Snehapriya.com

June 1, 2025

ರಾಜಕೀಯ-ವಿಶ್ಲೇಷಣೆ

ಮೌಲ್ಯಧಾರಿತ ರಾಜಕಾರಣ ನೆನಪಾದ ರಾಮಕೃಷ್ಣ ಹೆಗಡೆ

Social Share :

ಕರ್ನಾಟಕ ಕಂಡ ಮೊದಲ ಕಾಂಗ್ರೇಸ್ಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ (29 ಆಗಸ್ಟ್ 1929) ನಯ ನಾಜೂಕುತನದ ಚಾಣಾಕ್ಷ ನಡೆಯ ಲೆಕ್ಕಾಚಾರದ ರಾಜಕಾರಣಿ. ಆರು ಸಲ ವಿಧಾನಸಭೆ ಎರಡು ಸಲ ರಾಜ್ಯಸಭೆಗೆ ಆಯ್ಕೆಯಾಗಿ 1983 ರಿಂದ 1988 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದವರು. ಹಾಗೆಯೇ ರಾಷ್ಟ್ರ ರಾಜಕಾರಣದ ಎಲ್ಲಾ ಪಟ್ಟುಗಳನ್ನು ಅರಿತ ಕಟ್ಟಾಳು ಆಗಿದ್ದರೂ ಪ್ರಧಾನಿ ಹುದ್ದೆ ಕೈ ಗೂಡಲಿಲ್ಲ ವ್ಯಸನದಲ್ಲೇ ಕೊರಗಿದವರು.

ದೇವರಾಜ ಅರಸರ ನಂತರ ಆಡಳಿತ ಮಾದರಿಯ ಹೊಸ ಮಜಲನ್ನು ಪರಿಚಯಿಸಿದ ಹೆಗಡೆ 1983 ರಲ್ಲಿ ಅಪರಿಚಿತರಂತೆ ಕಂಡು ಬಂದವರು ಒಂದೇ ವರ್ಷದಲ್ಲಿ ಕರ್ನಾಟಕದ ಜನರಿಗೆ ಪರಿಚಯದ
ವಿಶಿಷ್ಟರಾಗಿ ಗೋಚರಿಸತೊಡಗಿದರು. ವಿಧಾನಸಭೆ ವಿಸರ್ಜಿಸಿ ಚುನಾವಣೆಯಲ್ಲಿ ಬಹುಮತದ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ರಾಷ್ಟ್ರ ರಾಜಕಾರಣವನ್ನು ಒಮ್ಮೆ ಅಲುಗಾಡಿಸಿದ ವಾಮನ ಮೂರ್ತಿ!

ಹದಿಮೂರು ಬಾರಿ ಬಜೆಟ್ ಮಂಡಿಸಿದ ಅನುಭವಿ ರಾಜಕಾರಣಿ ಹೆಗಡೆಯವರು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ದೇವೇಗೌಡರು, ಬಂಗಾರಪ್ಪ ಹಾಗೂ ಬೊಮ್ಮಾಯಿಯವರ ನಡುವೆ ಪೈಪೋಟಿ ಇದ್ದದ್ದನ್ನು ತುಂಡರಿಸಿದ ಚಂದ್ರಶೇಖರ್ ಮತ್ತು ಬಿಜು ಪಟ್ನಾಯಕ್ ಹೆಗಡೆಯವರನ್ನು ಆ ಸ್ಥಾನಕ್ಕೆ ಕೂರಿಸುವ ಜವಾಬ್ದಾರಿಯನ್ನು ದೇವೇಗೌಡರ ಭುಜಕ್ಕೆ ಕಟ್ಟಿದರು. ಜನತಾ ಪಕ್ಷದೊಳಗೆ ಕ್ರಾಂತಿರಂಗದ ವಿಲೀನ ಪ್ರಕ್ರಿಯೆಯ ನಂತರ ಬಿಜೆಪಿ ತನ್ನ ಬೆಂಬಲವನ್ನು ಘೋಷಿಸಿತು.

ದೇವೇಗೌಡರು ಜನತಾ ಪಕ್ಷದ ಅಧ್ಯಕ್ಷರಾಗಿ ರೂಪಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಬದಲಾಯಿಸಿದ ನ್ಯಾಷನಲ್ ಸೆಕ್ರಟರಿ ಹೆಗಡೆಯವರ ಧೋರಣೆಯಿಂದಾಗಿ ಜನತಾ ಪಕ್ಷಕ್ಕೆ ದಕ್ಕಿದ್ದು 63 ಸ್ಥಾನ ಮಾತ್ರ ಅದರ ಹಿಂದಿನ 1978 ರ ಚುನಾವಣೆಯಲ್ಲಿ 58 ಸ್ಥಾನ ಗಳಿಸಿತ್ತು. ಹೊಸದಾಗಿ ರಚನೆಯಾಗಿದ್ದ ಕ್ರಾಂತಿರಂಗ 32 ಸ್ಥಾನ ಗಳಿಸಿ ಕಾಂಗ್ರೆಸ್ ಪ್ರಭಾವವನ್ನು 80 ಸ್ಥಾನಗಳಿಗೆ ಸೀಮಿತಗೊಳಿಸಿದ ಪರಿಣಾಮ ವಿರೋಧಪಕ್ಷ ಮೊದಲ ಬಾರಿಗೆ ಅಧಿಕಾರಕ್ಕೆ ಬರುವಂತಾಯಿತು.ಬಿಜೆಪಿಯ 18 ಶಾಸಕರು ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶ ಮಾಡಿದರು.

ಹೆಗಡೆ ಮುಖ್ಯಮಂತ್ರಿ ಆದರೆ ಮಾತ್ರ ಸರ್ಕಾರವನ್ನು ತೂಗಿಸಿಕೊಂಡು ಹೋಗಲು ಸಾಧ್ಯ ಎಂಬುದನ್ನು ದೆಹಲಿಯ ನಾಯಕರು ನಿರ್ಧರಿಸಿ ಬಿಟ್ಟಿದ್ದರು. ಒಂದು ವೇಳೆ ದೇವೇಗೌಡರ ಪಟ್ಪಿ ಅಖೈರು ಗೊಂಡಿದ್ದರೆ ಇನ್ನಷ್ಟು ಶಾಸಕರು ಜನತಾ ಪಕ್ಷದಿಂದ ಗೆದ್ದು ಕಾಂಗ್ರೆಸ್ ಹಾಗೂ ಬಿಜೆಪಿಯ ಬಲ ಕುಸಿಯುತ್ತಿತ್ತು ಎಂಬುದು ನಂತರದ ಸಮೀಕ್ಷೆಯಲ್ಲಿ ಗೊತ್ತಾಯಿತಾದರೂ ಅಧಿಕಾರದ ಚುಕ್ಕಾಣಿ ಹಿಡಿದ ಹೆಗಡೆ ಬಲಿಷ್ಠರಾದಂತೆ ಗೌಡರು ಅಧಿಕಾರದಿಂದ ದೂರ ನಿಂತರು. ಹೆಗಡೆಯೇ ನನ್ನ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ಸಿಕ್ಕಿದ್ದು ಪಶು ಸಂಗೋಪನೆ ಖಾತೆ ಇದನ್ನು ಹೆಗಡೆ ಜಾತಿ ಆಧಾರದಲ್ಲಿ ಹಂಚಿದ್ದರು ಎಂಬುದಾಗಿ ಹೇಳಲಾಗಿತ್ತು.

ಅದೇ 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಕೇಳಿದ್ದು ಕಂದಾಯ ಖಾತೆ ಅದಾಗಲೇ ಜಾಲಪ್ಪನವರು ಆ ಖಾತೆಗೆ ಪಟ್ಟು ಹಿಡಿದಿದ್ದರಿಂದ ಮುಖ್ಯಮಂತ್ರಿ ಸ್ವಯಂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದ್ದ ಹಣಕಾಸು ಖಾತೆಯನ್ನು ಧಾರೆ ಎರೆದರು. ಯಾವ ಮನೆಯ ಸದಸ್ಯರು ಆಗಿರದ ಹೆಗಡೆ ಅವರನ್ನು ಸಿಂಧ್ಯಾ ಅವರ ರಾಜೀನಾಮೆ ಕೊಡಿಸಿ
ಕನಕಪುರದಿಂದ ಗೆಲ್ಲಿಸಲಾಗಿತ್ತು.

ಮುಂದೆ ನಡೆದದ್ದು ಇತಿಹಾಸ
ಬರಗಾಲದ ಬೇಗೆಯಿಂದ ತತ್ತರಿಸುತ್ತಿದ್ದ ಕರ್ನಾಟಕಕ್ಕೆ ಏಕ ಕಾಲದಲ್ಲಿ ಐವತ್ತೈದು ಸಾವಿರ ಕೊಳವೆ ಬಾವಿಗಳನ್ನು ಕೊರೆಸುವ ಮೂಲಕ ಹೆಗಡೆ, ನಜೀರ್ ಸಾಬ್, ದೇವೇಗೌಡ, ರಾಚಯ್ಯ, ಪ್ರಕಾಶ್ ಮತ್ತು ವೈಜನಾಥ ಪಾಟೀಲರು ಗ್ರಾಮೀಣಾಭಿವೃದ್ಧಿಯನ್ನು ಹಸನುಗೊಳಿಸಿದ್ದು ಇತಿಹಾಸ.

ಜನರ ಕೈಗೆ ನೇರ ಅಧಿಕಾರ ನೀಡುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಂವಿಧಾನ ಬದ್ಧಗೊಳಿಸಿ ವಿಧಾನಸೌಧದಲ್ಲಿ ಹೆಪ್ಪುಗಟ್ಟಿದ್ದ ಆಡಳಿತವನ್ನು ಅಧಿಕಾರ ವಿಕೇಂದ್ರಿಕರಣದ ಮುಖಾಂತರ ದೇಶದಲ್ಲೇ ಪ್ರಥಮವಾಗಿ ಭದ್ರಗೊಳಿಸಿದ ಕೀರ್ತಿ ಹೆಗಡೆ ಅವರಿಗೆ ಸಂದಿತ್ತು. ಗುಂಡೂರಾಯರ ಕಾಲದ ಗೂಂಡಾಗಿರಿಯನ್ನು ಹತ್ತಿಕ್ಕಿದರು. ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ರೂಪಿಸಿ ಜನರ ಕುಂದು ಕೊರತೆ ವಿಭಾಗವನ್ನು ತೆರೆದರು.

ಆರ್ಥಿಕ ಶಿಸ್ತನ್ನು ಸರ್ಕಾರ ರೂಢಿಸಿಕೊಂಡಿತ್ತಾದರೂ ತಮ್ಮ ಸ್ನೇಹಿತ ಧಣಿಗಳಿಗೆ ಮೇಯಲು ಬಿಟ್ಟಿದ್ದರು. ಅರಸರಿಗೂ ಹೆಗಡೆಯವರಿಗೂ ಅದೇ ಒಂದು ವ್ಯತ್ಯಾಸದ ವಿಷಯವಾಗಿತ್ತು. ‘ಎಂಬತ್ತು ಜನಕ್ಕೆ ಫಲ ಕೊಟ್ಟು ಅದರಿಂದ ಇಪ್ಪತ್ತು ಮಂದಿಗೆ ಕೆಡುಕಾಗುವುದಾದರೆ ಅರಸರು ಮುಲಾಜಿಲ್ಲದೆ ಮುಂದಡಿಯಿಡುತ್ತಿದ್ದರು. ಅದೇ ಹೆಗಡೆಯವರು ತಮ್ಮ ನೆಚ್ಚಿನ ಹತ್ತು ಜನರಿಗೆ ತೊಂದರೆಯಾಗುತ್ತದೆಯೆಂದರೇ ಆ ಯೋಜನೆಯನ್ನೇ ಮುಂದೂಡಿ ಬಿಡುತ್ತಿದ್ದರೆಂದು ಇಬ್ಬರ ಬಳಿಯೂ ಕೆಲಸ ಮಾಡಿದ ಮಾಜಿ ಸಂಸದೀಯ ಮಂತ್ರಿ ಎಂ ಸಿ ನಾಣಯ್ಯ ಅವರ ವಿಶ್ಲೇಷಣೆ.

ಜನತಾ ಪರಿವಾರವೆಂದರೇ ಅದು ಹೆಗಡೆ ಹಾಗೂ ದೇವೇಗೌಡರ ಹೊಂದಾಣಿಕೆ ಮತ್ತು ವಿರಸದ ರಾಮಾಯಣ ಮಹಾಭಾರತ ಎಂಬುದು ಜನಜನಿತ. 1985 ರ ಚುನಾವಣೆಯ ಬಹುಮತದ ನಂತರ ಪ್ರಶ್ನಾತೀತ ನಾಯಕರೆಂದುಕೊಂಡಿದ್ದೇ ಅವರ ಮುಂದಿನ ರಾಜಕೀಯ ಅಧಃಪತನಕ್ಕೆ ಮೂಲವಾಯಿತೆನ್ನಬಹುದು. ಬಾಟ್ಲಿಂಗ್, ರೇವಜೀತು ಭೂಮಿ, ಟೆಲಿಫೋನ್ ಕದ್ದಾಲಿಕೆಯ ಹಗರಣಗಳಲ್ಲಿ ಸಿಲುಕಿ ತಮ್ಮ ಬಲೆಯನ್ನು ತಾವೇ ಹೆಣೆದುಕೊಂಡುಬಿಟ್ಟಿದ್ದರು. ಸರ್ಕಾರಕ್ಕೆ ಉತ್ತಮ ಹೆಸರು ತಂದು ಕೊಡಲು ಪೈಪೋಟಿಯ ಮೇಲೆ ಕೆಲಸ ಮಾಡುತ್ತಿದ್ದ ಮಂತ್ರಿ ಮಂಡಲದ ಸದಸ್ಯರನ್ನು ನಿಕೃಷ್ಟವಾಗಿ ಕಂಡದ್ದು ,
ನೀರಾವರಿಗೆ ಬಜೆಟ್ ನಲ್ಲಿ ತಾವು ಕೇಳಿದ 300 ಕೋಟಿ ಹಣವನ್ನು ಮೀಸಲಿಡಲಿಲ್ಲವೆಂಬ ಕಾರಣ ಮುಂದೊಡ್ಡಿ ರಾಜೀನಾಮೆಯಿತ್ತ ದೇವೇಗೌಡರ ಬಂಡಾಯವನ್ನು ಕಡೆಗಣಿಸಿದ್ದು, ಹೆಗಡೆ ಅಧಿಕಾರ ತೊರೆಯುವುದಕ್ಕೆ ಅವಕಾಶವಾಯಿತು. ರಾಷ್ಟ್ರ ರಾಜಕಾರಣದ ಕನಸನ್ನು ಬಿಟ್ಟು ರಾಜ್ಯದ ಆಸಕ್ತಿ ತಳೆದಿದ್ದರೆ ಮುಂದೆ ಕಾಂಗ್ರೆಸ್ ಆಗಲೀ, ಈಗಿನ ಬಿಜೆಪಿಯಾಗಲೀ ಅಧಿಕಾರ ಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ಮಟ್ಟಿಗೆ ಬಿಜೆಪಿಗೆ ಎರವಲು ಸೇವೆ ಮಾಡಿದ ಮೊದಲಿಗರು ಹೆಗಡೆ ನಂತರ ಬಂಗಾರಪ್ಪ ಆಮೇಲೆ ಕುಮಾರಸ್ವಾಮಿಗಳು..!

1985 ರ ನಂತರದಲ್ಲಿ ದೇಶದ ಮುಂದಿನ ಪ್ರಧಾನಿ ಎಂದು ಸಂಕೇತಿಸುತ್ತಿದ್ದ ಹೆಗಡೆಯವರು 91 ರ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಪರಾಭವಗೊಂಡು ಅವಮಾನ ಅನುಭವಿಸಿದರು.
83 ರಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಅನಾಯಾಸವಾಗಿ ಕೂತದ್ದನ್ನು ವಿರೋಧಿಸಿದ್ದ ಕ್ರಾಂತಿರಂಗದ ನಾಯಕ ಬಂಗಾರಪ್ಪ ತಮ್ಮ ರಾಜಕೀಯ ಸೇಡನ್ನು ತೀರಿಸಿಕೊಂಡಿದ್ದರು. ಸಿದ್ದರಾಮಯ್ಯ ಕೊಪ್ಪಳ ಕ್ಷೇತ್ರದಲ್ಲಿ ಲೋಕಲ್ ರಾಜಕೀಯದಿಂದ ಅನ್ವರಿ ವಿರುದ್ಧ ಸೋಲುಂಡಿದ್ದು , ದೇವೇಗೌಡರು ಹಾಸನದಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದು ಮುಂದೆ ಪ್ರಧಾನಿಯಾದಾಗ ಅನುಭವನ ಮುನ್ನುಡಿ ಬರೆಯಿತು.
ಮುಂದಿನ ಜನತಾ ಪರಿವಾರದ ಮಿಲನಕ್ಕೆ ನಾಂದಿಯಾಗಿ 1994 ಡಿಸೆಂಬರ್ 11ರಂದು ಮಣ್ಣಿನ ಮಗ ಬಿರುದಾಂಕಿತ ಗೌಡರು ಪ್ರಯಾಸ ಪಟ್ಟು ಮುಖ್ಯಮಂತ್ರಿಯಾದರು.

ಹೆಗಡೆ ತಮ್ಮ ಪಟ್ಟುಗಳನ್ನು ಸುಲಭಕ್ಕೆ ಸಡಿಲಿಸುವವರಲ್ಲ. ನಿಧಾನಗತಿಯಲ್ಲಿ ವೇಗದ ನಡಿಗೆ, ಅವರ ಚಾಣಾಕ್ಷತೆ ಆ ತನಕ ಎಲ್ಲೂ ಉದ್ವೇಗಕ್ಕೆ ಒಳಗಾಗದ ನಡೆ ಅವರದಾಗಿತ್ತಾದರೂ ದೇವೇಗೌಡರು ಪ್ರಧಾನಿ ಅಭ್ಯರ್ಥಿಯಾದಾಗ ಹೆಗಡೆ ಮಾತಿನಲ್ಲಿ ಜಾರಿಬಿದ್ದವರು ಆಮೇಲೆ ಚೇತರಿಸಿ ಕೊಳ್ಳಲೇ ಇಲ್ಲ. ದೇವೇಗೌಡರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಚುನಾವಣೆಯಲ್ಲಿ ಗೆದ್ದು ಶಾಸಕಾಂಗ ಸಭೆಯಲ್ಲಿ ಹೆಗಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಕೂಡಾ ಅಭ್ಯರ್ಥಿ ಎನ್ನುವ ಮೂಲಕ ಸಂಘರ್ಷ ಸೃಷ್ಟಿಸಿಕೊಂಡರು. ಹಿಂದೆ ಸರಿದು ನಿಂತ ಪಟೇಲರನ್ನು ಉಪ ಮುಖ್ಯಮಂತ್ರಿ, ದೇವೇಗೌಡರನ್ನು ಮುಖ್ಯಮಂತ್ರಿ ಎಂದು ಅವರೇ ಘೋಷಿಸಿದ್ದರೇ ಜನರ ನಡುವೆ ಹೀರೋ ಆಗಿ ಸರ್ಕಾರದ ಚುಕ್ಕಾಣಿ ಹಿಡಿಯಬಹುದಿತ್ತು. ಅಂತಹ ಅವಕಾಶ ಕಳೆದುಕೊಂಡದ್ದಲ್ಲದೆ ಮುಂದೆ ಅವರ ಜೀವಮಾನದ
ಕನಸಾಗಿದ್ದ ಪ್ರಧಾನಿ ಹುದ್ದೆಯ ಸಮೀಪ ನಿಂತು ಅದು ದೇವೇಗೌಡರ ಪಾಲಾದಾಗ ಕಣ್ಣು ತುಂಬಿಸಿಕೊಂಡು ತುಟಿಯಂಚಲ್ಲಿ ಸುಡುವ ಸಿಗರೇಟು ಹೊತ್ತಿಸಿಕೊಂಡು ಪ್ರೆಸ್ ಕ್ಲಬ್ ನಲ್ಲಿ ನಿಂತುಕೊಂಡೇ ಪತ್ರಿಕಾಗೋಷ್ಠಿ ನಡೆಸಿದ ಹೆಗಡೆ ಹೊಟ್ಟೆಯ ಕಿಚ್ಚನ್ನೆಲ್ಲಾ ಹೊರಹಾಕಿ, ಪಕ್ಷದಿಂದಲೂ ಹೊರ ಹಾಕಲ್ಪಟ್ಟರು.

ಹೊಸ ಚಿಂತನೆಯ ಪ್ರಬುದ್ಧ ಚಾಣಾಕ್ಷ ರಾಜಕಾರಣಿ ಹೆಗಡೆ ನೆಲ ಕಚ್ಚಿದ್ದರು. ಆದರೆ ಅವರ ಮೌಲ್ಯಾಧಾರಿತ ರಾಜಕಾರಣ, ಪಂಚಾಯತ್ ರಾಜ್ ವ್ಯವಸ್ಥೆ, ಚುನಾವಣ ಪೂರ್ವ ಮೈತ್ರಿಯ ಘೋಷಣೆ,
ನಯ ನಾಜೂಕುತನದ ವಾಮನ ವ್ಯಕ್ತಿತ್ವ ಇನ್ನೂ ರಾಜ್ಯದ ಜನತೆಯ ಮನಸಿನಲ್ಲಿ ಹಸಿರಾಗಿದೆ ಎನ್ನಬಹುದು.

🖋 ವೈ.ಜಿ.ಅಶೋಕ್ ಕುಮಾರ್

Social Share :

ಸ್ನೇಹಪ್ರಿಯಗೆ ಒಂದು ವರ್ಷ

Social Share :

ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಅಲ್ಲಿಂದ ಹೊರ ಬೀಳುವುದು ಹೊಸದೇನು ಅಲ್ಲ; ಅದರಲ್ಲಿಯೂ ತಬ್ಬಲಿತನ ಜೊತೆಗೆ ಕಟ್ಟಿಕೊಂಡ ನನ್ನಂಥವರಿಗೆ ತೀರಾ ಸಾಮಾನ್ಯವಾದ ವಿಷಯ. ಅದರಲ್ಲಿಯೂ ಮುಖ್ಯ ವಾಹಿನಿ ಪತ್ರಿಕೋದ್ಯಮ ಬಿಟ್ಟು ಆಚೆ ಇರುವುದೆಂದರೆ ಅದು ನೀರಿನಿಂದ ಮೀನನ್ನು ಎತ್ತಿ ಹೊರ ಹಾಕಿದಂತೆ.

ಆದರೆ ಈ ಬಾರಿ ಎಲ್ಲವೂ ಗಂಭೀರದ ವಿಷಯವಾಗಿತ್ತು. ಪತ್ರಿಕೆಗಳಿಂದ ಹೊರಬಿದ್ದವರ ಸಂಖ್ಯೆಯೂ ಹೆಚ್ಚಾಗಿ ನನ್ಬೊಬ್ಬನಿಗೇ ಈ ರೀತಿ ಆಗಿಲ್ಲವಲ್ಲ ಎಂಬ ತಾತ್ಕಾಲಿಕ ಸಮಾಧಾನವೂ ಇತ್ತು.
ಇದೇ ವೇಳೆ ಗೆಳೆಯರೊಬ್ಬರು ಈಗ ಮುಖ್ಯ ವಾಹಿನಿಯೇ ಸಾಮಾಜಿಕ ಜಾಲ ತಾಣ ಎಂಬ ಅಪರೂಪದ ವಾದವನ್ನು ಮುಂದಿಟ್ಟರು. ತಕ್ಷಣಕ್ಕೆ ಎಲ್ಲಿಗೆ ಬೇಕಾದರೂ ತಲುಪಬಹುದಾದ ಸಾಮರ್ಥ್ಯವೇ ಅದರ ಹೆಗ್ಗಳಿಕೆ. ಅದರ ಪರಿಣಾಮವೇ ವೆಬ್ ಸೈಟ್, ವೆವ್ ಪೋರ್ಟಲ್ ಗಳ ಸೃಷ್ಟಿ. (ಈಗಂತೂ ಯು ಟ್ಯೂಬ್ ಚಾನೆಲ್ ಗಳದ್ದೇ ಪಾರುಪತ್ಯ).

ಸರಿ; ಜೀವನಕ್ಕೆ ಒಂದು ವೆಬ್ ಸೈಟ್ ಕೂಡ ನೆರವಾಗಬಹುದು ಎಂಬ ಕಲ್ಪನೆ ಹುಟ್ಟಿಕೊಂಡಿತು. ಇದರ ಹೊರತು ಬೇರೆ ಆಯ್ಕೆ ಮುಂದೆ ಇರಲಿಲ್ಲ.. ಈ ದಾರಿಯಲ್ಲಿ ಚಿಂತನೆಯೇನೋ ನಡೆದಿತ್ತು. ಆದರೆ ಹೇಗೆ ಹಣ ಕಾಸು ಎಲ್ಲಾ ಹೇಗೆ ಎಂಬುದು ಮಾತ್ರ ಪ್ರಶ್ನೆಯಾಗೇ ಉಳಿದಿತ್ತು.

ಇದರ ಮಧ್ಯೆ ಕಳೆದ ವರ್ಷವೇ ವೆಬ್ ಸೈಟ್ ಮಾಡಲು ಡ್ರಾಫ್ಟ್ ಮಾಡಿದ ಅನುಭವವನ್ನು ಜೊತೆಗೆ ಇಟ್ಟುಕೊಂಡಿದ್ದೆ. ಸಿನಿಮಾದ ಸಲುವಾಗಿಯೇ ‘ಸ್ನೇಹಚಿತ್ರ ಡಾಟ್ ಕಾಮ್’ ಎಂಬ ವೆಬ್ ಸೈಟ್ ರೆಡಿ ಮಾಡಿ ಅರ್ಧಕ್ಕೆ ಬಿಟ್ಟಿದ್ದೆ. ಹೆಸರು ಚೆನ್ನಾಗಿದೆ ಎಂದರು ಗೆಳೆಯರು.. ಲೋಗೋಗೆ ಗೆಳೆಯ ಚಂದ್ರು ಅಂದವಾದ ಡಿಸೈನ್ ಕೂಡ ಮಾಡಿಕೊಟ್ಟಿದ್ದರು. ಆದರೆ ಪತ್ರಿಕೆ ಕೆಲಸಗಳಲ್ಲಿ ಬಿಡುವಿರದ ಕಾರಣ ಅದನ್ನು ಮುಂದುವರೆಸಲು ಸಾಧ್ಯವಾಗದೇ ಸುಮ್ಮನಿದ್ದೆ.

ಈಗ ಕಾಲ ಈ ರೀತಿ ಬಂದಿದೆ ಏನು ಮಾಡುವುದು; ಬೇರೆ ದಾರಿ ಇಲ್ಲ..
ಬದುಕು ದೊಡ್ಡದು.. ಸಂಬಂಧಗಳು ಅದಕ್ಕಿಂತ ಮುಖ್ಯ. ಇವೆಲ್ಲಾ ನಿಭಾಯಿಸುವುದಕ್ಕೆ ಹಣವೇ ಥೈಲಿ..ಆದರೆ ಜೇಬು ಖಾಲಿ ಖಾಲಿ..
ಏನು ಮಾಡುವುದು..
ಆಗ ರೂಪುಗೊಂಡಿದ್ದೇ ‘ಸ್ನೇಹಪ್ರಿಯ ಡಾಟ್ ಕಾಮ್’…!

ಕಷ್ಟದಲ್ಲಿ ದೇವರು ಕೈ ಹಿಡಿಯುತ್ತಾನೆ ಎಂಬುದು ನಿಜ. ನನ್ನ ಕಷ್ಟಕ್ಕೆ ನೆರವಾದವನೂ ‘ಶ್ರೀಕೃಷ್ಣ’. ಅದೇ ಹೆಸರಿನ ಗೆಳೆಯ. ವೆಬ್ ಸೈಟ್ ಸಿದ್ಧವಾಯಿತು. ಚಟುವಟಿಕೆಗಳು ಆರಂಭವಾದವು. ಆದರೆ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ.. ಹೊಸದಾಗಿ ಆರಂಭವಾಗುವ ಚಾನೆಲ್ ಒಂದಕ್ಕೆ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ.. ಅದರಲ್ಲಿ ಹೊರಗಿನಿಂದಲೇ ಎಲ್ಲವನ್ನೂ ನಿಭಾಯಿಸುವ ಆಫರ್ ನಿರಾಕರಿಸುವ ಪ್ರಶ್ನೆಯೇ ಇಲ್ಲ.

ಮತ್ತೆ ಮೈ ಮರೆತೆ ಚಾನೆಲ್ (ವೆಬ್ ಚಾನೆಲ್..!!) ಕೆಲಸ ಹೆಚ್ಚು ಶ್ರದ್ಧೆಯಿಂದಲೇ ಕಾಯಕ ಮುಂದುವರಿಯಿತು. ಚಾನೆಲ್ ಮುಖ್ಯಸ್ಥರು ಮುಖ್ಯವಾಗಿ ಅದರ ಸಿಇಓ ಚೆನ್ನಾಗೇ ನೋಡಿಕೊಂಡರು. ಇದೇ ವೇಳೆ ಕೆಲವು ಅಪರೂಪದ ಕ್ಷಣಗಳು ಎದುರಾದವು. ಇನ್ನೇನು ಖುಷಿಗೆ ಪಾರವೇ ಇಲ್ಲ ಎನ್ನುವಾಗ ಮತ್ತೆ ನೀರಿನಿಂದ ಹೊರಬಿದ್ದ ಅನುಭವ. ಕೋವಿಡ್ ಎರಡನೇ ಅಲೆಯ ಪ್ರಭಾವ ಮತ್ತೆ ಬದುಕನ್ನು ನಿರಾಶಾ ಭಾವಗಳತ್ತ ತಳ್ಳಿತು.

ಮತ್ತೆ ದೇವರನ್ನು ಹುಡುಕುವ ಕಾರ್ಯ. ಹೇಗಾದರೂ ಕಾಪಾಡು ಎಂದು ಮೊರೆ ಹೋಗಿದ್ದೇ ಹೋಗಿದ್ದು.. ಅವನಿಗೇ.. ಈಗ ಸ್ಥಳವಿಲ್ಲ; ದೇವಾಲಯ ಬಾಗಿಲು ಹಾಕಿಕೊಂಡಿದೆ. ಇತ್ತ ಕಾಯಕದ ಬಾಗಿಲು ಹಾಕಿದೆ..
ಬದುಕು ಹೈರಾಣು.. ಓ ದೇವರೇ ಎಂದು ಪ್ರಾರ್ಥಿಸುವುದರ ಹೊರತು ಬೇರೆ ದಾರಿಗಳಿಲ್ಲ.. ಈ ಮನೆ ಬಾಡಿಗೆ, ಇಎಂಐನಂತಹ ಬಾಧೆಗಳು ಇಲ್ಲದಿದ್ದರೆ ಬದುಕು ಹೇಗೋ ನಡೆದೀತು. ಆದರೆ ಎಲ್ಲವೂ ಸರಿ ಇದ್ದಾಗ ಅಥವಾ ಭ್ರಮಾಧೀನ ಕ್ಷಣಗಳು ಸಾಲ ಮಾಡಿಸುತ್ತವೆ.. ಇನ್ನಷ್ಟು ಮತ್ತಷ್ಟು ಸುಧಾರಿಸಿದೆ ಜೀವನ ಎನ್ನಲು ಬೇಕಾಗಿರುವುದು ಹಣ. ಆದರೆ ಸ್ವಲ್ಪ ಹಾಸಿಗೆ ಬಿಟ್ಟು ಕಾಲು ಹೊರ ಚಾಚಿದರೆ..
ಹೌದು ಸಾಲವೆಂಬ ಶೂಲ..!

ಅದೃಷ್ಟಕ್ಕೆ ವೆಬ್ ಸೈಟ್ ಮಾಡಿಕೊಟ್ಟ ಗೆಳೆಯ ತಕ್ಷಣಕ್ಕೆ ಹಣ ಕೇಳಲಿಲ್ಲ.. ಹೇಗೋ ಕುಂಟುತ್ತಾ ಅದೂ ಒಂದು ವರ್ಷ ಸಾಗಿಸಿಬಿಟ್ಟಿದೆ. ಅಚ್ಚರಿ ಎಂದರೆ ವೆಬ್ ಸೈಟ್ ಓದುಗ ಬಳಗ ಹೆಚ್ಚಾಗಿದೆ. ವೇಗವಲ್ಲದ ಬೆಳವಣಿಗೆ ಯಲ್ಲಿಯೂ ಅದು ಓದುಗರನ್ನು ಮುಟ್ಟುವ ಪರಿ ಅಚ್ಚರಿ ತಂದಿದೆ. ಮತ್ತು ಉತ್ಸಾಹ ಇಮ್ಮಡಿಗೊಳಿಸಿದೆ. ಸಿನಿಮಾವನ್ನೇ ಹೆಚ್ಚು ಆವರಿಸಿಕೊಂಡಿದ್ದು ಈಗ ಎಲ್ಲದರ ಕಡೆ ಗಮನ ಹರಿಸಿದೆ. ಹಾಗಾಗಿ ಇನ್ನೊಂದು ವರ್ಷ ಪೂರೈಸುದರೊಳಗೆ ‘ಸ್ನೇಹಪ್ರಿಯ’ ಮನೆ ಮಾತಾಗಬಹುದು. ಅದು ನನ್ನ ದೊಡ್ಡ ಆಶಯ. ಅದಕ್ಕಾಗಿ ಶ್ರಮಪಡಲು ನಿಶ್ಚಯಿಸಿ ಆಗಿದೆ. ಕಾರ್ಯ ಮತ್ತು ಫಲ ಎರಡೂ ದೇವರಿಗೆ..
ಇದೇ ವೇಳೆ ‘ಓ ದೇವರೇ ಪ್ರಯತ್ನದ ಬೆಲೆ ತೆತ್ತಾಗ..

ನೀನು ಪ್ರತಿಯೊಂದನ್ನು ಅನುಗ್ರಹಿಸುತ್ತೀ..’ ಎಂಬ ಲಿಯೋನಾರ್ಡ್ ಡಾ.ವಿಂಚಿ ಮಾತು ನಿಜವಾಗಲಿ ಎಂಬುದು ಕನಸು..

🖋 ಸ್ನೇಹಪ್ರಿಯ ನಾಗರಾಜ್

Social Share :

ಪತ್ರಕರ್ತರ ಸಾಕ್ಷಿ ಪ್ರಜ್ಞೆ ಸಾಚ ಇನ್ನು ನೆನಪು ಮಾತ್ರ.

Social Share :

ಸಾ.ಚಗೆ ಶ್ರದ್ಧಾಂಜಲಿ
—— —— ——-

ನಮ್ಮಿಬ್ಬರ ಫೋನು ಅವೇಳೆಯಲ್ಲಿ ರಿಂಗಣಿಸಿದರೆ ಪರಸ್ಪರ ಮಾತಾಡಿಕೊಂಡು ಏನು? ಯಾರು ? ಎಲ್ಲಿ ?
ಎಡ್ರಾ ವಂಡಿ…..

ನೂರಾರು ಸಾವು -ಬದುಕು ಗಳನ್ನು ಕಟ್ಟಿ ಕೊಟ್ಟವರು ಸಾಚ. ಬದುಕನ್ನು ಕಟ್ಟಿಕೊಡುವುದೇನೊ ಸರಿ,ಸಾವನ್ನು ಕಟ್ಟಿ ಕೊಡುವುದಾದರೂ ಹೇಗೆ  ಅದೇ ಸಾಚ ಸ್ಪೆಷಲ್
ಸತ್ತವರು ಸತ್ತರು ಇರೋರು ಬದುಕಬೇಕಲ್ಲವೇ! ಇದು ಸಾಚ ಉವಾಚ

ಹುಟ್ಟುವ ಮಕ್ಕಳಿಗೆ ಸ್ಕೂಲ್ ಪ್ರವೇಶದಿಂದ ಮೊದಲ್ಗೊಂಡು ಸಾಯಲು ಆಸ್ಪತ್ರೆ ಸೇರಿದವರೆಗೆ ಸಾಚ ಬೇಕೇ ಬೇಕು.  ಒಂದು ಸುದ್ದಿಗೆ ಆ ಸುದ್ದಿಯಾದ ಸುದ್ದಿಯ ಗುದ್ದಿ ಮತ್ತೊಂದು ಸುದ್ದಿ ಮಾಡಿಸುವುದು ಸಾಚನಿಗೆ ಗೊತ್ತಿಲ್ಲದೇ ನಡೆದು ಹೋಗಿರುತ್ತವೆ.

ಅವರಿಗೆ ಗೊತ್ತಿಲ್ಲದೇ ಇರುವ ವಿದ್ಯೆಯೆ ಇಲ್ಲ ಗೊತ್ತಿಲ್ಲದ ಸೆಲಬ್ರೆಟಿಯೇ ಇಲ್ಲ . ಒಮ್ಮೆ ಅವರ ನಾಲಿಗೆಗೆ ಸಿಕ್ಕಿ ಬಿದ್ದರೆ ಮುಗೀತು ಲೈಫ್ ಲಾಂಗ್ ಅವರನ್ನು ಯಾರೂ ಮರೆಯಲ್ಲ. ಸಾಚ ಕೋಪಕ್ಕಂತೂ ಕಾರಣವೇ ಬೇಕಿಲ್ಲ.  ಒಂದು ರಸವತ್ತಾದ ಪತ್ರಿಕಾ ಸಂವಾದವನ್ನು ರಾಡಿಗೊಳಿಸಬಲ್ಲರು, ತಮಗಿಷ್ಟವಾದ ವ್ಯಕ್ತಿಯಾದರೆ ಆತನಿಗೆ ಅನುಕೂಲವಾಗುವಂತೆ ಪ್ರಶ್ನೆ ರೂಪಿಸುವರು . ಪತ್ರಿಕಾಗೋಷ್ಠಿಗೆ ಮುನ್ನ ‘ಏನಿವಂದು ಬದನೆಕಾಯಿ’ ಎಂದು ನಮ್ಮ ಕಡೆಗೆ ನೋಡುವರು  ಅವರನ್ನು ಏನೇನು ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಬಹುದೆಂದು ಪ್ಲಾನ್ ಮಾಡುವರು. ಅದಕ್ಕೆ ಕೆಲವರು ಗಣಪತಿಗೆ ಮೊದಲು ನಮಸ್ಕರಿಸುವಂತೆ ಪತ್ರಿಕಾಗೋಷ್ಠಿಗೆ ಮುನ್ನ  ‘ನಮಸ್ಕಾರ ಚಂದ್ರಣ್ಣ’ ಅಂತ ಹೆಂಗಾದ್ರೂ ಸರಿ ಒಂದು ನಮಸ್ಕಾರ ಹಾಕಿಬಿಟ್ರೆ ಮುಂದಿನದೆಲ್ಲ ಸಲೀಸು,

ಸಾಚ ಅವರನ್ನು ಸಂಭಾಳಿಸುವ ಕಲೆ ಬಂಗಾರಪ್ಪ, ಪಟೇಲ್,ವಿಶ್ವನಾಥ್, ನಾಗೇಗೌಡ,ಎ ಕೃಷ್ಣಪ್ಪ, ಸಿದ್ದರಾಮಣ್ಣ, ಸೋಮಣ್ಣ, ನಾಣಯ್ಯ ಅಂತವರಿಗೆ ಗೊತ್ತಿತ್ತು.

ದೇವೇಗೌಡರು ಎಸ್ ಎಂ ಕೃಷ್ಣ ಅವರಿಗೆ ಇವತ್ತಿಗೂ ಸಾಚ ಒಂಥರ ಕಾಡುವ ಶನಿ !

ದೇವೇಗೌಡರ ಸೋನೆ ಮಳೆಯಂತಹ ಮಾತಿನ ಮಧ್ಯೆ ಸಾಚ ಪ್ರಶ್ನೆ ಕೇಳಲು ಎದ್ದು ನಿಂತರೆ ಸಾಕು ಗೌಡರ ಪಿತ್ತ ನೆತ್ತಿಗೇರುವುದು  ‘ ಇರು ಗುರು ಒಂದ್ನಿಮಿಷ ‘ ಸಾಚ ಬಡಪಟ್ಟಿಗೆ ಬಗ್ಗುವರಲ್ಲ.ಅವರ ಪ್ರಶ್ನೆಗೆ ಸಮಂಜಸವಾಗಿ ಉತ್ತರಿದೇ ಯಾರೂ ತಪ್ಪಿಸಿಕೊಂಡು ಹೋದ ಉದಾಹರಣೆಗಳಿಲ್ಲ. ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ನೇರವಾಗಿ  ಪ್ರಶ್ನೆ ಮಾಡುತ್ತಿದ್ದ ಏಕೈಕ ಪತ್ರಕರ್ತ ಸಾ ಚ .

ಅದೇ ಎಸ್ಎಂಕೆ ಸಾಚ ಅವರ ಉದ್ದನೆಯ ಪ್ರಶ್ನೆಗೆ ಉತ್ತರಿಸಲಾಗದೇ ‘ನೆಕ್ಸ್ಟ್ ಕ್ವಶ್ಚನ್ ಪ್ಲೀಸ್ ‘ ಎಂದು ತಪ್ಪಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸುತ್ತಿದ್ದರು. ಹಲೋ ಮುಖ್ಯಮಂತ್ರಿಗಳೇ ನನ್ನ ಪ್ರಶ್ನೆ ಇನ್ನೂ ಜೀವಂತವಾಗಿದೆ ಅಂದ್ರೆ ನಿಮ್ಮ ಉದ್ದನೆಯ ಪ್ರಶ್ನೆಯಲ್ಲೇ ಉತ್ತರ ಅಡಗಿದೆ ಮಿ ಚಂದ್ರಶೇಖರ್ ಅವರೇ ಎಂದು ಟೆಕ್ನಿಕಲ್ ಪಾಯಿಂಟ್ ರೈಸ್ ಮಾಡಿ ತಪ್ಪಿಸಿಕೊಳ್ಳುವ ಹಾದಿ ಕಂಡುಕೊಳ್ಳೂತಾತಿದ್ದರು.
ಯಮನ ಕೈಯಲ್ಲಿ ತಪ್ಪಿಸಿಕೊಂಡು ಬಂದವರೂ ಸಾಚ ಕೈಯಲ್ಲಿ ಸಿಕ್ಕಿಬಿಡುತ್ತಿದ್ದರು. ಸಾಚ ಅವರ ಪ್ರಶ್ನೆಯನ್ನು ನಿಭಾಯಿಸಲು ಇವರಿಂದ ಸಾಧ್ಯವಾಗಲೇ ಇಲ್ಲ.

ಅದೇ ಬಂಗಾರಪ್ಪ ಅವರು  ‘ ಎಲ್ರೀ ಚಂದ್ರಶೇಖರ್ ಕಮಾನ್ ‘ ಎಂದು ಮೊದಲ ಪ್ರಶ್ನೆಗಾಗಿ ಸಾಚರನ್ನು ತಾವೇ ಆಹ್ವಾನಿಸುತ್ತಿದ್ದರು. ಅದಕ್ಕೂ ಮೊದಲು ಚಂದ್ರಶೇಖರ್ ಗೆ ಕನ್ನಡ ಪ್ರೆಸ್ ನೋಟ್ ಕೊಟ್ಟಿದೀರಿ ತಾನೇ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಇಲ್ಲ ಅಂದ್ರೆ ಅದೇ ಮುಖ್ಯ ಪ್ರಶ್ನೆಯಾಗಿ ನಿಜವಾಗಿಯೂ ಸುದ್ದಿ ಯಾಗಬೇಕಾದ ಸುದ್ದಿ ಹಿನ್ನೆಲೆಗೆ ಸರಿದು ಬಿಡುತ್ತಿತ್ತು. ಏನಾದರೂ ಅಕಸ್ಮಾತ್ ಇಂಗ್ಲಿಷ್ ನಲ್ಲಿ ಪ್ರೆಸ್ ನೋಟ್ ಇದ್ದರಂತೂ ಮುಗಿದೇ ಹೋಯ್ತು  ‘ ಯಾವ ದೇಶದ ಜನರಿಗೆ ಇದನ್ನು ತಲುಪಿಸಬೇಕು ‘ ಎಂದು ಕೆರಳಿ ಪ್ರೆಸ್ ನೋಟನ್ನೇ ಹರಿದು ಬಿಸಾಡಿ ಬಿಡುತ್ತಿದ್ದರು .ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸನ ಬದ್ದ ಅಧಿಕಾರ ಕೊಡಿಸಿದ್ದು ಸಾಚ , ಎಂಜಿ ರಸ್ತೆಯಲ್ಲಿ ಕನ್ನಡ ಫಲಕಗಳಿಗೆ ಅವಕಾಶ ಸಿಕ್ಕಿದ್ದು ಸಾಚ ಅವರ ಪ್ರಶ್ನೆಗಳಿಂದ. ಆಡಳಿತದಲ್ಲಿ ಕನ್ನಡ, ಸಚಿವಾಲಯದಲ್ಲಿ ಕನ್ನಡ ಮೊದಲ ಭಾಷೆಯಾಗಬೇಕಿದ್ದರೆ ಆಗಿನ ಮುಖ್ಯಮಂತ್ರಿ ಐಎಎಸ್ ಅಧಿಕಾರಿಗಳಿಗೆ ಸಾಚ ಪ್ರಶ್ನೆ ಮಾಡಿದ್ದರ ಫಲ…

ಇಗೋರಿ ಚಂದ್ರಶೇಖರ್ ಅಂತಿದ್ದ ಧರ್ಮಸಿಂಗ್, ಬಾ ಗುರು ಗೊತ್ತಿದೆ ಅಂತಿದ್ದ ಗೌಡರು, ಚಂದ್ರಣ್ಣ ಅಂತಿದ್ದ ಸೋಮಣ್ಣ, ನಾಗಣ್ಣ, ಎಲ್ರಿ ಟೈಮ್ ಸರಿಯಾಗಿ ಬರಲ್ಲ ಅನ್ನುತ್ತಿದ್ದ ಟಿಎನ್ಎನ್ ಗೆ ನೀವು ಕಾಂಗ್ರೆಸ್ ಇತಿಹಾಸವನ್ನೆಲ್ಲ ಹೇಳಿ ಮುಖ್ಯ ವಿಷಯಕ್ಕೆ ಬರುವ ಹೊತ್ತಿಗೆ ಬಂದಿದ್ದೇನೆ ಅನ್ನುತ್ತಿದ್ದರು.ಸಾಚ ಪ್ರಶ್ನೆಗೆ ಸಮಾಧಾನದ ಉತ್ತರ ಕೊಡುತ್ತಿದ್ದ ಟಿಎನ್ಎನ್, ಎಸ್ ಕೆ ರಾಮು, ಗೆಬ್ರಿಯಲ್ ವಾಜ್ ಪ್ರಶ್ನೆ ಕೇಳಿದ್ರೆ ಬಿಡ್ರೀ ಹಿಂದೂ, ಇಕನಾಮಿಕ್ಸ್ ಟೈಮ್ ಪೇಪರ್ ನಮ್ಮ ಜನ ಓದಲ್ಲ ಅಂದುಬಿಡುತ್ತಿದ್ದರು. ಆಗಲೂ ನೆರವಿಗೆ ಬರುತ್ತಿದ್ದ ಸಾಚ ಓದಲಿ ಬಿಡಲಿ ಪತ್ರಕರ್ತರ ಪ್ರಶ್ನೆಗೆ ನೀವು ಸಮಾಜಾಹಿಶಿ ಕೊಡಲೇ ಬೇಕು ಅಂತ ಹಠಕ್ಕೆ ಬೀಳೋರು. ಏ ಅಬೂಬಕರ್ ಈ ಚಂದ್ರಶೇಖರ್ ಗೆ ಇನ್ನೊಂದು ಮಸಾಲೆ ದೋಸೆ ಕೊಡುಸ್ರೀ ಎಂದು ನಗುತ್ತಿದ್ದರು. ಪಾರ್ಸೆಲ್ಲೂ ಮಾಡಿಸುತ್ತಿದ್ದರು.  ಸಣ್ಣ ಪುಟ್ಟ ಹೊಸ ಮಂತ್ರಿಗಳು ಇವರ ಬಾಯಿಗೆ ಸಿಕ್ಕರಂತೂ ಮುಗಿದೇ ಹೋಯ್ತು ಮರುಹುಟ್ಟು ಪಡೆದು ಬರಬೇಕಿತ್ತು.

ಸ್ಪಟಿಕ ಸ್ಪಷ್ಟವಾಗಿದ್ದೇನೆ ಎನ್ನುತ್ತಿದ್ದ ಸಾವಿರ ಸುಳ್ಳುಗಳ ಸರದಾರ ಎಂದು ರಘುಪತಿಯಿಂದ ಬಿರುದಾಂಕಿತರಾದ ಮಾರ್ಪಾಡಿ ವೀರಪ್ಪಮೊಯ್ಲಿಗೆ ಸಾಚ ‘ಏನು ಕಾರ್ಕಳೋ ಗೊಮ್ಮಟರು’ ಎನ್ನುತ್ತಿದ್ದರು.
ಪತ್ರಿಕಾಗೋಷ್ಠಿಗೆ ಸ್ವಲ್ಪ ತಡವಾದರೂ ಜನಾರ್ಧನ ಪೂಜಾರಿಯವರನ್ನು ಕೆಣಕುತ್ತಿದ್ದರು. “ಹೇಗೂ ಟೈಮ್ ಆಗಿದೆ  ಮೀಸೇ ಸರಿಯಾಗಿ ತಿದ್ದಿಕೊಂಡು ಬನ್ನಿ. ನಮ್ಮ ಫೋಟೋಗ್ರಾಫರ್ ಬರ್ತಾರೆ ”

ಕನ್ನಡ ಚಳವಳಿ ನಾಯಕ ಜಿ ನಾರಾಯಣ ಕುಮಾರ್ ಪತ್ರಿಕಾಗೋಷ್ಠಿ ಸಾಚ ಅವರ ಮೇಲೆ ನಿಂತಿರೋದು. ವಾಟಾಳ್ ರಷ್ಟು ಕಠಿಣ ಮತ್ತು ನಾಟಕೀಯವಲ್ಲದ ಜಿ ನಾ ಕು ಅಪ್ಪಟ ಕನ್ನಡ ಕಂದನಂತೆ  ಕನವರಿಸುತ್ತಿದ್ದರೆ ಸಾಚ ತಿದ್ದುತ್ತಿದ್ದರು. ಅವರಿಗಾಗಿಯೇ ಒಂದು ಪ್ಯಾಕ್ ವಿಲ್ಸ್ ಸಿಗರೇಟನ್ನು ಪಾಲನೇತ್ರರಿಗೆ ಹೇಳಿ ಮೀಸಲಿರಿಸುತ್ತಿದ್ದರು. ಅಸೆಂಬ್ಲಿಯಲ್ಲಿ ಕಾಸಿಲ್ಲದ ನಮಗೆಲ್ಲ ತಿಂಡಿ ಕಾಫಿ ಕೊಡಿಸುತ್ತಿದ್ದರು. ಜುಗ್ಗ ಪ್ರವೃತ್ತಿಯ ಸಾಚನ ನಡವಳಿಕೆ ಅನುಮಾನ ತರಿಸುತ್ತಿತ್ತು. ಆದರೆ ಆಮೇಲೆ ಗೊತ್ತಾಯ್ತು  ಜಿ ನಾ ಕು ಗೂಗಲ್ ಪೇ ಮಾಡ್ತಾರೆ ಅಂತ.

ದಿನ ಬೆಳಗ್ಗೆ ಬೆಂಗಳೂರಿನಲ್ಲಿ ಇದ್ದರೆ ಸಿಗುತ್ತಿದ್ದ ಪಟೇಲರನ್ನು ಕಾಣಲು ಕಾವೇರಿಗೆ ಹೋದರೆ ನಾಪತ್ತೆ! ಜನಮರುಳೋ ಜಾತ್ರೆಮರುಳೋ ಶಂಕರಲಿಂಗಪ್ಪ ಎಲ್ಲಪ್ಪ…
ಅಂದ್ರೆ ಒಂದು ಶುಷ್ಕ ನಗುವಿನೊಂದಿಗೆ ಕಿವಿಯಲ್ಲಿ ಹೇಳುತ್ತಿದ್ದರು.  ಹೌದಾ ಅಲ್ಲಿಗೆ ಹೋಗ್ತೀನಿ  ಹತ್ರೀ ಗಾಡಿ ಎನ್ನತ್ತಾ ಸಿಗರೇಟ್ ಹಚ್ಚಿ ಬಾಯಲ್ಲಿ ಕಚ್ಚಿ ಜಿಂದಾಲ್ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಕಡೆಗೆ ಬರ್ರೋ ಎಂದು ಸ್ಕೂಟರ್ ಓಡಿಸುತ್ತಿದ್ದರು. ಹಿಂದೆ ಕುಳಿತ ನಾನು ಸಿಗರೇಟ್ ಬೂದಿ ನನ್ನ ಕಣ್ಣಿಗೆ ಹಾರದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಜಿಂದಾಲ್ ಹೊಕ್ಕು ಪಟೇಲರನ್ನು ಹುಡುಕಿ ಮಾತಾಡಿದರೆ ಸಮಾಧಾನ….

ಕುತ್ತಿಗೆಯವರೆಗೆ ಜೇಡಿಮಣ್ಣಿನಲ್ಲಿ ಹೂತು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಪಟೇಲರು ‘ಓ ಬಾರಪ್ಪ ಚಂದ್ರು  ನೋಡಿಲ್ಲಿ ದೇವೇಗೌಡ ಒಬ್ಬನೇನಾ ಮಣ್ಣಿನ ಮಗ ನಾನು ಮಣ್ಣಿನ ಮಗನೇ ‘ ಎಂದು ಚಟಾಕಿ ಹಾರಿಸಿದರೇ ಸಾಚಗೇ ಸಮಾಧಾನ.  ಸಾಚ ನೆನಪಿನ ಹಾದಿ ಬಹು ದೂರದ್ದು.. ಅದನ್ನು ಇನ್ನೂ ಕ್ರಮಿಸುವುದಿದೆ..

* ವೈ ಜಿ ಅಶೋಕ್ ಕುಮಾರ್.

Social Share :

ಗೌಡರಿಗೆ ವರುಷ ಕುಮಾರಣ್ಣಂಗೆ ನಿಮಿಷ

Social Share :

‘ಹೇಳ್ತೀನಿ ಇರು ಗುರು ‘ ದೇವೇಗೌಡರು ಇನ್ನೂ ಉತ್ತರ ಹೇಳಿಲ್ಲ ಮೂವತ್ತು ವರ್ಷಗಳ ಹಿಂದೆ ಕೇಳಿದ ಪ್ರಶ್ನೆಯೇ ಮರೆತು ಹೋಗಿದೆ. ಗೌಡರು ಕೆಲವು ಪ್ರಶ್ನೆಗಳು ಎದ್ದಾಗ, ಉತ್ತರಿಸಲೇಬೇಕಾದ ಸಂದರ್ಭಗಳು ಸೃಷ್ಟಿಯಾದಾಗ ಮೌನಕ್ಕೆ ಶರಣಾಗಿ ಬಿಡುತ್ತಾರೆ. ಕುಮಾರಸ್ವಾಮಿಯವರು ಸುಖಾ ಸುಮ್ಮನೆ ಮೈಮೇಲೆ ಎಳೆದುಕೊಳ್ತಾರೆ ಅದೇ ವೆತ್ಯಾಸ!

ಬೆಳ್ಳಂಬೆಳಗ್ಗೆ ವೈ ಎಸ್ ವಿ ದತ್ತ ಅವರೊಂದಿಗೆ ಫೋನ್ ನಲ್ಲಿ ಚರ್ಚಿಸುವಾಗ ಈ ವಿಚಾರಗಳು ಹಾದು ಹೋದವು. ಜೆಡಿಎಸ್ ನಲ್ಲಿ ಒಬ್ಬರು ಅಧ್ಯಕ್ಷರಿದ್ದಾರೆ ಎನ್ನುವುದನ್ನೆ ಮರೆತುಬಿಡುತ್ತಾರೆ. ವಾಚಾಳಿ ವಿಶ್ವನಾಥ್ ಅಧ್ಯಕ್ಷರಾಗಿದ್ದಾಗಲೂ ಈ ಸಮಸ್ಯೆ ಇತ್ತು.
ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೇಗೌಡರ ಕಾರ್ಯಕ್ರಮದ ವಿವರಗಳು ತಿಳಿಯುತ್ತಿರಲಿಲ್ಲ. ಪಕ್ಷದ ಅಧ್ಯಕ್ಷರು ಯಾವುದಕ್ಕೆ ರಿಯಾಕ್ಷನ್ ಕೊಡಬೇಕು ಎಂಬ ಗೊಂದಲಕ್ಕೊಳಗಾಗುತ್ತಿದ್ದರು. ಆಗಲೂ
ಎಲ್ಲದಕ್ಕೂ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಉತ್ತರಿಸುತ್ತಿದ್ದರು. ಅಡಗೂರು ಗೊಣಗಿಕೊಂಡು ಸುಮ್ಮನಾಗುತ್ತಿದ್ದರು.

‘ನೀವು ಕಾಂಗ್ರೆಸ್ ನಲ್ಲಿದ್ದಾಗ ಬೆಂಗಳೂರಿನಲ್ಲಿ ಡಿಕೆಶಿಯನ್ನು ರೇಗಿಸಿ ಮೈಸೂರಿಗೆ ಬಂದು ಸಿದ್ದರಾಮಣ್ಣಂಗೆ ಬೈದಂಗಲ್ಲ ಜೆಡಿಎಸ್ ನಲ್ಲಿ’ ಅಂತ ಹಳ್ಳಿ ಹಕ್ಕಿಗೆ ರೇಗಿಸುತ್ತಿದ್ದೆ. ಈಗಿರುವ ಜೆಡಿಎಸ್ ಅಧ್ಯಕ್ಷರು ಸಕಲೇಶಪುರದ ಶಾಸಕರಾದ ಕುಮಾರಸ್ವಾಮಿಯವರ
ನೇಮಕ ಕೇವಲ ನಾಮಕಾವಸ್ಥೆ … ರೇವಣ್ಣನವರು ಹಾಸನದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿದಿನ ಮಾತನಾಡುತ್ತಾರೆ. ಹೊಳೆನರಸಿಪುರದಲ್ಲಿ ಮೀಟಿಂಗ್ ಮುಗಿಸಿ, ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ
ರಾಜ್ಯ ಮಟ್ಟದ ಗೊಂದಲಗಳಿಗೆ ‘ಅದೆಲ್ಲ ದೊಡ್ಡವರು ನೋಡ್ಕೋತಾರೆ ಬಿಡಿ’ ಅಂತಾರೆ. ಮುಖ್ಯವಾಗಿ ಪತ್ರಿಕೆಗಳಲ್ಲಿ ಅಭಿವೃದ್ಧಿ ವಿಷಯಗಳು ಸುದ್ದಿಯಾಗುವಂತೆ ಮಾತಾಡುತ್ತಾರೆ.

ಇದೆಲ್ಲ ಕುಮಾರಸ್ವಾಮಿಯವರಿಗೆ ಗೊತ್ತಿಲ್ಲ ಅಂತ ಅಲ್ಲ. ಎರಡು ಸಲ ಮುಖ್ಯಮಂತ್ರಿಯಾದವರು ‘ನನ್ನ ಬಳಿ ರೆಕಾರ್ಡ್ ಇದೆ, ಸಿಡಿ ಇದೆ’ ಅಂತ ಹೇಳುವುದು ಎಷ್ಟು ಸರಿ ?

‘ ಹುಚ್ಚೇಗೌಡರ ಸೊಸೆ, ಅಂಬರೀಷ್ ಪತ್ನಿ, ಅಭಿಷೇಕನ ಅಮ್ಮ ಎನ್ನುವುದೇ ಮಂಡ್ಯ ಚುನಾವಣೆಯಲ್ಲಿ ನಿಮಗಿರುವ ಕ್ವಾಲಿಕೇಶನ್ ‘ ಅಂತ ಸುಮಲತಾ ಅವರಿಗೆ ಪ್ರೆಸ್ ಕ್ಲಬ್ ಸಂವಾದದಲ್ಲಿ ಪ್ರಶ್ನೆ ಮಾಡಿದ್ದೆ. ಅಂಬರೀಷ್ ನೋಡಲು ಬರುತ್ತಿದ್ದ ಮಂಡ್ಯದವರನ್ನು ಸುಮಲತಾ ನೇರವಾಗಿ ಫೇಸ್ ಮಾಡಿದವರಲ್ಲ. ಅದು ಬಿಟ್ಟರೆ ಜನರಿಗೂ ಪಲ್ನಾಡ್ ಗ್ಯಾಂಗ್ ಗೆ ಸೇರಿದ ಸುಮಕ್ಕನವರಿಗೂ ಯಾವುದೇ ಮುಖಾಮುಖಿ ಇರಲಿಲ್ಲ. ಮಂಡ್ಯ ಎಂಪಿ ಚುನಾವಣೆಗೆ ಪಕ್ಷೇತರವಾಗಿ ನಿಲ್ಲಲು ತೀರ್ಮಾನ ಕೈಗೊಂಡಾಗ ಸಿದ್ದರಾಮಯ್ಯ,ಯಡಿಯೂರಪ್ಪನವರನ್ನು ಭೇಟಿ ಮಾಡಿದರೇ ಹೊರತು ಸುಮಲತಾ ಗೌಡರನ್ನು ಕಾಣಲೇ ಇಲ್ಲ. ಒಂದು ವೇಳೆ ನಿಖಿಲ್ ಅಲ್ಲದೇ ದೇವೇಗೌಡರೇ ಮಂಡ್ಯ ಚುನಾವಣೆಯ ಅಭ್ಯರ್ಥಿಯಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು!

– ವೈ ಜಿ ಅಶೋಕ್ ಕುಮಾರ್.

Social Share :

ಗೌಡರ ದತ್ತು ಪುತ್ರ ದತ್ತ – ದತ್ತ @ 65

Social Share :

ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರಿಗೂ ನನಗೂ ಸುಮಾರು ಹತ್ತು ವರ್ಷಗಳ ಅಂತರ ಆದರೆ ನಮ್ಮ ಸ್ನೇಹದ ಸಂಪರ್ಕ ನಿರಂತರ. ಇಂದಿರಾಗಾಂಧಿ ತಂದ ಎಮರ್ಜೆನ್ಸಿಯಲ್ಲಿ ಜನಿಸಿದ ಹಲವಾರು ವಿರೋಧ ಪಕ್ಷಗಳ ಹಾಗೂ ವಿಧ್ಯಾರ್ಥಿ ನಾಯಕರುಗಳಲ್ಲಿ ದತ್ತ ಕೂಡ ಒಬ್ಬರು. ಮಾಜಿ ಪ್ರಧಾನಿ ದೇವೇಗೌಡರಿಗೆ ಹಲವಾರು ಮಾನಸ ಪುತ್ರರು ,ಪಿಜಿಆರ್ ಸಿಂಧ್ಯಾ,ಸಿದ್ದರಾಮಯ್ಯ,ಬಿಎಲ್ ಶಂಕರ್, ಉಗ್ರಪ್ಪ ಮುಂತಾದವರು ಆದರೆ ಬದುಕಿನುದ್ದಕ್ಕೂ ಗರುಡುಗಂಬದಂತೆ ನಿಂತವರು ವೈ ಎಸ್ ವಿ ದತ್ತ.
ಕಡೂರಿನ ಯಗಟಿ ಗ್ರಾಮದಿಂದ ಬೆಂಗಳೂರು ನ್ಯಾಷನಲ್ ಕಾಲೇಜು ವಿದ್ಯಾರ್ಥಿಯಾಗಿ ,ಹೆಚ್ ಎನ್ ರ ಪ್ರಭಾವಕ್ಕೊಳಗಾದ ದತ್ತ ಸರಳತೆಯನ್ನು ಮೈ ಗೂಡಿಸಿಕೊಂಡು ಶಾಸಕರಾದರೂ ಆಟೋದಲ್ಲೇ ಪ್ರಯಾಣಿಸುತ್ತಿದ್ದರು. ಜಯಪ್ರಕಾಶನಾರಾಯಣರ ಸಂಗ್ರಾಮದಲ್ಲಿ ಇಂದಿರಾಗಾಂಧಿ ಎಮೆರ್ಜೆನ್ಸಿ ವಿರುದ್ಧದ ಚಳವಳಿ ಒಂದು ಪ್ರಮುಖ ಘಟ್ಟ.

ರಾಜ್ಯದಲ್ಲಿ ಜನತಾ ಪರಿವಾರದ ಪ್ರಮುಖ ನಾಯಕರಾದರೂ ಅವರು ಬದುಕು ಎಣೆದುಕೊಂಡದ್ದು ದೇವೇಗೌಡರ ರಾಜಕೀಯ ಬದುಕಿನ ಜತೆಗೇ,
ಅತ್ತ ಕಡೆ ಶ್ರೀಮಂತರೇ ತುಂಬಿಕೊಂಡಿದ್ದ ರಾಮಕೃಷ್ಣಹೆಗಡೆಯ ನೀಲಿ ಕಣ್ಣಿನ ಹುಡುಗ ಜೀವರಾಜ ಆಳ್ವ ತಂತ್ರಗಾರಿಕೆ ಕಿಂಗ್ ಆಗಿದ್ದರೆ ಇತ್ತ ಕಡೆ ಬಡಕಲು ಗೌಡರ ಮಡಿಲಲ್ಲಿ ಹಣವಿಲ್ಲದ ಅಕ್ಷರ ಕ್ರಾಂತಿಯ ದತ್ತ ಇದ್ದರು. ಮೇಸ್ಟ್ರು ಅನಿಸಿಕೊಂಡರೂ ಶಿಕ್ಷಕ ವೃತ್ತಿ ಮಾಡಿ ಸರ್ಕಾರದ ಸಂಬಳ ತಿಂದವರಲ್ಲ; ಶಾಸಕರಾದರೂ ಭೋಜನ ಕೂಟದಲ್ಲಿ ಮಿಂದವರಲ್ಲ. ಸರಳತೆ, ಸಜ್ಜನಿಕೆ,ಬದ್ಧತೆ,ಪಾರದರ್ಶಕತೆ ಇವು ದತ್ತ ಅವರ ಅಖಂಡ ಕರ್ನಾಟಕದ ಕನಸು, ಅವರೊಬ್ಬ “ಹಣ ಎಣಿಸಲು ಬಾರದ ಲೆಕ್ಕದ ಮೇಸ್ಟ್ರು”.
ಸಾಹಿತ್ಯ, ಸಾಹಿತಿ,ರೈತರು, ಚಳವಳಿ ಮತ್ತು ಜನಸಾಮಾನ್ಯರನ್ನು ರಾಜಕಾರಣದ ಭಾಗವಾಗಿಸಿದ ಕಾರಣವೇ ದೇವೇಗೌಡರ ಗೆಲುವು, ಮುಖ್ಯಮಂತ್ರಿ ಮತ್ತೆ ಪ್ರಧಾನಿ.

ಗೌಡರು ಚೆನ್ನಮ್ಮಾಜಿ ಇಲ್ಲದೆ ಇದ್ದು ಬಿಡಬಲ್ಲರು . ಆದರೆ ನಿದ್ದೆಯಲ್ಲೂ ಕನವರಿಸುವುದು ಅವರ ಮಾನಸ ಪುತ್ರ ದತ್ತನನ್ನು ಮಾತ್ರ ! ಗ್ರಾಮ ಪಂಚಾಯಿತಿಯಿಂದ ಪ್ರಧಾನಿಯವರೆಗೆ ಪತ್ರ ಬರೆಯುವುದರಲ್ಲಿ ಗಿನ್ನಿಸ್ ದಾಖಲೆ ಇರುವುದು ದೇವೇಗೌಡರ ಹೆಸರಿನಲ್ಲಿ!
ಅದರ ಪೆನ್ನು ಮತ್ತು ಶಾಯಿ ವೈ ಎಸ್ ವಿ.

ವಿರೋಧ ಪಕ್ಷದಲ್ಲಿ ಕೆಲಸ ಮಾಡುವ ವೈಖರಿ , ಜನರಿಗೆ ಸ್ಪಂದಿಸುವ ರೀತಿ, ಸರ್ಕಾರದ ಜನವಿರೋಧಿ ನೀತಿಗಳನ್ನು ಬಗ್ಗು ಬಡಿಯುವ ಹೋರಾಟದ ಹಾದಿ, ರಾಜಕೀಯ ಸ್ಥಿತ್ಯಂತರದ ಬಿರುಗಾಳಿ ಬೀಸಿದಾಗಿನ ಸಹನೆಗಳನ್ನು ದತ್ತ ಮೇಸ್ಟ್ರು ಕಲಿತಿದ್ದು ಗೌಡರ ಶಾಲೆಯಲ್ಲಿ. ಗೌಡರು ಹಾಗೂ ಅವರ ಪಕ್ಕದಲ್ಲಿ ದತ್ತ ಸೂತ್ರದಾರ ಇದ್ದಂತೆ. ಬ್ಯಾನರ್ ಕಟ್ಟುವುದರಿಂದ ಬಣ್ಣ ಬಳಿಯುವವರೆಗೆ , ವೇದಿಕೆ ರೂಪಿಸಿ ಲೆಕ್ಕವಿಲ್ಲದಷ್ಟು ನಾಯಕರುಗಳನ್ನು ಸೃಷ್ಟಿಸಿದ ಗೌಡರ ರಾಜಕಾರಣ ಸವೆಸಿದ ಹಾದಿಯಲ್ಲಿ ದತ್ತ ಅವರಿಗೆ ಪ್ರಮುಖ ಪಾಲಿದೆ. ಹೆಗಡೆಯವರ ರೇವಜೀತು,ಬಾಟ್ಲಿಂಗ್ ಹಾಗೂ ಟೆಲಿಫೋನ್ ಟ್ಯಾಪಿಂಗ್ ಹಗರಣಗಳನ್ನು ಬಯಲಿಗೆಳೆಯಲು ಪತ್ರಿಕೆ ಗಳಿಗೆ ಆಹಾರ ಒದಗಿಸುತ್ತಿದ್ದವರು ದತ್ತ.

1995 ರಲ್ಲೇ ಮೇಲ್ಮನೆಗೆ ಬರಬೇಕಾಗಿದ್ದ ದತ್ತ 2004 ರವರೆಗೆ ಕಾಯಬೇಕಿತ್ತು. ಗೌಡರು ಮುಖ್ಯಮಂತ್ರಿ ಆದಾಗ ದತ್ತ ಅವರ ಸೇವೆಯ ಬಗ್ಗೆ ಪ್ರಸ್ತಾಪಿಸಿದಾಗ ‘ ದತ್ತ ನನ್ನ ದತ್ತು, ಅವನ್ನ ವಾರ್ತಾ ಮತ್ತು ಪ್ರಚಾರ ಮಂತ್ರಿ ಮಾಡಬೇಕು ಆದರೆ ಈ ರಾಜಕಾರಣದಲ್ಲಿ ಸಾಧ್ಯವಾಗುತ್ತಿಲ್ಲ’ ಅಂದಿದ್ದರು. ಸತತ ಗೆಲುವಿನ ಕಡೂರು ಕೃಷ್ಣಮೂರ್ತಿಯ ನಂತರ ಆ ಕ್ಷೇತ್ರ ದತ್ತರ ಪಾಲಿಗೆ ಬಂತು. ಅವರು mlc ಆಗಿದ್ದಾಗ ಕಡೂರಿನ ತುಂಬೆಲ್ಲಾ ಓಡಾಡಿ ‘ಜಾತಿ ಬೇಡ ಪ್ರೀತಿ ಬೇಕು’ ಎಂಬ ಸ್ಲೋಗನ್ ಮೊಳಗಿಸಿದ್ದು ಫಲ ನೀಡಿತು.
ಎರಡಂಕಿ ಮೀರದ ಬ್ರಾಹ್ಮಣ ಮತದಾರರಿರುವ ಕಡೂರಿನಲ್ಲಿ ಜಾತಿಯ ಬೆಂಬಲ ಇಲ್ಲದೆ ನಲ್ವತ್ತು ಸಾವಿರಕ್ಕೂಅಧಿಕ ಅಂತರದಿಂದ ಗೆದ್ದು ತೋರಿಸಿದ ಏಕೈಕ ಶಾಸಕ ದತ್ತ.

ದೇವೇಗೌಡರ ಸಂಕಷ್ಟ ಕಾಲದಲ್ಲಿ ಜತೆಗೇ ಹೆಜ್ಜೆ ಹಾಕಿದವರು ಅವರ ಇಷ್ಟಾನಿಷ್ಟಗಳನ್ನು ಪೂರೈಸಿದ ದತ್ತರ ಗೆಳೆಯರೆಲ್ಲ ಮಂತ್ರಿಯಾದರು. ದತ್ತ ಅವರು ಆಡಳಿತ ನಡೆಸುವುದನ್ನು ಕಾಣಬೇಕೆಂಬ ಹಂಬಲ ನನ್ನಂತಹವರಿಗಿದ್ದದು ಸಹಜ.

ಅರವತ್ತೈದರ ಹರೆಯದ ಸೂರ್ಯನಾರಾಯಣ ದತ್ತ ಸದಾ ಸೂರ್ಯನಂತೆ ಪ್ರಜ್ವಲಿಸಲಿ ಎಂದು ಅವರ ಸ್ನೇಹಿತ ಹಾಗೂ ಅಭಿಮಾನಿಯಾಗಿ ಹಾರೈಸುತ್ತೇನೆ.

-ವೈ ಜಿ ಅಶೋಕ್ ಕುಮಾರ್.

Social Share :

ಸಾ.ರಾ.ಮಹೇಶ್ ಸಾದ ಸೀದ ಸಾಹಸಗಳು

Social Share :

ಹ್ಯಾಟ್ರಿಕ್ ಹೀರೋ ಸಾಲಿಗ್ರಾಮ ರಾಮೇಗೌಡ್ರು ಮಹೇಶ (8.10.1966)… ಕಳೆದ ವಿಧಾನಸಭಾ ಚುನಾವಣೆಯಿಂದಲೂ ನಿರಂತರವಾಗಿ ಸುದ್ದಿಯಲ್ಲಿ ಇರುವಂತೆ ಸನ್ನಿವೇಶಗಳು ಸೃಷ್ಟಿಯಾಗಿವೆ ಅಥವಾ ಸ್ವಯಂ ಸೃಷ್ಟಿಸಿಕೊಂಡಿದ್ದಾರೆ.
ಈಗ ಅದು ಸ್ಫೋಟಿಸಿ ತನಿಖೆಗೆ ತಲೆಕೊಡುವ ಹಂತಕ್ಕೆ ಬಂದು ತಲುಪಿದೆ. ರೋಹಿಣಿ ಸಿಂಧೂರಿಯವರು ಎತ್ತಿರುವ ಪ್ರಶ್ನೆಗಳು ಕಳೆದ ಹತ್ತು ವರ್ಷಗಳ ಹಿಂದೆ ಇವರು ಏನಾಗಿದ್ದರು ? ಈಗ ಏನಾಗಿದ್ದಾರೆ ಯಾವ ಇಂಡಸ್ಟ್ರಿಗಳನ್ನು ರೂಪಿಸಿ ಎಷ್ಟು ಉದ್ಯೋಗಗಳನ್ನು ನೀಡಿದ್ದಾರೆ? ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆಯುತ್ತಿದ್ದ ಮಹೇಶ್ ಮಿರ್ಲೆ- ಸಾಲಿಗ್ರಾಮದ ಓರ್ವ ಮೇಸ್ಟ್ರುಮಗ, ಎರಡು ಎಕರೆ ತರಿ ಜಮೀನ್ದಾರರು, ಮತ್ತೆ ಅವರು ಇಷ್ಟೆಲ್ಲ ಆಸ್ತಿವಂತರು ಹೇಗಾದರು ? ಮೈಸೂರು ಜಿಲ್ಲೆಯ ಜನ ಹೇಳುವಂತೆ ರಿಯಲ್ ಎಸ್ಟೇಟ್ ವ್ಯಾಪಾರ. ನೇರ ಮಾರ್ಗದಲ್ಲಿ ರಿಯಲ್ ಆಗಿ ರಿಯಲ್ ಎಸ್ಟೇಟ್ ಮಾಡಿದ್ರೆ ಹತ್ತು ವರ್ಷಗಳಲ್ಲಿ ನೂರಾರು ಕೋಟಿ ಸಂಪಾದಿಸಿ ಶ್ರೀಮಂತರಾಗಲು ಸಾಧ್ಯವೇ? ಎಂಬುದು ಅದೇ ಜನರ ಪ್ರಶ್ನೆ.

ಕಳೆದ ವಿಧಾನಸಭಾ ಚುನಾವಣೆಗೆ ಒದಗಿಸಿರುವ ಮಾಹಿತಿಯಲ್ಲಿ ಅವರ ಮತ್ತು ಕುಟುಂಬದ ಆಸ್ತಿ ,ಹಣ ,ಒಡವೆ, ಕಾರುಗಳು,ಬಂಗ್ಲೇ ,ಸಾರಾ ಅಸೋಸಿಯೇಟ್ಸ್ ಹೆಸರಿನ ಹಣಕಾಸು,ಕೊಡಗಿನ ಎಸ್ಟೇಟ್ ಮುಂತಾಗಿ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಗಳ ವಿವರ ಸಿಗುತ್ತದೆ. ಆದರೆ ಈಗ ಪ್ರಸ್ತಾಪದಲ್ಲಿರುವ ಒತ್ತುವರಿ ಜಾಗಗಳು, ಎಕರೆಗಟ್ಟಲೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮೈಸೂರಿನ ಸಾ ರಾ ಚೌಲ್ಟ್ರೀ, ಮಾಜಿ ಪ್ರವಾಸೋದ್ಯಮ ಸಚಿವರ ರೆಸಾರ್ಟ್ ನಿರ್ಮಾಣದ ಯೋಜನೆ, ನೂರಾರು ಎಕರೆಯಲ್ಲಿ ನಡೆಯುವ ರಿಯಲ್ ಎಸ್ಟೇಟ್ ವ್ಯವಹಾರಗಳ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚಿ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ.

ಮಹೇಶ್ ಮತ್ತು ಸಿಂಧೂರಿಯವರ ಮುಖಾಮುಖಿ ಆಗಿದ್ದು ಅವರು ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ, ವಿಧಾನಸಭೆಯ ಸಮಿತಿಯೊಂದರ ಅಧ್ಯಕ್ಷರು (ಕಾಗದ ಪತ್ರಗಳ ಸಮಿತಿ ಇರಬೇಕು) ಹಾಸನಾಂಬ ದರ್ಶನಕ್ಕೆ ಬಂದಾಗ ಜಿಲ್ಲಾಧಿಕಾರಿಗಳು ಪ್ರೋಟೋಕಾಲ್ ಮರ್ಯಾದೆ ಕೊಡಲಿಲ್ಲ ಎಂಬುದು ಮೊದಲ ಆರೋಪ, ಸಮಯಕ್ಕೆ ಸರಿಯಾಗಿ ಅವರು ಬರಲಿಲ್ಲ ನಾನು ಎರಡು ಗಂಟೆ ಕಾದು ನನ್ನ ಕೆಲಸಕ್ಕೆ ತೆರಳಿದೆ ಎಂಬುದು ಆಗಿನ ಸಿಂಧೂರಿಯವರ ಸಮಜಾಯಿಶಿ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗ ಜೆಡಿಎಸ್ ಮತ್ತು ಬಿಜೆಪಿ ತಲಾ ನಲ್ವತ್ತು ಸ್ಥಾನ ಪಡೆದದ್ದರಿಂದ ಮತ ಗಳಿಕೆಯ ಆಧಾರದ ಮೇಲೆ ಜೆಡಿಎಸ್ ಗೆ ವಿರೋಧಪಕ್ಷದ ಸ್ಥಾನ ದೊರೆತು ನಂತರ ಕೆಜೆಪಿ ಬಿಜೆಪಿಯ ವಿಲೀನದಿಂದ ಅದು ಯಡಿಯೂರಪ್ಪನವರ ಪಾಲಾಯಿತು. ಆಗ ಜೆಡಿಎಸ್ ಗೆ ದೊರೆತ ವಿಧಾನಸಭೆಯ ಲೆಕ್ಕ ಪತ್ರ ಸಮಿತಿಗೆ ಸಾರಾ ಮಹೇಶ್ ಅಧ್ಯಕ್ಷರು. ವಿಧಾನ ಮಂಡಲದಲ್ಲಿ ಪ್ರಶ್ನೋತ್ತರ ಮುಗಿದ ಮೇಲೆ ಮಂತ್ರಿಗಳು ಎದ್ದು ನಿಂತು ‘ನನ್ನ ಮುಂದಿರುವ ಕಾಗದ ಪತ್ರಗಳನ್ನು ಸಭೆಯ ಮುಂದಿಡುತ್ತೇನೆ’ ಎನ್ನುತ್ತಾರೆ. ಒಮ್ಮೊಮ್ಮೆ ಕೆಲವು ಮಂತ್ರಿಗಳ ಮುಂದೆ ಯಾವ ಕಾಗದ ಪತ್ರಗಳು ಇರುವುದಿಲ್ಲ. ಆದರೂ ಅದು ನಡವಳಿಕೆ, ಸಂಪ್ರದಾಯ ಮುಗಿಸುತ್ತಾರೆ. ಆ ಸಮಿತಿಗೆ ಇವರು ಅಧ್ಯಕ್ಷರು. ಯಾವ ಇಲಾಖೆಯ ಅಧಿಕಾರಿಗಳು ವರದಿ ತಯಾರಿಸಿ ಆಡಿಟ್ ಮಾಡಿಸಿ ಸಮಯಕ್ಕೆ ಸರಿಯಾಗಿ ನೀಡುವುದಿಲ್ಲವೋ ಅಂತಹವರನ್ನು ಕರೆದು ಪ್ರಶ್ನಿಸಿ ಸಮಯಕ್ಕೆ ಸರಿಯಾಗಿ ನೀಡುವಂತೆ ಸೂಚಿಸುವುದಷ್ಟೇ ಈ ಸಮಿತಿಯ ಕೆಲಸ,ಅದು ಸಮರ್ಪಕವಾಗಿದೆಯಾ ಎಂದು ಪರಿಶೀಲಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಇದೆ( public account comity) ಓರ್ವ ಅಧಿಕಾರಿ ಒಂದು ಕಚೇರಿ, ಒಂದು ಫೋನ್ ಇದ್ರೆ ಈ ಕೆಲಸವನ್ನು ಮಾಡಬಹುದೆಂದು ಸಚಿವಾಲಯದ ಅಧಿಕಾರಿಗಳೇ ಹೇಳುತ್ತಾರೆ.

 

ರೋಹಿಣಿ ಸಿಂಧೂರಿಯವರ ಮೇಲೆ ಒಂದು ಹಕ್ಕುಚ್ಯುತಿ ಪ್ರಕರಣವೂ ಪೆಂಡಿಂಗ್ ಇರಬಹುದು.ಹಕ್ಕುಚ್ಯುತಿ ಸಮಿತಿಗೆ ಬಸವರಾಜ ಪಾಟೀಲ್ ಯತ್ನಾಳ್ ಅಧ್ಯಕ್ಷರು, ಸಿಂಧೂರಿಯವರು ಉತ್ತಮ ಅಧಿಕಾರಿ ಬಿಡ್ರೀ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಂತೆ.
ನೇರವಾಗಿ ಮಾತನಾಡುವ ಯತ್ನಾಳ್ ಸುಮ್ಮನೆ ಬಿಟ್ಟಾರೆಯೇ ಇದು ಯೋಚಿಸಬೇಕಾದ ವಿಚಾರ. ಮರ್ಯಾದೆ ಸಿಗದಿದ್ದರೆ ಮಹೇಶಣ್ಣ ಕೆರಳುತ್ತಾರೆಂಬುದು ಸಚಿವಾಲಯದ ಷರಾ !

ಹಳೆಯ ಎಡತೊರೆಯ ನೂರಾ ಅರವತ್ತು ಗ್ರಾಮಗಳ ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಾಲಿಗ್ರಾಮದ ಮಹೇಶ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಸಲ ಕಡಿಮೆ ಅಂತರ ( 1800 ಅಂದಾಜು)ದಲ್ಲಿ ಗೆದ್ದರೂ ಕುಮಾರಸ್ವಾಮಿಯವರಿಂದ ಮಂತ್ರಿ ಆಗುವ ಯೋಗವು ಸಿಕ್ಕಿತು. ದೇವೇಗೌಡರ ಇಡೀ ಕುಟುಂಬದಲ್ಲಿ ಸಧ್ಯಕ್ಕೆ ಕುಮಾರಸ್ವಾಮಿಯವರೊಬ್ಬರೇ ಇವರಿಗೆ ಆಸರೆ,ಮುಂದೇನೋ ಗೊತ್ತಿಲ್ಲ. ಇವರು ಶಾಸಕರಾಗುವ ಮುನ್ನ ಬಿಜೆಪಿಯಲ್ಲಿ ಗುರುತಿಸಿಕೊಂಡು ಕಣಕ್ಕೆ ಇಳಿದ ಪರಿಣಾಮ ಅಡಗೂರು ವಿಶ್ವನಾಥ್ ಸೋತು ಸಿದ್ದರಾಮಯ್ಯನವರ ಶಿಷ್ಯ ಮಂಚನಹಳ್ಳಿ ಮಹದೇವ್ ಜೆಡಿಎಸ್ ಶಾಸಕರಾಗಿದ್ದರು.ಆಗ ಯಡಿಯೂರಪ್ಪನವರ ಆಶೀರ್ವಾದ ಮಹೇಶಗಿತ್ತು. ರಾಮದಾಸ,ಮಹೇಶ ಮುಂತಾದ ಒಂದು ಯುವ ಪಡೆ ಮೂಡಾ ಅಧ್ಯಕ್ಷರಾಗಿದ್ದ
ಬಂಗಾರಪ್ಪನವರ ಶಿಷ್ಯ ಗೋವಿಂದರಾಜು ಅವರ ಸುತ್ತ ಗಿರಕಿ ಹೊಡೆಯುತ್ತಿದ್ದ ಸಮಯದಲ್ಲಿ ಇವರೆಲ್ಲಾ ಪ್ರವರ್ಧಮಾನಗೊಂಡರೆಂಬುದು ಬಲ್ಲ ಮೂಲಗಳ ಮಾಹಿತಿ.

ಮಂಚನಹಳ್ಳಿ ಮಹಾದೇವ ಹಠಾತ್ ನಿಧನ ಹಾಗೂ ಸಿದ್ದರಾಮಯ್ಯ ಜೆಡಿಎಸ್ ನಿರ್ಗಮನದ ನಂತರ 2008ರಲ್ಲಿ ಮಹೇಶ್ ಜೆಡಿಎಸ್ ಶಾಸಕರಾದರು. ಅಲ್ಲಿಂದ ಲೆಕ್ಕ ಕೇಳುತ್ತಿದ್ದಾರೆ. ಶಾಸಕರು ವ್ಯಾಪಾರ ಮಾಡಬಾರದೆಂದು ಸಂವಿಧಾನದಲ್ಲಿ ಹೇಳಿಲ್ಲ ಆದರೆ ಜನಪ್ರತಿನಿಧಿಯಾದವನಿಗೆ ಬದ್ದತೆ ಇರಬೇಕು, ಅವನು ಜನಗಳಿಗೆ ಉತ್ತರದಾಯಿತ್ವ ಆಗಿರಲೇಬೇಕು. ಅಡಗೂರು ವಿಶ್ವನಾಥ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರುವಲ್ಲಿ ತನ್ನ ಪಾತ್ರ ದೊಡ್ಡದು ಎಂದು ಮಹೇಶ್ ಹೇಳಿಕೊಂಡಿದ್ದರು. ಆದರೆ ಅದಕ್ಕೂ ಮುನ್ನ ದೇವೇಗೌಡರು ಮೈಸೂರು ಜಿಲ್ಲೆಯ ಶಾಸಕರ ಸಭೆ ನಡೆಸಿ ಪ್ರಮಾಣ ಮಾಡಿಸಿಕೊಂಡಿದ್ದರು. ಹುಣಸೂರು – ಕೆ ಆರ್ ನಗರ ಒಂದಕ್ಕೊಂದು ಅಂಟಿಕೊಂಡ ಊರುಗಳಾದರೂ ಕೆಆರ್ ನಗರದಲ್ಲಿ ಒಕ್ಕಲಿಗರು-ಕುರುಬರು ಹಿಂದುಳಿದ ವರ್ಗಗಳು ಸಮಾನವಾಗಿದ್ದರು.
ದೇವರಾಜ ಅರಸರ ಹುಣಸೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳದೇ ಮೇಲುಗೈ, ಸ್ವಾಭಾವಿಕವಾಗಿ ಸಿದ್ದರಾಮಯ್ಯನವರ ಪ್ರಭಾವ ಇಲ್ಲಿದೆ. ಜೆಡಿಎಸ್ ಅಧ್ಯಕ್ಷರಾಗಿ ಹುಣಸೂರಿನಲ್ಲಿ ಸುಮಾರು ಎಂಟು ಸಾವಿರ ಮತಗಳ ಅಂತರದಲ್ಲಿ ಗೆದ್ದರೂ ವಿಶ್ವನಾಥ್ ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಯಾಗಲಿಲ್ಲ. ಗೌಡರ ಕುಟುಂಬದ ವಿರೋಧದ ನಡುವೆಯೂ ಸಾರಾ ಮಂತ್ರಿಯಾದರು. ವಿಶ್ವನಾಥ್ ಆಪರೇಶನ್ ಕಮಲಕ್ಕೆ ಒಳಗಾದ ಮೇಲಿನ ಜಟಾಪಟಿ, ಆಣೆ ಪ್ರಮಾಣ ಗಳನ್ನು ಕಂಡು ರಾಜ್ಯದ ಜನತೆ ಅಸಹ್ಯಪಟ್ಟುಕೊಂಡಿದೆ.
ಹಳ್ಳಿ ಹಕ್ಕಿ ವಿಶ್ವನಾಥ್ ಅವರ ‘ಬಾಂಬೆ ಡೇಸ್’ ಪುಸ್ತಕವೂ ಬಿಡುಗಡೆಗೆ ಸಿದ್ಧವಾಗಿದೆ.

ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾಗಿ ಅನುಭವ ಹೊಂದಿರುವ ಮಹೇಶ್ ಅವರಿಂದ ಈಗ ಲೆಕ್ಕಪತ್ರ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಸಾಲಿಗ್ರಾಮದವರು ತುಂಬಾ ಸ್ಟ್ರಾಂಗ್ ಆಗಿರುತ್ತಾರೆ ಎಂಬುದು ಇಲ್ಲಿನ ನಂಬಿಕೆ. ಉದಾಹರಣೆಗೆ ಪಾರ್ವತಮ್ಮ ರಾಜ್ ಕುಮಾರ್, ಭವಾನಿ ರೇವಣ್ಣ, ಪುಟ್ಟಸ್ವಾಮಿಗೌಡರ ಸೊಸೆ ಅನುಪಮ ಮಹೇಶ್, ಸಾ ರಾ ಗೋವಿಂದು ಮುಂತಾದವರು. ಸಾ ರಾ ಮಹೇಶ್ ಎಷ್ಟು ಸ್ಟ್ರಾಂಗ್ ಎಂಬ ಪರೀಕ್ಷೆ ಶುರುವಾಗಿದೆ…

-ವೈ ಜಿ ಅಶೋಕ್ ಕುಮಾರ್.

Social Share :

ಮಾಸ್ಕ್ ಹೊಸತ್ತಲ್ಲ.. ದಂಡವೂ ಹೊಸದಲ್ಲ..

Social Share :

ಬಿಬಿಎಂಪಿ ಮಾರ್ಷಲ್ ಗಳು ದಂಡ ಹಾಕುವುದು ಹೊಸದೇನೂ ಅಲ್ಲ; ಲಾಕ್ ಡೌನ್ ಸಡಿಲಗೊಂಡ ನಂತರ ದಂಡ ಹಾಕುವ ಪ್ರಕ್ರಿಯೆ ನಿರಂತರವಾಗಿದೆ.

ಏನಪ್ಪಾ ವ್ಯತ್ಯಾಸ ಎಂದರೆ ಆಗ ದಂಡದ ಮೊತ್ತ 200₹ ಇತ್ತು. ಅದನ್ನು ಏಕಾಏಕಿ ಒಂದು ಸಾವಿರಕ್ಕೆ ಏಕೆ ಹೇರಿಕೆ ಮಾಡಿದರೆಂಬುದು ಮಾತ್ರ ನಿಗೂಢವೇನೂ ಅಲ್ಲ.. ಅದರ ಹಿಂದೆ ಒಂದು ಅನುಭವವೂ ಇದೆ.
ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದ ಮಾರ್ಷಲ್ ಗಳನ್ನು ಕಸದ ನಿರ್ವಹಣೆ ನಿಯಂತ್ರಣಕ್ಕೆ ಬಳಸಿಕೊಳ್ಳಲಾಯ್ತು.. ಈ ವೇಳೆ ಕಸ ಎಸೆದವರಿಗೆ ಎಷ್ಟು ಬೇಕೋ ಅಷ್ಟು ದಂಡ ಹಾಕಿ ಪೀಕಿಸಲಾಯ್ತು..(ಇದು ಅತ್ಯುತ್ತಮ ಕೆಲಸವೂ ಆಗಿತ್ತು)
ಮಾಡಿದ ತಪ್ಪಿಗೆ ಮರು ಮಾತನಾಡದೆ ದಂಡವನ್ನೂ ಕಟ್ಟಿದರು ಜನರು.. ಇದನ್ನೇ ಮಾದರಿಯಾಗಿಸಿಕೊಂಡು ಮಾಸ್ಕ್ ಮೇಲೆ ಪ್ರಯೋಗ ಮಾಡಲು ಹೊರಟರು ಎನಿಸುತ್ತದೆ. ಇಲ್ಲಿ ಮುಖ್ಯವಾಗಿ ಮಾರ್ಷಲ್ ಗಳಿಗೆ ಸಂಬಳ ನೀಡುವುದು ಇಂತಹ ದಂಡ ವಸೂಲಿಯ ಹಣದಿಂದಲೇ.

ಅದಕ್ಕೊಂದು ಸರಿಯಾದ ವ್ಯವಸ್ಥೆಯೂ ಇಲ್ಲ.. ಪಾಪ ಮಾರ್ಷಲ್ ಗಳು ಮಾಸ್ಕ್ ಡ್ಯೂಟಿ ಹಾಕಿದ ಮೇಲೆ ಹೈರಾಣಾಗಿ ಹೋಗಿದ್ದಾರೆ. ಅವರಿಗೆ ಪಿಪಿಇ ಕಿಟ್ ನಂತಹ ರಕ್ಷಣಾ ಸಾಮಗ್ರಿ ವ್ಯವಸ್ಥೆ ಇರದಿರುವ ಕಾರಣದಿಂದ ಎಷ್ಟೋ ಮಾರ್ಷಲ್ ಗಳು ಒಳಗೆ ಭಯ ಇಟ್ಟುಕೊಂಡು ಅದನ್ನು ವ್ಯಕ್ತಪಡಿಸಿದ್ದಾರೆ ಕೂಡ. ಸರ್ಕಾರ ಸಾರ್ವಜನಿಕರ ಮೇಲೆಯೇ ಎಲ್ಲಾ ಹೊರೆಯನ್ನು ಹಾಕುವ ಪ್ರಯತ್ನ ಮಾಡುತ್ತದೆ. ಅದಕ್ಕೆ ವಿರೋಧ ಬಂದಿದ್ದೂ ಸಹಜವೇ.. ವ್ಯಾಪಾರ ಸರಿಯಾಗಿ ನಡೆಯೊಲ್ಲ; ಮತ್ತೊಂದು ಕಡೆ ನಿರುದ್ಯೋಗ ಸಮಸ್ಯೆ ತೀವ್ರವಾಗಿರುವಾಗ ಎಲ್ಲಿ ತರುತ್ತಾರೆ ಜನರು ಹಣ ಎಂಬ ಸಾಮಾನ್ಯ ಪ್ರಜ್ಞೆ ಇಲ್ಲದಿದ್ದರೆ ಹೀಗೆಲ್ಲಾ ಆಗುವುದು ಸಹಜವೇ.

ಇನ್ನು ಮುಖ್ಯವಾದ ವಿಷಯವೂ ಇದೆ. ಅದೇನೆಂದರೆ ಕೋವಿಡ್ ನಿಯಂತ್ರಣಕ್ಕೆ ಕೇವಲ ಮಾಸ್ಕ್ ಸಾಕೇ ಎಂಬುದು..??

ವೈಜ್ಞಾನಿಕವಾಗಿ ಕೋವಿಡ್ ವಿಶ್ಲೇಷಣೆ ಮಾಡಿದವರು ಉಗುಳಿನ ಕಣಗಳು ಮನುಷ್ಯನ ತೇವಾಂಶ ಇರುವ ಜಾಗದಿಂದ ಪ್ರವೇಶ ಪಡೆಯುತ್ತವೆ. ಅಂದರೆ ಬಾಯಿ, ಮೂಗು ಹಾಗೂ ಕಣ್ಣಿನ ಮೂಲಕವೂ ಪ್ರವೇಶವಾಗುತ್ತದೆ ಎಂದು ಹೇಳಿರುವಾಗ ಮಾಸ್ಕ್ ಮುಕ್ಕಾಲು ಭಾಗ ತಡೆಯುತ್ತದೆ ಅಷ್ಟೇ.

ಮಾರಕ ರೋಗದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರ ವರ್ತನೆ ಬದಲಾಗಿಲ್ಲ ಎಂದರೆ ಅದಕ್ಕೆ ಅವರ ಬದುಕು ಮತ್ತು ಜೀವನ ನಡೆಸುವ ಅನಿವಾರ್ಯತೆಯೇ ಕಾರಣವಾಗಿರುತ್ತದೆ. ಮುಖ್ಯವಾಗಿ ಸರ್ಕಾರ ನಮಗೇನಾದರೂ ಮಾಡುತ್ತದೆ ಎಂಬ ವಿಶ್ವಾಸವನ್ನು ಜನರು ಕಳೆದುಕೊಂಡಿದ್ದಾರೆ.. ನಮ್ಮ ಬದುಕಿಗೆ ನಾವೇ ಜವಾಬ್ದಾರರು ಎಂಬ ಪ್ರಜ್ಞೆ ಇದ್ದೇ ಇರುತ್ತದೆ. ಅಕಸ್ಮಾತ್ ಇಲ್ಲದಿದ್ದರೆ ತಿಳುವಳಿಕೆ ಮೂಡಿಸಬೇಕಾಗುತ್ತದೆ.. ಅದನ್ನು ಸಮರ್ಪಕವಾಗಿಯಂತೂ ಮಾಡಿಲ್ಲ.. ಸಾಮಾಜಿಕ ಅಂತರ ಏಕಿರಬೇಕು.. ಮಾಸ್ಕ್ ಏಕೆ ಹಾಕಬೇಕು.. ಸ್ಯಾನಿಟೈಸರ್ ಏಕೆ ಬಳಸಬೇಕು.. ಎಂಬ ವಿಷಯದ ಮೇಲೆ ಯಾರು ಎಷ್ಟು ಕಾರ್ಯಕ್ರಮ ಮಾಡಿದ್ದಾರೆ. ಎಷ್ಟು ಶಿಬಿರಗಳನ್ನು ಆಯೋಜಿಸಿ ಜನರಿಗೆ ತಿಳುವಳಿಕೆ ಮೂಡಿಸಲಾಗಿದೆ ಎಂಬುದನ್ನು ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಲಿ.

Social Share :

ರಾಜರು ಸುಸ್ತು.. ಶ್ರೀರಾಮುಲು ಮೇಲ್ಪಂಕ್ತಿ

Social Share :

ಕೊರೊನಾ ಜೊತೆಗೇ ಬದುಕಬೇಕು ಎಂಬ ಒನ್ ಲೈನ್ ಅಜೆಂಡಾ ಪರಿಸ್ಥಿತಿಯನ್ನು ಸಹಜತೆ ತಂದಿತು ಎಂದು ಎಂದು ಭಾವಿಸಿದವರೇ ಹೆಚ್ಚು.

ಲಾಕ್ ಡೌನ್ ನಂತರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದಲಿ ಯಾರಿಗೂ ಇಂತಹ ಸ್ಥಿತಿ ಬರುತ್ತಲೇ ಇರಲಿಲ್ಲ..‌ ಆದರೆ ಎಲ್ಲವನ್ನು ಮೀರಿದ ಪರಿಣಾಮವೇ ಈಗ ರಾಜನಿಗೂ ತಗುಲಿದೆ ಈ ಮಾರಕ ವೈರಸ್.
ಸಾಮಾನ್ಯ ಪ್ರಜೆಗಳು ಈ ಆಷಾಢದ ಗಾಳಿ ಯಲ್ಲಿ ಬಂದೆರಗುವ ಸಣ್ಣ ಪುಟ್ಟ ಜ್ವರವನ್ನು ಕೋವಿಡ್ ಲೆಕ್ಕಕ್ಕೆ ಸೇರಿಸಿದ್ದರಿಂದ ಎಲ್ಲವೂ ಅಯೋಮಯ. ಮೆಡಿಕಲ್ ಶಾಪ್ ನಲ್ಲಿ ಆಂಟಿ ಬಯೋಟಿಕ್ಸ್ ಮಾರಾಟದಲ್ಲಿ ದಾಖಲೆ ಜ್ವರ ನೆಗಡಿ ಕೆಮ್ಮು ಮಾತ್ರೆಗಳನ್ನು ನೀಡಲಾಗುವುದಿಲ್ಲ ಎನ್ನುತ್ತಲೇ ಅವುಗಳನ್ನು ಮಾರಾಟ ಮಾಡಿಯೇ ಮಾಡಿದವು. ಖಾಸಗಿ ಆಸ್ಪತ್ರೆಗಳು ಹಬ್ಬ ಮಾಡಿದವು ಮತ್ತು ಮಾಡುತ್ತಲೇ ಇವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ಪಾಸಿಟಿವ್ ಬಂದಿದೆ ಎಂದು ಐಷಾರಾಮಿ ಮಣಿಪಾಲ್ ಆಸ್ಪತ್ರೆಗೆ ಸೇರಿದರು. ಅದರ ಹಿಂದೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಕೊರೊನಾ ಪಾಸಿಟಿವ್ ಆಗಿ ಅದೇ ಆಸ್ಪತ್ರೆಗೆ ಸೇರಿದರು. ಮುಖ್ಯಮಂತ್ರಿಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಹೊತ್ತಿಗೆ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೇ ಕೊರೊನಾ ಪಾಸಿಟಿವ್ ಧೃಡವಾಯ್ತು. ಅವರು ಸರ್ಕಾರಿ ಬೋರಿಂಗ್ ಆಸ್ಪತ್ರೆ ಸೇರಿದರು. ಇದು ಅಚ್ಚರಿಯ ವಿಷಯವೇ.. ಸಚಿವರು ಒಂದು ರೀತಿಯಲ್ಲಿ ಜನಸಾಮಾನ್ಯರ ಪ್ರತಿನಿಧಿಯಾಗಿ ಸಾಮಾನ್ಯ ವ್ಯಕ್ತಿಯಾಗಿ ಸರ್ಕಾರಿ ಆಸ್ಪತ್ರೆಗೆ ‌ಸೇರಿದ್ದು ಇತರರಿಗೆ ಮಾದರಿಯಾಯ್ತು ಮಾತ್ರವಲ್ಲ; ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಒಂದು ಸಂದೇಶವನ್ನು ರವಾನಿಸಿದರು. ಇದು ಜನರಿಗೆ ಇಷ್ಟ ವಾಗಿ ಸಾಮಾಜಿಕ ಜಾಲ ತಾಣದಲ್ಲಿ ಅವರಿಗೆ ಪ್ರಶಂಸೆಗಳ ಮಹಾಪೂರವೇ ಹರಿಯಿತು.. ಏನೇ ಆಗಲಿ ಶ್ರೀರಾಮುಲು ಒಂದು ಮೇಲ್ಪಕ್ತಿ ಹಾಕಿಕೊಟ್ಟರು ಎಂಬುದು ಮಾತಾಯಿತು.

ಇದೆಲ್ಲದರ ನಡುವೆ ಒಂದು ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಲೇ ಇದೆ. ಈ ಕೋವಿಡ್ ನಿಂದ ತಪ್ಪಿಸಿಕೊಳ್ಳುವುದು ರಾಜರಿಗೂ ಸಾಧ್ಯವಾಗಲಿಲ್ಲ.. ಹೇಗೆ ಅದು ಹರಡುವುದು ಎಲ್ಲಿ ಮತ್ತು ಹೇಗೆ.. ಒಂದು ಸಣ್ಣ ನಿರ್ಲಕ್ಷ್ಯ ಕೂಡ ಕೋವಿಡ್ ಸುಳಿಗೆ ತಳ್ಳಬಹುದೇ ಹೀಗೆ ಹತ್ತಾರು ಪ್ರಶ್ನೆಗಳು ಕಾಡುತ್ತಲೇ ಇವೆ.

Social Share :

ಪ್ರತಿಷ್ಠೆಯ ಬದುಕು ಮನೆಗಳು ಖಾಲಿ ಖಾಲಿ

Social Share :

ಉದ್ಯಾನನಗರಿ, ಹವಾ ನಿಯಂತ್ರಿತ ನಗರ ಎಂದೆಲ್ಲಾ ಕರೆಸಿಕೊಂಡು ಪ್ರಶಾಂತವಾಗಿದ್ದ ಬೆಂಗಳೂರು ಮಧ್ಯಮ ವರ್ಗ ಮತ್ತು ಬಡವರಿಗೆ ಶಾಪವಾಗಿದ್ದು 2003ರ ಆಚೆಗೆ.. ಆಗ ಮುಖ್ಯಮಂತ್ರಿ ಯಾಗಿದ್ದ ಎಸ್. ಎಂ.ಕೃಷ್ಣ ಅವರು ಐಟಿ ಬಿಟಿಗೆ ಕೊಟ್ಟ ಉತ್ತೇಜನ ಮತ್ತು ಅದರ ಉದ್ಯೋಗಿಗಳಿಗೆ ದೊರೆಯುತ್ತಿದ್ದ ಯರ್ರಬಿರ್ರಿ ಸಂಬಳ ಬೆಂಗಳೂರು ದುಬಾರಿ ನಗರವಾಗಿ ರೂಪುಗೊಳ್ಳಲು ಕಾರಣವಾಯ್ತು.. ಪರಭಾಷಿಕರು ಮನೆ ಮಾಲೀಕರು ಕೇಳಿದಷ್ಟು ಹಣ ನೀಡುತ್ತಾ ಒಂದೊಂದು ಏರಿಯಾಗೆ ಈ ಮಟ್ಟದ ಬಾಡಿಗೆ ಎಂದು ನಿಗದಿಯಾಗಿ ಮಾಲೀಕರು ಸಮೃದ್ಧಿ ಪಡೆಯತೊಡಗಿದರು. ಅವರಿಗೆ ಹಣ ಕೈ ಸೇರತೊಡಗಿದಂತೆ ಮಕ್ಕಳಿಗೆ ದುಬಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸುವುದು.. ಮದುವೆ ಮುಂಜಿ ಅದ್ದೂರಿಯಾಗಿ ನಡೆಸುವುದು ಹೆಚ್ಚಾಯಿತು.. ಇತ್ತ ರಿಯಲ್ ಎಸ್ಟೇಟ್ ಚಿಗುರಿಕೊಂಡಿತು.. 9 ಲಕ್ಷ ಇದ್ದ ನಿವೇಶನದ ಮೌಲ್ಯ 90 ಲಕ್ಷಕ್ಕೆ ಏರಿತು. ಐಟಿ ಬಿಟಿ ಹೇರಳ ಸಂಬಳದಿಂದ ಐಷಾರಾಮಿ ಬದುಕು ಫ್ಯಾಷನ್ ಆಯಿತು. ಎಲ್ಲರೂ ಎರಡೆರಡು ಕಾರುಗಳನ್ನು ಕೊಳ್ಳುವಷ್ಟು ಸಮರ್ಥರಾದರು. ಆಗ ಶುರುವಾಯಿತು ನಗರದಲ್ಲಿ ಟ್ರಾಫಿಕ್ ಸಮಸ್ಯೆ.

ಇತ್ತ ಬಡವರು ಮತ್ತು ಕೆಳಮಧ್ಯಮ ವರ್ಗದವರ ಬದುಕು ಚಿಂದಿ ಚಿತ್ರಾನ್ನವಾಯಿತು. ದುಡಿದ ಅರ್ಧಕ್ಕಿಂತಲೂ ಹೆಚ್ಚಿನ ಹಣವನ್ನು ಮನೆ ಬಾಡಿಗೆಗೆಂದೇ ಮೀಸಲಿಡಬೇಕಾಯಿತು. ಇತ್ತ ಮಕ್ಕಳನ್ನು ಒಳ್ಳೆ ಕಾನ್ವೆಂಟ್ ನಲ್ಲಿ ಓದಿಸಬೇಕು ಎಂಬ ಹಠ ಬೆಳೆಸಿಕೊಂಡರು. ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವುದು ಮಾಮೂಲಿಯಾಯಿತು. ಇದರಿಂದ ಕೌಟುಂಬಿಕ ಘರ್ಷಣೆ ಕ್ರೈಮ್ ಹೆಚ್ಚಾದವು.

ಇಂತಹ ಕಾಲಘಟ್ಟದಲ್ಲಿ ಮನರಂಜನಾ ಕ್ಷೇತ್ರ ದುಬಾರಿ ಯಾಯಿತು. ಮಲ್ಟಿಪ್ಲೆಕ್ಸ್ ವ್ಯವಸ್ಥೆ ಯಲ್ಲಿ ಐಟಿಬಿಟಿಗಳು ಮನಬಂದಂತೆ ಹಣ ಚೆಲ್ಲತೊಡಗಿದರು. ಇದರಿಂದ ಸಿನಿಮಾ ರಂಗದ ಮಾರುಕಟ್ಟೆ ವಿಸ್ತಾರವಾಯಿತು. ಸ್ಟಾರ್ ನಟರು ಕೋಟಿ ಕೋಟಿ ಸಂಭಾವನೆ ಪಡೆಯತೊಗಿದರು. ಆಗಲೇ ಚಿತ್ರರಂಗದ ಒಳ್ಳೆಯ ಭಾವನೆಗಳು ನಾಶವಾದವು.

ವರನಟ ಡಾ.ರಾಜ್ ಕುಮಾರ್ ಸೇರಿದಂತೆ ಉದಾತ ವ್ಯಕ್ತಿತ್ವದ ಮಹನೀಯರು ಹಾಕಿಕೊಟ್ಟ ಆದರ್ಶದ ಬುನಾದಿ ಕಳಚತೊಡಗಿದವು. ವ್ಯಕ್ತಿಪೂಜೆ ಆರಾಧನೆ ಹೆಚ್ಚಾದವು. ಜೊತೆಗೆ ಸಾಮಾಜಿಕ ನೆಮ್ಮದಿ ತರುವ ಚಿತ್ರಗಳು ಇಲ್ಲವಾದವು.. ಬಿಲ್ಡಪ್ ಗಳೇ ಚಿತ್ರದ ಮುಖ್ಯವೆನಿಸುವ ಹಂತದಲ್ಲಿ ಟಿವಿಗಳು ಚಿಗುರಿಕೊಂಡವು. ಕೆಟ್ಟ ಕೆಟ್ಟ ರಿಯಾಲಿಟಿ ಶೋಗಳು ಜನರ ಮನಸ್ಸನ್ನು ಆವರಿಸಿತೊಡಗಿದವು. ಅತಿ ಸಿಲ್ಲಿ ಎನಿಸುವ ಧಾರಾವಾಹಿಗಳು ಜನರ ಚಿಂತನೆ ಹತ್ತಿಕ್ಕುವ ಹಂತ ತಲುಪಿದವು.
ಇಂತಹ ಸಂದರ್ಭದಲ್ಲಿ ಮೂರು ಘಟನೆಗಳು ಮಧ್ಯಮ ವರ್ಗದ ಬದುಕಿಗೆ ಕೊಳ್ಳಿ ಇಟ್ಟವು. ಅದರಲ್ಲಿ ಮೊದಲನೇಯದು ನೋಟ್ ಬ್ಯಾನ್ ಎರಡನೇಯದು ಜಿಎಸ್ ಟಿ ಈಗ ಮತ್ತೊಂದು ಕೊರೊನಾ ಎಂಬ ಮಹಾಮಾರಿ.

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಾರ್ಯ ಸಂಬಳವಿಲ್ಲದೆ ಯಾರೋ ಕೊಡುವ ಆಹಾರದ ಕಿಟ್ ಪಡೆದು ಹೇಗೋ ಬದುಕು ತಳ್ಳಿದವರು.. ಕೊನೆಗೆ ವೈರಾಣು ಉಪಟಳ ಹೆಚ್ಚಾಗಿ ಬದುಕು ದುರ್ಬರವಾದಾಗ ತಮ್ಮ ತಮ್ಮ ಊರುಗಳಿಗೆ ಗುಳೆ ಹೊರಟಿದ್ದಾರೆ. ಆ ರೀತಿ ಹೋಗುವವರು.. ನಮ್ಮಿಂದ ಮನೆ ಬಾಡಿಗೆ ಕಟ್ಟುವುದು ಸಾಧ್ಯವಿಲ್ಲ ಎಂಬುದನ್ನು ಹೆಚ್ಚಿನವರು ಹೇಳುತ್ತಿದ್ದಾರೆ.

ಎಷ್ಟೋ ಸರ್ಕಾರಗಳು ಬಂದವು ಹೋದವು.. ಬಡ ಮಧ್ಯಮ ವರ್ಗದ ವಸತಿಗೆಂದು ಯಾರು ತಲೆ ಕೆಡಿಸಿಕೊಳ್ಳಲಿಲ್ಲ.. ವಸತಿ ಖಾತೆಯೂ ಇದೆ ಸಚಿವರೂ ಇರುತ್ತಾರೆ.. ಆದರೂ ಮನೆ ಎಂಬುದು ಗಗನ ಕುಸುಮ. ಎಲ್ಲರಿಗೂ ಅವರವರ ಮಟ್ಟಕ್ಕೆ ಒಂದು ನೆಲೆ ಮಾಡಿಕೊಡುವ ಬಗ್ಗೆ ಯಾರೂ ಚಿಂತಿಸಲಿಲ್ಲ.

ಹೇಗೋ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರಿಂದ ಎಷ್ಟೋ ಬಡವರ ಹಸಿವು ನೀಗುತ್ತಿದೆ. ಅದರಾಚೆ ಏನೂ ಆಗಿಲ್ಲ.

‘ಮನೆ ಖಾಲಿ’ ಇದೆ ಎಂಬ ಬೋರ್ಡ್ ಗಳು ಎಲ್ಲಿ ನೋಡಿದರೂ ಕಾಣುತ್ತವೆ ಈಗ. ಆದರೆ ಬಾಡಿಗೆ ಕಡಿಮೆ ಮಾಡುವುದಿಲ್ಲ. ಈ ವಿಷಯದಲ್ಲಿ ರಾಜಿ ಆಗುವುದಿಲ್ಲ ಎನ್ನುತ್ತಿದ್ದಾರೆ ಮಾಲೀಕರು. ಕನಿಷ್ಟ ಒಂದು ವರ್ಷ ಅಂತಹ ಮನೆಗಳು ಖಾಲಿ ಬಿದ್ದರೆ ಮಾತ್ರ ಬಾಡಿಗೆ ಕಡಿಮೆ ಮಾಡುವ ಮನಸ್ಸು ಬರಬಹುದು.. ಅಂತಹ ಕಾಲವೇ ಬರಲಿ.

-ಸ್ನೇಹಪ್ರಿಯ

Social Share :

ಗುಡ್ ಟೈಮ್ ಬ್ಯಾಡ್ ಟೈಮ್ ಬಗ್ಗೆ ಲಂಕೇಶರ ಬರಹ ಇಂದಿಗೂ ವಾಸ್ತವ

Social Share :

ಆತ ಅವತ್ತು ನಿಜಕ್ಕೂ ಒಬ್ಬಂಟಿಯಾಗಿದ್ದ. ಟೈಮ್ಸ್ ವೃತ್ತದಿಂದ ಕಾಲ್ನಡಿಗೆಯಲ್ಲಿ ಹೊರಟ ಆತನ ಒಬ್ಬಂಟಿತನ ಕೇವಲ ದೇಹದ ಏಕಾಂಗಿತನವಾಗಿರಲಿಲ್ಲ; ಬೇರು ವರಸೆ ಕಿತ್ತ ಗಿಡಕ್ಕಿರಬಹುದಾದ ನೋವು, ಚರ್ಮಸುಲಿದು ನಿಲ್ಲಿಸಿದ ಆಕಳಿಗಿರಬಹುದಾದ ಯಾತನೆ ಅವನ ತಬ್ಬಲಿತನದಲ್ಲಿತ್ತು. ಹದಿನೈದು ವರ್ಷದಿಂದ ಆತನ ಸೇವೆ ಪಡೆದ ಸಮಾಜ ಅವನ ಸುತ್ತಲೂ ಇತ್ತು. ನಿತ್ಯದಂತೆ ಪತ್ರಿಕೆ ಓದುವ, ಸಿನಿಮಾ ನೋಡುವ, ತಮ್ಮ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ತೊಡಗಿದ ಜನರು ಸುತ್ತ ಸಾಗುತ್ತಿದ್ದರು; ಆದರೆ ಅವರಲ್ಲಿ ಯಾರೂ ಆತನ ಆಳದ ನೋವನ್ನು, ತಬ್ಬಲಿತನವನ್ನು ತಿಳಿಯುವುದು ಸಾಧ್ಯವಿರಲಿಲ್ಲ. ಎಲ್ಲ ಪ್ರಾಮಾಣಿಕತೆಯ ಕಠೋರ ನಿಷ್ಠುರತೆ ತರುವ ಏಕಾಂಗಿತನಕ್ಕೆ ಸಾಕ್ಷಿಯಂತಿದ್ದ ಆ ವ್ಯಕ್ತಿ ತನ್ನ ಆಳದ ಸ್ಮಶಾನ ಮೌನ ಮತ್ತು ತೀಕ್ಷ್ಣ ವೇದನೆಯನ್ನು ಹೊತ್ತು ನಡೆಯುತ್ತಲೇ ಇದ್ದ.
ಆವತ್ತಿನವರೆಗೆ ಲಂಡನ್ನಿನ ಪ್ರಖ್ಯಾತ ದಿನ ಪತ್ರಿಕೆ ‘ದಿ ಟೈಮ್ಸ್‌ ‘ಗೆ ಸಂಪಾದಕನಾಗಿದ್ದವನು ಹೆರಲ್ಡ್ ಈವಾನ್ಸ್ ಆತ. ಸರ್ಕಾರದ ಭ್ರಷ್ಟತೆಯನ್ನುಬಯಲಿಗೆಳೆದು ಸಿಂಹ ಸ್ವಪ್ನವಾಗಿದ್ದವನು ಒಬ್ಬಂಟಿಯಾಗಿದ್ದ.

ತನ್ನ ಕಚೇರಿಯನ್ನು ಕೊನೆಯ ಬಾರಿಗೆ ಬಿಟ್ಟು ಹೊರಟ ಹೆರಲ್ಡ್ ಇವಾನ್ಸ್ ನಲ್ಲಿದ್ದ ಏಕಾಂಗಿತನ ಮತ್ತು ತಬ್ಬಲಿತನ ನಿಷ್ಠೂರತೆ ಕಟ್ಟಿಕೊಂಡ ಎಲ್ಲ ಪತ್ರಕರ್ತರ ಆಳದ ಭಾವನೆಯಾಗಿದೆ.

Social Share :