Snehapriya.com

June 7, 2025

ವಿದ್ಯಮಾನ

ಸಿನಿಮೋತ್ಸವದಲ್ಲಿ ನಮ್ಮ ಭಾರತ; ಹಿರಿಯ ಛಾಯಾಗ್ರಾಹಕ ಕುಮಾರಸ್ವಾಮಿ

Social Share :

ಈಚೆಗೆ ಮುಕ್ತಾಯಗೊಂಡ 14 ನೇ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತದ ಧ್ವಜದ ಮಹತ್ವ ಸಾರುವ ಚಿತ್ರವೊಂದು ಪ್ರದರ್ಶನ ಕಂಡಿತು..

ಅದು ನಮ್ಮ ಭಾರತ..!

ಮೇಲ್ನೋಟಕ್ಕೆ ಈ ಚಿತ್ರವು ಮಕ್ಕಳ ಚಿತ್ರವಾಗಿ ಗುರುತಿಸಿಕೊಂಡಿದ್ದರೂ ದೇಶಪ್ರೇಮ ಮತ್ತು ನಮ್ಮ ರಾಷ್ಟ್ರ ಧ್ವಜದ ಹಿರಿಮೆ ಮತ್ತು ಮಹತ್ವಗಳನ್ನು ಸಾರುವ ಚಿತ್ರ ಎಂಬುದಾಗಿ ಗುರುತಿಸಿಕೊಂಡಿರುವುದು ವಿಶೇಷ.

ಬೆಂಗಳೂರಿನ ಎಸ್ ಜೆ ಪಿ ತಾಂತ್ರಿಕ ವಿದ್ಯಾಲಯದಲ್ಲಿ ಛಾಯಾಗ್ರಹಣ ಡಿಪ್ಲೋಮಾ ಪಡೆದಿರುವ ಕುಮಾರಸ್ವಾಮಿ ಈ ಚಿತ್ರದ ನಿರ್ದೇಶಕರು. ಛಾಯಾಗ್ರಹಣ ಹಾಗೂ ನಟನೆ ಮಾಡುವ ಮೂಲಕವೂ ಗುರುತಿಸಿಕೊಂಡಿರುವ ಕುಮಾರಸ್ವಾಮಿ ಅವರದು ಬಹುಮುಖ ಪ್ರತಿಭೆ.

ಮುಂಬೈನಲ್ಲಿ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ದುಡಿದಿರುವ ಕುಮಾರಸ್ವಾಮಿ ಅವರು ಭಾರತೀಯ ಚಿತ್ರರಂಗದ ದಂತಕಥೆಗಳಾದ ದೇವಾನಂದ್, ಪುಟ್ಟಣ್ಣ ಕಣಗಾಲ್ ಹಾಗೂ ಪ್ರಕಾಶ್ ಮೆಹ್ರಾ ಅಂತಹವರ ಬಳಿ ಸಹಾಯಕರಾಗಿ ದುಡಿದಿದ್ದಾರೆ.

ಸ್ವತಂತ್ರವಾಗಿ ಚಿತ್ರ ನಿರ್ದೇಶಿಸುವ ಮತ್ತು ಮನರಂಜನೆಯ ಜೊತೆಗೆ ಯುವ ಜನತೆಗೆ ಸಂದೇಶ ನೀಡುವ ಚಿತ್ರ ಮಾಡುವ ಕನಸು ಹೊತ್ತಿದ್ದ ಈ ಹಿರಿಯ ತಂತ್ರಜ್ಞ ‘ನಮ್ಮ ಭಾರತ’ ಚಿತ್ರದ ಮೂಲಕ ಅದನ್ನು ನನಸು ಮಾಡಿಕೊಂಡಿದ್ದಾರೆ.

ಜನಮಾನಸದಲ್ಲಿ ಹೆಗ್ಗಳಿಕೆ ದಾಖಲಿಸಬಲ್ಲ ಹೊಸತನದ ಚಿತ್ರ ನೀಡುವ ಗುರಿ ಹೊಂದಿರುವ ಕುಮಾರಸ್ವಾಮಿ ಅವರಿಗೆ ಇನ್ನೂ ಚಿರ ಯೌವನದ ಉತ್ಸಾಹ.

ಚಿತ್ರೋತ್ಸವದಲ್ಲಿ ವಿಶೇಷ ಪ್ರದರ್ಶನಗೊಂಡ ‘ನಮ್ಮ ಭಾರತ’ ಚಿತ್ರಕ್ಕೆ ಸಿಕ್ಕಿದ ಪ್ರೋತ್ಸಾದಿಂದಾಗಿ ಅವರ ಉತ್ಸಾಹ ಮತ್ತಷ್ಟು ಇಮ್ಮಡಿಸಿದೆ.

Social Share :

ನಾನು ಕುಸುಮಾ ಅತ್ಯುತ್ತಮ ಚಿತ್ರ; 19 20 21 ಜ್ಯೂರಿ ಮೆಚ್ಚುಗೆ..

Social Share :

ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಕೃಷ್ಣೇಗೌಡ ನಿರ್ದೇಶನದ ‘ನಾನು ಕುಸುಮಾ’ ಪ್ರಥಮ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿ ಗೆದ್ದುಕೊಂಡಿದೆ.

ಸುಮಾರು ಒಂದು ವಾರಗಳ ಕಾಲ ಸಿನಿ ರಸಿಕರಿಗೆ ರಸದೌತಣ ನೀಡಿದ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಸಂಪನ್ನಗೊಂಡಿದ್ದು, ಚಿತ್ರಗಳ ಸ್ಪರ್ಧೆಯ ವಿವರಗಳನ್ನು ಪ್ರಕಟಿಸಲಾಗಿದೆ.

ಕನ್ನಡ ಸ್ಪರ್ಧಾ ವಿಭಾಗದ ದ್ವಿತೀಯ ಅತ್ಯುತ್ತಮ ಚಿತ್ರವಾಗಿ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’ ಹಾಗೂ ತೃತೀಯ ಅತ್ಯುತ್ತಮ ಚಿತ್ರವಾಗಿ ಉತ್ಸವ್ ಗೋನಾವರ್ ಅವರ ‘ಫೋಟೋ’ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿದೆ. ಅದೇ ರೀತಿ ಕನ್ನಡ ಸ್ಪರ್ಧಾ ವಿಭಾಗದಲ್ಲಿದ್ದ ಮನ್ಸೋರೆ ನಿರ್ದೇಶನದ ’19 20 21′ ಜ್ಯೂರಿ ಮೆಚ್ಚುಗೆ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.

ಕಾ.ತ.ಚಿಕ್ಕಣ್ಣ ಅವರ ಕಥೆ ಆಧಾರಿತ ‘ಕೋಳಿ ಎಸ್ರು’ ಭಾರತೀಯ ಚಿತ್ರ ವಿಭಾಗದಲ್ಲಿ ಅತ್ಯುತ್ತಮ ಪ್ರಥಮ ಚಿತ್ರವಾಗಿ ಪ್ರಶಸ್ತಿ ಗೆದ್ದುಕೊಂಡಿದೆ.

ಏಷ್ಯನ್ ವಿಭಾಗದಲ್ಲಿ ದೇವೇಂದ್ರ ಬಡಿಗೇರ್ ನಿರ್ದೇಶನದ ‘ಇನ್’ ಜ್ಯೂರಿಗಳ ವಿಶೇಷ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಹಾಗೆಯೇ ಬಿ.ಎಸ್.ಲಿಂಗದೇವರು ನಿರ್ದೇಶನದ ವಿರಾಟಪುರದ ವೀರಾಗಿ ತೃತೀಯ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

 

Social Share :

ಬೆಂಗಳೂರು ಸಿನಿಮೋತ್ಸವದಲ್ಲಿ ಇನ್ ಗೆ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ

Social Share :


ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ನಡೆದ 14 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಯುವ ನಿರ್ದೇಶಕ ದೇವೇಂದ್ರ ಬಡಿಗೇರ್ ನಿರ್ದೇಶನದ ‘ಇನ್’ ಕನ್ನಡ ಚಿತ್ರವು ಏಷಿಯನ್ ಸಿನಿಮಾ ವಿಭಾಗದಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿಗೆ ಪಾತ್ರವಾಗಿದೆ.

ವಿಶ್ವದಾದ್ಯಂತ ಕೊರೊನಾ ಪರಿಣಾಮದಿಂದ ಉಂಟಾದ ಲಾಕ್ ಡೌನ್ ಕಾರಣದಿಂದ ಬೆಂಗಳೂರಿನಂಥ ಮಹಾನಗರದಲ್ಲಿ ಒಂಟಿಯಾಗಿರುವ ಮಧ್ಯಮ ವರ್ಗದ ಯುವತಿ ಅನುಭವಿಸುವ ಯಾತನೆ, ಸಂಕಟ, ಲಾಕ್ ಡೌನ್ ಸದರ್ಭದಲ್ಲಿ ಅವಳ ಜೀವನದಲ್ಲಾಗುವ ಬದಲಾವಣೆಯನ್ನು ಇಡೀ ಚಿತ್ರದಲ್ಲಿ ಒಂಟಿ ಪಾತ್ರದ ಮೂಲಕ ಇಡೀ ಚಿತ್ರವನ್ನು ಒಂದೇ ಮನೆಯಲ್ಲಿ ಚಿತ್ರೀಕರಣ ಮಾಡಿದ ವಿಭಿನ್ನ ಪ್ರಯೋಗವಿದು.

ಈ ಚಿತ್ರವು ಪ್ರೇಕ್ಷಕರು ಹಾಗೂ ಸಿನಿಮೋತ್ಸವ ದಲ್ಲಿ ಜ್ಯೂರಿಗಳ ಮೆಚ್ಚುಗೆ ಪಡೆದಿದೆ. ನಟಿ ಪಾವನಾ ಗೌಡ ಇಡೀ ಚಿತ್ರದಲ್ಲಿ ಒಬ್ಬರೇ ಪಾತ್ರವನ್ನು ನಿಭಾಯಿಸಿದ್ದು, ಅವರ ಅಭಿನಯಕ್ಕೆ ಜ್ಯೂರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಕುರಿತು ಮಾತನಾಡಿರುವ ನಿರ್ದೇಶಕ ಬಡಿಗೇರ ದೇವೇಂದ್ರ, ಇದೊಂದು ಐತಿಹಾಸಿಕ ಮರೆಯಲಾರದ ಕ್ಷಣ,
ಲಾಕ್ ಡೌನ್ ಸಮಯದಲ್ಲಿ ನಮ್ಮ ಹಿರಿಯ ಪತ್ರಕರ್ತರು ಹಾಗೂ ಬರಹಗಾರರಾದ ಶಂಕರ ಪಾಗೋಜಿ ಅವರೊಂದಿಗೆ ಸೇರಿ ಬರೆದು ಕಷ್ಟ ಪಟ್ಟು ಸಿನೆಮಾ ಮಾಡಿದ್ದು ನಮ್ಮ ಪ್ರಯೋಗ ಏಷ್ಯನ್ ಕೆಟಗೆರಿಯಲ್ಲಿ ಜ್ಯೂರಿಗಳ‌ ಮೆಚ್ಚುಗೆಗೆ ಪಾತ್ರವಾಗಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಲು ಪ್ರೇರಣೆ ನೀಡಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.‌

ಇನ್ ಚಿತ್ರ ನನ್ನ ಜೀವನದಲ್ಲಿ ಮರೆಯಲಾರದ ಅನುಭವ ನೀಡಿದೆ‌‌ ಎಂದವರು ನಟಿ ಪಾವನಾ. ಲಾಕ್ ಡೌನ್ ಸಮಯದಲ್ಲಿ ಇಡೀ ಚಿತ್ರದಲ್ಲಿ ಒಬ್ಬಳೇ ಪಾತ್ರ ನಿಭಾಯಿಸುವುದು ಸವಾಲಿನ ಕೆಲಸವಾಗಿತ್ತು. ನಮ್ಮ ಶ್ರಮಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ದಲ್ಲಿ ಪ್ರಶಸ್ತಿ ಸಿಕ್ಕಿರುವುದು ಶ್ರಮಕ್ಕೆ ಫಲ ಸಿಕ್ಕಂತಾಗಿದೆ ಎಂದರು ಸಂತಸ ಹಂಚಿಕೊಂಡರು ಪಾವನಾ.

ಐಡಿಯಾ ವರ್ಕ್ಸ್ ಮೋಷನ್ ಪಿಚ್ಚರ್ ನಡಿಯಲ್ಲಿ ಪ್ರಶಾಂತ್ ಅಯ್ಯಗಾರಿ ನಿರ್ಮಾಣವಿರುವ ಈ ಚಿತ್ರಕ್ಕೆ ಶಂಕರ ಪಾಗೋಜಿ ಚಿತ್ರಕಥೆ ಸಂಭಾಷಣೆ ಬರೆದಿರುವುದು ವಿಶೇಷ. ಭರತ್ ನಾಯ್ಕ್ ಇದರ ಸಂಗೀತ ನಿರ್ದೇಶಕರು.

Social Share :

ಚಿತ್ರೋತ್ಸವದಲ್ಲಿ ಹೆಚ್ಚಿದ ಕಲರವ; ಮೆರೆದ ಜಾಗತಿಕ ಕನ್ನಡ ಚಿತ್ರಗಳು..

Social Share :

ನೋಡು ನೋಡುತ್ತಾ ಇವು ಕನ್ನಡ ಚಿತ್ರಗಳೇ.. ಎಂಬ ಬೆರಗು ಮೂಡಿಸುತ್ತಾ ಹೋದವು. ಹೊಸದಾದ ನಿರೂಪಣಾ ಶೈಲಿ; ಎದೆಗೆ ನಾಟುವ ಪ್ರಶ್ನೆಗಳ ಪರಂಪರೆ; ಜಾಗತಿಕ ಸಿನಿಮಾ ನೆನಪಿಸುವ ಸಿಂಕ್ ಸೌಂಡ್ ಮೇಲಾಗಿ ಸಾಮಾಜಿಕ ನೆಲೆಯ ಕಥೆಗಳ ಆಯ್ಕೆ..

ಅಬ್ಬಾಬ್ಬ.. ಕನ್ನಡದ ಚಿತ್ರಗಳು ಜಾಗತಿಕ ಮಟ್ಟದ ಚಿತ್ರಗಳಿಗೆ ಸ್ಪರ್ಧೆ ಒಡ್ಡುತ್ತಿವೆ. ಜೊತೆಗೆ ಗುಣಮಟ್ಟದ ನೆಲೆಯಲ್ಲಿ ಜನರನ್ನು ಬೆರಗುಗೊಳಿಸುತ್ತಾ ನಡೆದಿವೆ.

14ನೇ ಬೆಂಗಳೂರು ಸಿನಿಮೋತ್ಸವ ಕನ್ನಡ ಚಿತ್ರಗಳ ಆಯ್ಕೆಯಲ್ಲಿಯೇ ಪ್ರಬುದ್ಧತೆ ಸಾಧಿಸಿದೆ ಎನಿಸಿದ್ದು, ಜಾಗತಿಕ ಮಟ್ಟಕ್ಕೆ ಪೈಪೋಟಿ ನೀಡಬಲ್ಲ ಚಿತ್ರಗಳನ್ನು ನೋಡಿದಾಗ..

ಮನ್ಸೋರೆ ನಿರ್ದೇಶನದ ’19 20 21′, ಕೃಷ್ಣೇಗೌಡ ನಿರ್ದೇಶನದ ‘ನಾನು ಕುಸುಮ’, ಪೃಥ್ವಿ ಕೋಣಾನೂರು ನಿರ್ದೇಶನದ ‘ಹದಿನೇಳೆಂಟು’. ಈ ಮೂರು ಚಿತ್ರಗಳು ಕನ್ನಡ ಸ್ಪರ್ಧಾ ವಿಭಾಗದಲ್ಲಿವೆ.

ಈ ಮೂರೂ ಚಿತ್ರಗಳನ್ನು ನೋಡುವಾಗ ಕನ್ನಡದ ಸಿನಿಮಾ ಪ್ರಪಂಚದ ಚಿಂತನೆಯ ದಿಕ್ಕು ಬದಲಾಗಿರುವುದರ ಮಾಹಿತಿ ದೊರೆಯುತ್ತದೆ. ಒಂದು ಚಿತ್ರ ಸಂವಿಧಾನದ ಆಶಯಗಳ ಸುತ್ತ ಸಾಗಿದರೆ, ಮತ್ತೊಂದು ಚಿತ್ರ ಅಬಲೆ ಹೆಣ್ಣು ಮಗಳು ಸಾಮಾಜಿಕ ಕ್ರೌರ್ಯಕ್ಕೆ ಸಿಲುಕುವ ವ್ಯವಸ್ಥೆ ಪರಿಚಯದ ಮತ್ತೊಂದು ಚಿತ್ರ. ಟಿವಿ ಮಾಧ್ಯಮ ಸನ್ನಿಗೆ ಸಿಲುಕುವ ಹದಿಹರೆಯದ ಜೋಡಿ ಮಾಡುವ ತಪ್ಪಿಗೆ ಶಾಲೆ ಮತ್ತು ಪೋಷಕರು ಅನುಭವಿಸುವ ಯಾತನೆಗಳನ್ನು ತೆರೆದಿಡುವ ಮಗದೊಂದು ಚಿತ್ರ.

ಹೀಗೆ ನೋಡುಗರ ಮನ ಕಲಕುವ ಕನ್ನಡ ಚಿತ್ರಗಳು ಈ ಬಾರಿಯ ಚಿತ್ರೋತ್ಸವದ ಹೆಮ್ಮೆ ಮತ್ತು ಅದುವೆ ಸಿನಿಮಾ ಉತ್ಸವದ ಸಾರ್ಥಕತೆ.

ಏಷ್ಯನ್ ಸ್ಪರ್ಧಾ ವಿಭಾಗದಲ್ಲಿದ್ದ ‘ವಿರಾಟಪುರದ ವೀರಾಗಿ’, ‘ಇನ್’ ಮತ್ತು ‘ಸಿಗ್ನಲ್ ಮ್ಯಾನ್ 1971’ ಚಿತ್ರಗಳು ಸಹ ಪ್ರೇಕ್ಷಕರ ಮನ ಸೆಳೆದವು.

ಒಂದು ಉತ್ಸವ (ಚಿತ್ರೋತ್ಸವ) ಯಶಸ್ವಿಯಾಗುವುದು ಸಾಮಾನ್ಯವಾದ ವಿಷಯವಲ್ಲ; ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಅವರು ತಮಗೆ ಸಿಕ್ಕಿದ ಅಲ್ಪ ಅವಧಿಯಲ್ಲಿ ಗುಣಾತ್ಮಕ ನೆಲೆ ಅಚ್ಚೊತ್ತುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರೆ ತಪ್ಪಲ್ಲ..

Social Share :

ಸಿನಿಮೋತ್ಸವಕ್ಕೆ ಅದ್ದೂರಿ ಚಾಲನೆ

Social Share :

ಒಂದು ವಾರಗಳ ಕಾಲ ಜಾಗತಿಕ ಸಿನಿಮಾ ಪ್ರದರ್ಶನದ ಮೂಲಕ ಸಿನಿಮಾ ಪ್ರೇಮಿಗಳಿಗೆ ಮನೋಲ್ಲಾಸ ನೀಡುವ ಸಿನಿಮಾ ಹಬ್ಬಕ್ಕೆ ಗುರುವಾರ ಅದ್ದೂರಿ ಚಾಲನೆ ನೀಡಲಾಯಿತು.

ವಿಧಾನಸೌಧದ ಮುಂಭಾಗದ ಕಣ್ಮನ ಸೆಳೆಯುವ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದರು.

ಡಿಜಿಟಲೀಕರಣದ ಬಳಿಕ ಸಿನಿಮಾ ನಿರ್ಮಾಣದ ಆಶಯ ಮತ್ತು ಸ್ವರೂಪ ಎರಡೂ ಬದಲಾಗಿದೆ. ಸಿನಿಮಾ ವೇಗದ ಗತಿಯನ್ನು ಹೆಚ್ಚಿಸಿಕೊಂಡಿದೆ. ಇದಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಅಂತಾರಾಷ್ಟ್ರೀಯ ತಂತ್ರಜ್ಞಾನ ಒಳಗೊಂಡ ಫಿಲಂಸಿಟಿ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗಿದೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು.

ಕೆ.ಜಿ.ಎಫ್ ಹಾಗೂ ಕಾಂತಾರ ಚಿತ್ರಗಳು ಜಗತ್ತಿನ ಗಮನ ಸೆಳೆದಿವೆ. ಹಾಗಾಗಿ ವಿಶ್ವದ ಜನರು ಕರ್ನಾಟಕದತ್ತ ನೋಡುವಂತಾಗಿದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಚಿತ್ರ ರಚನಾಕಾರ ವಿ.ವಿಜಯೇಂದ್ರ ಪ್ರಸಾದ್ ಅಭಿಪ್ರಾಯ ಪಟ್ಟರು.

ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರು ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂದರು. ನಾನು ಇಲ್ಲಿ ಹುಟ್ಟಲಿಲ್ಲ; ಆದರೆ ಮಡದಿ ಮತ್ತು ಮಕ್ಕಳು ಕರ್ನಾಟಕದ ನೆಲದಿಂದ ಬಂದವರಾಗಿದ್ದಾರೆ ಎಂದರು.

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳಿಗೆ ವಿಶೇಷ ಸ್ಥಾನವಿದೆ ಎಂದವರು ಮತ್ತೊಬ್ಬ ಅತಿಥಿ ಬಾಲಿವುಡ್ ನಿರ್ದೇಶಕ ಗೋವಿಂದ ನಿಹಲಾನಿ.

ಅಭಿಷೇಕ್ ಅಂಬರೀಷ್, ಸಪ್ತಮಿ ಗೌಡ, ಹರ್ಷಿಕಾ ಪೂಣಚ್ಚ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ರಿಜಿಸ್ಟ್ರಾರ್ ಹೀಮಂತರಾಜು, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Social Share :

ಅಂ.ರಾ.ಸಿನಿಮೋತ್ಸವ ಸಂಭ್ರಮ ಉದ್ಘಾಟನೆಗೆ ರಮ್ಯಾ, ರಮ್ಯಾ ಕೃಷ್ಣ

Social Share :

ಬೆಂಗಳೂರಿನಲ್ಲಿ ಸಿನಿಮೋತ್ಸವದ ವೈಭವ ಮರುಕಳಿಸಿದೆ. ಮಾರ್ಚ್ 23ನೇ ಗುರುವಾರದಿಂದ ಒಂದು ವಾರಗಳ ಸಿನಿ ಪ್ರೇಮಿಗಳಿಗೆ ರಸದೌತಣ ದೊರೆಯಲಿದೆ.

14 ನೇ ಬೆಂಗಳೂರು ಅಂತಾರಾಷ್ಟ್ರೀಯ ಈ ಚಲನ ಚಿತ್ರೋತ್ಸವದಲ್ಲಿ ಜಗತ್ತಿನ ಜನಪ್ರಿಯ ಚಿತ್ರಗಳು ಪ್ರದರ್ಶನಗೊಳ್ಳಲಿರುವ ಹಿನ್ನೆಲೆಯಲ್ಲಿ ಸಿನಿಮಾಸಕ್ತರಲ್ಲಿ ಸಂಭ್ರಮ ಮೇರೆ ಮೀರಿದೆ.

ಮಾರ್ಚ್ 23ರ ಸಂಜೆ 4.30 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಸಿನಿಮೋತ್ಸವ ಉದ್ಘಾಟನೆಯಾಗಲಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಬುಧವಾರ ಈ ಮಾಹಿತಿ ನೀಡಿದರು.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ರಮ್ಯಾ ಕೃಷ್ಣ ಅವರೂ ಸಹ ಇದೇ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ದೀಪ ಕನ್ನಿಕೆಯಾಗಿ ಹರ್ಷಿಕಾ ಪೂಣಚ್ಚ ಇರಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರಂಭ ಉದ್ಘಾಟಿಸುತ್ತಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವ ರಾಜಕೀಯ ನಾಯಕರ ದೊಡ್ಡ ಪಟ್ಟಿಯೇ ಇದೆ.

ಹಿರಿಯ ಚಿತ್ರಕಥೆ ರಚನಾಕಾರ ವಿ.ವಿಜಯಪ್ರಸಾದ್, ಬಾಲಿವುಡ್ ನಿರ್ದೇಶಕ ಗೋವಿಂದ ನಿಹಾಲಾನಿ, ಕನ್ನಡದ ಕಲಾವಿದರಾದ ಅಭಿಷೇಕ್ ಅಂಬರೀಷ್, ಸಪ್ತಮಿಗೌಡ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಅವರ ಉಪಸ್ಥಿತಿ ಈ ಸಂದರ್ಭದಲ್ಲಿ ಇರಲಿದೆ.

‘ಕಾಂತಾರ’ ಉದ್ಘಾಟನಾ ಚಿತ್ರವಾಗಿದ್ದು, ರಾತ್ರಿ 8 ಗಂಟೆಗೆ ಚಾಮರಾಜಪೇಟೆಯ ಕಲಾವಿದರ ಸಂಘದ ಡಾ.ರಾಜ್ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 24ರ ಶುಕ್ರವಾರದಿಂದ ಬೆಂಗಳೂರಿನ ಒರಾಯನ್ ಮಾಲ್, ಕಲಾವಿದರ ಸಂಘ ಹಾಗೂ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಸಿನಿಮಾ ಹಬ್ಬ ನಡೆಯುತ್ತಿದೆ ಎಂದು ಅಶೋಕ್ ಕಶ್ಯಪ್ ವಿವರ ನೀಡಿದರು.

ಈ ಬಾರಿ ಹೆಚ್ಚು ಕನ್ನಡದ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಜಾಗತಿಕ ಮಟ್ಟ, ಏಷ್ಯನ್ ಹಾಗೂ ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗಗಳಿಗೆ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರಗಳು ಈ ಬಾರಿ ಚಿತ್ರೋತ್ಸವದಲ್ಲಿ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು ಕಲಾತ್ಮಕ ನಿರ್ದೇಶಕ ಎಚ್.ಎನ್.ನರಹರಿರಾವ್.

ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಗೌರವ ಕಾರ್ಯದರ್ಶಿ ಸುಂದರ್ ರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹೀಮಂತರಾಜು ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Social Share :

ಬೆಂಗಳೂರಿನಲ್ಲಿ ಸಿಮ್ಟಾ ಆಸ್ಟ್ರಿಕ್ಸ್ ವಿನೂತನ ಬಾಗಿಲು ಕಿಟಕಿ ತಯಾರಿಕೆ

Social Share :


ಉದ್ಯಾನನಗರಿ ಬೆಂಗಳೂರಿನಲ್ಲಿ ಸುಂದರ ಗೃಹೋಪಕರಣ ಶಾಖೆ ತೆರೆಯಲಾಗಿದೆ..

ಮರದ ಲೇಪನ ಹೊಂದಿರುವ ಯುಪಿವಿಸಿ ಹಾಗೂ ಎಬಿಎಸ್‌ಯ ವಿನೂತನ ರೀತಿಯ ಕಿಟಕಿಗಳು ಹಾಗೂ ಬಾಗಿಲುಗಳು ಇಲ್ಲಿ ವಿಶಿಷ್ಟ ಮತ್ತು ವಿನೂತನ ರೀತಿಯಲ್ಲಿ ತಯಾರಾಗುತ್ತವೆ..

ಅದೇ ಸಿಮ್ಟಾ ಆಸ್ಟ್ರಿಕ್ಸ್..!

ಇದರ ಶಾಖೆಯನ್ನು ಬೆಂಗಳೂರಿನ ಜಯನಗರದ ಐದನೇ ಬ್ಲ್ಯಾಕ್ ನಲ್ಲಿ ತೆರೆಯಲಾಗಿದೆ.

ಯುಪಿವಿಸಿ ಕಿಟಕಿಗಳು ಹಾಗೂ ಬಾಗಿಲು ವ್ಯವಸ್ಥೆಯ ವಿನೂತನ ಮಾದರಿಯಲ್ಲಿ ಸಂಸ್ಥೆ ಮಹತ್ವದ ಮೈಲುಗಲ್ಲು ಸ್ಥಾಪಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ.

‘ಸಿಮ್ಟಾ ಆಸ್ಟ್ರಿಕ್ಸ್’ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಉತ್ತಮ ಬಾಂಧವ್ಯವನ್ನು ಸಂಪಾದಿಸಿದೆ.

ಹಾಗಾಗಿ ಇದರ ಶಾಖೆಗಳನ್ನು ವಿಸ್ತರಿಸಲಾಗಿದೆ ಎಂಬುದು ಅದರ ಮುಖ್ಯಸ್ಥರ ಆತ್ಮ ವಿಶ್ವಾಸದ ನುಡಿ.

ಬ್ರಿಗೇಡ್ ಎಂಟರ್‌ಪ್ರೈಸಸ್ಅಧ್ಯಕ್ಷ ಎಂ.ಪಿ.ಮಂಜುನಾಥ್‌ ಪ್ರಸಾದ್ ಮತ್ತು ವಾಲ್‌ಫರ್ ಆರ್ಕಿಟೆಕ್ಟ್‌ಸ್‌ನ ಮುಖ್ಯ ವಾಸ್ತು ಶಿಲ್ಪಿ ಪ್ರಾಚಿಪಾಂಡೆ ಶಾಖೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಪತ್‌ಕುಮಾರ್, ನಿರ್ದೇಶಕರಾದ ಸೆಂತಿಲ್‌ಕುಮಾರ್, ಗಣೇಶ್, ಕನಗರಾಜ್ ಹಾಗೂ ದೊರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Social Share :

ಅಪ್ಪು ಸಮಾಧಿ ಅದ್ಭುತ ಸ್ಮಾರಕ; ರೇಸ್ ಕೋರ್ಸ್ ಅಂಬಿ ಹೆಸರು

Social Share :

ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಅದ್ಭುತ‌ ಸ್ಮಾರಕ ಮಾಡಲಾಗುವುದು..

ಹೀಗೆಂದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು..
ಸಂದರ್ಭ ರಿಂಗ್ ರಸ್ತೆಗೆ ಡಾ.ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡುವ ‘ಬಾನ ದಾರಿಯಲ್ಲಿ ಪುನೀತ್ ಪಯಣ..’ ಉದ್ಘಾಟನಾ ಕಾರ್ಯಕ್ರಮ..

ಪುನೀತ್ ರಾಜ್‍ಕುಮಾರ್ ಒಬ್ಬ ಕೊಡುಗೈ ದಾನಿಯಾಗಿ ಬದುಕಿದರು. ಅವರ ಜನಪ್ರಿಯತೆಯನ್ನು ನಾನು ರಾಜ್ಯದ ಮೂಲೆ ಮೂಲೆಯಲ್ಲಿಯೂ ಕಂಡಿರುವೆ. ಹಾಗಾಗಿ ಅವರ ಸ್ಮಾರಕ ಅದ್ಭುತವೆನಿಸುವಷ್ಟು ಸೊಗಸಾಗಿರಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ರಿಂಗ್ ರಸ್ತೆಗೆ ಪುನೀತ್ ಅವರ ಹೆಸರಿಡುವಲ್ಲಿ ಸದಾಶಯ ಮೆರೆದಿದ್ದೇವೆ ಎಂಬ ನಂಬಿಕೆ ನಮ್ಮದು. ಏಕೆಂದರೆ ಅವರೊಬ್ಬ ಅನನ್ಯ ಸಾಧಕ. ಅವರ ಹೆಸರನ್ನು ಅಜರಾಮರ ಆಗಿಸುವಲ್ಲಿ ಚಿಕ್ಕ ಪ್ರಯತ್ನ ಇದು ಎಂದರು.

ಅಂಬರೀಶ್ ಸ್ಮಾರಕ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು.

ರೇಸ್ ಕೋರ್ಸ್‌ ರಸ್ತೆಗೆ ಅಂಬರೀಷ್ ಅವರ ಹೆಸರಿಡಲು ತೀರ್ಮಾನಿಸಲಾಗಿದೆ. ಅಂಬರೀಷ್ ನನ್ನ ಆತ್ಮೀಯ ಸ್ನೇಹಿತನಾಗಿದ್ದ. ವಾರದಲ್ಲಿ ಏಳೂ ದಿನ ಜೊತೆಗಿರುತ್ತಿದ್ದೆವು. ಅವನು ಕೊಡುಗೈ ದಾನಿ. ಅವನ ಸ್ಮಾರಕ ಮಾಡುವ ಸೌಭಾಗ್ಯ ನನ್ನದು ಎಂದರು ಬಸವರಾಜ ಬೊಮ್ಮಾಯಿ.

Social Share :

ದಳಪತಿ 67ಗೆ ಅದ್ದೂರಿ ಚಾಲನೆ

Social Share :

ತಮಿಳು ಸ್ಟಾರ್ ನಟ ದಳಪತಿ ವಿಜಯ್‌ ಮತ್ತು ನಿರ್ದೇಶಕ ಲೋಕೇಶ್‌ ಕನಗರಾಜ್‌ ಜೋಡಿಯ
ದಳಪತಿ 67 ಚಿತ್ರದ ಅದ್ದೂರಿ ಮುಹೂರ್ತ ಕಂಡಿದೆ.

ಚೆನ್ನೈನಲ್ಲಿ ಫೆ. 2ರಂದು ನಡೆದ ಅದ್ದೂರಿ ಮುಹೂರ್ತದಲ್ಲಿ
ಕಲಾವಿದರಾದ ತ್ರಿಷಾ ಕೃಷ್ಣನ್‌, ಅರ್ಜುನ್‌ ಸರ್ಜಾ, ಜಗದೀಶ್‌, ಪ್ರಿಯಾ ಆನಂದ್‌, ಮನ್ಸೂರ್‌ ಅಲಿ ಖಾನ್‌ ಸೇರಿದಂತೆ ಸಿನಿಮಾದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.

7 ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ‘ಮಾಸ್ಟರ್‌’ ಸಿನಿಮಾ ಬಳಿಕ ವಿಜಯ್‌ ಜತೆಗಿದು ನಿರ್ದೇಶಕರ ಎರಡನೇ ಸಿನಿಮಾವಾಗಿದೆ.

ಕೈದಿ, ಮಾಸ್ಟರ್‌ ಮತ್ತು ಬೀಸ್ಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಕ್‌ಸ್ಟಾರ್‌ ಅನಿರುದ್ಧ ರವಿಚಂದ್ರನ್‌ ಸಂಗೀತವಿದ್ದು, ನಾಲ್ಕನೇ ಬಾರಿ ವಿಜಯ್‌ ಜತೆ ಕೈ ಜೋಡಿಸಿದ್ದಾರೆ.

ಮನೋಜ್‌ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್‌ ರಾಜ್‌ ಸಂಕಲನ, ಸತೀಸ್‌ ಕುಮಾರ್‌ ಕಲೆ, ದಿನೇಶ್‌ ನೃತ್ಯ ನಿರ್ದೇಶನವಿದೆ.

Social Share :

ಕೊಡುಗೈ ದಾನಿ ಈ ನಿರ್ಮಾಪಕ ಡಾ.ಎಂ.ವಿ.ಕೆ. ಶೈಕ್ಷಣಿಕ ಕೊಡುಗೆಗಳು..

Social Share :

ಬೆಂಗಳೂರಿನಲ್ಲಿ ನೆಲೆಸಿರುವ ಸೊರಬ ಮೂಲದ ಉದ್ಯಮಿ ಡಾ.ಎಂ.ವಿ.ಕೃಷ್ಣಪ್ಪ ಮಲೆನಾಡು ಭಾಗದ ಶಾಲೆಗಳನ್ನು ದತ್ತು ಪಡೆದು ಅವುಗಳ ಸಮರ್ಪಕ ನಿರ್ವಹಣೆಗೆ ಮುಂದಾಗಿದ್ದಾರೆ.

ಅದರ ಮೊದಲ ಭಾಗವಾಗಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕೊಡಕಣಿ ಹಾಗೂ ಹೊಸಬಾಳೆ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಈಗ ಸಮರ್ಪಕ ದುರಸ್ಥಿ ಹಾಗೂ ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ.

ಅದೇ ರೀತಿ ಸಾಗರ ತಾಲ್ಲೂಕಿನ ಎಸ್.ಎನ್.ನಗರ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯ ಪ್ರಗತಿಯಲ್ಲಿದ್ದು, ಅದು ಸಹ ಸುಣ್ಣಬಣ್ಣಗಳಿಂದ ಕಂಗೊಳಿಸಲು ಸಜ್ಜಾಗಿದೆ. ಡಾ.ಎಂ.ವಿ.ಕೃಷ್ಣಪ್ಪ ಅವರ ಡಿಡಿ ಪಿಕ್ಚರ್ಸ್ ನ ಮೂಲಕ ಇದನ್ನು ಸಾಧ್ಯಗೊಳಿಸಲಾಗಿದೆ..

ಸೊರಬ ತಾಲ್ಲೂಕಿನಾದ್ಯಂತ ವಿವಿಧ ಯೋಜನೆಗಳನ್ನು ರೂಪಿಸಿ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿರುವ ಕೃಷ್ಣಪ್ಪ ಅವರಿಗೆ ಅದರ ಪ್ರತಿಯಾಗಿ ಪ್ರತಿಫಲಾಪೇಕ್ಷೆ ಇಲ್ಲ. ತಾನು ಹುಟ್ಟಿ ಬೆಳೆದ ತವರು ಮತ್ತು ಜನರು ಖುಷಿಯಾಗಿರಲಿ ಎಂಬ ಕಾರಣದಿಂದ ಇದನ್ನು ಮಾಡುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳು ನೀಡಿದ ವಿವರ.

ಅಂದ ಹಾಗೆ ಡಾ.ಎಂ.ವಿ.ಕೆ. ಅಭಿಮಾನಿ ಸಂಘವು ಅಸ್ತಿತ್ವದಲ್ಲಿದ್ದು, ಅದರ ಮೂಲಕ ಶಾಲಾ ಕಾಲೇಜುಗಳಲ್ಲಿ ದೊಡ್ಡ ಮಟ್ಟದಲ್ಲಿ ಆಟ ಪಾಠದ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇದರ ಖರ್ಚಿನ ಹೊಣೆಯನ್ನು ಸಹ ಡಾ.ಎಂವಿಕೆ ಡಿಡಿ ಪಿಕ್ಚರ್ಸ್ ನಿರ್ವಹಿಸುತ್ತದೆ.

ಮೂಲತಃ ಚಿತ್ರ ನಿರ್ಮಾಪಕರಾಗಿರುವ ಡಾ.ಎಂ.ವಿ.ಕೃಷ್ಣಪ್ಪ ಸಮಾಜ ಸೇವೆಯ ನೆಲೆಯಿಂದ ನಾಯಕರಾಗಿ ಹೊಮ್ಮಿದವರು. ಸಮಾಜ ಸೇವೆಯ ಧ್ಯೇಯ ಹೊಂದಿರುವಾಗಲೇ ಕೊರೊನಾ ಹೆಮ್ಮಾರಿ ಜನರ ಬದುಕನ್ನು ಕಿತ್ತು ತಿಂದಿತು. ಈ ಸಂದರ್ಭದಲ್ಲಿ ಮಲೆನಾಡು ಹಾಗೂ ಕನ್ನಡ ಚಿತ್ರರಂಗದ ಪರವಾಗಿ ನಿಂತ ಡಾ.ಎಂ.ವಿ.ಕೆ. ಮಾಡಿದ ದಾನಗಳಿಗೆ ಲೆಕ್ಕವೇ ಇಲ್ಲ..

ದಿನ ನಿತ್ಯದ ವಸ್ತುಗಳೂ ಸೇರಿದಂತೆ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಗಳು ಪುಸ್ತಕ ಹಾಗೂ ಇತರ ಪರಿಕರಗಳನ್ನು ಒದಗಿಸುವಲ್ಲಿ ನೆರವಾದರು. ಕನ್ನಡ ಚಿತ್ರರಂಗದ ಪ್ರತಿ ವಲಯದಲ್ಲಿ ಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದು ಕೂಡ ಹೆಗ್ಗಳಿಕೆ.

ಡಿಡಿ ಪಿಕ್ಚರ್ಸ್ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣ ಗುರಿ ಹೊಂದಿರುವ ಡಾ.ಎಂವಿಕೆ ಈಗಾಗಲೇ ‘ಅಭಿರಾಮಿ’ ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೆ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವ ಗುರಿಯ ಜೊತೆಗೆ ಹೊಸ ಪ್ರತಿಭೆಗಳಿಗೆ ಸಿನಿಮಾ ವೇದಿಕೆ ಸೃಷ್ಟಿಸಿ ಕೊಡುತ್ತಿದ್ದಾರೆ.

Social Share :