಮೆ ಬೆಳೆ ಜಗತ್ತನ್ನು ಬೆಳಗುವ ಪರಿ ಹೇಗೆ ಎಂಬುದರ ವಿವರಣೆಗೆ ಗಮನವೇ ಹರಿಸದಿರುವುದು ಎದ್ದು ಕಾಣುತ್ತದೆ.

ಸಂಜು ಮತ್ತು ಗೀತಾ ಇಬ್ಬರ ವಸ್ತ್ರ ವಿನ್ಯಾಸ, ಹಿನ್ನೆಲೆಯ ದೃಶ್ಯ, ಸಂಗೀತದ ಕಾರಣದಿಂದ ಶ್ರೀಮಂತಿಕೆಯ ವೈಭವೀಕರಣ ಎದ್ದು ಕಾಣುತ್ತದೆ. ಆದರೆ ಇಲ್ಲಿ ಬೇಕಾಗಿರುವುದು ನೈಜ ಪ್ರೇಮ. ಹೃದಯದ ಬೆಸುಗೆ. ಅದೇ ಕಾಣುವುದಿಲ್ಲ. ಹಾಗಾಗಿ ಪ್ರೇಮಾರಾಹಿತ್ಯ ಸ್ಥಿತಿಯಲ್ಲಿ ಪ್ರೇಕ್ಷಕ ನಿರ್ಭಾವುಕ.

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಇಬ್ಬರು ನುರಿತ ಕಲಾವಿದರು. ಅವರಿಬ್ಬರ ನಟನೆ ಸಹಜವಾಗಿದೆ. ಶಿಡ್ಲಘಟ್ಟ ಪ್ರಾಂತೀಯ ಭಾಷೆಯಲ್ಲಿ ಮಾತನಾಡುವ ತಬಲಾನಾಣಿ ಪಾತ್ರ ಗಮನ ಸೆಳೆಯುತ್ತದೆ. ಸಾಧು ಕೋಕಿಲ ಮತ್ತು ರಂಗಾಯಣ ರಘು ಅವರಿಗೆ ಸಂಭಾಷಣೆಯೇ ಕೊರತೆಯಾಗಿರುವುದು ಅಚ್ಚರಿ.

ಇಷ್ಟಾದರೂ ‘ಮಳೆಯಂತೆ ಬಾ..’, ‘ಸಂಜು ಮತ್ತು ಗೀತಾ ಜೊತೆಗೆ..’ ಹಾಗೂ ಇತರ ಹಾಡುಗಳ ಸೊಗಸು ಹಿಡಿದಿಡುತ್ತದೆ. ಚಿತ್ರ ಮುಗಿದ ಮೇಲೂ ಗುನುಗುವಂತೆ ಮಾಡುತ್ತದೆ.

ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಸತ್ಯ ಹೆಗಡೆ ಕ್ಯಾಮೆರಾ ಸೊಗಸು. ಅದರ ಹಿಂದೆ ಕಲಾ ನಿರ್ದೇಶಕರ (ಅರುಣ್ ಸಾಗರ್) ನೈಪುಣ್ಯ. ಹಾಗೆಯೇ ಮಲೆನಾಡಿನ ಕವಿ ಕವಿರಾಜ್ ಅವರ ಪದಗಳ ಇಂಪು, ಶ್ರೀಧರ್ ಸಂಭ್ರಮ್ ಸಂಗೀತದ ಸಂಭ್ರಮ.

ಲವ್ ಸೆಕ್ಸ್ ದೋಖ ಇರುವ ಕಾಲಘಟ್ಟದಲ್ಲಿ 80ರ ದಶಕದ ಪವಿತ್ರ ಪ್ರೇಮ ಅಥವಾ ಅದಮ್ಯ ತ್ಯಾಗದ ಕಥೆ ಹೇಳಲು ಹೊರಟ ನಿರ್ದೇಶಕರ ಧೈರ್ಯ ಮೆಚ್ಚಲೇ ಬೇಕು.

ನಿರ್ದೇಶಕರು ಕಥೆಯ ಮೇಲೆ ಹಿಡಿತ ಸಾಧಿಸಿದ್ದರೆ ಒಂದು ಭಾವನಾತ್ಮಕ ನಿರೂಪಣೆ ಕಾಣಬಹುದಿತ್ತು ಎಂಬ ಅನಿಸಿಕೆ ಚಿತ್ರ ನೋಡಿ ಮುಗಿಸಿದ ಮೇಲೆ ಅನಿಸಿದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ..

Social Share :

ಸಂಜು ವೆಡ್ಸ್ ಗೀತಾ-2 ಬಿಡುಗಡೆಗೆ ನ್ಯಾಯಾಲಯದ ಅನುಮತಿ..

Social Share :

* ಜನವರಿ 17ಕ್ಕೆ ಚಿತ್ರ ಬಿಡುಗಡೆ *

ನಾಗ್ ಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತ-2’ ಚಿತ್ರದ ಬಿಡುಗಡೆಗಿದ್ದ ತೊಡಕು ನಿವಾರಣೆಗೊಂಡಿದ್ದು, ಇದೇ ವಾರ ಅಂದರೆ ಜನವರಿ 17ರಂದು ಚಿತ್ರ ಬಿಡುಗಡೆ ಕಾಣುತ್ತಿದೆ.

ಕಳೆದ ವಾರ (ಜನವರಿ 10)ರಂದು ಬಿಡುಗಡೆ ಕಾಣಬೇಕಿದ್ದ ‘ಸಂಜು ವೆಡ್ಸ್ ಗೀತ-2’ ಚಿತ್ರದ ಮೇಲಿದ್ದ ತಡೆಯಾಜ್ಞೆ ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರದ ಬಿಡುಗಡೆಗೆ ನ್ಯಾಯಾಲಯದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಈ ವಾರ (ಜನವರಿ 17) ಚಿತ್ರ ಬಿಡುಗಡೆ ಕಾಣುತ್ತಿದೆ.

‘ಸಂಜು ವೆಡ್ಸ್ ಗೀತ-2’ ನಿರ್ದೇಶಕ ನಾಗ್ ಶೇಖರ್ ಹಾಗೂ ತೆಲುಗು ನಿರ್ಮಾಪಕರ ನಡುವಿನ ಹಿಂದಿನ ಒಡಂಬಡಿಕೆ ಈ ತಡೆಯಾಜ್ಞೆಗೆ ಕಾರಣವಾಗಿತ್ತು ಎಂಬುದನ್ನು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ವಿವರ ನೀಡಿತು.

ನಾಗ್ ಶೇಖರ್ ಮೂವೀಸ್ ಎಂಬುದನ್ನು ಉಲ್ಲೇಖಿದಿದ್ದು, ಇಷ್ಟಕ್ಕೆಲ್ಲಾ ಕಾರವಾಯಿತು. ಬಳಿಕ ನಿರ್ಮಾಪಕ ಛಲವಾದಿ ಕುಮಾರ್ ಹೈದ್ರಾಬಾದ್ ಗೆ ತೆರಳಿ ನಾನೊಬ್ಬನೇ ನಿರ್ಮಾಪಕ ಎಂದು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ್ದೂ ಅಲ್ಲದೆ ನಾಲ್ಕುವರೆ ಕೋಟಿ ರೂಪಾಯಿಗಳ ಜಾಮೀನಿಗೆ ಜಮೀನು ಪತ್ರಗಳನ್ನು ನೀಡಿ ಚಿತ್ರ ಬಿಡುಗಡೆಗೆ ಅನುಮತಿ ಪಡೆದುಕೊಂಡಿದ್ದಾರೆ ಎಂಬ ವಿವರಣೆ ಬಂತು ತಂಡದಿಂದ..

ನ್ಯಾಯಾಲಯದ ತಡೆಯಾಜ್ಞೆ ತೆರೆವಿಗೆ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ನಿರ್ಮಾಪಕ ಛಲವಾದಿ ಕುಮಾರ್ ಜಾಮೀನು ಸಂಬಂಧಿತ ವಿಷಯಕ್ಕೆ ಜಮೀನು ಪತ್ರಗಳನ್ನು ನೀಡಿ ಚಿತ್ರದ ಬಿಡುಗಡೆಗೆ ಅನುಮತಿ ಪಡೆದುಕೊಂಡಿರುವುದಾಗಿ ವಿವರಗಳು ಬಂದವು.

ಛಲವಾದಿ ಕುಮಾರ್ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಚಿತ್ರ ನಿರ್ಮಿಸಿರುವುದಾಗಿ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ಚಿತ್ರ ಬಿಡುಗಡೆ ಕಾಣುತ್ತಿದೆ ಎಂಬ ವಿವರ ನೀಡಿದರು ನಾಗ್ ಶೇಖರ್.

ನಿರ್ಮಾಪಕ ಛಲವಾದಿ‌ ಕುಮಾರ್, ನಿರ್ದೇಶಕ ನಾಗಶೇಖರ್, ಕಥೆಗಾರ ಚಂದ್ರಚೂಡ್, ನಾಯಕ ನಟ ಶ್ರೀನಗರ ಕಿಟ್ಟಿ ಜತೆಗೆ ಸಹ‌ ನಿರ್ಮಾಪಕ ಕಿಟ್ಟಿ ಮಂಡ್ಯ ಕೂಡ‌ ಹಾಜರಿದ್ದರು.

ಚಿತ್ರದ ಬಿಡುಗಡೆ ಮುಂದಕ್ಕೆ ಹೋದ ಬಳಿಕ ಅನೇಕರು ನಿರ್ಮಾಪಕರ ವಿರುದ್ಧ ಮನಸ್ಸೋ ಇಚ್ಚೆ ಬರೆಯುತ್ತಿದ್ದಾರೆ. ಆದರೆ ನಿಜವಾದ ಕಾರಣ ನಮಗೆ ತಡೆಯಾಜ್ಞೆಯ ವಿಷಯ ತಡವಾಗಿ ತಿಳಿದಿದ್ದೇ ಆಗಿದೆ ಎಂಬ ವಿವರ ಬಂತು ಚಿತ್ರತಂಡದಿಂದ..

ತಡೆಯಾಜ್ಞೆ ತೆರವುಗೊಳಿಸಲು ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಜಾಮೀನು ಪತ್ರ ನೀಡಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ಪಡೆಯಲಾಗಿದೆ. ಇದೇ ಸತ್ಯಾಂಶವಾಗಿದೆ ಎಂಬುದಾಗಿ ವಿವರ ಕೊಟ್ಟರು ಛಲವಾದಿ ಕುಮಾರ್.

Social Share :

ಕೊರಗಜ್ಜನ ಆರಾಧನೆಗೆ ಕಾನನ ಕೋರ ಅದ್ದೂರಿ ತ್ರಿಭಾಷಾ ಟ್ರೈಲರ್

Social Share :

* ಫೆಬ್ರವರಿ 7 ರಂದು ತೆರೆಗೆ *

ಕಾಡಿನಲ್ಲಿ ನಡೆಯುವ ಮನ ಕಲಕುವ ಮತ್ತು ಮನ ಸೆಳೆಯುವ ಘಟನಾವಳಿಗಳು. ಕುತೂಹಲದ ಜೊತೆಗೆ ಮೈ ನವಿರೇಳಿಸುವ ಸಾಹಸಗಳು..

ಇವು ಸುನಾಮಿ ಕಿಟ್ಟಿ ಅಭಿನಯದ ಪಿ.ಮೂರ್ತಿ ನಿರ್ಮಾಣದ ಹಾಗೂ ಒರಟ ಶ್ರೀ ನಿರ್ದೇಶನದ ‘ಕೋರ’ ಚಿತ್ರದ ಟ್ರೈಲರ್ ನಲ್ಲಿ ಕಂಡು ಬಂದ ವಿಶೇಷಗಳು..

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಲನಚಿತ್ರ ಕಲಾವಿದರ ಸಂಘದ ಆವರಣ ಕಳೆದ ಮಂಗಳವಾರ ಕಿಕ್ಕಿರಿದ ಜನಸಂದಣಿಯಿಂದ ತುಂಬಿ ಹೋಗಿತ್ತು.

ಸಮಾರಂಭದಲ್ಲಿ ಆನಂದ ಗುರೂಜಿ ಹಾಗೂ ಪಾಲನಹಳ್ಳಿ ಗುರೂಜಿ ಕನ್ನಡ ಹಾಗೂ ತೆಲುಗು ಟ್ರೈಲರ್ ಬಿಡುಗಡೆ ಮಾಡಿದರೆ, ತಮಿಳು ಟ್ರೇಲರ್ ನ್ನು ನಿರ್ದೇಶಕರಾದ ಆರ್ ಚಂದ್ರು ಹಾಗೂ ಬಹದ್ದೂರ್ ಚೇತನ್ ಕುಮಾರ್ ಬಿಡುಗಡೆಗೊಳಿಸಿದರು‌.

ಫೆಬ್ರವರಿ 7 ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆ ಕಾಣುತ್ತಿರುವ ಈ ಚಿತ್ರದ ಅದ್ದೂರಿಯ ಟ್ರೈಲರ್ ಬಿಡುಗಡೆಯಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್‌, ನಟ ಕಾಕ್ರೋಜ್ ಸುಧೀ, ಒರಟ ಪ್ರಶಾಂತ್, ನಿರ್ಮಾಪಕ ಸಂಜಯ್ ಗೌಡ ಹಾಗೂ ಇತರರು ಪಾಲ್ಗೊಂಡರು.

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಿರುವ ಪಿ.ಮೂರ್ತಿ, ಕೊರಗಜ್ಜನ ಆಶೀರ್ವಾದದಿಂದ ಆರಂಭವಾದ ಈ ಚಿತ್ರದಲ್ಲಿ ಸಾಹಸಗಳು ವಿಶೇಷವೆನಿಸುತ್ತವೆ. ಇದೊಂದು ನಮ್ಮ ನೆಲದ ಕಥೆ.‌ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ‌ ಕುರಿತಾದ ಕಥೆಯೂ ಹೌದು. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ.‌ ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಮೊದಲಾದ ಕಡೆ ಚಿತ್ರೀಕರಣವಾಗಿದೆ ಎಂಬ ವಿವರ ನೀಡಿದರು.

ನಿರ್ದೇಶಕ ಒರಟ ಶ್ರೀ ಒಂದೊಳ್ಳೆ ಕಥೆ ಮಾಡಿದ್ದಾರೆ. ಸುನಾಮಿ ಕಿಟ್ಟಿ ನಟನೆ ಹಾಗೂ ಸಾಹಸಗಳಲ್ಲಿ ಗಮನ ಸೆಳೆದಿದ್ದಾರೆ. ಕಠೋರ ಎಂಬ ಪಾತ್ರವೂ ನನ್ನದಾಗಿದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು ನಿರ್ಮಾಪಕರು.

ಇದು ನಲವತ್ತು ವರ್ಷಗಳ ಹಿಂದಿನ ಕಥೆ. ಆ ಕಾಲದಲ್ಲಿ ಪ್ರಕೃತಿಯನ್ನು ದೇವರ ತರಹ ಆರಾಧಿಸುತ್ತಿದ್ದರು.‌ ಈಗ ಒಂದು ಅಡಿ ಜಾಗಕ್ಕೂ ಹೊಡೆದಾಟ ಬಡಿದಾಟವಿದೆ ಎಂದರು ನಿರ್ದೇಶಕ ಒರಟ ಶ್ರೀ.

ಕನ್ನಡ ಚಿತ್ರ ನೋಡಿದ ಕೆಲವರು ಇದು ಎಲ್ಲಾ ಭಾಷೆಗಳಿಗೂ ಹೊಂದುವ ಕಥೆ. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿ ಎಂದು ಹೇಳಿದರು. ಹಾಗಾಗಿ ಇದು ಪ್ಯಾನ್ ಇಂಡಿಯಾ ಚಿತ್ರವಾಗಿ ಪರಿವರ್ತನೆಯಾಯಿತು ಎಂದರು.

ಇದು ನನ್ನ ಅದೃಷ್ಟ ಪರೀಕ್ಷೆಯಾಗಿದೆ. ಸಾಹಸ ದೃಶ್ಯಗಳಲ್ಲಿ ಸಾಕಷ್ಟು ಪರಿಶ್ರಮ ಹಾಕಿರುವುದು ಫಲ ಕೊಟ್ಟಿದೆ ಎಂಬುದು ಸುನಾಮಿ ಕಿಟ್ಟಿ ವಿನಮ್ರ ಮಾತು.

ಸಹ ನಿರ್ಮಾಪಕ ಚೆಲುವರಾಜು, ನಟಿ ಚರಿಷ್ಮಾ, ಕಲಾವಿದರಾದ ಎಂ.ಕೆ.ಮಠ, ಮುನಿ, ನೀನಾಸಂ ಅಶ್ವಥ್, ಯತಿರಾಜ್, ನಟಿ ಸೌಜನ್ಯ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ರೇವಣ್ಣ ನಾಯಕ್, ಸಂಕಲನಕಾರ ಕೆ.ಗಿರೀಶ್ ಕುಮಾರ್ ಹಾಗೂ ತಮಿಳು ವಿತರಕ ಶಾನ್, ತೆಲುಗು ವಿತರಕ ಬಾಲಾಜಿ ಸಮಾರಂಭದಲ್ಲಿ ಮಾತನಾಡಿದರು.

Social Share :

ಅನ್ ಲಾಕ್ ರಾಘವನ ಲಾಕ್ ಲಾಕ್ ಮಿಲಿಂದ್ ಹೆಜ್ಜೆಗೆ ಸೋತವರು..

Social Share :


* ಶಿವಮೊಗ್ಗದ ಭಾರತ್ ಸಿನಿಮಾಸ್ ನಲ್ಲಿ ಹಾಡು ಬಿಡುಗಡೆ *

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಅನ್ ಲಾಕ್ ರಾಘವ’ ಚಿತ್ರವು ಪ್ರೇಮಿಗಳ ದಿನಕ್ಕೆ ಹತ್ತಿರವಾಗಿ ಫೆಬ್ರವರಿ 7ರಂದು ಬಿಡುಗಡೆ ಕಾಣಲಿದೆ.

ಈ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ, ಅನೂಪ್ ಸೀಳಿನ್ ಸಂಗೀತ ನೀಡಿರುವ ಹಾಗೂ ವಿಜಯ್ ಪ್ರಕಾಶ್ ಹಾಡಿರುವ ‘ಲಾಕ್ ಲಾಕ್..’ ಎಂಬ ಹಾಡು ಇತ್ತೀಚಿಗೆ ಶಿವಮೊಗ್ಗದ ಭಾರತ್ ಸಿನಿಮಾಸ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ.

ಈ ಕುರಿತು ಚಿತ್ರತಂಡ ಬೆಂಗಳೂರಿನಲ್ಲಿ ಖುಷಿ ಹಂಚಿಕೊಂಡಿತು. ಈ ಹಾಡಿನಲ್ಲಿ ಕಾಣುವ ಹೊಸತನ; ಅದ್ದೂರಿತನ ಇಡೀ ಚಿತ್ರದಲ್ಲಿ ಕಾಣಬಹುದು ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ಈ ಹಾಡಿಗೆ ಹೆಜ್ಜೆ ಹಾಕಿರುವುದು ಅತ್ಯಂತ ಖುಷಿ ಕೊಟ್ಟಿದೆ ಎಂದರು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಿಲಿಂದ್. ಚಿತ್ರದಲ್ಲಿರುವ ಮೂರು ಹಾಡುಗಳು ನನಗೆ ಹೆಚ್ಚಿನ ಘನತೆ ತಂದುಕೊಡುತ್ತವೆ ಎಂಬ ನಂಬಿಕೆ ನನ್ನದು ಎಂದರು.

ಶಿವಮೊಗ್ಗ ನಮ್ಮ ಊರು. ಹಾಗಾಗಿ ಅಲ್ಲಿ ಹಾಡು ಬಿಡುಗಡೆ ಕಂಡಿದ್ದು ಅತ್ಯಂತ ಖುಷಿ ಕೊಟ್ಟಿದೆ ಎಂದವರು ನಿರ್ಮಾಪಕ ಮಂಜುನಾಥ್ ದಾಸೇಗೌಡ.

ಮುಖ್ಯವಾಗಿ ಇದು ಮಗನ ಚಿತ್ರ. ಹಾಗು ಹೆಚ್ಚಿನ ನಿರೀಕ್ಷೆ ಹೊಂದಲಾಗಿದೆ. ಗಿರೀಶ್ ಕುಮಾರ್ ನನ್ನ ಜೊತೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂದು ಹೇಳುತ್ತಾ ಹೋದರು ನಿರ್ಮಾಪಕರು.

ಮಿಲಿಂದ್ ಜೋಡಿಯಾಗಿ ರೆಚೆಲ್ ಡೇವಿಡ್ ನಟಿಸಿದ್ದಾರೆ. ಡಿ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಲವಿತ್ ಛಾಯಾಗ್ರಹಣ, ಅಜಯ್ ಕುಮಾರ್ ಸಂಕಲನವಿದೆ.

ಇದು ಮಿಲಿಂದ್ ಅವರ ಮೊದಲ ಚಿತ್ರ. ಆದರೆ ಅವರ ನೃತ್ಯದಲ್ಲಿ ಪರಿಪೂರ್ಣತೆ ಇರುವುದು ಕಾಣುತ್ತದೆ ಎಂದವರು ನೃತ್ಯ ನಿರ್ದೇಶಕ ಮುರಳಿ.

ಪ್ರೇಮಿಗಳಿಂದ ಪ್ರೇಮಿಗಳಿಗಾಗಿ ರೂಪುಗೊಂಡಿರುವ ಚಿತ್ರ ‘ಅನ್ ಲಾಕ್ ರಾಘವ’ ಪ್ರೇಮಿಗಳಿಗೆ ಖುಷಿ ಕೊಡುವ ದಾರಿಯ ಸನಿಹದಲ್ಲಿದೆ..

Social Share :

ಅಡ್ವೆಂಚರ್ಸ್ ಕಾಮಿಡಿ ಫಾರೆಸ್ಟ್ ಜನವರಿ 24ಕ್ಕೆ ಚಿತ್ರ ಬಿಡುಗಡೆ..

Social Share :

* ಜನವರಿ10ರಂದು ಟ್ರೈಲರ್ ಬಿಡುಗಡೆ *

* ಪೈಸಾ ಪೈಸಾ ಪೈಸಾ ಹಾಡು ಸೂಪರ್ ಹಿಟ್ *

ಅದ್ದೂರಿ ತಾರಾಗಣ ಹೊಂದಿರುವ ‘ಫಾರೆಸ್ಟ್’ ಚಿತ್ರ ಇದೇ ಜನವರಿ 24 ರಂದು ತೆರೆ ಕಾಣುತ್ತಿದ್ದು, ಚಿತ್ರದ ಟ್ರೈಲರ್ ಜನವರಿ 10 ರಂದು ಅನಾವರಣಗೊಳ್ಳಲಿದೆ.

ಕನ್ನಡದ ಎದೆಗಾರಿಕೆಯ ನಿರ್ಮಾಪಕರ ಸಾಲಿಗೆ ಸೇರಲು ಹೊರಟಿರುವ ಉದ್ಯಮಿ ಎನ್.ಎಮ್.ಕಾಂತರಾಜ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದೆ.

ಆರಂಭದಿಂದಲೂ ಕುತೂಹಲ ಮೂಡಿಸಿರುವ, ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ ‘ಫಾರೆಸ್ಟ್’ ಚಿತ್ರದ ‘ಪೈಸಾ ಪೈಸಾ ಪೈಸಾ..’ ಎಂಬ ಹಾಡು ಈಚೆಗೆ ಬಿಡುಗಡೆ ಕಂಡು ಐದು ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿರುವುದು ವಿಶೇಷ.

ಬಹದ್ದೂರ್ ಚೇತನ್ ಕುಮಾರ್ ಗೀತ ರಚನೆ ಇರುವ ಹಾಗೂ ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಬಂದಿರುವ ಪ್ರತಿಕ್ರಿಯೆ ಕಂಡು ಚಿತ್ರತಂಡ ಖುಷಿಯಾಗಿದೆ.

ಧರ್ಮವಿಶ್ ಸಂಗೀತ ನೀಡಿರುವ ಈ ಹಾಡಿಗೆ ಅಜಯ್ ಶಿವಶಂಕರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿಕ್ಕಣ್ಣ, ಗುರುನಂದನ್, ಅನೀಶ್ ತೇಜೇಶ್ವರ್, ರಂಗಾಯಣ ರಘು, ಶರಣ್ಯ ಶೆಟ್ಟಿ ಹಾಗೂ ಅರ್ಚನಾ ಕೊಟ್ಟಿಗೆ ಹೆಜ್ಜೆ ಹಾಕಿದ್ದಾರೆ.

ಶೀರ್ಷಿಕೆಯಿಂದಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ‘ಫಾರೆಸ್ಟ್’ ಜನವರಿ 24 ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಜನವರಿ 10ರಂದು ಟ್ರೇಲರ್ ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮುನ್ನ ಚಿತ್ರದ ಪ್ರಚಾರವೇ ಗಮನ ಸೆಳೆದಿದೆ. ಚಿತ್ರದ ಈ ಪ್ರಚಾರಕ್ಕೆ ಪಿ.ವಿ.ಆರ್ ಸಂಸ್ಥೆ ಕೈಜೋಡಿಸಿದೆ. ಜನವರಿ ಹತ್ತರಿಂದ ಎಲ್ಲಾ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಟ್ರೇಲರ್ ಪ್ರದರ್ಶನವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ‘ಮ್ಯಾಕ್ಸ್’ ಚಿತ್ರದ ಪ್ರದರ್ಶನದ ವೇಳೆ ಚಿತ್ರದ ಟ್ರೈಲರ್ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನವಾಗಿದೆ ಎಂದು ನಿರ್ಮಾಪಕ ಎನ್.ಎಂ.ಕಾಂತರಾಜ್ ತಿಳಿಸಿದ್ದಾರೆ.

ಅರಣ್ಯದಲ್ಲೇ ಹೆಚ್ಚು ಭಾಗದ ಚಿತ್ರೀಕರಣ ನಡೆದಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.
ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸತ್ಯಶೌರ್ಯ ಸಾಗರ್ ಸಂಭಾಷಣೆಯನ್ನೂ ಬರೆದಿದ್ದು, ಧರ್ಮವಿಶ್ ಸಂಗೀತ ನಿರ್ದೇಶನ ಹಾಗೂ ಆನಂದ್‌ ರಾಜಾ ವಿಕ್ರಮ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಸಾಹಸ ನಿರ್ದೇಶನವಿದೆ.

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.

ಇನ್ನುಳಿದಂತೆ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮೊದಲಾವರ ತಾರಾ ಬಳಗವಿದೆ.

Social Share :

ಶಿವಣ್ಣ ಸಂಪೂರ್ಣ ಆರೋಗ್ಯ ಮೊದಲಿಗಿಂತ ಲವಲವಿಕೆ..

Social Share :

ಅಮೆರಿಕಾದಲ್ಲಿ ಮೂತ್ರಕೋಶದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದೆ.

ಅವರೀಗ ತವರಿಗೆ ಮರಳುವ ಉತ್ಸಾಹದಲ್ಲಿದ್ದು, ಆರೋಗ್ಯದ ನಿಯಮಗಳ ಪಾಲನೆಯಲ್ಲಿ ತೊಡಗಿದ್ದಾರೆ. ಜೊತೆಗೆ ತಮ್ಮ ಆರೋಗ್ಯ ಚೇತರಿಕೆಗೆ ಸಹಕರಿಸಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.

ಪತಿಯ ಆರೋಗ್ಯದ ವಿಚಾರದಲ್ಲಿ ತೀರಾ ಭಾವುಕರಾಗಿದ್ದ ಗೀತಾ ಶಿವರಾಜ್ ಕುಮಾರ್, ಅಭಿಮಾನಿಗಳ, ಹಿತೈಷಿಗಳ ಹಾರೈಕೆ ಫಲಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್ ಈಗ ಮೊದಲಿಗಿಂತಲೂ ಹೆಚ್ಚಿನ ರೀತಿಯಲ್ಲಿ ಉತ್ಸಾಹ, ಉಲ್ಲಾಸದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಕಳೆಯಲಿದ್ದಾರೆ. ಜೊತೆಗೆ ಹಾಡು ಸಾಹಸ ದೃಶ್ಯಗಳಲ್ಲಿ ಭಾಗವಹಿಸಲು ದೇಹ ಫಿಟ್ ಆಗಿರುತ್ತದೆ ಎಂಬುದು ಅವರ ಹಿತೈಷಿಗಳ ನಂಬಿಕೆ.

ಶಿವಣ್ಣ ಮಾತನಾಡಿರುವ ವೀಡಿಯೋ ದಲ್ಲಿ ದೇವರ ದಯೆ ಸಂಪೂರ್ಣ ಆರೋಗ್ಯ ಚೇತರಿಕೆ ಕಂಡಿದೆ. ಚಿತ್ರಗಳಲ್ಲಿ ಅಭಿನಯಿಸುವ ದಿನಗಳು ದೂರವಿಲ್ಲ ಎಂದು ತಿಳಿಸಿದ್ದಾರೆ.

ಮಾನವೀಯ ಅನುಕಂಪ; ಸರಳ ಸಜ್ಜನಿಕೆ ಹೊಂದಿರುವ ಕನ್ನಡದ ಈ ಸುಪುತ್ರ ಇನ್ನೂ ಹೆಚ್ಚಿನ ಸಂಖ್ಯೆಯ ಚಿತ್ರಗಳಲ್ಲಿ ಅಭಿನಯಿಸಲಿ ಎಂಬುದು ಅಭಿಮಾನಿಗಳ ಕೋರಿಕೆ.

ಇದೇ 25 ರಂದು ತವರಿಗೆ ಮರಳುವ ಶಿವಣ್ಣ ಹೊಸ ಉತ್ಸಾಹದಲ್ಲಿ ಮಿಂದೇಳಲಿದ್ದಾರೆ ಎಂದು ಅವರ‌ ಆಪ್ತ ಬಳಗ ಸಂತಸ ವ್ಯಕ್ತಪಡಿಸಿದೆ.

Social Share :

ನೆನಪಾಗಿ ಹರಿದ ವಿಷ್ಣು ಜೀವನಗಾಥೆ ಸಾಹಸಸಿಂಹನ ತ್ಯಾಗರಾಜ ಇತಿಹಾಸ

Social Share :

* ಸಿಂಹದ ಹಾದಿ ಚಿತ್ರದ ಟ್ರೈಲರ್ *

* ಗೆಳೆಯರ ಹಳೆಯ ದಿನದ ಮೆಲುಕು *

ಸಾಹಸಸಿಂಹ ವಿಷ್ಣುವರ್ಧನ್ ನಿರ್ದೇಶಕರ ನಟರಾಗಿದ್ದರು ಮಾತ್ರವಲ್ಲ; ಅವರೊಬ್ಬ ಮಾನವೀಯ ಅನುಕಂಪವಿರುವ ಸರಳ ಜೀವಿಯಾಗಿದ್ದರು.

ಆದರೆ ಅವರನ್ನು ಸರಿಯಾಗಿ ಅರ್ಥೈಸದ ಕಾರಣ ಆಕ್ಷನ್ ಕಿಂಗ್ ಆಗಬೇಕಿದ್ದವರು ತ್ಯಾಗರಾಜರಾದರು..

ಹೀಗೆ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಬಣ್ಣಿಸಿದವರು ಅವರ ಬಾಲ್ಯದ ಒಡನಾಡಿ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು.

ವಿಷ್ಣು, ಅಂಬರೀಷ್ ಮತ್ತು ನಾನು ಮೈಸೂರಿನಲ್ಲಿ ಕಳೆದ ದಿನಗಳು ಅದ್ಭುತವಾಗಿದ್ದವು. ವಿಷ್ಣು ಆಗ ಬೆಂಗಳೂರಿನಲ್ಲಿ ನೆಲೆಸಿದ್ದರೂ ನಮ್ಮನ್ನು ನೋಡಲು ಹಗಲು ರಾತ್ರಿ ಎಂದು ನೋಡದೆ ಓಡೋಡಿ ಬಂದು ಬಿಡುತ್ತಿದ್ದರು.

‘ಬಂಧನ’ ಚಿತ್ರದ ಬಳಿಕ ಅವರ ಪಾತ್ರಗಳ ಶೈಲಿಯೇ ಬದಲಾಯಿತು. ಅತ್ಯುತ್ತಮ ಸಾಹಸಮಯ ಚಿತ್ರಗಳನ್ನು ಮಾಡುವ ಬದಲಾಗಿ ತ್ಯಾಗ ಮಾಡುವ ಪಾತ್ರಗಳನ್ನು ಮಾಡಬೇಕಾಯಿತು ಎಂದು ಹೇಳುತ್ತಾ ಹೋದರು ಬಾಬು.

ಡಿಸೆಂಬರ್ 30 ವಿಷ್ಣು ಸಂಸ್ಮರಣಾ ದಿನ. ಹಾಗಾಗಿ ಅವರ ನೆನಪು ಈ ಸಂದರ್ಭದಲ್ಲಿ ತೀವ್ರವಾಗಿ ಕಾಡುತ್ತದೆ. ಮುಖ್ಯ ಅವರ ಮಾನವೀಯ ಕಳಕಳಿ ಹೆಚ್ಚು ಪ್ರಚಾರವಾಗದೇ ಹೋಯಿತು ಎಂದರು ರಾಜೇಂದ್ರಸಿಂಗ್ ಬಾಬು.

ವಿಷ್ಣುವರ್ಧನ್ ಅವರಿಗೆ ನನ್ನ ಚಿತ್ರದ ಮೂಲಕ ‘ಸಾಹಸ ಸಿಂಹ’ ಎಂಬ ಬಿರುದು ದಕ್ಕಿತು ಎಂಬುದು ಹೆಮ್ಮೆಯ ವಿಷಯ. ಆದರೆ ಅವರೊಳಗಿದ್ದ ಕಳಕಳಿ, ಕನ್ನಡದ ಬಗೆಗಿನ ಕಾಳಜಿ ಇನ್ನು ಹೆಚ್ಚು ಹೆಚ್ಚು ಜನರ ಗಮನ ಸೆಳೆಯುವುದು ಬೇಕಿತ್ತು ಎಂದವರು ಸಾಹಸಸಿಂಹ ಚಿತ್ರವನ್ನು ನಿರ್ದೇಶನ ಮಾಡಿದ್ದ ಜೋಸೈಮನ್.

ವಿಷ್ಣು ಅವರಿಲ್ಲದೆ 15 ವರ್ಷ ಕಳೆದು ಹೋಯಿತು. ಆದರೆ ಅಭಿಮಾನಿಗಳು ಅವರನ್ನು ಇನ್ನೂ ಜೀವಂತವಾಗಿರಿಸಿದ್ದಾರೆ ಎಂಬ ಹೊಗಳಿಕೆ ಕೇಳಿ ಬಂದಿದ್ದು ‘ಸಿಂಹದ ಹಾದಿ’ ಟೆಲಿ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ..

ಜಿ. ಕೆ. ಸಿನಿ ಫೈಲ್ಸ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಜಿ. ಕೆ. ಶಶಿರಾಜ್‌ ದೊರೈ ‘ಸಿಂಹದ ಹಾದಿʼ ಎಂಬ ಟೆಲಿಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ.

ಬಾಲ್ಯದಿಂದಲೂ ವಿಷ್ಣುವರ್ಧನ್‌ ಅಭಿಮಾನಿಯಾಗಿರುವ, ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅಭಿನಯ ಮತ್ತು ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಶಶಿರಾಜ್‌ ದೊರೆ, ವಿಷ್ಣುವರ್ಧನ್‌ ಅವರ ಮೇಲಿನ ಅಭಿಮಾನದಿಂದ ಈ ಟೆಲಿಚಿತ್ರವನ್ನು ನಿರ್ಮಿಸಿ, ತೆರೆಗೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ.

ವಿಷ್ಣುವರ್ಧನ್‌ ಪುಣ್ಯಸ್ಮರಣೆಗೂ ಮುನ್ನ ನಡೆದ ಸಮಾರಂಭದಲ್ಲಿ, ಹಿರಿಯ ನಿರ್ದೇಶಕರಾದ ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು, ಜೋ ಸೈಮನ್‌, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್‌, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ಹಿರಿಯ ನಟಿ ಲಕ್ಷ್ಮೀದೇವಮ್ಮ, ವಿಧಾನ ಪರಿಷತ್‌ ಮಾಜಿ ಸದಸ್ಯ ವೀರಯ್ಯ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದು, ಟೆಲಿ ಚಿತ್ರದ ಟ್ರೇಲರ್‌ ಅನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಕೋರಿದರು.

ವಿಷ್ಣುವರ್ಧನ್‌ ಅವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ಕಟ್ಟಿಕೊಂಡ ನಾಲ್ಕು ಜನರ ಜೀವನವನ್ನು ಆಧರಿಸಿ, ಈ ಟೆಲಿ ಚಿತ್ರವನ್ನು ನಿರ್ಮಿಸಲಾಗಿದೆ. ವಿಷ್ಣುವರ್ಧನ್‌ ಅವರ ಚಿತ್ರಗಳು, ಅವರು ನಿರ್ವಹಿಸಿರುವ ಪಾತ್ರಗಳು, ಅವರ ಸಾಮಾಜಿಕ ಕಾರ್ಯಗಳು ಎಲ್ಲವನ್ನೂ ಆಧರಿಸಿದ ಕಥೆ ಇದು ಎಂದರು ನಿರ್ದೇಶಕ ಶಶಿ ದೊರೆರಾಜ್.

ವಿಷ್ಣುವರ್ಧನ್‌ ಅಭಿಮಾನಿಗಳು ಈ ಕಾರ್ಯದಲ್ಲಿ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವಿಷ್ಣುವರ್ಧನ್‌ ಅವರ ಜೀವನ-ಸಾಧನೆಯನ್ನು ಮುಂದಿನ ತಲೆಮಾರಿಗೆ ತೋರಿಸುವ ಸಣ್ಣ ಕೆಲಸ ಈ ಟೆಲಿಫಿಲಂನಿಂದ ಆಗುತ್ತದೆ ಎಂಬ ನಂಬಿಕೆ ನಮ್ಮದು ಎಂದರು.

ಈ ಸಿಂಹದ ಹಾದಿಯಲ್ಲಿ ಶಶಿರಾಜ್‌ ದೊರೆ, ಸಾಯಿ ಜ್ಯೋತಿ, ಸವಿತಾ, ಪಲ್ಲವಿ ರಾವ್‌, ಸಂನ್ಸಿಕಾ, ಪ್ರಕೃತಿ, ಹರಿ ಪ್ರಕಾಶ್‌, ಮಂಜು, ಮಹೇಶ್‌ ಗುರು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಷ್ಣು ಸಾಧನೆಗಳನ್ನು ಬಣ್ಣಿಸುವ ಈ ಟೆಲಿ ಚಿತ್ರ ಅನೇಕ ಚಿತ್ರೋತ್ಸವಗಳಲ್ಲಿ ನಾಮ ನಿರ್ದೇಶನಗೊಂಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಎಂಬ ವಿವರಗಳೂ ಬಂದವು.

Social Share :

ನಟ ವಿಶಾಲ್ ಸಾಹಸ ಯಾತ್ರೆ ಮೈ ಪೂರಾ ಗಾಯದ್ದೇ ಸಮಸ್ಯೆ..!?

Social Share :

* ಬೆಂಗಳೂರಿನಲ್ಲಿ ವಿಶಾಲ್ ಹೇಳಿದ್ದು *

ಮಾನವೀಯ ಅನುಕಂಪ ಹೊಂದಿರುವ ವಿರಳ ಸ್ಟಾರ್ ಗಳ ಸಾಲಿಗೆ ಸೇರುವ ನಟ ವಿಶಾಲ್ ಅವರ ಆರೋಗ್ಯ ಸ್ಥಿತಿಯನ್ನು ಕಂಡು ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿದೆ.

ವಿಶಾಲ್ ಅವರ ಈ ಸ್ಥಿತಿಗೆ ಅವರ ಸಾಹಸ ಪ್ರವೃತ್ತಿಯೇ ಕಾರಣ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಗೊತ್ತು. ಸಿನಿಮಾ ರಂಗದಲ್ಲಿ ಅವರು ಅಪ್ರತಿಮ ಸಾಹಸಿ ಎಂದೇ ಗುರುತಿಸಿಕೊಂಡಿದ್ದಾರೆ.

ವಿಶಾಲ್ ಅವರ ಸದ್ಯದ ಸ್ಥಿತಿ ಕಂಡು ಬೆಚ್ಚಿ ಬೀಳುವಂತಾಗಿದೆ. ಅಷ್ಟು ಗಟ್ಟಿತನದ ನಟನಿಗೆ ಏನಾಯ್ತು ಎಂಬುದು ಪ್ರಶ್ನೆಯಾಗಿದೆ.

ಆದರೆ ತಮ್ಮ ‘ಲಾಠಿ’ ಚಿತ್ರದ ಪ್ರಚಾರದ ಸಲುವಾಗಿ ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದ ಅವರು, ನನಗೆ ಮೈ ಪೂರಾ ಗಾಯವಾಗಿದೆ. ಚಿಕಿತ್ಸೆ ಪಡೆಯುತ್ತಲೇ ಇದ್ದೇನೆ ಎಂದು ಹೇಳಿದ್ದರು.

ಇಷ್ಟೊಂದು ರಿಸ್ಕ್ ಎದುರು ಹಾಕಿ ಕೊಳ್ಳುವುದು ಸರಿಯೇ ಎಂಬ ಪ್ರಶ್ನೆಗೆ ರಿಸ್ಕ್ ಇಲ್ಲದೆ ಬದುಕಿನಲ್ಲಿ ಏನೂ ಸಾಧ್ಯವಾಗುವುದಿಲ್ಲ; ಆದರೆ ನಾನು ಸ್ವಲ್ಪ ಹೆಚ್ಚಿನ ತೊಂದರೆಗೆ ಒಡ್ಡಿಕೊಂಡಿರುವೆ ಎಂದು ಹೇಳಿದ್ದರು.

‘ಲಾಠಿ ಚಾರ್ಜ್’ ಚಿತ್ರದ ನೈಜ ಸಾಹಸಗಳ ಬಗ್ಗೆ ಮಾತನಾಡುತ್ತಾ ಆಗ ಉಂಟಾದ ಗಾಯಗಳ ಬಗ್ಗೆ ಹೇಳಿದ್ದರು ವಿಶಾಲ್. ಆದರೆ ಅದನ್ನು ಮೀರಿ ‘ಅವನ್ ಇವನ್’ ಚಿತ್ರಕ್ಕಾಗಿ ಕಣ್ಣುಗಳ ಆಪರೇಷನ್ ಮಾಡಿಸಿಕೊಂಡಿದ್ದ ವಿಶಾಲ್ ಈಗ ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬುದು ಮೂಲಗಳ ಮಾಹಿತಿ.

ತನ್ನ ದೇಹದ ಮೇಲೆಯೇ ಪ್ರಯೋಗ ಮಾಡುತ್ತಾ ನಟನೆಗೆ ಒಡ್ಡಿಕೊಳ್ಳುವುದು ಸಾಮಾನ್ಯರಿಂದ ಸಾಧ್ಯವೇ ಆಗದು. ವಿಶಾಲ್ ಒಂದು ನೆಲೆಯಲ್ಲಿ ದೈವಿಕ ಅಂಶ ಪಡೆದವರು. ಅವರಿಗೆ ಈ ರೀತಿ ಆಗಿರುವುದು ನೋಡಲಾಗುತ್ತಿಲ್ಲ ಎಂದು ಆಪ್ತರು ಹೇಳುತ್ತಿದ್ದಾರೆ.

ಆದರೆ ವಿಶಾಲ ಹೃದಯವಂತ ವಿಶಾಲ್ ಖಂಡಿತಾ ಬೇಗನೆ ಗುಣಮುಖರಾಗುತ್ತಾರೆ ಮತ್ತು ಮೊದಲಿನಂತೆ ಆಗುತ್ತಾರೆ ಎಂಬುದು ಅವರ ಆಪ್ತರು ಮತ್ತು ಅಭಿಮಾನಿಗಳ ನಂಬಿಕೆ.

ವಿಶಾಲ್ ಅವರ ತಂದೆ ಕನ್ನಡಿಗ, ಅವರಿಗೆ ಕರ್ನಾಟಕದ ಮೇಲೆ ಪ್ರೀತಿ ಹೆಚ್ಚು. ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಐದು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ ಪಡೆದಿದ್ದಾರೆ.

ಮೈಸೂರಿನಲ್ಲಿ ಪುನೀತ್ ರಾಜ್ ಕುಮಾರ್ ಪೋಷಣೆಯಲ್ಲಿದ್ದ ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಶಿವರಾಜ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದ ವಿಶಾಲ್, ತಾವೊಬ್ಬ ಅಸಾಮಾನ್ಯ ಮಾನವೀಯ ಅನುಕಂಪದ ವ್ಯಕ್ತಿ ಎಂಬುದನ್ನು ಸಾಬೀತು ಪಡಿಸಿದ್ದು ಇಲ್ಲಿ ಉಲ್ಲೇಖಾರ್ಹ.

Social Share :

ಗನ್ಸ್ ಅಂಡ್ ರೋಸಸ್ ಚಿತ್ರವಿಮರ್ಶೆ

Social Share :

ರೇಟಿಂಗ್ : 3/5

ನಿರ್ಮಾಣ : ಎಚ್.ಆರ್.ನಟರಾಜ್

ನಿರ್ದೇಶನ : ಶ್ರೀನಿವಾಸ್ ಕುಮಾರ್

ರೌಡಿಸಂ ಡ್ರಗ್ ಮಾಫಿಯಾ ಸುತ್ತ..

ಬೆಂಗಳೂರೆಂಬ ಮಹಾನಗರ ಒಡಲೊಳಗೆ ಸಾಕಷ್ಟು ನಿಗೂಢಗಳನ್ನು ಒಳಗೊಂಡಿದೆ. ಕೆಲವೊಮ್ಮೆ ಸುದ್ದಿ ಮಾಧ್ಯಮಗಳು ಕೆಲವು ನಿಗೂಢಗಳನ್ನು ಭೇದಿಸುತ್ತವೆ..

ಮಹಾನಗರದಲ್ಲಿ ಮಾದಕದ್ರವ್ಯ ಕಳ್ಳ ಸಾಗಣೆ ಮತ್ತು ಅದರ ವಿಶಾಲ ವ್ಯಾಪ್ತಿ ಹೇಗಿರಬಹುದೆಂಬುದರ ಮೇಲೆ ಹೊಸೆಯಲಾಗಿರುವ ಕಾಲ್ಪನಿಕ ಕಥೆಯಲ್ಲಿ ರೌಡಿ ಪಡೆಯ ಎರಡು ಪಾತಕ ತಂಡಗಳು ವಿಜೃಂಭಿಸುತ್ತವೆ.

ಆ ತಂಡಗಳಲ್ಲಿ ಕಾಣಿಸುವ ಶೌರ್ಯವಂತ ಹುಡುಗ ಸೂರ್ಯ (ಅರ್ಜುನ್) ಚಿತ್ರದ ಕಥಾ ನಾಯಕ. ಆಕಸ್ಮಿಕ ಕೊಲೆಯೊಂದರ ಕಾರಣ ಜೈಲು ಸೇರುವ ಸೂರ್ಯ ಅಲ್ಲಿಂದ ಪ್ರವೇಶ ಪಡೆಯುವುದು ಭೂಗತ ಜಗತ್ತಿಗೆ..

ಮಾದಕ ದ್ರವ್ಯ ಕಳ್ಳ ಸಾಗಣೆ ಸುಲಭವಾಗಿರುವ ಮಹಾನಗರದಲ್ಲಿ ವಿಶೇಷ ಜೀಪ್ ನಲ್ಲಿ ಓಡಾಡಿಕೊಂಡಿರುವ ಸೂರ್ಯನ ಸೆಳೆತಕ್ಕೆ ರಮ್ಯಾ‌ ಎಂಬ ಹುಡುಗಿ ಸಿಲುಕುವುದು. ಆ ಹುಡುಗಿಯ ತಂದೆ ಮತ್ತು ಅಣ್ಣ ವಿಷಮ ಜಗತ್ತಿನ ಲೀಡರ್ ಆಗಿರುವುದು ಎಲ್ಲವೂ ವಿಸ್ಮಯ.

ರೌಡಿ ಸಾಮ್ರಾಜ್ಯ ಎಷ್ಟೇ ಮೆರೆದರೂ ವ್ಯವಸ್ಥೆ ಅತ್ಯಂತ ಕಠಿಣ. ಕೆಲವೊಮ್ಮೆ ನಿರ್ದಯಿಯಂತೆ ನಡೆದುಕೊಳ್ಳುವುದೂ ಉಂಟು. ಇಲ್ಲಿನ ಕಥಾ ನಾಯಕ ಸೂರ್ಯ ಅಮಾಯಕತೆ ವರ್ತುಲದೊಳಗೆ ಸಿಲುಕಿ ಬಲಿಯಾಗುತ್ತಾನೆ.

ಕಥನಗಳಿಗೆ ಅವಕಾಶ ನೀಡದೆ ನೇರವಾಗಿ ಕಥೆ ಹೇಳಿರುವ ನಿರ್ದೇಶಕರು ಹೊಸತನಕ್ಕೆ ಒಡ್ಡಿಕೊಳ್ಳಬಹುದಾದ ಸಾಧ್ಯತೆಗಳನ್ನು ಸಂಪೂರ್ಣ ಕೈ ಚೆಲ್ಲಿದ್ದಾರೆ. ಅದರಿಂದಾಗಿಯೇ ರೌಡಿಸಂನ ಕಥೆಗಳ ಆಳಕ್ಕೆ ಇಳಿಯುವುದು ಅವರಿಂದ ಸಾಧ್ಯವಾಗಿಲ್ಲ.

ರಾಜೇಂದ್ರ ಮತ್ತು ನಾಯಕ್ ಪರಸ್ಪರ ಪ್ರತಿಸ್ಪರ್ಧೆ ಒಡ್ಡುವ ಎರಡು ರೌಡಿ ಸಾಮ್ರಾಜ್ಯದ ಕಥೆಯಲ್ಲಿ ಪ್ರೀತಿಗೂ ಒಂದಷ್ಟು ಜಾಗವಿದ್ದರೂ ಅದರ ನಿರ್ವಹಣೆ ಕಾಲಮಿತಿಯನ್ನು ಮೀರಿದ್ದಾಗಿದೆ.

ಸೂರ್ಯನ ಪಾತ್ರದಲ್ಲಿ ಅರ್ಜುನ್ ಅಜಯ್ ಕುಮಾರ್ ಗಮನ ಸೆಳೆದಿದ್ದಾರೆ. ಫೈಟ್ ಮತ್ತು ಚೇಸಿಂಗ್ ದೃಶ್ಯಗಳಲ್ಲಿ ಗಮನ ಸೆಳೆದಿರುವ ಅರ್ಜುನ್ ಗೆ ಒಳ್ಳೆಯ ಅವಕಾಶ ಸಿಕ್ಕರೆ ಉತ್ತಮ ನಟನಾಗಿ ಬೆಳೆಯುವ ಸೂಚನೆಗಳನ್ನು ನೀಡಿದ್ದಾರೆ.

ಕೊನೆಯಲ್ಲಿ ಬರುವ ಕಿಶೋರ್ ಚಿತ್ರಕ್ಕೆ ಕೊಂಚ ವೇಗ ನೀಡುತ್ತಾರೆ. ಶೋಭರಾಜ್, ಸುಚ್ಚೇಂದ್ರ ಪ್ರಸಾದ್ ನಟನೆಯಲ್ಲಿ ಎಂದಿನ ಲವಲವಿಕೆ ಇದ್ದರೆ; ನಟಿ ಯಶ್ಚಿಕ ನಿಷ್ಕಲ ರೌಡಿ ಪ್ರೀತಿಸುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಡ್ರಗ್ ಮಾಫಿಯಾ ಕಥೆಗಳು ಸಾಮಾಜಿಕ ನೆಲೆಯಲ್ಲಿ ಸಂದೇಶ ನೀಡುವ ಚಿತ್ರಗಳಾಗಿರುವುದು ವಿಶೇಷ. ಈ ಕಥೆಯಲ್ಲಿ ಮುಖ್ಯ ಪಾತ್ರದ ಅವಸಾನ ರೌಡಿ ಸಾಮ್ರಾಜ್ಯದ ನಿರ್ದಯಿತನವನ್ನು ಸಾಬೀತುಪಡಿಸುತ್ತದೆ.

Social Share :

ಯುಐ ಪ್ರಚಂಡ ಯಶಸ್ಸು ಉಪ್ಪಿ ಖುಷಿಯ ಲಹರಿ..

Social Share :


ರಿಯಲ್ ಸ್ಟಾರ್ ಉಪೇಂದ್ರ ಖುಷಿಯ ಲಹರಿಯಲ್ಲಿದ್ದರು; ಎಂತಹ ಖಡಕ್ ಪ್ರಶ್ನೆಗೂ ಸಮರ್ಥನೆಯ ಉತ್ತರ ನೀಡುತ್ತಿದ್ದರು..

ಅದು ‘ಯುಐ’ ಚಿತ್ರದ ಯಶಸ್ಸು ಮತ್ತು ಖುಷಿಯನ್ನು ಹಂಚಿಕೊಳ್ಳುವ ಸಲುವಾದ ಪ್ರಚಾರ ಸಭೆ. ಲಹರಿ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಾದ ಮನೋಹರ ನಾಯ್ಡು, ಲಹರಿ ವೇಲು ಮತ್ತೊಬ್ಬ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ಚಿತ್ರತಂಡ ಮಾತಿಗೆ ಕುಳಿತ್ತಿತ್ತು.

ಸನ್ನಿ ಲಿಯೋನ್ ಚಿತ್ರದಲ್ಲಿ ಇರುವುದು ನಿಜವೇ ಎಂಬ ಪ್ರಶ್ನೆಯಿಂದ ಹಿಡಿದು.. ‘ನೀವು ಬುದ್ಧಿವಂತರಾಗಿದ್ದರೆ ಎದ್ದೋಗಿ..’ ಎಂಬುದು ಸರಿಯೇ ಅಲ್ಲಿಯವರೆಗಿನ ಕಠಿಣ ಪ್ರಶ್ನೆಗೂ ಉಪೇಂದ್ರ ಲವಲವಿಕೆಯ ಉತ್ತರಗಳನ್ನೇ ನೀಡಿದರು.

ಸಿನಿಮಾ ಗೆದ್ದಿದೆ. ನಿರ್ಮಾಪಕರು‌ ಖುಷಿಯಾಗಿದ್ದಾರೆ. ಅದಕ್ಕಿಂತಲೂ ಇನ್ನೇನು ಬೇಕು. ಇದೊಂದು ಬೇರೆ ಬಗೆಯ ಪ್ರಯತ್ನ ಮತ್ತು ಪ್ರಯೋಗ. ಅದು ಗೆದ್ದಿರುವುದಕ್ಕೆ ಖುಷಿಯಾಗಿದೆ ಎಂದರು ಉಪೇಂದ್ರ.

ಚಿತ್ರದ ಗಳಿಕೆ ವಿಷಯದಲ್ಲಿ ನಿರ್ಮಾಪಕರಿಗೆ ಸಂತೃಪ್ತಿ ಇದೆ ಎಂದರು ಲಹರಿ ವೇಲು. ಸಿನಿಮಾ ಗೆದ್ದಿದೆ; ನಾವು ಖುಷಿಯಿಂದ ಇದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಆದರೆ ಗಳಿಕೆಯ ಪೂರ್ಣ ವಿವರವನ್ನು ಇನ್ನೂ ಬಿಟ್ಟುಕೊಡಲಾಗದು. ಏಕೆಂದರೆ ಚಿತ್ರ ಈಗಲೂ ಹೌಸ್ ಫುಲ್ ಆಗಿ ಹೋಗುತ್ತಿದೆ. ಸ್ವಲ್ಪ ಸಮಯ ಕೊಡಿ, ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದರು ಲಹರಿ ವೇಲು.

ಇದು ಬೇರೆ ಮಾದರಿಯ ಚಿತ್ರ. ಬುದ್ಧಿಗೆ ಕೆಲಸ ಕೊಡುವ; ತರ್ಕಕ್ಕೆ ಗಮನ ಕೊಡುವ; ತತ್ವಕ್ಕೆ ತಲೆ ಕೊಡುವ ಮತ್ತು ಮನರಂಜನೆಗೆ ಮನಸ್ಸು ಕೊಡುವ ಹೀಗೆ ವಿಭಿನ್ನ ನೆಲೆಯಲ್ಲಿ ಚಿಂತನೆಗೆ ಹಚ್ಚುವ ಚಿತ್ರ.

ಇದೇ ನಿಟ್ಟಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಪ್ರಶ್ನೆಗಳು ಎದುರಾದವು. ಜಿ.ಮನೋಹರ ನಾಯ್ಡು, ಕೆ.ಪಿ.ಶ್ರೀಕಾಂತ್, ನವೀನ್ ಮನೋಹರ್, ನಟಿ ರೀಷ್ಮಾ ನಾಣಯ್ಯ, ನಟ ಕಾಕ್ರೋಚ್ ಸುಧಿ ಹಾಗೂ ಚಿತ್ರತಂಡದ ಉಪಸ್ಥಿತಿ ಇತ್ತು.

Social Share :