Snehapriya.com

June 8, 2025

ಸಿನಿಮಾ-ಗಾಸಿಪ್

ರಂಗನಾಯಕ ರಂಜನೆ ಜಗ್ಗೇಶ್ ಸಿನಿಮಾ ಪ್ರೀತಿ

Social Share :

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನು ಸ್ವಲ್ಪ ದೂರ ಇರುವಂತೆಯೇ ವಿಶಾಲ ನೆಲೆಯಲ್ಲಿ ಕಾಣ ಸಿಗುವ ಪ್ರಜ್ವಲ್ ರಾಜ್ ಸ್ಟುಡಿಯೋ ಆವರಣದಲ್ಲಿ ಕಂಗೊಳಿಸುತ್ತಿರುವ ಸೆಟ್ ಯಾವ ಅದ್ದೂರಿ ಸೆಟ್ ಗೂ ಕಡಿಮೆ ಇರಲಿಲ್ಲ.

ಬೆಳಗಾವಿ ಮೂಲದ ಕುಲಕರ್ಣಿ ಎಂಬುವರಿಂದ ತಯಾರಾದ ಆ ಅರಮನೆ ಸೆಟ್ ಮುಖ್ಯವಾಗಿ ನವರಸ ನಾಯಕ ಜಗ್ಗೇಶ್ ಅವರ ಅರಮನೆಯ ಆಸ್ಥಾನ. ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಅವರು ಹ್ಯಾಟ್ರಿಕ್ ಕನಸಿನೊಂದಿಗೆ ಮಾಡುತ್ತಿರುವ ಚಿತ್ರವೇ ‘ರಂಗ ನಾಯಕ’ ಕಳೆದ ಗುರುವಾರ ಚಿತ್ರದ ಆಶಯಗಳನ್ನು ಹಂಚಿಕೊಳ್ಳಲೆಂದೇ.. ಮಾಧ್ಯಮಗಳನ್ನು ಸೆಟ್ ಗೆ ಆಹ್ವಾನಿಸಲಾಗಿತ್ತು.

ನವರಸ ನಾಯಕ ಜಗ್ಗೇಶ್ ಅವರು ಮಾತನಾಡುವಾಗ ಭಾವುಕರಾಗಿದ್ದರು. ಮೊದಲಿಗೆ ಅವರು ಕೊರೊನಾ ಮಹಾಮಾರಿಯಿಂದ ಕಲಾವಿದರು ಪಡುವ ಕಷ್ಟಗಳನ್ನು ನೆನಪು ಮಾಡಿಕೊಂಡರು. ಆರಂಭಿಕ ದಿನಗಳಲ್ಲಿ ನಾನು ಕಷ್ಟ ಪಡುತ್ತಿದ್ದೆ. ರಣಧೀರ ಚಿತ್ರದ ಶೂಟಿಂಗ್ ವೇಳೆಯಲ್ಲಿ ಹಬ್ಬ ಮಾಡಲು ಹಣ ಬೇಕು ಇನ್ನೂರು ರೂಪಾಯಿ ಕೊಡಿ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕೇಳಿದ್ದೆ. ಅವರು ಸಹಾಯಕರನ್ನು ಕರೆದು ಐದು ನೂರು ಕೊಡುವಂತೆ ಆದೇಶ ಕೊಟ್ಟಿದ್ದರು. ಆಗ ನನಗಾದ ಖುಷಿ ಆವರಣನೀಯ ಎಂದು ವರ್ಣಿಸಿದರು ಜಗ್ಗೇಶ್.

ನೋಡಿ ಇಲ್ಲಿ ಅತ್ಯುತ್ತಮ ಸೆಟ್ ಹಾಕಲಾಗಿದೆ. ನೂರರಿಂದ ನೂರಾ ಐವತ್ತು ಜನರು ಕೆಲಸ ಮಾಡುತ್ತಾರೆ. ಒಂದು ಚಿತ್ರದ ನಿರ್ಮಾಣ ಎಷ್ಟು ಜನರ ಜೀವನ ನಡೆಯಲು ಸಹಕಾರಿ ಆಗುತ್ತದೆ. ಹಾಗಾಗಿ ಚಿತ್ರೋದ್ಯಮದ ಚಟುವಟಿಕೆಗಳು ಬಿರುಸಿನಿಂದ ಆರಂಭವಾದರೆ, ಸಾವಿರಾರು ಕುಟುಂಬಗಳು ಜೀವನ ಮಾಡುತ್ತವೆ ಕೊರೊನಾ ಎಂಬುದು ಇಲ್ಲವಾದರೆ ನಮ್ಮ ಕಲಾವಿದರ ಬದುಕು ಸುಖಮಯವಾಗಿ ಇರುತ್ತದೆ ಅದೇ ಖುಷಿ ಅನಿಸುತ್ತದೆ ಎಂದು ಹೇಳುತ್ತಾ ಹೋದರು ನವರಸ ನಾಯಕ.

ಈ ಚಿತ್ರದಲ್ಲಿ ನಾನು ಒಂದು ಪಾತ್ರವಾಗಿದ್ದೇನೆ, ತಮಾಷೆಗೆ ಒತ್ತು ನೀಡಲಾಗಿದೆ. ನಾನು ಗುರು ಆಗಾಗ ಮನಸ್ತಾಪಗಳನ್ನು ಮಾಡಿಕೊಂಡಿದ್ದರೂ ಅವರೊಳಗೊಬ್ಬ ಮಹಾನ್ ನ ನಿರ್ದೇಶಕ ಇದ್ದಾನೆ; ಚಿಕ್ಕ ಚಿಕ್ಕ ಕೆಲಸಗಳನ್ನು ಅದ್ಭುತವಾಗಿ ಮಾಡುತ್ತಾರೆ ಎಂದು ಗುರುಪ್ರಸಾದ್ ಕಾರ್ಯ ವೈಖರಿಯನ್ನು ಹೊಗಳಿದರು ಜಗ್ಗೇಶ್.

ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಎದ್ದೇಳು ಮಂಜುನಾಥ ಚಿತ್ರ ಮಾಡುವ ಸಂದರ್ಭದಲ್ಲಿ ರಂಗಗೀತೆ ಪ್ರಯೋಗ ಮಾಡುತ್ತಿದ್ದರಂತೆ.. ಹಾಗಾಗಿ ಅಲ್ಲಿ ಹುಟ್ಟಿಕೊಂಡ ಕನಸು ಈಗ ಚಿತ್ರ ಮಾಡುವ ರೂಪು ಪಡೆದಿದೆ ಎಂದರು ಗುರುಪ್ರಸಾದ್. ಇದು ರಂಗಗೀತೆ ಉತ್ಸಾಹ ಇರುವ ತುಂಟ ರಾಜನ ಕಥೆ. ಹಾಗಾಗಿ ಅರಮನೆ ಸೆಟ್ ಹಾಕಬೇಕಾಯಿತು. ಇಲ್ಲಿ ದೊಡ್ಡ ಬಜೆಟ್ ಬೇಕು ಎಂಬುದು ಬಹಳವೇ ಮುಖ್ಯವಾಗಿತ್ತು. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ವಿಖ್ಯಾತ್ ಅವರನ್ನು ಕರೆತಂದು ಪರಿಚಯಿಸಿದರು. ಆಗ ತಕ್ಷಣಕ್ಕೆ ಇಷ್ಟು ಚಿಕ್ಕ ಹುಡುಗ ನಿರ್ಮಾಣ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆ ಯನ್ನೂ ಹುಟ್ಟು ಹಾಕಿತ್ತು. ಆದರೆ ವಿಖ್ಯಾತ್ ಅಚ್ಚರಿಯ ನಿರ್ಮಾಪಕ. ಈಗ ನನ್ನ ಮತ್ತು ಜಗ್ಗೇಶ್ ಅವರ ಹ್ಯಾಟ್ರಿಕ್ ಮಾಡಬೇಕು ಎಂಬ ಕನಸು ಹತ್ತಿರವಾಗಿದೆ. ಇದು ಬಹಳ ಸ್ಪೆಷಲ್ ಇರಬೇಕು.. ಎಂದು ಬಯಸಿದಂತೆ ಆಗುತ್ತಿದೆ ಎಂದರು. ನಿರ್ಮಾಪಕ
ವಿಖ್ಯಾತ್, ಹಣಕಾಸು ಪೂರೈಸುವ ದೇವೇಂದ್ರರೆಡ್ಡಿ, ಹಿರಿಯ ಸಂಕಲನಕಾರ ಕೆಂಪರಾಜು, ಕಲಾ ನಿರ್ದೇಶಕ ಕುಲಕರ್ಣಿ, ಛಾಯಾಗ್ರಾಹಕ ಅಶೋಕ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ನಾಯಕ ನಟಿ ರಚಿತಾ ಮೀನಾಕ್ಷಿ ಈ ಸಂದರ್ಭದಲ್ಲಿದ್ದರು.

Social Share :

ಚಿರ ಯುವಕ ಶಿವಣ್ಣ ಚಿತ್ರಕ್ಕೆ ಸುದೀಪ್ ಆಕ್ಷನ್ ಕಟ್

Social Share :

ಹೀಗೊಂದು ಚರ್ಚೆಗೆ ಕಾರಣವಾಗಿದ್ದು ಮಂಗಳವಾರ ಮುಂಜಾನೆ ಚಿತ್ರದ ಮುಹೂರ್ತದ ಸಂದರ್ಭದಲ್ಲಿ. ಆ ಚಿತ್ರದ ಹೆಸರು ‘ನೀ ಸಿಗೋವರೆಗೂ’ ಹೆಸರು ಕೇಳಿದ ತಕ್ಷಣ ಇದೊಂದು ಪ್ರೇಮಕಥೆ ಎಂದು ಯಾರಿಗಾದರೂ ಅನಿಸುತ್ತದೆ.

ಅಂದ ಹಾಗೆ ಈ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರದು.. ಇನ್ನೂ ಅಚ್ಚರಿಯ ವಿಷಯವೆಂದರೆ ಇದು ಅವರ 124ನೇ ಚಿತ್ರ. ಪ್ರತಿಷ್ಠಿತ ಹೊಟೇಲ್ ನಲ್ಲಿ ಬೆಳಗಿನ ಜಾವ ನಡೆದ ಮುಹೂರ್ತಕ್ಕೆ ಬಂದಿದ್ದು ‘ದಿ ವಿಲನ್’ ಖ್ಯಾತಿಯ ಕಿಚ್ಚ ಸುದೀಪ್.

ನನಗೆ ಚಿರ ಯುವಕ ಶಿವಣ್ಣ ಅವರ ಚಿತ್ರವನ್ನು ನಿರ್ದೇಶಿಸುವ ಆಸೆ.. ಏಕೆಂದರೆ 124ನೇ ಚಿತ್ರಕ್ಕೆ ನಾವು ಅಪ್ಪನ ಪಾತ್ರಕ್ಕೆ ರೆಡಿಯಾಗಿರುತ್ತೇವೆಯೋ.. ಏನೋ.. ಆದರೆ ಶಿವಣ್ಣ ಈಗಲೂ ಪ್ರೇಮಿಯ ಪಾತ್ರ ಮಾಡುತ್ತಿದ್ದಾರೆ ಅಂದರೆ ಅವರ ಉತ್ಸಾಹ ಹೇಗಿರಬಹುದು.. ಆ ತಾಜಾತನ ಕಾಪಾಡಿಕೊಳ್ಳುವುದು ಎಲ್ಲರಿಗೂ ಸಾಧ್ಯವಾಗದು.. ಹಾಗಾಗಿ ನನ್ನೊಳಗೆ ಮೊಳೆದ ಆಸೆ ನಾನು ಅವರ ಚಿತ್ರ ನಿರ್ದೇಶನ ಮಾಡಬೇಕು.. ಸುದೀಪ್ ಹೇಳುತ್ತಲೇ ಹೋದರು. ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದ ಬಳಿಕ ಅವರು ಮಾತನಾಡುತ್ತಾ ಹೋದರು.

ಇದೇ ಸಂದರ್ಭದಲ್ಲಿ ಗೀತಾ ಶಿವರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ರಾಮ್ ಧುಲಿಪುಡಿ ಈ ಚಿತ್ರದ ನಿರ್ದೇಶಕ. ಎಮೋಷನಲ್ ಲವ್ ಸ್ಟೋರಿ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿರುವುದೇ ವಿಶೇಷ. ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರ, ವಾರಣಾಸಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಶಿವಣ್ಣ ಎದುರು ಮೆರ್ಹಿನ್ ಫಿರ್ಜಾದ ಎಂಬ ನವನಟಿ ಇದ್ದಾರೆ. ನಾಜರ್, ಸಂಪತ್ ಕುಮಾರ್, ಮಂಗ್ಲಿ ಹಾಗೂ ಇತರರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರವನ್ನು ನರಾಲ ಶ್ರೀನಿವಾಸ್ ರೆಡ್ಡಿ, ಶ್ರೀಕಾಂತ್ ಧುಲಿಪುಡಿ ಹಾಗೂ ಸ್ವಾತಿ ವನಪಲ್ಲಿ ನಿರ್ಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕಾರಿ ನಿರ್ಮಾಪಕ ಕುಡಿಪುಡಿ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ , ಛಾಯಾಗ್ರಾಹಕ ಮಹೇಂದ್ರ ಸಿಂಹ ಹಾಗೂ ಕಲಾ ನಿರ್ದೇಶಕ ರವಿ ಸಂತೆಹಕ್ಲು ಚಿತ್ರದ ಕುರಿತು ಮಾತನಾಡಿದರು.

ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.

Social Share :

ನಮ್ ಹುಡುಗ್ರು ಟೀಸರ್ ಸೂಪರ್

Social Share :

‘ನಮ್ ಹುಡುಗ್ರು ಟೀಸರ್ ಸೂಪರ್’ ಎಂದು ಹೇಳಿ ಮತ್ತೆ ಮತ್ತೆ ಹೊಗಳಿದವರು ರಿಯಲ್ ಸ್ಟಾರ್ ಉಪೇಂದ್ರ..! ಅವರು ಹೊಗಳಿದ್ದು ‘ನಮ್ ಹುಡುಗ್ರು’ ಎಂಬ ಚಿತ್ರದ ಟೀಸರ್ ಕುರಿತು. ವಿಶೇಷವೆಂದರೆ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು ನಿರಂಜನ್ ಸುಧೀಂದ್ರ. ಅವರು ಉಪ್ಪಿ ಅಣ್ಣನ ಮಗ. ಹಾಗಾಗಿ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಸಂಪೂರ್ಣ ಕುಟುಂಬ ಭಾಗಿಯಾಗಿತ್ತು.

ಈಚೆಗೆ ಕೊರೊನಾ ಕಾರಣದಿಂದ ಬರೀ ಓಟಿಟಿಯಲ್ಲಿ ಚಿತ್ರಗಳನ್ನು ನೋಡುತ್ತಾ ದೊಡ್ಡ ಪರದೆ ಮರೆತು ಹೋಗಿತ್ತು. ಈ ಟೀಸರ್ ನೋಡಿ ಕಣ್ತುಂಬಿಕೊಂಡೆವು ಎಂದರು ರಿಯಲ್ ಸ್ಟಾರ್. ಅಂದ ಹಾಗೆ ಅದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕ ಉಪೇಂದ್ರ ವಿಶೇಷ ಆಕರ್ಷಣೆಯಾಗಿದ್ದರು. ಹಾಗೆಯೇ ನಮ್ ಹುಡುಗ್ರು ಸಿನಿಮಾವನ್ನು ಬಿಗ್ ಸ್ಕ್ರೀನ್ ನಲ್ಲಿ ನೋಡಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿದರು. ಉಪೇಂದ್ರ ಚಿಕ್ಕಪ್ಪ ಹೇಳಿದಂತೆ ವಿಷ್ಣು ಸರ್ ಆಶೀರ್ವಾದ ನನ್ನ ಮೇಲಿದೆ ಎಂದು ಮಾತಿಗಾರಂಭಿಸಿದರು ನಿರಂಜನ್.

ಹೌದು ನಿರಂಜನ್ ವಿಷ್ಣು ಸರ್ ಅವರ ಸಿನಿಮಾದಲ್ಲಿ ಬಾಲ ನಟನಾಗಿ ಹೊಮ್ಮಿದ್ದರು ಎಂಬ ವಿಷಯವನ್ನು ಉಪೇಂದ್ರ ಇದಕ್ಕೆ ಮುಂಚೆ ನೆನಪಿಸಿದ್ದರು. ಈ ಚಿತ್ರ ಮಂಡ್ಯ ಭಾಷೆಯಲ್ಲಿ ಇರುವ ಚಿತ್ರ. ತುಂಟ ಹುಡುಗ ಬುದ್ಧಿಮತ್ತೆ ಪ್ರದರ್ಶಿಸುವ ವರಸೆಯಲ್ಲಿ ಎಲ್ಲವೂ ಬಂದು ಹೋಗುತ್ತವೆ ಎಂಬ ವಿವರ ಕೊಟ್ಟರು. ನಿರಂಜನ್ ಎದುರು ನಟಿಸಿರುವ ರಾಧ್ಯ ಮೈಸೂರು ಮೂಲದ ಹುಡುಗಿ ಮತ್ತು ರಂಗಾಯಣದ ಪ್ರತಿಭೆ. ನನ್ನ ಮೊದಲ ಹೆಸರು ಲಿಖಿತ ಎಂಬುದಾಗಿ ವಿವರ ಕೊಟ್ಟರು. ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ಉಪ್ಪಿಗಾಗಿ ಊರು ಬಿಟ್ಟು ಬಂದಿದ್ದು; ಎಚ್ ಟು ಓ ಸಂದರ್ಭದಲ್ಲಿ ಹಾಡು ಬರೆದಿದ್ದು ಮುಂತಾದ ವಿಷಯಗಳನ್ನು ಹೇಳಿಕೊಂಡರು ಅಭಿಮನ್ ರಾಯ್. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಒಂದು ಹಾಡನ್ನು ಪುನೀತ್ ರಾಜ್‍ಕುಮಾರ್ ಸರ್ ಹಾಡಿರುವುದು ವಿಶೇಷ, ವಿಜಯ್ ಪ್ರಕಾಶ್ ಹಾಗೂ ಇತರರು ಉಳಿದ ಹಾಡುಗಳನ್ನು ಹಾಡಿದ್ದಾರೆ ಎಂಬ ವಿವರ ಕೊಟ್ಟರು.

ಈ ಚಿತ್ರವನ್ನು ನಿರ್ದೇಶನ ಮಾಡಿರುವುದು. ಎಚ್.ಬಿ.ಸಿದ್ದು. ಕನ್ನಡದ ಹೆಸರಾಂತ ನಿರ್ದೇಶಕರಾದ ಎಸ್.ಮಹೇಂದರ್ ಹಾಗೂ ಆರ್.ಚಂದ್ರು ಅವರ ಬಳಿ ಸಹಾಯಕರಾಗಿ ದುಡಿದ ಅನುಭವ ಜೊತೆಗಿಟ್ಟುಕೊಂಡೇ ಈ ಚಿತ್ರ ಮಾಡಿ ಮುಗಿಸಿದ್ದಾರೆ. ಕುಂಬಳಕಾಯಿ ಆಗಿದೆ. ಇನ್ನುಳಿದಂತೆ ಶೇ.10ರಷ್ಟು ಮಾತ್ರ ಕೆಲಸ ಬಾಕಿ ಉಳಿದಿದೆ. ನಮ್ಮ ಎಲ್ಲಾ ಕೆಲಸಗಳಿಗೆ ನಿರ್ಮಾಪಕರ ಸಹಕಾರ ಅತ್ಯುತ್ತಮವಾಗಿತ್ತು ಎಂಬ ವಿವರಣೆ ಕೊಟ್ಟರು ಸಿದ್ದು.

ಕನ್ನಡ ಹೋರಾಟಗಾರ ದೀಪಕ್ ಸಹ ನಿರ್ಮಾಪಕ ಅಶ್ರಪ್ ಅವರನ್ನೇ ಹೊಗಳಿದರು. ಚಿತ್ರದಲ್ಲಿ ನಟಿಸಿರುವ ಕಾಮಿಡಿ ಕಿಲಾಡಿಗಳು ಪ್ರವೀಣ್, ಭರತ್ ಗೌಡ, ನಟ ಗಣೇಶ್ ರಾವ್ ಮಾತನಾಡಿದರು.

Social Share :

ಮತ್ತೆ ಎಸ್ ಪಿ ಬಿ ಎದೆ ತುಂಬಿ ಹಾಡುವೆನು

Social Share :

ಭಾರತೀಯ ಚಿತ್ರರಂಗದ ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕಲರ್ಸ್ ಕನ್ನಡ ವಾಹಿನಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಕನ್ನಡಿಗರ ಹೃದಯ ಮತ್ತು ಮೈ ಮನವನ್ನು ಇಂದಿಗೂ ಆವರಿಸಿಕೊಂಡಿದೆ.

ಇದು ಹೃದಯ ಸಂವೇದನೆ ಮತ್ತು ಮೈಮನದ ಪುಳಕದ ವಿಷಯ. ಏಕೆಂದರೆ ಎಸ್.ಪಿ.ಬಿ ಮಕ್ಕಳಲ್ಲಿ ಮಕ್ಕಳಾಗಿ, ಹಿರಿಯರಲ್ಲಿ ಹಿರಿಯರಾಗಿ ಪ್ರತಿಭಾ ಸಂಪನ್ನರ ನಡುವೆ ದೈತ್ಯ ಪ್ರತಿಭೆಯಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅದೊಂದು ಆವರ್ಣನೀಯ ಆನಂದದ ಕಾರ್ಯಕ್ರಮವಾಗಿತ್ತು. ಕಲ್ಮಶವಿಲ್ಲದ ನಿರ್ಮಲವಾದ ಆ ಕಾರ್ಯಕ್ರಮ ಇಂದಿಗೂ ಕೋಟ್ಯಾಂತರ ಮಂದಿಯ ಎದೆಯೊಳಗೆ ಲಾಸ್ಯವಾಡುತ್ತಿದೆ. ಅಂತಹ ಕಾರ್ಯಕ್ರಮವನ್ನು ಪುನರ್ ಸ್ಥಾಪಿಸಬೇಕು ಎಂಬುದು ನಮ್ಮ ಆಶಯ ಎಂದರು ಕಲರ್ಸ್ ಕನ್ನಡ ವಾಹಿನಿಯ ಮನರಂಜನಾ ವಿಭಾಗದ ಮುಖ್ಯಸ್ಥ ಪರಮೇಶ್ವರ ಗುಂತ್ಕಲ್.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಎಸ್.ಪಿ.ಬಿ ಅವರ ಪುತ್ರ ಎಸ್.ಪಿ.ಚರಣ್ ಅವರು ತೀರ್ಪುಗಾರರಾಗಿ ಭಾಗವಹಿಸುತ್ತಾರೆ. ಕನ್ನಡದ ಮುಂಚೂಣಿಯ ಸಂಗೀತ ನಿರ್ದೇಶಕ ಹರಿಕೃಷ್ಣ, ಪ್ರಸಿದ್ಧ ಗಾಯಕ
ರಾಜೇಶ್ ಕೃಷ್ಣನ್, ಮತ್ತೊಬ್ಬ ಹೆಸರಾಂತ ಸಂಗೀತ ನಿರ್ದೇಶಕ ರಘುದೀಕ್ಷಿತ್ ತೀರ್ಪುಗಾರರಾಗಿ ಇರುವರು ಎಂಬ ವಿವರಗಳು ಬಂದವು. ಇದು ವಿಶೇಷ ಮತ್ತು ಸವಾಲಿನ ಕೆಲಸ ಏಕೆಂದರೆ ಎದೆ ತುಂಬಿ ಹಾಡುವೆನುಗೆ ಎಸ್.ಪಿ.ಬಿ ಸರ್ ಎಲ್ಲವೂ ಆಗಿದ್ದರು ಎಂದರು ರಾಜೇಶ್ ಕೃಷ್ಣನ್. ವಿ.ಟಿ ನೋಡಿದಾಗ ನಿಜಕ್ಕೂ ಹೆದರಿಕೆಯಾಯ್ತು; ನಾನು ಕೈಲಾದಷ್ಟು ಸರಿಗಿರೊಕೆ ಪ್ರಯತ್ನ ಪಡ್ತಿನಿ ಎಂದವರು ಸಂಗೀತ ನಿರ್ದೇಶಕ ಹರಿಕೃಷ್ಣ.
ಕನ್ನಡ ಭಾಷೆ ಟ್ರೈ ಮಾಡ್ತಿನಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಅಪ್ಪ ಮಾತನಾಡುತ್ತಿದ್ದರು. ಈಗ ಇಂತಹ ಬಳಗ ಇರುವುದರಿಂದ ಅತ್ಯಂತ ವಿಶ್ವಾಸಾರ್ಹ ಕಾರ್ಯಕ್ರಮ ನಿರೀಕ್ಷೆ ಮಾಡಬಹುದು ಎಂದರು ಚರಣ್. ಕಾರ್ಯಕ್ರಮವನ್ನು ಈ ಬಾರಿ ಅಂಕಿತ ನಿರೂಪಣೆ ಮಾಡುವರು ಎಂಬ ವಿವರ ಕೊಟ್ಟರು ಗುಂತ್ಕಲ್. ಅಂದ ಹಾಗೆ ‘ಎದೆ ತುಂಬಿ ಹಾಡುವೆನು’ ಹೊಸ ಕಾರ್ಯಕ್ರಮ ಇದೇ ಆಗಸ್ಟ್ 14ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತದೆ.

Social Share :

ಎಸ್.ನಾರಾಯಣ್ ಹೊಸ ಜಮಾನದ ಕಥೆ 5ಡಿ

Social Share :

ಸ್ಟಾರ್ ಒಬ್ಬರಿಗೆ ಫೋನ್ ಮಾಡಿದಾಗ.. ಎಸ್.ನಾರಾಯಣ್ ಇತ್ತೀಚೆಗೆ ಯಾವ ಸಿನಿಮಾ ಮಾಡಿದ್ದಾರೆ. ಇದು ಹಳೆ ಕಾಲವಲ್ಲ; ಜಮಾನ ಬದಲಾಗಿದೆ.. ಅವರಿಗೇ ಇಲ್ಲಿ ಬಂದು ಕಥೆ ಹೇಳಲು ತಿಳಿಸಿ ಎಂದು ದೌಲತ್ತಿನ ಉತ್ತರ ಕೊಟ್ಟರು; ಇದನ್ನು ಕೇಳಿಸಿಕೊಂಡ ಎಸ್.ನಾರಾಯಣ್ ಸಮಚಿತ್ತದಿಂದಲೇ ಅದನ್ನು ಸ್ವೀಕರಿಸಿ ಇಂದಿನ ಪೀಳಿಗೆಗೆ ಅನ್ವಯಿಸುವ ಚಿತ್ರ ಮಾಡಿ ಮುಗಿಸಿದ್ದಾರೆ. ಅದರ ಹೆಸರು 5ಡಿ.

ಅಂದ ಹಾಗೆ ಈ ಚಿತ್ರದ ನಾಯಕ ನಟ ಆದಿತ್ಯ ‘ನೀವು ಕಥೆ ಹೇಳುವುದೇ ಬೇಡ.. ನೀವು ಸೃಷ್ಟಿಸುವ ಪಾತ್ರದ ಪಾತ್ರಧಾರಿಯಾಗಿ ಇರುತ್ತೇನೆ ಎಂಬ ವಿಧೇಯತೆ ಪ್ರದರ್ಶಿಸಿ ಅದೇ ರೀತಿ ನಡೆದುಕೊಂಡಿದ್ದಾರೆ. ಅವರೊಬ್ಬ ನಿರ್ದೇಶಕರ ನಟ ಎಂದರು ನಾರಾಯಣ್. ವರನಟ ಡಾ.ರಾಜ್ ಕುಮಾರ್ ಅವರಿಗೂ ನಿರ್ದೇಶನ ಮಾಡಿರುವ ಎಸ್.ನಾರಾಯಣ್ ಅವರಿಗೂ ಈಗಿನ ಜಮಾನದ ಸಿನಿಮಾ ಮಾಡಬಲ್ಲರೆಂಬುದು ಈ ಚಿತ್ರದ ಮೂಲಕ ಸಾಬೀತಾಗಲಿದೆ. ಹೆಚ್ಚುಗಾರಿಕೆ ಎಂದರೆ ಈ ಜಮಾನದ ಹುಡುಗ ಎಸ್.ನಾರಾಯಣ್ ಪುತ್ರ ಪಂಕಜ್ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಕಥೆಯ ಬಗ್ಗೆ ಯಾವ ಸುಳಿವನ್ನು ಚಿತ್ರತಂಡ ಬಿಟ್ಟುಕೊಡಲಿಲ್ಲ; ಆದರೆ ಇದು 5 ಡೈಮೆನ್ಷನ್ ನಲ್ಲಿ ಹೋಗುವ ಕಥೆ ಎಂಬುದು ತಿಳಿದುಬಂತು. ರವಿ ಕಥೆ ಬರೆದಿದ್ದಾರೆ. ನೃತ್ಯ ನಿರ್ದೇಶನ ಮಾಡಿದವರು ಮಾಲೂರು ಶ್ರೀನಿವಾಸ್. ಎಸ್.ನಾರಾಯಣ್ ಸರ್ ಜೊತೆ ಬಹಳ ಸಮಯದ ನಂಟು ವಿಷ್ಣು ಸರ್ ಸಿನಿಮಾ ಮಾಡಿಸಿದ್ದರು. ಅವರ ಸಾಹಿತ್ಯವೂ ಅದ್ಭುತವಾಗಿರುತ್ತದೆ‌ ಎಂದರು.

ಕಿರುತೆರೆ ನಟಿ ಜ್ಯೋತಿ ರೈ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಪಾತ್ರದ ಬಗ್ಗೆ ಹೇಳಲ್ಲ. ಸಾಕಷ್ಟು ಕಲಿತೆ ಎಂದರು ಜ್ಯೋತಿ ರೈ. ಪಾತ್ರ ಮಾಡಲು ನನಗೆ ಕರೆ ಬಂದಾಗ ಅಚ್ಚರಿ, ದಿಗ್ಭ್ರಮೆ ಎರಡೂ ಆಯಿತು ಎಂದರು ನಟ ರಾಘವೇಂದ್ರ. ಕಲಾವಿದರಾದ ರವಿಕುಮಾರ್,  ರಾಜೇಶ್ ರಾವ್, ರತನ್ ರಾಮ್,  ಆಕಾಶ್ ತಮ್ಮ ಅನುಭವ ಹೇಳಿಕೊಂಡರು. ಕ್ಯಾಮೆರಾಮನ್ ಕುಮಾರ್, ನಿರ್ಮಾಪಕ ಸ್ವಾತಿ ಕುಮಾರ್ ಉತ್ತಮ ಆಶಯಗಳನ್ನು ಹಂಚಿಕೊಂಡರು.

ಒಂದು ಸಿನಿಮಾ ಮಾಡುವಾಗ ಎಷ್ಟು ಶ್ರಮ ಎಂಬುದರ ಪರಿಚಯವಾಗಿದೆ  ಆದಿತ್ಯ ಹೊಸ ಜಾನರ್ ಎರಡು ನಮ್ಮ ಚಿತ್ರದ ವಿಶೇಷಗಳಾಗಿವೆ ಎಂದರು.

ಮುಖ್ಯ ಪಾತ್ರದಲ್ಲಿರುವ ನಟ ಆದಿತ್ಯ, ಇದು ಬಹಳ ವರ್ಷದ ಕನಸು ಮತ್ತು ಇದು ನನ್ನ 25 ನೇ ಸಿನಿಮಾ ಎಂದರು. ನಾನು ನಟನಿಗಿಂತ ಮುಂಚೆ ನಿರ್ಮಾಪಕ. ನಾರಾಯಣ್ ಸರ್ ಗೆ ನೀವು ಕ್ಯಾಮೆರಾ ಇಟ್ಟು ಕರೀರಿ ಬರ್ತನಿ ಅಂತಾ ಹೇಳಿದ್ದೆ ನಿರ್ದೇಶಕರು ಹೇಗಿರಬೇಕು ಎಂಬುದನ್ನು ನಾರಾಯಣ್ ಸರ್ ನೋಡಿ ಕಲಿಯಬೇಕು ಎಂದರು ಆದಿತ್ಯ. ಹಿರಿಯ ಅಡ್ವೋಕೇಟ್ ಶಂಕರಪ್ಪ ಈ ಚಿತ್ರದಲ್ಲಿ ಪಾತ್ರ ಮಾಡಿರುವುದು ವಿಶೇಷ.
ಅಂದ ಹಾಗೆ ಆದಿತ್ಯ ಎದುರು ನಟಿಸಿರುವುದು ಅದಿತಿ ಪ್ರಭುದೇವ.  ನಾರಾಯಣ್ ಸರ್ ಏನ್ ಪುಟ್ಟಿ ಅಂತಾ ಇದ್ರು ನನಗೆ ಉತ್ತಮ ಅನುಭವಗಳನ್ನು ಈ ಚಿತ್ರತಂಡ ನೀಡಿದೆ ಎಂದರು.

ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಇದು ಎಸ್.ನಾರಾಯಣ್ ಅವರ 50ನೇ ಚಿತ್ರ. ಹೊಸ ಜಮಾನದ ಕಥೆಯನ್ನು ನಿರ್ವಹಿಸಿರುವುದು ಪಂಕಜ್. ಪಂಕಜ್ ನಲ್ಲಿ ಒಬ್ಬ ಕಥೆಗಾರ ನಿರ್ದೇಶಕ ಇದ್ದ ಆತ ಎಲ್ಲದಕ್ಕಿಂತ ಭಿನ್ನ ಎಂದರು. ಪಿಆರ್ ಓ ಬಾಬು ಈ ಚಿತ್ರ ಮೂಲ ಪುರುಷ. ಆದಿತ್ಯ ನನ್ನ ಗುರುಪುತ್ರ ‘ನಂಬಿಕೆಯೇ ಚಿತ್ರರಂಗ..’ ಹೀಗೆ ಹೇಳುತ್ತಲೇ ಹೋದರು ಎಸ್.ನಾರಾಯಣ್.

Social Share :

ಮರೆಯದೆ ಕ್ಷಮಿಸು ಹಾಡುಗಳ ಅದ್ದೂರಿ ಬಿಡುಗಡೆ

Social Share :

ಕೊರೊನಾ ಮಹಾಮಾರಿಯ ಆರ್ಭಟದಿಂದ ನಲುಗಿದ್ದ ಮನರಂಜನಾ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕನ್ನಡದ ಮಟ್ಟಿಗೆ ಅಲ್ಲಲ್ಲಿ ಚಟುವಟಿಕೆಗಳು ಆರಂಭವಾಗಿವೆ.

ಇದೇ ಸೋಮವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣದಲ್ಲಿ ಚಿತ್ರರಸಿಕರ ಅಪರೂಪದ ಮಿಲನವಿತ್ತು. ಅದಕ್ಕೆ ಕಾರಣವಾಗಿದ್ದು ‘ಮರೆಯದೇ ಕ್ಷಮಿಸು’ ಎಂಬ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ.

ನಟ ಶ್ರೀನಗರ ಕಿಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಆಡಿಯೋ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಡಿಸಿಪಿ ಮಂಜುನಾಥ್ ಪ್ರಸಾದ್, ಪಾಲಿಕೆ ಮಾಜಿ ಸದಸ್ಯ ವೆಂಕಟೇಶ್ ಹಾಗೂ ಇತರ ಗಣ್ಯರ ಉಪಸ್ಥಿತಿ ಇತ್ತು.

ಇದೊಂದು ಪ್ರೇಮಕಥೆ ಆಧಾರಿತ ಚಿತ್ರ. ಈ ಚಿತ್ರದಲ್ಲಿ ನಾಯಕ ಗಾರೆ ಕೆಲಸ ಮಾಡುತ್ತಿರುತ್ತಾನೆ . ಶ್ರೀಮಂತ ಹುಡುಗಿಯನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯಿಂದ ಏನೇನಾಗುತ್ತದೆ? ಕೊನೆಗೆ ಒಂದಾಗುವರಾ? ಎಂಬುದೆ ಚಿತ್ರದ ಕಥಾಸಾರಾಂಶ.

ನಿರ್ಮಾಪಕರು, ನಾನು ನಲವತ್ತು ವರ್ಷಗಳ ಸ್ನೇಹಿತರು. ನಮ್ಮ ಸ್ನೇಹದ ಸವಿನೆನಪಿಗಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದರು ನಿರ್ದೇಶಕ ರಾಫವ್. ಚಿತ್ರಕ್ಕೆ ಸಂಗೀತ ನೀಡಿರುವ ಕಾರ್ತಿಕ್ ವೆಂಕಟೇಶ್ ಸೇರಿದಂತೆ ಇಡೀ ಚಿತ್ರತಂಡದ ಸಹಕಾರವನ್ನು ನಿರ್ದೇಶಕರು ಸ್ಮರಿಸಿಕೊಂಡರು. ಎಲ್ಲಾ ಅಂದು ಕೊಂಡಂತೆ ನಡೆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ ಎಂದರು ನಿರ್ದೇಶಕ ರಾಘವ್.

ಚಿತ್ರದ ನಾಯಕ ಪ್ರಮೋದ್ ಬೋಪ್ಪಣ್ಣ, ಈ ಚಿತ್ರದಲ್ಲಿ ಒಂದು ಪ್ರೇಮ ಹಾಗೂ ತಾಯಿ – ಮಗನ ಬಾಂಧವ್ಯ‌ ಹಾಗೂ ಎಲ್ಲಕ್ಕೂ ಮಿಗಿಲಾಗಿ ಉತ್ತಮ ಮನರಂಜನೆಯಿದೆ ಎಂದರು. ಇಂತಹ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದ ತಿಳಿಸಿದರು. ಆಡಿಯೋ ರಿಲೀಸ್ ಮಾಡಿಕೊಟ್ಟ ಶ್ರೀನಗರ ಕಿಟ್ಟಿ ಅವರಿಗೆ ವಿಶೇಷ ಧನ್ಯವಾದ ಎಂದರು ಪ್ರಮೋದ್ ಬೋಪ್ಪಣ್ಣ.
ಮೇಫನಾ ಗೌಡ ಹಾಗೂ ಚಿತ್ರದಲ್ಲಿ ನಟಿಸಿರುವ ಮಿಮಿಕ್ರಿ ಗೋಪಿ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು.

ಚಿತ್ರದ ಹಾಡುಗಳು ಹಾಗೂ ಗಾಯಕರ ಬಗ್ಗೆ ಸಂಗೀತ ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ಮಾಹಿತಿ ನೀಡಿದರು. ಇದು ಅವರು ಸಂಗೀತ ನೀಡಿರುವ 22 ನೇ ಚಿತ್ರ.
ಹಾಡುಗಳನ್ನು ಬಿಡುಗಡೆ ಮಾಡುತ್ತಿರುವ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಸಹ ಈ ಚಿತ್ರದ ಹಾಡುಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸ್ನೇಹಿತ ರಾಘವ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ ಎಂದವರು ನಿರ್ಮಾಪಕ ಶಿವರಾಂ.

ರಿಷಿಕೇಶ್ ಈ ಚಿತ್ರದ ಛಾಯಾಗ್ರಹಕರು. ರಮೇಶ್ ಭಟ್, ಮಿಮಿಕ್ರಿ ಗೋಪಿ, ರಾಕ್ ಲೈನ್ ಸುಧಾಕರ್, ಅಪೂರ್ವ, ಸಿರಿಹುಂಡೆ ರಘು ತಾರಾಬಳಗದಲಿದ್ದಾರೆ.

Social Share :

ಸೊಸೈಟಿಗೆ ಉಪ್ಪಿ ಲಗಾಮ್

Social Share :

ಚಿತ್ರದ ಹೆಸರು ಲಗಾಮ್.. ಹಾಗಾಗಿ ಯಾರಿಗೆ ಲಗಾಮ್ ಹಾಕಬಹುದು ಎಂಬುದು ಪ್ರಶ್ನೆ. ಬಹಳ ಸಮಯದ ಬಳಿಕ ಉಪೇಂದ್ರ ಮತ್ತು ನಿರ್ದೇಶಕ ಮಾದೇಶ್ ಜೊತೆಯಾಗಿದ್ದಾರೆ. ಇಬ್ಬರೂ ಕೂಡ ಏನೋ ಕಮಾಲ್ ಮಾಡಲು ಹೊರಟಿದ್ದಾರೆ ಎಂಬುದು ನಿರೀಕ್ಷೆ.

ಈ ಹಿನ್ನೆಲೆಯಲ್ಲಿ ಹೆಬ್ಬಾಳ ಸಮೀಪದ ಶೂಟಿಂಗ್ ಮನೆಯಲ್ಲಿಯೇ ನಡೆಯುತ್ತಿದ್ದ ಸಾಹಸ ದೃಶ್ಯ ಚಿತ್ರೀಕರಣ ಸ್ಥಳಕ್ಕೆ ಸಿನಿಮಾ ಪತ್ರಕರ್ತರ ತಂಡ ಹೋದಾಗ ತುಂತುರು ಮಳೆಯಲ್ಲಿಯೂ ಉಪ್ಪಿ ಫೈಟ್ ಧ್ಯಾನದಲ್ಲಿದ್ದರು. ಸಾಹಸ ನಿರ್ದೇಶಕ ರವಿವರ್ಮ ಎಲ್ಲವನ್ನು ನಿಭಾಯಿಸುತ್ತಿದ್ದರು.

ಮಧ್ಯಾಹ್ನದ ಊಟದ ಬಳಿಕ ಚಿತ್ರತಂಡ ಮಾತಿಗೆ ಸಿಕ್ಕಿತು. ಮುಖ್ಯ ಪಾತ್ರಧಾರಿ ಉಪೇಂದ್ರ, ನಟಿ ಹರಿಪ್ರಿಯ, ರವಿವರ್ಮ ಹಾಗೂ ಇನ್ನಿತರರು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಇದು ಒಂದು ರೀತಿಯಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ಬಿಂಬಿಸುವ ಚಿತ್ರ. ವ್ಯವಸ್ಥೆ ಲೋಪಗಳನ್ನು ಹೇಳುತ್ತಾ ಅದನ್ನು ಸರಿಪಡಿದುವ ಕಾರ್ಯ ನಡೆಯುತ್ತದೆ ಎಂದರು ಉಪೇಂದ್ರ. ಇದು ಲಗಾಮ್ ಹಾಗಾಗಿ ಲಗಾನ್ ಎಂದು ಧ್ವನಿಸಿದರೆ ಅದು ಅಚ್ಚರಿಯೂ ಅಲ್ಲ. ಕಥೆ ಹೇಳುವುದು ಸಾಧ್ಯವಿಲ್ಲದಿದ್ದರೂ ಚಿತ್ರದ ಆಶಯಗಳು ಉತ್ತಮವಾಗಿವೆ ಎಂದು ಹೇಳುತ್ತಾ ಹೋದರು ಉಪ್ಪಿ. ಅದಕ್ಕೆ ನಿರ್ದೇಶಕ ಮಾದೇಶ್ ಧ್ವನಿಗೂಡಿಸಿದರು. ಈ ವೇಳೆ ಆ ಇಬ್ಬರಿಂದ ಕಥೆಯನ್ನು ಹೇಳಿಸಬೇಕು ಎಂಬ ಪತ್ರಕರ್ತರ ಪ್ರಯತ್ನ ಕೈಗೂಡಲಿಲ್ಲ.

ಹರಿಪ್ರಿಯ ಅವರಿಗೆ ಪತ್ರಕರ್ತೆಯ ಪಾತ್ರ. ಅವರು ತನಿಖೆ ಮಾಡುವ ಆಶಯಗಳನ್ನು ಹೊಂದಿರುತ್ತಾರೆ. ತನಿಖಾ ಪತ್ರಿಕೋದ್ಯಮ ಹೇಗಿರುತ್ತೆ ಅಂತಾ ನಾನು ಕಲಿತಾ ಇದ್ದೀನಿ ಎಂದರು ಹರಿಪ್ರಿಯ.

ಛಾಯಾಗ್ರಾಹಕ ರಾಜೇಶ್ ಕಟ್ಟ ಚಿತ್ರದ ತಾಂತ್ರಿಕ ಕೌಶಲ್ಯಗಳ ಬಗ್ಗೆ ಮಾತನಾಡಿದರು. ಕಾರ್ಯನಿರ್ವಾಹಕ ನಿರ್ಮಾಪಕ ಕೇಶವ್ ಮಾತ್ರ ಈ ಸಂದರ್ಭದಲ್ಲಿ ಹಾಜರಿದ್ದರು. ಅಂದ ಹಾಗೆ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸುರೇಶ್ ಗೋಸಾಮಿ ಕಥೆ ಬರೆದಿದ್ದು, ಈ ಚಿತ್ರವು ಹಲವು ಭಾಷೆಗಳಿಗೆ ಹೋಗುತ್ತದೆ ಎಂಬ ವಿಶ್ವಾಸ ತಂಡದ್ದು..

Social Share :

ಡೈಮಂಡ್ ಗರಿ ಹೆಮ್ಮೆಯ ಲಹರಿ

Social Share :

ಲಹರಿ, ಇದು ಕನ್ನಡಿಗರ ಮನೆ ಮಾತಾದ ಹೆಸರು. ಲಹರಿ ಅಂದಾಕ್ಷಣ ನೆನಪಾಗುವುದೆ ʼಲಹರಿ ಆಡಿಯೋ ಸಂಸ್ಥೆʼ ಯಾಕಂದ್ರೆ, ಸಿನಿಮಾ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಆಡಿಯೋ ಸಂಗೀತ ಕ್ಷೇತ್ರದಲ್ಲಿ ಲಹರಿ ಮ್ಯೂಜಿಕ್‌ಗೆ ಮಹತ್ತರ ಮೈಲುಗಲ್ಲು ಸ್ಥಾಪಿಸಿದ ಹೆಗ್ಗಳಿಕೆ ಇದೆ. ಅಷ್ಟು ಮಾತ್ರವೇ ಅಲ್ಲ, ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಲಹರಿ ಆಡಿಯೋ ಸಂಸ್ಥೆಯದ್ದು. ಅದರ ಸಾಧನೆಯ ಕಿರೀಟಕ್ಕೆ ಈಗಾಗಲೇ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಸಂದಿವೆ. ಆ ಸಾಲಿನಲ್ಲಿ ಈಗ ಅತೀ ಶ್ರೇಷ್ಟ ಎನ್ನಬಹುದಾದ ಗೌರವದ ಗರಿ ಮೂಡಿದೆ.

ಹೌದು, ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ಗೆ ಈಗ 1.18 ಕೋಟಿ ಯಷ್ಟು ಜನ ಚಂದದಾರಾಗಿದ್ದಾರೆ. ಇದು ಭಾರತೀಯ ಸಂಗೀತ ಕ್ಷೇತ್ರದ ಡಿಜಿಟಲ್‌ ಯುಗಕ್ಕೆ ಹೊಚ್ಚ ಹೊಸ ದಾಖಲೆಯೇ ಹೌದು. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಯುಟ್ಯೂಬ್‌ಸಂಸ್ಥೆಯಿಂದ ಲಹರಿ ಮ್ಯೂಜಿಕ್‌ಗೆ ಪ್ರತಿಷ್ಟಿತ ʼಡೈಮಂಡ್‌ ಅವಾರ್ಡ್‌ ʼ ಪ್ರಶಸ್ತಿ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.
ʼ ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಒಂದು ಸಣ್ಣ ಸಂಸ್ಥೆಯನ್ನು ಆರು ಕೋಟಿ ಕನ್ನಡಿಗರು ಪ್ರೋತಾಹಿಸಿ, ಬೆಳೆಸುತ್ತಾ ಬಂದಿದ್ದರ ಫಲದಿಂದಾಗಿಯೇ ಲಹರಿ ಸಂಸ್ಥೆ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲಬೇಕಾದ ಗೌರವ. ಅವರಿಗೆ ಇದು ಅರ್ಪಣೆʼ ಎನ್ನುತ್ತಾರೆ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು.

ಲಹರಿ ಮ್ಯೂಜಿಕ್‌ಗೆ ಈಗಾಗಲೇ ಯುಟ್ಯೂಬ್‌ಸಂಸ್ಥೆಯಿಂದ ಎರಡು ಅವಾರ್ಡ್‌ಸಿಕ್ಕಿವೆ. ಯುಟ್ಯೂಬ್‌ಚಾನೆಲ್‌ಗೆ ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಯುಟ್ಯೂಬ್‌ಸಂಸ್ಥೆಯ ಕಡೆಯಿಂದ ಸಿಲ್ವರ್‌ ಹಾಗೂ ಗೋಲ್ಡನ್‌ ಅವಾರ್ಡ್‌ ಬಂದಿರುವುದು ಅದರ ಸಾಧನೆಯ ಸಿಕ್ಕ ಗರಿಮೆ. ಒಂದು ಲಕ್ಷ, 50 ಲಕ್ಷ ಹಾಗೂ 1 ಕೋಟಿಯಷ್ಟು ಜನರು ಕ್ರಮವಾಗಿ ಲಹರಿ ಮ್ಯೂಜಿಕ್‌ಗೆ ಚಂದದಾರರು ಆದಂತೆಲ್ಲ, ಯುಟ್ಯೂಬ್‌ ಸಂಸ್ಥೆ ದಾಖಲೆಯ ಗೌರವಗಳನ್ನು ನೀಡುತ್ತಾ ಬಂದಿದೆ. ಈಗ ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಸಾಧನೆಯಲ್ಲಿʼ ಡೈಮಂಡ್‌ ಅವಾರ್ಡ್‌ʼ ಪ್ರಾಪ್ತಿ ಆಗಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್‌ ಅಗ್ರಗಣ್ಯ ಸ್ಥಾನಕ್ಕೇರಿದೆ.

ʼನನಗೆ ಗೊತ್ತಿರುವ ಹಾಗೆ ಇದು ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೇ ಮೊದಲು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಯಾವುದೇ ಭಾಷೆಯಲ್ಲೂ ಇಷ್ಟು ಚಂದದಾರರ ಬಳಗವನ್ನು ಸಂಪಾದಿಸಿಕೊಂಡ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ಇಲ್ಲ. ಅಂತಹ ಹೊಸ ದಾಖಲೆ ಲಹರಿ ಮ್ಯೂಜಿಕ್‌ಗೆ ಸಿಕ್ಕಿದೆ ಎನ್ನುವುದೇ ನಮ್ಮ ಸಂಸ್ಥೆಯ ಹೆಮ್ಮೆ. ಅದಕ್ಕೆ ಕಾರಣಕರ್ತರು ನಾವು ಎನ್ನುವುದಕ್ಕಿಂತ ಸಮಸ್ತ ಕನ್ನಡಿಗರು. ಸಿನೆಮಾ ನಿರ್ಮಾಪಕರು, ನಿರ್ದೇಶಕರು, ಕಲಾವಿದರು. ಕಾರ್ಮಿಕರು, ವಿಶೇಷವಾಗಿ ಸಂಗೀತ ನಿರ್ದೇಶಕರು, ಗಾಯಕರು, ಸಾಹಿತಿಗಳು , ಜತೆಗೆ ಮಾಧ್ಯಮದ ಮಿತ್ರರು ಕಾರಣರು. ಅವರು ನೀಡಿದ ಅಭೂತ ಪೂರ್ವ ಬೆಂಬಲದಿಂದಲೇ ಇದೆಲ್ಲ ಸಾಧ್ಯವಾಗಿದೆʼ ಎನ್ನುತ್ತಾರೆ ಲಹರಿ ವೇಲು.

ಲಹರಿ ನಾಡಿನ ಸಾಂಸ್ಕೃತಿಕ ನೆಲೆಯ ಹೆಮ್ಮೆಯೂ ಆಗಿದೆ ಅಂದರೆ ಅದು ಅತಿಶಯೋಕ್ತಿ ಆಗಲಾರದು..

Social Share :

ಉದಯ್ ಪ್ರಕಾಶ್ ವರದ ವಿನೋದ್ ಪ್ರಭಾಕರ್

Social Share :

ರಾಬರ್ಟ್‌ ಚಿತ್ರದ ಯಶಸ್ಸಿನ ನಂತರ ಮರಿ ಟೈಗರ್ ವಿನೋದ್ ಪ್ರಭಾಕರ್ ಹೆಚ್ಚು ಚುರುಕಾಗಿದ್ದಾರೆ. ಇದೀಗ ಅವರು ಹೊಸದಾಗಿ ಕಾಣಿಸಿಕೊಂಡಿರುವ ಚಿತ್ರವೇ ಉದಯ್ ಪ್ರಕಾಶ್ ನಿರ್ದೇಶನದ ವರದ. ಈ ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಗುರುವಾರ ಮೋಷನ್ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿ ಹೆಚ್ಚಿನ ಮಾಹಿತಿ ನೀಡಿದೆ. ವಿನೋದ್ ಪ್ರಭಾಕರ್, ವರದನಾಗಿ ಕಾಣಿಸಿಕೊಂಡಿದ್ದು, ಇದು ತಂದೆ-ಮಗನ ಭಾಂದವ್ಯದ ಸಿನಿಮಾ.

ತಂದೆಯಾಗಿ ಚರಣ್ ರಾಜ್ ಅಭಿನಯಿಸಿದ್ದಾರೆ. ವಿನೋದ್ ಎದುರು ಅಮಿತಾ ಕಾಣಿಸಿಕೊಂಡಿದ್ದಾರೆ. ನೆಗಟಿವ್ ಶೇಡ್ ನಲ್ಲಿ ಮಠ ಇದ್ದಾರೆ. ತಾಯಿ ಪಾತ್ರದಲ್ಲಿ ಅಶ್ವಿನಿಗೌಡ ಅಭಿನಯಿಸಿದ್ದಾರೆ. ಇದು ತಂತ್ರಜ್ಞರ ಸಿನಿಮಾ ಎಂದರು ವಿನೋದ್ ಪ್ರಭಾಕರ್. ಹಿರಿಯ ನಟ ಚರಣ್ ರಾಜ್ ಹಿಂದೆ ಪ್ರಭಾಕರ್ ಅವರೊಂದಿಗೆ ನಟಿಸಿದ್ದ ಅನುಭವಗಳನ್ನು ಹಂಚಿಕೊಂಡರು. ತಂದೆಯಂತೆ ಮಗ ವಿನೋದ್ ಕೂಡ ಸ್ನೇಹಜೀವಿ, ಅವರಿಗೆ ಉತ್ತಮ ಭವಿಷ್ಯವಿದೆ ಎಂದರು. ನಿರ್ದೇಶಕ ಉದಯ ಪ್ರಕಾಶ್ ಅವರ ಕಾರ್ಯವೈಖರಿಯನ್ನು ಚರಣ್ ರಾಜ್ ಶ್ಲಾಘಿಸಿದರು.

ಈ ಚಿತ್ರ ಎರಡುವರ್ಷಗಳ ಹಿಂದೆ ಆರಂಭವಾಯಿತು. ಆದರೆ ಕೊರೊನಾ ತಡೆಯಿತು. ಈಗಾಗಲೇ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಇಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಅದರಲ್ಲಿ ಬರುವ ಮೂರು ಸಂಭಾಷಣೆಗಳೇ ಚಿತ್ರದ ಕಥಾವಸ್ತು ಎಂದವರು ನಿರ್ದೇಶಕ ಉದಯ್ ಪ್ರಕಾಶ್. ಅವರ ಪತ್ನಿಯ ಸಹಕಾರದಿಂದ ಚಿತ್ರ ನಿರ್ಮಾಣ ಸಾಧ್ಯವಾಯಿತು ಎಂದು ಹೇಳಿಕೊಂಡರು.
ಚಿತ್ರಕ್ಕೆ ಸಂಗೀತ ನೀಡಿರುವ ಪ್ರದೀಪ್ ವರ್ಮ ಹಾಗೂ ಛಾಯಾಗ್ರಾಹಕ ಜೈಆನಂದ್ ತಮ್ಮ ಅನುಭವ ಹಂಚಿಕೊಂಡರು.

Social Share :

ಪಿಪಿಎಂನ ಮಾಸ್ಟರ್ ಮೈಂಡ್

Social Share :

ಒಬ್ಬ ಪ್ರತಿಭಾ ಸಾಮರ್ಥ್ಯ ಇರುವ ವ್ಯಕ್ತಿ ತಾನು ಚಿತ್ರ ನಿರ್ದೇಶಕ ಆಗಬೇಕೆಂದು ಕನಸು ಕಾಣುತ್ತಾನೆ.. ಆದರೆ ಅದು ಕನಸಾಗಿಯೇ ಉಳಿಯುತ್ತದೆ. ಏಕೆಂದರೆ ನೀನು ಮೊದಲು ಸಾಧಿಸಿ ತೋರಿಸು ಎನ್ನುತ್ತದೆ ಚಿತ್ರರಂಗ..!

ಹಾಗಾಗಿ ಕನಸುಗಳನ್ನು ಹೊತ್ತವರು ಸಾಧಿಸಾಗದೇ ಕೂತ ಉದಾಹರಣೆಗಳು ಬೇಕಾದಷ್ಟಿವೆ. ಎಲ್ಲೋ ಕೆಲವರು ಅದೃಷ್ಟದ ಕಾರಣ ನಿರ್ಮಾಪಕರನ್ನು ಹುಡುಕಿರಬಹುದು ಅಷ್ಟೇ..

ಇಷ್ಟಕ್ಕೂ ಸುಮ್ಮನೆ ಕೂರುವುದಲ್ಲ ಏನಾದರೂ ಉಪಾಯ ಹುಡುಕಬೇಕು ಎಂದಾಗ ಸ್ಯಾಂಡಲ್ ವುಡ್ ನ ಯುವ ಸಮೂಹವೊಂದು ಕಂಡುಕೊಂಡಿರುವ ವಿಷಯವೇ ಪಿಪಿಎಂ. ಅಂದರೆ ಪ್ರೊಡ್ಯುಸರ್ ಪ್ರೋಮೋ ಮೂವಿ.. ಕನ್ನಡದಲ್ಲಿ ಹೇಳುವುದಾದರೆ; ನಿರ್ಮಾಪಕರನ್ನು ಸೆಳೆಯಲು ಮಾಡುವ ಸಿನಿಮಾ. ಹೊಸ ಪ್ರತಿಭೆಗಳಿಗೆ ಇದು ಅನಿವಾರ್ಯ.

ಇಲ್ಲಿ ಎ.ವಿ.ಸುರೇಶ್ ಹಾಗೂ ಗೆಳೆಯರು ‘ಮಾಸ್ಟರ್ ಮೈಂಡ್’ ಎಂಬ 32 ನಿಮಿಷದ ಸಿನಿಮಾ ಮಾಡಿ ನಿರ್ಮಾಪಕರ ಅನ್ವೇಷಣೆ ಮುಂದುವರೆಸಿದೆ. ಅನಂತ್ ವಾಸುದೇವ್, ಹಿಮಾ, ಬಲರಾಮ್, ನಿಹಾಲ್ ಗೌಡ, ಸದಾನಂದಗೌಡ, ಕುಶಾಲ್ ಮೊದಲಾವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಂಗೀತ ಲಲಿತ್‌ಕ್ರಿಷ್, ಛಾಯಾಗ್ರಹಣ ಸಾವದ್.ಎಂ, ಸಂಕಲನ ಹರೀಶ್-ಕೃಷ್ಣ ಅವರದು. ಬೆಂಗಳೂರು, ದೇವನಹಳ್ಳಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಶೋಕ್.ಎನ್.ಶಿಂಧೆ ಹಣ ಹೂಡಿದ್ದಾರೆ ಎಂಬ ಮಾಹಿತಿಗಳನ್ನು ನೀಡಿತು ಚಿತ್ರತಂಡ.

ಮಾಸ್ಟರ್ ಮೈಂಡ್ ನ ಕುಶಲತೆಯ ಬಗ್ಗೆ ಚಿತ್ರರಂಗದ ಗಣ್ಯರಾದ ಭಾ.ಮ.ಹರೀಶ್, ಬಿ.ಆರ್.ಕೇಶವ, ಉಮೇಶ್ ಬಣಕಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನು ಆರಂಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರೋಮೋದಲ್ಲಿಯೇ ಯುವಕರ ತಂಡದ ಪ್ರಯತ್ನಗಳನ್ನು ಹೊಗಳಿದ್ದರು. ನಿರ್ದೇಶಕರಾದ ಕುಮಾರ್ ಶ್ರೀನಿವಾಸ್, ನಾಗೇಶ್ ಕುಮಾರ್ ಹಾಗೂ ಪಾನಿಪುರಿ ಕಿಟ್ಟಿ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Social Share :