Snehapriya.com

June 8, 2025

ಸಿನಿಮಾ-ಗಾಸಿಪ್

ಬೆಂಗಳೂರು ಗಲಭೆ ಬಗ್ಗೆ ಜೂಲಿ ಲಕ್ಷ್ಮಿ ಗಲಿಬಿಲಿ..

Social Share :

ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜಿ.ಹಳ್ಳಿಯಲ್ಲಿ ಗಲಭೆ ದೊಂಬಿ ನಡೆದು ಶಾಸಕರ ಮನೆಗೇ ಬೆಂಕಿ ಹಾಕಲಾಯಿತು. ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಘಟನೆ ನಡೆದು ಎರಡು ದಿನಗಳಾದರೂ ಜನರ ಮನಸ್ಸಿನಿಂದ ಮರೆಯಾಗಿಲ್ಲ.. ಮಾಧ್ಯಮಗಳಂತೂ ಅದನ್ನು ಇನ್ನೂ ಹಸಿ ಹಸಿಯಾಗಿಯೇ ತೋರಿಸುತ್ತಿವೆ.

ಇಂತಹ ಸಂದರ್ಭದಲ್ಲಿ ಮದ್ರಾಸ್ ನಲ್ಲಿ ವಾಸವಿರುವ ಜೂಲಿ ಲಕ್ಷ್ಮಿ ಎಂದೇ ಖ್ಯಾತರಾಗಿರುವ ಹಿರಿಯ ನಟಿ ಲಕ್ಷ್ಮಿ ಗಾಬರಿಗೊಂಡರು. ದುಷ್ಕರ್ಮಿಗಳು ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಂಚಿದರು ಎಂಬ ಸುದ್ದಿಯೇ ಅವರ ಗಾಬರಿಗೆ ಕಾರಣ. ತಕ್ಷಣವೇ ಹಿರಿಯ ನಟಿ ಉಮಾಶ್ರೀ ಅವರಿಗೆ ಫೋನಾಯಿಸಿ ಏನದು ಶ್ರೀನಿವಾಸಮೂರ್ತಿ ಮತ್ತು ಅವರ ಮಗನಿಗೆ ಏನೋ ತೊಂದರೆಯಾಗಿದೆಯಂತೆ ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಉಮಾಶ್ರೀ ಅವರು.. ಆ ಅಣ್ಣನಿಗೆ ಏನೂ ಆಗಿಲ್ಲ.. ತೊಂದರೆ ಎದುರಾಗಿರುವುದು ಅಖಂಡ ಶ್ರೀನಿವಾಸಮೂರ್ತಿ ಎಂಬ ಕಾಂಗ್ರೆಸ್ ಎಂ.ಎಲ್.ಎಗೆ ಎಂದು ವಿವರಿಸಿದರಂತೆ..
ಇಲ್ಲಿ ಲಕ್ಷ್ಮಿ ಅವರು ಅಂದುಕೊಂಡಿದ್ದು ಏನೆಂದರೆ ಕನ್ನಡದ ಹಿರಿಯ ನಟ ಭೋಜರಾಜ ಖ್ಯಾತಿಯ ಜೆ.ಕೆ.ಶ್ರೀನಿವಾಸಮೂರ್ತಿ ಅವರಿಗೆ ತೊಂದರೆಯಾಯಿತೆಂದು ಭಾವಿಸಿ ತಕ್ಷಣವೇ ಉಮಾಶ್ರೀ ಅವರಿಗೆ ಮತ್ತು ಸ್ವತಃ ಶ್ರೀನಿವಾಸಮೂರ್ತಿ ಅವರಿಗೆ ಫೋನಾಯಿಸಿ ಗಾಬರಿ ವ್ಯಕ್ತಪಡಿಸಿದ್ದಾರೆ. ಅಯ್ಯೋ ನನಗೇನೂ ಆಗಿಲ್ಲ ಎಂದು ಶ್ರೀನಿವಾಸಮೂರ್ತಿ ಉತ್ತರ ಕೊಟ್ಟಿದ್ದಾರೆ.

ಆ ಬಳಿಕ ಲಕ್ಷ್ಮಿ ಸಮಾಧಾನದ ಉಸಿರು ಹೊರ ಹಾಕಿದ್ದಾರೆ.

Social Share :

ಸಲಗ ಡುಯೆಟ್ ಹಾಡು ಮಧುರ

Social Share :

ಕೊರೊನಾ ಭಯದಲ್ಲಿ ಹೆಚ್ಚಿನ ಸಿನಿಮಾ ಮಂತ್ರಿ ಚಿತ್ರೀಕರಣ ಪುನರಾರಂಭಿಸಲು ಭಯಪಡುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ.. ಒಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡರೆ ಚಿತ್ರತಂಡದ ಎಲ್ಲರೂ ಕ್ವಾರಂಟೆನ್ ಗೆ ಹೋಗಬೇಕು.. ಭಯಪಡದೇ ಇನ್ನೇನು ಮಾಡಬೇಕು.

ಇಂತಹ ಕಂಠಿಣ ಸಂದರ್ಭದಲ್ಲಿಯೇ ದುನಿಯಾ ವಿಜಯ್ ಮತ್ತು ಕೆ.ಪಿ.ಶ್ರೀಕಾಂತ್ ಪ್ರಯತ್ನದಲ್ಲಿ ತಯಾರಾಗುತ್ತಿರುವ ‘ಸಲಗ’ ಚಿತ್ರತಂಡ ಅತಿ ಸುಮಧುರ ಹಾಡಿನ ಚಿತ್ರೀಕರಣ ಮುಗಿಸಿದೆ.. ಅದೂ ಬಿಡುವಿರದ ಮಳೆಯ ನಡುವೆ.
ಕೋಬ್ರ ಖ್ಯಾತಿಯ ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ ಪ್ರಮುಖ‌ ಪಾತ್ರದಲ್ಲಿ‌ಕಾಣಿಸಿಕೊಂಡಿದ್ದು, ಸಂಜನಾ ಆನಂದ್ ಚಿತ್ರದ ನಾಯಕಿ.
ಟಗರು ಕೆ.ಪಿ ಶ್ರೀಕಾಂತ್ ನಿರ್ಮಾಣವಿರುವ ಈ ಚಿತ್ರ ಈಗಾಗಲೇ ಹತ್ತು ಹಲವು ವಿಶೇಷಗಳಿಂದ ಉದ್ಯಮದಲ್ಲಿ ಹಾಗೂ ಅಭಿಮಾನಿಗಳಲ್ಲಿ ಬಹಳವೇ ನಿರೀಕ್ಷೆ ಹುಟ್ಟು ಹಾಕಿದೆ. ಈ ನಡುವೆ ಕೋವಿಡ್ ಹಾವಳಿಯಿಂದ ಎಲ್ಲಾ ಕಡೆಯೂ ಪರಿಸ್ಥಿತಿ ಕಠಿಣವಾಗಿದ್ದರೂ ಸಲಗ ತಂಡ ಮಾತ್ರ ಹೆಸರಿಗೆ ಅನುಗುಣವಾಗಿಯೇ ಮುನ್ನುಗಿ ಚಿತ್ರೀಕರಣ ಮುಗಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಎಲ್ಲಾ ಸೂಚನೆಗಳನ್ನು ಪಾಲಿಸಿ, ಮುಖ್ಯ ಪಾತ್ರಧಾರಿಗಳು ಸೇರಿ ಕೇವಲ 12 ಮಂದಿ ತಂತ್ರಜ್ಞಾನದೊಂದಿಗೆ ಹಾಡು ಚಿತ್ರೀಕರಿಸಿರುವುದು ವಿಶೇಷ.
ಸಂಗೀತ ನಿರ್ದೇಶಕ ಚರಣ್ ರಾಜ್ ಸಂಯೋಜನೆಯಲ್ಲಿ ಮಳೆಯೇ ಮಳೆಯೇ ಅಂಬೆಗಾಲೊಡುತ್ತಾ ಸುರಿಯೇ…ಎಂಬ ರೊಮ್ಯಾಂಟಿಕ್ ಹಾಡು ಸಾಹಿತ್ಯಕ್ಕೆ ತಕ್ಕಂತೆ ಜಡಿ‌ಮಳೆಯಲ್ಲೇ ಚಿತ್ರೀಕರಣಗೊಂಡಿದೆ.

ದುನಿಯಾ ವಿಜಯ್ ಸಂಜನಾ ಆನಂದ್ ನಡುವಿನ ಈ ಪ್ರಣಯ ಗೀತೆ ಮಳೆ,ಚಳಿ ಯಾವುದನ್ನು ಲೆಕ್ಕಿಸದೆ ಚಿತ್ರೀಕರಿಸಲಾಗಿದೆ. ಛಾಯಾಗ್ರಹಕ ಶಿವಸೇನ ಕೆಲವು ದೃಶ್ಯಗಳನ್ನು ನೈಜವಾಗಿ ಮಳೆಯಲ್ಲೇ ಚಿತ್ರೀಕರಿಸಿದ್ದು ವಿಶೇಷ. ಇದೇ ಕಾರಣಕ್ಕೆ ಜಡಿ ಮಳೆಗಾಗಿ ಚಿತ್ರತಂಡ ನಾಲ್ಕೈದು ಗಂಟೆ ಕಾಯ್ದು ಕೆಲಸ ನಿರ್ವಹಿಸಿದೆ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಹಾಸನದ ಸಕಲೇಶಪುರ ಸೇರಿ ಪಶ್ಚಿಮ ಘಟ್ಟಗಳ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ.

Social Share :

ಅಖಿಲ ಭಾರತ ಚಿತ್ರ ಕಬ್ಜ

Social Share :

ನಿರ್ದೇಶಕ ಆರ್.ಚಂದ್ರು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ.. ಅದಕ್ಕೆ ಕಾರಣ ಅವರ ಚಿತ್ರ ‘ಕಬ್ಜ’ಗೆ ಮಾಧ್ಯಮಗಳಿಂದ ಸಿಕ್ಕಿರುವ ಪ್ರಶಂಸೆ..!
ಕಬ್ಜ ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕೆಂದು ಹೊರಟವರು ಚಂದ್ರು. ಅದಕ್ಕೆ ಪೂರಕವಾಗಿ ಭಾರತೀಯ ಮಟ್ಟದ ಮಾಧ್ಯಮಗಳು ಚಿತ್ರಕ್ಕೆ ಟಾಪ್ ರೇಟಿಂಗ್ ನೀಡಿವೆ. ಕೆ.ಜಿ.ಎಫ್, ಆರ್ ಆರ್ ಆರ್ ಚಿತ್ರಗಳ ಬಳಿಕ ಮೂರನೇ ಸ್ಥಾನವನ್ನು ಕಬ್ಜಗೆ ನೀಡಿವೆ.

ಒಂದು ಚಿತ್ರ ಇನ್ನು ನಿರ್ಮಾಣ ಹಂತದಲ್ಲಿಯೇ ಇಂತಹ ಸಾಧ‌ನೆ ಮಾಡಿರುವುದು ಹೆಚ್ಚುಗಾರಿಕೆ. ಇದರಲ್ಲಿ ಆರ್.ಚಂದ್ರು ಶ್ರಮ ಹೆಚ್ಚಾಗಿದೆ ಎಂದು ಹೇಳಲೇ ಬೇಕಿಲ್ಲ.. ಅವರು ಚಿತ್ರದ ಹೆಚ್ಚುಗಾರಿಕೆಯನ್ನು ದಾಖಲಿಸಿ ಭಾರತೀಯ ಮಟ್ಟದ ಸಿನಿಮಾ ಮಾಡಬೇಕೆಂಬ ಹಂಬಲದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇದಕ್ಕೆ ನಾಯಕ ನಟ ಉಪೇಂದ್ರ ಅವರ ಸಹಕಾರ ಹೆಚ್ಚಾಗಿದೆ ಎಂಬುದನ್ನು ಹೇಳಲೇ ಬೇಕಿಲ್ಲ.

ಆರ್.ಚಂದ್ರು ಕುಗ್ರಾಮವೊಂದರಿಂದ ಸಾಮಾನ್ಯ ಕುಟುಂಬದ ಹುಡುಗನಾಗಿ ಗಾಂಧಿನಗರಕ್ಕೆ ಬಂದವರು. ಇಲ್ಲಿ ತಮ್ಮ ಚಿತ್ರಗಳ ಮೂಲಕವೇ ದಿನದಿಂದ ದಿನಕ್ಕೆ ಬೆಳೆದವರು. ತಾಜ್ ಮಹಲ್ ನಿಂದ ಐ ಲವ್ ಯು ವರೆಗೂ ವಿಭಿನ್ನತೆ ಕಾಯ್ದುಕೊಂಡವರು. ಹಾಗಾಗಿ ಚಂದನವನದಲ್ಲಿ ಅವರು ನಿರ್ದೇಶಕ ಮತ್ತು ನಿರ್ಮಾಪಕನಾಗಿ ಬೆಳೆಯುವುದು ಸಾಧ್ಯವಾಗಿದೆ. ಕಬ್ಜದಂತಹ ದೊಡ್ಡ ಬಜೆಟ್ ನ ಚಿತ್ರಕ್ಕೆ ಅವರೇ ನಿರ್ಮಾಪಕ ಎಂಬುದನ್ನು ತಿಳಿದಾಗ ಎಂತಹವರಿಗಾದರೂ ಅಚ್ಚರಿಯಾಗುತ್ತದೆ. ಮುಖ್ಯವಾಗಿ ಕಬ್ಜಗೆ ತೆಲುಗಿನಲ್ಲಿ ಅತಿದೊಡ್ಡ ಸ್ವಾಗತ ಸಿಕ್ಕಿದೆ. ತೆಲುಗಿನಲ್ಲಿ ತಯಾರಾಗುವ ಅತಿ ದೊಡ್ಡ ಚಿತ್ರಗಳಲ್ಲಿ ಇದು ಒಂದು ಎಂಬುದನ್ನು ತಿಳಿದಾಗ ಕನ್ನಡಿಗ ಚಂದ್ರು ಬಗ್ಗೆ ಹೆಮ್ಮೆಯಾಗುತ್ತದೆ.

ಕನ್ನಡ ಮತ್ತು ತೆಲುಗಿನಲ್ಲಿ ಇದು ನೇರ ಚಿತ್ರ. ಅದಕ್ಕಿಂತ ಮೇಲಾಗಿ ಐದು ಭಾಷೆಗಳಿಗೆ ಡಬ್ ಆಗುತ್ತದೆ. ಹಾಗಾಗಿ ಇದು ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಕನ್ನಡದ ಅತಿ ದೊಡ್ಡ ಚಿತ್ರ. ಮೇಕಿಂಗ್ ನಲ್ಲಿ ವೈವಿಧ್ಯತೆ ಕಾಯ್ದು ಕೊಳ್ಳಲಾಗಿದೆ ಎಂಬುದಕ್ಕೆ ಅದರ ಫೋಟೋ ಶೂಟ್ ಚಿತ್ರಗಳು ನಿದರ್ಶನವಾಗುತ್ತವೆ.

ಏಳು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿರುವ ಕಾರಣ ಅಖಿಲ ಭಾರತ ಮಟ್ಟದ ಕಲಾವಿದರು ಇದರಲ್ಲಿ ಅಭಿನಯಿಸುತ್ತಿದ್ದಾರೆ. ಕೊರೊನಾ ಕಾರಣ ಅಲ್ಲದಿದ್ದರೆ ಇಷ್ಟು ಹೊತ್ತಿಗೆ ಚಿತ್ರೀಕರಣ ಪೂರ್ಣಗೊಳ್ಳುತಿತ್ತು. ಇನ್ನು ಒಂದೆರಡು ತಿಂಗಳಲ್ಲಿ ಚಿತ್ರೀಕರಣ ಮುಗಿಯಬಹುದು ಎಂಬ ಉತ್ತರ ನೀಡುವ ಚಂದ್ರು, ಈ ಚಿತ್ರದ ಬಜೆಟ್ ಗೆ ಮಿತಿ ಎಂಬುದೇ ಇಲ್ಲ ನಗುತ್ತಾರೆ. ಕಷ್ಟಕಾಲದಲ್ಲಿ ಒಂದು ಭಾರತೀಯ ಮಟ್ಟದ ಸಿನಿಮಾ ಮಾಡುವೆ ಎಂಬ ಕಿಚ್ಚು ನಿರ್ದೇಶಕ ರಲ್ಲಿ ಇರುವುದು ವಿರಳ. ಈ ಚಂದ್ರು ಕೂಡ ವಿರಳ ಜನರ ಸಾಲಿಗೇ.. ಸೇರಿದವರು. ಹಾಗಾಗಿ ಅವರ ಸಿನಿಮಾ ಮಾಡುವ ಆಸಕ್ತಿ ಎಂದಿಗೂ ಅನನ್ಯ.

Social Share :

ಶಿವಣ್ಣ ಚಿತ್ರರಂಗದ ನಾಯಕ ಗರಿಗೆದರಿದ ಚಟುವಟಿಕೆ

Social Share :

ಕನ್ನಡ ಚಿತ್ರರಂಗ ಸಾಟಿ ಇಲ್ಲದ ಬೆಳವಣಿಗೆ ಕಾಣುವ ಸಂದರ್ಭದಲ್ಲಿಯೇ ಕೊವಿಡ್ ಅಡ್ಡಗಾಲು ಹಾಕಿತು. ಇಡೀ ವಿಶ್ವದ ಮನರಂಜನಾ ಕ್ಷೇತ್ರ ಕೊವಿಡ್ ದುಷ್ಪರಿಣಾಮ ಎದುರಿಸಿತು ಎಂಬುದು ಬೇರೆ ಮಾತು.
ಎಲ್ಲವೂ ಸ್ತಬ್ಧವಾಗಿ ಹೋದಂತಹ ವಾತಾವರಣದಲ್ಲಿ ಚಿತ್ರರಂಗದಲ್ಲಿ ದುಡಿಯುವವರ ಬದುಕು ಬೀದಿಗೆ ಬಿದ್ದಿತು. ಕಾರ್ಮಿಕರು, ತಂತ್ರಜ್ಞರು, ಕಲಾವಿದರ ಬದುಕು ದುರ್ಬರವಾಯಿತು. ಇಂತಹ ಸಂಕಷ್ಟ ಕಾಲದಲ್ಲಿಯೇ ಕಂಡು ಬಂದಿದ್ದು ನಾಯಕನೊಬ್ಬನ ಅನಿವಾರ್ಯತೆ.
ಸದ್ಯದ ಮಟ್ಟಿಗೆ ವರನಟ ಎಅ.ರಾಜ್ ಕುಮಾರ್ ಅವರ ಸುಪುತ್ರ ಹ್ಯಾಟ್ರಿಕ್ ಹೀರೋ ಸೆಂಚುರಿಸ್ಟಾರ್ ಡಾ.ಶಿವರಾಜ್ ಕುಮಾರ್ ಚಿತ್ರರಂಗದ ಆಶಾಕಿರಣವಾಗಿದ್ದಾರೆ. ಚಿತ್ರರಂಗದ ಹಿರಿಕಿರಿಯರು ಅವರನ್ನು ಬೆಂಬಲಿಸಿದ್ದಾರೆ ಎಂಬುದು ಖುಷಿಯ ವಿಚಾರ.
ಈಚೆಗೆ ಶಿವಣ್ಣ ನಿವಾಸದಲ್ಲಿ ಸಭೆ ನಡೆದು ಅವರ ನಾಯಕತ್ವದ ಬಗ್ಗೆ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷರು ಹಾಗೂ ಚಿತ್ರರಂಗದ ಅನೇಕ ಗಣ್ಯರ ಉಪಸ್ಥಿತಿ ವಿಶೇಷವಾಗಿತ್ತು.

ಬಳಿಕ ಜುಲೈ 29ರಂದು ಶಿವಣ್ಣ ಅವರ ನಿವಾಸದಲ್ಲಿ ಕನ್ನಡ ಚಿತ್ರರಂಗದ ತಾರಾ ಬಳಗವೇ ನೆರೆದಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮುಂಚೂಣಿಯ ನಟ ಯಶ್, ಕ್ರೇಜಿಸ್ಟಾರ್ ರವಿಚಂದ್ರನ್, ಎವೆರ್ ಗ್ರೀನ್ ನಟ ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಮುರಳಿ ಹೀಗೆ ದೊಡ್ಡ ತಾರಾ ಬಳಗವೇ ಸೇರಿ ಶಿವಣ್ಣ ನಾಯಕತ್ವಕ್ಕೆ ಜೈ ಎಂದಿತು. ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಭಾಗವಹಿಸಿ ಚಿತ್ರರಂಗದ ಸಮಸ್ಯೆ ಬಗ್ಗೆ ಮುಖ್ಯ ಮಂತ್ರಿಗಳ ಗಮನ ಸೆಳೆಯುವುದಾಗಿ ಹೇಳಿದ್ದು ಬಹಳವೇ ವಿಶೇಷವಾಗಿತ್ತು.

ಕನ್ನಡ ಚಿತ್ರರಂಗ ನಾಯಕನಿಲ್ಲದ ಮನೆಯಂತೆ ಅನಾಥ ಭಾವಗಳನ್ನು ಎದುರಿಸಿದ ದಿನಗಳು ಇವೆ. ರೆಬೆಲ್ ಸ್ಟಾರ್ ಅಂಬರೀಷ್ ಅವರ ಬಳಿಕ ಚಿತ್ರರಂಗದ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವವರು.. ಕಷ್ಟಗಳಿಗೆ ಸ್ಪಂದಿಸುವವರು ಮತ್ತು ಸರ್ಕಾರದ ಮಟ್ಟದಲ್ಲಿ ಕೆಲಸಗಳನ್ನು ಮಾಡುವವರು ಯಾರು ಎಂಬುದು ಪ್ರಶ್ನೆಯಾಗಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಎಲ್ಲರಿಗೂ ಪ್ರಿಯವಾದ ಶಿವಣ್ಣ ನಾಯಕತ್ವ ವಹಿಸಿಕೊಂಡಿದ್ದಾರೆ.

ಆದರೆ ಅವರ ಮುಂದಿನ ನಡೆ ಹೂವಿನ ಹಾಸಿಗೆ ಆಗಿರುವುದಿಲ್ಲ.. ದಿನೇ ದಿನೇ ಕಾಡುತ್ತಿರುವ ಕೊರೊನಾ ಒಂದು ಕಡೆ.. ಇದರಿಂದ ಆಗಸ್ಟ್ ಅಂತ್ಯದವರೆಗೂ ಚಿತ್ರಮಂದಿರ ತೆರೆಯುವುದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ. ಚಿತ್ರಮಂದಿರಗಳು ತೆರೆಯದೇ ಚಟುವಟಿಕೆ ಅಸಾಧ್ಯ ಎಂದು ನಂಬಿಕೊಂಡಿರುವ ಚಿತ್ರರಂಗ. ಕೊನೆಗೆ ಮಲ್ಟಿ ಪ್ಲೆಕ್ಸ್ ಗಳಿಗಾದರೂ ಅವಕಾಶ ಇದೆಯಾ ಎಂದರೆ, ಅದೂ ಇಲ್ಲ.. ಸದ್ಯದ ಮಟ್ಡಿಗೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಗರಿಗೆದರುವುದಿಲ್ಲ..ಹಾಗಾಗಿ ಹೊಸದಾಗಿ ನಾಯಕತ್ವ ತೆಗೆದುಕೊಂಡಿರುವ ಶಿವಣ್ಣ ಅವರ ಮುಂದಿರುವುದೆಲ್ಲಾ ದೊಡ್ಡ ಸವಾಲು. ಆದರೆ ಅದಕ್ಕೆ ಮುಂಚೆ ಚಿಕ್ಕಪುಟ್ಟ ಸವಾಲುಗಳನ್ನು ಹೇಗೆ ನಿಭಾಯಿಸುವರು ಎಂಬುದು ಕುತೂಹಲದ ವಿಷಯವೇ.

Social Share :

ಆರ್ಕೇಸ್ಟ್ರಾ ಕಲಾವಿದರ ಬದುಕು ಬೀದಿ ಪಾಲು

Social Share :

ಇದು ಒಂದು ರೀತಿಯಲ್ಲಿ ಎಲ್ಲರಿಗೂ ಸಂಕಷ್ಟ ತಂದು ಒಡ್ಡಿರುವ ಕಾಲ. ಕೊವಿಡ್ ಪರಿಣಾಮ ಇಡೀ ವಿಶ್ವದ ಮನರಂಜನಾ ಕ್ಷೇತ್ರ ನಷ್ಟದಲ್ಲಿದೆ. ಆದರೆ ಕನ್ನಡ ನಾಡಿನಲ್ಲಿ ಎಲ್ಲಾ ಬಗೆಯ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ.
ಅದರಲ್ಲಿಯೂ ಅಲ್ಲಲ್ಲಿ ವಾದ್ಯಗೋಷ್ಠಿ ನಡೆಸಿ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಹೆಚ್ಚು ಕಡಿಮೆ ಬೀದಿ ಪಾಲಾಗಿದ್ದಾರೆ. ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಲ್ಲ. ಯಾವುದೇ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿಲ್ಲ.. ಕೊನೆಗೆ ಗಣೇಶ ಉತ್ಸವ ಕೂಡ ಅದ್ದೂರಿಯಾಗಿ ನಡೆಸದಂತೆ ಸರ್ಕಾರದ ಆದೇಶವಾಗಿದೆ.

ಇದೆಲ್ಲವೂ ಪರಿಸ್ಥಿತಿಗೆ ಅನುಗುಣವಾಗಿ ಸರಿ ಇರಬಹುದು. ಆದರೆ ಹೊಟ್ಟೆಪಾಡಿಗಾಗಿ ವಾದ್ಯಗೋಷ್ಠಿ ನಂಬಿಕೊಂಡವರ ಗತಿ ಏನಾಗಿದೆ ಮತ್ತು ಏನಾಗಬಹುದು. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘ ಮಾಧ್ಯಮಗಳ ಮುಂದೆ ಬಂದು ಅಳಲನ್ನು ತೋಡಿಕೊಂಡಿತು. ವಾದ್ಯಗೋಷ್ಠಿ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ ಎಂಬುದನ್ನು ವಿವರಿಸಿದರು ಸಂಘದ ಅಧ್ಯಕ್ಷ‌ ಶಂಕರ್.

ಇದೇ ವೇಳೆ ಉಪಸ್ಥಿತರಿದ್ದ ಮದನ್ ಮಲ್ಲು ವಾದ್ಯಗೋಷ್ಠಿ ಮುಖ್ಯಸ್ಥರು ಹಾಗೂ ನಾಯಕ ನಟ ಮತ್ತು ನಿರ್ದೇಶಕ ಮದನ್ ಪಟೇಲ್, ಗಣೇಶ ಉತ್ಸವ ಮತ್ತು ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಅವಕಾಶ ನೀಡದಿದ್ದ ಪಕ್ಷದಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.

ಸೌಂಡ್ ಆಫ್ ಮ್ಯೂಜಿಕ್ ನ ಗುರುರಾಜ್ ಅವರು ನಮ್ಮ ಜೀವಮಾನದಲ್ಲೇ ಇಂತಹ ಕಷ್ಟ ಅನುಭವಿಸಿರಲಿಲ್ಲ.. ಸರ್ಕಾರ ಸ್ಪಂದಿಸಬೇಕು.. ವಾರ್ತಾ ಇಲಾಖೆ ಸಂಸ್ಕೃತಿ ಇಲಾಖೆ ಯಾವುದು ಸ್ಪಂದಿಸಿಲ್ಲ. ಗಣೇಶ್ ಉತ್ಸವ ಮಾಡಬಾರದೆಂದರೆ ಹೇಗೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 12 ಸಾವಿರ ವಾದ್ಯಗೋಷ್ಠಿ ಮತ್ತು ಜನಪದ ಕಲಾವಿದರಿದ್ದಾರೆ. ಅವರ ಬದುಕು ಸರಿಪಡಿಸುವ ಜವಾಬ್ದಾರಿ ಸರ್ಕಾರ ಮಾಡಲಿ ಎಂದರು.

Social Share :

ರಮೇಶ್ ಶಿವಾಜಿ – ಎಲ್ಲ ಭಾಷೆಗೆ ಮಾರಾಟ

Social Share :

ಸಹಜ ನಟ ರಮೇಶ್ ಅರವಿಂದ್ ಮುಖ್ಯ ಪಾತ್ರದಲ್ಲಿರುವ ಶಿವಾಜಿ ಸುರತ್ಕಲ್ ಚಿತ್ರ ಕಳೆದ ಫೆಬ್ರವರಿ 21 ರಂದು ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಚಿತ್ರಮಂದಿರಗಳಲ್ಲಿ ತುಂಬಿದ ಗೃಹ ಪ್ರದರ್ಶನ ಕಂಡಿತ್ತು.
ಬಿಡುಗಡೆಯಾಗಿ ಮೂರು ವಾರದ ವರೆಗೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಲಾಕ್ ಡೌನ್ ಪರಿಣಾಮ ಇದಕ್ಕೂ ತಟ್ಟಿತು. ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲಾಯಿತು.

ಈ ಚಿತ್ರಕ್ಕೆ ರಾಹುಲ್ ದ್ರಾವಿಡ್ ರವರು ಮೊದಲ ಪ್ರೇಕ್ಷಕರಾಗಿದ್ದು ವಿಶೇಷ. ಚಿತ್ರದ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣವಿದೆ.

ಇದೆ ತಿಂಗಳ ಅಂದರೆ ಆಗಸ್ಟ್ 7 ರಂದು ಜಿ-5 ಎಂಬ ಓಟಿಟಿ ಅವಕಾಶದಲ್ಲಿ ಚಿತ್ರವು ಬಿಡುಗಡೆಯಾಗುತ್ತಿದೆ. ಕನ್ನಡಿಗರಲ್ಲದೆ ಕನ್ನಡೇತರರು ಕೂಡ ಈ ಚಿತ್ರವನ್ನು ನೋಡಬಹುದು.

ಇದು ಒಂದು ಪತ್ತೆದಾರಿ ಚಿತ್ರವಾಗಿದ್ದು ಚಿತ್ರಮಂದಿರದಲ್ಲಿ ಸಿಕ್ಕ ಪ್ರತಿಕ್ರಿಯೆ ಈ ಅವಕಾಶ ಬಂದಿದೆ. ಅಲ್ಲದೆ ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ಹಾಗೂ ಉತ್ತರ ಭಾರತದ ಎಲ್ಲ ಭಾಷೆಯ ಡಬ್ಬಿಂಗ್ ರೈಟ್ಸ್ ಅನ್ನು ಬಿ4ಯು ಮೂವೀಸ್ ಪಡೆದುಕೊಂಡಿದೆ ಎನ್ನಲಾಗಿದೆ. ದಕ್ಷಿಣ ಭಾರತದ ಭಾಷೆಗಳಲ್ಲೂ ಕೂಡ ಡಬ್ಬಿಂಗ್ ಆಗುವ ಬಗ್ಗೆ ಇನ್ನು ಮಾತುಕತೆ ನಡೆಯುತ್ತಿದ್ದು ಇದರ ಬಗ್ಗೆ ಮಾಹಿತಿಯನ್ನು ಚಿತ್ರದ ನಿರ್ದೇಶಕರು ನೀಡಬೇಕಿದೆ.

Social Share :

ಕಾಲಚಕ್ರದ ಅದ್ದೂರಿ ಹಾಡು

Social Share :

ವಸಿಷ್ಠ ಎನ್ ಸಿಂಹ ಮುಖ್ಯ ಪಾತ್ರದಲ್ಲಿರುವ ರಶ್ಮಿ ಫಿಲಂಸ್ ಮೂಲಕ ರಶ್ಮಿ ಕೆ ನಿರ್ಮಿಸಿರುವ ‘ಕಾಲಚಕ್ರ’ ಚಿತ್ರದ ‘ತರಗೆಲೆ’ ಹಾಡು ವರಮಹಾಲಕ್ಷ್ಮೀ ಹಬ್ಬದಂದು ಸಂಜೆ 6ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಹೆಸರಾಂತ ಗಾಯಕ ಕೈಲಾಷ್ ಕೇರ್ ಹಾಡಿದ್ದಾರೆ‌. ಸುಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಈ ಸಂಗೀತ ನೀಡಿದ್ದಾರೆ.

ಸುಮಂತ್ ಕ್ರಾಂತಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ತೆರೆಗೆ ಬರಲು ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ಲಾಕ್ ಡೌನ್ ಗೂ ಮುನ್ನ ನಡೆದಿದ್ದ ಅದ್ದೂರಿ ಸಮಾರಂಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿದ್ದರು. ಚಿತ್ರದ ಟೀಸರ್ ಗೆ ಮೆಚ್ಚುಗೆ ಸಿಕ್ಕಿದೆ.

ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ‌ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.  ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Social Share :

ಆಸ್ಕರ್ ಕೃಷ್ಣ ಚಡ್ಡಿದೋಸ್ತ್ ಮತ್ತು ಕಡ್ಡಿ

Social Share :

ಸೆವೆನ್ ರಾಜ್ ನಿರ್ಮಾಣದಲ್ಲಿ ಆಸ್ಕರ್ ಕೃಷ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ ಬಿಟ್ಟ ಚಿತ್ರವು ಸುಮಾರು ಮುಕ್ಕಾಲು ಭಾಗದಷ್ಟು ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಲಾಕ್ಡೌನ್ ನಂತರದ ಮೊದಲ ಚಿತ್ರವಾಗಿ ಮುಹೂರ್ತ ಆಚರಿಸಿಕೊಂಡ ಈ ಚಿತ್ರವು ಈಗ ಅಂತಿಮ ಹಂತದ ಚಿತ್ರೀಕರಣಕ್ಕೆ ಬಂದು ನಿಂತಿದೆ. ಖ್ಯಾತ ಕಾದಂಬರಿಕಾರ ಕೌಂಡಿನ್ಯ ರವರ ಮೈ ಡಿಯರ್ ಫ್ರೆಂಡ್ ಕಾದಂಬರಿಗೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಚಿತ್ರದಲ್ಲಿ ಒಂದು ವಿಶೇಷ ಪಾತ್ರವನ್ನು ನಿಭಾಯಿಸಿದ್ದಾರೆ ನಟ ಲೋಕೇಂದ್ರ ಸೂರ್ಯ.

ಮಲಯಾಳಿ ನಟಿ ಗೌರಿ ನಾಯರ್ ಚಿತ್ರದ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದು, ನಿರ್ಮಾಪಕ ಸೆವೆನ್ ರಾಜ್ ರವರೂ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು, ಕುಣಿಗಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಮುಂದಿನ ಭಾಗದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ.

ಚಿತ್ರಕ್ಕೆ ಗಗನ ಕುಮಾರ್ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ನಿರ್ದೇಶನ, ಅಕುಲ್ ರವರು ನೃತ್ಯ ನಿರ್ದೇಶನ, ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ಸಹ ನಿರ್ದೇಶನ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Social Share :

ವಿಕ್ರಂ ರವಿಚಂದ್ರನ್ | ಮಾರಾಟದಲ್ಲಿ ‘ತ್ರಿವಿಕ್ರಮ’

Social Share :

ಕನ್ನಡದ ಕನಸುಗಾರ ವಿ.ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಬಹಳ ಹಿಂದೆಯೇ ಚಿತ್ರರಂಗ ಪ್ರವೇಶ ಮಾಡುವ ಕನಸು ಕಂಡಿದ್ದರು. ಅದೇಕೋ ಎಲ್ಲವೂ ಕೂಡಿ ಬರಲಿಲ್ಲ.. ಕನ್ನಡದ ಸದ್ಯದ ಮುಂಚೂಣಿಯ ನಿರ್ದೇಶಕರಲ್ಲಿ ಒಬ್ಬರಾಗಿರುವ ನಾಗ್ ಶೇಖರ್ ವಿಕ್ರಂ ಸ್ಟಾರ್ ಆಗುವ ಕನಸು ಕಂಡು ಓಡಾಡಿದರು. ಅದೇನಾಯಿತೋ ಆ ಚಿತ್ರ ಮುಂದೆ ಸರಿಯಲಿಲ್ಲ.

ಸದ್ಯ ವಿಕ್ಕಿಗೆ ಈಗ ‘ತ್ರಿವಿಕ್ರಮ’ ಎಂಬುದು ಕೂಡಿ ಬಂದಿದೆ. ತ್ರಿವಿಕ್ರಮ ಹೆಸರಿನ ವಿಕ್ಕಿಯ ಅದೃಷ್ಡದ ಸಿನಿಮಾವಾಗಿಯೂ ಒಲಿದು ಬಂದಿದೆ. ಮಾಡುತ್ತಿದ್ದಾರೆ.. ವಿಕ್ರಂ ಹೆಸರಿಗೆ, ದೇಹಭಾಷೆಗೆ ಹೊಂದುವಂತಹ ಕಥೆ ಮಾಡಿದ್ದಾರೆ ನಿರ್ದೇಶಕ ಸಹನಾ ಮೂರ್ತಿ. ಇದರ ಚಿತ್ರೀಕರಣವೂ ನಡೆದು ಹೋಗಿದೆ. ಶೂಟಿಂಗ್ ಕೂಡ ಮಾಡಿದ್ದಾರೆ.

ಚಿತ್ರದ ಮೇಲೆ ನಿರ್ದೇಶಕರಿಗೆ ಹೆಚ್ಚಿನ ನಿರೀಕ್ಷೆ ಇದೆ. ಇದರ ನಿರ್ಮಾಪಕರಿಗೂ ಅಷ್ಟೇ. ಅದಕ್ಕೆ ಪೂರಕವಾಗಿ ವರಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಸಿನಿಮಾಗೊಂದು ಬೆಲೆ ಬಂದಿದೆ.
ಆಡಿಯೋ ಹಕ್ಕಿನಲ್ಲಿ ‘ತ್ರಿವಿಕ್ರಮ’ನ ಪರಾಕ್ರಮ..!

ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾ ಇದು. ಸಹನಾ ಮೂರ್ತಿ ಅವರಿಗೆ ಎರಡನೇ ಚಿತ್ರ. ಹಾಗಾಗಿ ಸಿಕ್ಕಾಪಟ್ಟೆ ಮುತ್ತುವರ್ಜಿ ವಹಿಸಿ ಈ ಸಿನಿಮಾ ಸಿದ್ಧಪಡಿಸಿದ್ದಾರೆ ಎಂಬುದು ಮಾಹಿತಿ. ನಿರ್ಮಾಪಕ ಸೋಮಣ್ಣ ಅವರಿಗೆ ಈ ಜ್ಯೂನಿಯರ್ ಕ್ರೇಜಿಸ್ಟಾರ್ ಪರದೆ ಮೇಲೆ ಮಿಂಚಬೇಕು ಬ ಆಸೆಯಿಂದ ಬಂಡವಾಳ ಸುರಿದಿದ್ದಾರೆ.. ಉದಾಹರಣೆಗೆ ತ್ರಿವಿಕ್ರಮನ ಎರಡು ಹಾಡುಗಳ ಚಿತ್ರೀಕರಣವನ್ನು ಭಾರತ ಚೀನಾ, ಭಾರತ, ಪಾಕಿಸ್ತಾನ ಗಡಿಗಳಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಿರುವುದು. ಮಾಡಿರೋದು..
ಇದರ ಆಧಾರವೇ ಈಗ ಹಾಡುಗಳ ಹಕ್ಕು

50 ಲಕ್ಷಕ್ಕೆ ಮಾರಾಟವಾಗಿದೆ. ಎ2 ಮ್ಯೂಸಿಕ್ ಆಡಿಯೋ ಸಂಸ್ಥೆ ತ್ರಿವಿಕ್ರಮನ ಹಾಡುಗಳನ್ನು ಕೊಂಡುಕೊಂಡಿದೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ಅರ್ಜುನ್ ಜನ್ಯ ಇದರ ಸಂಗೀತ ನಿರ್ದೇಶಕ.

Social Share :