Snehapriya.com

June 8, 2025

ಸಿನಿಮಾ-ಗಾಸಿಪ್

ರುದ್ರ ಗರುಡ ಪುರಾಣ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಅಶ್ವಿನಿ ವಿಜಯ್ ಲೋಹಿತ್

ನಿರ್ದೇಶನ : ನಂದೀಶ್

ಹಳೆ ತನಿಖೆ ಜಾಡು ಕಾಡುವ ಸೇಡು..

17ಎ ಕಾವೇರಿ ಎಕ್ಸ್‌ಪ್ರೆಸ್‌ ಎಂಬ ಬಸ್ ಅಪಘಾತಕ್ಕೀಡಾಗಿ ಎಳೆಯ ಕಂದಮ್ಮಗಳು ಸಾವಿಗೀಡಾದ ಮತ್ತು‌ ಅಮಾಯಕ ಡ್ರೈವರ್ ಕುತಂತ್ರಕ್ಕೆ ಬಲಿಯಾದ 20 ವರ್ಷಗಳ ಹಿಂದಿನ ಘಟನೆಯೇ ಸ್ಫೂರ್ತಿಯಾಗಿರುವ ಚಿತ್ರದಲ್ಲಿ ಕಾಣುವುದು ಚುರುಕಿನ ತನಿಖೆಯ ಜಾಡು..

ರುದ್ರ ಎಂಬ ಖಡಕ್ ಪೊಲೀಸ್ ಅಧಿಕಾರಿಯ ನಿಷ್ಠೆಯ ನಿಲುವು ಹಿರಿಯ ಅಧಿಕಾರಿಗಳಿಗೆ ಇರುಸು ಮುರುಸು. ಸರಿ; ರುದ್ರ ಕೆಲಸವಿಲ್ಲದ ಕುದುರೆ ಲಾಯಕ್ಕೆ ಎತಂಗಡಿ.

ಅಲ್ಲಿಯೂ ನಿಷ್ಠೆ ಮೆರೆಯುವವನ ಹೆಗಲಿಗೆ ಅಪಹರಣ ಪ್ರಕರಣವನ್ನು ಅನಧಿಕೃತ ಧಾಟಿಯಲ್ಲಿ ಭೇದಿಸುವ ಸವಾಲು. ಅಲ್ಲಿ ಆರಂಭವಾಗುತ್ತದೆ ನಿಜವಾದ ಆಟ.

ಅಪಹರಣದ ಬೆನ್ನು ಬಿದ್ದ ಪೊಲೀಸ್ ಅಧಿಕಾರಿ ರುದ್ರನಿಗೆ ಎದುರಾಗುವುದು ಬರೀ ಸವಾಲುಗಳೇ. ತನಿಖೆಯ ಹಾದಿಯಲ್ಲಿ ಒಂದು ಕಠಿಣ ಗಂಟು ಬಿಡಿಸುವಷ್ಟರಲ್ಲಿ ಮತ್ತೊಂದು ಕಗ್ಗಂಟು ಎದುರಾಗಿ ಪ್ರೇಕ್ಷಕ ಕುತೂಹಲಿ..

ಅಪಹರಣವಾಗಿರುವುದು ದೇವಿಶೆಟ್ಟಿ ಎಂಬ ಪ್ರಭಾವೀ ಶಾಸಕನ ಪುತ್ರ. ಆ ಅಪಹರಣ ಶೋಧಿಸಲು ಹೊರಟ ಅಧಿಕಾರಿ ಹಿಡಿಯುವ ಜಾಡು 20 ವರ್ಷಗಳ ಹಿಂದಿನ ಅಪಘಾತ ಪ್ರಕರಣ.

ಸರ್ಕಾರಿ ವ್ಯವಸ್ಥೆಯಲ್ಲಿ ದುಷ್ಟರು ಬೇರೆಯವರ ಜೀವಗಳನ್ನು ಲೆಕ್ಕಿಸದೇ ಹುನ್ನಾರಗಳನ್ನು ಮಾಡಿತ್ತಾರೆ. ಬಸ್ ಡಿಪೋನಲ್ಲಿ ನಡೆಯುವ ಹಣ ಹೊಡೆಯುವ ದಂಧೆಯಲ್ಲಿ ಮುಗ್ಧ ಮತ್ತು ಅಮಾಯಕ ಜೀವಗಳಿಗೆ ಬೆಲೆಯೇ ಇಲ್ಲ..

ಅಲ್ಲಿ ಮೈದಳೆದ ಕ್ರೂರ ವ್ಯಕ್ತಿ ಈಗ ಹೆಸರು ವೇಷ ಮರೆಸಿಕೊಂಡ ಪ್ರಭಾವಿ. ಆತನನ್ನು ನೇರವಾಗಿ ಎದುರಿಸದೇ ಕ್ಷಣ ಕ್ಷಣ ವಿಚಲಿತಗೊಳಿಸುವ ಆಟದ ಹೆಸರೇ ಗರುಡ ಪುರಾಣ.

ರಿಷಿ ಪಾತ್ರದಲ್ಲಿ ಜೀವಿಸಿದ್ದಾರೆ. ಎತ್ತರದ ಅವರ ನಿಲುವು ತನಿಖಾಕಾಧಿಕಾರಿಗೆ ಫಿಟ್ ಅಂಡ್ ಫೈನ್. ತನಿಖೆಯ ಹಾದಿ ಕುತೂಹಲ ಮತ್ತು ವೇಗದಿಂದ ಕೂಡಿರುವಂತೆ ಕಥೆಯ ನೇಯ್ಗೆ ಸೊಗಸು.

ಪ್ರಿಯಾಂಕ ಕುಮಾರ್ ಆಗಾಗ ಬಂದು ಹೋಗುವುದಷ್ಟೇ. ಗಿರೀಶ್ ಶಿವಣ್ಣ ಕಾಮಿಡಿ, ಶಿವರಾಜ್ ಕೆ.ಆರ್ ಪೇಟೆ ನಿಗೂಢತೆ ವಿನೋದ್ ಆಳ್ವ ಪ್ರಭಾವೀ ನಿಲುವು ಗಮನಾರ್ಹ.

ಪೊಲೀಸ್ ಅಧಿಕಾರಿಗಳಾಗಿ ಅವಿನಾಶ್ ಹಾಗೂ ಸಿದ್ಲಿಂಗು ಶ್ರೀಧರ್ ಗಮನ ಸೆಳೆಯುತ್ತಾರೆ. ಆದರೆ ಇಡೀ ಚಿತ್ರ ನೋಡಿದಾಗ ಪೊಲೀಸ್ ವ್ಯವಸ್ಥೆಯ ಶಿಷ್ಟಾಚಾರದ ವಿಷಯಗಳನ್ನು ಕಡೆಗಣಿಸಿರುವುದು ಎದ್ದು ಕಾಣುತ್ತದೆ. ಪೊಲೀಸ್ ವ್ಯವಸ್ಥೆಯ ಆಳ ಅರಿವು ಕೊರತೆಯೇ..

ರಘು ನಿಡವಳ್ಳಿ ಸಂಭಾಷಣೆ ಗಮನಾರ್ಹ. ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಕೆ.ಪಿ ಸಂಗೀತ ಚಿತ್ರಕ್ಕೆ ಪೂರಕ.

Social Share :

ಫಾರೆಸ್ಟ್ ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ನಿರ್ಮಾಣ : ಎನ್.ಎಂ.ಕಾಂತರಾಜ್

ನಿರ್ದೇಶನ : ಚಂದ್ರಮೋಹನ್

ಕಾಡು ಹಾದಿಯ ತುಂಬೆಲ್ಲಾ
ನಗುವಿನ ಬುಗ್ಗೆ..

ನಾಲ್ವರು ಗಂಡಸರು ಒಬ್ಬಳೇ ಮಹಿಳೆ ಇರುವ ಗುಂಪು ಒಂದು ನಿಗೂಢ ಶೋಧಿಸುವ ಕಾರ್ಯಕ್ಕೆ ಮುಂದಾದಾಗ ನಡೆಯುವ ಘಟನಾವಳಿಗಳು ಚಿತ್ರವಾಗಿದೆ.

ಗೋಪಾಲಸ್ವಾಮಿ (ರಂಗಾಯಣ ರಘು), ಕುಮಾರ (ಚಿಕ್ಕಣ್ಣ), ಸುನೀಲ (ಅನೀಶ್ ತೇಜೇಶ್ವರ್), ಸತೀಶ (ಗುರುನಂದನ್) ಹಾಗೂ ಮೀನಾಕ್ಷಿ (ಅರ್ಚನಾ ಕೊಟ್ಟಿಗೆ) ನಿಧಿಯ ಶೋಧನೆಗಾಗಿ ಕಾಡಿನ ಜಾಡು ಹುಡುಕುತ್ತಾ ಹೊರಡುವರು.

ಅಲ್ಲಿ ಒಂದು ಕಿವಿ ಕೇಳದ ಕುಮಾರನಿಗೆ ಯಾವ ಕೆಲಸಕ್ಕೆ ಹೋಗುತ್ತಿದ್ದೇವೆ ಎಂಬುದರ ಪರಿಚಯವಿಲ್ಲ. ಹಾಗಾಗಿ ಆತನ ಮಿಸ್ ಅಂಡರ್ ಸ್ಟಾಂಡಿಂಗ್ ಮತ್ತು ಮಿಸ್ಸಾಗಿ ಬರುವ ಮಾತುಗಳು ನಗೆಯ ಬುಗ್ಗೆಯನ್ನೇ ಹರಿಸುತ್ತವೆ.

ಅಗಾಧ ಕಾಡಿನ ನಡುವೆ ಯಾವುದೇ ಅಪಾಯಕಾರಿ ಪ್ರಾಣಿಗಳು, ಪಕ್ಷಿ ಅಥವಾ ಜಲಚರ ಯಾವುದೂ ಈ ಐವರನ್ನು ವಿಚಲಿತಗೊಳಿಸುವುದಿಲ್ಲ. ಆದರೆ ಅವರ ಚೇಷ್ಟೇಗಳೇ ಹೇಗೆ ಗೊಂದಲಕ್ಕೆ ಸಿಕ್ಕಿಸುತ್ತವೆ ಎಂಬುದು ಪ್ರೇಕ್ಷಕನಲ್ಲಿ ಉಕ್ಕುವ ನಗೆಯ ಕಾರಣ.

ಹೀಗೆ ಮೊದಲರ್ಧ ಮುಗಿಯುವ ಹೊತ್ತಿಗೆ ಇವರ ಗುರಿ ಮುಟ್ಟುವಿಕೆ ಸಾಧ್ಯವಾಗುತ್ತದೆ. ಜೊತೆಗೆ ಒಂದಷ್ಟು ಕಾಲ ಕರ್ನಾಟಕವನ್ನು ಕಾಡಿದ ನರಹಂತಕನ ಭೂತ ಎದುರಾಗುತ್ತದೆ.

ಮುಂದೆ ಆ ಭೂತ ಚೇಷ್ಟೇಯದೇ ಮಾತು. ನಿಜ ಜೀವನದಲ್ಲಿ ಅತ್ಯಂತ ಕ್ರೌರ್ಯ ಮೆರೆದಿದ್ದ ಆ ಭೂತ ಅತಿಮಾನುಷ ಶಕ್ತಿಯನ್ನು ಹೊಂದಿದ್ದರೂ ಮೃದು ಧೋರಣೆ ತಳೆದಿರುತ್ತದೆ ಏಕೆ..

ಅಥವಾ ಭೂತದ ಭಯಾನಕತೆಯನ್ನು ನಿರ್ದೇಶಕರು ಅರಗಿಸಿಕೊಂಡಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ (ಕಥೆ ಸತ್ಯ ಶೌರ್ಯ ಸಾಗರ್). ಆದರೆ ಕಾಡುಗಳ್ಳನ ಆ ಭೂತದ ಕಾರಣ ನಡೆಯುವ ಘಟನಾವಳಿಗಳು ಥ್ರಿಲ್ ನ ಜೊತೆಗೆ ನಗೆಯನ್ನು ಮೊಗೆದು ಕೊಡುತ್ತವೆ.

ಅಮಾಯಕತ್ವ ತುಂಬಿಕೊಂಡ ಐವರಿಗೆ ಅಗಾಧ ಸಂಪತ್ತು ವಶವಾಗುವುದಿಲ್ಲ. ಬದಲಿಗೆ ಅವರು ಎಂತಹ ವಿಪತ್ತು ಎದುರು ಹಾಕಿಕೊಳ್ಳುತ್ತಾರೆ ಎಂಬುದೇ ಕ್ಲೈಮ್ಯಾಕ್ಸ್. ಜೊತೆಗೆ ಚಿತ್ರದ ಭಾಗ ಎರಡಕ್ಕೆ ಮುನ್ನುಡಿ.

ರಂಗಾಯಣ ರಘು ಹಾಗೂ ಚಿಕ್ಕಣ್ಣ ಎಂದಿನ ಕಾಮಿಡಿ ವರಸೆಯಲ್ಲಿ ಮಿಂದೇಳುವ ಸನ್ನಿವೇಶಗಳಲ್ಲಿ ಉಳಿದವರು ಕಣ್ಣುಗಳಲ್ಲೇ ನಟಿಸಿರುವುದು ವಿಶೇಷ. ಶರಣ್ಯ ಶೆಟ್ಟಿ ಕಾಣಿಸಿಕೊಂಡರೂ ಕಾಡಿನಲ್ಲಿ ಅವರ ಪಾತ್ರವಿಲ್ಲ. ಕಾಡಿನ ದೃಶ್ಯಗಳಿಗಿಂತ ಧರ್ಮವಿಶ್ ಅವರ ಹಿನ್ನೆಲೆ ಸಂಗೀತದ ಝಲಕ್ ಪ್ರೇಕ್ಷಕನನ್ನು ಹೆಚ್ಚಿನ ಥ್ರಿಲ್ ಗೆ ಒಳಪಡಿಸುತ್ತದೆ.

ಲಾಜಿಕ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ನೋಡಿ ನಕ್ಕು ಮೈ ಮನ ಹಗುರಾಗಿ ಬರಲು ‘ಫಾರೆಸ್ಟ್’ ನ ದಾರಿ ಹಿಡಿಯ ಬಹುದು. ಜೊತೆಗೆ ಹಳೆಯ ನೆನಪುಗಳನ್ನು ಎಳೆದುಕೊಳ್ಳಲು ಸಹಕಾರಿ.

Social Share :

ತಾಯವ್ವ ಜಾನಪದ ಹಾಡುಗಳು ಮತ್ತು ಭಾ.ಮ.ಹರೀಶ್ ಆಡಿಯೋ

Social Share :

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಆಡಿಯೋ ಕಂಪನಿ ಆರಂಭಿಸಿದ್ದು, ಕಿಚ್ಚ ಸುದೀಪ್ ಅದನ್ನು ಅನಾವರಣ ಗೊಳಿಸಿದ್ದಾರೆ.

ಈಚೆಗೆ ಜಿ.ಟಿ.ಮಾಲ್ ನ ಎಂ.ಎಂ.ಬಿ ಲೆಗಾಸಿಯಲ್ಲಿ ‘ತಾಯವ್ವ’ ಚಿತ್ರದ ಹಾಡುಗಳ ಬಿಡುಗಡೆ ವೇಳೆ ಆಡಿಯೋ ಕಂಪನಿ ಅಸ್ವಿತ್ವ ತಳೆದಿದ್ದು, ಅದೇ ಚಿತ್ರದ ಹಾಡುಗಳನ್ನು ಮೊದಲು ಹೊರ ತರಲಾಗಿದೆ.

ಹಿಂದೆ ತಾಯವ್ವ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ಕಿಚ್ಚ ಸುದೀಪ್, ಈಗ ಅದೇ ಹೆಸರಿನ ಚಿತ್ರದ ಹಾಡುಗಳ ಬಿಡುಗಡೆ ಹಾಗೂ ಆಡಿಯೋ ಕಂಪನಿ ಬಿಡುಗಡೆಯಲ್ಲಿ ಭಾಗವಹಿಸಿದ್ದರು.

‘ಕೆಲವು ಸ್ನೇಹಗಳನ್ನು ದೂರವಿಟ್ಟಿದ್ದರೆ ಚೆನ್ನಾಗಿತ್ತು’ ಎಂದು ಭಾ.ಮ.ಹರೀಶ್ ಕಾಲೆಳೆಯುವಂತೆ ಸುದೀಪ್ ಮಾತನಾಡಿದ್ದರೂ ಅವರ ಈಚಿನ ಕೆಲವು ಸ್ನೇಹಗಳಿಗೆ ಹೇಳಿದ ವಿದಾಯದತಿತ್ತು ಆ ಭಾಷಣ.

ಆಡಿಯೋ ಯಾವ ರೀತಿ, ಎಲ್ಲಿಯೂ ಆಗದೆ ಉಳಿದಿದ್ದನ್ನು ನೀವು‌ಮಾಡುತ್ತೀರಾ ಎಂದು ಮತ್ತೆ ಮತ್ತೆ ಭಾ.ಮ.ಹರೀಶ್ ಕಾಳೆದರು ಸುದೀಪ್.

‘ತಾಯವ್ವ’ ಚಿತ್ರದಲ್ಲಿ ಅಭಿನಯಿಸಿರುವ ಗೀತಪ್ರಿಯ ಆ ಚಿತ್ರದ 11 ಕಿರು ಗೀತೆಗಳಿಗೂ ಧ್ವನಿಯಾಗಿರುವ ವಿಷಯಗಳನ್ನು ವಿವರಿಸಿದರು.

ಅನಂತ ಆರ್ಯನ್ ಸಂಗೀತದಲ್ಲಿ ಜಾನಪದದ ಹಿನ್ನೆಲೆಯ ಹಾಡುಗಳು ಗಮನ ಸೆಳೆದವು. ಮುಗ್ಧತೆ ಬೆರೆಸಿದ ಅದೇ ಹಳೆ ಶೈಲಿಯಿಂದ ಮನ ಗೆದ್ದವು.

ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಚಿತ್ರವನ್ನು ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.

ಪದ್ಮಾವತಿ ಬಹಳ ವರ್ಷಗಳ ಗೆಳತಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಶ್ರಮವಹಿಸಿ ಕಲಿತು ಹಾಡಿದ್ದೇನೆ ಎಂಬ ವಿವರಗಳನ್ನು ನೀಡಿದರು ಗೀತಪ್ರಿಯ.

Social Share :

ಅನ್ ಲಾಕ್ ರಾಘವ ಟ್ರೈಲರ್ ಮಿಲಿಂದ್-ರಚೆಲ್ ಹುಕ್ ಸ್ಟೆಪ್

Social Share :

* ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಶಂಸೆ *

ಮಿಲಿಂದ್ ಗೌತಮ್ ಹಾಗೂ ರಚೆಲ್ ಡೇವಿಡ್ ಅಭಿನಯದ ‘ಅನ್ ಲಾಕ್ ರಾಘವ’ ಚಿತ್ರದ ಟೀಸರ್ ನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಿದರು.

ಇದೇ ವೇಳೆ ‘ರಾಘವ ರಾಘವ..’ ಎಂಬ ಹಾಡನ್ನು ಬಿಡುಗಡೆಗೊಳಿಸಿ ಆ ಹಾಡಿನಲ್ಲಿ ಬರುವ ಸಂಗೀತಕ್ಕೆ ಮಿಲಿಂದ್ ಹಾಗೂ ರಚೆಲ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಈಗಾಗಲೇ ಟೀಸರ್ ಹಾಗೂ
ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ‘ಅನ್ ಲಾಕ್ ರಾಘವ’ ಚಿತ್ರ ಬಿಡುಗಡೆಗೆ ಸನಿಹವಾಗಿದೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಟ್ರೈಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್,‌ ವಾಣಿಜ್ಯ ಮಂಡಳಿ ಪದಾಧಿಕಾರಿ ಕುಶಾಲ್, ಭಾ.ಮ.ಗಿರೀಶ್, ನಟ ಪ್ರಥಮ್, ಜಿಮ್ ರವಿ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಿತ್ರದ ಶೀರ್ಷಿಕೆಯನ್ನು ಹಿಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಬಿಡುಗಡೆ ಮಾಡಿದ್ದರು. ಈಗ ಚಿತ್ರದ ಟ್ರೇಲರ್ ಅವರಿಂದಲೇ ಬಿಡುಗಡೆಯಾಗಿದ್ದು ಖುಷಿಯಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿತು.

ಕಥೆ, ಚಿತ್ರಕಥೆಯನ್ನು ‘ರಾಮ ರಾಮ ರೆ’ ಖ್ಯಾತಿಯ ಸತ್ಯಪ್ರಕಾಶ್ ಬರೆದಿದ್ದು, ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಚಿತ್ರ ಫೆಬ್ರವರಿ 7 ರಂದು ತೆರೆಗೆ ಬರಲಿದೆ ಎಂಬ ವಿವರ ನೀಡಿದ್ದು, ನಿರ್ದೇಶಕ ದೀಪಕ್ ಮಧುವನಹಳ್ಳಿ.

ಸಾಧುಕೋಕಿಲ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ಮಾಡಿರುವ ಪಾತ್ರ ಈವರೆಗೂ ಯಾವ ಚಿತ್ರದಲ್ಲೂ ಮಾಡಿಲ್ಲ ಎಂದವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಿಲಿಂದ್ ಗೌತಮ್.

ಈಚೆಗೆ ಚಿತ್ರವನ್ನು ನೋಡಿದಾಗ ಎಲ್ಲಾ ಕಷ್ಟಗಳು ಮರೆತು ಹೋದವು. ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ ಎಂಬ ವಿವರ ನೀಡಿದರು ನಿರ್ಮಾಪಕರಾದ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್. ಗೀತರಚನೆಕಾರ ಹೃದಯಶಿವ ಹಾಡುಗಳ ಬಗ್ಗೆ ಮಾತನಾಡಿದರು.

Social Share :

ಅದ್ಭುತ ಸಾಹಸಗಳ ಎವೆರೆಸ್ಟ್ ಬಿಡುಗಡೆಗೆ ಸಜ್ಜಾಗಿದೆ ಫಾರೆಸ್ಟ್

Social Share :

* ಜನವರಿ 24 ಚಿತ್ರ ಬಿಡುಗಡೆ *

* ಎನ್.ಎಂ.ಕಾತರಾಜ್ ನಿರ್ಮಾಣ *

* ಆನೆ ಸಾಹಸದ ಆಕರ್ಷಣೆ *

ಉದ್ಯಮಿ ಎನ್.ಎಂ.ಕಾತರಾಜ್ ನಿರ್ಮಾಣದ ಅಡ್ವೆಂಚರ್ ಕಾಮಿಡಿ ಜಾನರ್ ನ ಅದ್ದೂರಿ ಚಿತ್ರ ‘ಫಾರೆಸ್ಟ್’ ಈ ವಾರ ಬಿಡುಗಡೆ ಕಾಣುತ್ತಿದೆ.

ಕಾಮಿಡಿ ಸ್ಟಾರ್ ಚಿಕ್ಕಣ್ಣ, ರಂಗಾಯಣ ರಘು, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ಅದ್ದೂರಿತನದಿಂದ
ಕೂಡಿದೆ.

ಈಚೆಗೆ ನಡೆದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಚಿತ್ರತಂಡ ಅತ್ಯುತ್ಸಾಹದಿಂದ ಪಾಲ್ಗೊಂಡಿತ್ತು.

ನಿರ್ಮಾಪಕ ಎನ್.ಎಂ.ಕಾಂತರಾಜ್, ನಿರ್ದೇಶಕ ಚಂದ್ರಮೋಹನ್, ಸಂಭಾಷಣೆ ಬರೆದಿರುವ ಸತ್ಯ ಶೌರ್ಯ ಸಾಗರ್ ಹಾಗೂ ಸಂಗೀತ ನಿರ್ದೇಶಕ ಧರ್ಮವಿಶ್ ಪಾಲ್ಗೊಂಡು ವಿವರಗಳನ್ನು ನೀಡಿದರು.

ಚಿತ್ರ ಅತ್ಯುತ್ತಮ ಸಾಹಸಗಳ ಫಲವಾಗಿದೆ. ಸಾಕಷ್ಟು ಖರ್ಚಾಗಿದೆ. ಕನ್ನಡ ಚಿತ್ರರಸಿಕರು ಈ ಚಿತ್ರವನ್ನು ಆನಂದದಿಂದ ಸ್ಬೀಕರಿಸುವರು ಎಂಬ ಭರವಸೆಯೂ ನನಗಿದೆ ಎಂದರು ನಿರ್ಮಾಪಕ ಕಾಂತರಾಜ್.

ಚಿತ್ರವನ್ನು ಸುಮಾರು 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂಬ ವಿವರಗಳನ್ನೂ ನೀಡಿದರು.

ಅರಣ್ಯದಲ್ಲಿ ನಡೆಯುವ ಒಂದು ಹುಡುಕಾಟ; ಆ ಸಮಯದಲ್ಲಿ ಎದುರಾಗುವ ಸಮಸ್ಯೆಗಳು, ಹಾಗೆಯೇ ಅನೇಕ ತಮಾಷೆಯ ಝಲಕ್ ಗಳು ನೋಡುಗರಿಗೆ ಮಜಾ ನೀಡಿತ್ತವೆ ಎಂದರು ನಿರ್ದೇಶಕ ಚಂದ್ರ ಮೋಹನ್.

ಅಲ್ಲದೆ ಮೈ ಜುಂ ಎನಿಸುವ ಸಾಹಸ ದೃಶ್ಯಗಳು ಚಿತ್ರದಲ್ಲಿವೆ. ಕಾಡಿನೊಳಗಿನ ವಿಸ್ಮಯಗಳನ್ನು ತೆರೆದಿಡುವಲ್ಲಿ ಅಪ್ರತಿಮ ನಿಗೂಢ ಶೋಧಗಳಿವೆ ಎಂದರು.

ಚಿಕ್ಕಣ್ಣ , ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಅರ್ಚನಾ ಕೊಟ್ಟಿಗೆ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಶರಣ್ಯ ಶೆಟ್ಟಿ ಸಹ ಚಿತ್ರದ ಭಾಗವಾಗಿದ್ದಾರೆ. ಮಡಿಕೇರಿಯ ಸಂಪಂಜೆ ಕಾಡಿನಲ್ಲಿ ಚಿತ್ರಕ್ಕೆ 25 ದಿನಗಳ ಚಿತ್ರೀಕರಣ ನಡೆಸಲಾಗಿದೆ.

ಅಲ್ಲದೆ ಮಲೆ ಮಹದೇಶ್ವರ ಬೆಟ್ಟ, ಬೆಂಗಳೂರಿನಲ್ಲೂ ಚಿತ್ರೀಕರಣ ನಡೆಸಲಾಗಿದೆ. ಸತ್ಯ ಶೌರ್ಯ ಸಾಗರ್ ಕಥೆ ಚಿತ್ರಕಥೆ ಬರೆಯಲು ನೆರವಾಗಿದ್ದಾರೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.

ಇದು ಕಾಡನ್ನು ಬೆಳೆಸುವ ಅಥವಾ ಉಳಿಸುವ ಕಥೆಯಲ್ಲ; ಬದಲಿಗೆ ಕಾಡಿನಲ್ಲಿರುವುದನ್ನು ಹುಡುಕುವ ಕಥೆ. ನನ್ನದು ಇದರಲ್ಲಿ ಮಂತ್ರವಾದಿ ಪಾತ್ರ ಎಂದರು ರಂಗಾಯಣ ರಘು.

ಅಮಾಯಕರ ಕಥೆಯಲ್ಲಿ ನನ್ನದು ಒಂದು ಪಾತ್ರವಿದೆ ಎಂದು ಚಿಕ್ಕಣ್ಣ ಹೇಳಿದರೆ, ಚಿತ್ರದಲ್ಲಿ ಅಮಾಯಕರಲ್ಲಿ ಅಮಾಯಕನ ನನ್ನದು ಎಂದವರು ಗುರುನಂದನ್.

ಅನೀಶ್ ತೇಜೇಶ್ವರ್ ಇದೇ ಮೊದಲ ಬಾರಿಗೆ ಬೇರೆ ಜಾನರ್ ನ ಚಿತ್ರ ಮಾಡಿದ್ದರೆ, ಅರ್ಚನಾ ಕೊಟ್ಟಿಗೆ ಸಾಹಸ ದೃಶ್ಯಗಳನ್ನು ಮಾಡಿರುವುದು
ವಿಶೇಷ ಎಂಬ ಮಾಹಿತಿಗಳು ಬಂದವು.

ಶರಣ್ಯ ಶೆಟ್ಟಿ ಕೂಡ ಈ ಚಿತ್ರದ ಭಾಗವಾಗಿದ್ದಾರೆ ಎಂಬ ವಿವರಗಳು ಬಂದವು.

Social Share :

ವಿಷ್ಣು ಮಂಚ್ ಆಕ್ಷನ್ ಕಣ್ಣಪ್ಪ ಬಹು ತಾರಾಗಣದ ಅದ್ದೂರಿ

Social Share :


* ಡಾ.ರಾಜ್ ಕುಮಾರ್ ಸ್ಫೂರ್ತಿಯ ಚಿತ್ರ *

* ಕರ್ನಾಟಕದಲ್ಲಿ ಮೊದಲ ಪ್ರಚಾರ *

* ರಾಕ್ ಲೈನ್ ವಿತರಣೆ *

* ಮೋಹನ್ ಬಾಬು ನಿರ್ಮಾಪಕ *

ಇವನು ಭಕ್ತಿ ಭಾವದ ಮುಗ್ಧ ಕಣ್ಣಪ್ಪನಲ್ಲ! ಆದರೆ ಕಣ್ಣಪ್ಪ ಮೊದಲಿಗೆ ಏನು ಎಂಬುದನ್ನು ಸಾರುವ ಬಹುಕೋಟಿ ವೆಚ್ಚದ ಅದ್ದೂರಿ ಚಿತ್ರ.

ಹೌದು ತೆಲುಗಿನ ಸ್ಟಾರ್ ನಟ ಮೋಹನ್ ಬಾಬು ನಿರ್ಮಾಣದ ಹಾಗೂ ಅವರ ಪುತ್ರ ವಿಷ್ಣು ಮಂಚ್ ಮುಖ್ಯ ಪಾತ್ರದಲ್ಲಿರುವ ‘ಕಣ್ಣಪ್ಪ’ ಬಿಡುಗಡೆಗೆ ಸಜ್ಜಾಗಿದ್ದು, ಅದರ ಪ್ರಚಾರ ಕಾರ್ಯ ಕರ್ನಾಟಕದಿಂದಲೇ ಆರಂಭವಾಗಿದೆ.

ಧೀರ ರಾಕ್ ಲೈನ್ ವೆಂಕಟೇಶ್ ಅವರು ಚಿತ್ರವನ್ನು ವಿತರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಕರ್ನಾಟಕದಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಈಚೆಗೆ ಸ್ಟಾರ್ ಹೊಟೇಲ್ ನಲ್ಲಿ ವಿಷ್ಣು ಮಂಚ್ ಸೇರಿದಂತೆ ಗಣ್ಯರು ಈ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

ಚಿತ್ರದಲ್ಲಿ ನೃತ್ಯ ನಿರ್ದೇಶನ ಮಾಡಿರುವ ಪ್ರಭುದೇವ, ನಟಿಸಿರುವ ಶರತ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್ ಚಿತ್ರದ ಬಗ್ಗೆ ಮಾಹಿತಿಗಳನ್ನು ನೀಡಿದರು.

ಈ ಕಣ್ಣಪ್ಪ ಸಾಮಾನ್ಯನಲ್ಲ; ಅಪ್ರತಿಮ ಹೋರಾಟಗಾರ ಮತ್ತು ಅದಮ್ಯ ಭಕ್ತಿ ಸಿಂಚನ ತುಂಬಿಕೊಂಡವನು. ಹಾಗಾಗಿ ಚಿತ್ರದ ಮಾದರಿಯೇ ಬೇರೆಯಾಗಿದೆ. ಒಂದು ಕಮರ್ಷಿಯಲ್ ಚಿತ್ರದ ಎಲ್ಲಾ ಗುಣಗಳಿವೆ ಎಂದರು ವಿಷ್ಣು ಮಂಚ್.

ನನಗೆ ವರನಟ ಡಾ.ರಾಜ್ ಕುಮಾರ್ ಅವರ ಮೊದಲ ಚಿತ್ರ ‘ಬೇಡರ ಕಣ್ಣಪ್ಪ ‘ ಸ್ಫೂರ್ತಿ. ಆನಂತರ ಶಿವರಾಜ್ ಕುಮಾರ್ ‘ಶಿವ ಮೆಚ್ಚಿದ ಕಣ್ಣಪ್ಪ’ ಮಾಡಿದ್ದರು. ಅದರಲ್ಲಿ ರಾಜ್ ಕುಮಾರ್ ಸರ್ ಶಿವನ ಪಾತ್ರದಲ್ಲಿ ನಟಿಸಿದ್ದರು. ಇವೆರಡೂ ಚಿತ್ರಗಳು ನಮಗೆ ಅನುಕರಣೆಯಾಗಿವೆ ಎಂದರು.

ಇದೇ ಕಾರಣದಿಂದಲೇ ನಾವು ನಮ್ಮ ಈ ಚಿತ್ರದ ಪ್ರಚಾರ ಕಾರ್ಯವನ್ನು ಇಲ್ಲಿಂದಲೇ (ಕರ್ನಾಟಕ) ಆರಂಭಿಸಿದ್ದೇವೆ. ಇದಕ್ಕೆ ರಾಕ್ ಲೈನ್ ವೆಂಕಟೇಶ್ ಅವರ ಸಹಕಾರ ದೊಡ್ಡದು ಎಂದರು ವಿಷ್ಷು ಮಂಚ್.

ಸಾಕಷ್ಟು ಅಧ್ಯಯನದ ಬಳಿಕ ಈ ಕಥೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಭಕ್ತಿ ಭಾವದಲ್ಲಿ ಮತ್ತು ಚಾರಿತ್ರಿಕ ಸಂಗತಿಗಳನ್ನು ಹುಡುಕುವುದರಲ್ಲಿ ಮೊದಲಿನಿಂದಲೂ ನನಗೆ ಹೆಚ್ಚು ಆಸಕ್ತಿ. ಆ ಶ್ರಮ ಇಲ್ಲಿ ಹಾಕಿದ್ದೇನೆ ಎಂದು ಹೇಳುತ್ತಾ ಹೋದರು.

ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಲಯಾಳಂ ನ ಮೋಹನ್ ಲಾಲ್ ಹಾಗೂ ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ಗಳಿದ್ದು, ಅವರ ಪಾತ್ರಗಳ ಬಗ್ಗೆ ಹೇಳಲು ಮುಂದಿನ ದಿನಗಳನ್ನು ಕಾದು ನೋಡಿ ಎಂದರು.

ಕನ್ನಡದವರೇ ಆದ ದೇವರಾಜ್, ಸಾಧು ಕೋಕಿಲ ಹಾಗೂ ಇತರರು ಕೂಡ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಡೇಟ್ ಸಿಗಲಿಲ್ಲ. ಅವರಿಗಾಗಿ ನಾವು ಪ್ರಯತ್ನ ಮಾಡಿದ್ದೆವು ಎಂದೂ ಹೇಳಿದರು.

ಅಂಬರೀಷ್ ಅಂಕಲ್ ನಮ್ಮ ಫ್ಯಾಮಿಲಿ ಸದಸ್ಯರಂತೆ ಅವರ ಮೇಲಿನ ಗೌರವ ನಮ್ಮ ಸಂಬಂಧವನ್ನು ಇಲ್ಲಿ ಗಟ್ಟಿ ಮಾಡಿದೆ. ಅಪ್ಪನ ಮೇಲಿನ ಪ್ರೀತಿಯಿಂದ ದೊಡ್ಡ ದೊಡ್ಡ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಹೇಳುತ್ತಲೇ ಹೋದರು ವಿಷ್ಣುಮಂಚ್.

ಮೋಹನ್ ಬಾಬು ಅವರು ಕರೆದು ಈ ಚಿತ್ರವನ್ನು ಡಬ್ಬಿಂಗ್ ಗೆ ಮುಂಚೆಯೇ ತೋರಿಸಿದರು. ನಿಜಕ್ಕೂ ಅದ್ಭುತ ಅನಿಸಿತು. ಹಾಗಾಗಿ ಕರ್ನಾಟಕದಲ್ಲಿ ವಿತರಣೆ ಮಾಡಲು ಮನಸ್ಸು ಮಾಡಿರುವುದಾಗಿ ವಿವರಿಸಿದರು ರಾಕ್ ಲೈನ್ ವೆಂಕಟೇಶ್.

ಎರಡನೇ ಬಾರಿಗೆ ದೊಡ್ಡ ಮಟ್ಟದಲ್ಲಿ ‘ಮಹಾ ಭಾರತ’ ಧಾರಾವಾಹಿ ನಿರ್ದೇಶನ ಮಾಡಿದ್ದ ಮುಕೇಶ್ ಕುಮಾರ್ ಸಿಂಗ್ ‘ಕಣ್ಣಪ್ಪ’ ನಿರ್ದೇಶನ ಮಾಡಿದ್ದಾರೆ.

ಆಂಜನೇಯ, ಶ್ರೀ ಕೃಷ್ಣದೇವರಾಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಡಾ. ರಾಜ್ ಕುಮಾರ್ ಹುಟ್ಟಿದ ನಾಡಿಗೆ ಪ್ರಣಾಮಗಳು ಎಂದು‌ ಮಾತಿಗಾರಂಭಿಸಿದರು ಚಿತ್ರದ ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್.

ಡಾ. ರಾಜಕುಮಾರ್ ಅವರು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರು. ‘ಕಣ್ಣಪ್ಪ’ ಚಿತ್ರ ಮಾಡಲು ಅದು ದೊಡ್ಡ ಸ್ಫೂರ್ತಿ. ನಾನು ಆ ಚಿತ್ರವನ್ನು ನೋಡಿದ್ದೇನೆ. ಆ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಅವರ ಅಭಿನಯ ಎಂತಹ ಕಲಾವಿದರಿಗೂ ದೊಡ್ಡ ಸವಾಲು. ಅದನ್ನು ಮರುಸೃಷ್ಟಿಸುವುದು ಸಹ ಸವಾಲು. ದೊಡ್ಡ ಕಲಾವಿದರ ಮತ್ತು ತಂತ್ರಜ್ಞರ ಬಳಗದ ಸಹಾಯದಿಂದ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಾಗಿದೆ ಎಂದರು.

ಶಿವ ಭಕ್ತನ ಕುರಿತಾದ ಒಂದು ಚಿತ್ರ ಮಾಡುವುದರ ಜೊತೆಗೆ ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಅದನ್ನು ಸಾಧ್ಯವಾಗಿಸಿದವರು ವಿಷ್ಣು ಮಂಚು ಮತ್ತು ಡಾ. ಮೋಹನ್‍ ಬಾಬು ಎಂದು ವಿವರಿಸಿದರು.

ನೃತ್ಯ ನಿರ್ದೇಶನ ಮಾಡಿರುವ ಪ್ರಭುದೇವ ಹಾಗೂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶರತ್ ಕುಮಾರ್ ಕನ್ನಡದಲ್ಲಿಯೇ ಮಾತನಾಡಿದ್ದು ವಿಶೇಷವಾಗಿತ್ತು. ಇದು ಭಾರತೀಯರು ಹೆಮ್ಮೆ ಪಡುವ ಅವಿಸ್ಮರಣೀಯ ಚಿತ್ರವಾಗಲಿದೆ ಎಂದರು ಶರತ್ ಕುಮಾರ್.

ಅಂದ ಹಾಗೆ ಚಿತ್ರವು ಏಪ್ರಿಲ್ 25ರಂದು ವಿಶ್ವವ್ಯಾಪಿ ಬಿಡುಗಡೆ ಕಾಣಲಿದೆ. ಏಪ್ರಿಲ್ 24 ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಆಶೀರ್ವಾದ ಕೂಡ ಇದೆ ಎಂಬುದು ವಿಷ್ಣುಮಂಚ್ ಅಭಿಪ್ರಾಯ.

 

 

Social Share :

ಶ್ರೇಯಸ್ ವಿಷ್ಣು ಪ್ರಿಯ ಪ್ರೇಮಿಗಳ ಅಮರ ಕಾವ್ಯ

Social Share :

ಇದು ಇನ್ನೂ ಹದಿಹರೆಯದ ಯುವ ಪ್ರೇಮಿಗಳ ಪ್ರೇಮ ಕಥಾನಕ. ಒಂದು ರೀತಿಯಲ್ಲಿ ಪ್ರಕೃತಿ ಮಡಿಲಿನಲ್ಲಿ ನವಿಯುವ ‘ಅಮರ ಕಾವ್ಯ’.

ಗಂಡುಗಲಿ ನಿರ್ಮಾಪಕ ಕೆ.ಮಂಜು ಬಿಂದ್ಯಾ ಮೂವೀಸ್ ಮೂಲಕ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅವರ ಪುತ್ರ ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕಣ್ಸನ್ನೆ ಖ್ಯಾತಿಯ ಪ್ರಿಯಾ ವಾರಿಯರ್ ಇದ್ದಾರೆ.

ಈಚೆಗೆ ನಡೆದ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ವಿಶೇಷತೆಗಳ ಬಗ್ಗೆ ವಿವರ ನೀಡುವಾಗ ಸ್ಯಾಂಡಲ್ ವುಡ್ ನ ಸ್ಟಾರ್ ಹಾಗೂ ಗಣ್ಯರು ಭಾಗವಹಿಸಿದ್ದರು.

ನಟ ಶ್ರೀಮುರಳಿ, ನಿರ್ಮಾಪಕ ರಮೇಶ್ ರೆಡ್ಡಿ, ನಟಿ ಸಪ್ತಮಿಗೌಡ, ಗೀತ ಸಾಹಿತಿ ಕವಿರಾಜ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೊಂದು ನವಿರು ಪ್ರೇಮ ಕಥೆ. ಕರ್ನಾಟಕದ ಊಟಿ ಚಿಕ್ಕಮಗಳೂರಿನ ರಮಣೀಯ ದೃಶ್ಯಗಳು ಗಮನ ಸೆಳೆಯುತ್ತವೆ. ಪ್ರಕೃತಿ ಮತ್ತು ಪ್ರೇಮದ ಬೆಸುಗೆ ಈ ಅಮರ ಕಾವ್ಯ.

ಚಿತ್ರದ ‘ಏಳು ಗಿರಿಗಳ ಏಳು ಕಡಲಿನ..’ ಎಂಬ ಡಾ.ನಾಗೇಂದ್ರಪ್ರಸಾದ್ ಬರೆದಿರುವ ಗೀತೆಯ ಇಂಗ್ಲಿಷ್ ಅವತರಣಿಕೆಯ ಸಾಲುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕಾರ್ಯದಲ್ಲಿ ಶ್ರೀಮುರಳಿ, ರಮೇಶ್ ರೆಡ್ಡಿ, ಕವಿರಾಜ್, ಶ್ರೇಯಸ್ ಭಾಗವಹಿಸಿದ್ದು ವಿಶೇಷವಾಗಿತ್ತು.

ಜೊತೆಗೆ ಕೆ.ಮಂಜು, ಪ್ರಿಯಾ ವಾರಿಯರ್ ಹಾಗೂ ಚಿತ್ರತಂಡದವರು ಸಾಥ್ ನೀಡಿದರು. ಇದೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು.

ಮುಂದಿನ ತಿಂಗಳು ಅಂದರೆ ಫೆಬ್ರವರಿ 21 ರಂದು ಚಿತ್ರವು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಚಿತ್ರದ ಪ್ರಚಾರ ಕಾರ್ಯ ವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ.

ಮಲಯಾಳಂ ಮೂಲದ ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಾಹಕ.
ತೆಲುಗು ಮೂಲದ ಗೋಪಿ ಸುಂದರ್ ಸಂಗೀತ ನಿರ್ದೇಶಕ.

ವಿ.ಕೆ.ಪ್ರಕಾಶ್ ಅವರಿಗೆ ಕನ್ನಡದಲ್ಲಿ ಇದು ಎರಡನೇ ಚಿತ್ರ. ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದಾರೆ ಎಂಬ ವಿವರಗಳು ಬಂದವು.

ಅತ್ಯುತ್ತಮ ಕಥಾವಸ್ತು ಇರುವ ಚಿತ್ರಗಳು ಮೊದಲು ಆರಂಭವಾಗಿದ್ದೇ ಕನ್ನಡದಲ್ಲಿ. ಆನಂತರ ಮಲಯಾಳಂ ಹಾಗೂ ಇತರ ಭಾಷೆಗಳು ಆಯ್ಕೆ ಮಾಡಿಕೊಂಡವು. ಬಿ.ವಿ.ಕಾರಂತ್ ಹಾಗೂ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳು ನನಗೆ ಸ್ಫೂರ್ತಿ ಯಾಗಿದ್ದವು ಎಂಬುದನ್ನು ನಿರ್ದೇಶಕ ವಿ.ಕೆ.ಪ್ರಕಾಶ್ ಮೆಲುಕು ಹಾಕಿದರು.

ಇದೊಂದು ಅತ್ಯುತ್ತಮ ಪ್ರೇಮಕಥೆ. ಹಾಗಾಗಿ ಯುವ ಸಮುದಾಯವನ್ನು ಖಂಡಿತಾ ತಲುಪುತ್ತದೆ ಎಂಬ ವಿಶ್ವಾಸವನ್ನು ನಿರ್ಮಾಪಕ ಕೆ.ಮಂಜು ವ್ಯಕ್ತಪಡಿಸಿದರು.

ಚಿತ್ರದ ಬಿಡುಗಡೆ ತಡವಾಗಿರುವುದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡಂತೆ ಮಾತನಾಡಿದ ಶ್ರೇಯಸ್ ‌ಲೇಟ್ ಆದ್ರು ಲೇಟೆಸ್ಟ್ ಆಗಿ ಚಿತ್ರ ಬಿಡುಗಡೆ ಕಾಣುತ್ತಿದೆ ಎಂದರು.

ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಅವರಂತಹ ಹಿರಿಯ ಕಲಾವಿದರ ತಾರಾಗಣವಿರುವ ಈ ಚಿತ್ರಕ್ಕೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ.

Social Share :

ರುದ್ರ ಗರುಡ ಪುರಾಣ ಟ್ರೈಲರ್ ಡಾಲಿ ಧನಂಜಯ ಸೂಪರ್..

Social Share :

* ಚಿತ್ರ ಜನವರಿ 24 ರಂದು ತೆರೆಗೆ *

ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ನಡುವೆಯೇ ‘ರುದ್ರ ಗರುಡ ಪುರಾಣ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಟ ರಾಕ್ಷಸ ಡಾಲಿ ಧನಂಜಯ, ಟ್ರೈಲರ್ ಸೂಪರ್ ಎಂದರು.

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ರಿಷಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರುದ್ರ ಗರುಡ ಪುರಾಣ’ ಚಿತ್ರವು ಇದೇ ತಿಂಗಳ 24 ರಂದು ಬಿಡುಗಡೆ ಕಾಣುತ್ತಿದೆ.

ವೀರೇಶ್ ಚಿತ್ರಮಂದಿರದಲ್ಲಿ ನಡೆದ ಟ್ರೈಲರ್ ಬಿಡುಗಡೆಗೆ ಗಂಡುಗಲಿ ನಿರ್ಮಾಪಕ ಕೆ.ಮಂಜು ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಕೋರಿದರು.

ರಿಷಿ ಕಾಲೇಜು ಹಾಗೂ ರಂಗಭೂಮಿ ದಿನಗಳ ಗೆಳೆಯ. ನಿರ್ದೇಶಕರು ಕೂಡ ಪರಿಚಿತರು. ಈ ಚಿತ್ರ ಅದ್ಭುತ ಯಶಸ್ಸು ಕಾಣಲಿ ಎಂದು ನಟ ಡಾಲಿ ಧನಂಜಯ ಹಾರೈಸಿದರು.

ನಿಜ ಧನಂಜಯ ಅವರು ಕಾಲೇಜಿನಲ್ಲಿ ನನಗೆ ಸೀನಿಯರ್ ಎಂದು ಮಾತನಾಡಿದ ರಿಷಿ ಇಂಜನಿಯರಿಂಗ್ ಅಭ್ಯಾಸದ ದಿನಗಳನ್ನು ನೆನಪಿಸಿಕೊಂಡರು.

ಈಗಾಗಲೇ ಬಿಡುಗಡೆಯಾಗಿರುವ ಹಾಡು‌ಗಳು ಹಾಗೂ ಟೀಸರ್ ಮೂಲಕ ಚಿತ್ರವು ಜನರ ಮನ ತಲುಪಿದೆ. ಟ್ರೇಲರ್ ಸಹ ಉತ್ತಮ ಪ್ರತಿಕ್ರಿಯೆ ಪಡೆದಿದೆ. ನಿರ್ದೇಶಕರ ಶ್ರಮವೂ ಚಿತ್ರಕ್ಕೆ ಸಾಕಷ್ಟಿದೆ ಎಂದು ಹೇಳುತ್ತಾ ಹೋದರು ರಿಷಿ.

ರಿಷಿಗೆ ಎದುರು ನಟಿಸಿರುವ ಪ್ರಿಯಾಂಕ ಕುಮಾರ್, ನಿರ್ದೇಶಕ ನಂದೀಶ್ ಹಾಗೂ ನಿರ್ಮಾಪಕ ಲೋಹಿತ್ ಮಾತನಾಡಿದರು.

ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಭಾಷಣೆಕಾರ ರಘು ನಿಡವಳ್ಳಿ, ಹಾಡು ಬರೆದಿರುವ ಪ್ರಮೋದ್ ಮರವಂತೆ, ಮಂಜು ಮಾಂಡವ್ಯ ಹಾಗೂ ಚಿತ್ರದಲ್ಲಿ ನಟಿಸಿರುವ ಶಿವರಾಜ್ ಕೆ.ಆರ್ ಪೇಟೆ, ಅಶ್ವಿನಿ ಗೌಡ, ಪ್ರಭಾಕರ್, ರಾಮ್ ಪವನ್ ಚಿತ್ರದ ಕುರಿತು ಮಾತನಾಡಿದರು.

ನಿರ್ಮಾಪಕಿ ಅಶ್ವಿನಿ ವಿಜಯ್ ಲೋಹಿತ್ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆ.ಪಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Social Share :

ಮಾಂಕ್ ದಿ ಯಂಗ್ ಮಾಯೆ ವಿಂಟೇಜ್ ಫ್ಯಾಂಟಸಿಯ ಸುತ್ತ

Social Share :

* ಚಿತ್ರ ಫೆಬ್ರವರಿಯಲ್ಲಿ ತೆರೆಗೆ *

ವಿಭಿನ್ನ ಕಥಾಹಂದರ ಹೊಂದಿರುವ ‘ಮಾಂಕ್ ದಿ ಯಂಗ್’ ಚಿತ್ರದಿಂದ ‘ಮಾಯೆ’ ಎಂಬ ಮನ ಸೆಳೆಯುವ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಶಿವಮೊಗ್ಗೆಯ ಹೊಸ ಪ್ರತಿಭೆ ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.

ಎನ್ ಜಿ ಓ ಮುಖ್ಯಸ್ಥೆಯಾಗಿರುವ ಉಷಾ ಚಿತ್ರದ ಕುರಿತು ಸದಾಶಯಗಳನ್ನು ವ್ಯಕ್ತಪಡಿಸಿದರು‌.
ಚಿತ್ರವು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂಬ ವಿವರ ಕೊಟ್ಟಿತು ಚಿತ್ರತಂಡ.

ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಪ್ಯಾನ್ ಇಂಡಿಯಾ ಮೂವೀ ಆಗಿದೆ. ಈ ಚಿತ್ರಕ್ಕೆ ಐದು ಜನ ನಿರ್ಮಾಪಕರು. ಈ ಐದೂ ಜನರು‌ ಬೇರೆ ಬೇರೆ ರಾಜ್ಯದವರು ಎಂಬ ವಿವರ ಕೊಟ್ಟರು ನಿರ್ಮಾಪಕರಾದ ಕರ್ನಲ್ ರಾಜೇಂದ್ರನ್.

ಅವರೊಟ್ಟಿಗೆ ಗೋಪಿಚಂದ್ ಹಾಗೂ ಲಾಲ್ ಚಂದ್ ಖತಾರ್ ಸಹ ಧ್ವನಿಗೂಡಿಸಿದರು. ಜೊತೆಗೆ ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳ ಹಾಗೂ ಸರೋವರ್ ಸಹ ನಿರ್ಮಾಣಕ್ಕೆ ಬೆಂಬಲ ನೀಡಿರುವ ವಿವರ ಕೊಟ್ಟರು.

‘ಮಾಂಕ್ ದಿ ಯಂಗ್’ ವಿಂಟೇಜ್ ಫ್ಯಾಂಟಸಿ ಜಾನರ್ ನ ಕಥಾಹಂದರ ಹೊಂದಿರುವ ಚಿತ್ರ. 1869 ನೇ ಇಸವಿಯಿಂದ ಚಿತ್ರದ ಕಥೆ ಆರಂಭವಾಗುತ್ತದೆ. ಟ್ರೈಮ್ ಟ್ರಾವೆಲ್ ನ ಥ್ರಿಲ್ ಪ್ರೇಕ್ಷಕ ಆನಂದಿಸಬಹುದು
ಎಂದರು ನಿರ್ದೇಶಕ ಮಾಸ್ಚಿತ್ ಸೂರ್ಯ.

ಈಗಾಗಲೇ ಟೀಸರ್ ಹಾಗೂ‌ ಹಾಡುಗಳ ಮೂಲಕ ಜನರ‌ ಮನಸ್ಸಿಗೆ ಹತ್ತಿರವಾಗಿರುವ ಚಿತ್ರದಲ್ಲಿ ನನ್ನ ಪಾತ್ರ ವಿಶೇಷವಾಗಿದೆ ಎಂದರು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಸರೋವರ್.

ಪ್ರಮುಖ ಪಾತ್ರದಲ್ಲಿರುವ ಸೌಂದರ್ಯ ಗೌಡ, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಸ್ವಾಮಿನಾಥನ್, ‌ ಗಾಯಕಿ ಸಿರಿ ಕಟ್ಟೆ, ಗಾಯಕ‌ ರೋಹಿತ್,‌ ಗೀತರಚನೆಕಾರ ಪ್ರತಾಪ್ ಭಟ್, ಕಲಾವಿದರಾದ ಕೃತಿ, ರವಿ ಶಂಕರ್, ಸಾರಸ್ ಮಂಜುನಾಥ್, ರವಿ ಮಟ್ಟಿ, ಸುಮಂತ್, ಶಿವಪ್ಪ ಹಾಗೂ ಇತರರು ಚಿತ್ರದ ಕುರಿತು ಮಾತನಾಡಿದರು‌.

Social Share :

ಬಹು ನಿರೀಕ್ಷಿತ ಅದ್ದೂರಿ 45 ಆಗಸ್ಟ್ 15 ರಂದು ಬಿಡುಗಡೆ

Social Share :

* ಎಳ್ಳು ಬೆಲ್ಲ ಹಂಚಿದ ತಂಡ *

* ಹಾಲಿವುಡ್ ತಂತ್ರಜ್ಞರು *

* ಮೈ ನವಿರೇಳಿಸುವ ಸಾಹಸ *

ಕನ್ನಡದ ಅದ್ದೂರಿ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡಿರುವ ಬಹು ತಾರಾಗಣ ಹಾಗೂ ಬಹುಕೋಟಿ ವೆಚ್ಚದ ’45’ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಲಾಗಿದೆ.

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ’45’ ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡಿರುವುದು ವಿಶೇಷ.

ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಸಿಹಿ ಹಂಚುವ ಕಾರ್ಯಕ್ರಮದ ಜೊತೆಗೆ ಅರೈವಲ್ ಎಂಬ ವಿಡಿಯೋ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿತು.

ಬರುವ ಆಗಸ್ಟ್‌ 15 ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಚಿತ್ರ ತೆರೆ ಕಾಣಲಿದೆ. ಇನ್ನು ಏಳು ತಿಂಗಳು ಇರುವಾಗಲೇ ಬಿಡುಗಡೆಯ ಘೋಷಣೆ ಮಾಡಿದ್ದರ ಹಿಂದೆ ಚಿತ್ರದ ತಂತ್ರಜ್ಞಾನದ ಬಳಕೆಯ ಶ್ರಮದ ವಿಷಯಗಳು ಬಿಚ್ಚಿಕೊಂಡವು.

ಅಮೆರಿಕದಲ್ಲಿ ಚಿಕಿತ್ಸೆ ಪಡೆದಿರುವ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮೊದಲು ವಿಡಿಯೋ ಮೂಲಕ ತಂಡಕ್ಕೆ ಶುಭ ಹಾರೈಸಿದರು. ಬಳಿಕ ಈ ಚಿತ್ರದಲ್ಲಿ ವಿಶೇಷವಾಗಿ ಹಾಲಿವುಡ್ ತಂತ್ರಜ್ಞರು ಭಾಗಿಯಾಗುವ ವಿಷಯ ವಿಡಿಯೋ ಮೂಲಕವೇ ಬಿಚ್ಚಿಟ್ಟಿತು ಚಿತ್ರತಂಡ.

ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ.ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಚಿತ್ರದ ಬಗ್ಗೆ ವಿವರಗಳನ್ನು ನೀಡಿದರು.

ಇದಕ್ಕೂ ಮುಂಚೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆ.ವಿ.ಎನ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ನಾರಾಯಣ್, ಮಾಜಿ ಶಾಸಕ ರಾಮಚಂದ್ರಗೌಡ, ನಿರ್ಮಾಪಕ ಕೆ.ಮಂಜು, ಅವರ ಪುತ್ರ ಶ್ರೇಯಸ್ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ವೇಳೆ ಹುಟ್ಟುಹಬ್ಬ ಆಚರಿಸಿಕೊಂಡ ರಮೇಶ್ ರೆಡ್ಡಿ ಅವರ ಪುತ್ರ ಸೂರಜ್, ಬಿಡುಗಡೆ ದಿನಾಂಕ ಘೋಷಣೆಯ ವಿಡಿಯೋ ಬಿಡುಗಡೆ ಮಾಡಿದರು.

ಡಾ. ಸಂಜಯ್ ಗೌಡ, ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಛಾಬ್ರಿಯಾ, ಆನಂದ್ ಛಾಬ್ರಿಯಾ, ಇಂದ್ರಜಿತ್ ಲಂಕೇಶ್, ಕಿರಣ್ ಭರ್ತೂರ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

ಸಾಹಸ ನಿರ್ದೇಶಕರಾದ ಡಾ.ರವಿವರ್ಮ, ಡಿಫರೆಂಟ್ ಡ್ಯಾನಿ, ಛಾಯಾಗ್ರಾಹಕ ಸತ್ಯ ಹಗ್ಡೆ ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಗಣ್ಯರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೂ ವಿಶೇಷವಾಗಿತ್ತು.

ಚಿತ್ರ ಅದ್ದೂರಿಯಾಗಿದೆ. ಬಜೆಟ್ ಚಿತ್ರದಲ್ಲಿಯೇ ಕಾಣುತ್ತದೆ. ಚಿತ್ರ ಎಷ್ಟು ಗಳಿಕೆ ಮಾಡುತ್ತದೆ ಎಂಬುದನ್ನು ಈಗಲೇ ಚರ್ಚೆ ಮಾಡುವುದು ಬೇಡ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

ಈ ಚಿತ್ರಕ್ಕಾಗಿ ಕೆನಡಾದ ತಂತ್ರಜ್ಞರು ಸಿಜಿ ಮತ್ತಿತರ ಕೆಲಸಗಳನ್ನು ಮಾಡುವ ಕುರಿತು ವಿವರಗಳನ್ನು ನಿರ್ದೇಶಕ ಅರ್ಜುನ್ ಜನ್ಯ ನೀಡಿದರು.

ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಕಾಂಬಿನೇಷನ್ ಅದ್ಭುತ. ಈ ಸಮಾರಂಭ ನೋಡಿದರೆ ಚಿತ್ರದ ದಿನಾಂಕ ಪ್ರಕಟಣೆ ಮಾಡುವ ಸಮಾರಂಭದಂತ್ತಿಲ್ಲ. ಬದಲಿಗೆ ಚಿತ್ರದ ಯಶಸ್ಸಿನ ಮಿಲನದಂತಿದೆ ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಈ ಚಿತ್ರದಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿರುವುದು ಪುಣ್ಯ. ಉಪೇಂದ್ರ ಅವರನ್ನು ನೋಡುತ್ತಾ ಬೆಳೆದ ನನಗೆ ಅವರ ಜೊತೆ ಕೆಲಸ ಮಾಡುವ ಅವಕಾಶ ಕೂಡ ಪುಣ್ಯದ್ದಾಗಿದೆ ಎಂದರು ರಾಜ್ ಬಿ.ಶೆಟ್ಟಿ.

Social Share :