Snehapriya.com

June 9, 2025

admin

ಯುಐ ಗೆ ಹೆಚ್ಚಿದ ಕುತೂಹಲ ಭಾರತೀಯ ಚಿತ್ರರಂಗ ಬೆಂಬಲ

Social Share :

ಬುದ್ಧಿವಂತ ಉಪೇಂದ್ರ ದೂರದೃಷ್ಟಿ ಇಟ್ಟು ಮಾಡುವ ಚಿತ್ರಗಳು ಎಂದಿಗೂ ದಾಖಲೆ ನಿರ್ಮಿಸುತ್ತವೆ..

ಇದೀಗ ‘ಯು ಐ’ ಚಿತ್ರದ ‘ವಾರ್ನರ್’ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದು, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸ್ಟಾರ್ ಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಈಗಾಗಲೇ ಅಮಿರ್ ಖಾನ್, ರಜನಿಕಾಂತ್ ಅವರಿಂದ ಪ್ರಶಂಸೆ ಪಡೆದಿರುವ ಚಿತ್ರದ ಕುರಿತು ಮತ್ತೊಬ್ಬ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ‘ಪುಷ್ಪ-2’ ಖ್ಯಾತಿಯ ಅಲ್ಲು ಅರ್ಜುನ್. ಇಂದು ಅಂದರೆ ಶನಿವಾರ ನಟ, ನಿರ್ದೇಶಕ ಉಪೇಂದ್ರ ಹಾಗೂ ಯುಐ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಾಗಿರುವ ಲಹರಿ ವೇಲು ಅವರು ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿದ್ದರು.

ಹೀಗೊಂದು ಸೌಹಾರ್ದದ ಭೇಟಿ ಎಂದು ಇದು ಬಣ್ಣಿಸಲ್ಪಟ್ಟಿತ್ತಾದರೂ ಅಲ್ಲು ಅರ್ಜುನ್ ಯುಐ ತಂಡಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು.

ನಾಳಿನ ಜನ ಸಮೂಹ ಮತ್ತು ಸಮಸ್ಯೆಗಳ ಕುರಿತಾಗಿ ಇರುವ ಯುಐ ಚಿತ್ರದ ವಾರ್ನರ್ ಗೆ ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬಿದ್ದಿದೆ. ಈಚೆಗಷ್ಟೇ ಬಾಲಿವುಡ್ ನ ಪ್ರಖ್ಯಾತ ನಟ ಅಮಿರ್ ಖಾನ್ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

2040ರ ಸಂದರ್ಭದಲ್ಲಿ ಭಾರತದ ಜನರ ವರ್ತನೆ ಮತ್ತು ಸಂದರ್ಭ ಹೇಗಿರುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲಿರುವ ಟ್ರೈಲರ್ ದೇಶದಾದ್ಯಂತ ಈಗ ಸದ್ದು ಮಾಡುತ್ತಿದೆ.

Social Share :

ಝೀ ಕನ್ನಡದಲ್ಲಿ ಸರಿಗಮಪ ಶುರು ಈ ಬಾರಿ ಮಹಾ ಗುರುಗಳು ಇರಲ್ಲ

Social Share :

* ಡಿಸೆಂಬರ್ 14 ರಿಂದ ಆರಂಭ *

* ವಾರಾಂತ್ಯದ ಎರಡು ಶೋಗಳು *

ಕನ್ನಡದ ಟಿ.ವಿ.ರಿಯಾಲಿಟಿ ಶೋ ಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ‘ಸರಿಗಮಪ ಹಾಡುಗಳ ಪ್ರದರ್ಶನ ವೇದಿಕೆ’ ಮತ್ತೆ ಚಾಲನೆಗೊಳ್ಳುತ್ತಿದ್ದು, ಝೀ ಕನ್ನಡ ವಾಹಿನಿಯ ಈ ಬಾರಿಯ ಶೋ ನಲ್ಲಿ ಮಹಾ ಗುರುಗಳು ಖ್ಯಾತಿಯ ಹಂಸಲೇಖ ಅವರು ಪಾಲ್ಗೊಳ್ಳುತ್ತಿಲ್ಲ..

ಬದಲಿಗೆ ಒಂದೆರಡು ಸೀಸನ್ ಗಳಿಂದ ಹೊರಗಿದ್ದ ಗಾಯಕ ರಾಜೇಶ್ ಕೃಷ್ಣನ್ ಮತ್ತೆ ಸೇರ್ಪಡೆಗೊಂಡಿದ್ದು, ಅವರ ಜೊತೆ ಎಂದಿನಂತೆ ಗಾಯಕ ವಿಜಯ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿ ಇರಲಿದ್ದಾರೆ. ಎಂದಿನಂತೆ ಅನುಶ್ರೀ ಶೋ ನಿರೂಪಕಿ.

ಬುಧವಾರ ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಲಾಯಿತು. ವಿಜಯ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಅನುಶ್ರೀ ಹಾಗೂ ವಾಹಿನಿಯ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಈಗಾಗಲೇ ಸರಿಗಮಪ ಶೋ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಜಿತ್ ಹೆಗ್ಡೆ, ಪೃಥ್ವಿಭಟ್, ಜಸ್ ಕರಣ್ ಸಿಂಗ್, ಐಶ್ವರ್ಯ ರಂಗರಾಜನ್, ಆಶಾಭಟ್, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿ ಶಾಸ್ತ್ರೀ, ಚೆನ್ನಪ್ಪ, ಸುನೀಲ್ ಗುಜಗೊಂಡ, ಸುಹಾನಾ, ಕಂಬದ ರಂಗಯ್ಯ, ಇಂಪನಾ ಜಯರಾಜ್ ಹೀಗೆ ಪ್ರತಿಭಾವಂತ ಗಾಯಕರನ್ನ ಕೊಡುಗೆಯಾಗಿ ನೀಡಲಾಗಿದೆ.

ಈ ಹೊಸ ಆವೃತ್ತಿಯಲ್ಲಿ ಬಹಳಷ್ಟು ವಿಶೇಷಗಳಿವೆ. 6 ರಿಂದ 60 ವರ್ಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಗಾಯನ ಪ್ರಕಾರವಲ್ಲದೆ ಇತರ ಪ್ರತಿಭಾ ಪ್ರದರ್ಶಗಳು ನಡೆಯಲಿವೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ಹಾಗೂ ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ವೀಕ್ಷಕರು ವಾಹಿನಿಯ ಇನ್ಸ್ಟಾಗ್ರಾಂನ ಅಧಿಕೃತ ಪೇಜ್ ನಲ್ಲಿನ ಆಡಿಷನ್ ವೀಡಿಯೋಗಳನ್ನು ಲೈಕ್ ಮಾಡುವ ಮೂಲಕ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ ಎಂಬ ವಿವರಗಳು ಬಂದವು.

ಇದೇ ಡಿಸೆಂಬರ್ 14 ರಿಂದ ಸಂಜೆ 7:30ಕ್ಕೆ ಶನಿವಾರ ಹಾಗೂ ಭಾನುವಾರ ಝೀ ಕನ್ನಡ ವಾಹಿನಿಯಲ್ಲಿ ಈ ‘ಸರಿಗಮಪ ಗಾಯನ ರಿಯಾಲಿಟಿ ಶೋ’ ಪ್ರಸಾರವಾಗಲಿದೆ.

Social Share :

ಉಪೇಂದ್ರ ಯುಐ ಟ್ರೈಲರ್ ನೋಡಿ ಅಮಿರ್ ಖಾನ್ ಸುಸ್ತಾದರು..

Social Share :

ಬಾಲಿವುಡ್ ನ ಹೆಸರಾಂತ ನಟ ಅಮಿರ್ ಖಾನ್ ಕನ್ನಡ ಚಿತ್ರದ ಟ್ರೈಲರ್ ನೋಡಿ ಸುಸ್ತಾಗಿದ್ದಾರೆ.

ಅದು ಉಪೇಂದ್ರ ಯುಐ..!

ಈಚೆಗೆ ಅಮಿರ್ ಖಾನ್ ಅವರು ಉಪೇಂದ್ರ ಅವರಿಗೆ ಶುಭ ಹಾರೈಸಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

‘ನಾನು ಇಲ್ಲಿ ಒಬ್ಬರ ದೊಡ್ಡ ಅಭಿಮಾನಿ. ಅವರ ಸಿನಿಮಾ ಟ್ರೈಲರ್ ನೋಡಿ ಬೆಚ್ಚಿ ಬಿದ್ದಿರುವೆ. ಅಬ್ಬಾ ಅದೆಂಥಹ ಆಲೋಚನೆ..’ ಎಂದು ಉದ್ಘರಿಸಿರುವ ಭಾರತೀಯ ಚಿತ್ರರಂಗದ ಜನಪ್ರಿಯ ನಟ ಅಮಿರ್ ಖಾನ್ ಇದೇ 20ರಂದು ಬಿಡುಗಡೆ ಕಾಣುತ್ತಿರುವ ‘ಯುಐ’ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ‌.

ಈ ಚಿತ್ರ ಬಾಲಿವುಡ್ ನಲ್ಲಿ ಕೂಡ ಹೆಸರು ಮಾಡಲಿದೆ ಎಂದು ಭವಿಷ್ಯ ನುಡಿದಿರುವ ಅಮಿರ್ ಖಾನ್, ನಿರ್ದೇಶಕ, ನಟ ಉಪೇಂದ್ರ ಅವರ ಭುಜ ತಟ್ಟಿ ಹಾರೈಸಿದ್ದಾರೆ.

ಉಪೇಂದ್ರ ಅವರು ನನ್ನ ಅತ್ಯುತ್ತಮ ‌ಸ್ನೇಹಿತ. ಅವರಿಗೆ ಚಿತ್ರಕ್ಕೆ ಒಳಿತಾಗಲಿ ಎಂದು ಅಮಿರ್ ಖಾನ್ ಹಾರೈಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ‘ಯುಐ’ ಟ್ರೈಲರ್ ಈಗಾಗಲೇ ಅತ್ಯಂತ ಕುತೂಹಲ ಮೂಡಿಸಿದ್ದು, 2040 ರ ಹೊಸ್ತಿಲಲ್ಲಿ ದೇಶದಲ್ಲಿ ಯಾವ ಪರಿಸ್ಥಿತಿ ಇರುತ್ತದೆ ಎಂಬ ಪ್ರಶ್ನಾರ್ಥಕ ಹುಳ ಬಿಟ್ಟಿದ್ದಾರೆ ಉಪೇಂದ್ರ ಎಂಬುದು ಮಾತು.

ಬಹಳ ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದ ಉಪೇಂದ್ರ ಅವರು ಆಧುನಿಕ ಮತ್ತು ಹೊಸತನದ ಎಲ್ಲಾ ತಂತ್ರಜ್ಞಾನ ಸಮರ್ಪಕ ಬಳಕೆ ಮಾಡಿ ಮಾಡಿರುವ ಚಿತ್ರ ದೂರದೃಷ್ಟಿ ಮತ್ತು ಮನರಂಜನಾತ್ಮಕ ಆಶಯಗಳನ್ನು ಹೊಂದಿದೆ ಎಂದು ನಂಬಲಾಗಿದೆ.

ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಮೂಹ ಸಂಸ್ಥೆ ಜಿ.ಮನೋಹರನ್ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಲಹರಿ ವೇಲು ಮತ್ತು ನವೀನ್ ಮನೋಹರನ್ ಚಿತ್ರದ ರೂವಾರಿಗಳಲ್ಲಿ ಪ್ರಮುಖರು.

ಇದೇ ಡಿಸೆಂಬರ್ 20 ರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರದ ‘ವಾರ್ನರ್’ ಬಿಡುಗಡೆ ಕಂಡಾಗಿನಿಂದ ಜನರ ಕುತೂಹಲ ಹೆಚ್ಚಾಗಿದೆ.

Social Share :

ಪ್ಯಾನ್ ಇಂಡಿಯಾ ಆದ ಕೋರ ಸುನಾಮಿ ಕಿಟ್ಟಿಗೆ ಒಲಿದ ಅದೃಷ್ಟ

Social Share :

ಬಹಳ ವರ್ಷಗಳ ಗ್ಯಾಪ್ ನ ಬಳಿಕ ಒರಟ ನಿರ್ದೇಶಕ ಒರಟ ಶ್ರೀ ನಿರ್ದೇಶನ ಮಾಡಿರುವ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಪರಭಾಷೆಯಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿರುವುದು ಹೆಗ್ಗಳಿಕೆ.

ಅದೇ ಕೋರ..!

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ ಈ ಅದ್ದೂರಿ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ರಿಯಾಲಿಟಿ ಶೋ ಹೀರೋ ಸುನಾಮಿ ಕಿಟ್ಟಿ.

ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ ಸಾಹಸ ಮೆರೆದಿರುವ ಈ ಚಿತ್ರದಲ್ಲಿ ವಿಶೇಷತೆಗಳಿಗೆ ಲೆಕ್ಕವೇ ಇಲ್ಲ. ಹಾಗಾಗಿ ಚಿತ್ರತಂಡ ಖುಷಿಯಿಂದ ತೇಲಾಡಿದೆ.

ಈಚೆಗೆ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಮೆರೆದ ಸಾಹಸಗಳನ್ನು ಪ್ರತಿಯೊಬ್ಬರೂ ಮೆಲುಕು ಹಾಕಿದ್ದು ವಿಶೇಷ. ಬಿಡುಗಡೆ ಕಂಡಿರುವ ‘ಒಪ್ಪಿಕೊಂಡವಳು..’ ಮಿಲಿಯನ್ ವೀಕ್ಷಣೆ ಪಡೆದಿದೆ ಎಂದೂ ಸಂಭ್ರಮಿಸಿತು ಚಿತ್ರತಂಡ.

ಸಾಹಿತಿ ರೇವಣ್ಣ ನಾಯಕ್ ಬರೆದಿರುವ ಹಾಗೂ ಹೇಮಂತ್ ಕುಮಾರ್ ಸಂಗೀತ ನೀಡಿರುವ ‘ಒಪ್ಪಿಕೊಂಡಳು’ ಹಾಡು ಇತ್ತೀಚಿಗೆ ರಬಕವಿಯಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಬಿಡುಗಡೆ ಕಂಡಿದ್ದು ವಿಶೇಷ.

ಕೋರ ಎಂಬುದು ಬುಡಕಟ್ಟು ಸಮುದಾಯದ ಹೆಸರು. ಕಥೆ ದಟ್ಟ ಅರಣ್ಯದಲ್ಲಿ ನಡೆಯುತ್ತದೆ. ಹಾಗಾಗಿ ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶಗಳಲ್ಲಿ ಅನುಕೂಲತೆ ಕಡಿಮೆ ಇದ್ದರೂ ಕಷ್ಟಪಟ್ಟು ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರ ನೀಡಿದರು ನಿರ್ಮಾಪಕ ಪಿ.ಮೂರ್ತಿ.

ಜನವರಿ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ಈಗಾಗಾಲೇ ಚಿತ್ರದ ತೆಲುಗು, ತಮಿಳು ರಿಮೇಕ್ ಹಕ್ಕುಗಳು ಮಾರಾಟವಾಗಿವೆ. ಆಂಧ್ರದಲ್ಲಿ ಬಾಲಾಜಿ ಅವರು ವಿತರಣೆ ಮಾಡುತ್ತಿದ್ದು, ತಮಿಳುನಲ್ಲಿಯೂ ಚಿತ್ರವನ್ನು ಹೆಸರಾಂತ ವಿತರಕರೇ ಮಾಡುತ್ತಿದ್ದಾರೆ ಎಂಬ ವಿವರ ಕೊಟ್ಟರು.

ಒಂದು ದೊಡ್ಡ ಗ್ಯಾಪ್ ನ ಬಳಿಕ ಈ ಚಿತ್ರ ನಿರ್ದೇಶನ ಮಾಡಿರುವೆ. ಇಲ್ಲಿ ಸುನಾಮಿ ಕಿಟ್ಟಿ ಧೈರ್ಯವಂತಿಕೆ ಬಹಳ ದೊಡ್ಡದು. ಅದೇ ರೀತಿ ಹಣ ಹೂಡಿಕೆ ಮಾಡಿರುವ ಪಿ.ಮೂರ್ತಿ ಅವರ ಧೈರ್ಯ ಕೂಡ ದೊಡ್ಡದು ಎಂದರು ನಿರ್ದೇಶಕ ಒರಟ ಶ್ರೀ.

ಪತ್ರಕರ್ತರೂ ಆಗಿರುವ ಯತಿರಾಜ್ ಚಿತ್ರತಂಡದ ಸಾಹಸಗಳನ್ನು ವರ್ಣಿಸಿದರು. ಅದರಲ್ಲಿಯೂ ನಟಿ ಸೌಜನ್ಯ ಗರ್ಭಿಣಿಯಾಗಿ ಮತ್ತು ಮಗುವಿನ ತಾಯಿಯಾಗಿ ಅನುಭವಿಸಿದ ಕಷ್ಟದ ಸಂದರ್ಭಗಳನ್ನು ನೆನೆದರು.

ನಿರ್ಮಾಪಕ ಪಿ.ಮೂರ್ತಿ ಖಳನ ಪಾತ್ರವನ್ನು ನಿರ್ವಹಿಸಿದ್ದು, ಇತರ ಪಾತ್ರಗಳಲ್ಲಿ ಗಣೇಶ್ ರಾವ್, ಎಂ.ಕೆ.ಮಠ ಮೊದಲಾದವರು ಅಭಿನಯಿಸಿದ್ದು, ಅವರು ತಮ್ಮ ಅನುಭವಗಳನ್ನು ಹೇಳಿಕೊಂಡರು.

ಸುನಾಮಿ ಕಿಟ್ಟಿ ಜೋಡಿಯಾಗಿ ಚರಿಷ್ಮಾ ಕಾಣಿಸಿಕೊಂಡಿದ್ದು, ಸೌಜನ್ಯ ಅವರ ಪಾತ್ರಕ್ಕೆ ಎರಡು ಶೆಡ್ ಇದೆ ಎಂಬ ವಿವರಗಳು ಬಂದವು.

ಸಹ ನಿರ್ಮಾಪಕ ಚೆಲುವರಾಜು, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ರೇವಣ್ಣ ನಾಯಕ್, ಸಂಕಲನಕಾರ ಕೆ.ಗಿರೀಶ್ ಕುಮಾರ್ ಹಾಗೂ ತೆಲುಗು ವಿತರಕ ಬಾಲಾಜಿ ಚಿತ್ರದ ಕುರಿತು ಮಾತನಾಡಿದರು.

ನಟ ಒರಟ ಪ್ರಶಾಂತ್ ಚಿತ್ರತಂಡಕ್ಕೆ ಶುಭ ಕೋರಿದರು.

Social Share :

ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕನ್ನಡಿಗ ರಿಷಬ್ ಶೆಟ್ಟಿ..

Social Share :


ರಾಷ್ಟ್ರ ಪ್ರಶಸ್ತಿ ವಿಜೇತ ಸ್ಯಾಂಡಲ್ ವುಡ್ ನಟ, ನಿರ್ದೇಶಕ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಈಗ ಬಾಲಿವುಡ್ ನ ಮತ್ತೊಂದು ದೊಡ್ಡ ಸಿನಿಮಾದ ಭಾಗವಾಗಿದ್ದಾರೆ.

ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಹೆಸರು ‘ದಿ ಪ್ತೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’. ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರವನ್ನು ಬಾಲಿವುಡ್ ನ ಸಂದೀಪ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಜೊತೆಗೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಬ್ ಎದ್ದು ಕಾಣುತ್ತಿದ್ದಾರೆ.

ಸದ್ಯ ಈ ಐತಿಹಾಸಿಕ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಹಾಗೆಯೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಿದ್ದು, 2027ರ ಜನವರಿ 21 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ ಎಂದು ಚಿತ್ರತಂಡ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

Social Share :

ಸಿಲ್ಕ್‌ ಸ್ಮಿತಾ ಬಯೋಪಿಕ್‌ ಕ್ವೀನ್ ಆಫ್ ದಿ ಸೌತ್..

Social Share :

ಮಾದಕ ಮೈ ಮಾಟದಿಂದ ಹುಚ್ಚು ಹಿಡಿಸಿದ್ದ 90ರ ದಶಕದ ನಟಿ ಸಿಲ್ಕ್ ಸ್ಮಿತಾ ಅವರ ಹುಟ್ಟುಹಬ್ಬದ ದಿನ ಕಲಾ ರಸಿಕರು ಖುಷಿ ಪಡುವ ವಿಷಯವೊಂದು ಹೊರಬಿದ್ದಿದೆ.

ಅದೇನೆಂದರೆ ಆ ಮಹಾ ನಟಿಯ ಬಯೋಪಿಕ್ ನಿರ್ಮಾಣ ಮಾಡುವ ಆಶಯವನ್ನು ಸಂಸ್ಥೆಯೊಂದು ಪ್ರಕಟಿಸಿದ್ದು, ‘ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌’ ಎಂಬ ಹೆಸರಿನ ಚಿತ್ರವೀಗ ನಿರ್ಮಾಣವಾಗಲಿದೆ.

ಸ್ರ್ಟೀ ಸಿನಿಮಾಸ್ ಸಂಸ್ಥೆಯ ಹೆಸರಿನಲ್ಲಿ ಎಸ್‌.ಬಿ ವಿಜಯ್‌ ಅಮೃತ್‌ರಾಜ್‌ ಈ ಬಯೋಪಿಕ್ ನಿರ್ಮಾಣ ಮಾಡಲಿದ್ದು, ಜಯರಾಮ್ ಸಂಕರನ್ ಇದರ ನಿರ್ದೇಶಕ.

ದಕ್ಷಿಣ ಭಾರತದ ಹೆಸರಾಂತ ನಟಿ ಮತ್ತು ಡ್ಯಾನ್ಸರ್ ಸಿಲ್ಕ್ ಸ್ಮಿತಾ ಬದುಕಿನ ಹಾದಿಯನ್ನು ಪರಿಚಯಿಸುವ ಹಾಗೂ ಆಕೆ ಎದುರಿಸಿದ್ದ ಸವಾಲುಗಳನ್ನು ಚಿತ್ರರಸಿಕರ ಮುಂದಿಡುವ ಆಶಯ ನಿರ್ಮಾಣ ಸಂಸ್ಥೆಯದ್ದು.

ಸಿಲ್ಕ್ ಸ್ಮಿತಾ ಅವರ ಪಾತ್ರಕ್ಕೆ ನಟಿಯ ಆಯ್ಕೆಯೂ ನಡೆದಿದ್ದು, ಚಂದ್ರಿಕಾ ರವಿ ಈ ಪಾತ್ರವನ್ನು ನಿರ್ವಹಿಸುವ ಮಾಹಿತಿ ಹೊರ ಬಿದ್ದಿದೆ.

ಸಿಲ್ಕ್ ಸ್ಮಿತಾ ಅವರ ಜೀವನಗಾಥೆ ಆಧರಿಸಿ ಈಗಾಗಲೇ ‘ದರ್ಟಿ ಪಿಕ್ಚರ್’ ಹಾಗೂ ಇತರ ಚಿತ್ರಗಳು ನಿರ್ಮಾಣವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Social Share :

ಹೊಸಬರ ಬರ್ಗೆಟ್ ಬಸ್ಯಾ ಚಿತ್ರಕ್ಕೆ ಸೆನ್ಸಾರ್ ಪ್ರಶಂಸೆ..

Social Share :

ಹೊಸಬರು ನಿರ್ಮಾಣ ಮಾಡಿರುವ ‘ಬರ್ಗೆಟ್ ಬಸ್ಯಾ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆ.

ಯರ್ರಂರೆಡ್ಡಿ ಪಿಕ್ಚರ‍್ಸ್ ಸಂಸ್ಥೆ ಅಡಿಯಲ್ಲಿ ಬಳ್ಳಾರಿಯ ವೈ.ನಾಗಾರ್ಜುನರೆಡ್ಡಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ರಿಶ್‌ ಹಿರೇಮಠ್ ನಿರ್ದೇಶನ ಮಾಡಿದ್ದಾರೆ ಜೊತೆಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ರಿಶ್ ಹಿರೇಮಠ್ ನಿರ್ದೇಶನದ ಕಲಿಕೆಯ ನಂತರ ಮಾಡುತ್ತಿರುವ ಮೊದಲ ಚಿತ್ರ ಇದಾಗಿದ್ದು, ಅನೇಕ ಕಿರು ಚಿತ್ರಗನ್ನು ನಿರ್ದೇಶನ ಮಾಡಿದ ಅನುಭವ ಕೂಡ ಇದೆ.

ಸಿಕ್ಕ ಸಿಕ್ಕ ಹುಡುಗಿಯರನ್ನೆಲ್ಲಾ ಪ್ರೀತಿ ಮಾಡುತ್ತಾ ಅನುಭವಿಸುವ ಖುಷಿ ತಲ್ಲಣ ಹಾಗೂ ಯಾತನಾಮಯ ಸಂದರ್ಭಗಳನ್ನು ಹಾಸ್ಯದ ಮೂಲಕವೇ ಹೇಳಲಾಗಿದೆ.

ಸಂಗೀತ.ಎನ್.ಸ್ವಾಮಿ ಪ್ರಮುಖ ಪಾತ್ರದಲ್ಲಿದ್ದು, ಬಸ್ಯನ ಜೀವನದಲ್ಲಿ ನಲವತ್ತು ಹುಡುಗಿಯರು ಬಂದು ಹೋಗುವ ಹಾಸ್ಯ ಸನ್ನಿವೇಶಗಳಿವೆ.

ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ ಹಾಗೂ ಬೆನಗನಹಳ್ಳಿಯ ಸುಂದರ ತಾಣಗಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ.

ಶಾಮ್‌ಸಾಲ್ವಿನ್ ಛಾಯಾಗ್ರಹಣ, ಸಿದ್ದು ದಳವಾಯಿ, ಸಂಕಲನವಿದೆ ಎಂಬ ಮಾಹಿತಿಗಳನ್ನು ಚಿತ್ರತಂಡ ನೀಡಿದೆ.

Social Share :

ರಾಜ್ ಮೊಮ್ಮಗ ಷಣ್ಮಖ ಚಿತ್ರ ನಿಂಬಿಯಾ ಬನಾದ ಮ್ಯಾಗ..

Social Share :

* ಭಾಗ-1 ತೆರೆಗೆ ಸಿದ್ಧ *

* ಅಶೋಕ್ ಕಡಬ ನಿರ್ದೇಶನ *

* ಮೇಘಮಾಲೆ ಸುನಾದ್ ರಾಜ್ *

ವರನಟ ಡಾ.ರಾಜ್ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಕನ್ನಡದ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.

ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಅವರ ಮಗ ಷಣ್ಮುಖ ಗೋವಿಂದ್ ರಾಜ್ ಈಗ ತೆರೆಯ ಮೇಲೆ ರಾರಾಜಿಸಲು ಸಂಪೂರ್ಣ ಸಜ್ಜುಗೊಂಡಿದ್ದಾರೆ.

ಏಕೆಂದರೆ ಷಣ್ಮುಖ ಅಭಿನಯದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಶೀರ್ಷಿಕೆ ಇರುವ ಚಿತ್ರದ ಮೊದಲ ಭಾಗ ಈಗ ಬಿಡುಗಡೆಗೆ ಸಜ್ಜಾಗಿದೆ.

ಅಶೋಕ್ ಕಡಬ ಈ ಚಿತ್ರದ ನಿರ್ದೇಶಕರು ಮತ್ತು ವಿ.ಮಾದೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ವಿಶೇಷ ಕಥಾವಸ್ತು ಹೊಂದಿರುವ ‘ಸತ್ಯಂ’ ಹಾಗೂ ಇತರ ಚಿತ್ರಗಳನ್ನು ನಿರ್ದೇಶನ ಮಾಡಿರುವ ಅಶೋಕ್ ಕಡಬ ನಿರ್ದೇಶನದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಫ್ಯಾಮಿಲಿ ಡ್ರಾಮ ಎರಡು ಭಾಗಗಳಾಗಿ ಸಿನಿ ರಸಿಕರನ್ನು ರಂಜಸಲಿದ್ದು, ಮೊದಲ ಭಾಗ ಈಗ ಬಿಡುಗಡೆಯ ಹಾದಿಯಲ್ಲಿದೆ.

ಎಂಜೀಪಿ ಎಕ್ಸ್. ಎಂಟರ್ ಪ್ರೈಸೆಸ್ ನ ಬ್ಯಾನರ್ ನಡಿ ವಿ ಮಾದೇಶ್ ಈ ಚಿತ್ರವನ್ನು ನಿರ್ಮಿಸಿದ್ದು, ಬಿಡುಗಡೆಗೆ ಮುನ್ನವೇ ಚಿತ್ರವು ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ.

ರಾಜ್ ಸುಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ‘ನಂಜುಂಡಿ ಕಲ್ಯಾಣ’ ಚಿತ್ರವು ಫ್ಯಾಮಿಲಿ ಡ್ರಾಮ ಕಥಾವಸ್ತು ಹೊಂದಿತ್ತು ಮಾತ್ರವಲ್ಲ ಹಲವು ದಾಖಲೆಗಳನ್ನು ನಿರ್ಮಿಸಿತ್ತು.

ಈಗ ಪ್ರೇಕ್ಷಕರನ್ನು ನಕ್ಕು ನಗಿಸಲು ಬರುತ್ತಿರುವ ಈ ಚಿತ್ರದ ಬಗ್ಗೆ ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಹಾಗೂ ಕುಟುಂಬ ಅಪಾರ ಭರವಸೆಗಳನ್ನು ಹೊಂದಿದೆ.

ನಿಂಬಿಯಾ ಬನಾದ ಮ್ಯಾಗ.. ಎಂಬ ಶೀರ್ಷಿಕೆಗೆ ಜಾನಪದ ಗೀತೆಯ ಸೊಗಡಿದೆ. ಅದೇ ರೀತಿ ಈ ಚಿತ್ರದ ಕಥೆಯೂ ಮನುಷ್ಯ ಸಂಬಂಧಗಳ ನೆಲೆ ಬೆಲೆಯನ್ನು ಅಭಿವ್ಯಕ್ತಗೊಳಿಸುತ್ತದೆ.

ಹಾಗಾಗಿ ಕನ್ನಡದ ಪ್ರೇಕ್ಷಕರಿಗೆ ಮನರಂಜನಾತ್ಮಕ ಕೌಟುಂಬಿಕ ಚಿತ್ರವೊಂದು ಎರಡು ಭಾಗಗಳ ರೂಪದಲ್ಲಿ ಮೇಲಿಂದ ಮೇಲೆ ಸಿಗಲಿದೆ.

ಈ ಹಿನ್ನೆಲೆಯಲ್ಲಿ ಈಗ ತಾನೆ ಬೆಳ್ಳಿ ತೆರೆಯ ಮೇಲೆ ಅದೃಷ್ಟ ಪರೀಕ್ಷೆಗೆ ನಿಂತಿರುವ ಷಣ್ಮುಖ ಗೋವಿಂದ ರಾಜು ತಮ್ಮ ಪಾತ್ರದ ಬಗ್ಗೆ ಖುಷಿಯ ಭಾವಗಳನ್ನು ಹೊಂದಿದ್ದಾರೆ ಹಾಗೂ ಮೊದಲ ಭಾಗವೇ ತಮಗೆ ಅಪಾರ ಯಶಸ್ಸು ತಂದು ಕೊಡುತ್ತದೆ ಎಂದು ನಂಬಿದ್ದಾರೆ.

ಮುಖ್ಯವಾಗಿ ಈ ಚಿತ್ರದಲ್ಲಿ ರಾಜ್ ಸಂಬಂಧಿ ‘ಮೇಘಮಾಲೆ’ ಖ್ಯಾತಿಯ ಸುನಾದ್ ರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಮಾರ್ 25 ವರ್ಷಗಳ ಬಳಿಕ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ.

ನಿರ್ಮಾಪಕ ವಿ.ಮಾದೇಶ್ ಅವರಿಗೂ ಈ ಚಿತ್ರ ಹೆಮ್ಮೆಯ ಭಾವಗಳನ್ನು ಮೂಡಿಸಿದ್ದು, ರಾಜ್ ವಂಶದ ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Social Share :

ಮದನ್ ಪಟೇಲ್ ತಮಟೆ ಈ ವಾರ ಚಿತ್ರ ಬಿಡುಗಡೆ..

Social Share :


* ನವೆಂಬರ್ 29 ರಂದು ಬಿಡುಗಡೆ *

* ಜಾನಪದ ಸಂವೇದನೆಯ ಚಿತ್ರ *

ಹಿರಿಯ ನಿರ್ಮಾಪಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಮದನ್ ಪಟೇಲ್ ಈಗ ಮಣ್ಣಿನ ಗುಣದ ಚಿತ್ರಗಳನ್ನು ಮೆರೆಸುವ ಚಿತ್ರಗಳತ್ತ ಗಮನ ಹರಿಸಿದ್ದು, ಜಾನಪದ ಸಂವೇದನೆಯ ಚಿತ್ರ ‘ತಮಟೆ’ ಬಿಡುಗಡೆಗೆ ಸಜ್ಜುಗೊಂಡಿದೆ.

ವಂದನ್ ಎಂ ನಿರ್ಮಾಣದ ಹಾಗೂ ಮಯೂರ್ ಪಟೇಲ್ ಚೊಚ್ಚಲ ನಿರ್ದೇಶನದ ಹಾಗೂ ಮದನ್ ಪಟೇಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ತಮಟೆ’ ಚಿತ್ರದ ಟೀಸರ್ ಹಾಗೂ ಹಾಡುಗಳು ಈಚೆಗೆ ಬಿಡುಗಡೆ ಕಂಡಿತು.

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಮೊದಲ ಕುಲಪತಿಗಳಾದ ಮಲ್ಲೇಪುರಂ ಜಿ ವೆಂಕಟೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ತಮಟೆ ನಮ್ಮ ಜಾನಪದ ವಾದ್ಯ. ಅದರ ಸುತ್ತಲೂ ಹೆಣೆಯಲಾಗಿರುವ ಕಥೆಯಲ್ಲಿ ಮಣ್ಣಿನ ಸೊಗಡಿನ ನಂಟಿದೆ ಹಾಗೂ ಉತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರವು ಇದಾಗಿದೆ ಎಂದರು ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ್.

ಇದೊಂದು ಗ್ರಾಮೀಣ ಭಾಗದ ಸೂಕ್ಷ್ಮ ಸಂವೇದನೆ ಇರುವ ಚಿತ್ರ. ತಮಟೆ ವಾದ್ಯಗಾರನೊಬ್ಬನ ಜೀವನಾಧಾರಿತ ಈ ಸಿನಿಮಾದಲ್ಲಿ ನಾನೇ ಮುಖ್ಯ ಪಾತ್ರದಲ್ಲಿ ನಟಿಸಿರುವೆ ಹಾಗೂ ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ ಎಂಬ ವಿವರ ನೀಡಿದರು ಮದನ್ ಪಟೇಲ್.

ಬಹಳ ಸಮಯದ ಬಳಿಕ ಸಂಗೀತದ ನಿರ್ದೇಶನ ಮಾಡಿರುವೆ ಮತ್ತು ಚಿತ್ರಕಥೆಯನ್ನು ನಾನೇ ಬರೆದಿರುವೆ ಎಂದರು ಮದನ್ ಪಟೇಲ್.

ತಮಟೆ ಹಲವು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಂಸೆ ಪಡೆದಿದೆ. ಈ ವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಪಡೆಯುವ ಹಂಬಲವೂ ಇದೆ ಎಂದರು.

ನಿರ್ದೇಶಕ ಹಾಗೂ ನಟ ಮಯೂರ್ ಪಟೇಲ್ ದುಬೈ ರಾಜ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳಿರುವ ಮಾಹಿತಿಗಳು ಬಂದವು.

ಕೆಲ ದಿನಗಳ ಹಿಂದೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಟೆ ಚಿತ್ರದ ಪ್ರಚಾರ ಸಭೆಗೆ ಆಗಮಿಸಿ ಶುಭ ಕೋರಿದ್ದರು.

ಟೀಸರ್ ಬಿಡುಗಡೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಡುವುದಿತ್ತು. ಅನಿವಾರ್ಯ ಕಾರಣಗಳಿಂದ ಅವರು ಆಗಮಿಸಿರಲಿಲ್ಲ.

ನಟಿ ತೇಜಸ್ವಿನಿ, ನಟ ಕಾವೇರಿ ಶ್ರೀಧರ್ , ಮುತ್ತುರಾಜ್ ಹಾಗೂ ದಿನಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

Social Share :

ಪ್ರಭುತ್ವ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ರವಿರಾಜ್ ಎಸ್.ಕುಮಾರ್

ಪ್ರಜೆಗಳು ಭ್ರಷ್ಟರಾದರೆ ಎಂತಹ ಪ್ರಭುತ್ವ..!?

ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಇರುವ ಪ್ರಜಾ ಪ್ರಭುತ್ವದ ಸ್ವರೂಪದಲ್ಲಿ ಅಡಗಿರುವ ನ್ಯೂನತೆಗಳನ್ನು ವಿಶ್ಲೇಷಿಸುವ ಪ್ರಯತ್ನದಲ್ಲಿ ಮನರಂಜನೆಗಿಂತ ಬೋಧನೆಯ ಪಾಲು ಹೆಚ್ಚಿನದು..

ಒಂದು ಮನರಂಜನಾತ್ಮಕ ಸಿನಿಮಾಗೆ ಬೇಕಾಗಿರುವ ಅಪ್ರತಿಮ ಹೋರಾಟ; ಹೊಡೆದಾಟ ವಿಧ್ವಂಸಕ ರೂಪಕ ಎಲ್ಲವೂ ಇದ್ದರೂ ಏನಾಗುತ್ತಿದೆ ಎಂಬ ಪ್ರಶ್ನಾರ್ಥಕ ಚಿಹ್ನೆಗಳು ಗಾಢ ಚಿಂತನೆಗೂ ಹಚ್ಚಿ ಬಿಡುತ್ತವೆ.

ಮೆಕಾನಿಕ್ ವೃತ್ತಿ ಮಾಡುವ ಮನೋಹರ ಅಲಿಯಾಸ್ ಮನು ಆದರ್ಶದಿಂದ ರೂಪುಗೊಂಡಿರುವ ಯುವಕ. ಅದಕ್ಕೆ ಕಾರಣ ಆತನ ತಂದೆ ಆದರ್ಶ ಶಿಕ್ಷಕ ಕೃಷ್ಣಮೂರ್ತಿ ಕಾರಣ.

ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ಮಡಿಯುವ ಕೃಷ್ಣಮೂರ್ತಿ ವ್ಯವಸ್ಥೆಯ ಬಲಿಪಶು. ಆತನ ಮಗ ಮುಂದೆ ತುಳಿಯುವ ಹಾದಿಯಲ್ಲಿ ಆತ ಕೂಡ ಸಾಂದರ್ಭಿಕ ಶಿಶು.

ಪ್ರಜಾ ಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಹಿಡಿದು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ , ಭಗತ್ ಸಿಂಗ್ ಹೀಗೆ ಆದರ್ಶಗಳನ್ನು ಸಾರುವ ಮಹಾತ್ಮರ ಸಂದೇಶದ ಝಲಕ್ ಗಳು ಸಂಭಾಷಣೆಯ ರೂಪದಲ್ಲಿ ಉದ್ದಕ್ಕೂ ಹೊರಬೀಳುತ್ತವೆ.

ಅದು ಗ್ರಾಮದ ಯಜಮಾನ ಅಯ್ನೋರ ವ್ಯಕ್ತಿತ್ವದ ಪ್ರತಿಫಲ. ಒಂದು ಅತ್ಯಾಚಾರ ವಿರೋಧಿಸಿ ಎಸಿಪಿ ಸಾವಿಗೆ ಕಾರಣನಾಗುವ ಮನು, ಮಧ್ಯಾಂತರದ ಹೊತ್ತಿಗೆ ಪುಂಡರ ಸದೆ ಬಡಿದು ಎದುರಿಸುವ ಸಾಹಸದಲ್ಲಿ ಅಮ್ಮನನ್ನೂ ಕಳೆದುಕೊಳ್ಳುತ್ತಾನೆ.

ಮುಂದೆ ಆತ ಹುಟ್ಟೂರಿಗೆ ಬಂದು ನೆಲೆಸುವುದೂ ಅಲ್ಲಿ ಅಯ್ನೋರ ಬೆಂಬಲ ಚುನಾವಣೆ ಜೊತೆಗೆ ದುಷ್ಟರ ವಿಜೃಂಭಣೆಯ ಜೊತೆಗೆ ಅನೇಕ ಕೊಲೆಗಳ ಆರೋಪ ಹೊತ್ತು ನಿಲ್ಲುತ್ತಾನೆ.

ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳಿಗೆ ಮತ್ತು ಅವರ ಜೀವಗಳಿಗೆ ಬೆಲೆ ಇಲ್ಲ ಮತ್ತು ಹಣ ಪಡೆದು ಮತ ಚಲಾಯಿಸುವ ಪ್ರಜೆಗಳಿಗೆ ನೈತಿಕತೆಯೇ ಇಲ್ಲ ಎಂದು ಸಾರುವುದು ಮತ್ತು ಆ ಮೂಲಕ ಸಂದೇಶ ನೀಡುವುದು ಚಿತ್ರದ ತಿರುಳು.

ಇಡೀ ಚಿತ್ರವನ್ನು ಬೆನ್ನ ಮೇಲೆ ಹೊತ್ತಿರುವ ಚೇತನ್ ಚಂದ್ರ ನಟನೆ ಮತ್ತು ಹೊಡೆದಾಟದಲ್ಲಿ ಸೂಪರ್. ಅವಕಾಶಗಳು ಬಂದರೆ ಕನ್ನಡದ ಮುಂಚೂಣಿಯ ನಟರ ಸಾಲಿಗೆ ನಿಲ್ಲುವ ಸಾಮರ್ಥ್ಯವೂ ಅವರಿಗಿದೆ.

ಜೋಡಿಯಾಗಿರುವ ಪಾವನಾ, ತಂದೆಯಾಗಿರುವ ರಾಜೇಶ್ ನಟರಂಗ, ಅಯ್ನೋರ ಪಾತ್ರಧಾರಿ ನಾಜರ್, ತಿಮ್ಮಕ್ಕ ರೂಪಾದೇವಿ, ತಾಯಿ ಪಾತ್ರಧಾರಿ ವೀಣಾ ಸುಂದರ್, ಇನ್ಸ್ ಪೆಕ್ಟರ್ ಶಶಿಕುಮಾರ್, ಎಸಿಪಿ ಧರ್ಮ, ಸಬ್ ಇನ್ಸ್ ಪೆಕ್ಟರ್ ಯತಿರಾಜ್, ಎಸಿಪಿ ಮುನಿಯಾ, ಸಿಬಿಐ ಅಧಿಕಾರಿ ಪೂಜಾ ಲೋಕೇಶ್ ಪಾತ್ರವಲ್ಲದೆ ನ್ಯಾಯಾಧೀಶೆ ಪಾತ್ರದಲ್ಲಿ ಅಂಬಿಕಾ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಕೆಟ್ಟ ರಾಜಕಾರಣಿಗಳ ಪಾತ್ರದಲ್ಲಿರುವ ಶರತ್ ಲೋಹಿತಾಶ್ವ, ಖಳನ ಪಾತ್ರದಲ್ಲಿನ ಆದಿ ಲೋಕೇಶ್, ಮನು ಸ್ನೇಹಿತರಾಗಿರುವ ಗಿರೀಶ್ ಶಿವಣ್ಣ, ಡ್ಯಾನಿ, ವಿಜಯ್ ಚೆಂಡೂರ್, ಸಂದೀಪ್ ಹೀಗೆ ಅಸಂಖ್ಯಾ ತಾರಾಗಣ ನೋಡಲು ಹಬ್ಬ.

ಮೇಘಡಹಳ್ಳಿ ಡಾ.ಶಿವಕುಮಾರ್ ಕಥೆ ಬರೆದಿದ್ದಾರೆ. ವಿನಯ್ ಮೂರ್ತಿ ಛಾಯಾಗ್ರಹಣ ಹಾಗೂ ಎಮಿಲ್ ಸಂಗೀತ ಚಿತ್ರಕ್ಕೆ ಪೂರಕ.

ಮತದಾರ ಭ್ರಷ್ಟಾಚಾರಿಯಾದರೆ ‘ಪ್ರಭುತ್ವ’ ಹೇಗೆ ದಾರಿ ತಪ್ಪುತ್ತದೆ ಎಂಬ ವಾಸ್ತವ ನೆಲೆಯಲ್ಲಿ ಹೆಣೆಯಲಾಗಿರುವ ಚಿತ್ರಕಥೆ ಇಂದಿನ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಂತೆ ಕಾಣುತ್ತದೆ.

ಸಾಮಾಜಿಕ ನೆಲೆಯಲ್ಲಿ ಪರಿಣಾಮ ಬೀರುವ ಚಿತ್ರದಲ್ಲಿ ನ್ಯೂನತೆಗಳು ಇಲ್ಲವೆಂದಿಲ್ಲ; ಹಳೆಯ ದೃಶ್ಯಗಳ ಸವಕಲು ಮೆರವಣಿಗೆಯೂ ಇದೆ.
ಹಾಗೆಯೇ ವ್ಯವಸ್ಥೆಯ ಲೋಪಗಳನ್ನು ಅತಿಯಾಗಿ ವಿಜೃಂಭಿಸುವ ದೃಶ್ಯಗಳೂ ಮಾನ್ಯತೆ ಪಡೆಯುತ್ತವೆ. ಹಾಗಾಗಿ ಮನು ಹೋರಾಟ ನಿರರ್ಥಕ ಎನಿಸುತ್ತದೆ.

ನೋಟಿಗಾಗಿ ಓಟನ್ನು ಮಾರಿಕೊಳ್ಳುವ ಪ್ರಜೆಗಳು ನೋಡಲೇ ಬೇಕಾದ ಅಪರೂಪದ ಚಿತ್ರವಿದು.

Social Share :