Snehapriya.com

June 7, 2025

ಸಿನಿಮಾ-ಗಾಸಿಪ್

ಬಯಲುಸೀಮೆ ಸಂಸ್ಕೃತಿ ಜೊತೆಗೆ ಅದಮ್ಯ ಗಟ್ಟಿತನ

Social Share :

ರಾಜ್ಯದ ಉತ್ತರ ಕರ್ನಾಟಕ ಭಾಗವನ್ನು ಗಂಡು ಮೆಟ್ಟಿದ ನಾಡು ಎಂದು ಕರೆಯುವುದುಂಟು. ಆದರೆ ಮೊದಲಿನಿಂದಲೂ ಆ ಭಾಗ ಬಯಲುಸೀಮೆ ಎಂದೇ ಕರೆಸಿಕೊಳ್ಳುತ್ತದೆ. ಭಾಷೆ, ಆಹಾರ, ಸಂಸ್ಕೃತಿ ಎಲ್ಲವೂ ವಿಶೇಷ ಹಾಗೂ ವಿಭಿನ್ನವೆನಿಸುವ ಈ ಸ್ಥಳದ ನೆನಪು ಈಗ ಏಕೆಂದರೆ ಚಿತ್ರವೊಂದಕ್ಕೆ ‘ಬಯಲುಸೀಮೆ’ ಎಂದೇ ಹೆಸರಿಡಲಾಗಿದೆ. ಅದರ ವಿಶೇಷತೆಗಳನ್ನು ತಿಳಿಸಿಕೊಡುವ ಸಲುವಾಗಿಯೇ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.

ಬಯಲುಸೀಮೆ ಎಂದರೆ ಅದೊಂದು ವಿಭಿನ್ನ ಸಂಸ್ಕೃತಿ. ಒಂದೆರಡು ದಶಕಗಳ ಹಿಂದೆ ಇಲ್ಲಿ ನೇಕಾರಿಕೆ ಎಂಬುದು ಪ್ರಸಿದ್ಧವಾಗಿತ್ತು. ಆ ನಂತರ ಇಲ್ಲಿ ರಾಜಕೀಯ, ಅಪರಾಧ ಎಲ್ಲವೂ ಬೇರೆ ಬೇರೆ ಆಕಾರಗಳನ್ನು ಪಡೆದವು. ಬಯಲುಸೀಮೆಯ ಸಂಸ್ಕೃತಿಯನ್ನು ಪರಿಚಯಿಸುವುದೇ ಚಿತ್ರ ಮುಖ್ಯ ಉದ್ದೇಶವಾಗಿರುತ್ತದೆ ಎಂಬ ಮಾಹಿತಿಗಳನ್ನು ನೀಡಿದವರು ಚಿತ್ರದ ಮುಖ್ಯ ಪಾತ್ರದಲ್ಲಿ ಕೂಡ ನಟಿಸಿರುವ ನಿರ್ದೇಶಕ ವರುಣ್ ಕಟ್ಟಿಮುನಿ.

ಹೆಚ್ಚಿನ ಚಿತ್ರೀಕರಣ ಗಜೇಂದ್ರಗಡದಲ್ಲಿ ನಡೆದಿದೆ. ಇಡೀ ಸಂಸ್ಕೃತಿ ಕಣ್ಣ ಮುಂದೆ ಬರುವಂತೆ ಕಟ್ಟಿ ಕೊಡುವುದು ನಮ್ಮ ಆಶಯ.ಇಲ್ಲಿ ಆರ್ಮುಗಂ ಖ್ಯಾತಿಯ ರವಿಶಂಕರ್ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದು; ಅವರ ಪ್ರೋತ್ಸಾಹವೇ ನಮಗೆ ಅತ್ಯಂತ ಸ್ಫೂರ್ತಿಯಾಗಿತ್ತು ಎಂದು ಹೇಳುತ್ತಾ ಹೋದರು ನಿರ್ದೇಶಕರು.

ಚಿತ್ರದಲ್ಲಿ ಅತಿರಥ ಮಹಾರಥರ ಸಂಗಮವೇ ಇದೆ. ಮುಖ್ಯವಾಗಿ ರಂಗಭೂಮಿ ಹಿನ್ನೆಲೆಯ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿರುವುದು ವಿಶೇಷವಾಗಿದೆ. ಎಂದರು.

ಕಾಮಿಡಿ ಕಿಲಾಡಿಗಳು ಖ್ಯಾತಿಯ ದಾಸಪ್ಪ ವಿಶೇಷ ಪಾತ್ರವನ್ನು ನಿರ್ವಹಿಸಿರುವುದಲ್ಲದೆ ಚಿತ್ರದ ನಿರ್ಮಾಣಕ್ಕೆ ಬಹಳವೇ ಸಹಾಯ ಮಾಡಿದ್ದಾರೆ ಎಂಬ ಮಾಹಿತಿಗಳು ಬಂದವು.

ಅರ್ಚನಾ ಕೊಟ್ಟಿಗೆ ಮಹಿಳಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರಂಗಭೂಮಿ ಕಲಾವಿದೆ ಲಕ್ಷ್ಮಿ ಕಬೇರಳ್ಳಿ, ಭವಾನಿ ಪ್ರಕಾಶ್, ಯಶ್ ಶೆಟ್ಟಿ, ರಮೇಶ್ ಕಲ್ನವರ್ ನಟಿಸಿದ್ದಾರೆ. ಮಾನಸ ಹೊಳ್ಳ ಚಿತ್ರದ
ಸಂಗೀತ ನಿರ್ದೇಶಕಿ. ಮೊದಲು ಈ ಜಾನರ್ ಒಳಗೆ ಹೋಗುವವರೆಗೂ ಕಷ್ಟವಿತ್ತು ನಂತರ ಎಲ್ಲವೂ ಸುಲಭವಾಯಿತು ಎಂದರು.
ಶ್ರೀಧರ್ ಬಿದರಳ್ಳಿ ನಿರ್ಮಾಪಕ
ನೇಕಾರ ಕುಟುಂಬ ಅದಕ್ಕಾಗಿ ಸಿನಿಮಾ ಮಾಡಿರುವೆ ಎಂದರು

ಚಿತ್ರದ ಮುಖ್ಯ ಆಕರ್ಷಣೆ ರವಿಶಂಕರ್. ಇದು ಕಡಕ್ ಆಗಿರುವ ಪಾತ್ರವೇ.. ನಾನು ಹೊಸಬರ ಜೊತೆ ಹೆಚ್ಚು ಸಿನಿಮಾ ಮಾಡಿದವನು. ಈ ಚಿತ್ರದಲ್ಲಿ ರೆಗ್ಯುಲರ್ ಕಮರ್ಷಾಲಿಟಿ ಕಡಿಮೆ. ಆದರೆ ರಿಯಾಲಿಟಿ ಹೆಚ್ಚಿದೆ ಎಂದರು ರವಿಶಂಕರ್.

Social Share :

ಅಫ್ಜಜಲ್ ನಿರ್ದೇಶನದ ಮುದ್ದಾದ ಲವ್ ಸ್ಟೋರಿ ಸುಕನ್ಯಾ ದ್ವೀಪ

Social Share :

ಪತ್ರಕರ್ತ ಅಫ್ಜಲ್ ಈಗಾಗಲೇ ಚಿತ್ರರಂಗದಲ್ಲಿಯೂ ಗಟ್ಟಿಯಾಗಿ ಗುರುತಿಸಿಕೊಂಡವರು. ನಿರ್ದೇಶನ ಮಾಡುವ ಹಂಬಲದಲ್ಲಿ ಹುಡುಕಾಟ ನಡೆಸಿದವರು. ಇದೀಗ ಅವರ ಎರಡನೇ ಚಿತ್ರ ಒಂದು ಹಂತದ ಚಿತ್ರೀಕರಣವನ್ನೂ ಮುಗಿಸಿದೆ.

ಆ ಚಿತ್ರದ ಹೆಸರು ‘ಸುಕನ್ಯಾ ದ್ವೀಪ’. ಹೆಸರಿನಂತೆ ಇದು ಇದು ದ್ವೀಪದ ಕಥೆಯಲ್ಲ; ಮುದ್ದಾದ ಲವ್ ಸ್ಟೋರಿ ಒಂದು ಜಾಗದಲ್ಲಿ ನಡೆಯುತ್ತದೆ. ಪ್ರೇಮ ಮತ್ತು ಅದರ ಕವಲುಗಳು ಪ್ರೇಕ್ಷಕನಿಗೆ ರಂಜನೆ ನೀಡಬೇಕು ಆ ರೀತಿಯಲ್ಲಿ ಚಿತ್ರಕಥೆ ಮಾಡಿಕೊಳ್ಳಲಾಗಿದೆ ಎಂಬ ವಿವರ ಬಂತು ನಿರ್ದೇಶಕರಿಂದ.

ಜೊತೆಗೆ ಇಲ್ಲಿ ಕುಟುಂಬದ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಕ್ಕ ತಂಗಿಯರ ನಡುವೆ ಕಥೆ ಇರುತ್ತದೆ. ಸುಮಾರು ಚಿತ್ರಗಳಲ್ಲಿ ಅಭಿನಯ ಮಾಡಿರುವ ನನಗೆ ರಾಜಪ್ರಭು ಅವರಿಂದ ಎರಡನೇ ಚಿತ್ರವನ್ನು ನಿರ್ದೇಶನದ ಮಾಡುವ ಅವಕಾಶವೂ ದೊರೆಯಿತು ಎಂದು ಹೇಳಿಕೊಂಡರು ಎಂ.ಡಿ.ಅಫ್ಜಲ್.

ರಾಜ್ ಪ್ರಭು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಬೆಂಗಳೂರು ಸುತ್ತ ಮುತ್ತ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಮುಂದೆ ಹಾಸನ, ಬೇಲೂರು ಹಾಗೂ ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಈ ಚಿತ್ರಕ್ಕೆ ನಿರ್ದೇಶಕ ಗೆಳೆಯ ಆಲ್ವಿನ್ ಉತ್ತಮ ಸಂಭಾಷಣೆ ಬರೆದಿದ್ದು, ಅವು ಖಂಡಿತಾ ಪ್ರೇಕ್ಷಕರಿಗೆ ಕಚಗುಳಿ ಇಡಬಲ್ಲವು ಎಂಬ ಮಾಹಿತಿಯನ್ನು ನೀಡುತ್ತಾ ಹೋದರು ನಿರ್ದೇಶಕರು.

ಚಿತ್ರದ ಮೇಕಿಂಗೂ ವಿಡಿಯೋ ಪ್ರದರ್ಶನದ ಸಂದರ್ಭದಲ್ಲಿ ಚಿತ್ರತಂಡ ಅತ್ಯಂತ ಲವಲವಿಕೆಯಿಂದ ಪಾಲ್ಗೊಂಡಿತ್ತು. ಈ ಚಿತ್ರದ ಕಥೆಗೆ ಸ್ಫೂರ್ತಿಯಾದವರು ಹೆಸರಾಂತ ಹಾಸ್ಯ ನಟ ದಿವಂಗತ ವಿವೇಕ್. ಅವರಿಂದ ಪಡೆದ ಸ್ಫೂರ್ತಿಯಲ್ಲೇ ಕಥೆ ಮಾಡಿಕೊಂಡಿರುವುದಾಗಿ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ರಾಜ್ ಪ್ರಭು ವಿವರ ಕೊಟ್ಟರು.

ಈ ಚಿತ್ರದ ಎರಡು ಲೈನ್ ಕಥೆ ಕೇಳಿಯೇ ನಾನು ನಿರ್ಮಾಣ ಮಾಡುವ ಆಶಯಗಳನ್ನು ಮೂಡಿಸಿ ಕೊಡೆ ಎಂದವರು ನಿರ್ಮಾಪಕ ವೀರಬಾಹು. ಉತ್ತಮ ತಂಡ ಸಿಕ್ಕಿದೆ. ಮುಖ್ಯವಾಗಿ ಇದು ಮಚ್ಚು ಲಾಂಗ್ ಇಲ್ಲದ ಪ್ರಶಾಂತವಾದ ಕಥೆ. ಅದೇ ನನಗೆ ಇಷ್ಟವಾಯಿತು ಎಂದರು.

ಕೌಶಿಕ್ ಹರ್ಷ ಸಂಗೀತ ನಿರ್ದೇಶಕ. ಚಿತ್ರದಲ್ಲಿ ಐದು ಹಾಡುಗಳಿವೆ ಎಂಬ ಮಾಹಿತಿಬಂತು. ಸಚ್ಚಿನ್ ಪುರೋಹಿತ್, ರವಿ ಮುಖ್ಯ ಪಾತ್ರದಲ್ಲಿದ್ದಾರೆ. ಶ್ರೇಯ ವಸಂತ್, ಅಕ್ಷಿತಾ ನಾಗರಾಜ್ ಹಾಗೂ ಚುಂಬಿತ ಎಂಬ ಮೂವರು ನಟಿಯರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಂದ ಹಾಗೆ ವಿಘ್ನೇಶ್ ನಾಗೇಂದ್ರ ಚಿತ್ರದ ಛಾಯಾಗ್ರಾಹಕ. ಹಿರಿಯನಟ ಎಂ.ಡಿ.ಕೌಶಿಕ ಕುಟುಂಬದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಗಳೂ ಬಂದವು.

Social Share :

ಡಾ.ಹಂಸಲೇಖ ಈ ವರ್ಷದ ಅತ್ಯುತ್ತಮ ಸಂವಹನಕಾರ

Social Share :

ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ತಮ್ಮ ನಾದ ಲೋಕದ ಸಮ್ಮೋಹನದಿಂದ ಆಳಿದ ಹಾಗೆಯೇ ಚಿತ್ರರಂಗಕ್ಕೆ ‘ಚಂದನವನ’
(ಸ್ಯಾಂಡಲ್ ವುಡ್) ಎಂದು ಚೆಂದದ ಹೆಸರಿನಿಂದ ಕರೆದು ಪ್ರಸಿದ್ಧಿಗೊಳಿಸಿದ
ಇಂದಿನ ರಿಯಾಲಿಟಿ ಶೋಗಳ ಅನಿವಾರ್ಯ ಡಾರ್ಲಿಂಗ್ ಆಗಿರುವ ಡಾ.ಹಂಸಲೇಖ ಅವರು ಯಾರಿಗೆ
ಗೊತ್ತಿಲ್ಲ…??

ಹೌದು ಕನ್ನಡದ ಜನಮಾನಸದಲ್ಲಿ ಅವರೆಂದೂ ಮಿನುಗುವ ನಕ್ಷತ್ರವೇ..
ಅವರ ಹಾಡುಗಳು ಪ್ರತಿಕ್ಷಣ ಹೃದಯ ಮೀಟುವ ರಾಗ ಸಂಗಮವೂ ಹೌದು.. ಪ್ರತಿ ವಾರ ಮನೆಯ ಮನಗಳಲ್ಲಿ ಅವರು ಮಿನುಗುವುದೂ ನಿಜ. ಆದರೆ ಒಂದು ವಿಷಯದಲ್ಲಿ ಅವರು ಕೊಂಚ ತಟಸ್ಥ ಮತ್ತು ನಿರ್ಲಿಪ್ತ. ಅದೆಂದರೆ ಅವರನ್ನು ಹುಡುಕಿಕೊಂಡು ಬರುವ ಪ್ರಶಸ್ತಿಗಳು..

ಕನ್ನಡ ನಾಡಿನಲ್ಲಿ ನಾದಬ್ರಹ್ಮ ಎಂದೇ ಖ್ಯಾತರಾಗಿರುವ ಡಾ.ಹಂಸಲೇಖ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.. ಸದ್ಯ ಅವರಿಗೆ ನೆರೆಯ ಗೋವಾ ಹುಡುಕಿ ಸನ್ಮಾನಿಸಿದೆ. ಪ್ರಶಸ್ತಿ ಕೊಟ್ಟು ಗೌರವಿಸಿದೆ.

ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್‌ ಆಫ್‌ ಇಂಡಿಯಾ)ಯು ಸಂಗೀತದಲ್ಲಿ ‘ವರ್ಷದ ಅತ್ಯುತ್ತಮ ಸಂವಹನಕಾರ’ (ಕಮ್ಯುನಿಕೇಟರ್ ಆಪ್ ದ ಇಯರ್- ಮ್ಯೂಜಿಕ್) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈಚೆಗೆ ನಡೆದ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಡಾ.ಹಂಸಲೇಖ ಅವರಿಗೆ ನೀಡಿ ಸನ್ಮಾನಿಸಿದ್ದಾರೆ.

Social Share :

ಸೆವೆನ್ ರಾಜ್ ಪ್ರೇಕ್ಷಕರ ಪಾಲಿನ ಬಂಗಾರದ ಮನುಷ್ಯ

Social Share :

ಯಾರಿಗಾದರೂ ಅಚ್ಚರಿಯಾಗಬಹುದು ಕನ್ನಡ ಚಿತ್ರರಂಗ ಸ್ಯಾಂಡಲ್ ವುಡ್ ನಲ್ಲಿ ಒಬ್ಬ ನಿರ್ಮಾಪಕರು ತಮ್ಮ ಚಿತ್ರ ನೋಡಿದ ಪ್ರೇಕ್ಷರಿಗೆ ಅದೃಷ್ಟದ ಆಧಾರದಲ್ಲಿ ಚಿನ್ನದ ನಾಣ್ಯವನ್ನು ನೀಡುತ್ತಿದ್ದಾರೆ. ಹೌದು ಹಾಗೆ ಬಂಗಾರದ ನಾಣ್ಯ ನೀಡುತ್ತಾ ಪ್ರೇಕ್ಷಕರ ಪಾಲಿನ ಬಂಗಾರದ ಮನುಷ್ಯನಾಗಿ ಕಂಗೊಳಿಸುತ್ತಿರುವವರ ಹೆಸರು ಸೆವೆನ್ ರಾಜ್. ಏಳರ ಅಂಕಿ ಮತ್ತು ತಮ್ಮ ರೆಡ್ ಅಂಡ್ ವೈಟ್ ವಸ್ತ್ರ ವಿನ್ಯಾಸವನ್ನು ಜಗಜಾಹಿರುಗೊಳಿಸುತ್ತಾ ಪ್ರಸಿದ್ಧಿಯ ಮುನ್ನೆಲೆಗೆ ಬಂದಿರುವ ಸೆವೆನ್ ರಾಜ್ ಅಪರೂಪದ ನಿರ್ಮಾಪಕ ಎಂಬುದಕ್ಕೆ ನಿದರ್ಶಗಳು ಬೇಕಾದಷ್ಟಿವೆ.

ನಿರ್ಮಾಪಕ ಅನ್ನದಾತ..! ಇದು ಕನ್ನಡದ ವರನಟ, ಅಭಿಮಾನಿ ದೇವರುಗಳ ದೇವರು ಡಾ.ರಾಜ್ ಕುಮಾರ್ ಅವರ ಅಮೃತ ವಾಕ್ಯ. ಅದನ್ನು ಅಕ್ಷರಶಃ ಸಾಧ್ಯಗೊಳಿಸುತ್ತಾ ನಡೆದಿರುವ ಸೆವೆನ್ ರಾಜ್ ಒಬ್ಬ ನಿರ್ಮಾಪಕ ಹೀಗೂ ಇರಲು ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ.

ಏಕೆಂದರೆ ಚಿತ್ರಮಂದಿರಗಳಲ್ಲಿ ಕೇವಲ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ. ಕೊರೊನಾ ಮಹಾಮಾರಿಯ ಹೊಡೆತದಿಂದ ದಿಕ್ಕು ತಪ್ಪಿರುವ ಮನರಂಜನಾ ಕ್ಷೇತ್ರ. ಮುಖ್ಯವಾಗಿ ಪ್ರೇಕ್ಷಕ ಪ್ರಭುವಿನ
ಅಸಹಾಕಾರ.. ಇದೆಲ್ಲದರ ನಡುವೆ ಬಿಡುಗಡೆ ಕಂಡ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರ ಗಮನ ಸೆಳೆದಿದೆ; ಮತ್ತದರ ನಿರ್ಮಾಪಕ ಸೆವೆನ್ ರಾಜ್ ಕೂಡ ಪ್ರೇಕ್ಷಕರಿಗೆ ಗೋಲ್ಡ್ ಕಾಯಿನ್ ನೀಡುವ ಅಪರೂಪದ ಹಾಗೂ ಜನಮನ ಸೆಳೆಯುವ ಬಹುಮಾನ ನೀಡುತ್ತಿದ್ದಾರೆ.

ಆಸ್ಕರ್ ಕೃಷ್ಣ ನಿರ್ದೇಶನದ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರವು ಹಾಸ್ಯ ಪ್ರಧಾನ ಚಿತ್ರವೆಂಬ ಕಾರಣಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಯುವನಟ ಲೋಕೇಂದ್ರ ಸೂರ್ಯ ಅವರ ವಿಶಿಷ್ಟ ಮ್ಯಾನರಿಜಂನ ನಟನೆ ಚಿತ್ರದ ಮುಖ್ಯಾಂಶ. ಕ್ಲೈಮ್ಯಾಕ್ಸ್ ನಲ್ಲಿ ಎಂಥವರ ಕಣ್ಣು ಒದ್ದೆಯಾಗುವ ಮಟ್ಟಿನ ನಟನೆಯಲ್ಲಿ ಅವರು ಗಮನ ಸೆಳೆಯುತ್ತಾರೆ.

ಇನ್ನು ನಿರ್ಮಾಪಕ ಸೆವೆನ್ ರಾಜ್ ಅವರದು ವಿಲನ್ ಆಗಿ ಗಮನಾರ್ಹ ಪಾತ್ರ. ಚಿತ್ರ ಎಷ್ಟೇ ಗಮನ ಸೆಳೆಯುವಂತಿದ್ದರೂ ಪ್ರೇಕ್ಷಕ ಈಗ ಚಿತ್ರ ಮಂದಿರಕ್ಕೆ ಎಡತಾಕುವುದಿಲ್ಲ..
ಅದಕ್ಕೆ ನೂರೆಂಟು ಕಾರಣಗಳು. ಇಂತಹ ಬರಗಾರದಲ್ಲಿ ಏನು ಮಾಡಬೇಕು ಎಂಬುದಕ್ಕೆ ಸೆವೆನ್ ರಾಜ್ ಕಂಡುಕೊಂಡ ಮಾರ್ಗ ಪ್ರೇಕ್ಷಕರಿಗೆ ಗೋಲ್ಡ್ ಕಾಯಿನ್ ನೀಡುವುದು. ಇದು ಅಷ್ಟು ಸುಲಭದ ಕೆಲಸವಲ್ಲ; ಆದರೂ ಮನಸ್ಸು ಮಾಡಿದ್ದಾರೆ.

ಈಗ ರಾಜಧಾನಿ ಬೆಂಗಳೂರಿನ ಮುಖ್ಯ ಚಿತ್ರಮಂದಿರದ ಕಲ್ಪನೆ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದತ್ತ ಬಂದು ನಿಂತಿದೆ. ಈ ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರ ಪೈಕಿ ಅದೃಷ್ಟಶಾಲಿ ಒಬ್ಬರಿಗೆ ಅರ್ಧ ಬಂಗಾರದ ನಾಣ್ಯ ದೊರೆಯುತ್ತದೆ. ಅಲ್ಲಿ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರವು ಬೆಳಗಿನ ಎರಡು ಪ್ರದರ್ಶನ ಕಾಣುತ್ತದೆ. ಆ ಎರಡು ಪ್ರದರ್ಶನದಲ್ಲಿಯೂ ತಲಾ ಅರ್ಧ ಗೋಲ್ಡ್ ಕಾಯಿನ್ ಟಿಕೆಟ್ ನ ಲಕ್ಕಿ ಡೀಪ್ ಮೂಲಕ ಪ್ರೇಕ್ಷಕನಿಗೆ ಸಿಗುತ್ತದೆ.

ಕಳೆದ ಮಂಗಳವಾರ ನಿರ್ಮಾಪಕ ಸೆವೆನ್ ರಾಜ್ ಸೇರಿದಂತೆ ಇಡೀ ಚಿತ್ರತಂಡ ಚಿತ್ರಮಂದಿರದಲ್ಲಿ ಹಾಜರಿದ್ದು ವಿಜೇತರಿಗೆ ಗೋಲ್ಡ್ ಕಾಯಿನ್ ನೀಡಿತು. ಎರಡು ಪ್ರದರ್ಶನ ಒಂದು ಗೋಲ್ಡ್ ಕಾಯಿನ್. ಪ್ರತಿ ಪ್ರದರ್ಶನದಲ್ಲಿ ಅದೃಷ್ಟಶಾಲಿಗೆ ಅರ್ಧ ಬಂಗಾರದ ನಾಣ್ಯ ಸಿಗುತ್ತದೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗೋಲ್ಡ್ ಕಾಯಿನ್ ವಿಷಯ ಪ್ರಕಟಿಸಿ ಮಂಗಳವಾರ ಅದನ್ನು ಜಾರಿಗೊಳಿಸಿದ ಸೆವೆನ್ ರಾಜ್ ವೃತ್ತಿ ಬದ್ಧತೆ ಇರುವ ನಿರ್ಮಾಪಕ ಎಂಬುದನ್ನು ಸಾಬೀತು ಮಾಡಿಕೊಂಡರು. ಆ ಮೂಲಕ ಪ್ರೇಕ್ಷಕರ ಪಾಲಿಗೀಗ ಬಂಗಾರದ ಮನುಷ್ಯ ಆದರು.

ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯ ಸಾಲಿನಲ್ಲಿವೆ. ಸರ್ಕಾರ ಇನ್ನೇನು ಶೇಕಡಾ ನೂರರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶವನ್ನೂ ನೀಡಬಹುದು. ಆದರೆ ಒಂದು ಸಾಧಾರಣ ಚಿತ್ರವಾಗಿ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರದ ತಂಡ ಮಾಡುತ್ತಿರುವ ಪ್ರಯತ್ನ ಅನನ್ಯ.

Social Share :

ಪ್ರಭುದೇವ ಜೊತೆ ಡ್ಯಾನ್ಸ್ ನನ್ನ ಪಾಲಿನ ಅದ್ಭುತ ಕ್ಷಣಗಳು..

Social Share :

ಪುನೀತ್ ರಾಜ್‍ಕುಮಾರ್

‘ಭಾರತೀಯ ಚಿತ್ರರಂಗದ ದಂತಕಥೆಯಾಗಿರುವ ಪ್ರಭುದೇವ ಅವರ ಜೊತೆ ಹೆಜ್ಜೆ ಹಾಕಲು ಸಿಕ್ಕ ಸಮಯ ನನ್ನ ಪಾಲಿಗೆ ಅದ್ಭುತ ಕ್ಷಣಗಳು..’

ಹೀಗೆ ಪ್ರತಿಕ್ರಿಯೆ ನೀಡಿ ನಕ್ಕರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅವರು ಡ್ಯಾನ್ಸ್ ಅದ್ಭುತ..! ಇಂಡಿಯನ್ ಮೈಕಲ್ ಜಾಕ್ಸನ್, ಎಲುಬಿಲ್ಲದ ಅದ್ಭುತ ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಅಂತಹ ಲೆಜೆಂಡರಿ ಡ್ಯಾನ್ಸರ್ ಜೊತೆ ಹೆಜ್ಜೆ ಹಾಕಿದ್ದು ನನ್ನ ಪುಣ್ಯ ಎಂದು ನಕ್ಕರು ಪವರ್ ಸ್ಟಾರ್.

ನೀವು ಕೂಡ ಅದ್ಭುತ ಡ್ಯಾನ್ಸರ್ ಅಲ್ಲವೇ.. ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಪುನೀತ್ ರಾಜ್ ಕುಮಾರ್, ಇರಬಹುದು; ಆದರೆ ಅವರು ಜಗಮೆಚ್ಚಿದವರು ಅಲ್ಲವೇ.. ಅಂತಹವರ ಜೊತೆ ಹೆಜ್ಜೆ ಹಾಕುವುದೇ ಪೂರ್ವ ಜನ್ಮದ ಪುಣ್ಯ ಎಂದು ತಮ್ಮ ಸರಳತೆ ಮತ್ತು ವಿನಮ್ರತೆಯನ್ನು ಎತ್ತಿ ಹಿಡಿದರು.

ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಾಡಿನ ಒಂದು ಭಾಗಕ್ಕೆ ನನ್ನನ್ನು ಕರೆದರು. ಪ್ರಭುದೇವ ಅವರ ಜೊತೆ ನೃತ್ಯ ಮಾಡುತ್ತೇನೆ ಎಂದಾಗ ಥ್ರಿಲ್ ಆದೆ. ಆ ಕ್ಷಣಗಳು ನಿಜಕ್ಕೂ ಮರೆಯಾಗದ ಸಮಯವಾಗಿ ನನ್ನೊಳಗೆ ದಾಖಲಾಗಿದೆ ಎಂದರು ಪವರ್ ಸ್ಟಾರ್.

ಅಂದ ಹಾಗೆ ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿರುವ ಲಕ್ಕಿಮ್ಯಾನ್ ಚಿತ್ರದಲ್ಲಿ ಈ ಇಬ್ಬರು ಪ್ರಸಿದ್ಧ ನೃತ್ಯಪಟುಗಳು ಹೆಜ್ಜೆ ಹಾಕಿದ್ದು ಅಭಿಮಾನಿಗಳ ಪಾಲಿಗೆ ಸಂಭ್ರಮದ ಕ್ಷಣವಾಗಿ ದಾಖಲಾಗಿದೆ.

🖋ಸ್ನೇಹಪ್ರಿಯ ನಾಗರಾಜ್

Social Share :

ಈ ವಾರ ಬರುತ್ತಿದ್ದಾರೆ ಜಿಗ್ರಿ ದೋಸ್ತ್

Social Share :

ನಟ ಎಸ್.ಮೋಹನ್ ಆಗಾಗ ನಿರ್ದೇಶನದ ಸಾಹಸಕ್ಕಿಳಿಯುತ್ತಾರೆ. ಕೆಲವೊಮ್ಮೆ ಬಿಡುವಿರದ ಕೆಲಸದ ನಡುವೆಯೇ ಸಾಹಸ ಮಾಡುವುದುಂಡು. ಏಕೆಂದರೆ ಸಿನಿಮಾ ನಿರ್ದೇಶನ ಅವರ ಫ್ಯಾಷನ್.

ಈ ಬಾರಿ ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದಿರುವ ಸ್ಕಂದ ಅಶೋಕ್ ಹಾಗೂ ಮತ್ತೊಬ್ಬ ನಟ ಚೇತನ್ ಜೊತೆಗೂಡಿಸಿ ‘ಜಿಗ್ರಿ ದೋಸ್ತ್’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದು, ಅದೀಗ ಇದೇ 17ರಂದು ಬಿಡುಗಡೆ ಕಾಣುತ್ತಿದೆ.

ಸದ್ದಿಲ್ಲದೆ ಮಾಡಿ ಮುಗಿಸಿರುವ ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ ಹಾಗೂ ಹಾಡುಗಳು ಗಮನ ಸೆಳೆಯುತ್ತವೆ ಎಂಬುದನ್ನು ತಿಳಿಸಲು ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ.

ಈ ಕಾಲದಲ್ಲಿ ಚಿತ್ರ ಬಿಡುಗಡೆ ಮಾಡಿದರೆ ನಿರ್ಮಾಪಕ ಎಷ್ಟು ಸೇಫ್ ಎಂಬುದು ಪ್ರಶ್ನೆಯಾಗಿ ಇಲ್ಲಿ ಕಾಡಿತು ಮತ್ತು ಮೋಹನ್ ಅದಕ್ಕೆ ಸಮರ್ಪಕ ಉತ್ತರ ನೀಡಿದರು ಕೂಡ.

ಒಬ್ಬ ಪೊಲೀಸ್ ಒಬ್ಬ ಲಾಯರ್ ಇಬ್ಬರ ಗೆಳೆತನದ ಜೊತೆಗೆ ಲವ್ ಮತ್ತು ಸಂಘರ್ಷ ಇರುವ ಚಿತ್ರವೇ ಜಿಗ್ರಿ ದೋಸ್ತ್. ಇದರಲ್ಲಿ ಸ್ನೇಹದ ಮಹತ್ವ ಇರುತ್ತದೆ ಎಂಬುದನ್ನು ಸಾರುತ್ತದೆ ಎಂದು ಹೇಳಲೇ ಬೇಕಾಗಿಲ್ಲ ಎಂದರು.

ಸಂಗೀತ ನಿರ್ದೇಶಕ ದಿನೇಶ್ ಕುಮಾರ್, ಮುಖ್ಯ ಪಾತ್ರದಲ್ಲಿ ನಟಿಸಿರುವ ಚೇತನ್, ನಾಯಕ ನಟಿಯರಾದ ಅಕ್ಷತಾ, ಸುಷ್ಮಾ ಹಾಗೂ ಸಹ ನಿರ್ಮಾಪಕರಾಗಿರುವ ಮಂಜುನಾಥ್, ನಟ ಇರ್ಫಾನ್ ಈ ಸಂದರ್ಭದಲ್ಲಿದ್ದರು.
ಅಂದ ಹಾಗೆ ಬಿ.ಎನ್. ಗಂಗಾಧರ್ ಈ ಚಿತ್ರದ ನಿರ್ಮಾಪಕ. ಯಾವುದಾದರೂ ಸರಿ ಓಪನ್ ಇರುವ ಚಿತ್ರಮಂದಿರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು.

Social Share :

ಸೆವೆನ್ ರಾಜ್ ಕನಸು ಆಸ್ಕರ್ ನನಸು ಇದೇ ವಾರ ಪ್ರೇಕ್ಷಕರ ಕೂಸು

Social Share :

ಇದೇ ವಾರ ಅಂದರೆ ಸೆಪ್ಟೆಂಬರ್ 17ರಂದು ‘ಚಡ್ಡಿ ದೋಸ್ತ್ ಕಡ್ಡಿ ಅಲಾಡುಸ್ಬುಟ್ಟ: ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಪ್ರೇಕ್ಷಕರನ್ನು ನಕ್ಕು ನಗಿಸುವ ಪರಂಪರೆಗೆ ಇದು ಹೊಸ ಸೇರ್ಪಡೆ ಎಂಬುದು ನಿಜವಾದರೂ ಸಿನಿಮಾ ಬದುಕು ಮತ್ತು ಫ್ಯಾಷನ್ ಎಂದು ಹಂಬಲಿಸುವ ಜೋಡಿಯ ಪ್ರಯತ್ನ ಇದಾಗಿದೆ ಎಂದು ಖಂಡಿತಾ ಹೇಳಬಹುದು..

ಹೇಗೆಂದರೆ ಅದು ಈ ಚಿತ್ರದ ನಿರ್ಮಾಪಕ ಸೆವೆನ್ ರಾಜ್..!
ವಿರಳ ವ್ಯಕ್ತಿತ್ವದ ತನ್ನ ಸಂತೋಷದ ನೆಲೆಯಲ್ಲಿ ತಾನು ಬದುಕುವ ಆಶಯಗಳನ್ನು ಹೊಂದಿರುವ ಅಪರೂಪದ ನಿರ್ಮಾಪಕ ಸವೆನ್ ರಾಜ್ ಈಗ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಸರಿ ಸುಮಾರು 90ರ ದಶಕದಲ್ಲಿ ಬದುಕಿನ ಜೊತೆಗೆ ಸಿನಿಮಾ ಉಸಿರಾಗಿರಲಿ ಎಂದು ಕನಸು ಕಂಡವರು ಸೆವೆನ್ ರಾಜ್ ಯಾರಿಗೂ ಕೇರ್ ಮಾಡದೆ ರೆಡ್ ಅಂಡ್ ವೈಟ್ ನ್ನು ಜೀವನದ ಜೊತೆ ಅಂಟಿಸಿಕೊಂಡವರು. ಅದನ್ನು ಮೀರಿದ್ದು ಅವರ ಜೊತೆಗಿರುವ ಸಂಖ್ಯೆ. ಅದು ಏಳು ಮತ್ತು ಅದೃಷ್ಟ. ಹಾಗಾಗಿ ಅದನ್ನು ಗಟ್ಟಿಯಾಗಿ ನಂಬಿದ್ದಾರೆ. ಹಾಗೆಯೇ ಏಳು ಅಂಕಿ ಕೊನೆಗೆ ಬರುವ ದಿನಾಂಕ 17ರಂದೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಇನ್ನು ಅಚ್ಚರಿಯ ಸಂಗತಿ ಏನೆಂದರೆ ಸೆವೆನ್ ರಾಜ್ ಅವರ ದುಬಾರಿ ಕಾರು ಕೂಡ ರೆಡ್ ಅಂಡ್ ವೈಟ್. ಮತ್ತು ಏಳರ ಮಹತ್ವ ಸಾರುವ ನಂಬರ್ ಪ್ಲೇಟ್ ಹೊಂದಿದೆ ಎಂಬುದು ವಿರಳ ಸಂಗತಿಯೂ ಆಗುತ್ತದೆ.

ಜೀವನದಲ್ಲಿ ಇನ್ನು ಹೆಚ್ಚು ಸಾಧಿಸುವ ಛಲ ಹೊಂದಿರುವ ಸೆವೆನ್ ರಾಜ್ ಭಾರತೀಯ ಚಿತ್ರರಂಗ ತಿರುಗಿ ನೋಡುವ ಚಿತ್ರ ಮಾಡುವ ಸಿದ್ದತೆಯಲ್ಲಿ ತೊಡಗಿದ್ದಾರೆ.

ಇನ್ನು ಆಸ್ಕರ್ ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅಸ್ತಿತ್ವ ಸಾಧಿಸಿ ಆಸ್ಕರ್ ಕೃಷ್ಣ ಎಂದೇ ಹೆಸರಾಗಿರುವ ಆಸ್ಕರ್ ಕೃಷ್ಣ ಸಿನಿಮಾದ ಆಚೆಗೂ ಯೋಚಿಸಬಲ್ಲ ಪ್ರತಿಭಾವಂತ. ಒಂದೇ ಜಾನರ್ ಗೆ ಅಂಟಿಕೊಳ್ಳದೆ ಎಲ್ಲಾ ಬಗೆಯ ಚಿತ್ರಗಳನ್ನು ಮಾಡಬಲ್ಲೆ ಎಂದು ಈ ಚಿತ್ರದ ಮೂಲಕ ಸಾಧಿಸಲು ಹೊರಟಿದ್ದಾರೆ. ಹಾಗಾಗಿ ಹಾಸ್ಯದ ಹೊನಲು ಹರಿಸುವ ಸಾಹಸವೇ ಈ ಚಿತ್ರ.

ಜೊತೆಗೆ ನಟ, ಬರಹಗಾರ ಲೋಕೇಂದ್ರ ಸೂರ್ಯ ಹಾಗೂ ಇತರ ಪ್ರತಿಭಾವಂತರು ಅವರ ಜೊತೆ ಸೇರಿಕೊಂಡಿದ್ದಾರೆ.

Social Share :

ಕಲರ್ ಆಫ್ ಟ್ಯೂಮ್ಯಾಟೋ ಹಿಂಸೆಯ ಹೊಸ ವ್ಯಾಖ್ಯಾನ

Social Share :

ಕನ್ನಡದಲ್ಲಿ ಹೊಸ ಯುಗ ಆರಂಭವಾಗಿದೆ. ತಮಿಳು ಚಿತ್ರರಂಗದಲ್ಲಿ ಆಗಿರುವ ಬದಲಾವಣೆ ಪರ್ವ ಇಲ್ಲಿ ಪ್ರಯೋಗ ಮಾಡಲು ಅನೇಕ ಪ್ರತಿಭಾವಂತ ಯುವಕರು ಪ್ರಯತ್ನ ನಡೆಸಿದ್ದಾರೆ. ಅವರಲ್ಲಿ ತಾಯ್ ಲೋಕೇಶ್ ನಡೆಸಿರುವ ನವ ನವೀನ ಪ್ರಯತ್ನಕ್ಕೆ ಸಿನಿಮಾ ಜಗತ್ತು ತಿರುಗಿ ನೋಡಿದೆ. ಏಕೆಂದರೆ ಇದು ಹಿಂಸೆಯ ಹೊಸ ವ್ಯಾಖ್ಯಾನ ಎಂದು ಕರೆದುಕೊಳ್ಳುತ್ತಿದೆ. ಅಂದ ಹಾಗೆ ಚಿತ್ರದ ಹೆಸರು ‘ಕಲರ್ ಆಫ್ ಟ್ಯೋಮ್ಯಾಟೋ’. ಇದೂ ರಕ್ತವನ್ನೇ ಸಾಂಕೇತಿಸುತ್ತದೆ. ಈಚೆಗೆ ಬಿಡುಗಡೆಗೊಂಡ ಚಿತ್ರದ ಟೀಸರ್ ನಲ್ಲಿ ರಕ್ತದ ಚಹರೆ ಮತ್ತು ಉಪಸ್ಥಿತಿ ಕ್ಲಾಸಿಕ್ ಅನುಭವಗಳನ್ನೇ ನೀಡಿತು.

ಹಿರಿಯ ಬರಹಗಾರ ಕೋಟಗಾನಹಳ್ಳಿ ರಾಮಯ್ಯ ಅವರ ಕಥೆಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರದಲ್ಲಿ ‘ಬೆಂಕಿ ಪೊಟ್ಟಣ’ ಖ್ಯಾತಿಯ ಪ್ರತಾಪ್ ನಾರಾಯಣ್ ನಾಯಕ ನಟ. ಮೂರು ಬೇರೆ ಬೇರೆ ಕಥೆಗಳು ಇಲ್ಲಿ ಬೆಸೆದುಕೊಂಡಿವೆ. ಹಾಗಾಗಿ ತಕ್ಷಣಕ್ಕೆ ಕಥೆಯ ಆಯಾಮಗಳನ್ನು ಹುಡುಕುವುದು ಕಷ್ಟವಾಗುತ್ತದೆ ಎಂದರು ನಿರ್ದೇಶಕ ತಾಯ್ ಲೋಕೇಶ್. ನೆರೆಯ ತಮಿಳಿನಲ್ಲಿ ಪಾ ರಂಜಿತ್, ವೆಟ್ರಿ ಮಾರನ್, ಸುಗುಮಾರನ್ ಥರದವರು ಕಂಟೆಂಟ್ ಸಿನಿಮಾ ಯಶಸ್ವಿಗೊಳಿಸಿದಂತೆಯೇ. ಈ ಮಣ್ಣಿನ ಸೊಗಡನ್ನು ಅಭಿವ್ಯಕ್ತಿಸುವುದು ನಮ್ಮ ಆಶಯ ಎಂದರು ತಾಯ್ ಲೋಕೇಶ್.

ಈ ಚಿತ್ರ ಒಂದು ಕಮರ್ಷಿಯಲ್ ಥಾಟ್ ಅಷ್ಟೇ.. ಅದಕ್ಕೆ ಬೇರೆ ಅರ್ಥ ಕಲ್ಪಿಸಲು ಸಾಧ್ಯವಾಗದು ಎಂದರು. ಕೋಲಾರ ಭಾಗದ ರೈತನ ಸಂಕಷ್ಟವನ್ನು ಈ ಕಥೆಯು ಹೇಳುತ್ತದೆ ಎಂದರು ಕಥೆಗಾರ ಕೋಟಗಾನಹಳ್ಳಿ ರಾಮಯ್ಯ. ಇಲ್ಲಿ ಹಿಂಸೆಯ ಹೊಸ ವ್ಯಾಖ್ಯಾನ ಆರಂಭವಾಗಿದೆ. ಕಲಾತ್ಮಕ ಬೇಡ ಆ ರೀತಿಯ ಚಿತ್ರ ಮಾಡೋಣ ಸಿನಿಮಾ ಅಲ್ಲ ಇದೊಂದು ಕಲಿಕೆ
‘ದಿ ಕಲರ್ ಆಫ್ ಟೊಮ್ಯಾಟೊ’ ಎಂದರು ರಾಮಯ್ಯ.

ಸ್ವಾತಿ ಕುಮಾರ್ ಈ ಚಿತ್ರದ ನಿರ್ಮಾಪಕರು. ಎಸ್.ನಾರಾಯಣ್ ಅವರ. 5D ಚಿತ್ರವನ್ನೂ ಇವರೇ ನಿರ್ಮಿಸುತ್ತಿದ್ದಾರೆ. ಸದಾ ಕಾಲವೂ ಸಿನಿಮಾ ನೋಡುವ ನನಗೆ ಕನ್ನಡಕ್ಕೆ ಹೊಸತನದ ಚಿತ್ರಗಳನ್ನು ಕೊಡುವ ಆಶಯ ನಮ್ಮದು ಎಂದರು ನಿರ್ಮಾಪಕ ಕುಮಾರ್. ಈ ಟೀಸರ್ ನ ರೀತಿಯಲ್ಲೇ ಸಿನಿಮಾ ಇರುತ್ತದೆ ಎಂಬ ಭರವಸೆಯನ್ನೂ ಕೊಟ್ಟರು.

ಎಲ್ಲರೂ ಬೆಂಕಿಪಟ್ಟಣ ಆದ ಮೇಲೆ ಕಳೆದೋದ ಅಂತ್ತಿದ್ದರು. ಅಲ್ಲಿ ಮಿಸ್ ಆಗಿದ್ದು ಇಲ್ಲಿ ನೋಡಬಹುದು. ಒಂದು ಒಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದರು ಪ್ರತಾಪ್ ನಾರಾಯಣ್.

ಅರ್ಜುನ್ ರಾಮ್ ಸಂಗೀತ ನಿರ್ದೇಶಕ. ಟೀಸರ್ ಸಂಗೀತ ವಿಶೇಷವಾಗಿದ್ದು, ಸಾಂಗ್ಸ್ ಕೆಲಸ ನಡೀತಾ ಇದೆ. ಮತ್ತು ಇದು ಕಮರ್ಷಿಯಲ್ ಇರುತ್ತೆ. ಪ್ಯಾರಲಲ್ ಸೌಂಡ್ ವರ್ಕ್ ಮಾಡುವ ಅವಕಾಶವೂ ಇದೆ ಎಂದರು.
ಛಾಯಾಗ್ರಾಹಕ ಪ್ರಶಾಂತ್ ಸಾಗರ್ ಸಂಕಲನಕಾರ ವಲಿ ಕುಲಾಯ್ಸ್ , ರಂಗತಂಡದ ರಾಮಕೃಷ್ಣ ಬೆಳತ್ತೂರು ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Social Share :

ಸ್ಯಾಂಡಲ್ ವುಡ್ ನಲ್ಲೊಂದು ಕದ್ದಚಿತ್ರ

Social Share :

ಕದ್ದ ಚಿತ್ರವೇ.. ಇದೇನಿದು ವಿಸ್ಮಯ ಎಂಬ ಪ್ರಶ್ನೆ ಹೆಸರನ್ನು ಕೇಳಿದ ಯಾರನ್ನು ಬೇಕಾದರೂ ಕಾಡಬಹುದು.. ಹೌದು ಇದು ಕದ್ದ ಚಿತ್ರ ಎಂಬ ಉತ್ತರವನ್ನೇ ಕೊಟ್ಟಿತು ಚಿತ್ರತಂಡ.

ಚಿತ್ರದ ಒಳಗೆ ಕದ್ದ ವಿವರಗಳಿವೆ. ಇದು ಕೃತಿ ಚೌರ್ಯ ಕುರಿತಾದ ಕಥೆ ಹಾಗಾಗಿ ಇಂತಹ ಹೆಸರಿಡಲಾಗಿದೆ ಎಂಬ ಉತ್ತರ ಕೊಟ್ಟರು ನಿರ್ದೇಶಕ ಸುಹಾಸ್.

ವಿಜಯ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ರೀತಿಯ ನಿರೂಪಣೆ ಅಳವಡಿಸಲು ತಂಡ ಶ್ರಮಿಸಿದೆ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ವಿಜಯರಾಘವೇಂದ್ರ ಅವರು ಒಬ್ಬ ಬರಹಗಾರರಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳುತ್ತಾ ಹೋದರು ನಿರ್ದೇಶಕರು. ಈ ಹಿಂದೆ ರಂಗ ಪಿ-5 ಎಂಬ ಚಿತ್ರವನ್ನು ನಿರ್ದೇಶನ ಮಾಡಿದ ಅನುಭವ ಬೆನ್ನಿಗಿದೆ. ವೈ ನಾಡುನಲ್ಲಿ ಹೆಚ್ಚು ಅಂದರೆ ಶೇಕಡ 70ರಷ್ಟು ಶೂಟಿಂಗ್ ನಡೆದಿದೆ ಎಂದರು.

ಬಹಳ ವರ್ಷದಿಂದ ಸಿನಿಮಾ ನಂಟಿದೆ ಎಂದು ಹೇಳಿಕೊಂಡರು ನಾಯಕ ನಟಿ ನಮ್ರತಾ. ಸುಹಾಸ್ ಸಹ ಬಹಳ ವರ್ಷಗಳಿಂದ ಪರಿಚಯವಿದ್ದಾರೆ. ಅವರಿಗೆ ಕೆಲಸದಲ್ಲಿ ಹೆಚ್ಚು ಆಸಕ್ತಿ ಇದೆ. ಜೊತೆಗೆ ಶ್ರದ್ಧೆಯೂ ಹೆಚ್ಚಿದೆ. ಹಾಗಾಗಿ ಚಿತ್ರವೂ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು.

ಕೃಷ್ಣ ರಾಜ್ ಸಂಗೀತ ನೀಡಿದ್ದಾರೆ. ಬೇಬಿ ಆರಾಧ್ಯ ಮಗಳಾಗಿ ಅಭಿನಯಿಸಿದ್ದಾರೆ. ಕದ್ದಚಿತ್ರ ಎಂದರೆ ಕೃತಿಚೌರ್ಯದ ಕಥೆಯಾಗಿದೆ ಎಂಬ ವಿವರವೂ ಬಂತು.

ಈ ಚಿತ್ರದ ಬಗ್ಗೆ ಮೂರು ವರ್ಷಗಳಿಂದ ಚರ್ಚೆ ನಡೆದಿತ್ತು. ಇದರಲ್ಲಿ ಕುಡಿತ ಮತ್ತು ಸಿಗರೇಟ್ ಮಾಡುವುದಿದೆ. ಇದು ನನ್ನಿಂದ ಸಾಧ್ಯವಿಲ್ಲ ಎಂದು ಸುಮ್ಮನಿದ್ದೆ. ಆಗದಿರುವ ಕೆಲಸವನ್ನು ಎಂದಿಗೂ ಮಾಡಬಾರದು ಎಂಬುದು ನನ್ನ ನಿಲುವಾಗಿತ್ತು ಎಂದರು ನಾಯಕನಟ ವಿಜಯ್ ರಾಘವೇಂದ್ರ. ಆದರೂ ಅಭಿನಯಿಸುವಾಗ ಹಲವು ರೋಚಕ ಸನ್ನಿವೇಶಗಳು ಎದುರಾಗಿದ್ದವು ಎಂಬ ವಿವರಗಳನ್ನು ಮುಂದಿಟ್ಟರು

ಕಟ್ಟಡ ನಿರ್ಮಾಣ ಕಾಯಕದಲ್ಲಿರುವ ಸಂದೀಪ್ ನಿರ್ಮಾಪಕ. ಸಿನಿಮಾ ಆಸಕ್ತಿ ಹೆಚ್ಚು. ಹೊಸಕೋಟೆ ಮೂಲದ ನಾನು ಒಂದಷ್ಟು ವರ್ಷಗಳ ಕಾಲ ಬೆಂಗಳೂರಿನ ಚಿತ್ರಮಂದಿರಗಳಿಗೆ ಲವರ್ ಜೊತೆ ಸುತ್ತುತ್ತಿದ್ದೆ. ಸಿನಿಮಾ ಅಂದರೆ ಅಷ್ಟು ಪ್ರೀತಿ ನನಗೆ. ಹಾಗಾಗಿ ನಿರ್ಮಾಣಕ್ಕಿಳಿದೆ. ಇದಕ್ಕೆ ಆಗ ಲವರ್ ಆಗಿದ್ದ ಮತ್ತು ಈಗ ಪತ್ನಿಯಾಗಿರುವ ನನ್ನಾಕೆಯ ಸಹಕಾರವೂ ಇದೆ ಎಂದು ಹೇಳುತ್ತಾ ಹೋದರು. ಶ್ರೀಕ್ರೇಜಿ ಮೈಂಡ್ ಕ್ಯಾಮೆರಾ ಮತ್ತು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಗೌತಮ್ ಮನು ಅದಕ್ಕೆ ಸಾಥ್ ನೀಡಿದ್ದಾರೆ ಎಂಬ ವಿವರಗಳು ಬಂದವು. ಶಿವಮೊಗ್ಗ ರಾಘು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಪುಟಾಣಿ ಬೇಬಿ ಆರಾಧ್ಯ ಕೂಡ ತನ್ನ ಪಾತ್ರ ಉತ್ತಮವಾಗಿದೆ ಎಂದು ಹೇಳಿಕೊಂಡಳು.

ಸಂಗೀತ ನಿರ್ದೇಶಕ ಕೃಷ್ಣ ರಾಜು ವಯೊಲಿನ್ ವಿಶೇಷತೆಗಳನ್ನು ಹೊಂದಿದ್ದಾರೆ ಎಂಬ ವಿವರಗಳೂ ಬಂದವು.

Social Share :

ಚಡ್ಡಿ ಕಡ್ಡಿ ಹೆಸರಿನಲ್ಲೇ ತಮಾಷೆ.. ಒಳಗೆ ತಮಾಷೆಯೋ ತಮಾಷೆ

Social Share :

ಚಿತ್ರದ ಹೆಸರು ‘ಚಡ್ಡಿದೋಸ್ತು ಕಡ್ಡಿ ಅಲ್ಲಾಡುಸ್ಬುಟ್ಟ’. ಕೇಳಿದ ತಕ್ಷಣವೇ ಒಂದು ಚಿತ್ರಣ ಕಣ್ಣೆದುರು ಬಂದು ನಿಲ್ಲುತ್ತದೆ.. ಮುಖಾರವಿಂದ ಅಲ್ಲಾಡುತ್ತದೆ.. ಆಗ ಕಿರು ನಗೆ ಮೂಡಿದರೂ ಪೂರ್ಣ ನಗೆಯ ಸವಿ ಅನುಭವಿಸಲು ಚಿತ್ರಮಂದಿರಕ್ಕೆ ಬರಬೇಕು.  ಹೌದು ಇದೇ ಸೆಪ್ಟೆಂಬರ್ 17ರಂದು ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ. ಈ ವಿಷಯ ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಚಿತ್ರತಂಡ ಎದುರಾಗಿತ್ತು. ಚಿತ್ರದ ನಿರ್ದೇಶಕ ಆಸ್ಕರ್ ಕೃಷ್ಣ ಚಿತ್ರದ ತಯಾರಿಕೆ ಹಾಗೂ ಇತರ ಕೆಲಸಗಳ ನಡುವೆ ಎದುರಾದ ಅಡ್ಡಿ ಆತಂತ (ಕೊರೊನಾ) ಹಾಗೂ ಚಿತ್ರದ ಒಳಗಿನ ಆಶಯಗಳನ್ನು ಬಿಚ್ಚಿಟ್ಟರು.

ಲೋಕೇಂದ್ರ ಸೂರ್ಯ ಹೀರೋ. ಕಥೆ ಚಿತ್ರಕಥೆ ಇವರದೇ.. ಚೆನ್ನಾಗಿ ಬರೆದುಕೊಟ್ರು; ಈ ಚಿತ್ರ ಬಿಡುಗಡೆಯ ಬಳಿಕ ಅವರ ಪ್ರತಿಭಾ ಶಕ್ತಿ ಏನೆಂಬುದು ತಿಳಿಯಲಿದೆ. ಇನ್ನು ಏಳು ಅಂಕಿ ಖ್ಯಾತಿಯ ಉದ್ಯಮಿ ಸೆವೆನ್ ರಾಜ್ ನಿರ್ಮಾಪಕರು. ಇವರು ಕಥೆ ಕೇಳಲಿಲ್ಲ; ಪಾತ್ರ ಮಾಡಲು ಒಪ್ಪಿದರು.. ಎಲ್ಲೂ ಸಮಸ್ಯೆ ಬರದಂತೆ ನೋಡಿಕೊಂಡರು. ಲಾಕ್ ಡೌನ್ ಅಡ್ಡಿಯಾಯಿತು. ನಾಯಕ ನಟಿ ಕೇರಳದವರು. ಅತ್ಯುತ್ತಮವಾಗಿ ನಟಿಸಿದ್ದಾರೆ. ಅನಂತ್ ಆರ್ಯನ್ ಸಂಗೀತ ನಿರ್ದೇಶಕ. ಹಾಡುಗಳು ಚಿತ್ರಕ್ಕೆ ಪೂರಕವಾಗಿಯೇ ಇವೆ ಮತ್ತು ಈಗಾಗಲೇ ಸದ್ದು ಮಾಡಿವೆ. ವೈಲೆಂಟ್ ವೇಲು ಸಾಹಸ ನಿರ್ದೇಶನ
ಮಾಡಿದ್ದಾರೆ ಹೀಗೆ ಹೇಳುತ್ತಲೇ ಹೋದರು ಆಸ್ಕರ್ ಕೃಷ್ಣ. ಲೋಕೇಂದ್ರ ಸೂರ್ಯ, ಅನಂತ್ ಸೂರ್ಯನ್, ವೈಲೆಂಟ್ ವೇಲು ಈ ಸಂದರ್ಭದಲ್ಲಿ ಇದ್ದರು.

ನಿರ್ಮಾಪಕರ ಸೆವೆನ್ ಕ್ರೆಜ್
ಚಿತ್ರದ ನಿರ್ಮಾಪಕ ಸೆವೆನ್ ರಾಜ್ ಬದುಕಿನಲ್ಲಿ ಏಳು ಬೀಳುಗಳನ್ನು ಕಂಡು ಛಲದಿಂದ ಮೆಲ್ಲೆದ್ದು ನಿಂತು ಬದುಕಿದವರು. 90ರ ದಶಕದಲ್ಲಿ ಖಳ ನಟರಾಗಿ ಹಲವು ಚಿತ್ರಗಳಲ್ಲಿ ನಟಿಸಿದರೂ ಒಂದು ಚಿಕ್ಕ ಘಟನೆಯಿಂದ ಕುಗ್ಗಿ ನಿರ್ಮಾಪಕ ಆಗಲೇ ಬೇಕೆಂದು ಸಾಹಸ ಮಾಡಿದವರು. ಸೆವೆನ್ ರಾಜ್ ಅವರದು ವೈವಿಧ್ಯಮಯ ಬದುಕು. ಬಟ್ಟೆ ತೊಡುವಾಗಲೂ ‘ರೆಡ್ ಅಂಡ್ ವೈಟ್’ ಎಂಬುದಕ್ಕೆ ಬದ್ಧರಾದವರು. ಅವರ ಕಾರು ಕೂಡ ಅದೇ ವೈವಿಧ್ಯಮಯನ್ನು ತೆರೆದುಕೊಡುತ್ತದೆ ಎಂಬುದೇ ಅಚ್ಚರಿ.

ಚಿತ್ರರಂಗದಲ್ಲಿ ತಮ್ಮ ಕ್ರಿಯಾಶೀಲತೆ ಯಿಂದ ಶೋಮ್ಯಾನ್ ಎನಿಸಿಕೊಂಡವರಿದ್ದಾರೆ. ಆದರೆ ನೈಜ ಬದುಕಿನಲ್ಲಿಯೇ ಸೆವೆನ್ ರಾಜ್ ಬಣ್ಣದ ವ್ಯಕ್ತಿ. ಯಾರಿಗೂ ಕೇರ್ ಮಾಡದ ತಮ್ಮ ಆತ್ಮ ತೃಪ್ತಿಗೆ ಹೀಗೆ ಬದುಕುತ್ತಿರುವವರು. ಅವಕಾಶ ಸಿಕ್ಕಿದರೆ ಕನ್ನಡದಲ್ಲಿ ಹೆಚ್ಚು ಚಿತ್ರಗಳನ್ನು ನಿರ್ಮಿಸುವ ಹಂಬಲ ಇವರದು.

Social Share :