Snehapriya.com

June 9, 2025

ಸಿನಿಮಾ-ಗಾಸಿಪ್

ಬಿಡುಗಡೆಗೆ ಮುನ್ನವೇ ಕಮಾಲ್ ಪಾನ್ ಇಂಡಿಯಾದತ್ತ ಭಜರಂಗಿ 2

Social Share :

ಜಯಣ್ಣ ನಿರ್ಮಾಣದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಹಾಗೂ ಹರ್ಷ ನಿರ್ದೇಶನದ ಚಿತ್ರ ‘ಭಜರಂಗಿ-2’ ಪಾನ್ ಇಂಡಿಯಾ ಸಿನಿಮಾ ಆಗುವತ್ತ ಗಮನ ಸೆಳೆಯುತ್ತಿದೆ..

ಇದೇ ನವೆಂಬರ್ 29ರಂದು ಬಿಡುಗಡೆ ಕಾಣುತ್ತಿರುವ ‘ಭಜರಂಗಿ-2’ ಟ್ರೈಲರ್ ನೋಡಿದವರು ಓಹ್ ಇದು ನಿಜಕ್ಕೂ ಪಾನ್ ಇಂಡಿಯಾ ಸಿನಿಮಾವಾಗಬೇಕು ಎಂದು ಉದ್ಘರಿಸಿದ್ದಾರೆ. ಅದ್ದೂರಿತನದಲ್ಲಿ ಸಾಟಿ ಇಲ್ಲದಂತೆ ನಿರ್ಮಾಣವಾಗಿರುವ ಚಿತ್ರದ ಮುಖ್ಯ ವಿಶೇಷತೆ ಏನೆಂದರೆ ಅದು ಕಥೆಯಲ್ಲಿ ‘ವೈದ್ಯೋ ನಾರಾಯಣ ಹರಿ’ ಎಂಬ ಹಂದರವನ್ನು ಹೊಂದಿರುವುದು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಬರುವ ಧನ್ವಂತರಿ ಇಲ್ಲಿನ ಭಾಗವಾಗಿರುವುದು.

ಕೊರೊನಾ ಕಾಲಘಟ್ಟದಲ್ಲಿ ಈ ಚಿತ್ರ ಅತ್ಯಂತ ಪ್ರಸ್ತುತ ಮತ್ತು ಆಪ್ತವಾಗುತ್ತದೆ. ಏಕೆಂದರೆ ಇಡೀ ಜಗತ್ತು ಯಾರೂ ಕಂಡರಿಯದ ಔಷಧಗಳ ಅನ್ವೇಷಣೆಯಲ್ಲಿದೆ. ಅಲ್ಲದೆ ಚಿತ್ರ ನೋಡಿದವರು ಥ್ರಿಲ್ಲಾಗಿದ್ದಾರೆ. ಅಭಿಮಾನಿಗಳು ಖುಷಿಯಾಗಿದ್ದಾರೆ.

ಈಚೆಗೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಆವರಣದಲ್ಲಿ ನಡೆದ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸಂಭ್ರಮವೇ ಮನೆ ಮಾಡಿತ್ತು. ಪವರಸ್ಟಾರ್ ಪುನೀತ್ ರಾಜ್‍ಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಇತರ ಗಣ್ಯರ ಉಪಸ್ಥಿತಿಯಿಂದ ಕಾರ್ಯಕ್ರಮ ಹೆಚ್ಚು ಹೊಳಪಿನಿಂದ ಕಂಗೊಳಿಸಿತು.

ನಟಿಯರಾದ ಭಾವನಾ, ಶೃತಿ, ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ, ಕಲಾ ನಿರ್ದೇಶಕ ರವಿ ಸಂತೆಹಕ್ಳು, ಛಾಯಾಗ್ರಾಹಕ ಸ್ವಾಮಿ ಜೆ ಗೌಡ, ನಟರಾದ ಗಿರೀಶ್, ಭಜರಂಗಿ ಲೋಕಿ,
ಜಯಣ್ಣ ನಿರ್ಮಾಣ ತಂಡದ ನಿರ್ದೇಶಕರಾದ ವೃಷಭ್ ಶೆಟ್ಟಿ
ಸಂತೋಷ್ ಆನಂದ್ ರಾಮ್
ತೂಗದೀಪ್ ದಿನಕರ್, ಡಾ.ಸೂರಿ ಹಾಗೂ ಇತರ ರು ವೇದಿಕೆಗೆ ರಂಗು ತಂದರು.

ನಿರ್ದೇಶಕ ಹರ್ಷ ಅತ್ಯಂತ ಭಾವುಕರಾಗಿದ್ದರು. ಶಿವಣ್ಣ ಮಗುವಿನ ಥರಾ.. ಅವರು ಕೊಟ್ಟ ಬೆಂಬಲ ಜೀವನದಲ್ಲಿ ಮರೆಯುವುದು ಸಾಧ್ಯವಿಲ್ಲ ಎಂದರು. ಪ್ರತಿಯೊಬ್ಬರ ಸಹಕಾರ ನೆನೆದರು.

ಜಯಣ್ಣ ಮತ್ತು ಭೋಗಣ್ಣ ವೇದಿಕೆಗೆ ಬಂದರಾದರು ಮಾತನಾಡಲು ಸಂಕೋಚ ವ್ಯಕ್ತಪಡಿಸಿದರು. ಒಂದು ರೀತಿಯಲ್ಲಿ ಜಯಣ್ಣ ಅತ್ಯಂತ ಉತ್ಸಾಹದಲ್ಲಿ ಎಲ್ಲರನ್ನು ಮಾತನಾಡಿಸಿದ್ದೂ ಕಂಡು ಬಂತು.

ಶಿವಣ್ಣ, ಯಶ್ ಹಾಗೂ ಪುನೀತ್ ವೇದಿಕೆಯಲ್ಲಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತು.

Social Share :

ಮುಗಿಲ್ ಪೇಟೆ ಮನೋರಂಜನ್ ಭರಪೂರ ಮನರಂಜನೆ

Social Share :

ಮುಗಿಲ ಪೇಟೆ ಬಿಡುಗಡೆಗೆ ಮುನ್ನವೇ ಸದ್ದು ಮಾಡತೊಡಗಿದೆ. ಮುಖ್ಯವಾಗಿ ಚಿತ್ರದ ಮನರಂಜನೆ ವಿಷಯದ ಬಗ್ಗೆ ಚಿತ್ರತಂಡ ಅತ್ಯಂತ ಖುಷಿಯಿಂದಲೇ ಮಾತನಾಡಿತು..

ಅದು ಸ್ಟಾರ್ ಹೊಟೇಲ್.. ಯಾವ ಸ್ಟಾರ್ ನಟರ ಚಿತ್ರಗಳಿಗೂ ಕಡಿಮೆ ಇಲ್ಲದ ಅದ್ದೂರಿಯ ಸೆಟ್ ಕಂಗೊಳಿಸುತಿತ್ತು. ಅದೂ ಕೂಡ ಸ್ಟಾರ್ ಚಿತ್ರವೇ.. ಏಕೆಂದರೆ ಅದು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಪುತ್ರ ಮನೋರಂಜನ್ ಮುಖ್ಯ ಪಾತ್ರದಲ್ಲಿರುವ ಚಿತ್ರ.

ಇದೇ ನವೆಂಬರ್ 19ರಂದು ಬಿಡುಗಡೆ ಕಾಣುತ್ತಿರುವ ಚಿತ್ರ ಮುಗಿಲ್ ಪೇಟೆ. ಮನೋರಂಜನ್ ರವಿಚಂದ್ರನ್ ಮತ್ತು ಅವರ ಸಹೋದರ ವಿಕ್ರಂ ರವಿಚಂದ್ರನ್ ಅವರ ಪರಿಶ್ರಮದ ಫಲ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂಬ ಹೊಗಳಿಕೆ ಪ್ರತಿಯೊಬ್ಬರಿಂದಲೂ ವ್ಯಕ್ತವಾಯಿತು.

‘ಅಪ್ಪನ್ ಹೆಗಲ್ ಮೇಲೆ ಕುಳಿತಾಗ ಅದರ ಮಹತ್ವ ಗೊತ್ತಾಗಲಿಲ್ಲ.. ಮುಂದೆ ಅರಿವಾಯಿತು ನಾನು ದೇವರ ಹೆಗಲಮೇಲೆ ಕುಳಿತ್ತಿದೆಂದು..’ ಎಂದು ಅಪ್ಪನ ನೆರಳಿನಲ್ಲಿ ಅರಳಿದ ಬಗೆಯನ್ನು ವಿವರಿಸಿದ ಮನೋರಂಜನ್ ಅವರಲ್ಲಿ ಭಾವುಕತೆ ತುಂಬಿ ತುಳುಕುತಿತ್ತು.. ನನ್ನ ಈ ಸಿನಿಮಾದ ಜರ್ನಿಯಲ್ಲಿ ಹಿರಿಯ ಕಲಾವಿದರಿಂದ ಹಿಡಿದು ಎಲ್ಲರೂ ಸಹಕಾರ ನೀಡಿದ್ದಾರೆ. ನನ್ನ ತಮ್ಮ ಮತ್ತು ತಂಗಿ ಇಬ್ಬರೂ ನನ್ನ ಶಕ್ತಿ. ಚಿತ್ರ ನಿರ್ಮಾಣ ಮಾಡಿರುವ ರಕ್ಷಾ ಕೂಡ ನನ್ನ ತಂಗಿಯೇ ಎಂದರು ಮನೋರಂಜನ್.

ಹಿರಿಯ ನಟ ರಂಗಾಯಣ ರಘು, ಮುಗಿಲು ಯಾವೊತ್ತು ಎತ್ತರ; ಅದನ್ನು ತಲೆ ಎತ್ತಿ ನೋಡಬೇಕು. ಆದರೆ ಪೇಟೆ ಎಂದರೆ ಅದಮ್ಯ ಪ್ರೀತಿ ಕಾಣುತ್ತದೆ ಎಂದರು.

ರಕ್ಷಾ ವಿಜಯ್ ಕುಮಾರ್ ಚಿತ್ರದ ನಿರ್ಮಾಪಕರು. ರವಿಸರ್ ಕುಟುಂಬದ ಸ್ನೇಹದಿಂದ ಈ ಚಿತ್ರ ನಿರ್ಮಿಸುವ ಅವಕಾಶ ಬಂತು ಎಂದರು ರಕ್ಷಾ.

ನಿಮ್ಮ ಅಪ್ಪ ಯಾಕೆ ಬರಲಿಲ್ಲ ಎಂದು ಪ್ರೀತಿಯಿಂದಲೇ ಮನೋರಂಜನ್ ಗೆ ಪ್ರಶ್ನಿಸಿದ ಸಾಧು ಕೋಕಿಲ, ಮನು ವಿಕ್ಕಿ ಸಾಧನೆ ತೋರಿಸಬೇಕೆಂದಿದ್ದಾರೆ.. ಅದಕ್ಕೆ ಕೇಳಿದೆ ಎಂದು ನಕ್ಕರು.
17 ಗೆಟಪ್ ಇದೆ ನನಗೆ. ಬಹಳ ವಿಶೇಷವಾಗಿದೆ. ಪಾತ್ರದ ಬಗ್ಗೆ ನಾನು ಹೇಳುವುದಿಲ್ಲ.. ಆದರೆ ನನ್ನ ಪಾತ್ರದ ವಿವರ ಲಿಮ್ಕಾ ಪ್ರಶಸ್ತಿಗೆ ಅರ್ಹತೆ ಪಡೆದಿದೆ ಎಂದರು ಸಾಧು.

ನಿರ್ದೇಶಕ ಭರತ್ ಎಸ್.ನಾವುಂದ ಮಾತನಾಡುವಾಗ ಪ್ರತಿಯೊಬ್ಬರನ್ನೂ ನೆನಪಿಸಿಕೊಂಡರು. ನನ್ನ ಕನಸಿನ ಸಿನಿಮಾ ಮಾಡಲು ಈ ಹಂತಕ್ಕೆ ತಳ್ಳಿ ದವರು ಬಹಳ ಜನರಿದ್ದಾರೆ
ತಂತ್ರಜ್ಞರು ನನ್ನ ಶಕ್ತಿ ಎಂದರು.

ಶ್ರೀಧರ್ ಸಂಭ್ರಮ್ ಬಹಳವೇ ಖುಷಿಯಲ್ಲಿದ್ದರು. ಚಿತ್ರ ಸೊಗಸಾಗಿದೆ. ನನಗೆ ಈ ಚಿತ್ರ ಸಿಕ್ಕಿದ್ದು ರವಿ ಸರ್ ಚಿತ್ರಗಳ ಋಣ ತೀರಿಸುವಂತೆ ಎಂದರು.

ಹೊಸ ಖಳ ನಟರಲ್ಲಿ ಕಾಕ್ರೋಚ್ ಎಂದೇ ಹೆಸರಾದ ಸುಧೀ, ಹಾಸ್ಯ ನಟ ಅಪ್ಪಣ್ಣ, ನಟಿ ಮೇಘಶ್ರೀ ಹಾಗೂ ಚಿತ್ರದಲ್ಲಿ ನಟಿಸಿ ವೇದಿಕೆಯಲ್ಲಿ ನಿರೂಪಣೆ ಮಾಡಿದ ಕಾವ್ಯಾ ಷಾ ಇದ್ದರು.

Social Share :

ಕನ್ನಡಿಗ ನೀನಾಗು ಬಾ.. ಮಹೇಂದ್ರ ಮಣ್ಣೋತ್ ಹಾಡಿನ ಕಂಪು

Social Share :

ಭಾರತೀಯ ಚಿತ್ರರಂಗದ ಮಹಾನ್ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಕಂಠಸಿರಿಯಲ್ಲಿ ಮೂಡಿಬಂದಿದ್ದ ಕನ್ನಡದ ಕಂಪು ಸೂಚಿಸುವ ಹಾಡೊಂದು ಈಗ ಮತ್ತೆ ಆಲ್ಬಂ ಗೀತೆಯಾಗಿ ಗಮನ ಸೆಳೆದಿದೆ.

ಕನ್ನಡ ಪ್ರೇಮಿಯಾಗಿರುವ ಉದ್ಯಮಿ ಮಹೇಂದ್ರ ಮಣೋತ್ ಅವರು ಕನ್ನಡದ ಕಂಪನ್ನು ಚೆಲ್ಲುವ ಗೀತೆಯೊಂದಿಗೆ ಗಮನ ಸೆಳೆದಿದ್ದಾರೆ. ಅದು ಈ ಹಿಂದೆ ತೆರೆ ಕಂಡಿದ್ದ ‘ಆಟೋ’ ಎಂಬ ಚಿತ್ರದ ಅದ್ಭುತ ಗೀತೆ ಮರುಚಿತ್ರಣಗೊಂಡಿದೆ ಎಂಬ ಮಾಹಿತಿಯನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೋಡಿದರು ಮಹೇಂದ್ರ ಮಣೋತ್.

ಕನ್ನಡ ಹಾಗೂ ಗೋವಿನ ಬಗ್ಗೆ ಅಪಾರ ಅಭಿಮಾನವಿರುವ ಮಾರುತಿ ಮೆಡಿಕಲ್ಸ್‌ ನ ಮಹೇಂದ್ರ ಮಣೋತ್ 2009ರಲ್ಲಿ ಆಟೋ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದಲ್ಲಿ ಗಾನಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ‘ಶತ ಶತಮಾನಗಳೇ ಉರುಳಲಿ..’ ಎಂಬ ಕನ್ನಡದ ಭಾಷೆಯ ಹೆಗ್ಗಳಿಕೆ ಬಿಂಬಿಸುವ ಹಾಡನ್ನು ಹಾಡಿದ್ದರು.

ರಾಜ್ಯೋತ್ಸವದ ಸಂದರ್ಭದಲ್ಲಿ ಮಹಾನ್ ಗಾಯಕ ಎಸ್.ಪಿ.ಬಿ. ಅವರ ಸ್ಮರಣೆಯ ಸಲುವಾಗಿ ಮಾಡಲಾಗಿರುವ ಗೀತೆಯಲ್ಲಿ ಕನ್ನಡತನ ತುಂಬಿ ತುಳುಕಿದೆ.

ಬಿ.ಪಿ.ಹರಿಹರನ್ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ. ಮಲ್ಲಿಕಾರ್ಜುನ ಮುತ್ತಲಗೇರಿ ಈ ಹಾಡನ್ನು ಬರೆದಿದ್ದು, ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ನಾಗೇಂದ್ರ ರಂಗರಿ ಛಾಯಾಗ್ರಹಣ ಮಾಡಿದ್ದಾರೆ.

ಬೆಂಗಳೂರು ಹಾಗೂ ಮೈಸೂರಿನ ಚಾರಿತ್ರಿಕ ಸುಂದರತಾಣಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದೆ.
ಇನ್ನು ಮುಂದೆಯೂನಾಡು, ನುಡಿಗೆ ಸಂಬಂಧಿಸಿದ ಅನೇಕ ಹಾಡುಗಳನ್ನು ಬಿಡುಗಡೆ ‌ಮಾಡಲಾಗುವುದು ಎಂಬ ವಿವರ ಕೊಟ್ಟರು ನಿರ್ಮಾಪಕ ಹಾಗೂ ನಟ ಮಹೇಂದ್ರ ಮಣೋತ್.

ಕಂಚಿನಕಂಠದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಹಾಡಿಗೆ ನಿರ್ದೇಶನ ಮಾಡಿರುವುದು ನನ್ನ ಸೌಭಾಗ್ಯ. ಇದಕ್ಕೆ ಅವಕಾಶ ನೀಡಿದ ಮಹೇಂದ್ರ ಮಣೋತ್ ಅವರಿಗೆ ಚಿರ ಋಣಿ. ಅನೇಕ ಸಾಂಸ್ಕೃತಿಕ ಕಲಾವಿದರು, ಸಾಲುಮರದ ತಿಮ್ಮಕ್ಕ, ಸಾಹಿತಿ ದೊಡ್ಡರಂಗೇಗೌಡ‌‌ ಮುಂತಾದ ಗಣ್ಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ ಎಂದರು ನಿರ್ದೇಶಕ ಬಿ.ಪಿ.ಹರಿಹರನ್.

Social Share :

ಟಾಮ್ & ಜೆರ್ರಿ ಹಾಯಾಗಿದೆ..ಖುಷಿಯಾಗಿದೆ

Social Share :

ಈಗಾಗಲೇ ಯುವಜನರ ಬಾಯಿಯ ಚಾಕೋಲೇಟ್ ಆಗಿರುವ ಹಾಡು ಒಂದು ಕೋಟಿಗೂ ಅಧಿಕ ಜನರನ್ನು ತಲುಪಿಬಿಟ್ಟಿದೆ. ಹಾಗಾಗಿ ಚಿತ್ರತಂಡ ಖುಷಿಯ ಭಾವಗಳಲ್ಲಿ ತೇಲಾಡಿತು..

‘ಹಾಯಾಗಿದೆ.. ಎದೆಯೊಳಗೇ..’ ಎಂಬ ಎದೆಯನ್ನು ಪುಳಕಗೊಳಿಸುವ ಹಾಡನ್ನು ಮುಂದಿಟ್ಟುಕೊಂಡೇ ಪ್ರಚಾರ ಸಭೆಯಲ್ಲಿ ಭಾಗವಹಿಸಿತ್ತು ಚಿತ್ರತಂಡ.

ಅದು ‘ಟಾಮ್ ಅಂಡ್ ಜರ್ರಿ’ ಆದರೆ ವಾಲ್ ಡಿಸ್ನಿಯವರದಲ್ಲ.. ಅಪ್ಪಟ ಕನ್ನಡ ಪ್ರತಿಭೆಗಳು ಸೇರಿ ಮಾಡಿರುವ ಚಿತ್ರದ ಹೆಸರು. ಚಿತ್ರದ ಹಾಡುಗಳು ಹಾಗೂ ಮೇಕಿಂಗ್ ವಿಡಿಯೋ ಗಮನ ಸೆಳೆಯಿತು.

ಮುಖ್ಯವಾಗಿ ‘ಹಾಯಾಗಿದೆ… ಎದೆಯೊಳಗೆ..’ ಸೃಷ್ಟಿಸಿದ ಸಂಗೀತ ನಿರ್ದೇಶಕ ಮ್ಯಾಥ್ಯೂಸ್‌ ಮನು ಚಿತ್ರದ ಆಶಯಗಳ ಕುರಿತು ಮಾತನಾಡಿದರು. ಹಾಡು ನಮ್ಮ ನಿರೀಕ್ಷೆಯನ್ನು ಎಲ್ಲೋ ಹೊರಟು ಹೋಗಿದೆ. ಈ ಹಾಡಿನ ಗಾಯಕ ಸಿದ್ ಶ್ರೀರಾಮ್ ಕನ್ನಡಕ್ಕೆ ಹಾಡಿದ ಮೊದಲ ಹಾಡು ಇದು.. ಇದರ ದೃಶ್ಯ ಸಂಯೋಜನೆ ಕೂಡ ಅದ್ಭುತವಾಗಿದೆ ಎಂದು ವಿವರಗಳನ್ನು ನೀಡುತ್ತಾ ಹೋದರು.

ನಿರ್ಮಾಪಕ ರಾಜು ಶೇರಿಗಾರ್ ಸಹ ಖುಷಿಯಲ್ಲಿದ್ದರು. ಚಿತ್ರದ ಬಜೆಟ್ ಲೆಕ್ಕ ಹಾಕುವುದಿಲ್ಲ.. ಚಿತ್ರಕ್ಕೆ ಅಗತ್ಯವೇನಿತ್ತು ಅದನ್ನು ಪೂರೈಸಲಾಗಿದೆ. ಇದು ಪ್ರೇಮದ ತುಂಟಾಟ ಬೆರೆತ ಚಿತ್ರ ಎಂದರು.

ನಿರ್ದೇಶಕ ರಾಘವ್ ವಿನಯ್ ಶಿವಗಂಗೆ ಅವರು ‘ಕೆ.ಜಿ.ಎಫ್’ ಚಿತ್ರದ ಮೂಲಕ ಅನುಭವಗಳನ್ನು ಪಡೆದುಕೊಂಡವರು. ಕೊಂಚ ಆಧ್ಯಾತ್ಮದ ಕಡೆಗೆ ವಾಲಿರುವ ಅವರು ಚಿತ್ರದಲ್ಲಿ ಕೂಡ ಅದನ್ನೇ ತುಂಬಿರುವುದಾಗಿ ವಿವರ ನೀಡಿದರು.
ಟೈಟಲ್ ಸಾಂಗ್ ಆಧ್ಯಾತ್ಮವನ್ನು ಹೊಂದಿದೆ. ಕಮರ್ಷಿಯಲ್ ಆಗಿ ಹೇಳೋಕೆ ಹೋದ್ರೆ ನಾಯಕ ನಟ ಗುರಾಯಿಸಿದರೆ ಹೊಡೆದಾಟ ಮಾಡ್ತಾನೆ, ನಾಯಕಿ ಗುರಾಯಿಸಿದರೆ ನಗೆ ಬೀರುತ್ತಾಳೆ. ಧರ್ಮ, ಸತ್ಯ ವೈರುಧ್ಯ ಎಲ್ಲವೂ ಇದೆ.
ಸಂತೋಷವಾಗಿ ಇರಲು ನೆಪಗಳು ಬೇಕು.. ‘ನಾಳೆ ಬಿರಿಯಾನಿಗೆ ಇವತ್ತಿನ ಚಿತ್ರಾನ್ನ ಮರೆಯಬಾರದು’ ಎಂದು ಆಧ್ಯಾತ್ಮ ಬೆರೆಸುವ ರೀತಿಯಲ್ಲಿ ಮಾತನಾಡುತ್ತಾ ಹೋದರು ನಿರ್ದೇಶಕರು.

ಅರ್ಜುನ್ ಮಾಸ್ಟರ್ ಸಾಹಸ, ಸಂಕೇತ್ ಛಾಯಾಗ್ರಹಣವಿದೆ. ಚಿತ್ರವನ್ನು ನವೆಂಬರ್ 12 ಕ್ಕೆ ಬಿಡುಗಡೆ ಮಾಡುವ ಆಶಯವಿದೆ ಎಂದರು. ಮುಖ್ಯ ಪಾತ್ರ ಮಾಡಿರುವ ನಿಶ್ಚಿತ್ ಹಾಗೂ ಚೈತ್ರಾ ಹಿರೋಯಿನ್ ಪಾತ್ರಗಳ ಬಗ್ಗೆ ಹೇಳಿಕೊಂಡರು. ಕಾರ್ಯಕಾರಿ ನಿರ್ಮಾಪಕ ವಿನಯ್ ಚಂದ್ರ, ಸಾಹಸ ನಿರ್ದೇಶಕ ಅರ್ಜುನ್ ರಾಜ್, ಖಳನಟ ಗುಣಶೇಖರ್ ಮಾತನಾಡಿದರು. ಹಾಡು ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಅರ್ಧ ಗೆದ್ದ ಖುಷಿಯಲ್ಲಿರುವ ತಂಡಕ್ಕೆಹಾಡಿನ ಆಶಯದಂತೆ ಹಾಯಾಗಿರಲಿ ಕೊಂಚ ಸಮಯವೇ ಹಿಡಿಯುತ್ತದೆ..

Social Share :

ದುನಿಯಾ ವಿಜಯ್ ಸಲಗ ಯುವ ಜನರ ಹಾಟ್ ಫೆವರಿಟ್

Social Share :

ದುನಿಯಾ ವಿಜಯ್ ಅವರ ಸಲಗ ಚಿತ್ರವು ಯುವಜನರ ಹಾಟ್ ಫೆವರಿಟ್ ಆಗಿ ಹೊಮ್ಮಿದೆ..

ಬಿಡುಗಡೆ ಕಂಡು ವಾರ ಕಳೆದರೂ ಅದರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ನಡೆದಿದೆ. ಚಿತ್ರಮಂದಿರಗಳು ಹೌಸ್ ಫುಲ್ ಬೋರ್ಡ್ ಹೇರಿಕೊಳ್ಳುತ್ತಲೇ ನಡೆದಿವೆ.

ಇದರ ಮಧ್ಯೆ ಮುಖ್ಯ ಚಿತ್ರಮಂದಿರ ತ್ರಿವೇಣಿಗೆ ಎದುರಾಗಿದ್ದ ತೊಂದರೆಯೂ ಈಗ ತಪ್ಪಿದೆ. ಅಲ್ಲಿ ಈ ವಾರ ಬಿಡುಗಡೆ ಕಾಣಬೇಕಿದ್ದ ಚಿತ್ರವು ಪಕ್ಕದ ಅನುಪಮ ಚಿತ್ರಮಂದಿರಕ್ಕೆ ವರ್ಗಾವಣೆಯಾಗಿದೆ.

‘ಸಲಗ’ ಚಿತ್ರದ ಗಳಿಕೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರನ್ನು ಖುಷಿಯಾಗಿಸಿದೆ. ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಅವರಿಗಂತೂ ಮೊದಲಿನಿಂದಲೂ ಚಿತ್ರದ ಬಗ್ಗೆ ಹೆಮ್ಮೆ. ಚಿತ್ರವು ಗೆದ್ದೆ ಗೆಲ್ಲುತ್ತದೆ ಎಂಬ ನಂಬಿಕೆ. ಹಾಗಾಗಿ ಪ್ರೇಕ್ಷಕನ ಹವಾ ನೋಡಿ ಸಹಜವಾಗಿ ಥ್ರಿಲ್ಲಾಗಿದ್ದಾರೆ. ಬಹಳ ಸಮಯದ ಬಳಿಕ ಯುಜ ಜನತೆ ಚಿತ್ರಮಂದಿರಗಳತ್ತ ಎಡತಾಕುತ್ತಿರುವುದು ಚಿತ್ರೋದ್ಯಮದ ಮಂದಿಯಲ್ಲಿ ಸಂತಸ ತುಂಬಿದೆ.

Social Share :

ಭಜರಂಗಿ-2 ಸೆನ್ಸಾರ್ ರೋಮಾಂಚನ ಕಣ್ಣೀರು ಹರ್ಷ, ಜಯಣ್ಣ ಥ್ರಿಲ್

Social Share :

ಚಿತ್ರ ನೋಡಿದ ಸೆನ್ಸಾರ್ ಪ್ರಾದೇಶಿಕ ಅಧಿಕಾರಿ ರೋಮಾಂಚನಗೊಂಡರು.. ಜೊತೆಗೆ ಚಿತ್ರವನ್ನು ಎಲ್ಲರೂ ಹೊಗಳಿದರು.. ಇಂತಹ ಪ್ರತಿಕ್ರಿಯೆ ನಿರೀಕ್ಷಿಸದ ತಂಡ ಮಾತ್ರ ಭಾವುಕತೆಯಲ್ಲಿ ಮಿಂದೆದ್ದಿತು. ಮುಖ್ಯವಾಗಿ ನಿರ್ದೇಶಕ ಹರ್ಷ ಹಾಗೂ ನಿರ್ಮಾಪಕ ಜಯಣ್ಣ ಅವರ ಕಣ್ಣುಗಳಿಂದ ನೀರು ಉಕ್ಕಿ ಹರಿಯಿತು..

ಇದಲ್ಲವೆ ಒಂದು ಚಿತ್ರದ ಸಾರ್ಥಕತೆ.. ಹೌದು ಚಿತ್ರತಂಡ ಈಗ ಖುಷಿಯ ಮೂಡ್ ನಲ್ಲಿದೆ. ಅಂದ ಹಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ಭಜರಂಗಿ-2ಗೆ ಈಚೆಗಷ್ಟೇ ಸೆನ್ಸಾರ್ ನಡೆಯಿತು..

ಈ ಸಂದರ್ಭದಲ್ಲಿ ಚಿತ್ರತಂಡ ಅನುಭವಿಸಿದ ಖುಷಿ ಮತ್ತು ರೋಮಾಂಚನವನ್ನು ಅಷ್ಟೇ ಉತ್ಸಾಹದಲ್ಲಿ ವರ್ಣಿಸಿದರು ನಿರ್ದೇಶಕ ಹರ್ಷ.

ಮುಂದಿನ ವಾರ ಚಿತ್ರ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಜಯಣ್ಣ ಅವರ ಉತ್ಸಾಹ ಕೂಡ ಮೇರೆ ಮೀರಿದೆ. ಏಕೆಂದರೆ ಕಳೆದ ವಾರ ಬಿಡುಗಡೆ ಕಂಡ ಎರಡು ಸ್ಟಾರ್ ಚಿತ್ರಗಳಿಗೆ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈಗ ಶಿವಣ್ಣ ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಂಭ್ರಮ ಆಚರಿಸಲು ಸಜ್ಜಾಗಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಹ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಇದ್ದಾರೆ. ಅದರ ಭಾಗವಾಗಿ ಅವರು ಪ್ರಚಾರಕ್ಕೆ ಟಿವಿ ವಾಹಿನಿಗಳಿಗೆ ಹೋಗುತ್ತಿದ್ದಾರೆ.

ಇನ್ನು ನಿರ್ದೇಶಕ ಹರ್ಷ ಅವರ ಸಂಭ್ರಮ ಕೂಡ ಹೆಚ್ಚಾಗಿದೆ. ಏಜೆಂದರೆ ಈ ಚಿತ್ರ ಅವರ ಮಾಸ್ಟರ್ ಪೀಸ್. ಕನ್ನಡ ಪ್ರೇಕ್ಷಕರ ಮಟ್ಟಿಗೆ ಇದು ಹೊಸಹಬ್ಬ..

Social Share :

ಇಲ್ಲಿಂದ ಆರಂಭವಾಗಿದೆ ಭಯಾನಕ ಥ್ರಿಲ್ಲರ್

Social Share :

ವೈಯಕ್ತಿಕ ವೈಶಮ್ಯದಿಂದ ದೂರವಾದ ಎರಡು ಕುಟುಂಬಗಳನ್ನು ಬೆಸೆಯಲು ಹೊಸ ತಂತ್ರಗಳನ್ನು ರೂಪಿಸುವುದು ತೆಲುಗು ಚಿತ್ರರಂಗದಲ್ಲಿ ಬಹಳ ಕಾಲ ನಡೆದುಕೊಂಡು ಬಂದಿದೆ..

ಹಾಗಾಗಿ ಅಲ್ಲಿಂದ ಎರವಲು ಪಡೆದ ಕಥೆಗಳು ಇದೇ ಧಾಟಿಯನ್ನು ಅನುಸರಿಸುತ್ತವೆ. ಸದ್ಯ ತೆಲುಗು ಮೂಲದ ನಿರ್ಮಾಪಕ ಬಿ.ನರಸಿಂಹರೆಡ್ಡಿ ಆ ರೀತಿಯ ಕಥೆ ಹೊಂದಿರುವ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸುತ್ತಿದ್ದಾರೆ.

‘ಇಲ್ಲಿಂದ ಆರಂಭವಾಗಿದೆ’ ಎಂಬ ಹೆಸರಿನ ಚಿತ್ರವನ್ನು ಬಿ.ನರಸಿಂಹರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಮೊದಲೇ ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರ ಅಭಿಮಾನಿಯಾಗಿರುವ ಅವರು ರಾಜ್ ಮಾದರಿಯ ಸಿಐಡಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲಕ್ಷ್ಮಣ ಚಪರ್ಲ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಚಾರದ ಸಲುವಾಗಿ ಟ್ರೈಲರ್ ಮತ್ತು ಮೂರು ಹಾಡುಗಳೊಂದಿಗೆ ಮಾಧ್ಯಮದವರ ಮುಂದೆ ಬಂದಿತ್ತು ಚಿತ್ರತಂಡ.

ಮುಖ್ಯವಾಗಿ ಸೆಸ್ಪನ್ಸ್, ಹಾರರ್ ಅಂಶಗಳನ್ನು ಹೊಂದಿರುವ ಚಿತ್ರದಲ್ಲಿ ನವಿರಾದ ಪ್ರೀತಿ, ತಾಯಿ ಮಗಳ ಬಾಂಧವ್ಯದ ಕಥೆಯೂ ಇದೆ. ಅಲ್ಲದೆ ಹಾರವೊಂದು ಪಾತ್ರವಾಗಿ ಮೂಡಿಬಂದಿದ್ದು, ಸತ್ಯ ನ್ಯಾಯಕ್ಕೆ ಎಂದಿಗೂ ಗೆಲುವು ಸಿಗಲಿದೆ ಎಂಬುದನ್ನು ಅದು ಮನವರಿಕೆ ಮಾಡಿಕೊಡುತ್ತಿದೆ. ಕೀರ್ತಿಕೃಷ್ಣ ಹಾಗೂ ನಿಖಿತಾಸ್ವಾಮಿ ಮತ್ತು ಮಧುಬಾಲ ಮುಖ್ಯ ಪಾತ್ರದಲ್ಲಿದ್ದಾರೆ. ಇವರೊಂದಿಗೆ ಬಾಲಿವುಡ್ ನಟರಾದ ಪ್ರದೀಪ್‌ರಾವುತ್, ಶಾಹುರಾಜ್‌ಶಿಂಧೆ, ಮಗಧೀರ ಖ್ಯಾತಿಯ ದೇವ್‌ಗಿಲ್ ಅಲ್ಲದೆ ಕನಕಪುರದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ವಿವರಗಳು ಬಂದವು.

ಬೆಂಗಳೂರು, ಮಂಗಳೂರು, ಕನಕಪುರ, ಪಾವಗಡ ಹಾಗೂ ಇತರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ರಾಜ್‌ಕಿರಣ್, ಛಾಯಾಗ್ರಹಣ ಜಯರಾಮ್, ಸಂಕಲನ ಸೀನು, ನೃತ್ಯ ಬಾಲಕೃಷ್ಣ-ಗಂಗಮ್‌ರಾಜು, ಸಂಭಾಷಣೆ ಗೋಪಿಕಿರಣ್ ಅವರದಾಗಿದೆ.

ಏಳು ಸಾಹಸಗಳಿಗೆ ದೇವರಾಜು ಕೆಲಸ ಮಾಡಿದ್ದಾರೆ. ಸಿರಿ ಮ್ಯೂಸಿಕ್ ಸಂಸ್ಥೆಯು ಹಾಡುಗಳನ್ನು ಹೊರತಂದಿದೆ. ಪುಷ್ಪ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿದ್ದಗೊಂಡಿರುವ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸದ್ಯದಲ್ಲೆ ಏಕಕಾಲಕ್ಕೆ ಬಿಡುಗಡೆ ಕಾಣುತ್ತಿದೆ.

Social Share :

ಬುಕ್ಕಾಪಟ್ಣ ವಾಸು ಹೊಸ ಕನಸು ಕ್ರಿಯೇಟಿವ್ ಟೈಮ್ಸ್ ಇಂಡಿಯಾ

Social Share :

ಚಿತ್ರರಂಗದಲ್ಲಿ ಕನಸು ಕಾಣುವವರ ಜೊತೆಗೆ ಅದನ್ನು ಅನುಷ್ಟಾನಕ್ಕೆ ತರುವ ಕನಸುಗಾರರು ಇರುತ್ತಾರೆ. ಸುಮಾರು 30 ವರ್ಷಗಳ ಕಾಲ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಿರ್ದೇಶನ, ಛಾಯಾಗ್ರಾಹಕ ಹಾಗೂ ತಂತ್ರಜ್ಞರಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಾ ಬಂದ ಬುಕ್ಕಾಪಟ್ಣ ವಾಸು ಈ ಸಾಹಸಗಾಥೆಯ ನಾಯಕ.

ಬೆಂಗಳೂರಿನ ನಾಗರಬಾವಿಯಲ್ಲಿ ಅವರು ಸ್ನೇಹಿತರ ಜೊತೆ ಸೇರಿ ಅತ್ಯಾಧುನಿಕ ಸ್ಟುಡಿಯೋ ನಿರ್ಮಾಣ ಮಾಡಿದ್ದು, ಅದು ಜಾಹಿರಾತು ಹಾಗೂ ಚಿತ್ರ ರಂಗದ ಸ್ನೇಹಿಯಾಗಿ ಕಾರ್ಯನಿರ್ವಾಹಿಸಲಿದೆ. ಅಂದ ಹಾಗೆ ‘ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಪ್ರೈ ಲಿ.’ ಎಂಬುದು ಹೆಸರು. ಸಿನಿಮಾ ನಿರ್ಮಾಣದ ವಿವಿಧ ಹಂತಗಳಲ್ಲಿ, ಜಾಹಿರಾತು ನಿರ್ಮಾಣ ಮತ್ತು ಪ್ರಚಾರ ಇಂತಹ ವಿಷಯಗಳಲ್ಲಿ ಸ್ಟುಡಿಯೋ ಕ್ರಿಯಾಶೀಲರಿಗೆ ನೆರವಾಗಲಿದೆ.

ಕನ್ನಡದ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಸುಮಾರು 30 ವರ್ಷಗಳ ಕಾಲ ಬರಹಗಾರ, ಧಾರಾವಾಹಿ ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಬುಕ್ಕಾಪಟ್ಟಣ ವಾಸು, ಈಗಾಗಲೇ ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಅವರಿಗೆ ಗೆಳೆಯ ಶ್ರೀಸಾಯಿಕೃಷ್ಣ ನೆರವು ನೀಡಿದ್ದಾರೆ. ಇದರ ಉದ್ಘಾಟನಾ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನೆರವೇರಿತು. ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ದೊಡ್ಡರಂಗೇಗೌಡ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ವಾಣಿಜ್ಯಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ ವಿ.ಮನೋಹರ್, ಭಾ.ಮ.ಹರೀಶ್, ಭಾ.ಮ.ಗಿರೀಶ್ ಹಾಗೂ ನಟಿ ಭವ್ಯಶ್ರೀ ರೈ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಸೌಂಡ್ ಎಂಜಿನಿಯರ್ ಪಳನಿ ಹಾಗೂ ಇನ್ನಿತರ ತಂತ್ರಜ್ಞರು ವಾಸು ಅವರ ಜೊತೆ ಕೈ ಜೋಡಿಸಿದ್ದಾರೆ.

ಕನ್ನಡದ ಮಟ್ಟಿಗೆ ಇದು ವಿಶೇಷವಾಗಿದೆ. ಏಕೆಂದರೆ ತೆಲುಗಿನಲ್ಲಿ ಸ್ಟಾರ್ ನಟರೇ ಹೆಚ್ಚು ಸ್ಟುಡಿಯೋ ಸ್ಥಾಪಿಸಿದ್ದಾರೆ. ತಮಿಳು, ಮಲಯಾಳಂನಲ್ಲಿಯೂ ಸ್ಟುಡಿಯೋ ಕಟ್ಟುವ ಉತ್ಸಾಹವನ್ನು ಮುಖ್ಯ ನಟರೇ ತೋರುತ್ತಾರೆ. ಆದರೆ ಒಬ್ಬ ನಿರ್ದೇಶಕ ಇಂತಹ ಸ್ಟುಡಿಯೋ ಮಾಡಿರುವುದು ಅಚ್ಚರಿ ಎಂದವರು ಹಿರಿಯ ನಿರ್ದೇಶಕ ಓಂ.ಸಾಯಿಪ್ರಕಾಶ್.

ಬುಕ್ಕಾಪಟ್ಣ ವಾಸು ಅವರ ಗುರುಗಳೆಂದೇ ಕರೆಸಿಕೊಳ್ಳುವ ಡಾ.ದೊಡ್ಡರಂಗೇಗೌಡರು, ನನ್ನ ವಾಸು ಸಂಬಂಧ ತುಂಬಾ ಹಳೆಯದು, ಕುಂಕುಮ ಭಾಗ್ಯ ಎನ್ನುವ ಮೆಗಾಸೀರಿಯಲ್‌ಗೆ ನನ್ನಿಂದ 11 ಹಾಡುಗಳನ್ನು ಬರೆಸಿದ್ದರು. ಅವರ ಒಡನಾಟ ನಿರಂತರ. ಈಗಲೂ ಜವಾಬ್ದಾರಿ ಹೊರಿಸಿದ್ದಾರೆ ಎಂದರು. ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಸಿಗುವಂಥ ಸ್ಟುಡಿಯೋ ಸ್ಥಾಪಿಸುವ ಮೂಲಕ ಹೊಸ ಸಾಹಸವನ್ನು ವಾಸು ಮಾಡಿದ್ದಾರೆ ಎಂದವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್. ಸಂಗೀತ ನಿರ್ದೇಶಕ ವಿ.ಮನೋಹರ್ ಸಹ ಶುಭ ಹಾರೈಸಿದರು,

Social Share :

ಎಚ್ಚರ ಇದು ವಾಮಚಾರದ ಸಾವಿನ ಸೂಚಿ ಸಕೂಚಿ

Social Share :

ಆ ಒಂದು ವಾಮಾಚಾರದ ಹೆಸರು ಹೇಳಿದರೆ ಸಾವಿನ ಬಾಗಿಲು ತಟ್ಟಬಹುದಂತೆ..

ಹಾಗೆಂದು ಹೇಳಿಕೊಂಡಿತು ಚಿತ್ರತಂಡ. ನಿರ್ಮಾಣದ ಹಂತದಲ್ಲಿ ಎದುರಾದ ಅಡೆತಡೆಗಳ ಜೊತೆಗೆ ಅನೇಕರನ್ನು ಕಳೆದುಕೊಳ್ಳಬೇಕಾಯಿತು ಎಂಬ ವಿವರವೂ ಲಭ್ಯ ವಾಯಿತು. ಚಿತ್ರದ ನಿರ್ದೇಶಕ ಬಿ.ಅಶೋಕ ಚಕ್ರವರ್ತಿ
ವಾಮಾಚಾರದ ಭಯಾನಕತೆಯನ್ನು ವಿವರಿಸಿದರು..

ಅಂದ ಹಾಗೆ ಈ ಚಿತ್ರದ ಹೆಸರು ಸಕೂಚಿ. ಇದಕ್ಕೆ ಸಾವಿನ ಸೂಚಿ ಎಂಬ ಟ್ಯಾಗ್ ಲೈನ್ ಸಹ ಇದೆ. ಬೆಂಗಳೂರಿನ ಕಲಾವಿದರ ಸಂಘದ ಆವರಣದಲ್ಲಿ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಯಾನಕತೆಯ ಅನುಭವಗಳನ್ನು ತೆರೆದಿಟ್ಟಿತು ಚಿತ್ರತಂಡ.

ಡಯಾನ ಮೇರಿ ಚಿತ್ರದ ನಾಯಕಿ. ಖುಷಿ ರವಿ,‌ ನಿರ್ದೇಶಕ ಮಹೇಶ್ ಬಾಬು, ಬಿಜೆಪಿ ಮುಖಂಡ ಲಕ್ಷ್ಮೀಕಾಂತ್ ಹಾಗೂ ಇತರರು ವೇದಿಕೆಯಲ್ಲಿದ್ದರು.

ಕೆಲವು ವರ್ಷಗಳ ಹಿಂದೆ ಶೃಂಗೇರಿಯಿಂದ ಕೊಪ್ಪಕ್ಕೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಅಲ್ಲೇ ಒಂದು ರೆಸಾರ್ಟ್ ನಲ್ಲಿ ರಾತ್ರಿ ಸಿಡಿಲಿನ ಅಬ್ಬರದ ನಡುವೆ ತುಂತುರು ಮಳೆ. ಈ ವೇಳೆ ಭಾರೀ ಸಿಡಿಲಿನ‌ ಶಬ್ದಕ್ಕೆ ನೂರಡಿ ಎತ್ತರದ ಮರದ‌ ಕೊಂಬೆ ಮುರಿದು ಬಿತ್ತು.‌ ಭಯಂಕರ ಶಬ್ದ. ಆನಂತರ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ವಿಜಯನಗರದಲ್ಲಿ ಮತ್ತೆ ಅದೇ ಶಬ್ದ ಕೇಳಿ ಬಂತು. ಈಗಲೂ ಆ ಶಬ್ದ ಕಿವಿಯಲ್ಲೇ ಇದ್ದ ಹಾಗೆ ಇದೆ. ನಂತರ ಅದರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದಾಗ ಒಂದು ಇದೊಂದು ವಾಮಾಚಾರದ ಪ್ರಯೋಗ ಎಂಬುದು ತಿಳಿದು ಬಂತು ಎಂದು ವಿವರಿಸಿದರು ನಿರ್ದೇಶಕರು.

ಪ್ರೇತಾತ್ಮಗಳಿಗೆ ಪ್ರೇತಾತ್ಮ ಈ ಸಕೂಚಿ ಎಂಬುದು ಪ್ರೇತಾತ್ಮಗಳಿಗೆ ಪ್ರೇತಾತ್ಮ.. ಈ ವಿಷಯ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇದು ನಿರ್ಮಾಪಕರಿಗೆ ಇಷ್ಟವಾಗಿ ಈಗ ಸಿನಿಮಾ ಸಿದ್ದವಾಗಿದೆ ಎಂದರು ನಿರ್ದೇಶಕ ಅಶೋಕ್ ಚಕ್ರವರ್ತಿ.

ನಿರ್ದೇಶಕರು ಕಥೆ ಹೇಳಿದಾಗ, ಬರೀ ಹಾರಾರ್ ಕಥೆ ಇರಬಹುದು ಎಂದುಕೊಂಡಿದ್ದೆ. ಆದರೆ ಸಕೂಚಿ ಕಮರ್ಷಿಯಲ್ ಸಿನಿಮಾ. ಇದರಲ್ಲಿ ಹಾರಾರ್, ಪ್ರೇಮಕಥೆ ಎಲ್ಲವೂ ಇದೆ ಎಂಬುದು ಮುಖ್ಯಪಾತ್ರದಲ್ಲಿರುವ ತ್ರಿವಿಕ್ರಮ ಅವರ ಮಾತು.

ಮುಖ್ಯ ಪಾತ್ರಧಾರಿ ಡಯನಾ ಕೂಡ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಸಂಗೀತ ನಿರ್ದೇಶಕ ಗಣೇಶ್ ಗೋವಿಂದಸ್ವಾಮಿ ಸಂಗೀತದ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕ ಬಿ.ಸಿ.ಅಶ್ವಿನ್, ಕ್ರಿಯೇಟಿವ್ ಹೆಡ್ ಹಾಗೂ ಕಾರ್ಯಕಾರಿ ನಿರ್ಮಾಪಕ ಚಂದ್ರಶೇಖರ್ ಕೆ.ಆರ್, ಸಹ ನಿರ್ಮಾಪಕರಾದ ಮಹವೀರ್ ಪ್ರಸಾದ್ ಹಾಗೂ ಮಧುಕರ್ ಇದ್ದರು.

Social Share :

ಹೆಸರು ಕಡಲ ತೀರದ ಭಾರ್ಗವ ಆದರೆ ಶಿವರಾಮ ಕಾರಂತರಲ್ಲ

Social Share :

ಚಿತ್ರದ ಹೆಸರು ‘ಕಡಲ ತೀರದ ಭಾರ್ಗವ’ ಆದರೆ ಅದು ಶಿವರಾಮ ಕಾರಂತರಲ್ಲ..!
ಇಂತಹ ಶೀರ್ಷಿಕೆ ಕೊಡುವಾಗ ವಾಣಿಜ್ಯ ಮಂಡಳಿಯಲ್ಲಿ ಕುಳಿತವರು ಏಕೆ ಹಿಂದೆ ಮುಂದೆ ನೋಡುವುದಿಲ್ಲ ಎಂಬಷ್ಟರ ಮಟ್ಟಿಗೆ ಶೀರ್ಷಿಕೆಯೇ ಪ್ರಶ್ನೆಗಳನ್ನು ಒಡ್ಡುತ್ತದೆ..

ಸಮಾಧಾನದ ವಿಷಯವೆಂದರೆ, ಕಡಲ ತೀರದ ಭಾರ್ಗವ ಚಿತ್ರತಂಡ ಕ್ರಿಯಾಶೀಲ ಕೆಲಸದಲ್ಲಿ ಒಂದಷ್ಟು ವಿಭಿನ್ನ ನೆಲೆಯನ್ನು ಕಾಯ್ದುಕೊಂಡಿದೆ. ಭಾರ್ಗವ ಎಂಬುದು ಪರುಶರಾಮನಿಗೆ ಇರಬಹುದಾದ ಹೆಸರು. ಕಡಲ ತೀರದ ಭಾರ್ಗವ ಎಂಬುದಕ್ಕೆ ನಮ್ಮ ಬಳಿ ಅನೇಕ ಸಮರ್ಥನೆಗಳಿವೆ ಎಂದು ಹೇಳಿಕೊಂಡಿತು ಚಿತ್ರತಂಡ.

ಚಿತ್ರದ ಮುಖ್ಯ ಪಾತ್ರದಲ್ಲಿರುವ ಭರತ್ ಗೌಡ ಹಾಗೂ ವರುಣ್ ರಾಜ್ ನಿರ್ಮಾಪಕರೂ ಆಗಿದ್ದಾರೆ. ನಿರ್ಮಾಣದ ವಿಷಯದಲ್ಲಿ ಎದುರಾದ ಅಡ್ಡಿ ಆತಂಕಗಳ ಬಗ್ಗೆ ಹೇಳುತ್ತಲೇ.. ಇಬ್ಬರೂ ದೈಹಿಕ ಫಿಟ್ ನೆಸ್ ವಿಶೇಷತೆಗಳನ್ನು ಹೇಗೆ ಕಾಯ್ದುಕೊಳ್ಳಲಾಗಿದೆ ಎಂಬುದನ್ನು ವಿವರಿಸಿದರು.

ಕೊರೊನಾ ಆತಂಕದಲ್ಲಿ ಕಷ್ಟಗಳು ಎದುರಾದವು. ಸಿನಿಮಾ ಒಂದು ತಪ್ಪಸ್ಸು ಯಾವುದಕ್ಕೂ ಹೆದರಬೇಡಿ ಎಂಬ ಹಿತೈಷಿಗಳ ಮಾತನ್ನು ಉಲ್ಲೇಖಿಸಿ ಹೇಗೋ ಕಷ್ಟಪಟ್ಟು ಸಿನಿಮಾ ಮಾಡಿ ಮುಗಿಸಿದ್ದೇವೆ ಎಂದರು ಭರತ್ ಗೌಡ.

ನನ್ನದು ಅಚ್ಚರಿಯ ಪಾತ್ರ ಎಂದರು ಭಾರ್ಗವನ ಪಾತ್ರ ನಿರ್ವಹಿಸಿರುವ ವರುಣ್ ರಾಜ್.
ಪ್ರೀತಿ ಪ್ರೇಮ ಲಿವಿಂಗ್ ರಿಲೇಶನ್ಸ್ ಇಂತಹ ವಿಷಯಗಳ ಬಗ್ಗೆ ಸಿನಿಮಾ ಕುತೂಹಲ ಕಾಯ್ದುಕೊಂಡು ಅಚ್ಚರಿಯ ತಿರುವು ನೀಡುತ್ತಾ ಹೋಗುತ್ತದೆ ಎಂಬ ವಿವರಗಳು ಬಂದವು.

ಹಿರಿಯ ನಟ ಶ್ರೀಧರ್ ಅವರು ಮಾನಸಿಕ ತಜ್ಞ ಪಾತ್ರ ಮಾಡಿರುವುದಾಗಿ ಮಾಹಿತಿ ನೀಡಿದರು. ನಟಿ ಶೃತಿ ಪ್ರಕಾಶ್, ನನ್ನದು ಮುದ್ದಾದ ಪಾತ್ರ ಎಂದರು.
ಮತ್ತೊಬ್ಬ ನಟ ರಾಘವ್ ನಾಗ್ ಪೊಲೀಸ್ ಪಾತ್ರ ಎರಡು ಮೂರು ಶೆಡ್ ಗಳಲ್ಲಿ ಬರುತ್ತದೆ ಎಂಬ ವಿವರ ಕೊಟ್ಟರು. ಅಶ್ವಿನ್ ಹಾಸನ್ ಅವರಿಗೂ ವಿಶೇಷ ಪಾತ್ರವಿದೆ. ಆದರೆ ನಾನು ಆಡಿಷನ್ ನಲ್ಲಿ ಆಯ್ಕೆಯಾದವನು ಎಂಬ ವಿವರ ಅವರಿಂದ ಬಂತು..

ಚಿತ್ರದ ಮತ್ತೊಂದು ಅಚ್ಚರಿ ಎಂದರೆ ಅದು ಹಾಡುಗಳು.. ಅನಿಲ್ ಸಿ.ಜೆ
ಸಂಗೀತ ನಿರ್ದೇಶಕ. ಚಿತ್ರದಲ್ಲಿ ಒಂಬತ್ತು ಹಾಡುಗಳಿದ್ದು ಎಲ್ಲವೂ ಲೈವ್ ನಲ್ಲಿ ಮಾಡಿದ ವಿವರ ಬಂತು. ಅಂದ ಹಾಗೆ ಅಶ್ವಿನಿ ರೆಕಾರ್ಡಿಂಗ್ ಸಂಸ್ಥೆ ಆಡಿಯೋ ಹೊರತಂದಿದ್ದು, ಅಶ್ವಿನಿ ರಾಮ್ ಪ್ರಸಾದ್ ಹಾಡುಗಳ ಬಗ್ಗೆ ಹೊಗಳಿದರು. ಸಂಕಲನಕಾರ ಉಮೇಶ್, ಸಹ ನಿರ್ಮಾಪಕಿ ವೀಣಾ ಜಿ.ಕುಮಾರ್ ಇದ್ದರು.
ನಿರ್ದೇಶಕ ಪನ್ನಗಾ ಸೋಮಶೇಖರ್ ಚಿತ್ರಕ್ಕೆ ಕಡಲ ತೀರದ ಭಾರ್ಗವ ಎಂಬ ಶೀರ್ಷಿಕೆ ಏಕೆ ಎಂಬುದನ್ನು ಸಮರ್ಥಿಸಿಕೊಂಡರು.

Social Share :