Snehapriya.com

June 7, 2025

ವಿದ್ಯಮಾನ

ಕಲಾವಿದರಿಗೆ ರಾಜ್ಯ ಸೇವಾ ರತ್ನ ಪ್ರಶಸ್ತಿ

Social Share :

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್,
ಹಿರಿಯ ಕಲಾವಿದರಾದ ಭಾನು ಪ್ರಕಾಶ್, ಕೃಷ್ಣ ಪ್ರಸಾದ್, ಅನಿಕ ಪವಿತ್ರ ರೆಡ್ಡಿ, ಚಿತ್ರಾ ಹೊನ್ನಾವರ ಸೇರಿ 60 ಮಂದಿ ಕಲಾವಿದರಿಗೆ ರಾಜ್ಯ ಸೇವಾ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ.

ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಕಲಾಮಂದಿರದಲ್ಲಿ ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಿರಿಯ ಕಲಾವಿದರಿಗೆ ಇದೇ ಏಪ್ರಿಲ್ 30ರಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ

ಕೆಪಿಸಿಸಿ ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ರವಿ ಸಂತು ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್, ಉಪಾಧ್ಯಕ್ಷ ಜಿ.ಎನ್ ರವಿಕುಮಾರ್, ಹಿರಿಯ ನಿರ್ದೇಶಕ ಜೋಸೈಮನ್, ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಕಲಾವಿದರಾದ ಜಯಸಿಂಹ, ನೀನಾ ಪಾಟೀಲ್, ರಾಜಲಕ್ಷ್ಮಿ ಗಂಗಾಧರ್, ರವಿರಾಜ್, ಭೋಜಣ್ಣ, ಓಂಕಾರ್ ಆನಂದ್, ರಘುನಾಥ, ಕೃಷ್ಣ ಬಲಭದ್ರಿ ಹಾಗೂ ಇನ್ನೂ ಹಲವಾರು ಹಿರಿಯ ಕಲಾವಿದರಿಗೆ ‘ರಾಜ್ಯ ಸೇವಾ ರತ್ನ’ ಪ್ರಶಸ್ತಿ ನೀಡಲಾಗುತ್ತಿದೆ.

ಇದೇ ಸಂದರ್ಭದಲ್ಲಿ ವರನಟ ಡಾ.ರಾಜ್ ಕುಮಾರ್ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಗೀತ ನಮನ ಕಾರ್ಯಕ್ರಮವೂ ನಡೆಯಲಿದೆ.

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷ ಡಾ.ಟಿ ಶಿವಕುಮಾರ್ ನಾಗರನವಿಲೆ ಇಡೀ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದಾರೆ.

🖋ವಿ.ನಂಜುಂಡಪ್ಪ

Social Share :

ಕೊವೀಡ್ಮೂರನೇ ಅಲೆಯ ವಿಶೇಷ ಬುಲಿಟಿನ್

Social Share :

#ಜ್ವರದಿಂದಹೊದ್ದುಮಲಗಿದೆ_ಕರ್ನಾಟಕ.
#ಜನ_ಬುದ್ದಿವಂತರಾಗಿದ್ದಾರೆ.
#ಖಾಸಗೀಆಸ್ಪತ್ರೆಗಳೆಲ್ಲಭಣ_ಭಣ…

ಕೊವೀಡ್ಮೂರನೇ ಅಲೆಯ ವಿಶೇಷ ಬುಲಿಟಿನ್

ದಕ್ಷಿಣ ದ್ರುವದೀ ಉತ್ತರ ದ್ರುವಕೂ ಚುಂಬಕ ಗಾಳಿಯೂ ಬೀಸುತ್ತಿದೆ……

ಇದು‌ ಕೊವೀಡ್ ಮೂರನೇ ಜ್ವರದ ಅಲೆ ಈ ಅಲೆಗೆ ಇಡೀ ಕರ್ನಾಟಕ ಹೊದ್ದು ಮಲಗಿದೆ
ಮನೆಯಲ್ಲಿ ಎರಡು‌ ಮೂರು ನಾಲ್ಕು….ಹೀಗೆ
ಜನರೆಲ್ಲ ಶೀತ,ಜ್ವರ,ಗಂಟಲು,ನೋವು,ಕೆಮ್ಮು ಅಂತ್ಹೇಲ್ಲ ಒಂದೊಂದು ಕೋಣೆ ಸೇರಿದ್ದಾರೆ. ಎಲ್ಲರ ಮನೆಗಳೂ ಈಗ #ಡೋಲಾಯಣ….ಸಣ್ಣ ಸಣ್ಣ ಕ್ಲಿನಿಕ್ ಗಳ ತುಂಬೆಲ್ಲ #ಜನವೋ ಜನ……

ಒಂದು ಮಾಹಿತಿ ಪ್ರಕಾರ ಕರ್ನಾಟಕದ ಶೇ 92-93 ರಷ್ಡು ಜನರು ಈ ಮೂರನೇ ಅಲೆಯ ಕೊವೀಡ್ ಲಕ್ಷಣಗಳಿಂದ ಪೀಡಿತರಾಗಿದ್ದಾರೆ. ಆದರೆ ದೈರ್ಯವಾಗಿ ಸಿಕ್ಕ ಸಿಕ್ಕ ಮಾತ್ರೆ ನುಂಗುತಾ ಬಿಸಿನೀರು ಕುಡಿಯುತಾ, ಇದ್ದುದ್ದರಲ್ಲಿ ಒಳ್ಳೆ ಊಟ ಮಾಡಲು ಪ್ರಯತ್ನಿಸುತ್ತಾ ಅದರಲ್ಲೆ ನೆಮ್ಮದಿ ಕಂಡುಕೊಳ್ಳಲು ಬಯಸುತ್ತಿದ್ದಾರೆ….ಅಷ್ಟರ ಮಟ್ಟಿಗೆ ಜನ ಬುದ್ದಿವಂತರಾಗಿದ್ದಾರೆ.

ಆದರೆ ಈ #ಮೂರನೇ ಅಲೆಯಲ್ಲಿ ಲಕ್ಷಾಂತರ ಕೇಸುಗಳು ಬರುತ್ತವೆ ಎಂದು ಬಕಪಕ್ಷಿಗಳಂತೆ ತಮ್ಮ ಅಂಗಡಿಗಳನ್ನು #ಓಪನ್ ಮಾಡಿಕೊಂಡು ಕುಳಿತಿರುವ #ಖಾಸಗೀ_ಆಸ್ಪತ್ರೆಗಳಿಗೆ ಮಾತ್ರ ತೀವ್ರ #ನಿರಾಶೆ ಯಾಗುತ್ತಿದೆ.ಯಾಕೆಂದರೆ ಜನರ ಅವರ ಕಡೆ #ತಲೆಹಾಕಿಕೂಡ ಮಲಗುತ್ತಿಲ್ಲ.ಖಾಸಗೀ ಆಸ್ಪತ್ರೆಗಳು ಪಾಪ ಸರ್ಕಾರದ ಮೇಲೆ ಒತ್ತಡ ತಂದು ತಮ್ಮ ದಿನದ ಬಾಡಿಗೆ ಮತ್ತು ಚಿಕಿತ್ಸೆ ದರವನ್ನು ದಿವೊಂದಕ್ಕೆ ರೂ 15 ಸಾವಿರದಿಂದ 25 ಸಾವಿರ ಎಂದು ನಿಗದಿಪಡಿಸಿ #ಜಾಹೀರಾತು ಕೂಡ ನೀಡಿದ್ದರು.‌ಸಾಲದಬಂತೆ ಹಳೆಯ #ಲಸಿಕೆಗಳನ್ನು ಪ್ರಿಡ್ಜ ಗಳಲ್ಲಿ #ಜತನದಿಂದ ಕಾಪಾಡಿಕೊಂಡಿದ್ದರು ಮತ್ತು #ಆಕ್ದಿಜನ್ ಸಿಲೆಂಡರ್ ಗಳನ್ನು #ಯುದ್ದೋಪಾಧಿಗಳಲ್ಲಿ ಸನ್ನದ್ದವಾಗಿಟ್ಟುಕೊಂಡಿದ್ದರು.ಆದರೆ ಈ ಮೂರನೇ ಅಲೆ ಅವರಿಗೆ #ತೀವ್ರ ಸಂಕಷ್ಡ ತಂದಿದೆ.

ಇನ್ನೂ ಇಂತಹವರ ನೆರವಿಗಾಗಿ ಅವರಿಗೆ ಕೋಟ್ಯಾಂತರ ರೂಪಾಯಿ ಲಾಭ‌ಮಾಡಿಕೊಡಲು ನಿಂತಿದ್ದ ಸರ್ಕಾರದ ಮಂತ್ರಿ ಮಹೋದಯರಿಗೆ,ಶಾಸಕರಿಗೆ‌ಮತ್ತು ಐಎಎಸ್ ಅಧಿಕಾರಿಗಳಿಗೂ ಜನರ ಈ ವರ್ತನೆ ತೀವ್ರ‌ನಿರಾಸೆ ಮತ್ತು ನಷ್ಟ ಉಂಟು‌ಮಾಡಿದೆ.

ಇಷ್ಟಾದರೂ ರಾಜ್ಯದ ಲಕ್ಷಾಂತರ ಜನರು ಕೊವೀಡ್ ಲಕ್ಷಣಗಳಿಂದ ಭಾಧಿತರಾಗಿದ್ದರೂ #ಟೆಸ್ಟ್ ಗಳನ್ನು ಮಾಡಿಸಿಕೊಳ್ಳುತ್ತಿಲ್ಲ. ಬದಲಾಗಿ ತಮ್ಮ ಗೆಳೆಯರು ಸುತ್ತಮುತ್ತಲಿನ ಕಡಿಮೆ ದರದ ವೈದ್ಯರಿಗೆ ತೋರಿಸಿ ಇಲ್ಲವೇ ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರವಾಗುವ ಜನಪರ ವೈಧ್ಯರ ಉಪನ್ಯಾಸ ಕೇಳಿ ಮೆಡಿಕಲ್ ಶಾಫ್ ಗಳಲ್ಲಿ ಸಿಗುವ ಹತ್ತಿಪ್ಪತ್ತು ರೂಗಳಿಂದ ಮಾತ್ರೆ ಔಷಧಿಗಳಿಂದ ಗುಣವಾಗುತ್ತಿದ್ದಾರೆ…..
ಜನ ಬುದ್ದಿವಂತರಾದರೆ ಶೋಷಕರ ಆಟ ಏನು ನಡೆಯದು
ಇದು #ಕೊವೀಡ್ಮೂರನೇಅಲೆಯವಿಶೇಷಬುಲಿಟಿನ್

ಆರ್ ಮಮತಾ.

Social Share :

ಸ್ನೇಹಪ್ರಿಯಗೆ ಒಂದು ವರ್ಷ

Social Share :

ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಅಲ್ಲಿಂದ ಹೊರ ಬೀಳುವುದು ಹೊಸದೇನು ಅಲ್ಲ; ಅದರಲ್ಲಿಯೂ ತಬ್ಬಲಿತನ ಜೊತೆಗೆ ಕಟ್ಟಿಕೊಂಡ ನನ್ನಂಥವರಿಗೆ ತೀರಾ ಸಾಮಾನ್ಯವಾದ ವಿಷಯ. ಅದರಲ್ಲಿಯೂ ಮುಖ್ಯ ವಾಹಿನಿ ಪತ್ರಿಕೋದ್ಯಮ ಬಿಟ್ಟು ಆಚೆ ಇರುವುದೆಂದರೆ ಅದು ನೀರಿನಿಂದ ಮೀನನ್ನು ಎತ್ತಿ ಹೊರ ಹಾಕಿದಂತೆ.

ಆದರೆ ಈ ಬಾರಿ ಎಲ್ಲವೂ ಗಂಭೀರದ ವಿಷಯವಾಗಿತ್ತು. ಪತ್ರಿಕೆಗಳಿಂದ ಹೊರಬಿದ್ದವರ ಸಂಖ್ಯೆಯೂ ಹೆಚ್ಚಾಗಿ ನನ್ಬೊಬ್ಬನಿಗೇ ಈ ರೀತಿ ಆಗಿಲ್ಲವಲ್ಲ ಎಂಬ ತಾತ್ಕಾಲಿಕ ಸಮಾಧಾನವೂ ಇತ್ತು.
ಇದೇ ವೇಳೆ ಗೆಳೆಯರೊಬ್ಬರು ಈಗ ಮುಖ್ಯ ವಾಹಿನಿಯೇ ಸಾಮಾಜಿಕ ಜಾಲ ತಾಣ ಎಂಬ ಅಪರೂಪದ ವಾದವನ್ನು ಮುಂದಿಟ್ಟರು. ತಕ್ಷಣಕ್ಕೆ ಎಲ್ಲಿಗೆ ಬೇಕಾದರೂ ತಲುಪಬಹುದಾದ ಸಾಮರ್ಥ್ಯವೇ ಅದರ ಹೆಗ್ಗಳಿಕೆ. ಅದರ ಪರಿಣಾಮವೇ ವೆಬ್ ಸೈಟ್, ವೆವ್ ಪೋರ್ಟಲ್ ಗಳ ಸೃಷ್ಟಿ. (ಈಗಂತೂ ಯು ಟ್ಯೂಬ್ ಚಾನೆಲ್ ಗಳದ್ದೇ ಪಾರುಪತ್ಯ).

ಸರಿ; ಜೀವನಕ್ಕೆ ಒಂದು ವೆಬ್ ಸೈಟ್ ಕೂಡ ನೆರವಾಗಬಹುದು ಎಂಬ ಕಲ್ಪನೆ ಹುಟ್ಟಿಕೊಂಡಿತು. ಇದರ ಹೊರತು ಬೇರೆ ಆಯ್ಕೆ ಮುಂದೆ ಇರಲಿಲ್ಲ.. ಈ ದಾರಿಯಲ್ಲಿ ಚಿಂತನೆಯೇನೋ ನಡೆದಿತ್ತು. ಆದರೆ ಹೇಗೆ ಹಣ ಕಾಸು ಎಲ್ಲಾ ಹೇಗೆ ಎಂಬುದು ಮಾತ್ರ ಪ್ರಶ್ನೆಯಾಗೇ ಉಳಿದಿತ್ತು.

ಇದರ ಮಧ್ಯೆ ಕಳೆದ ವರ್ಷವೇ ವೆಬ್ ಸೈಟ್ ಮಾಡಲು ಡ್ರಾಫ್ಟ್ ಮಾಡಿದ ಅನುಭವವನ್ನು ಜೊತೆಗೆ ಇಟ್ಟುಕೊಂಡಿದ್ದೆ. ಸಿನಿಮಾದ ಸಲುವಾಗಿಯೇ ‘ಸ್ನೇಹಚಿತ್ರ ಡಾಟ್ ಕಾಮ್’ ಎಂಬ ವೆಬ್ ಸೈಟ್ ರೆಡಿ ಮಾಡಿ ಅರ್ಧಕ್ಕೆ ಬಿಟ್ಟಿದ್ದೆ. ಹೆಸರು ಚೆನ್ನಾಗಿದೆ ಎಂದರು ಗೆಳೆಯರು.. ಲೋಗೋಗೆ ಗೆಳೆಯ ಚಂದ್ರು ಅಂದವಾದ ಡಿಸೈನ್ ಕೂಡ ಮಾಡಿಕೊಟ್ಟಿದ್ದರು. ಆದರೆ ಪತ್ರಿಕೆ ಕೆಲಸಗಳಲ್ಲಿ ಬಿಡುವಿರದ ಕಾರಣ ಅದನ್ನು ಮುಂದುವರೆಸಲು ಸಾಧ್ಯವಾಗದೇ ಸುಮ್ಮನಿದ್ದೆ.

ಈಗ ಕಾಲ ಈ ರೀತಿ ಬಂದಿದೆ ಏನು ಮಾಡುವುದು; ಬೇರೆ ದಾರಿ ಇಲ್ಲ..
ಬದುಕು ದೊಡ್ಡದು.. ಸಂಬಂಧಗಳು ಅದಕ್ಕಿಂತ ಮುಖ್ಯ. ಇವೆಲ್ಲಾ ನಿಭಾಯಿಸುವುದಕ್ಕೆ ಹಣವೇ ಥೈಲಿ..ಆದರೆ ಜೇಬು ಖಾಲಿ ಖಾಲಿ..
ಏನು ಮಾಡುವುದು..
ಆಗ ರೂಪುಗೊಂಡಿದ್ದೇ ‘ಸ್ನೇಹಪ್ರಿಯ ಡಾಟ್ ಕಾಮ್’…!

ಕಷ್ಟದಲ್ಲಿ ದೇವರು ಕೈ ಹಿಡಿಯುತ್ತಾನೆ ಎಂಬುದು ನಿಜ. ನನ್ನ ಕಷ್ಟಕ್ಕೆ ನೆರವಾದವನೂ ‘ಶ್ರೀಕೃಷ್ಣ’. ಅದೇ ಹೆಸರಿನ ಗೆಳೆಯ. ವೆಬ್ ಸೈಟ್ ಸಿದ್ಧವಾಯಿತು. ಚಟುವಟಿಕೆಗಳು ಆರಂಭವಾದವು. ಆದರೆ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ.. ಹೊಸದಾಗಿ ಆರಂಭವಾಗುವ ಚಾನೆಲ್ ಒಂದಕ್ಕೆ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ.. ಅದರಲ್ಲಿ ಹೊರಗಿನಿಂದಲೇ ಎಲ್ಲವನ್ನೂ ನಿಭಾಯಿಸುವ ಆಫರ್ ನಿರಾಕರಿಸುವ ಪ್ರಶ್ನೆಯೇ ಇಲ್ಲ.

ಮತ್ತೆ ಮೈ ಮರೆತೆ ಚಾನೆಲ್ (ವೆಬ್ ಚಾನೆಲ್..!!) ಕೆಲಸ ಹೆಚ್ಚು ಶ್ರದ್ಧೆಯಿಂದಲೇ ಕಾಯಕ ಮುಂದುವರಿಯಿತು. ಚಾನೆಲ್ ಮುಖ್ಯಸ್ಥರು ಮುಖ್ಯವಾಗಿ ಅದರ ಸಿಇಓ ಚೆನ್ನಾಗೇ ನೋಡಿಕೊಂಡರು. ಇದೇ ವೇಳೆ ಕೆಲವು ಅಪರೂಪದ ಕ್ಷಣಗಳು ಎದುರಾದವು. ಇನ್ನೇನು ಖುಷಿಗೆ ಪಾರವೇ ಇಲ್ಲ ಎನ್ನುವಾಗ ಮತ್ತೆ ನೀರಿನಿಂದ ಹೊರಬಿದ್ದ ಅನುಭವ. ಕೋವಿಡ್ ಎರಡನೇ ಅಲೆಯ ಪ್ರಭಾವ ಮತ್ತೆ ಬದುಕನ್ನು ನಿರಾಶಾ ಭಾವಗಳತ್ತ ತಳ್ಳಿತು.

ಮತ್ತೆ ದೇವರನ್ನು ಹುಡುಕುವ ಕಾರ್ಯ. ಹೇಗಾದರೂ ಕಾಪಾಡು ಎಂದು ಮೊರೆ ಹೋಗಿದ್ದೇ ಹೋಗಿದ್ದು.. ಅವನಿಗೇ.. ಈಗ ಸ್ಥಳವಿಲ್ಲ; ದೇವಾಲಯ ಬಾಗಿಲು ಹಾಕಿಕೊಂಡಿದೆ. ಇತ್ತ ಕಾಯಕದ ಬಾಗಿಲು ಹಾಕಿದೆ..
ಬದುಕು ಹೈರಾಣು.. ಓ ದೇವರೇ ಎಂದು ಪ್ರಾರ್ಥಿಸುವುದರ ಹೊರತು ಬೇರೆ ದಾರಿಗಳಿಲ್ಲ.. ಈ ಮನೆ ಬಾಡಿಗೆ, ಇಎಂಐನಂತಹ ಬಾಧೆಗಳು ಇಲ್ಲದಿದ್ದರೆ ಬದುಕು ಹೇಗೋ ನಡೆದೀತು. ಆದರೆ ಎಲ್ಲವೂ ಸರಿ ಇದ್ದಾಗ ಅಥವಾ ಭ್ರಮಾಧೀನ ಕ್ಷಣಗಳು ಸಾಲ ಮಾಡಿಸುತ್ತವೆ.. ಇನ್ನಷ್ಟು ಮತ್ತಷ್ಟು ಸುಧಾರಿಸಿದೆ ಜೀವನ ಎನ್ನಲು ಬೇಕಾಗಿರುವುದು ಹಣ. ಆದರೆ ಸ್ವಲ್ಪ ಹಾಸಿಗೆ ಬಿಟ್ಟು ಕಾಲು ಹೊರ ಚಾಚಿದರೆ..
ಹೌದು ಸಾಲವೆಂಬ ಶೂಲ..!

ಅದೃಷ್ಟಕ್ಕೆ ವೆಬ್ ಸೈಟ್ ಮಾಡಿಕೊಟ್ಟ ಗೆಳೆಯ ತಕ್ಷಣಕ್ಕೆ ಹಣ ಕೇಳಲಿಲ್ಲ.. ಹೇಗೋ ಕುಂಟುತ್ತಾ ಅದೂ ಒಂದು ವರ್ಷ ಸಾಗಿಸಿಬಿಟ್ಟಿದೆ. ಅಚ್ಚರಿ ಎಂದರೆ ವೆಬ್ ಸೈಟ್ ಓದುಗ ಬಳಗ ಹೆಚ್ಚಾಗಿದೆ. ವೇಗವಲ್ಲದ ಬೆಳವಣಿಗೆ ಯಲ್ಲಿಯೂ ಅದು ಓದುಗರನ್ನು ಮುಟ್ಟುವ ಪರಿ ಅಚ್ಚರಿ ತಂದಿದೆ. ಮತ್ತು ಉತ್ಸಾಹ ಇಮ್ಮಡಿಗೊಳಿಸಿದೆ. ಸಿನಿಮಾವನ್ನೇ ಹೆಚ್ಚು ಆವರಿಸಿಕೊಂಡಿದ್ದು ಈಗ ಎಲ್ಲದರ ಕಡೆ ಗಮನ ಹರಿಸಿದೆ. ಹಾಗಾಗಿ ಇನ್ನೊಂದು ವರ್ಷ ಪೂರೈಸುದರೊಳಗೆ ‘ಸ್ನೇಹಪ್ರಿಯ’ ಮನೆ ಮಾತಾಗಬಹುದು. ಅದು ನನ್ನ ದೊಡ್ಡ ಆಶಯ. ಅದಕ್ಕಾಗಿ ಶ್ರಮಪಡಲು ನಿಶ್ಚಯಿಸಿ ಆಗಿದೆ. ಕಾರ್ಯ ಮತ್ತು ಫಲ ಎರಡೂ ದೇವರಿಗೆ..
ಇದೇ ವೇಳೆ ‘ಓ ದೇವರೇ ಪ್ರಯತ್ನದ ಬೆಲೆ ತೆತ್ತಾಗ..

ನೀನು ಪ್ರತಿಯೊಂದನ್ನು ಅನುಗ್ರಹಿಸುತ್ತೀ..’ ಎಂಬ ಲಿಯೋನಾರ್ಡ್ ಡಾ.ವಿಂಚಿ ಮಾತು ನಿಜವಾಗಲಿ ಎಂಬುದು ಕನಸು..

🖋 ಸ್ನೇಹಪ್ರಿಯ ನಾಗರಾಜ್

Social Share :

ಪ್ರತಿಷ್ಠೆಯ ಬದುಕು ಮನೆಗಳು ಖಾಲಿ ಖಾಲಿ

Social Share :

ಉದ್ಯಾನನಗರಿ, ಹವಾ ನಿಯಂತ್ರಿತ ನಗರ ಎಂದೆಲ್ಲಾ ಕರೆಸಿಕೊಂಡು ಪ್ರಶಾಂತವಾಗಿದ್ದ ಬೆಂಗಳೂರು ಮಧ್ಯಮ ವರ್ಗ ಮತ್ತು ಬಡವರಿಗೆ ಶಾಪವಾಗಿದ್ದು 2003ರ ಆಚೆಗೆ.. ಆಗ ಮುಖ್ಯಮಂತ್ರಿ ಯಾಗಿದ್ದ ಎಸ್. ಎಂ.ಕೃಷ್ಣ ಅವರು ಐಟಿ ಬಿಟಿಗೆ ಕೊಟ್ಟ ಉತ್ತೇಜನ ಮತ್ತು ಅದರ ಉದ್ಯೋಗಿಗಳಿಗೆ ದೊರೆಯುತ್ತಿದ್ದ ಯರ್ರಬಿರ್ರಿ ಸಂಬಳ ಬೆಂಗಳೂರು ದುಬಾರಿ ನಗರವಾಗಿ ರೂಪುಗೊಳ್ಳಲು ಕಾರಣವಾಯ್ತು.. ಪರಭಾಷಿಕರು ಮನೆ ಮಾಲೀಕರು ಕೇಳಿದಷ್ಟು ಹಣ ನೀಡುತ್ತಾ ಒಂದೊಂದು ಏರಿಯಾಗೆ ಈ ಮಟ್ಟದ ಬಾಡಿಗೆ ಎಂದು ನಿಗದಿಯಾಗಿ ಮಾಲೀಕರು ಸಮೃದ್ಧಿ ಪಡೆಯತೊಡಗಿದರು. ಅವರಿಗೆ ಹಣ ಕೈ ಸೇರತೊಡಗಿದಂತೆ ಮಕ್ಕಳಿಗೆ ದುಬಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸುವುದು.. ಮದುವೆ ಮುಂಜಿ ಅದ್ದೂರಿಯಾಗಿ ನಡೆಸುವುದು ಹೆಚ್ಚಾಯಿತು.. ಇತ್ತ ರಿಯಲ್ ಎಸ್ಟೇಟ್ ಚಿಗುರಿಕೊಂಡಿತು.. 9ಲಕ್ಷ ಇದ್ದ ನಿವೇಶನದ ಮೌಲ್ಯ 90 ಲಕ್ಷಕ್ಕೆ ಏರಿತು. ಐಟಿ ಬಿಟಿ ಹೇರಳ ಸಂಬಳದಿಂದ ಐಷಾರಾಮಿ ಬದುಕು ಫ್ಯಾಷನ್ ಆಯಿತು. ಎಲ್ಲರೂ ಎರಡೆರಡು ಕಾರುಗಳನ್ನು ಕೊಳ್ಳುವಷ್ಟು ಸಮರ್ಥರಾದರು. ಆಗ ಶುರುವಾಯಿತು ನಗರದಲ್ಲಿ ಟ್ರಾಫಿಕ್ ಸಮಸ್ಯೆ.

ಇತ್ತ ಬಡವರು ಮತ್ತು ಕೆಳಮಧ್ಯಮ ವರ್ಗದವರ ಬದುಕು ಚಿಂದಿ ಚಿತ್ರಾನ್ನವಾಯಿತು. ದುಡಿದ ಅರ್ಧಕ್ಕಿಂತಲೂ ಹೆಚ್ಚಿನ ಹಣವನ್ನು ಮನೆ ಬಾಡಿಗೆಗೆಂದೇ ಮೀಸಲಿಡಬೇಕಾಯಿತು. ಇತ್ತ ಮಕ್ಕಳನ್ನು ಒಳ್ಳೆ ಕಾನ್ವೆಂಟ್ ನಲ್ಲಿ ಓದಿಸಬೇಕು ಎಂಬ ಹಠ ಬೆಳೆಸಿಕೊಂಡರು. ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವುದು ಮಾಮೂಲಿಯಾಯಿತು. ಇದರಿಂದ ಕೌಟುಂಬಿಕ ಘರ್ಷಣೆ ಕ್ರೈಮ್ ಹೆಚ್ಚಾದವು.

ಇಂತಹ ಕಾಲಘಟ್ಟದಲ್ಲಿ ಮನರಂಜನಾ ಕ್ಷೇತ್ರ ದುಬಾರಿ ಯಾಯಿತು. ಮಲ್ಟಿಪ್ಲೆಕ್ಸ್ ವ್ಯವಸ್ಥೆ ಯಲ್ಲಿ ಐಟಿಬಿಟಿಗಳು ಮನಬಂದಂತೆ ಹಣ ಚೆಲ್ಲತೊಡಗಿದರು. ಇದರಿಂದ ಸಿನಿಮಾ ರಂಗದ ಮಾರುಕಟ್ಟೆ ವಿಸ್ತಾರವಾಯಿತು. ಸ್ಟಾರ್ ನಟರು ಕೋಟಿ ಕೋಟಿ ಸಂಭಾವನೆ ಪಡೆಯತೊಗಿದರು. ಆಗಲೇ ಚಿತ್ರರಂಗದ ಒಳ್ಳೆಯ ಭಾವನೆಗಳು ನಾಶವಾದವು.

ವರನಟ ಡಾ.ರಾಜ್ ಕುಮಾರ್ ಸೇರಿದಂತೆ ಉದಾತ ವ್ಯಕ್ತಿತ್ವದ ಮಹನೀಯರು ಹಾಕಿಕೊಟ್ಟ ಆದರ್ಶದ ಬುನಾದಿ ಕಳಚತೊಡಗಿದವು. ವ್ಯಕ್ತಿಪೂಜೆ ಆರಾಧನೆ ಹೆಚ್ಚಾದವು. ಜೊತೆಗೆ ಸಾಮಾಜಿಕ ನೆಮ್ಮದಿ ತರುವ ಚಿತ್ರಗಳು ಇಲ್ಲವಾದವು.. ಬಿಲ್ಡಪ್ ಗಳೇ ಚಿತ್ರದ ಮುಖ್ಯವೆನಿಸುವ ಹಂತದಲ್ಲಿ ಟಿವಿಗಳು ಚಿಗುರಿಕೊಂಡವು. ಕೆಟ್ಟ ಕೆಟ್ಟ ರಿಯಾಲಿಟಿ ಶೋಗಳು ಜನರ ಮನಸ್ಸನ್ನು ಆವರಿಸಿತೊಡಗಿದವು. ಅತಿ ಸಿಲ್ಲಿ ಎನಿಸುವ ಧಾರಾವಾಹಿಗಳು ಜನರ ಚಿಂತನೆ ಹತ್ತಿಕ್ಕುವ ಹಂತ ತಲುಪಿದವು.
ಇಂತಹ ಸಂದರ್ಭದಲ್ಲಿ ಮೂರು ಘಟನೆಗಳು ಮಧ್ಯಮ ವರ್ಗದ ಬದುಕಿಗೆ ಕೊಳ್ಳಿ ಇಟ್ಟವು. ಅದರಲ್ಲಿ ಮೊದಲನೇಯದು ನೋಟ್ ಬ್ಯಾನ್ ಎರಡನೇಯದು ಜಿಎಸ್ ಟಿ ಈಗ ಮತ್ತೊಂದು ಕೊರೊನಾ ಎಂಬ ಮಹಾಮಾರಿ.

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಾರ್ಯ ಸಂಬಳವಿಲ್ಲದೆ ಯಾರೋ ಕೊಡುವ ಆಹಾರದ ಕಿಟ್ ಪಡೆದು ಹೇಗೋ ಬದುಕು ತಳ್ಳಿದವರು.. ಕೊನೆಗೆ ವೈರಾಣು ಉಪಟಳ ಹೆಚ್ಚಾಗಿ ಬದುಕು ದುರ್ಬರವಾದಾಗ ತಮ್ಮ ತಮ್ಮ ಊರುಗಳಿಗೆ ಗುಳೆ ಹೊರಟಿದ್ದಾರೆ. ಆ ರೀತಿ ಹೋಗುವವರು. ನಮ್ಮಿಂದ ಮನೆ ಬಾಡಿಗೆ ಕಟ್ಟುವುದು ಸಾಧ್ಯವಿಲ್ಲ ಎಂಬುದನ್ನು ಹೆಚ್ಚಿನವರು ಹೇಳುತ್ತಿದ್ದಾರೆ.

ಎಷ್ಟೋ ಸರ್ಕಾರಗಳು ಬಂದವು ಹೋದವು. ಬಡ ಮಧ್ಯಮ ವರ್ಗದ ವಸತಿಗೆಂದು ಯಾರು ತಲೆ ಕೆಡಿಸಿಕೊಳ್ಳಲಿಲ್ಲ.. ವಸತಿ ಖಾತೆಯೂ ಇದೆ ಸಚಿವರೂ ಇರುತ್ತಾರೆ.. ಆದರೂ ಮನೆ ಎಂಬುದು ಗಗನ ಕುಸುಮ. ಎಲ್ಲರಿಗೂ ಅವರವರ ಮಟ್ಟಕ್ಕೆ ಒಂದು ನೆಲೆ ಮಾಡಿಕೊಡುವ ಬಗ್ಗೆ ಯಾರೂ ಚಿಂತಿಸಲಿಲ್ಲ.

ಹೇಗೋ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರಿಂದ ಎಷ್ಟೋ ಬಡವರ ಹಸಿವು ನೀಗುತ್ತಿದೆ. ಅದರಾಚೆ ಏನೂ ಆಗಿಲ್ಲ.

‘ಮನೆ ಖಾಲಿ’ ಇದೆ ಎಂಬ ಬೋರ್ಡ್ ಗಳು ಎಲ್ಲಿ ನೋಡಿದರೂ ಕಾಣುತ್ತವೆ ಈಗ. ಆದರೆ ಬಾಡಿಗೆ ಕಡಿಮೆ ಮಾಡುವುದಿಲ್ಲ. ಈ ವಿಷಯದಲ್ಲಿ ರಾಜಿ ಆಗುವುದಿಲ್ಲ ಎನ್ನುತ್ತಿದ್ದಾರೆ ಮಾಲೀಕರು. ಕನಿಷ್ಟ ಒಂದು ವರ್ಷ ಅಂತಹ ಮನೆಗಳು ಖಾಲಿ ಬಿದ್ದರೆ ಮಾತ್ರ ಬಾಡಿಗೆ ಕಡಿಮೆ ಮಾಡುವ ಮನಸ್ಸು ಬರಬಹುದು.. ಅಂತಹ ಕಾಲವೇ ಬರಲಿ.

-ಸ್ನೇಹಪ್ರಿಯ

Social Share :

ಖಾಸಗಿ ಮತ್ತು ಆ ಮುಖ

Social Share :

ಈಚೆಗೆ ಟಿವಿ ಚಾನೆಲ್ ಗಳ ಬ್ರೇಕಿಂಗ್ ಗಳನ್ನು ನೋಡುತ್ತಿದ್ದರೆ ಬಹಳವೇ ನಗು ಬರುತ್ತದೆ. ಖಾಸಗಿ ಚಾನೆಲ್ ಗಳಾಗಿರುವ ಇವು, ಬೇರೆ ಖಾಸಗಿಯವರ ಬಂಡವಾಳ ಬಯಲು ಮಾಡಿದಂತೆ ತಮ್ಮಷ್ಟಕ್ಕೆ ತಾವೇ ಭುಜ ತಟ್ಟಿಕೊಳ್ಳುತ್ತಿವೆ.
ಖಾಸಗಿ ಆಸ್ಪತ್ರೆಗೆಗಳು ಈಗ ಚರ್ಚಿತ ಸಂಸ್ಥೆಗಳು.. ಇದರ ಜೊತೆಗೆ ಖಾಸಗಿ ವಿದ್ಯಾ ಸಂಸ್ಥೆಗಳು ಚರ್ಚೆಗೆ ಸಿಕ್ಕಿವೆ. ಇವೆರಡೂ ಜನರ ಶೋಷಣೆಗೆ ಇಳಿದು ಬಹಳಷ್ಟು ವರ್ಷಗಳೇ ಕಳೆದವು. ಖಾಸಗಿ ಆಸ್ಪತ್ರೆಗಳು ಹೇಗೆ ಸುಲಿಗೆ ಮಾಡುತ್ತವೆ ಎಂಬುದು ಜಗಜ್ಜಾಹಿರ.

ಅದೇ ರೀತಿ ಖಾಸಗಿ ವಿದ್ಯಾ ಸಂಸ್ಥೆಗಳು ಎಲ್ ಕೆ ಜಿ ಮಕ್ಕಳ ಪೋಷಕರಿಂದ ಹಿಡಿದು ಎಲ್ಲಿಯವರೆಗೂ ಸಾಧ್ಯವೋ ಅಲ್ಲಿವರೆಗೆ ಸುಲಿಗೆ ಮಾಡುವುದು ಕದ್ದು ಮುಚ್ಚಿ ಅಲ್ಲ; ಬಹಿರಂಗವಾಗಿ. ಆನ್ ಲೈನ್ ಕ್ಲಾಸ್ ಲೆಕ್ಕದಲ್ಲಿ ಸುಮಾರು 75 ಸಾವಿರದಿಂದ ಒಂದೂವರೆ ಲಕ್ಷದವರೆಗೆ ಹಣ ವಸೂಲಿ ಆಗುತ್ತಿದೆ. ಇದು ಮಧ್ಯಮ ವರ್ಗದ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದೆ ಎಂಬುದು ಸದ್ಯದ ವಾಸ್ತವ. ಏಕೆಂದರೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರ ಬದುಕಲ್ಲಿ ಬಿರುಗಾಳಿ ಬೀಸಿದೆ. ಕೆಲಸ ಕಳೆದುಕೊಂಡವರೆಷ್ಟೋ.. ಕೆಲಸವಿಲ್ಲದೆ ಅನಿವಾರ್ಯವಾಗಿ ತರಕಾರಿ ವ್ಯಾಪಾರಕ್ಕೆ ಇಳಿದವರು ಎಷ್ಟೋ ಮಂದಿ. ಆಟೋ ಚಾಲಕನೊಬ್ಬ ಸಂಪೂರ್ಣ ತೃಪ್ತಿಯಿಂದ ಮನೆಗೆ ಹೋಗುವುದಿಲ್ಲ.

ಇಂಥವರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಾರೆ.. ಓದಲಿ ಅದು ಖುಷಿಯ ವಿಚಾರವೇ.. ಆದರೆ ಖಾಸಗಿ ಶಾಲೆಗಳಿಗೆ ಹಣ ಕಟ್ಟಬೇಕಲ್ಲ; ಆಗ ಬಸವಳಿಸುತ್ತಾರೆ.. ಸಾಲ ಸೋಲ ಮಾಡಿ ಹಣ ಕಟ್ಟಿ ಅದನ್ನು ತೀರಿಸಲು ಜೀವನದಲ್ಲಿ ಹೆಣಗುತ್ತಲೇ ಹೋಗುತ್ತಾರೆ. ಇದರ ಅರಿವು ಯಾರಿಗಿದೆ.. ಸುಲಿಗೆ ಮಾಡುವವರಿಗೆ ಯಾವ ಮಾನವೀಯ ಸ್ಪರ್ಶವೂ ಇರುವುದಿಲ್ಲ..ಹಣದ ಥೈಲಿ ಅವರನ್ನು ಬದಲಾವಣೆ ಮಾಡಿಬಿಟ್ಟಿರುತ್ತದೆ.

ಇನ್ನು ಖಾಸಗಿ ಆಸ್ಪತ್ರೆ ಗಳ ಒಳ ಹೊಕ್ಕರೆ ಮುಗಿಯಿತು..ಟೆಸ್ಟ್ ಗಳ ಮಹಾಪೂರ.. ಇಲ್ಲದ ಕಾಯಿಲೆ ಹೊಕ್ಕು ತ್ತದೆ.. ಆಗ ಲಕ್ಷ ಲಕ್ಷ ಹಣ ತಾನಾಗಿಯೇ ಸುಲಿಗೆ ಆಗುತ್ತದೆ. ಈ ಕೋವಿಡ್ ಕಾಲದಲ್ಲಿ ಹಬ್ಬ ಆಚರಿಸುತ್ತಿವೆ ಖಾಸಗಿ ಆಸ್ಪತ್ರೆಗಳು.. ಇವುಗಳ ಸುಲಿಗೆಗೆ ಮಿತಿಯೇ ಇಲ್ಲ ಎಂಬುದು ಸರ್ಕಾರ ನೇಮಿಸಿರುವ ತಂಡ ಜಗಜಾಹಿರ ಮಾಡುತ್ತಿದೆ. ಬಡ ಅಥವಾ ಮಧ್ಯಮ ವರ್ಗದ ಒಬ್ಬ ವ್ಯಕ್ತಿ ಈ ಆಸ್ಪತ್ರೆಯ ಸುಳಿಗೆ ಸಿಲುಕಿದರೆ.. ಆತನ ಬದುಕೇ ಮುಗಿದು ಹೋದಂತೆ.

Social Share :