Snehapriya.com

June 6, 2025

ಸಿನಿಮಾ-ಗಾಸಿಪ್

ಗೂಡು ಕಟ್ಟುವ ಕನಸೂ ಬದುಕಿನ ಸವಾಲುಗಳೂ

Social Share :

ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಒಂದು ಮನೆ ಕಟ್ಟುವ ಆಶಯವಿರುತ್ತದೆ; ಆದರೆ ಬದುಕಿನಲ್ಲಿ ಎದುರಾಗುವ ಸವಾಲುಗಳು ಅದಕ್ಕೆ ಅಡ್ಡಿ ಪಡಿಸುತ್ತವೆ. ಕೆಲವೊಮ್ಮೆ ಅಂತಹ ಆಸೆಗಳು ಕಮರಿ ಹೋಗುವಂತಹ ಸಂದರ್ಭಗಳು ಎದುರಾಗಬಹುದು..
ಇಂತಹ ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲುವ ‘ಗೂಡು’ ಚಿತ್ರದಲ್ಲಿ ಮನೋಜ್ಞ ಸನ್ನಿವೇಶಗಳು ಪ್ರತಿಯೊಬ್ಬರ ಹೃದಯಾಂತರಾಳವನ್ನು ಕೆಣಕುತ್ತವೆ.

ಕನ್ನಡದಲ್ಲಿ ಹೆಸರು ಮಾಡಿದ ನಿರ್ದೇಶಕರಲ್ಲಿ ಒಬ್ಬರಾಗಿರುವ ಬಿ.ರಾಮಮೂರ್ತಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರವನ್ನು ನಾಗಾನಾಥ್ ಮಾಧವರಾವ್ ಜ್ಯೋಷಿ ನಿರ್ದೇಶನ ಮಾಡಿದ್ದಾರೆ. ತರಂಗ ಸಾಪ್ತಾಹಿಕದಲ್ಲಿ ಪ್ರಕಟಗೊಂಡಿದ್ದ ಟಿ.ಎಸ್.ನಾಗರಾಜ್ ಅವರ ಕಥೆಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರವನ್ನು ಅವಳು ಶ್ರಾವಣಿ ಖ್ಯಾತಿಯ ನಿರ್ಮಾಪಕ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ಉತ್ತಮವಾದ ಪಾತ್ರವನ್ನೂ ಕೂಡ ನಿರ್ವಹಿಸುತ್ತಿರುವುದಾಗಿ ಮಾಹಿತಿ ಕೊಟ್ಟರು ಮಂಜುನಾಥ್.

ತರಂಗದಲ್ಲಿ ಮೂಡಿ ಬಂದ ‘ಸಾವಿನ ನಂತರ’ ಎಂಬ ಕಥೆಯನ್ನು ಇಟ್ಟುಕೊಂಡು ಹುಡುಕುವಾಗ ಸಿಕ್ಕವರು ಮಂಜುನಾಥ್. ಸರ್ಕಾರಿ ಕೆಲಸದಲ್ಲಿರುವ ಪ್ರಾಮಾಣಿಕ ಅಧಿಕಾರಿಯೊಬ್ಬರು, ತಮ್ಮ ಸೇವೆಯ ನಿವೃತ್ತಿ ಹಣದಲ್ಲಿ ಒಂದು ಮನೆಯನ್ನು ಕಟ್ಟುವ ಹಂಬಲ ಹೊಂದಿರುತ್ತಾರೆ. ಆದರೆ ಪರಿಸ್ಥಿತಿಗಳು ಅದಕ್ಕೆ ಸಹಕರಿಸುವುದಿಲ್ಲ. ಅವರ ಪತ್ನಿಗೆ ಮಾರಣಾಂತಿಕ ಕಾಯಿಲೆ ಬರುತ್ತದೆ; ಅದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದ ಪ್ರಮೇಯ ಉಂಟಾಗುತ್ತದೆ. ಆ ವ್ಯಕ್ತಿ ಒಬ್ಬ ಪತಿಯಾಗಿ ಪತ್ನಿಗೆ ಮತ್ತು ಅಪ್ಪನಾಗಿ ಮಕ್ಕಳಿಗೆ ಹೇಗೆ ನಡೆದುಕೊಂಡು ಸಂದರ್ಭವನ್ನು ನಿಭಾಯಿಸುತ್ತಾರೆ ಎಂಬುದು ನಮ್ಮ ಕಥೆಯ ಸಾರಾಂಶ ಎಂದು ಹೇಳಿ ಇಡೀ ಕಥೆಯ ತಿರುಳನ್ನು ಬಿಚ್ಚಿಟ್ಟರು ನಿರ್ದೇಶಕ ನಾಗಾನಾಥ್ ಜ್ಯೋಷಿ.

ಅನೇಕ ದೊಡ್ಡ ದೊಡ್ಡ ಚಿತ್ರಗಳನ್ನು ನಿರ್ದೇಶನ ಮಾಡಿದ್ದರೂ ನನ್ನ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡು ಆ ಮೂಲಕ ನನಗೆ ರಾಮಮೂರ್ತಿ ಅವರು ಆಶೀರ್ವಾದ ಮಾಡಿದ್ದಾರೆ ಎಂದರು. ಇದು ನನಗೆ ಪೆನ್ ಷನ್ ನೀಡುವ ರೀತಿಯಲ್ಲಿ ಬಂದಿರುವ ಅವಕಾಶ ಎಂದರು ಮುಖ್ಯ ಪಾತ್ರದಲ್ಲಿ ನಟಿಸಿರುವ ಬಿ.ರಾಮಮೂರ್ತಿ. ನಾನೂ ಒಂದು ಕಾಲದಲ್ಲಿ ನಷ್ಟ ಸಂಭವಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಹೋಗಿದ್ದೆ. ಈ ಚಿತ್ರದಲ್ಲಿಯೂ ಅದೇ ರೀತಿಯ ಕಷ್ಟ ಎದುರಾಗುತ್ತದೆ. ಹಾಗಾಗಿ ನಟಿಸುವುದು ಹೆಚ್ಚು ಕಷ್ಟವಾಗುತ್ತಿಲ್ಲ ಎಂದರು.
ನಾನು ಕೂಡ ಈ ಚಿತ್ರದಲ್ಲಿ ಪಾತ್ರ ಮಾಡಿರುವೆ ಈ ಸಂದರ್ಭದಲ್ಲಿ ಹಳೆಯ ನೆನಪುಗಳು ನನ್ನನ್ನು ಕಾಡುತ್ತಿವೆ ಎಂದವರು ನಟ ಹಾಗೂ ನಿರ್ದೇಶಕ ಎಂ.ಡಿ.ಕೌಶಿಕ್.

ನಾನು ಬರೆದ ಅನೇಕ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಿನಿಮಾ ಕೂಡ ಆಗಿವೆ. ಆದರೆ ಈ ಕಥೆ ಮತ್ತು ತಂಡದ ಜೊತೆ ಬಾಂಧವ್ಯ‌ ಆಪ್ತವಾಗಿವೆ ಎಂದರು ಕಥೆಗಾರ ಟಿ.ಎಸ್.ನಾಗರಾಜ್. ಬಿ.ರಾಮಮೂರ್ತಿ ಅವರ ಪತ್ನಿಯ ಪಾತ್ರದಲ್ಲಿ ರೋಹಿಣಿ ಕಾಣಿಸಿಕೊಂಡಿದ್ದು, ಇದು ಸವಾಲಿನ ಪಾತ್ರವಾಗಿದೆ ಎಂದರು. ರಂಗಭೂಮಿ ಹಿನ್ನೆಲೆಯ ಅಭಿಷೇಕ್ ಮಗನ ಪಾತ್ರ ನಿರ್ವಹಿಸಿದ ಮಾಹಿತಿ ಬಂತು.

Social Share :

ಜಿಮ್ ರವಿ ಈಗ ಪುರುಷೋತ್ತಮ ಗಣ್ಯರಿಂದ ಪ್ರಶಂಸೆಗಳ ಸುರಿ ಮಳೆ

Social Share :

ಕನ್ನಡದ ಸಾಹಸ ಕಲಾವಿದರಲ್ಲಿ ಅತ್ಯಂತ ಹೆಸರು ಮಾಡಿದವರು ಅಂತಾರಾಷ್ಟ್ರೀಯ ಕ್ರೀಡಾಪಟು ಮೊಟ್ಟ ಮೊದಲ ಏಕಲವ್ಯ ಪ್ರಶಸ್ತಿ ಪುರಸ್ಕೃತ ಜಿಮ್ ರವಿ ಖ್ಯಾತಿಯ ಎ.ವಿ.ರವಿ. ಕಳೆದ ಭಾನುವಾರ (05/09/21) ಬೆಂಗಳೂರಿನ ನಾಗರಬಾವಿಯಲ್ಲಿರುವ ಕೆ.ಎಲ್.ಇ ವಿದ್ಯಾಸಂಸ್ಥೆಯ ಮನರಂಜನಾ ಸಂಭಾಗಣ ಗಣ್ಯರು ಹಾಗೂ ಅತಿಥಿಗಳಿಂದ ತುಂಬಿ ತುಳುಕಿತು. ಅದು ‘ಪುರುಷೋತ್ತಮ’ ಎಂಬ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಮುಖ್ಯವಾಗಿ ಹೇಳಬೇಕೆಂದರೆ ಜಿಮ್ ರವಿ ಅವರ ಕುಟುಂಬದ ಕಾರ್ಯಕ್ರಮ.

ಸಾಹಸ ಕಲಾವಿದರಾಗಿ ಸುಮಾರು 150 ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ಜಿಮ್ ರವಿ ನಾಯಕ ನಟರಾಗಿ ನಟಿಸುತ್ತಿರುವ ಚಿತ್ರವೇ ಪುರುಷೋತ್ತಮ ಅಂದರೆ ಮರ್ಯಾದಾ ಪುರುಷ ಎಂಬ ವ್ಯಾಖ್ಯಾನಗಳು ಬಂದವು. ಆ ಇಡೀ ಕಾರ್ಯಕ್ರಮದ ವಿಶೇಷತೆ ಏನೆಂದರೆ; ರಾಮ, ಕೃಷ್ಣ, ವಿಷ್ಣು ಹೀಗೆ ಸದಾ ಭಗವಂತನನ್ನು ಹೆಚ್ಚು ಆರಾಧಿಸುವ ಹೆಸರಾಂತ ಉದ್ಯಮಿ ಹಾಗೂ ಅಭಿಮಾನಿ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಟಿ.ವೆಂಕಟೇಶ್ ಅವರು ಪಾಲ್ಗೊಂಡಿದ್ದು.

ಮರ್ಯಾದ ಪುರುಷ ಶ್ರೀರಾಮ ಕಂಗೊಳಿಸಿದ್ದು ಗೌರವ ಮತ್ತು ಪ್ರೀತಿಯ ಕಾರಣಗಳಿಂದ. ಅದೇ ರೀತಿ ಜಿಮ್ ರವಿ ಕಷ್ಟಪಟ್ಟು ತಮ್ಮ ಕ್ಷೇತ್ರ ಹಾಗೂ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರು ಮುಖ್ಯಪಾತ್ರದಲ್ಲಿ ನಟಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು ಟಿ.ವೆಂಕಟೇಶ್ ಅವರು.

ಸುಮಾರು 300ಕ್ಕೂ ಹೆಚ್ಚು ಚಿನ್ನದ ಪದಕ ಗಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಜಿಮ್ ರವಿ ಅವರ ನಾಯಕ ನಟ ಆಗುವ ಅಭಿಲಾಷೆಗೆ ಒತ್ತಾಸೆಯಾಗಿ ನಿರ್ಮಾಣದಲ್ಲಿ ಕೈ ಜೋಡಿಸಿದವರು ಬೂಕನಕೆರೆ ರಾಮೇಗೌಡ. ಚಿತ್ರವನ್ನು ನಿರ್ದೇಶನ ಮಾಡಿದವರು ಅಮರ್ ನಾಥ್. ಇದು ಅವರ ಮೂರನೇ ಚಿತ್ರ.

ಇದು ವೇಗದ ಜಮಾನ ಗಂಡ ಹೆಂಡತಿ ನಡುವೆ ಸೌಹಾರ್ದ ಸಂಬಂಧಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಎಂತಹ ಕಷ್ಟ ಎದುರಾದರೂ ಹೆಂಡತಿಗೆ ನಿಷ್ಟನಾದ ಪತಿಯೊಬ್ಬನ ಕಥೆ ಇದು. ರವಿ ಅವರ ನಿಜ ಜೀವನದಲ್ಲಿ ಇಂತಹ ಅನೋನ್ಯ ಸಂಬಂಧಗಳನ್ನು ಕಾಣಬಹುದು ಎಂಬ ಮಾತುಗಳು ಕೇಳಿ ಬಂದವು.

ನಾನು ನೂರನೇ ಚಿತ್ರಕ್ಕೆ ನಾಯಕ ನಟ ಆದೆ ಆದರೆ ರವಿ ನೂರ ಐವತ್ತನೇ ಚಿತ್ರಕ್ಕೆ ನಾಯಕ ನಟ ಆಗಿ ನನ್ನ ದಾಖಲೆ ಮುರಿದಿದ್ದಾರೆ ಎಂದವರು ನಟ ಶರಣ್. ಇದು ಚಿತ್ರರಂಗ ಮೋಸ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಚ್ಚರವಿರಲಿ ಎಂದವರು ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ.

ಅಂದ ಹಾಗೆ ಅಪೂರ್ವ ಈ ಚಿತ್ರದ ನಾಯಕ ನಟಿ. ಇದು ತುಂಬಾ ತೂಕ ಇರುವ ಪಾತ್ರ. ಗಂಡ ಹೆಂಡತಿಯರ ನಡುವಿನ ಅನೋನ್ಯತೆ ಎಂಬುದಕ್ಕೆ ಉದಾಹರಣೆಯಾಗುತ್ತದೆ‌ ಎಂದರು. ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶಕ. ಹಾಡುಗಳ ವಿವರಣೆ ನೀಡಿದ್ದಲ್ಲದೆ ಗಾಯಕರಿಂದ ಹಾಡಿಸಿದರು ಕೂಡ. ಈ ಚಿತ್ರದ ಮೂಲಕ ನನಗೆ ಸಹಜ ಬದುಕಿನ ಅರಿವಾಯ್ತು ಎಂದರು. ಕಲೈ ಮಾಸ್ಟರ್ ನೃತ್ಯ ಹಾಗೂ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಹೆಸರಾಂತ ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Social Share :

ಆರ್ಗಸ್ ನಿರ್ಮಾಣ ಸಂಸ್ಥೆ ಒಂದೇ ಸೂರಿನಡಿ ವ್ಯವಸ್ಥೆ

Social Share :

ಅದ್ದೂರಿ ಚಿತ್ರ ನಿರ್ಮಾಣ ಮಾಡುವುದೆಂದರೆ ಸಾಮಾನ್ಯ ವಿಷಯವಲ್ಲ; ಚಿತ್ರೀಕರಣದ ಸಲುವಾಗಿ ವಿದೇಶಕ್ಕೆ ಹೋಗಬೇಕಾಗಬಹುದು.. ಚಿತ್ರೀಕರಣದ ವಿವಿಧ ಹಂತದಲ್ಲಿ ಬೇರೆ ಬೇರೆ ಕಡೆಯಿಂದ ಅನುಮತಿ ಪಡೆಯ ಬೇಕಾಗಬಹುದು. ಈಗಂತೂ ಪ್ರಾಣಿಗಳ ಬಳಕೆಗೆ ಸಂಬಂಧಿಸಿದಂತೆ ಚಿತ್ರೀಕರಣ ನಡೆಸಲು ಅನುಮತಿ ಪಡೆಯುವುದೇ ಪ್ರಯಾಸ..

ಇಂತಹ ವಾತಾವರಣದಲ್ಲಿ ಎಲ್ಲ ಬಗೆಯ ಅನುಮತಿಗಳನ್ನು ಕೊಡಿಸಿ ಸರಾಗ ಚಿತ್ರೀಕರಣ ನಡೆಸಲು ನಿರ್ಮಾಪಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈದಳೆದಿರುವ ಸಂಸ್ಥೆಯ ಹೆಸರು ‘ಆರ್ಗಸ್ ಎಂಟರ್ ಟೈನ್ ಮೆಂಟ್..!

ನಿರ್ಮಾಪಕ ಸ್ನೇಹಿ ಆಗಿರುವ ಈ ಸಂಸ್ಥೆ ಕಳೆದ ಶನಿವಾರ ಬೆಂಗಳೂರಿನ ತಾರಾ ಹೊಟೇಲ್ ನಲ್ಲಿ ಉದ್ಘಾಟನೆಗೊಂಡಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಎಂ.ಎನ್.ಸುರೇಶ್, ನಿರ್ಮಾಪಕ ಕೆ.ಮಂಜು, ನಿರ್ದೇಶಕ ನಾಗಣ್ಣ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿದೇಶದಲ್ಲಿ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಹಲವಾರು ರೀತಿಯಲ್ಲಿ ತೊಂದರೆಗಳು ಎದುರಾಗುತ್ತವೆ. ಸ್ಟಾರ್ ನಟರ ಚಿತ್ರಗಳ ನಿರ್ಮಾಪಕರೇ ಸಂಕಷ್ಟಗಳನ್ನು ಎದುರಿಸಿದ್ದಾರೆ. ಇನ್ನು ಎನಿಮಲ್ ಬೋರ್ಡ್ ನಿಂದ ಅನುಮತಿ ಪಡೆಯುವುದು ಅತ್ಯಂತ ಪ್ರಯಾಸದ ಕೆಲಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಆರ್ಗಸ್ ಸಂಸ್ಥೆಯ ಅಸ್ತಿತ್ವ ಮಹತ್ವ ಪಡೆದಿದೆ.

ಸಂಸ್ಥೆಯ ಸಂಸ್ಥಾಪಕ ಸುದಿಪೋ ಚಟರ್ಜಿ, ಸಹ ಸ್ಥಾಪಕ ಜೈರಾಜ ಸಿಂಗ್ ಶೇಖಾವತ್ ಹಾಗೂ ವ್ಯವಸ್ಥಾಪಕ ಖುಷಿರಾಜ ಸಿಂಗ್ ಶೇಖಾವತ್ ತಮ್ಮ ಸಂಸ್ಥೆಯ ರೂಪುರೇಷೆಗಳ ಬಗ್ಗೆ ವಿವರ ನೀಡಿದರು. ಸಂಸ್ಥೆಯು ಜೈಪುರದಲ್ಲಿ ಮುಖ್ಯ ಕಚೇರಿ ಹೊಂದಿದ್ದು, ಬೆಂಗಳೂರಿನಲ್ಲಿ ಶಾಖೆ ತೆರೆಯುತ್ತಿರುವುದರ ಬಗ್ಗೆ ಅತೀವ ಸಂತೋಷವಿದೆ ಎಂಬ ಅಭಿಪ್ರಾಯ ವನ್ನು ಮುಖ್ಯಸ್ಥರು ವ್ಯಕ್ತಪಡಿಸಿದರು.

ಈ ಸಂಸ್ಥೆ ಯಾವುದಕ್ಕೆ ಹೇಗೆ ದರ ನಿಗದಿ ಮಾಡುತ್ತದೆ ಎಂಬುದರ ವಿವರ ನೀಡಿದ ಪಕ್ಷದಲ್ಲಿ ನಾವು ನಿರ್ಮಾಪಕರ ಜೊತೆ ಚರ್ಚಿಸಿ ನಿರ್ಮಾಪಕ ಸ್ನೇಹಿ ವ್ಯವಸ್ಥೆ ರೂಪಿಸಿಕೊಳ್ಳಲು ಸೂಚಿಸುವುದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಚಿತ್ರರಂಗಕ್ಕೆ ಇದು ವರವಾಗಲಿದೆ ಎಂಬ ಅಭಿಪ್ರಾಯ ಕೂಡ ಗಣ್ಯರಿಂದ ವ್ಯಕ್ತವಾಯಿತು.

Social Share :

ಶ್ರೀರಾಮ್ ಕಟ್ಟಿದ ನಾವಿನ್ಯ ಸಿನಿಮಾ ಸಂಸ್ಥೆ ‘ಎನ್ ರೂಟ್ ಸ್ಟುಡಿಯೋ’

Social Share :

ಕನ್ನಡದ ಸಿನಿಮಾ ಲೋಕದಲ್ಲೊಂದು ಅಚ್ಚರಿಯ ಬೆಳವಣಿಗೆಯಲ್ಲಿ ನವ ನಾವಿನ್ಯ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಅಸ್ತಿತ್ವ ಪಡೆದಿದೆ. ಆ ಮೂಲಕ ಅತ್ಯಾಧುನಿಕ ವರಸೆಯಲ್ಲಿ ನಿರ್ಮಾಣವಾಗಿ ಈಗಿನ ಪ್ರೇಕ್ಷಕ ವರ್ಗವನ್ನು ತಣಿಸುವ ಕಾರ್ಯಕ್ಕೆ ಮುಂದಾಗಿದೆ. ಅದೇ ಉತ್ಸಾಹಿ ಯುವಕ ಶ್ರೀರಾಮ್ ನೇತೃತ್ವದ ‘ಎನ್ ರೂಟ್ ಸ್ಟುಡಿಯೋ’.

ಬಹುಮುಖ ಪ್ರತಿಭೆಯ ಈಗಾಗಲೇ ಕಿರುತೆರೆಯ ಅನೇಕ ಸಾಹಸಗಾಥೆಯ ಹಿಂದಿರುವ ಶ್ರೀರಾಮ್ ಅವರ ಕನಸಿನ ಲೋಕ ವಿಸ್ತಾರಗೊಳ್ಳುವುದಕ್ಕೆ ಈ ಸಂಸ್ಥೆ ನೆರವಾಗಲಿದೆ. ಆ ಮೂಲಕ ಬೆರಗುಗೊಳ್ಳುವ ಸಿನಿಮಾ ನಿರ್ಮಾಣದ ಆಶಯದಲ್ಲಿ ಅದು ತೇಲುತ್ತಿದೆ.

ಮೊದಲನೇಯದಾಗಿ ಎನ್ ರೂಟ್ ಸ್ಟುಡಿಯೋ ಸ್ (Enroute Studios) ಮೂಲಕ ‘ರಾಜಾ ಸೀಟ್’ ಎಂಬ ಚಿತ್ರ ನಿರ್ಮಾಣವಾಗುತ್ತಿದೆ. ಕಳೆದ ವರಮಹಾಲಕ್ಷ್ಮಿ ಹಬ್ಬದ ದಿನದಂದು ಚಿತ್ರದ ಮುಹೂರ್ತ ನಡೆದಿದೆ. ಕನ್ನಡದ ಪ್ರಸಿದ್ಧ ನಟ, ನವರಸ ನಾಯಕ ಜಗ್ಗೇಶ್ ರಾಜಾ ಸೀಟ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.

ಪ್ರಾಮಾಣಿಕತೆ ಇರುವ ಯುವಕನಿಗೆ ಎದುರಾಗುವ ಸವಾಲುಗಳು ಮತ್ತು ಆತ ಅದನ್ನು ಚಾಣಕ್ಷತೆಯಿಂದ ನಿರ್ವಹಿಸುವ ಅಂಶಗಳು ಚಿತ್ರದಲ್ಲಿ ಹೊಸ ಬಗೆಯಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ. ಹಲವು ಚಿತ್ರ ಹಾಗೂ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ಆರ್ವ ಈ ಚಿತ್ರದ ಹೀರೋ.

ಇರುವುದೆಲ್ಲವ ಬಿಟ್ಟು ಚಿತ್ರ ಮಾಡಿದ ಕಾಂತ ಕನ್ನಲಿ ನಿರ್ದೇಶಕ. ಎನ್.ರಾಘವ್ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಚಿತ್ರೀಕರಣ ಭರದಿಂದ ನಡೆಯುತ್ತಿರುವ ಸಂದರ್ಭದಲ್ಲಿ ನಿರ್ಮಾಪಕ ಶ್ರೀರಾಮ್ ಕೂಡ ಅಷ್ಟೇ ವೇಗವಾಗಿ ಚಿತ್ರ ನಿರ್ಮಾಣ ಮತ್ತು ವ್ಯಾಪಾರದ ಹೊಸ ಆಶಯಗಳನ್ನು ಹುಡುಕುತ್ತಿದ್ದಾರೆ. ಇದರಲ್ಲಿ ನೇರವಾಗಿ ಮನೆಗೆ ತಲುಪುವ ವ್ಯವಸ್ಥೆ ಓಟಿಟಿ ಕೂಡ ಸೇರಿದೆ.

‘ಒಂದು ಅತ್ಯುತ್ತಮ ತಂಡದ ಜೊತೆಗೆ ಕನ್ನಡ ಸಿನಿಮಾ ಲೋಕವನ್ನು ಬೆಳಗುವ ಅತಿ ದೊಡ್ಡ ಆಶಯವನ್ನು ನಮ್ಮ ‘ಎನ್ ರೂಟ್ ಸ್ಟುಡಿಯೊ’ ಸಂಸ್ಥೆ ಹೊಂದಿದೆ’ ಎಂಬ ವಿವರಗಳನ್ನು ಕೊಟ್ಟರು ಶ್ರೀರಾಮ್.

Social Share :

ನಟಿ ಮಮತಾ ರಾವತ್ ನೋವು+ಸಿಟ್ಟು=ಸಿಕ್ಸ್ ಪ್ಯಾಕ್

Social Share :

ಈ ಜನಪ್ರಿಯ ಕ್ಷೇತ್ರಗಳೇ.. ಹಾಗೆ ಹೇಳದೆ ನೋವನ್ನು ಕೊಡುತ್ತವೆ; ಕೇಳದೆ ಅವಮಾನಗಳನ್ನು ಮುಂದೆ ಒಡ್ಡಿ ಬಿಡುತ್ತವೆ; ಅನಿರೀಕ್ಷಿತಾ ಅದೃಷ್ಟ ಆಕಾಶಗಳನ್ನು ತೋರಿಸಿ ಬಿಡುತ್ತವೆ. ಮೇಲ್ನೋಟಕ್ಕೆ ಶೃಂಗಾರಮಯವಾಗಿ ಕಾಣುವ ಸಿನಿಮಾ ರಂಗದಲ್ಲಿ ಎಲ್ಲವೂ ಇರುತ್ತವೆ. ನೋವು, ನಲಿವು, ಸಿಟ್ಟು, ಅಸಹಾಯಕತೆ ಕೊನೆಗೆ ವಿಫಲತೆ. ಅದೃಷ್ಟದ ಫಲವೋ ಎಂಬಂತೆ ಕೆಲವರಿಗೆ ಹೆಚ್ಚಿನ ಪ್ರಯತ್ನವಿಲ್ಲದೆ ಎಲ್ಲವೂ ದಕ್ಕಿ ಬಿಡುತ್ತದೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನವೆಂಬ ಸೈಕಲ್ ಹೊಡೆಯುತ್ತಿದ್ದರೂ ಒಂದು ಸರಿಯಾದ ನೆಲೆ ಅಥವಾ ತಲುಪಬಹುದಾದ ಸ್ಥಳ ಸಿಗುವುದೇ ಇಲ್ಲ.. ಆದರೆ ಅವರ ಪ್ರಯತ್ನಗಳು ಸಾಗುತ್ತಲೇ ಇರುತ್ತವೆ. ಪ್ರಯತ್ನದಲ್ಲೇ ಘನತೆ ಇದೆ ಎಂದು ಮನಗಂಡವರು ಅದನ್ನು ಮುಂದುವರೆಸುತ್ತಲೇ ಇರುತ್ತಾರೆ.

ಇಲ್ಲಿ ಇಂತಹ ಪೀಠಿಕೆಗೆ ಕಾರಣವಾಗಿದ್ದು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕಲಾವಿದೆ ಎಂದು ಗುರುತಿಸಿಕೊಂಡಿರುವ ಮಮತಾ ರಾವತ್ ಅವರಿಗಾಗಿ. ಈಗ್ಗೆ ಒಂದು ದಶಕದ ಹಿಂದೆ ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಹಾಗೂ ಇತರ ಹಾಸ್ಯ ನಟರಿಗೆ ಜೋಡಿಯಾಗುತ್ತಿದ್ದ ಮಮತಾ ರಾವತ್ ಆಗ ಅವರು ಅನಿವಾರ್ಯ ಕೂಡ ಆಗುವಷ್ಟು ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಆದರೆ ಒಬ್ಬ ಕಲಾವಿದೆಗೆ ನಿಜವಾಗಿ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ‌ ಎಂದಾಗ ಸಿಡಿದೆದ್ದಿದ್ದರು.

ಜಸ್ಟ್ ಒಂದ್ ಐದತ್ತು ವರ್ಷಗಳ ಹಿಂದೆ ಹೊಸದಾಗಿ ಬಂದ ಮುಖ್ಯ ಪಾತ್ರದಲ್ಲಿ ನಟಿಸುವ (ಹೀರೋಯಿನ್) ನಟಿಯರಿಗೆ ಅತೀವ ಗೌರವ ಸಿಗುತ್ತಿತ್ತು. ಅವರಿಗೆ ಕ್ಯಾರಾವ್ಯಾನ್ ಮತ್ತಿತರ ಎಲ್ಲಾ ಸೌಲಭ್ಯಗಳು ಉಂಟು. ಆದರೆ ಈಗಾಗಲೇ ಜನಪ್ರಿಯತೆ ಸಾಧಿಸಿದ್ದರೂ ಕ್ಯಾರೆಕ್ಟರ್ ಆರ್ಟಿಸ್ಟ್ ಎಂದು ಕರೆಸಿಕೊಳ್ಳುವ ಕಲಾವಿದೆಯರಿಗೆ ಯಾವ ಸೌಲಭ್ಯವೂ ಇಲ್ಲ. ಇಂತಹ ನಟಿಯರ ಸಾಲಿಗೆ ಸೇರಿದ ಮಮತಾ ರಾವತ್ ಈ ವಿಷಯದಲ್ಲಿ ಬಹಳ ಅವಮಾನಗಳನ್ನು ಅನುಭವಿಸಿದರು. ಅನಿವಾರ್ಯ ಸಂದರ್ಭಗಳಲ್ಲಿಯೂ ಇವರಿಗೆ ಕ್ಯಾರಾವ್ಯಾನ್ ಉಪಯೋಗಿಸಲು ಸಿಗುತ್ತಿರಲಿಲ್ಲ. ಹೊರಾಂಗಣ ಚಿತ್ರೀಕರಣ ಸಂದರ್ಭಗಳಲ್ಲಿ ಶೌಚಾಲಯಗಳು ಹತ್ತಿರ ಇರುತ್ತಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ನೋವು ಯಾತನೆ ಅವರವರಿಗೆ ಗೊತ್ತಿರುತ್ತದೆ. ಮುಖ್ಯವಾಗಿ ಇತರ ಪಾತ್ರಧಾರಿಗಳನ್ನು ನಡೆಸಿಕೊಳ್ಳುವ ರೀತಿಯೂ ಅಸಹಾಕತೆಯನ್ನು ತುಂಬುತ್ತದೆ.

ಇಂಥದ್ದೇ ಸ್ಥಿತಿಯಲ್ಲಿ ಮಮತಾ ರಾವತ್ ಒಂದು ಗಟ್ಟಿಯಾದ ನಿರ್ಧಾರ ಕೈಗೊಳ್ಳುತ್ತಾರೆ.. ಅದೇನೆಂದರೆ ನಾನೂ ಹೀರೋಯಿನ್ ಆಗಬೇಕು..! ಆದರೆ ಅದು ಅಷ್ಟು ಸುಲಭವೇ.. ಖಂಡಿತಾ ಇಲ್ಲ. ಮೈಮಾಟ ಸಪೂರವಾಗಬೇಕು. ತೆಳುವಾದ ಮೇಲೆ ಸುಂದರವಾಗಿ ಕಾಣಬೇಕು.. ಅದಾದ ಮೇಲೆ ಸಿನಿಮಾ ಮಂದಿಗೆ ಇಷ್ಟವಾಗಬೇಕು.. ಇದನ್ನೆಲ್ಲಾ ಸಾಧಿಸಲು ಶ್ರಮ ಪಡಬೇಕು.. ಆಗ ಮಮತಾ ಮೊದಲ ಆಯ್ಕೆ ಜಿಮ್..! ಜಿಮ್ ಹೋಗಿ ಮಮತಾ ವರ್ಕೌಟ್ ಮಾಡುತ್ತಿದ್ದ ದಿನಗಳ ಬಗ್ಗೆ ಮಮತಾ ಅವರ ಮಾತಿನಲ್ಲಿ ಹೇಳುವುದಾದರೆ..
‘ನಾನು ನಿಜಕ್ಕೂ ಕೋಪ ಮತ್ತು‌ ಅಸಹಾಯತೆಯಲ್ಲಿ ಬೇಯುತ್ತಿದ್ದೆ. ನನ್ನಲ್ಲಿ ಏನು ಕಡಿಮೆ ಇದೆ ಎಂಬುದು ತಲೆಯಲ್ಲಿ ಓಡುವಾಗ ಆಕ್ರೋಶ ಉಕ್ಕಿ ಬರುತ್ತಿತ್ತು. ಈಗಾಗಲೇ ನೂರಾರು ಚಿತ್ರಗಳಲ್ಲಿ ನಟಿಸಿದವರಿಗೆ ಇಲ್ಲಿ ಯಾವುದೇ ಮಣೆ ಇಲ್ಲ ಎಂಬ ಕೋಪ ಉಕ್ಕಿ ಬರುತ್ತಿತ್ತು. ಅದೇ ಕೋಪವನ್ನು ವರ್ಕೌಟ್ ನಲ್ಲಿ ತೋರಿಸುತ್ತಿದ್ದೆ. ಹಾಗಾಗಿ ಒಂದು ಗಟ್ಟಿಯಾದ ದೇಹಾಕಾರವನ್ನು ನಾನು ಪಡೆದುಬಟ್ಟೆ.‌ ಆದರೆ ಅದು ಸಿಕ್ಸ್ ಪ್ಯಾಕ್ ಆಗಿದೆ ‌ಎಂಬುದು ತಿಳಿದಿದ್ದೇ ಮಾಧ್ಯಮಗಳಿಂದ’.

ಮಮತಾ ರಾವತ್ ಗೆ ಸಿಕ್ಸ್ ಪ್ಯಾಕ್ ನ ವರ ಸಿಕ್ಕಿದ ಬಳಿಕ ಅವರ ಕನಸಿನ ನಾಯಕ ನಟಿಯಾಗುವ ಅವಕಾಶ ಗಳು ಒಲಿದು ಬಂದವು. ಕನ್ನಡದಲ್ಲಿ ಅದು ಕಡಿಮೆ ಎನಿಸಿದಾಗ ತೆಲುಗು ಹಾಗೂ ತಮಿಳು ಚಿತ್ರರಂಗದ ಕಡೆ ಮುಖ ಮಾಡಿದರು.
ಮಮತಾ ಇಲ್ಲಿಯವರೆಗೂ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಅನೇಕ ನಟಿಯರಿಗೆ ಡಬ್ಬಿಂಗೂ ಕೂಡ ಮಾಡಿದ್ದಾರೆ. ಅಚ್ಚ ಕನ್ನಡದಲ್ಲಿ ಅವರು ಮಾತನಾಡುವುದನ್ನು ಕೇಳುವುದೇ ಚೆಂದ. ನಮ್ಮ ನಡುವಿನ ಈ ನಟಿ ಬೆಂಕಿಯಲ್ಲಿ ಅರಳಿದ್ದೇ ಹೆಚ್ಚು. ಗ್ಲಾಮರ್ ವಿಷಯದಲ್ಲಿ ಕೂಡ ಸೈ ಎನಿಸಿಕೊಂಡ ಮಮತಾಗೆ ಹೆಚ್ಚಿನ ಅವಕಾಶಗಳು ಸಿಗಲೆಂದು ಆಶಿಸೋಣ..

Social Share :

ರಜನಿಕಾಂತ್ ಪತ್ರಕರ್ತರಾಗಿದ್ದರು – ರಾಮಚಂದ್ರರಾವ್ ಗುರು

Social Share :

ಕಳೆದ ಎರಡು ವರ್ಷಗಳ ಹಿಂದೆ ಮಾಧ್ಯಮಗಳ ಮುಂದೆ ಸಂದರ್ಶನ ನೀಡುವಾಗ ‘ನಾನು ಕೂಡ ಒಂದು ಕಾಲದಲ್ಲಿ ಪತ್ರಕರ್ತನಾಗಿದ್ದೆ ನಿಮಗೆ ಗೊತ್ತಾ’ ಎಂದು ಹೇಳಿ ಎದುರಿಗೆ ಮೈಕ್ ಹಿಡಿದ ಮಾಧ್ಯಮದ ಪ್ರತಿನಿಧಿಗಳನ್ನು ಚಕಿತಗೊಳಿಸಿದವರು ಭಾರತೀಯ ಚಿತ್ರರಂಗದ ಮೇರು ನಟ ರಜನಿಕಾಂತ್..!!

ಹೌದು ರಜನಿಕಾಂತ್ ಒಂದು ಕಾಲದಲ್ಲಿ ಪತ್ರಿಕಾ ಕಚೇರಿಯೊಂದಕ್ಕೆ ಭೇಟಿ ನೀಡಿ ಕರಡು ತಿದ್ದುವ ಮತ್ತು ಮೊಳೆ ಜೋಡಿಸುವ ಕಾರ್ಯದಲ್ಲಿ ಒಬ್ಬರಿಗೆ ನೆರವಾಗುತ್ತಿದ್ದರು. ಆ ಸಂದರ್ಭದಲ್ಲಿ ಆಸಕ್ತಿಗೆ ಅನುಗುಣವಾಗಿ ಬರೆಯುತ್ತಿದ್ದರು.

ಬೆಂಗಳೂರಿನಲ್ಲಿ ಕಷ್ಟದ ದಿನಗಳನ್ನು ಕಳೆಯುತ್ತಿದ್ದ ಆಗಿನ ಶಿವಾಜಿರಾವ್ ಕನ್ನಡದ ಮುಂಚೂಣಿಯ ದಿನ ಪತ್ರಿಕೆ ‘ಸಂಯುಕ್ತ ಕರ್ನಾಟಕ’ದಲ್ಲಿ ಕಾರ್ಯ ನಿರ್ವಹಿಸಿದ ಹೆಮ್ಮೆಯ ವಿಷಯ ಹೇಳಿಕೊಂಡಿದ್ದರು.
ಅಂದ ಹಾಗೆ ರಜನಿಕಾಂತ್ ಯಾರ ಜೊತೆಗೆ ಹೋಗುತ್ತಿದ್ದರು ಎಂಬುದು ಈಗ ಸುದ್ದಿಯಾಗಿ ಹರಿದಾಡಬಹುದು; ಏಕೆಂದರೆ ರಜನಿ ನೆನೆಯುತ್ತಿದ್ದ ಆ ಹಿರಿಯ ವ್ಯಕ್ತಿ ಬುಧವಾರ ಇಹಲೋಕ ತ್ಯಜಿಸಿದರು. ಅವರ ಹೆಸರು ರಾಮಚಂದ್ರ ರಾವ್.

ಪತ್ರಿಕೋದ್ಯಮದ ಹಿರಿಯಣ್ಣನಂತೆ ಇರುವ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನಾಲ್ಕು ದಶಕಗಳ ಕಾಲ ರಾಮಚಂದ್ರರಾವ್ ಸೇವೆ ಸಲ್ಲಿಸಿದ್ದರು. ತಮ್ಮ 73ನೇ ವಯಸ್ಸಿನಲ್ಲಿ ಗವಿಪುರಂನ ತಮ್ಮ ಸ್ವಗೃಹದಲ್ಲಿ ಅವರು ನಿಧನರಾದರು.

ರಾಮಚಂದ್ರರಾವ್ ಎಂದ ತಕ್ಷಣವೇ ಕೆಲವರಿಗೆ ರಜನಿಕಾಂತ್ ನೆನಪಾಗುವುದುಂಟು.. ಏಕೆಂದರೆ ರಾಮಚಂದ್ರರಾವ್ ಅವರಿಗೆ ರಜನಿಕಾಂತ್ ಪಟ್ಟಶಿಷ್ಯ.

ರಜನಿ ಅವರು ಕಂಡಕ್ಟರ್ ಆಗಿ ಆಗಿನ ಬಿಟಿಎಸ್ ಸೇರಿದ ಬಳಿಕವೂ ರಾಮಚಂದ್ರರಾವ್ ಅವರನ್ನು ನೋಡಲು ಸಂಯುಕ್ತ ಕರ್ನಾಟಕ ಕಚೇರಿಗೆ ಬರುತ್ತಿದ್ದರು‌ ಎಂಬುದಾಗಿ ಹಿರಿಯ ಪತ್ರಕರ್ತ ರಾಮಣ್ಣ ಕೋಡಿ ಹೊಸಳ್ಳಿ ಅವರು ತಮ್ಮ ಶ್ರದ್ಧಾಂಜಲಿಯಲ್ಲಿ ಮೆಲುಕು ಹಾಕಿದ್ದಾರೆ.

ಆದರೆ ತಮ್ಮ ಆತ್ಮೀಯ ಗುರುವನ್ನು ಕಳೆದುಕೊಂಡ ರಜನಿಕಾಂತ್ ಅವರ ಮನಸ್ಥಿತಿ ಹೇಗಿದೆಯೋ ಏನೋ..

ಆದರೆ ಕಿಕ್ಕಿರಿದ ಮಾಧ್ಯಮಗೋಷ್ಠಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ತಮ್ಮ ಗುರು ರಾಮಚಂದ್ರರಾವ್ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಸೂಪರ್ ಸ್ಟಾರ್ ರಜನಿ ನೆನೆದಿದ್ದರು.

🖋ಸೇಹಪ್ರಿಯ ನಾಗರಾಜ್

Social Share :

ಕಾನನದಲ್ಲಿ ಅಡ್ವೆಂಚರ್‌ ಅವಲಕ್ಕಿ ಪವಲಕ್ಕಿ

Social Share :

ಮೇಲ್ನೋಟಕ್ಕೆ ಇದು ಮಕ್ಕಳ ಚಿತ್ರದಂತೆ ಕಾಣುತ್ತದೆ. ನಿಜವಾಗಿ ಮಕ್ಕಳ ಸಾಹಸವಿದೆ. ಹೆಸರು ಅವಲಕ್ಕಿ ಪವಲಕ್ಕಿ. ಒಂದು ಕಾಲದಲ್ಲಿ ಅವಲಕ್ಕಿ ಪವಲಕ್ಕಿ ಎಂಬ ಮಕ್ಕಳ ಈ ಆಟ ಎಷ್ಟು ರೋಚಕವೋ ಸಿನಿಮಾದ ವಿಷಯವೂ ಅಷ್ಟೇ ರೋಚಕವಾಗಿದೆ ಎಂಬ ಮಾಹಿತಿ ಕೊಟ್ಟರು ನಿರ್ಮಾಪಕಿ ರಂಜಿತಾ ಸುಬ್ರಹ್ಮಣ್ಯ. ನಾನು ಕನ್ನಡದ ಹೆಮ್ಮೆಯ ಬರಹಗಾರ ತ.ರಾ.ಸು. ಕುಟುಂಬದಿಂದ ಬಂದವಳು. ಒಂದು ಅದ್ಭುತ ಕಥೆಯನ್ನು ಇಟ್ಟುಕೊಂಡು ನಾವೆಲ್ಲಾ ಕೆಲಸ ಮಾಡಿದ್ದೇವೆ.

ನಮ್ಮ ಟೀಮ್ ನಲ್ಲಿ ಇರುವ ಎಲ್ಲರಿಗೂ ಕಿರು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವಿದೆ ಎಂದು ಹೇಳುತ್ತಾ ಹೋದರು. ಇದು ಹೆಚ್ಚು ಕಾಡಿನಲ್ಲಿ ಚಿತ್ರೀಕರಣ ನಡೆದ ಚಿತ್ರ. ಅಲ್ಲಿನ ಅನುಭವಗಳು ರೋಚಕ ಮತ್ತು ಭಯಾನಕವೂ ಆಗಿದೆ. ಒಂದು ಅಡ್ವೆಂಚರ್‌ ಚಿತ್ರ ತೆಗೆಯುವಾಗ ಇಷ್ಟು ಕಷ್ಟಗಳು ಎದುರಾಗುತ್ತವೆ ಎಂಬ ಅರಿವು ಇರಲಿಲ್ಲ. ನನ್ನ ಪತಿ ಶ್ರೀನಾಥ್ ಅವರ ಸಹಕಾರ ಸ್ವಲ್ಪ ಹೆಚ್ಚಾಗಿಯೇ ಇತ್ತು ಎಂದರು ರಂಜಿತಾ ಸುಬ್ರಹ್ಮಣ್ಯ.

ಹೈದ್ರಾಬಾದ್ ಮೂಲದ ದುರ್ಗಾ ಪ್ರಸಾದ್ ಚಿತ್ರದ ನಿರ್ದೇಶಕ. ಆರು ವಿಭಿನ್ನ ನೆಲೆಯಲ್ಲಿ ಕಥೆ ಸಾಗುತ್ತದೆ. ಫ್ಯಾಂಟಸಿ ವಿಷಯವೂ ಚಿತ್ರದಲ್ಲಿದೆ. ನಾನು ಚಿತ್ರ ನಿರ್ದೇಶನ ಮಾಡುತ್ತಲೇ ಕನ್ನಡ ಭಾಷೆಯನ್ನೂ ಕಲಿತೆ ಎಂದರು. ಮೈಸೂರು ಮೂಲದ ಜುಪಿನ್ ಪೌಲ್ ಸಂಗೀತ ನಿರ್ದೇಶಕ. ಎಂದಿನಂತೆ ಇಲ್ಲಿ ಹೊಸ ಪ್ರಯೋಗಗಳಿಗೆ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡರು.

ಈ ಚಿತ್ರಕ್ಕೆ ಅರಣ್ಯದ 25 ಸ್ಥಳಗಳಲ್ಲಿ ಮತ್ತು ಬೆಂಗಳೂರಿನ ಒಂದು ಗುಹೆಯಲ್ಲಿ ಚಿತ್ರೀಕರಣ ನಡೆಸಿದ್ದು ವಿಶೇಷವಾಗಿದೆ ಎಂದು ವಿವರಿಸಿದವರು ಸಹ ನಿರ್ಮಾಪಕ ಸಂದೀಪ್ ಅಯ್ಯರ್. ಮೈಸೂರಿನ ಸ್ಲಂಗಳಲ್ಲಿ ಸಹ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರವನ್ನೂ ಕೊಟ್ಟರು.

ರಂಗಭೂಮಿ ಕಲಾವಿದ ರಾಘವೇಂದ್ರ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿರಾ ನಾಯರ್ ಮೂಲತಃ ರಂಗಭೂಮಿ ಕಲಾವಿದೆ. ನನಗೆ ಅಜ್ಜಿ ಪಾತ್ರ ಬಹಳ ಖುಷಿ ಕೊಡ್ತು ಎಂದು ಹೇಳಿಕೊಂಡರು.
ರಂಗಭೂಮಿ ಕಲಾವಿದ ನಾಗರಾಜ್, ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಸಿಂಚನಾ, ಮೇಕಪ್ ಕಲಾವಿದ ಉದಯ್ ಮಾತನಾಡಿದರು. ಉತ್ಸಾಹಿ ಯುವಕ ನಿರೀಕ್ಷಿತ್ ಕ್ಯಾಮೆರಾ ಕಲಿಯುವ ಸಲುವಾಗಿ ಛಾಯಾಗ್ರಾಹಕನಾದೆ ಎಂಬ ವಿವರ ಬಂತು ಅವರಿಂದ.

Social Share :

ಸಾಮಾಜಿಕ ಬದಲಾವಣೆಗೆ ಯಲ್ಲೋ ಬೋರ್ಡ್

Social Share :

ಈಚಿನ ದಿನಗಳಲ್ಲಿ ಟ್ಯಾಕ್ಸಿ ಚಾಲಕರ ಬದುಕು ಅತ್ಯಂತ ದುರ್ಬರ.. ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಟ್ಯಾಕ್ಸಿ ಬಿಟ್ಟು ಊರ ಕಡೆ ಪಲಾಯನಗೈದವರೇ ಹೆಚ್ಚು..
ಹಗಲು ರಾತ್ರಿ ಜನರ ಒಡನಾಡಿಯಂತೆ ಕೆಲಸ ಮಾಡುವ ಟ್ಯಾಕ್ಸಿ ಚಾಲಕರನ್ನು ಈ ಸಮಾಜ ನೋಡುವುದೇ ಬೇರೆ ಬಗೆಯಲ್ಲಿ.. ಆದರೆ ಅವರ ಮಾನವೀಯ ಗುಣ; ಅನುಕಂಪ, ಶ್ರಮ ಇವೆಲ್ಲಾ ಸಾಮಾನ್ಯರಿಗೆ ಕಾಣುವುದೇ ಇಲ್ಲ.

ಟ್ಯಾಕ್ಸಿ ಚಾಲಕರು ಸಮಾಜಕ್ಕೆ ಹೇಗೆ ಸಹಕಾರಿ ಮತ್ತು ಆಸರೆ ಎಂಬುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನವೇ ‘ಯಲ್ಲೋ ಬೋರ್ಡ್’ ಎಂಬ ಚಿತ್ರ.
ಟೈಗರ್ ಖ್ಯಾತಿಯ ಪ್ರದೀಪ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ಸಾಕಷ್ಟು ಕಾರಣಗಳಿಗಾಗಿ ಪ್ರೇಕ್ಷಕರನ್ನು ಸೆಳೆಯಬಹುದು. ಮೊದಲನೇಯದಾಗಿ ಇದೊಂದು ಭಾವನಾತ್ಮಕ ಚಿತ್ರ ಮತ್ತು ಸಂಗೀತಮಯ ಚಿತ್ರವೂ ಹೌದು. ಏಕೆಂದರೆ ಚಿತ್ರದ ಜೊತೆ ಜೊತೆಗೆ ಹಾಡುಗಳು ಬೆರೆಯುತ್ತವೆ. ಸೋನು ನಿಗಮ್, ಪುನೀತ್ ರಾಜ್ ಕುಮಾರ್, ಪಾಲಕ್ ಹೀಗೆ ಹೆಸರಾಂತ ಗಾಯಕರು ಹಾಡುಗಳನ್ನು ಹಾಡಿದ್ದಾರೆ.

ತ್ರಿಲೋಕ್ ರೆಡ್ಡಿ ಚಿತ್ರದ ನಿರ್ದೇಶಕ. ಇದೊಂದು ಟ್ಯಾಕ್ಸಿ ಡ್ರೈವರ್ ಕಥೆ. ಐಟಿಯಲ್ಲಿ ಕೆಲಸ ಮಾಡುವಾಗ ಬೆಸೆದುಕೊಂಡ ಅನುಭವಗಳಿವೆ. ಪ್ರದೀಪ್ ಮುಖ್ಯ ಪಾತ್ರದಲ್ಲಿ ಇದ್ದಾರೆ ಮತ್ತು ಚಿತ್ರದ ಕಲ್ಪನೆಗೆ ಪೂರಕವಾಗಿ ಅವರ ಪಾತ್ರ ಮೂಡಿ ಬಂದಿದೆ. ನಿಜ ಜೀವನದ ಘಟನೆಗಳು ಅಲ್ಲಲ್ಲಿ ಬೆಸೆದುಕೊಂಡಿವೆ ಎಂದರು ನಿರ್ದೇಶಕರು.

ಮುಖ್ಯವಾಗಿ ಸೋನ್ ನಿಗಮ್ ಅವರು ದುಬೈನಿಂದಲೇ ಆನ್ ಲೈನ್ ನಲ್ಲಿ ಹಾಡಿದ್ದು ವಿಶೇಷ. ಜೊತೆಗೆ ದೊಡ್ಡ ಗಾಯಕರ ಸಂಗಮವೇ ಇಲ್ಲಿದೆ ಎಂದರು ಸಂಗೀತ ನಿರ್ದೇಶಕ ಅದ್ವಿಕ್. ಜೊತೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗಿದೆ ಎಂಬ ಉತ್ತರ ಕೊಟ್ಟರು ಸಂಗೀತ ನಿರ್ದೇಶಕರು.

ಸಿನಿಮಾದಿಂದ ಸಮಾಜ ಬದಲಾವಣೆ ಮಾಡುವುದು ಸಾಧ್ಯವೇ ಎಂಬುದು ಇಲ್ಲಿ ಪ್ರಯೋಗ; ನಿಜವಾದ ಘಟನೆಗಳೂ ನನ್ನ ಪಾತ್ರದಲ್ಲಿ ಬೆಸೆದುಕೊಂಡಿವೆ ಎಂದರು ಪ್ರದೀಪ್. ಇದು ನೈಜ ಪಾತ್ರದಂತೆ ಇರುವ ಹೊಸ ಅನುಭವ ಎಂದು ಹೇಳಿಕೊಂಡರು.

ಭಯದಲ್ಲಿಯೂ ವೈವಿಧ್ಯತೆ ಇದೆ. ಇದು ನನಗೂ ವಿಶೇಷ ಅನುಭವ ಎಂದರು ಮುಖ್ಯ ನಟಿ ಅಹಲ್ಯ ಸುರೇಶ್. ಜೊತೆಗೆ ಸ್ನೇಹ, ಭವಾನಿ ಪ್ರಕಾಶ್, ಚಂದನಾ ರಾಘವೇಂದ್ರ ಮೊದಲಾದ ನಟಿಯರೂ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಚಿತ್ರಗಳಿಗೆ ನಿರ್ಮಾಪಕರಾಗಿರುವ ಶ್ರೀನಿವಾಸ್ ಬೆಂಡಿಗನವಲೆ ಇಲ್ಲಿ ಕಲಾವಿದ. ನನ್ನದು ಪೊಲೀಸ್ ಪಾತ್ರ ಎಂದು ಹೇಳಿಕೊಂಡರು. ಅಶ್ವಿನ್ ಹಾಸನ್ ಕೂಡ ಟ್ಯಾಕ್ಸಿ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ಅಶ್ವಿನ್ ಪೊಲೀಸ್ ಪಾತ್ರದಲ್ಲಿದ್ದಾರೆ ಎಂಬ ವಿವರಗಳು ಬಂದವು. ನಿರ್ಮಾಪಕರು ಕಾಣಿಸಿಕೊಳ್ಳಲಿಲ್ಲ. ಆದರೆ ಕಾರ್ಯಕಾರಿ ನಿರ್ಮಾಪಕ ನವೀನ್ ವಿವರಗಳನ್ನು ನೀಡಿದರು. ನಾನು ಪಾತ್ರಕ್ಕಾಗಿ ಕಾರು ಕಲಿತೆ ಮತ್ತು ತೆಗೆದುಕೊಂಡೆ ಎಂದರು ಹಾಸ್ಯ ನಟ ಅಮೀತ್.

Social Share :

ದೃಶ್ಯ 2 ಕುಟುಂಬ ಒಂದೇ

Social Share :

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬೇರೆಯದೇ ಆದ ಇಮೇಜ್ ತಂದುಕೊಟ್ಟು ಯಶಸ್ವಿಯಾದ ಚಿತ್ರ ದೃಶ್ಯ. ಕುಟುಂಬದ ರಕ್ಷಣೆಗೆ ಹೋರಾಡುವ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಬುದ್ಧಿಮತ್ತೆ ಪ್ರದರ್ಶನದ ಆ ಚಿತ್ರವಾಗಿತ್ತು. ಸುಮಾರು ಆರು ವರ್ಷಗಳ ಕೆಳಗೆ ಬಿಡುಗಡೆಗೊಂಡಿದ್ದ ಆ ಚಿತ್ರದ ಮುಂದುವರೆದ ಭಾಗದಂತೆಯೇ ಮೂಡಿ ಬರುತ್ತಿರುವ ಚಿತ್ರ ‘ದೃಶ್ಯ-2’.

ಅಚ್ಚರಿಯ ವಿಷಯವೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಅಲ್ಲಿದ್ದ ತಂಡವೇ ಇಲ್ಲಿ ಮುಂದುವರೆದಿದೆ. ನಿರ್ದೇಶಕ ಪಿ.ವಾಸು, ನಟಿ ನವ್ಯ ನಾಯರ್, ಮಗಳ ಪಾತ್ರ ಮಾಡಿದ್ದ ಆರೋಹಿ, ಉನ್ನತಿ ಹೀಗೆ ಅಲ್ಲಿನ ಕುಟುಂಬ ಕುಟುಂಬವಾಗಿಯೇ ಮುಂದುವರೆದಿದೆ.

ಮುಖ್ಯ ಪಾತ್ರಧಾರಿ ವಿ.ರವಿಚಂದ್ರನ್ ಎಂದಿನಂತೆ ಅತ್ಯಂತ ಲವಲವಿಕೆಯಲ್ಲಿ ಮಾತನಾಡುತ್ತಿದ್ದರು. ಇದು ನನ್ನ ಎರಡನೇ ಕುಟುಂಬ; ಅದೇ ಜರ್ನಿ ಮುಂದುವರೆಯುವಿಕೆಯ ಭಾಗವಾಗಿ
ಶೂಟಿಂಗ್ ಮುಗಿದಿದ್ದೇ ತಿಳಿಯಲಿಲ್ಲ ಇವರೆಲ್ಲರ ಒಡನಾಟ ನನಗೆ ಕುಟುಂಬದ ಭಾವನೆಗಳನ್ನೇ ಕೊಟ್ಟಿತು ಎಂದು ಹೇಳುತ್ತಾ ಹೋದರು. ಜೊತೆಗೆ ನವ್ಯ ನಾಯರ್ ಅವರ ಬಗ್ಗೆ ಚಟಾಕಿಗಳನ್ನು ಹಾರಿಸಿ ನಕ್ಕರು.

ನಿರ್ದೇಶಕ ಪಿ.ವಾಸು ಚಿತ್ರೀಕರಣ ಮುಗಿದಿದ್ದೇ ತಿಳಿಯಲಿಲ್ಲ ಎಂದರು. ಈ ಚಿತ್ರ ಹೇಗೆ ಆರಂಭವಾಯಿತು ಮತ್ತು ಹೇಗೆ ಮುಗಿಯಿತು ಎಂಬುದು ಗೊತ್ತೇ ಆಗಲಿಲ್ಲ. ಮಡಿಕೇರಿ ಮತ್ತು ಬೆಂಗಳೂರು ಎರಡು ಕಡೆ ಶೂಟಿಂಗ್ ನಡೆಯಿತು. ಕನ್ನಡ ಪ್ರೇಕ್ಷಕರಿಗೆ ಏನು ಬೇಕೋ ಅದು ಚಿತ್ರದಲ್ಲಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹಾಡು ಸೇರ್ಪಡೆಗೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಉತ್ತಮವಾಗಿದೆ; ಹೆಚ್ಚು ಭಾವನಾತ್ಮಕ ವಾಗಿ ಶೂಟಿಂಗ್ ಕ್ಷಣಗಳನ್ನು ಅನುಭವಿಸಿದ್ದಾಗಿ ಹೇಳಿಕೊಂಡರು ನಿರ್ದೇಶಕ ಪಿ.ವಾಸು.

ನಮಗೆ ಓಟಿಟಿ ಎಲ್ಲಾ ಬೇಡ.. ಚಿತ್ರಮಂದಿರದಲ್ಲಿ ಕುಟುಂಬ ಒಟ್ಟಿಗೆ ಕುಳಿತು ನೋಡುವ ಕಾಲ ಬಂದಾಗ ಚಿತ್ರ ಬಿಡುಗಡೆ ಕಾಣುತ್ತದೆ ಎಂದರು ಕ್ರೇಜಿಸ್ಟಾರ್. ಇದು ಕುಟುಂಬದ ರಕ್ಷಣೆಗೆ ಸಂಬಂಧಿಸಿದ ಸಿನಿಮಾ ಆದ್ದರಿಂದ ಕುಟುಂಬ ಸಮೇತವಾಗಿ ನೋಡಬೇಕು ಎಂದರು.

ಒಳಗೆ ಪ್ರೀತಿ ತುಂಬಿದ ಕುಟುಂಬ ಮತ್ತು ಕನ್ನಡಿಗರ ಪ್ರೀತಿ ಎರಡೂ ಸಿಗುತ್ತಿದೆ ಎಂದರು ನವ್ಯ ನಾಯರ್. ನಾನು ಪಾತ್ರ ಮಾಡುವಾಗ ಮಗಳಂತೆಯೇ ನನ್ನನ್ನು ನೋಡಿಕೊಂಡಿದ್ದು ಮಾತ್ರ ಮರೆಯಲಾಗದ ಸಂಗತಿ ಎಂದಿದ್ದು ಆರೋಹಿ, ಕಲಾ ನಿರ್ದೇಶಕ ರವಿ ಸಂತೆಹಕ್ಲು ಮಾತನಾಡುವಾಗ ಭಾವುಕರಾಗಿದ್ದರು. ಕೊರೊನಾ ಕಾರಣದಿಂದ ಎದುರಾದ ತೊಂದರೆಗಳ ಬಗ್ಗೆ ವಿವರ ನೀಡಿದರು. ಯತಿರಾಜ್ ಚಿತ್ರಕ್ಕೆ ಹೊಸ ಸೇರ್ಪಡೆ. ಈ ತಂಡದ ಜೊತೆಗೆ ಸೇರಿದ್ದೇ ನನ್ನ ಪುಣ್ಯ ಮತ್ತು ಅದು ಥ್ರಿಲ್ಲಿಂಗ್ ವಿಷಯ ಎಂದರು.

ರವಿ ಅಂಕಲ್ ನನಗೆ ಪ್ರತಿಯೊಂದನ್ನು ಹೇಳಿಕೊಟ್ಟರು ಎಂಬುದು ಬೇಬಿ ಉನ್ನತಿ ಮಾತು.

Social Share :

ಸುದೀಪ್ ಮೆಚ್ಚಿದ ಉಸಿರೇ ಉಸಿರೇ..

Social Share :

ಅದು ಒಂದು ಚಿತ್ರದ ಪೋಸ್ಟರ್ ಲಾಂಚ್ ಕಾರ್ಯಕ್ರಮ..! ಅದು ಅತ್ಯಂತ ಅದ್ದೂರಿಯಿಂದ ಕೂಡಿತ್ತು ಎಂಬುದು ವಿಶೇಷ. ಚಿತ್ರದ ಹೆಸರು ‘ಉಸಿರೇ ಉಸಿರೇ’. ಅದು ಸುದೀಪ್ ಅವರ ಹಾಡು ಎಂಬುದು ಅದರ ಟ್ರೇಡ್ ಮಾರ್ಕ್. ಬೆಂಗಳೂರಿನ ಯಶವಂತಪುರದಲ್ಲಿರುವ ವೈಭವದ ತಾರಾ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾಗಿದ್ದು ಕಿಚ್ಚ ಸುದೀಪ್ ಅವರೇ.

ಒಂದು ರೀತಿಯಲ್ಲಿ ಅವರ ಬರುವಿಕೆ ಹಿನ್ನೆಲೆಯಲ್ಲಿ ಇಂತಹ ಸಿದ್ದತೆ ಮಾಡಿಕೊಂಡಿರಬಹುದು ಎಂಬ ಅನಿಸಿಕೆಯೂ ಅಲ್ಲಿತ್ತು. ನಿರ್ಮಾಪಕ ಪ್ರದೀಪ್ ಯಾದವ್ ಸೇರಿದಂತೆ ಚಿತ್ರತಂಡದ ಸಾಕಷ್ಟು ಜನರು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಶೇಷವಾಗಿ ಚಿತ್ರದ ನಿರ್ದೇಶಕ ವಿಜಯ್ ಒಂದು ರೀತಿಯಲ್ಲಿ ಭಾವುಕತೆಯಿಂದಲೇ ಮಾತನಾಡಿದರು. ‘ಇದು ಅಕ್ಷರಗಳಿಗೆ ಅನ್ನದ ರೂಪ ಪಡೆದ ವೇದಿಕೆ’ ಎಂಬುದಾಗಿ ಅವರು ಹೇಳಿದ ಮಾತು ಕಿಚ್ಚ ಸುದೀಪ್ ಅವರನ್ನು ಸೆಳೆದಿತ್ತು. ಆ ಹಿನ್ನೆಲೆಯಲ್ಲಿ ತಮಗೆ ನೀಡಲಾದ ಬೆಳ್ಳಿ ಪೆನ್ ಅನ್ನು ನಿರ್ದೇಶಕರಿಗೆ ಉಡುಗೊರೆಯಾಗಿ ಕೊಟ್ಟರು ಸುದೀಪ್.

ಇದೊಂದು ಪರಿಶುದ್ಧ ಪ್ರೇಮಕಥೆ; ಮುಖ್ಯ ಪಾತ್ರಕ್ಕೆ ರಾಜೀವ್ ಥರದವರು ಸಿಕ್ಕಿದ್ದು ದೊಡ್ಡ ವಿಷಯವಾಗಿದೆ ಎಂದು ಸಹ ಹೇಳಿಕೊಂಡರು ನಿರ್ದೇಶಕರು. ಚಿತ್ರದಲ್ಲಿ ದಕ್ಷಿಣ ಭಾರತದ ಹೆಸರಾಂತ ನಟ ಆಲಿ ಕೂಡ ಪಾತ್ರ ಮಾಡಿದ್ದಾರೆ. ಅವರನ್ನು ವೇದಿಕೆಗೆ ಕರೆದು ನೀವು ಕನ್ನಡಕ್ಕೆ ಬಂದಿರುವುದು ಸಂತಸ ಎಂದಾಗ, ನಾನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದು ಬಹಳ ವರ್ಷವಾಯಿತು; 1983ರಲ್ಲಿ ತೆರೆಕಂಡ ರೆಬೆಲ್ ಸ್ಟಾರ್ ಅಂಬರೀಶ್ ಅವರ ‘ಏಕಲವ್ಯ’ ನನ್ನ ಮೊದಲ ಚಿತ್ರವಾಗಿತ್ತು ಎಂಬ ವಿವರ ಕೊಟ್ಟರು ನಟ ಆಲಿ.

ಮುಖ್ಯ ಪಾತ್ರದಲ್ಲಿರುವ ನಟ ರಾಜೀವ್ ನನ್ನ ರೀತಿಯದೇ ಒಂದು ಪಾತ್ರವಿದು. ಬಹಳ ನಿರೀಕ್ಷೆಯಲ್ಲಿ ಸಿಕ್ಕಿದ ತಕ್ಕದಾದ ಪಾತ್ರ ಎಂದು ಹೇಳಿಕೊಂಡರು. ಈ ರೀತಿಯ ಒಂದು ದೊಡ್ಡ ವೇದಿಕೆ ಸಿಗಲು ನನಗೆ 10 ವರ್ಷ ಬೇಕಾಯಿತು ಎಂಬ ಕೊರಗನ್ನೂ ಹೊರ ಹಾಕಿದರು ರಾಜೀವ್.

ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದವರು ತಬಲನಾಣಿ. ಈ ಚಿತ್ರತಂಡ ಬಹಳವೇ ವಿಶೇಷ ಎಂದರು. ವಿತರಕ ನವರಸನ್ ಕೂಡ ತಂಡವನ್ನು ಹೊಗಳಿದರು. ನಟಿ ಶ್ರೀಜಿತ, ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ ಪ್ರೋತ್ಸಾಹವಿರಲಿ ಎಂದರು. ಮಂಜು ಪಾವಗಡ ಮುಖ್ಯ ಅತಿಥಿಯಾಗಿ ಬಂದು ಮಾತನಾಡಿದರು. ಚಿತ್ರತಂಡದ ಸಂಬಂಧಿಗಳು ಅನೇಕ ಹಿರಿಯರು ಪಾಲ್ಗೊಂಡಿದ್ದು ವಿಶೇಷ. ನಿರ್ದೇಶಕ ವಿಜಯ್ ತಮ್ಮ ತಂಡದಲ್ಲಿ ಲಕ್ಷ್ಮಿ ನಾರಾಯಣ ಹಾಗೂ ಇತರ ಬರಹಗಾರರನ್ನು ಒಳಗೊಂಡಿರುವುದು ಚಿತ್ರದ ಹೆಗ್ಗಳಿಕೆ ಯಾಗಿದೆ.

Social Share :