Snehapriya.com

June 7, 2025

ವಿದ್ಯಮಾನ

ಸೋನಿ ಮಾಸ್ಟರ್ ಶೆಫ್ ಸ್ಪರ್ಧೆಗೆ ಬೆಂಗಳೂರಿನ ಉದ್ಯಮಿ ಹರೀಶ್‌

Social Share :

ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ʻಇಟ್ಸಿ ಬಿಟ್ಸಿʼ ಎಂಬ ಕರಕುಶಲ ವಸ್ತುಗಳ ಮಳಿಗೆ ವ್ಯಾಪಾರ ನಡೆಸುವ ಉದ್ಯಮಿ ಹರೀಶ್ ಕ್ಲೋಸ್ ಪೇಟ್ ಈಗ ‘ಅತ್ಯುತ್ತಮ ಬಾಣಸಿಗ’ ಆಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಿಸಿಕೊಂಡಿದ್ದಾರೆ.

ಸೋನಿ ವಾಹಿನಿಯ ಮಾಸ್ಟರ್ ಶೆಫ್ ಇಂಡಿಯಾ ಅಡುಗೆ ಸ್ಪರ್ಧೆಯ ಅಗ್ರಗಣ್ಯ 12 ಸ್ಪರ್ಧಿಗಳ ಪೈಕಿ ಒಬ್ಬರಾಗಿ ಹರೀಶ್ ಆಯ್ಕೆಯಾಗುವ ಮೂಲಕ ಉತ್ತಮ ಬಾಣಸಿಗ ಆಗಿ ಹೊಮ್ಮಿದ್ದಾರೆ.

ಬಿಡುವಿದ್ದಾಗ ಅಡುಗೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಉದ್ಯಮಿ ಹರೀಶ್, ಮಗಳಿಗೆ ಲಂಚ್ ಬಾಕ್ಸ್ ಮಾಡಿಕೊಡುವಾಗ ತಯಾರಿಕೆಯ ವೈವಿಧ್ಯತೆ ಕಾಯ್ದು ಕೊಂಡಿದ್ದರ ಫಲವಾಗಿ ಬಾಣಸಿಗ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಬಂದಿದೆ.

ʻಮಾಸ್ಟರ್‌ ಶೆಫ್‌ ಇಂಡಿಯಾʼ ಅಡುಗೆ ಸ್ಪರ್ಧೆಯ ಟಾಪ್‌ 12 ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆ ಆಗುವುದು ಸಾಮಾನ್ಯ ವಿಷಯವೇ ಅಲ್ಲ. ಏಕೆಂದರೆ ದೇಶದೆಲ್ಲಡೆ ಅಡುಗೆ ವಿಷಯದಲ್ಲಿ ದೊಡ್ಡದಾಗಿ ಪಳಗಿದ ಬಾಣಸಿಗರು ಅಲ್ಲಿರುತ್ತಾರೆ.

ಅಂಥವರ ನಡುವೆ ಕನ್ನಡಿಗ ಹರೀಶ್‌ ಕ್ಲೋಸ್‌ಪೇಟ್‌ ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಕಠಿಣ ಹಾದಿಯಲ್ಲಿ ನಡೆದುಬಂದ ಹರೀಶ್ ಸಾಧನೆಯನ್ನು ಈಗ ಕೊಂಡಾಡಲಾಗುತ್ತಿದೆ.

ಏಕೆಂದರೆ; ಅವರ ಇಟ್ಸಿ ಬಿಟ್ಸಿ ಕರಕುಶಲ ವಸ್ತುಗಳ 36 ಮಳಿಗೆಗಳು ದೇಶಾದ್ಯಂತ ಇವೆ. ಜೊತೆಗೆ ಆನ್ಲೈನ್ ಮಳಿಗೆ ಕೂಡ ಇದೆ. ಸುಮಾರು ಮೂರು ಸಾವಿರ ಮಹಿಳೆಯರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇವರ ಕರಕುಶಲ ವಸ್ತುಗಳಿಗೆ ಬೇಡಿಕೆ ಇದೆ.

ಹೀಗೆ ಎಷ್ಟೇ ಕೆಲಸ ಕಾರ್ಯವಿದ್ದರೂ, ಬಿಡುವಿದ್ದಾಗ ಮಗಳ ಕಾಲೇಜು ಲಂಚ್‌ಬಾಕ್ಸ್‌ಗಾಗಿ ಹರೀಶ್ ಅಡುಗೆ ಮಾಡಿ ಕಳಿಸುತ್ತಿದ್ದರು. ಹಾಗೆಯೇ ಅಡುಗೆ ಮಾಡುವಾಗ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಉಪಾಯ ಹೊಳೆಯಿತು. ಕಳೆದ ವರ್ಷ ʻಹ್ಯಾರಿಸ್‌ ಲಂಚ್‌ ಬಾಕ್ಸ್‌ʼ ಎಂಬ ಸೋಷಿಯಲ್‌ ಮೀಡಿಯಾ ಖಾತೆ ಶುರು ಮಾಡಿ ಮಗಳ ಊಟದ ಡಬ್ಬಿಗೆ ಮಾಡಿ ಕಳಿಸುತ್ತಿದ್ದ ಅಡುಗೆಗಳನ್ನ ಚಿತ್ರೀಕರಿಸಿ ಲೋಡ್‌ ಮಾಡತೊಡಗಿದರು.

ಅಷ್ಟೋತ್ತಿಗಾಗಲೇ ಅನೇಕ ಅಡುಗೆ ಯುಟ್ಯೂಬ್‌ ವಾಹಿನಿಗಳಿದ್ದವು. ಆದರೆ ಹರೀಶ್‌ ಅವರು ತಯಾರಿಸುತ್ತಿದ್ದ ವಿವಿಧ ಪಾಕಗಳು, ಅವುಗಳ ವೈಶಿಷ್ಟ್ಯತೆ ಹಾಗೂ ಸರಳತೆಯಿಂದಾಗಿ ಗಮನ ಸೆಳೆದವು; ಉದ್ಯಮ ಸಂಬಂಧ ಪ್ರವಾಸ ಹೋದಾಗ ದೇಶ ವಿದೇಶಗಳಲ್ಲಿ ಸವಿಯುವ ಅಡುಗೆ ಮಾಡುವ ವಿಧಾನ ತಿಳಿದುಕೊಂಡೇ ಬರುತ್ತಿದ್ದರು.

ಹಾಗೆ ಬಂದವರು, ತಮ್ಮದೇ ಪಾಕ ವಿಧಾನ ಪ್ರಯೋಗಿಸುತ್ತಿದ್ದರು. ಇದು ಹೊಸದೊಂದು ಅಧ್ಯಾಯ ತೆರೆಯಲು ಸಹಕಾರಿಯಾಗುತ್ತದೆ ಎಂಬುದನ್ನು ಅವರು ಊಹಿಸಿರಲಿಲ್ಲ. ಜೊತೆಗೆ ತಂದೆ ಮಗಳ ಬಾಂಧವ್ಯವೂ ವೀಕ್ಷಕರಿಗೆ ಇಷ್ಟವಾಯಿತು. ಕಡಿಮೆ ಅವಧಿಯಲ್ಲಿ ʻಹ್ಯಾರಿಸ್‌ ಲಂಚ್‌ ಬಾಕ್ಸ್‌ʼ ವೈರಲ್‌ ಆಗಿ ಜನಪ್ರಿಯವಾಯಿತು.

ʻಅಡುಗೆ ಮಾಡುವಾಗ ಯಾವುದನ್ನೂ ಅಳೆದು ಅಳೆದು ಹಾಕಬಾರದು; ಅಡುಗೆಯನ್ನು ಖುಷಿಯಿಂದ ಮಾಡಬೇಕು. ಜೊತೆಗೆ ಪ್ರೀತಿಯಿಂದ ಮಾಡುವ ಅಡುಗೆಯ ರುಚಿ ಹೆಚ್ಚಿರುತ್ತದೆ. ಅದೇ ಯಶಸ್ಸಿನ ಗುಟ್ಟು ಎಂಬುದು ಹರೀಶ್‌ ಕ್ಲೋಸ್‌ಪೇಟ್‌ ಆತ್ಮವಿಶ್ವಾಸದಿಂದ ಹೇಳುವ ಮಾತು.

ಸಾಮಾನ್ಯ ನೌಕರರು ನಿವೃತ್ತರಾಗುವ 58 ವಯಸ್ಸಿನಲ್ಲಿ ಹರೀಶ್‌ ಅವರು ಮಾಸ್ಟರ್‌ ಶೆಫ್‌-2023ಕ್ಕೆ ಪ್ರವೇಶ ಪಡೆದಿದ್ದಾರೆ. ಮತ್ತು ಆ ಮೂಲಕ ಕ್ರಿಯಾಶೀಲತೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇತರ ಸ್ಪರ್ಧಿಗಳ ನಡುವೆ ವೀಕ್ಷಕರು ಹೆಚ್ಚು ಹೆಚ್ಚು ಓಟ್‌ ಮಾಡಿದರೆ ಅಂತಿಮ ಸುತ್ತಿನವರೆಗೂ ಹೋಗುವ ಅವಕಾಶ ಸಿಗುತ್ತದೆ. ಕರ್ನಾಟಕದ ವೀಕ್ಷಕರು ಕಾರ್ಯಕ್ರಮ ನೋಡಿ ಓಟ್‌ ಮಾಡಿ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂಬ ಭರವಸೆ ಜೊತೆ ಇದ್ದಾರೆ ಹರೀಶ್‌ ಕ್ಲೋಸ್‌ ಪೇಟ್‌.

Social Share :

ಬೆಂಬಿಡದ ಬೆನ್ನು ನೋವು ಜಗ್ಗೇಶ್ ಧಿಡೀರ್ ಆಸ್ಪತ್ರೆಗೆ..

Social Share :

ಕಳೆದ ಒಂದು ವಾರದಿಂದ ಬದ್ರಿ ಕೇದಾರನಾಥ, ಹರಿದ್ವಾರ ಮುಂತಾದ ಪುಣ್ಯ ಕ್ಷೇತ್ರಗಳ ಕಡೆ ಓಡಾಡುತ್ತ ದೇವರ ಸ್ಮರಣೆಯಲ್ಲಿದ್ದ ನವರಸ ನಾಯಕ ಜಗ್ಗೇಶ್ ಇಂದು (ಸೆಪ್ಟೆಂಬರ್ 29) ಧಿಡೀರ್ ಆಸ್ಪತ್ರೆಗೆ ‌ದಾಖಲಾಗಿದ್ದಾರೆ.

ಸದ್ಯ ದೆಹಲಿಯಲ್ಲಿವ ಜಗ್ಗೇಶ್ ಅವರು ಅತಿಯಾದ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.

ನಿನ್ನೆ ಜಗ್ಗೇಶ್ ಅವರು ಮುಖ್ಯ ಪಾತ್ರದಲ್ಲಿದ್ದ ‘ತೋತಾಪುರಿ-2’ ಚಿತ್ರ ಬಿಡುಗಡೆ ಕಂಡಿತ್ತು. ಅದರ ಪ್ರಚಾರದಲ್ಲಿಯೂ ನವರಸ ನಾಯಕರು ಕಾಣಿಸಿಕೊಂಡಿರಲಿಲ್ಲ.

ಬದ್ರಿ ಕೇದಾರನಾಥ, ಹರಿದ್ವಾರ ಶಿವನ ಸನ್ನಿಧಿ ನನಗೆ ಪ್ರೀತಿ ಪಾತ್ರ ಸ್ಥಳವಾಗಿದೆ. ಜೀವನ ಅರ್ಥೈಸುವುದು ಸಾಧ್ಯವಾಗಿದೆ ಎಂದು ಅವರು ‘ಸ್ನೇಹಪ್ರಿಯ’ಗೆ ತಿಳಿಸಿದ್ದರು.

ಅಲ್ಲದೆ ಕಾವೇರಿ ಹೋರಾಟದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ನಾನು ಕನ್ನಡದ ಮಣ್ಣಿನ ಮಗ, ಕಾವೇರಿ ನನ್ನ ತಾಯಿ. ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದೆ. ದೂರ ಉಳಿದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.

ಜಗ್ಗೇಶ್ ಅವರಿಗೆ ಎರಡು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳನ್ನು ಉಲ್ಲೇಖಿಸಿ ಆಪ್ತರು ಮಾಹಿತಿ ನೀಡಿದ್ದಾರೆ.

Social Share :

ರಜನಿಕಾಂತ್ ಅಚ್ಚರಿ ಭೇಟಿ; ಪುಳಕಿತರಾದ ಬಿಎಂಟಿಸಿ ಸಿಬ್ಬಂದಿ

Social Share :


ಎಂದಿನಂತೆ ಕೆಲಸಕ್ಕೆ ಧಾವಿಸಿದ ಬೆಂಗಳೂರಿನ ಜಯನಗರದಲ್ಲಿರುವ ಬಿಎಂಟಿಸಿ 3ನೇ ಘಟಕದ ಸಿಬ್ಬಂದಿಗೆ ಮಂಗಳವಾರ ಬೆಳಿಗ್ಗೆಯೇ ರೋಮಾಂಚಕ ಸಂಗತಿಯೊಂದು ಎದುರಾಯ್ತು..

ಕನಸು ಮನಸಿನಲ್ಲಿಯೂ ಎಣಿಸದ ಅಥವಾ ಕನಸಿನಂತೆಯೇ ಎದುರಾದ ರೋಚಕ ಸನ್ನಿವೇಶದಲ್ಲಿ ಅವರೆಲ್ಲರೂ ಮಿಂದೆದ್ದರು..

ಅದು ರಜನಿಕಾಂತ್..!

ಒಂದು ಕಾಲದಲ್ಲಿ ಬಿಟಿಎಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್; ಆನಂತರ ಸ್ಟಾರ್ ಆಗಿ ಆಗಸದೆತ್ತರ ಬೆಳೆದಿದ್ದು ಇತಿಹಾಸ..

ಆದರೆ ತಾವು ಬೆಳೆದು ಬಂದ ದಾರಿಯನ್ನು ಈ ಸೂಪರ್ ಸ್ಟಾರ್ ಎಂದಿಗೂ ಮರೆಯಲೇ ಇಲ್ಲ. ಬೆಂಗಳೂರಿನ ಪೂರ್ವಾಶ್ರಮದ ಆ ತಾಣವನ್ನು ಅಚ್ಚರಿಯ ಭೇಟಿಯ ಮೂಲಕ ಪರಿಶೀಲಿಸಲು ಮನಸ್ಸು ಮಾಡಿದ್ದರ ಫಲ..

ಆಗಸ್ಟ್ 29ರ ಮಂಗಳವಾರ ಜಯನಗರ ಬಿಎಂಟಿಸಿ ಸಿಬ್ಬಂದಿಗೆ ಮಹಾನ್ ನಟನನ್ನು ನೋಡುವ, ಕಣ್ತುಂಬಿಕೊಳ್ಳುವ ಮತ್ತು ಸೆಲ್ಫಿ ತೆಗೆದುಕೊಳ್ಳುವುದು ವರವಾಗಿ ಬಂದಿತ್ತು.

ಡಿಪೋನ ಸಿಬ್ಬಂದಿಯ ಸಂತಸ, ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಒಬ್ಬ ಸೂಪರ್ ಸ್ಟಾರ್ ಇಷ್ಟೊಂದು ಸರಳವಾಗಿ ತಮ್ಮ ಜೊತೆ ಬೆರೆಯುವರು ಎಂದು ಅವರು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ರಜನಿಕಾಂತ್ ಜೊತೆ ಅವರ ಬಾಲ್ಯದ ಗೆಳೆಯ ರಾಜ್ ಬಹದ್ದೂರ್ ಸಹ ಇದ್ದರು. ಸ್ನಿಗ್ಧ ನಗೆ ತಣ್ಣಗಿನ ಸ್ಪರ್ಶದಿಂದ ಅಲ್ಲಿನ ಜನರನ್ನು ಪುಳಕಿತರಾಗಿಸಿದ ರಜನಿ ಇನ್ನು ಕೆಲವು ಅಚ್ಚರಿ ತಾಣಗಳನ್ನು ಹುಡುಕುತ್ತಿದ್ದರು..

ಸೂಪರ್ ಸ್ಟಾರ್ ರಜನಿಕಾಂತ್ ಈಗ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ನಟ. ಜಪಾನ್, ಚೀನಾ, ಶ್ರೀಲಂಕಾ ಎಲ್ಲಿ ಬೇಕೆಂದರೆ ಅಲ್ಲಿ ಕಂಡು ಕೇಳರಿಯದ ಅಭಿಮಾನಿ ಬಳಗವಿದೆ..

ಮೇಲಾಗಿ ಅವರ ‘ಜೈಲರ್’ ಚಿತ್ರ ಸುಮಾರು 600 ಕೋಟಿ ಗಳಿಕೆ ಮಾಡಿದೆ. ಆದರೆ ರಜನಿಕಾಂತ್ ಈಗ ಶಾಂತಿಯನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ಹಿಮಾಲಯ ಹಾಗೂ ಇತರ ಭಾಗಗಳಿಗೆ ಸಂಚರಿಸಿದ್ದಾರೆ.
ಅದೇ ರೀತಿ ಅವರ ಬಾಲ್ಯದ ದಿನಗಳನ್ನು ಕಳೆದ ಬೆಂಗಳೂರಿನ ಅಚ್ಚರಿಗಳನ್ನು ಅಚ್ಚರಿಯ ಭೇಟಿ ಮೂಲಕವೇ ಹುಡುಕುತ್ತಿದ್ದಾರೆ.

Social Share :

ಹರ್ಷಿಕಾ ಭುವನ್ ಮದುವೆ ಕರೆ

Social Share :

ದೀರ್ಘ ಕಾಲ ಸ್ನೇಹಿತರಾಗಿದ್ದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಸದ್ಯದಲ್ಲಿಯೇ ಸತಿ ಪತಿಗಳಾಗಲಿದ್ದಾರೆ.

ಇದೇ ತಿಂಗಳು ಅಂದರೆ ಆಗಸ್ಟ್ 24 ರಂದು ವಿರಾಜಪೇಟೆಯಲ್ಲಿ ನಡೆಯಲಿರುವ ಅದ್ದೂರಿ ವಿವಾಹ ಸಂಭ್ರಮೋತ್ಸವದಲ್ಲಿ ಹರ್ಷಿಕಾ ಹಾಗೂ ಭುವನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

ಕೊಡವ ಸಾಂಪ್ರದಾಯಿಕ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಗೆ ಆಮಂತ್ರಣ ಪತ್ರ ತಲುಪಿಸಲಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಹಾಗೂ ಸಿನಿಮಾ ಉದ್ಯಮದ ಗಣ್ಯರಾದ
ಡಾ.ಶಿವರಾಜ್ ಕುಮಾರ್, ಡಾ.ರವಿಚಂದ್ರನ್, ಗಣೇಶ್ , ದೊಡ್ಡಣ್ಣ, ಶ್ರೀನಾಥ್ ಜಯಮಾಲ, ಸುಧಾರಾಣಿ, ತಾರಾ, ಮಾಲಾಶ್ರೀ..

ಅನುಪ್ರಭಾಕರ್ ಅಮೂಲ್ಯ, ದಿಗಂತ್, ಅಶ್ವಿನಿ ಪುನೀತ್ ರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್ ,ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಬೇಡಿದೆ ಜೋಡಿ.

 

Social Share :

ಸೂತಕದ ಮನೆಗೆ ಸಾಂತ್ವನಗಳು ಸಾಲುವುದಿಲ್ಲ…

Social Share :


* ಸ್ಪಂದನಾ ಪಂಚಭೂತಗಳಲ್ಲಿ ಲೀನ

* ತಾರೆಯರ ಭಾವುಕ ಕ್ಷಣಗಳು

* ಶೋಕ ಸಾಗರದಲ್ಲಿ ಚಿತ್ರರಂಗ

ಆಕಾಶದ ಭಾರವನ್ನೆಲ್ಲಾ ತಲೆಯ ಮೇಲೆ ಹೊದ್ದು ಮಲಗಿದಂತೆ ಪ್ರಕ್ಷುಬ್ಧ ವಾಗಿದ್ದ ಮನಸ್ಥಿತಿಯನ್ನು ಹತೋಟಿಗೆ ತಂದು ಪ್ರತಿಯೊಬ್ಬರ ಸಾಂತ್ವನದ ಅಪ್ಪುಗೆ ಸ್ವೀಕರಿಸುತ್ತಿದ್ದರೂ ವಿಜಯ ರಾಘವೇಂದ್ರ ಅವರನ್ನಾವರಿಸಿದ್ದ ಶೂನ್ಯ ಭಾವ ಯಾರಿಂದಲೂ ತುಂಬುವುದು ಬಹುಶಃ ಸಾಧ್ಯವಿರಲಿಲ್ಲ..

ಮಲ್ಲೇಶ್ವರದಲ್ಲಿರುವ ನಿವೃತ್ತ ಪೊಲೀಸ್ ಹಿರಿಯ ಅಧಿಕಾರಿ ಬಿ.ಕೆ.ಶಿವರಾಮ್ ಅವರ ನಿವಾಸದ ಆವರದಲ್ಲಿ ಜನ ಸಾಗರದ ನಡುವೆ ಯಾವ ಸ್ಪಂದನೆಯೂ ಇಲ್ಲದಂತೆ ತಣ್ಣಗೆ ಮಲಗಿದ್ದರು ಸ್ಪಂದನಾ..

ಹೇಳಿ ಕೇಳಿ ರಾಜ್ (ದೊಡ್ಮನೆ) ಕುಟುಂಬ; ಜೊತೆಗೆ ರಾಜಕೀಯದಲ್ಲಿ ದೊಡ್ಡ ಪ್ರಭಾವವಿರುವ ಕುಟುಂಬ ಹಾಗಾಗಿ ಚಿತ್ರರಂಗ, ರಾಜಕೀಯ ಹಾಗೂ ಬಂಧು ಬಾಂಧವರಿಗೆ ಕೊರತೆಯೇ ಇರಲಿಲ್ಲ..

ಸಭ್ಯ ನಟ ಎಂದೇ ಹೆಸರಾದ ವಿಜಯ ರಾಘವೇಂದ್ರ ಗಳಿಕೆ ಮಾಡಿರುವ ಸ್ನೇಹ ಬಳಗ ದೊಡ್ಡದು ಜೊತೆಗೆ ಸಿನಿಮಾ ಮನೆತನ. ತಮ್ಮ ಶ್ರೀಮುರಳಿ ಸ್ಟಾರ್ ನಟ ಹೀಗೆ ದೊಡ್ಡತನದ ಸಾಕಷ್ಟು ಕೊಂಡಿಗಳನ್ನು ಹೊಂದಿರುವ ಕಾರಣ ಬುಧವಾರ ಸ್ಪಂದನಾ ಸಾವಿನ ಶೋಕ ಸಾಗರದ ಹೊರತಾಗಿ ಮಾಧ್ಯಮಗಳಲ್ಲಿ ಬೇರೇನೂ ಕಾಣಲೇ ಇಲ್ಲ.

ರಾತ್ರಿ ಸುಮಾರು ಒಂದು ಗಂಟೆಗೆ ಸ್ಪಂದನಾ ಪಾರ್ಥಿವ ಶರೀರ ಥೈಲ್ಯಾಂಡ್ ನಿಂದ ಮನೆಯ ಆವರಣಕ್ಕೆ ಆಗಮಿಸಿದ ಕ್ಷಣದಿಂದ ಆ ಮನೆಯನ್ನು ಸುತ್ತುವರೆದಿತ್ತು ಜನ ಸಾಗರ.

ಥೈ ಏರ್ ವೇಸ್ ಮೂಲಕವೇ ಬಂದ ವಿಜಯ ರಾಘವೇಂದ್ರ ಅವರನ್ನು ಸಹೋದರ ಶ್ರೀಮುರಳಿ ಹಾಗೂ ಚಿತ್ರರಂಗದ ಗೆಳೆಯರು ದುಃಖತಪ್ತರಾಗಿಯೇ ಬರ ಮಾಡಿಕೊಂಡರು.

ವಿಜಯ ರಾಘವೇಂದ್ರ ಮನೆಯ ಆವರಣ ಪ್ರವೇಶಿಸುವಾಗ ಪುತ್ರನ ಕೈ ಹಿಡಿದೇ ಬಂದರು. ಬಳಿಕ ಅವರ ಮಾವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಬಂಧು ಬಳಗದ ಆಗಮನವಾಯ್ತು.

ಬುಧವಾರ ಮುಂಜಾನೆ ಸ್ಪಂದನಾ ಪಾರ್ಥಿವ ಶರೀರವನ್ನು ತಂದು ಮನೆಯ ಆವರಣದಲ್ಲಿ ಇರಿಸಿದ ಅ ಕ್ಷಣದಿಂದ ಲೆಕ್ಕವಿಲ್ಲದಷ್ಟು ಅಭಿಮಾನಿಗಳು, ಗಣ್ಯರು ಸೇರಿ ಅಂತಿಮ ದರ್ಶನ ಪಡೆಯ ತೊಡಗಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಹಿರಿಯ ನಟ ಶ್ರೀನಾಥ್, ದೊಡ್ಡಣ್ಣ, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘಣ್ಣ ಕುಟುಂಬದ ಸದಸ್ಯರು ಸೇರಿದಾಗ ಅಲ್ಲಿ ಕಣ್ಣೀರ ಕಡಲು ಉಕ್ಕಿ ಹರಿಯಿತು.

ನಟ ಯಶ್, ಜಗ್ಗೇಶ್, ಧ್ರುವಸರ್ಜಾ, ರಮೇಶ್ ಅರವಿಂದ್ ಸುಂದರ್ ರಾಜ್, ಭಾ.ಮ.ಹರೀಶ್, ಕೃಷ್ಣ ಅಜಯ್ ರಾವ್, ಕೆ.ಶಿವರಾಂ, ವಿನೋದ್ ರಾಜ್, ಅನುಶ್ರೀ, ಉಮಾಶ್ರೀ, ಜಯಮಾಲ ಹೀಗೆ ಬಂದವರೆಲ್ಲಾ ವಿಜಯ್ ಅಪ್ಪಿ ಸಾಂತ್ವಾನ ಹೇಳುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಹೀಗೆ ರಾಜಕೀಯ ಅಗ್ರಗಣ್ಯರ ದಂಡು ಆಗಮಿಸಿ ವಿಜಯ್ ಹಾಗೂ ಬಿ.ಕೆ.ಶಿವರಾಮ್ ಕುಟುಂಬಕ್ಕೆ ಸಾಂತ್ವಾನ ಹೇಳಿತು.

ಶಾಸಕ ಮುನಿರತ್ನ, ಬಿ.ಕೆ.ಹರಿಪ್ರಸಾದ್, ಎಸ್.ಎ.ಚಿನ್ನೇಗೌಡ ಹಾಗೂ ಕುಟುಂಬದ ಸದಸ್ಯರು ಗಣ್ಯರ ಓಡಾಟದ ಉಸ್ತುವಾರಿ ವಹಿಸಿದ್ದರು.

ಮಲ್ಲೇಶ್ವರ ದಿಂದ ಅಂತಿಮ ಯಾತ್ರೆ ಹೊರಟು ಹರಿಶ್ಚಂದ್ರ ಘಾಟ್ ನಲ್ಲಿ ಅದರ ವಿಧಿ ವಿಧಾನಗಳು ನಡೆದು ಸಂಜೆ 4.45ರ ಸುಮಾರಿಗೆ ಸ್ಪಂದನಾ ಅಗ್ನಿಯಲ್ಲಿ ಲೀನವಾದರು.

ಸ್ಪಂದನಾ ಮರಳಿ ಬಾರದೂರಿಗೆ ಹೊರಟು ಹೋಗಿದ್ದಾರೆ. ಇದು ಅನ್ಯಾಯದ ಸಾವು. ಅಕಾಲಿಕ ದುರ್ಮರಣ..

ಹೀಗೆ ಮರಗುತ್ತಲೇ ಯಾರು ಎಷ್ಟೇ ಅಪ್ಪುಗೆಯ ಸಾಂತ್ವಾನ ನೀಡಿದರೂ ವಿಜಯ ರಾಘವೇಂದ್ರ ಮನ ತುಂಬುತ್ತಿಲ್ಲ..
ಅದು ಖಾಲಿ.. ಖಾಲಿ..
ಶೂನ್ಯ ಭಾವ..

Social Share :

ಮಲಗಿದ ಸ್ಪಂದನಾ ಮತ್ತೆ ಏಳಲಿಲ್ಲ ವಿಜಯ ರಾಘವೇಂದ್ರ ಪತ್ನಿ ಇನ್ನಿಲ್ಲ..

Social Share :


ರಾತ್ರಿ ಮಲಗಿದ ಸ್ಪಂದನಾ (ವಿಜಯ ರಾಘವೇಂದ್ರ ಪತ್ನಿ) ಮತ್ತೆ ಮೇಲೇಳಲೇ ಇಲ್ಲ..!

ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲಿನಂತಹ ಸುದ್ದಿ ಬಂದೆರಗಿದೆ.
ಅದರಲ್ಲೂ ರಾಜ್ ಕುಟುಂಬಕ್ಕೆ ಎರಡನೇ ಆಘಾತ ಇದಾಗಿದೆ..

ಕನ್ನಡದ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ಸ್ಪಂದನ ಅವರಿಗೆ ಥೈಲ್ಯಾಂಡ್ ನಲ್ಲಿ ಲೋ ಬಿಪಿ ಬಳಿಕ ಹೃದಯಾಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ಮಾಹಿತಿ.

ಪೊಲೀಸ್ ಇಲಾಖೆಯಲ್ಲಿ ಕಠಿಣ ಅಧಿಕಾರಿ ಎಂದೇ ಹೆಸರಾಗಿದ್ದ ಬಿ.ಕೆ.ಶಿವರಾಮ್ ಅವರ ಪುತ್ರಿ ಸ್ಪಂದನಾ ಅವರು ನಟ ವಿಜಯ ರಾಘವೇಂದ್ರ ಅವರನ್ನು ಪ್ರೇಮಿಸಿ ಮದುವೆಯಾಗಿದ್ದರು.

ಕಾಫಿ ಡೇ ನಲ್ಲಿ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಭೇಟಿಯಾಗಿ ಪ್ರೇಮಾಂಕುರವಾಗಿತ್ತು. ಬಳಿಕ ಅವರು ಸಂಬಂಧವೇ ಆಗಬೇಕು ಎಂದು ತಿಳಿದಾಗ ಹಿರಿಯರ ಸಮ್ಮತಿ ಜೊತೆ 2007ರಲ್ಲಿ ವಿವಾಹವಾಗಿದ್ದರು.

ಎಲ್ಲರ ಕಣ್ಣು ಬೀಳುವಷ್ಟು ಅನೋನ್ಯವಾಗಿದ್ದ ವಿಜಯ ರಾಘವೇಂದ್ರ ದಂಪತಿಗಳಿಗೆ ಶೌರ್ಯ ಎಂಬ ಪುತ್ರನಿದ್ದಾನೆ. ಪಾರ್ವತಮ್ಮ ರಾಜ್‍ಕುಮಾರ್ ಅವರ ಸಹೋದರ ಎಸ್.ಎ.ಚಿನ್ನೇಗೌಡರ ಪುತ್ರ ವಿಜಯ ರಾಘವೇಂದ್ರ ಅತ್ಯಂತ ಸೌಮ್ಯ ಸ್ವಭಾವದ ನಟ. ಈಗ ಅವರ ಬದುಕಿಗೆ ಬರಸಿಡಿಲು ಬಂದೆರಗಿದೆ.

ಸ್ಪಂದನಾ ಚಿತ್ರರಂಗದ ಜೊತೆ ಉತ್ತಮ ನಂಟು ಹೊಂದಿದ್ದರು. ವಿಜಯ ರಾಘವೇಂದ್ರ ಅಭಿನಯದ ‘ಕಿಸ್ಮತ್’ ಎಂಬ ಚಿತ್ರವನ್ನು ನಿರ್ಮಿಸಿದ್ದರು ಮಾತ್ರವಲ್ಲ; ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿನಯದ ‘ಅಪೂರ್ವ’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು.

ವಿದೇಶ ಪ್ರವಾಸದಲ್ಲಿದ್ದ ಸ್ಪಂದನಾ ಅವರಿಗೆ ಏನಾಗಿತ್ತು ಎಂಬುದರ ಮಾಹಿತಿ ಸದ್ಯಕ್ಕಿಲ್ಲ. ಅವರು ಮಲಗಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ ಎಂದು ವಿಜಯ ರಾಘವೇಂದ್ರ ಸಹೋದರ ನಟ ಮುರಳಿ ಹಾಗೂ ಸ್ಪಂದನಾ ದೊಡ್ಡಪ್ಪ ಹಿರಿಯ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.

ಸ್ಪಂದನಾ ಪಾರ್ಥಿವ ಶರೀರವನ್ನು ಬ್ಯಾಂಕಾಕ್ ನಿಂದ ತರಲು ಸರ್ಕಾರ ಸಹಕಾರ ನೀಡಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದು, ಬಿ.ಕೆ.ಹರಿಪ್ರಸಾದ್ ಈ ಸಂಬಂಧ ಬ್ಯಾಂಕಾಕ್ ಗೆ ತೆರಳಲಿದ್ದಾರೆ.

ಭಾನುವಾರ ರಾತ್ರಿಯೇ ವಿಜಯ ರಾಘವೇಂದ್ರ ಬ್ಯಾಂಕಾಕ್ ಗೆ ತೆರಳಿದ್ದಾರೆ. ಅಲ್ಲಿ ಸೋಮವಾರ ಪೋಸ್ಟ್ ಮಾರ್ಟನ್ ನಡೆದು ಮಂಗಳವಾರ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ ಎಂಬುದು ಸದ್ಯದ ಮಾಹಿತಿ.

Social Share :

ಎಲ್ಲರಂತಲ್ಲ ಈ ನಿರ್ಮಾಪಕರು ಸತ್ಯ ಕರ್ಮದ ವಿಶ್ಲೇಷಕರು

Social Share :

* ಧನರಾಜಬಾಬು ಜಿ. ಬಿ.ಟೆಕ್
* ಭೂವರಾಹ ಟ್ರಸ್ಟ್ ನ ಮುಖ್ಯಸ್ಥರು
* ಈ ಪ್ರಕೃತಿಯಿಚ್ಛಾ ನಿಸ್ವಾರ್ಥ ಸಹಬಾಳ್ವೆ ಇವರ ತತ್ವಸಿದ್ದಾಂತ.
* ವಾಸ್ತವತಾ ವಿಚಾರದೊಳಗಿನ ಅಮೃತಬೇರಾದ ಪಚ್ಚಸಂಸ್ಕಾರದ ಸತ್ಯತಾ ಮನೆಚ್ಚರ ಪ್ರಚುರಕಾರರು
* ಇಹ ಪರದ ಆತ್ಮಾವಲೋಕನಾದ ನಿಗೂಢತೆಯ ವಿಶ್ಲೇಷಕರು.
* ಎದೆಗಾರಿಕೆಯ ಸಹನಿರ್ಮಾಪಕರು
* ಶಿಥಿಲಗೊಂಡ ದೇವಾಲಯದ ಪುನರ್ ಜೀರ್ಣೋದ್ಧಾರ ವಿಗ್ರಹಗಳ ಪುನರ್ ಪ್ರಾಣಪ್ರತಿಷ್ಠದ ಕಾರ್ಯ ಮತ್ತು ಕಲಿಕಾ ವರ್ಗದವರ ಶಿಕ್ಷಣಕ್ಕೆ ಸಹಾಯ ಉತ್ತೇಜನ.

ನಗರದ ಹಾಗು ಹೊರವಲಯದ ವೇಗದ ಬದುಕಿನ ನಡುವೆ ನಮ್ರತೆಯನ್ನು ಬೆಳೆಸಿ ಪೋಷಿಸುವುದು ಸಾಮಾನ್ಯ ವಿಷಯವಲ್ಲ.
ಎಲ್ಲರಲ್ಲಿಯೂ ಸಹೃದಯಿಯಾಗಿರಲು ಬಯಸುವ ಹಂಬಲಿಕೆಯವರು.
ಧರ್ಮದಲ್ಲಿ ಧರ್ಮಾಂಧದ ನಂಜನ್ನು ಬೆರೆಸಿಕೊಳ್ಳಬೇಡಿಯೆಂದು ಸಾರುವ ವೈಚಾರಿಕ ನೆಲೆಯ ಪೋಷಣೆ; ಬದುಕಿನ ವಿವಿಧ ಮಜಲುಗಳ ಹುಡುಕಾಟ; ವ್ಯಾವಹಾರಿಕ ಜಗತ್ತಿನ ಮಹತ್ವದ ನಂಟು..
ಇವುಗಳೆಲ್ಲದರ ಮಧ್ಯೆ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯ ಎಂಬಂತೆ ನಡೆದುಕೊಳ್ಳುವ ಅಪರೂಪದ ವ್ಯಕ್ತಿ ಭೂವರಾಹ ಟ್ರಸ್ಟ್‌ ನ ಮುಖ್ಯಸ್ಥರು..

ಅವರೇ ಧನರಾಜಬಾಬು ಜಿ. !

ಈಚೆಗೆ ಬಿಡುಗಡೆ ಕಂಡ ‘ಡೆವಿಡ್’ ಎಂಬ ಚಿತ್ರವನ್ನು ಸಹನಿರ್ಮಾಪಕರಾಗಿ ಪೋಷಿಸಿ ಬೆಳೆಸಿದವರು. ಕೊರೊನಾ ಅಥವಾ ಇತರ ಕಾರಣಗಳಿಂದ ನಿಂತು ಹೋಗಿದ್ದ ಚಿತ್ರಕ್ಕೆ ಜೀವತುಂಬಿ ಬಿಡುಗಡೆಯ ಅಂಚಿಗೆ ತಂದು ನಿಲ್ಲಿಸಿದವರು.

ಮೂಲಗುರು ಕಪಿರಾಯಪೂಜಿತ ಭೂವರಾಹ ಕೇಶವ ನಾಮಾಂಕಿತದಲ್ಲಿ ನಾರಾಯಣನನ್ನು ಸದಾ ಧ್ಯಾನಿಸುವ ಧನರಾಜಬಾಬು ಅವರಿಗೆ ಈ ಮಣ್ಣು, ಸಂಸ್ಕೃತಿ, ಯಾವೊಂದು ಜೀವದ ಪುನರಪಿ ಹುಟ್ಟುಸಾವಿನ ಕರ್ಮಚಕ್ರಾಟದ ಸತ್ಯಾಸತ್ಯತೆಯ ಅಧ್ಯಾಯನ, ಪುನರ್ಜನ್ಮದ ಜೀವಕರ್ಮದ ವಾಸನೆಯ ವಿಚಾರವನ್ನರಿಯುವ ಆಸಕ್ತಿ.

ಭೂವರಾಹ ಟ್ರಸ್ಟ್ ನ ಮೂಲಕ ಇಹಾ ಹಾಸ್ಪಿಟಲ್ ಎಂಬ ಹೆಸರಿನಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಿರುವುದು ಇವರ ಹೆಗ್ಗಳಿಕೆ. ಅಲ್ಲದೆ ಪ್ರತಿ ನಿತ್ಯ ತಮ್ಮನ್ನು ಅರಸಿ ಬರುವ ನೊಂದ ಜೀವಗಳಿಗೆ ಧೈರ್ಯಮಾತು, ಬುದ್ದಿಮಾತು, ಸಜ್ಜನತೆ ಹಾಗು ಸಹಾಯಹಸ್ತ ಚಾಚುವ ಗುಣ ಯಾರಿಗೂ ತಿಳಿದಿಲ್ಲ. ಏಕೆಂದರೆ ಅಂತಹ ವಿಷಯಗಳು ಪ್ರಚಾರದ ರೂಪ ಪಡೆಯಬಾರದು ಎಂಬುದು ಅವರ ಅಭಿಲಾಷೆ.

ಇನ್ನು ಬರಹದ ವಿಷಯಕ್ಕೆ ಬಂದರೆ ಅವರೊಳಗಿನ ಅಗಾಧ ಶಕ್ತಿಯ ಪರಿಚಯವೇ ಆಗುತ್ತದೆ. ಪ್ರತಿ ವಿಷಯದ ಬಗ್ಗೆಯೂ ಅವರ ಒಳನೋಟದೊಳಗೆ ಮತ್ತೊಂದು ಒಳನೋಟ ಅಚ್ಚರಿಗೆ ದೂಡುತ್ತದೆ.
ಪ್ರತಿಯೊಬ್ಬ ಲೇಖಕನಿಗೆ ಒಂದು ಜೀವನ ದೃಷ್ಟಿ ಇರುತ್ತದೆ. ಅದು ಕೃತಿಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಧನರಾಜಬಾಬು ಅವರ ವಿಚಾರ ದೃಷ್ಟಿ ವಿಶಾಲ ನೆಲೆಯಲ್ಲಿ ಬಹುಮುಖ ವ್ಯಾಪ್ತಿಯನ್ನು ಪಡೆದುಕೊಂಡಿರುವುದೇ ವಿಶೇಷ.

ಅದರಲ್ಲಿ ಮುಖ್ಯವಾಗಿ ಆಧ್ಯಾತ್ಮ, ಸಂಸ್ಕೃತಿ, ಉಪಾಸನೆ, ಆಚಾರ, ವಿಚಾರ, ಧರ್ಮ, ದೈವ, ಸಂಸ್ಕಾರ, ಸಹಬಾಳ್ವೆ, ಪ್ರೀತಿ, ನೋವು, ಮಮತೆ, ಎಚ್ಚರ, ಮಾನವೀಯತೆ, ಸೌಂದರ್ಯೋಪಾಸನೆ ಎಲ್ಲವೂ ಇರುತ್ತದೆ. ಅವರ ಮನಸ್ಸಿನ ಚಿಂತನೆ ಚಾಣಕ್ಯ ನೀತಿಗೆ ಅನುಗುಣವಾಗಿ, ವಿಧುರ ನೀತಿ ಅಡಕವಾಗಿ ಪ್ರಜ್ಞಾಪೂರ್ವಕವಾಗಿ ಬೆಳೆದು ಎಲ್ಲವನ್ನು ಪ್ರಶ್ನಿಸಿ, ಕೆದಕಿ, ಹುಡುಕಿ ಕೊನೆಗೆ ಜೀವನಾದರ್ಶವಾಗಿ ನಿಲ್ಲುತ್ತದೆ.

ಅವರ ಕೃತಿಯಾದ ಎನ್ಮನ ನೆರಳಿನ ನಗ್ನಾಂಧತೆಯ ಕಾರ್ಮೋಡವನ್ನು ಅನ್ವೇಷಣೆ ಮಾಡಿದಾಗ ಕಾಣುವುದು ಜೀವನದ ವಿರಾಟ್ ರೂಪವೇ. ಬೇರೆಯವರ ವಿಚಾರಗಳಿಗೆ ಇವರ ವಿಚಾರಗಳು ಮುಖಾಮುಖಿಯಾದಾಗ ಹೋಲಿಕೆಗೂ ನಿಲುಕದಾಗಿ ಜೀವನ ಮತ್ತು ದೃಷ್ಟಿಕೋನ ಹೊಂದಿರುವ ವಿಶಾಲ ನೆಲೆಯೂ ಗೋಚರವಾಗುತ್ತದೆ.

ಆಗ ನಮಗನಿಸುವುದು ‘ಬದುಕನ್ನು ವಿಶಾಲ ವ್ಯಾಪ್ತಿಯಲ್ಲಿ ನೋಡಿದಾಗ ಮಾತ್ರ ಇಂತಹ ಬರಹಗಳು ಸಾಧ್ಯ..’.
ಅವರ ಒಂದು ಬರಹದ ರೂಪತೆಯು ಹೀಗಿರುತ್ತದೆ..

‘ಪರಲೋಕ’
___________

‘ಊರನ್ನು ಮೆಚ್ಚಿಸಲೋಗಿ ಮೂರ್ಖನಾದೆ.
ಈ ಜಗದಲ್ಲಿನ ಮನ ಬಣ್ಣವನ್ನು ಬಣ್ಣಿಪುವುದರಲ್ಲಿ ಎಡವಿದೆ.
ಎನ್ನ ತಪ್ಪನ್ನು ಎತ್ತಿತೋರಿ ತನ್ನ ಬೇಳೆಕಾಳನ್ನು ಬೇಯಿಸಿಕೊಂಡವನ ಬಾಯಿಗೆ ಬೀಗವನ್ನಾಕಲೋಗುವುದರಲ್ಲಿ ಭೀತನಾದೆ.
ಇಹಲೋಕದ ಸತ್ಯಕರ್ಮ ವ್ಯಾಪಾರತೆಯ ಭೋಗಭೋಗಾಂಧದ ಮರ್ಮತೆಯಲ್ಲಿ ಯಶಕಾಣಲೋಗಿ ಸೋಲಿನಲ್ಲಿ ಬೆಂದೆ.
ಪರಲೋಕದ ಸ್ವರ್ಗಬಾಗಿಲನ್ನು ದಾಟಲು ಕನವರಿಸಿದ್ದರಲ್ಲಿ ಪಚ್ಚಕಾಯಕದ ಭೂಸ್ವರ್ಗದ ಬಾಗಿಲಿನ ಶಾಪಕ್ಕೆ ತುತ್ತಾದೆ.
ಕಾಲಮರ್ಮತೆಯ ಚಕ್ರವ್ಯೂಹದಲ್ಲಿ ನಾನಾಗಿಯೇ ಸ್ವಾರ್ಥತೆಯ ಮನೋಮೂಢನಾಗಿ ಸಿಕ್ಕಿಕೊಂಡು ಒದ್ದಾಡಿ ಬಲಿಯಾಗುವುನೆಂಬ ಭವಿಷ್ಯಭಯದ ರಾಕ್ಷಸನು ಎನ್ನನ್ನು ಆವರಿಸಿದ್ದಾದರೂ, ಇದರ ಕಾರಣತೆಯನ್ನು ನಿನ್ನಲ್ಲಿ ಮರೆಸಲಾಗದ ಎನ್ಮನ ನೆರಳಿನ ಜಾಣ್ಕಿರುಕಾಂಧೇಶ್ವರನೆ ನಾನಾದೆನಲ್ಲೊ ಎನ್ನ ಮೂಲಗುರು ಕಪಿರಾಯಪೂಜಿತ ಪ್ರಕೃತಿನಾಥ ಭೂವರಾಹ ಕೇಶವನೆ’.

ಮಾನವ ಕುಲದ ಆಸೆ, ನಿರಾಸೆ, ನಿಷ್ಟುರತೆ, ಆಸೆಬುರುಕುತನ, ಅಸೂಯೆ ಎಲ್ಲದರ ಅಭಿವ್ಯಕ್ತಿಯಾಗಿಯೇ ಬರಹ ನಿಲ್ಲುವಾಗ; ಆ ದೇವರು ಎಲ್ಲದರಲ್ಲಿಯೂ ಒಳಗೊಂಡು ಜೀವಿಸುವುದನ್ನು ನೋಡುವ ವಿಶಾಲ ದೃಷ್ಟಿಕೋನದ ನೆಲೆಯಲ್ಲಿ ನೋಡಲಾಗುತ್ತದೆ.
ಧನರಾಜಬಾಬು ಅವರ ಬರಹದ ವಿಶೇಷತೆ ಏನೆಂದರೆ ಅದು ಅವರ ಆರಾಧ್ಯದೈವ ಕಪಿರಾಯಪೂಜಿತ ಭೂವರಾಹ ಕೇಶವ ಸ್ಮರಣೆಯಲ್ಲಿ ಅಂತ್ಯವಾಗುತ್ತಲೇ ಅರ್ಥಪೂರ್ಣವಾಗುತ್ತವೆ.

ಧನರಾಜಬಾಬು ನೋಡಲು ಸರಳ ಮತ್ತು ಸಹೃದಯ. ಆದರೆ ಬಾಲ್ಯವನ್ನು ಮೀರುವಾಗಲೇ ದೈವ ದೈವತ್ವದ ತಪ್ಪಲಲ್ಲಿ ಕುಳಿತು ಆಧ್ಯಾತ್ಮದ ಚಿಂತನೆ ನಡೆಸಿದವರು ಎಂಬುದು ಅಚ್ಚರಿ ಆದರೂ ಸತ್ಯ. ಅವರ ಅನ್ವೇಷಣೆಯಲ್ಲಿ ಬದುಕು ಸ್ಪಷ್ಟತೆ ಕಂಡುಕೊಂಡಿದೆ.

ಆದರೆ ವೇಗದ ಜೊತೆ ಸೆಣಸುವ ಜನರಿಗೆ ಅವರ ವಿಚಾರಧಾರೆ ಕಬ್ಬಿಣದ ಕಡಲೆ ಆಗಿರಲೂ ಬಹುದು. ಧನರಾಜಬಾಬು ಅವರು ನಿಜವಾಗಿ ವೇಗದ ಜೊತೆ ಸೆಣಸಿ, ಸೋತು ಗೆದ್ದು ಕಲಿತವರು‌. ತಮ್ಮ ವಿವೇಕ ಮತ್ತು ಶಕ್ತಿಯುತ ಭಾವನೆಗಳಿಂದ ಇತರರನ್ನು ಬೆರಗುಗೊಳಿಸಿದವರು. ಇದೇ ಅವರ ವಿಚಾರ ಧಾರೆಗೆ ಸ್ಫೂರ್ತಿ.


ಆ ದೇವರು ಅಂದರೆ ಕಪಿರಾಯಪೂಜಿತ ಭೂವರಾಹ ಕೇಶವನು ಈ ಪ್ರಕೃತಿಯ ಒಳಗೂ ಹೊರಗೂ ಅಡಕವಾಗಿ ಕುಳಿತಿರುವಾಗ ಅದರ ಶೋಧನೆ ಜೊತೆ ಆಧ್ಯಾತ್ಮದ ಶೋಧನೆ ಕೂಡ ದೊರಕಿದರೆ ಹೇಗೆ ಜ್ಞಾನದ ಅಭಿವ್ಯಕ್ತಿ ಸಾಧ್ಯವೋ ಹಾಗೆ ಅಪರಿಮಿತ ಜ್ಞಾನದ ಹೊಳವಿನಲ್ಲಿ ಅವರ ಬರಹ ಪ್ರಕಾಶಮಾನ. ಆದರೆ ಓದುವ ಕ್ರಮ ಸರಿಯಾದ ರೀತಿಯಲ್ಲಿ ಇರಬೇಕು ಅಷ್ಟೇ.
ಒಂದು ವರ್ಷಗಳ ಹಿಂದೆ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಗೊಂಡ ಅವರ ಕೃತಿ ‘ಎನ್ಮನ ನೆರಳು’ ಆಧ್ಯಾತ್ಮದ ಅಗಾಧ ರೂಪವನ್ನೇ ಪರಿಚಯಿಸುತ್ತದೆ. ಅದರ ಹಿಂದಿನ ಶಕ್ತಿ ದೈವ ದೈವತ್ವದ ತಪ್ಪಲಿನಲ್ಲಿ ದೊರೆತ ಜ್ಞಾನೋದಯದ ಮಹತ್ವವೇ ಇರಬಹುದು.

ಅದೊಂದು ವಿಚಾರ ಶಕ್ತಿ. ಅನುಭವದ ಸಾಧ್ಯತೆಯಲ್ಲಿ ತೆರೆದುಕೊಂಡ ಬದುಕಿನ ಸಾರ ಅದು. ಕ್ರಿಯಾತ್ಮಕ ಶಕ್ತಿಯ ನೆಲೆಯಲ್ಲಿ ರೂಪುಗೊಂಡ ವೈವಿಧ್ಯಮಯ ವಿಚಾರಧಾರೆ ಮನುಷ್ಯನ ಚೇತನ, ಧರ್ಮ ಅಥವಾ ಸಮಾಜದ ಜೀವನ ಅನಿಸಲೂ ಬಹುದು.
ಸಾಮಾಜಿಕ ನೆಲೆಯಲ್ಲಿ ಸಾಧನೆ ಹೇಗಿರಬೇಕು ಎಂಬುದಕ್ಕೆ ಧನರಾಜಬಾಬು ಅವರು ಅತ್ಯುತ್ತಮ ಉದಾಹರಣೆ. ವಾಸ್ತವದ ನೆಲೆಯಲ್ಲಿ ಅವರೊಂದು ಸ್ಫೂರ್ತಿ. ಆಧ್ಯಾತ್ಮಿಕ ನೆಲೆಯಲ್ಲಿ ಅವರು ಇತರರಿಗೆ ಅನುಕರಣೆ.


ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಅದ್ವಿತೀಯ ಸಾಧನೆ ಮಾಡಿದ ಮಹಾಪುರುಷರ ಸಾಲಿನಲ್ಲಿ ಖಂಡಿತಾ ನಿಲ್ಲಬಲ್ಲವರು. ಮುಖ್ಯವಾಗಿ ದಾನದ ಪರಿಧಿಯಲ್ಲಿ ದೀನರಿಗೆ ನೆರವಾಗಿ ದಾನದ ಮಹತ್ವ ಸಾರುವಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟವರು.

 

Social Share :

ಚಿತ್ರರಂಗದ ಸಂಧಾನದ ಫಲ ಎನ್.ಕುಮಾರ್ ಪ್ರತಿಭಟನೆ ಹಿಂದಕ್ಕೆ

Social Share :

ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ನಟ ಸುದೀಪ್ ಅವರ ನಡುವಿನ ಸಿನಿಮಾ ಬದ್ಧತೆ ವಿಷಯದಲ್ಲಿ ನಡೆಯುತ್ತಿರುವ ಜಟಾಪಟಿ ಈಗ ತಣ್ಣಗಾಗುವ ಲಕ್ಷಣ ಕಾಣುತ್ತಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯುವ ಸಮಾಲೋಚನೆ ನಡೆದಿದೆ.

ಸ್ಟಾರ್ ನಟ ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋದ ಬಳಿಕ ನಿರ್ಮಾಪಕ ಎಂ.ಎನ್.ಕುಮಾರ್ ಬೇರೆ ದಾರಿ ಹುಡುಕಿಕೊಂಡು ವಾಣಿಜ್ಯ ಮಂಡಳಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದರು.

ಸುದೀಪ್ ಜೊತೆ ಸಿನಿಮಾ ಮಾಡುವ ಬದ್ಧತೆ ವಿಷಯದಲ್ಲಿ ಅಸಹಕಾರ ತೋರುತ್ತಿದ್ದಾರೆ. ಸಿನಿಮಾ ಬದ್ಧತೆಯನ್ನು ಗೌರವಿಸಿ ಎಂದು ಎಂ.ಎನ್.ಕುಮಾರ್ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದ್ದರು.

ಹಾಗೆಯೇ ವಾಣಿಜ್ಯ ಮಂಡಳಿಗೂ ಪತ್ರ ಬರೆದಿದ್ದರು. ಈ ವಿಷಯ ಬೆಳೆದು ಬೆಳೆದು ದೊಡ್ಡದಾಗುವ ಹೊತ್ತಿಗೆ ವಿಷಯದೊಳಕ್ಕೆ ಜಾಕ್ ಮಂಜು, ರೆಹಮಾನ್ ಇತರರು ಪ್ರವೇಶ ಪಡೆದಿದ್ದರು.

ವಿಷಯ ಜಟಾಪಟಿ ಹಂತಕ್ಕೂ ತಲುಪಿತು. ಸುದೀಪ್ ಸಹ ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದರು ಮಾತ್ರವಲ್ಲ; ಎಂ.ಎನ್.ಕುಮಾರ್ ವಿರುದ್ಧ ನ್ಯಾಯಾಲಯದ ಮೊರೆ ಹೋದರು.

ಆಗ ಕುಮಾರ್ ಅವರು ವಾಣಿಜ್ಯ ಮಂಡಳಿ ಆವರಣದಲ್ಲಿ ಪ್ರತಿಭಟನಾ ಧರಣಿ ಕುಳಿತರು. ಇದಕ್ಕೆ ನಿರ್ಮಾಪಕರ ಹಾಗೂ ಚಿತ್ರರಂಗದ ಇತರ ವಲಯಗಳಿಂದ ಬೆಂಬಲ ವ್ಯಕ್ತವಾಯಿತು.

ಇದೇ ವೇಳೆ ಚಿತ್ರರಂಗದಲ್ಲಿ ಹಿರಿಯರಾದ ವಿ.ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅವರಿಗೆ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಸಂಧಾನ ನಡೆಸುವಂತೆ ಮಾಡಿದ ಮನವಿಗೆ ಈ ಇಬ್ಬರು ಸ್ಟಾರ್ ನಟರು ಮಾತುಕತೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

ಈಗ ವಾತಾವರಣ ತಿಳಿಯಾಗಿದ್ದು, ಎಂ.ಎನ್.ಕುಮಾರ್ ಪ್ರತಿಭಟನೆಯಿಂದ ಹಿಂದೆ ಸರಿಯುವ ಆಲೋಚನೆ ಮಾಡಿದ್ದಾರೆ.

Social Share :

ಅಪ್ಪು ಹೆಸರಿನಲ್ಲಿ ಪರೀಕ್ಷಾ ಯಂತ್ರ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ..

Social Share :


* ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಣೆ

* ಸಬ್ಸಿಡಿ ಮುಂದುವರಿಕೆಗೆ ಸಮಿತಿ

* ಡಾ.ರಾಜ್ ವಸ್ತು ಸಂಗ್ರಹಾಲಯ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ‘ಆರೋಗ್ಯ ಯಂತ್ರ’ ಸ್ಥಾಪಿಸುವುದೂ ಸೇರಿದಂತೆ ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಮೂರು ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜುಲೈ 7) ಮಂಡಿಸಿದ ಬಜೆಟ್ ನಲ್ಲಿ ಚಿತ್ರರಂಗದ ಬೇಡಿಕೆಗಳನ್ನು ಪುರಸ್ಕರಿಸಿ ರೂಪಿಸಲಾದ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಅಭಿಮಾನಿಗಳ ದೇವರು ಕರ್ನಾಟಕ ರತ್ನ  ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಹೃದಯ ತಪಾಸಣೆಗೆ ಅನುಕೂಲವಾಗುವ ಸ್ವಯಂಚಾಲಿತ ಬಾಹ್ಯ ಡಿ ಪೈಬ್ರಿಲೇಟರ್ (ಎಇಡಿ) ಯಂತ್ರಗಳನ್ನು ಪ್ರತಿ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಅಳವಡಿಸುವುದಾಗಿ ಪ್ರಕಟಿಸಿದ್ದಾರೆ.

ಅತ್ಯಂತ ಸೂಕ್ಷ್ಮ ಸಣ್ಣ ತಂತು ಪರೀಕ್ಷಾ ಗುಣಗಳನ್ನು ಹೊಂದಿರುವ ಈ ಯಂತ್ರ ಹೃದಯಾಘಾತವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿರುತ್ತದೆ.

ಅಂದುಕೊಂಡಿರುವಂತೆಯೇ ಮೈಸೂರಿನಲ್ಲಿ ಜಾಗತಿಕ ಮಟ್ಟದ ಚಿತ್ರನಗರಿಯನ್ನು ಸ್ಥಾಪನೆ ಮಾಡುವುದಾಗಿಯೂ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.

ಈಚೆಗೆ ಹಿರಿಯ ನಟ ಶ್ರೀನಿವಾಸಮೂರ್ತಿ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರನಗರಿ ಸಂಬಂಧ ಗಮನ ಸೆಳೆದಿತ್ತು.

ಕನ್ನಡದ ಗುಣಮಟ್ಟದ ಚಿತ್ರಗಳಿಗೆ ಸಹಾಯಧನ ನೀಡುವುದೂ ನಿಂತು ಹೋಗಿರುವ ಬಗ್ಗೆಯೂ ಗಮನ ಸೆಳೆಯಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸಿದ್ದರಾಮಯ್ಯ ಅವರು ಈ ಸಂಬಂಧ ಸದ್ಯವೇ ಚಿತ್ರಗಳ ಆಯ್ಕೆ ಸಮಿತಿ ಮಾಡಿ ಸಹಾಯ ಧನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದೆಂದು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.

ಅಲ್ಲದೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ವರನಟ ಡಾ.ರಾಜ್ ಕುಮಾರ್ (ಸಮಾಧಿ ಸ್ಥಳ) ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯ ಸ್ಥಾಪಿಸುವುದಾಗಿಯೂ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ.

Social Share :

ಶಿವಣ್ಣ ದಂಪತಿ ಭೇಟಿ ಮಾಡಿದ ರಣದೀಪ್ ಸಿಂಗ್ ಸುರ್ಜೆವಾಲ

Social Share :

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿ ಆಡಳಿತ ಚುಕ್ಕಾಣಿ ಹಿಡಿತ ಬೆನ್ನಲ್ಲೇ ಆ ಗೆಲುವಿಗೆ ಕಾರಣಕರ್ತರಿಗೆ ಕಾಂಗ್ರೆಸ್ ಧನ್ಯವಾದ ಹೇಳುತ್ತಿದೆ.

ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ ಬೆಂಬಲ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಭೇಟಿ ಮಾಡಿದ್ದಾರೆ.

‘ಇದೊಂದು ಸೌಹಾರ್ದ ಭೇಟಿಯಾಗಿತ್ತು’ ಎಂದು ಸುರ್ಜೆವಾಲ ಹೇಳಿಕೆ ನೀಡಿದರು. ಬಳಿಕ ಚುನಾವಣಾ ಸಮಯದಲ್ಲಿ ಶಿವಣ್ಣ ದಂಪತಿ ಮಾಡಿದ ಸಹಾಯ ಮತ್ತು ಸಹಕಾರ ಮರೆಯುವಂತಿಲ್ಲ ಎಂಬುದನ್ನು ಪಕ್ಷವು ಸದಾ ನೆನೆಯುತ್ತದೆ ಎಂದು ತಿಳಿಸಿದ್ದಾರೆ.

ಈ ಭೇಟಿ ಸಂದರ್ಭದಲ್ಲಿ ಶಿವಣ್ಣ ದಂಪತಿ ನಡೆದುಕೊಂಡ ರೀತಿ ನೀಡಿದ ಆತಿಥ್ಯ ಅದ್ಭುತ ಎಂದವರು ಕೊಂಡಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Social Share :