Cinema-Gossips

  • ಶೇರ್ ಚಿತ್ರವಿಮರ್ಶೆ

    ಶೇರ್ ಚಿತ್ರವಿಮರ್ಶೆ

    ರೇಟಿಂಗ್ : 3/5 ನಿರ್ಮಾಣ : ಸುದರ್ಶನ್ ಸುಂದರ್ ರಾಜ್ ನಿರ್ದೇಶನ : ಪ್ರಸಿದ್ದ್ ಅನಾಥ ಹೆಣಗಳ ಲೆಕ್ಕ ದುರ್ಬಲ ಪೊಲೀಸ್ ಪಕ್ಕ ಅಲ್ಲಿ ಅನಾಥ ಹೆಣಗಳು ಬೀಳುತ್ತಲೇ ಇರುತ್ತವೆ.. ಆದರೆ ಅವುಗಳ ಲೆಕ್ಕ ಕೇಳುವಲ್ಲಿ ಪೊಲೀಸ್ ವ್ಯವಸ್ಥೆಯೂ ಪಕ್ಕಾ ಇರುವುದಿಲ್ಲ.. ಇಂತಹ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ಅನಾಥ ಹುಡುಗ ಶಿವು. ಆತನೇ ಈ ಕಥೆಯ ಶೇರ್.. ಹೊಡೆದಾಟ ಬಡಿದಾಟದಲ್ಲಿ ಶಿವುನನ್ನು ಮೀರಿಸುವವರೇ ಇಲ್ಲ. ತರಲೇ ರೌಡಿಗಳನ್ನು ಕುಟ್ಟಿ ಪುಡಿ ಮಾಡುವ ಶಿವುಗೆ ಇದ್ದಕ್ಕಿದಂತೆ ದೊರೆಯುವ ಹುಡುಗಿಯ ಸ್ನೇಹ…

    Continue Reading

  • ಶಿಖಂಡಿ ಚಿತ್ರವಿಮರ್ಶೆ

    ಶಿಖಂಡಿ ಚಿತ್ರವಿಮರ್ಶೆ

    ರೇಟಿಂಗ್ : 3/5 ನಿರ್ಮಾಣ : ಪೋಲಾ ಪ್ರವೀಣ್ ನಿರ್ದೇಶನ : ಗುರುಮೂರ್ತಿ ವಿ ದೇವರಿಗೇ ವಂಚಿಸುವ ದುಷ್ಟ ಕೂಟ ಸಂಹಾರ.. ರಿಯಲ್ ಎಸ್ಟೇಟ್ ಮಾಫಿಯಾ ಅತ್ಯುತ್ತಮ ಕೆಲಸಗಳಿಗೆ ಅಡ್ಡಗಾಲು ಹಾಕುತ್ತದೆ. ಇಲ್ಲಿ ದುಷ್ಟಕೂಟವೊಂದು ದೇವರ ಶಕ್ತಿಯನ್ನೇ ದುರ್ಬಳಕೆ ಮಾಡುತ್ತದೆ.. ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಬೇಕೆಂಬ ಯುವ ಶಕ್ತಿಯ ಗುಂಪಿಗೆ ಸದಾ ಕಾಲವೂ ಅಡೆ ತಡೆ ಎದುರಾಗುತ್ತದೆ. ಅದೂ ಕ್ರೌರ್ಯದ ಒಡೆಯನಂತ್ತಿರುವ ವ್ಯಕ್ತಿಯೊಬ್ಬನಿಂದ.. ಆತ ಅಮರನಾಥ ರಾಜೇಶ. ಆತನಿಗೆ ಒಂದು ಹಿನ್ನೆಲೆಯೂ ಇರುತ್ತದೆ. ಅದು ಅತ್ಯಂತ ಕ್ರೌರ್ಯ…

    Continue Reading

  • ಲೋ ನವೀನ.. ಚಿತ್ರವಿಮರ್ಶೆ

    ಲೋ ನವೀನ.. ಚಿತ್ರವಿಮರ್ಶೆ

    ರೇಟಿಂಗ್ : 3.5/5 ನಿರ್ಮಾಣ : ಕೀರ್ತಿಸ್ವಾಮಿ ನಿರ್ದೇಶನ : ಧನುರ್ಧಾರಿ ಪವನ್ ಮದುವೆಯ ಕನಸು ಮಧು ಮಗನ ಸೆಣಸು ಗ್ರಾಮೀಣ ಭಾಗಗಳಲ್ಲಿ ಮದುವೆ ಆಗುವ ಪ್ರಹಸನಗಳೇ ವೈವಿಧ್ಯಮಯ ಮತ್ತು ಯುವ ಜನರ ವಿಚಿತ್ರ ‌ವರ್ತನೆಗಳ ಸೊಬಗಿನ ತಾಣ.. ಇಲ್ಲೊಬ್ಬ ಮುಗ್ಧ ಹುಡುಗನಿಗೆ ಮದುವೆಯಾಗುವ ಆತುರ.. ಮಾವನ ಮಗಳು ಹೆಚ್ಚಿಸುವಳು ಅವನ ಕಾತುರ.. ಏನು ನಡೆಯುತ್ತಿದೆ ‌ಎಂದು ಅರ್ಥೈಸಿಕೊಳ್ಳದೇ ಸ್ನೇಹ ಬಳಗ ಹೂಡುವ ಆಟಗಳೇ ನಗುವಿನ ರಸದೌತಣ.. ಮನೆಯಿಂದ ಓಡಿಸಿಕೊಂಡು ಹೋಗು ಎಂಬ ಮಾವನ ಮಗಳ ಆಫರ್…

    Continue Reading

  • ಎಐ ಗೆ ಸಿಕ್ಕಿದ ಗರುಡ ಹೊಸಬರ ನವ ಕಲ್ಪನೆ

    ಎಐ ಗೆ ಸಿಕ್ಕಿದ ಗರುಡ ಹೊಸಬರ ನವ ಕಲ್ಪನೆ

    ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಹೇಗೆಲ್ಲಾ ಕೆಲಸ‌ಮಾಡಬಹುದು; ಅದು ಅಗತ್ಯವೇ ಅಥವಾ ಮಾರಕವೇ ಎಂಬುದರ ಸುತ್ತ ಕಥೆ ಹೆಣೆಯಲಾಗಿರುವ ಚಿತ್ರವೇ ‘ಗರುಡ’.. ಕಿರಣ್ ಎಸ್ ನಿರ್ದೇಶನದ ಈ ಚಿತ್ರವು ಸಂಪೂರ್ಣ ಹೊಸಬರಿಂದ ಕೂಡಿದೆ. ಶೈವ ಫಿಲ್ಸಂ ಮೂಲಕ ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ಕಿರಣ್, ಚಿತ್ರದ ಛಾಯಾಗ್ರಾಹಕರು ಹೌದು.. ಚಿತ್ರವು ಬಿಡುಗಡೆ ಹಂತಕ್ಕೆ ಬಂದಿರವ ಸಂದರ್ಭದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ. ಕಳೆದ 2024 ರಲ್ಲಿ ಆಕ್ಷನ್, ಸಸ್ಪೆನ್ಸ್, ಥ್ರಿಲರ್ ಚಿತ್ರವೊಂದನ್ನು ಮಾಡುವ…

    Continue Reading

  • ವೀರಗಾಸೆಯ ರುದ್ರಾಭಿಷೇಕಂ ಹೃದಯದ ಹಾಡು ಬಿಡುಗಡೆ

    ವೀರಗಾಸೆಯ ರುದ್ರಾಭಿಷೇಕಂ ಹೃದಯದ ಹಾಡು ಬಿಡುಗಡೆ

    ಜಾನಪದದಲ್ಲಿ ಬರುವ ವೀರಗಾಸೆ ಕುಣಿತಕ್ಕೆ ಅನನ್ಯ ಮಿಡಿತ ಕಂಡು ಬರುವುದು. ವೀರಗಾಸೆ ನೃತ್ಯ ಹಾಗೂ ವೀರಭದ್ರ ದೇವರ ಐತಿಹಾಸಿಕ ಕಥೆ ಹೇಳುವ ಚಿತ್ರವೇ ರುದ್ರಾಭಿಷೇಕಂ.. ವಿಜಯ ರಾಘವೇಂದ್ರ ಹಾಗೂ ಪ್ರಿಯಾಂಕ ತಿಮ್ಮೇಶ್ ಮುಖ್ಯ ಪಾತ್ರದಲ್ಲಿರುವ ಚಿತ್ರವು ಇದೀಗ ಬಿಡುಗಡೆಗೆ ಸಜ್ಜುಗೊಂಡಿದ್ದು, ಈಚೆಗೆ ಚಿತ್ರದ ಹಾಡು ಬಿಡುಗಡೆಗೊಂಡಿತು. ವಿ.ಮನೋಹರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಈ ಚಿತ್ರದಲ್ಲಿ ವೀರಗಾಸೆ ಕಲಾವಿದ…

    Continue Reading

  • ಗಮನ ಸೆಳೆದ ಹಾಡು ಟ್ರೈಲರ್ ಮೇ 15ಕ್ಕೆ ಶಿಖಂಡಿ ಬಿಡುಗಡೆ

    ಗಮನ ಸೆಳೆದ ಹಾಡು ಟ್ರೈಲರ್ ಮೇ 15ಕ್ಕೆ ಶಿಖಂಡಿ ಬಿಡುಗಡೆ

    ಈಚೆಗೆ ಪ್ರಮುಖವಾದ ‘ಯಲ್ಲಮ್ಮ ಹಾಡು..’ ಹಾಗೂ ಟ್ರೈಲರ್ ಬಿಡುಗಡೆ ಕಂಡು ಗಮನ ಸೆಳೆದಿದೆ ಹಾಗೂ ಚಿತ್ರವು ಇದೇ 15 ರಂದು ಬಿಡುಗಡೆ ಕಾಣುತ್ತಿದೆ. ‘ಮಾರಕಾಸ್ತ್ರ’ ಖ್ಯಾತಿಯ ಗುರುಮೂರ್ತಿ ಸುನಾಮಿ ನಿರ್ದೇಶನದ ಈ ಚಿತ್ರವನ್ನು ಹೊಟೇಲ್ ಉದ್ಯಮಿ ಪೋಲಾ ಪ್ರವೀಣ್ ನಿರ್ಮಾಣ ಮಾಡಿದ್ದಾರೆ.   ಚಿತ್ರದ ಹಾಡು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಶ್ರವಣ ಬೆಳಗೊಳದ ಶಾಸಕ ಸಿ.ಎನ್ ಬಾಲಕೃಷ್ಣ ಹಾಗೂ ಸಾಯಿ ಸತೀಶ್ ದೊಡ್ಡಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮಹಾಭಾರತದಲ್ಲಿ ಬರುವ ‘ಶಿಖಂಡಿ’…

    Continue Reading

  • ವಿವಾದಗಳನ್ನು ದಾಟಿದ ಕೆಡಿ ಗೆ ಬಿಡುಗಡೆ ಭಾಗ್ಯ..

    ವಿವಾದಗಳನ್ನು ದಾಟಿದ ಕೆಡಿ ಗೆ ಬಿಡುಗಡೆ ಭಾಗ್ಯ..

    ಆರಂಭದಲ್ಲಿ ಕೋಟಿ ದಾಟಿದ ಆಡಿಯೋ ಹಕ್ಕುಗಳ ಮಾರಾಟದಿಂದ ಗಮನ ಸೆಳೆದಿದ್ದ ಅದ್ದೂರಿ ‘ಕೆಡಿ’, ಅದೇ ಹಾಡುಗಳಿಂದ ವಿವಾದ ಮೈಮೇಲೆ ಎಳೆದುಕೊಂಡಿತ್ತು. ಇದೀಗ ಎಲ್ಲಾ ವಿವಾದಗಳನ್ನು ದಾಟಿ ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ, ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರ ಸಾಕಷ್ಟು ವಿವಾದಗಳನ್ನು ದಾಟಿ ಕಡೆಗೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ನಾಳೆ (ಏಪ್ರಿಲ್ 30)ರಂದು ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಧ್ರುವ ಸರ್ಜಾ ಮುಖ್ಯ ಪಾತ್ರದಲ್ಲಿದ್ದು, ರೀಶ್ಮಾ ನಾಣಯ್ಯ ಅವರ ಜೋಡಿಯಾಗಿ ನಟಿಸಿದ್ದಾರೆ.…

    Continue Reading

  • ಚಲನ ಚಿತ್ರಗಳ ಉಗಮ ಕಾಲದ ಪವಾಡ ಪುರುಷ ಡಾ.ರಾಜ್..!

    ಚಲನ ಚಿತ್ರಗಳ ಉಗಮ ಕಾಲದ ಪವಾಡ ಪುರುಷ ಡಾ.ರಾಜ್..!

    ಕನ್ನಡಿಗರ ಹೃನ್ಮನಗಳಲ್ಲಿ ಸದಾ ಕಾಲವೂ ಧ್ರುವ ತಾರೆಯಾಗಿ ಕಂಗೊಳಿಸುವ ವರನಟ ಡಾ.ರಾಜ್ ಕುಮಾರ್ ಸಿನಿಮಾ ಬದುಕಿನ ಅನನ್ಯ ಸಾಧಕರಾಗಿ ಹೊಮ್ಮಿದ್ದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ಬದಲಿಗೆ ಅವರದೇ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಕಾಲಮಾನ ಅವರನ್ನು ಎತ್ತರಕ್ಕೆ ಏರಿಸುತ್ತಾ ಹೋಯಿತು. ನಿಜವಾದ ಅರ್ಥದಲ್ಲಿ ರಾಜ್ ಪವಾಡ ಪುರುಷರಾಗಿ ಕ್ಷಣ ಕ್ಷಣವೂ ಗೋಚರಿಸುತ್ತಾ ಹೋದರು. ವೃತ್ತಿಯಲ್ಲಿನ ಬದ್ಧತೆ, ವಿನಯವಂತಿಕೆ ಮತ್ತು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುವ ಗುಣ ಅವರಿಗೆ ವರದಾನವಾಯಿತು. ರಾಜ್ ಇಹಲೋಹ ತ್ಯಜಿಸಿ 20 ವರ್ಷಗಳ ಬಳಿಕವೂ ಅವರ…

    Continue Reading

  • ಈ ವಾರ ಆದರ್ಶ ಕ್ಯಾಲೆಂಡರ್

    ಈ ವಾರ ಆದರ್ಶ ಕ್ಯಾಲೆಂಡರ್

    ಒಂದು ವಾರ ಬಿಡುಗಡೆ ಮುಂದೂಡಲ್ಪಟ್ಟಿದ್ದ ‘ಕ್ಯಾಲೆಂಡರ್’ ಈ ವಾರ (ಏಪ್ರಿಲ್ 10) ಬಿಡುಗಡೆ ಕಾಣುತ್ತಿದ್ದು, ಆದರ್ಶ್ ಗುಂಡುರಾಜ್ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ. ಈ ಹಿಂದೆ ಎರಡು ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಆದರ್ಶ ಗುಂಡುರಾಜ್ ಈ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಮಹಿಳಾ ಪ್ರಧಾನ ಕಥಾ ಹಂದರ ಹೊಂದಿರುವ ಈ ಚಿತ್ರ ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದೆ. ನವೀನ್ ಶಕ್ತಿ ಇದರ ನಿರ್ದೇಶಕರು. ಆದರ್ಶ ಗುಂಡುರಾಜ್ ನಿರ್ಮಾಣದ ಜೊತೆಗೆ ಮುಖ್ಯ ಪಾತ್ರದಲ್ಲಿ…

    Continue Reading

  • ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..

    ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..

    ಈಗ್ಗೆ ನಲವತ್ತು ವರ್ಷಗಳ ಹಿಂದೆ ತೆರೆ ಕಂಡಿದ್ದ ಕಮಲ್ ಹಾಸನ್ ಅವರು ಮುಖ್ಯ ಪಾತ್ರದಲ್ಲಿದ್ದ ಕನ್ನಡ ಚಿತ್ರ ಮರಿಯಾ ಮೈ ಡಾರ್ಲಿಂಗ್.. ಶೀರ್ಷಿಕೆ ಹಾಡಿನಿಂದಲೇ ಹೆಚ್ಚು ಜನಪ್ರಿಯವಾಗಿದ್ದ ಬೆಲ್ ಬಾಟಮ್ ಪ್ಯಾಂಟ್ ಕಾಲದ ಆ ಚಿತ್ರದ ಹೆಸರು ಮತ್ತೆ ಹೊಸದಾಗಿ ಮೂಡಿಬರಲಿದೆ. ಅಂದ ಹಾಗೆ ಕನ್ನಡದಲ್ಲಿ ‘ಪಲ್ಲಕ್ಕಿ’, ’13’ ಹೀಗೆ ವಿಭಿನ್ನ ನೆಲೆಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ನರೇಂದ್ರಬಾಬು ಈಗ ‘ಮರಿಯಾ ಮೈ ಡಾರ್ಲಿಂಗ್’ ಶೀರ್ಷಿಕೆ ಇರುವ ಚಿತ್ರವನ್ನು ನಿರ್ದೇಶಿಸಲು ಕೈಗೆತ್ತಿಕೊಂಡಿದ್ದಾರೆ. ಅಪ್ಪಟ ಪ್ರೇಮಕಥೆಯಾಗಿರುವ ಈ ಚಿತ್ರವನ್ನು…

    Continue Reading

  • ನಿರ್ಭಯ 2 ಟೀಸರ್ ಅನಾವರಣ..

    ನಿರ್ಭಯ 2 ಟೀಸರ್ ಅನಾವರಣ..

    ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ ‘ನಿರ್ಭಯ 2’ ಚಿತ್ರದ ಟೀಸರ್ ಬಿಡುಗಡೆ ಕಂಡಿದೆ. ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಹಾಗೂ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಹಿಳೆಯರ ಮೇಲಿನ ಶೋಷಣೆ ತಡೆಯುವ ಕ್ರಮಗಳ ಕುರಿತ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ…

    Continue Reading

  • ಕೆಡಿ ಚಿತ್ರವಿಮರ್ಶೆ

    ಕೆಡಿ ಚಿತ್ರವಿಮರ್ಶೆ

    ರೇಟಿಂಗ್ : 4/5 ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್ ನಿರ್ದೇಶನ : ಜೋಗಿ ಪ್ರೇಮ್ ರೆಟ್ರೋ ನವೀನ ಮಾದರಿ ರಕ್ತವೇ ನಗ್ನ ಸುಂದರಿ.. ಇದೊಂದು ರಕ್ತ ಸಿಕ್ತ ಅಧ್ಯಾಯ. ಮಾತ್ತೆತ್ತಿದರೆ ತಲೆಗಳು ಉರುಳುತ್ತವೆ.., ಹಾಗೆ ಚಿಮ್ಮಿದ ರಕ್ತ ಮುಲಾಜಿಲ್ಲದೆ ಎದುರಿಗಿದ್ದವರ ಮುಖದ ತುಂಬೆಲ್ಲಾ ಆವರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಅದು ಭಯಾನಕ. ಆದರೆ ಇಲ್ಲಿ ಕಲಾತ್ಮಕ. ಸುಮಾರು ಎಪ್ಪತ್ತರ ದಶಕದಲ್ಲಿ ಹೀಗೇ ಇದ್ದಿರಬಹುದು ಎಂದು ಸೃಷ್ಟಿ ಮಾಡಿರುವ ಮಹಾನಗರ ಮಾದರಿಯಲ್ಲಿ ಪ್ರತಿ ಕೋನದಲ್ಲಿ ಸೌಂದರ್ಯ ಕಾಣುತ್ತದೆ. ಅದು ವಿಭಿನ್ನ…

    Continue Reading

  • ಕ್ಯಾಲೆಂಡರ್ ಚಿತ್ರವಿಮರ್ಶೆ

    ಕ್ಯಾಲೆಂಡರ್ ಚಿತ್ರವಿಮರ್ಶೆ

    ರೇಟಿಂಗ್ : 3/5 ನಿರ್ಮಾಣ : ಆದರ್ಶ್ ಗುಂಡುರಾಜ್ ನಿರ್ದೇಶನ : ನವೀನ್ ಶಕ್ತಿ ಋತುಚಕ್ರ ಪೂರ್ವ ಚರಿತೆ ಕಾಲಮಾನದಲ್ಲಿ ಬಳಲುವ ವನಿತೆ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಹಲವಾರು ಸಂಕಷ್ಟ ಅಥವಾ ತೊಂದರೆಗಳನ್ನು ಎದುರಿಸುತ್ತಾರೆ ಎಂಬುದು ಅನುಭವ ಮತ್ತು ವೈದ್ಯಕೀಯ ಶಾಸ್ತ್ರದ ಮೂಲಕ ನಿರೂಪಿತವಾಗಿದೆ. ಆದರೆ ಅದೇ ಋತುಚಕ್ರ ಪೂರ್ವದಲ್ಲಿನ ಆಕೆಯ ವರ್ತನೆ ಇಡೀ ಬದುಕನ್ನೇ ವಿನಾಶದ ಅಂಚಿಗೆ ದೂಡಿ ಬಿಡಬಹುದು. ಇದು ಹೇಗೆ ಎಂದು ತಿಳಿಯಲು ‘ಕ್ಯಾಲೆಂಡರ್’ ಚಿತ್ರವನ್ನು ಸಂಪೂರ್ಣ ನೋಡಲೇ ಬೇಕು.. ಒಬ್ಬ ಉತ್ತಮ…

    Continue Reading

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports